Friday, August 28, 2009

ಮನಸೂರೆಗೊಳ್ಳುವ ಮೈಸೂರು....

ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವಾಗಿತ್ತು. ಅಷ್ಟರಲ್ಲೇ ಒಂದು ನೌಕರಿಗೆ ಆಹ್ವಾನ ಬಂದಿತ್ತು. ಆದರೆ ಕೆಲಸ ಮಾತ್ರ ಮೈಸೂರಿನಲ್ಲಿ. "ಪಾಲಿಗೆ ಬಂದದ್ದು ಪಂಚಾಮೃತ" ವೆಂದು ತಿಳಿದು ಮೈಸೂರು ಬಸ್ ಹತ್ತಿದೆ.

ಮೈಸೂರು ಬಂದರು ಇನ್ನು ಮಲಗಿಯೇ ಇದ್ದೆ. ಕಂಡಕ್ಟರ್ ಬಂದು ಎಬ್ಬಿಸಿ ಚಾಮರಾಜನಗರಕ್ಕೆ ಹೋಗಬೇಕೆ? ಎಂದು ಕೇಳಿದರು. ಇಲ್ಲ ಮೈಸೂರು ಎಂದೆ. ಇದೇ ಮೈಸೂರು ಇಳಿದುಕೊಳ್ಳಿ ಎಂದರು. ತಡಬಡಿಸಿ ಕೆಳಗೆ ಇಳಿದೆ.

ನಾನು ಯಾವದೇ ಊರಿಗೆ ಹೋಗುವ ಮೊದಲೇ ಅದರ ಒಂದು ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿರುತ್ತದೆ. ಅದು ಯಾವತ್ತು ನಿಜವಾಗಿಲ್ಲವಾದರೂ. ಆದರೆ ಹೀಗೆ ಇರಬಹುದೆಂದು ಉಹಿಸುವದು ಮಾತ್ರ ಬಿಟ್ಟಿಲ್ಲ. ಇಲ್ಲೂ ಆಗಿದ್ದು ಹಾಗೇನೆ. ನನ್ನ ಮನಸ್ಸಿನಲ್ಲಿದ್ದ ಮೈಸೂರು ಬೇರೆ ಯಾವುದೋ ಊರು ಆಗಿತ್ತು ...

ನನ್ನ Team Leader ಗೆ ಫೋನು ಹಾಯಿಸಿ ಹೇಗೆ ಬರಬೇಕು ಎಂದು ತಿಳಿದು. ನಜರಬಾದ ಕ್ಕೆ ಹೋಗಬೇಕು ಎಂದು ಆಟೋ ಏರಿದೆ. ನಜರಬಾದದ ನಜಾರ ತುಂಬಾನೇ ಚೆನ್ನಾಗಿತ್ತು. ಎದುರಿಗೆ ಕಾಣುವ ಮನೋಹರವಾದ ಚಾಮುಂಡಿ ಬೆಟ್ಟ. ಕಾಲುನಡಿಗೆಯಲ್ಲಿ ತಲುಪುವ ಮೈಸೂರು ಅರಮನೆ, ಕಾರಂಜಿ ಕೆರೆ, ಪ್ರಾಣಿಸಂಗ್ರಹಾಲಯ.....ಹೀಗೆ ಹಲವಾರು.

ನಮ್ಮದು ಹಾಲಿನ ಡೈರಿ ಪ್ರಾಜೆಕ್ಟ್. ಆಗ ತಾನೆ ಬಂದಿದ್ದರಿಂದ ಸ್ವಲ್ಪ ವಿಶ್ರಾಂತಿ ತೊಗೊಂಡು ಆಫೀಸಿಗೆ "ಬಾ" ಎಂದು, ನನ್ನ ಟೀಂ ಲೀಡರ್ ಪಾಂಡುರಂಗ ಆಫೀಸ್ ಹೊರಟರು. ನಾನು ಆಫೀಸ್ ವಿಳಾಸವನ್ನು ಹಿಡಿದು ಒಬ್ಬ ದಾರಿಹೋಕನನ್ನು ಕೇಳಿದೆ. "ಇದು ಎಲ್ಲಿ ಬರತದ" ಎಂದು. ಅವನಿಗೆ ಅರ್ಥವಾಗಲಿಲ್ಲ. ಮತ್ತೆ ಸುದಾರಿಸಿ ಧಾರವಾಡ ಭಾಷೆ ಬಿಟ್ಟು ಮೈಸೂರು ಭಾಷೆಯಲ್ಲಿ "ಇದು ಎಲ್ಲಿದೆ ಸರ್ " ಎಂದು ಕೇಳಿದಾಗ. ಸರಿಯಾದ ದಾರಿಯನ್ನು ತೋರಿಸಿದ್ದ.

ಹಾಲಿನ ಡೈರಿ ಒಳಗೆ ಕಾಲು ಇಡುತಿದ್ದಂತೆ ಒಂದು ಎಮ್ಮೆ ನನ್ನ ಕಡೆಗೆ ಅಟ್ಟಿಸಿಕೊಂಡು ಬಂತು. ಹೆದರಿ ಅದರ ದಾರಿಯಿಂದ ಸರಿದು "ಎ ನಿನಗೆ ನಿನ್ನ ಎಮ್ಮೆ ನೋಡ್ಕೊಲಿಕ್ಕೆ ಬರುದಿಲ್ಲ ಏನು" ಎಂದು ಎಮ್ಮೆಯ ಹಿಂದೆ ಬಂದ ಮನುಷ್ಯನನ್ನು ಉಗಿದು ಆಫೀಸ್ ಒಳಗಡೆ ಹೋದೆ.

ಪಾಂಡುರಂಗ ತುಂಬಾ ಬ್ಯುಸಿಯಾಗಿ ಇದ್ದರು. ಆದರು ನನ್ನನ್ನು ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿಸಲು ಕರೆದೊಯ್ದರು. ಎಲ್ಲಾ ಅಧಿಕಾರಿಗಳನ್ನು ಭೇಟಿಯಾದ ಮೇಲೆ ಮ್ಯಾನೇಜರ್ ಭೇಟಿಯಾಗಬೇಕಿತ್ತು. ತುಂಬಾ ಜನಗಳು ಅವರ ಕ್ಯಾಬಿನ್ ಬಳಿ ನಿಂತಿದ್ದರು. ಆದರು ಸೆಕ್ಯೂರಿಟಿ ಗಾರ್ಡ್ ಪಾಂಡುರಂಗ ಮತ್ತು ನನ್ನನ್ನು ಮೊದಲು ಒಳಗಡೆ ಕಳುಹಿಸಿದ. ಎದುರಿಗೆ ಒಂದು ಆಘಾತ ಕಾದಿತ್ತು. ಅದೇ ಎಮ್ಮೆ ಹಿಂದೆ ಇದ್ದ ಮನುಷ್ಯ ಎದುರುಗಡೆ ಮ್ಯಾನೇಜರ್ ಕುರ್ಚಿಯ ಮೇಲೆ ಕುಳಿತಿದ್ದರು. ನನಗೆ ಒಳಗೊಳಗೇ ಭಯ ಶುರುವಾಗಿತ್ತು. ಎಲ್ಲಿ ನನ್ನನ್ನು ನೋಡಿ ಉಗಿಯುತ್ತಾನೋ ಎಂದು. ಆದರೆ ಮನುಷ್ಯ ತುಂಬಾ ಒಳ್ಳೆಯವ ಆದರದಿಂದ ಮಾತನಾಡಿ ಚಹಾ ಕುಡಿಸಿ "ನಾನು ಎಮ್ಮೆ ಕಾಯುವವನಲ್ಲ Veternary ಡಾಕ್ಟರ" ಎಂದು ಹೇಳಿ ಈ ಗೋವುಗಳ ಪಾಲ (ಯಾನಿ ಗೋಪಾಲ)ನನ್ನು ಕಳುಹಿಸಿದ್ದ. ಹೀಗೆ ಭೇಟಿ ಮಾಡುತ್ತ Production Departmentಗೆ ಹೋದೆವು ಅಲ್ಲಿ ಎಲ್ಲರ ಪರಿಚಯವಾದ ಮೇಲೆ ತಿನ್ನಲು ಪೇಡ, ಮೈಸೂರು ಪಾಕ ತಂದು ಇಟ್ಟರು. ನಾನು ಬರಿ ಪೇಡ ತಿಂದೆ. ಆಗ ಪಾಂಡುರಂಗ ಇದು ಮೈಸೂರು Special ಮೈಸೂರು ಪಾಕ ತಿನ್ನಿ ಗೋಪಾಲ್ ಎಂದರು. ಧಾರವಾಡದಲ್ಲಿ ಸಿಗುವ ಮೈಸೂರು ಪಾಕ ಪಾಕದಂತೆ ಇರದೇ ರಾಕ್ ದಂತೆ ಗಟ್ಟಿ ಇರುತ್ತದೆ ಅದರಿಂದ ಅದನ್ನು ತಿಂದಿರಲಿಲ್ಲ. ಅದನ್ನು ತಿಂದ ಮೇಲೆ ಬಾಯಲ್ಲಿ ನೀರುರಿತ್ತು. ತುಂಬಾ ಚೆನ್ನಾಗಿತ್ತು ಮೈಸೂರು ಪಾಕ.
ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು. ಮುದ್ದೆ ನೋಡಿದ್ದೇ ಅವಾಗ. ಒಂದು ಮುದ್ದೆ ಹಾಕಿಸಿಕೊಂಡೆ. ಅದನ್ನು ಬಾಯಿಯಿಂದ ಜಗಿಯಲಾರoಬಿಸಿದಾಗ ಹಲ್ಲುಗಳಿಗೆ ಮುದ್ದೆ ಅಂಟಿಕೊಂಡಿತ್ತು. ಅದನ್ನು ಜಗಿಯದೆ ಹಾಗೆ ನುಂಗಬೇಕು ಎಂದು ಪಾಂಡುರಂಗ ಹೇಳಿದರು. ಅದರ ಸಹವಾಸ ಸಾಕೆಂದು ಅದನ್ನು ಬಳಿಗಿಟ್ಟು, ಅನ್ನ ಹಾಕಿಸಿಕೊಂಡು ತಿಂದು ಮುಗಿಸಿದ್ದೆ.ಹಾಗು ಹೀಗು ಸಂಜೆವರೆಗೆ ಕಾಲ ಕಳೆದು ಮನೆ ಹಾದಿ ಹಿಡಿದಿದ್ದೆ. ಬರಿ ಅನ್ನ ತಿಂದಿದ್ದರಿಂದ ಹೊಟ್ಟೆ ಚಿರಗುಡುತಿತ್ತು. ಬಿಸಿ ಬಿಸಿ ಯಾಗಿ ಬಜ್ಜಿ ಮಾಡುವದನ್ನು ನೋಡಿ, ಅಲ್ಲಿಗೆ ಹೋಗಿ ಮೈಸೂರು ಬಜ್ಜಿ ಕೊಡಿ ಎಂದೆ.ಏನು? ಎಂದ ಅಂಗಡಿಯವ. ಎಲ್ಲರು ನನ್ನನ್ನು ಮಂಗನಂತೆ ನೋಡಿದರು. ನಂತರ ಕೈ ಮಾಡಿ ತೋರಿಸಿ "ಮೈಸೂರು ಬಜ್ಜಿ" ಕೊಡಿ ಎಂದೆ. "ಓ" ಅದಾ "ಮಂಗಳೂರು ಬಜ್ಜಿ" ಎಂದು ಕೊಟ್ಟ.ಧಾರವಾಡದಲ್ಲಿ ಇದನ್ನ ಮೈಸೂರು ಬಜ್ಜಿ ಅಂತಾನೆ ಅನ್ನೋದು. ಇಲ್ಲಿ ನೋಡಿದರೆ ಇದನ್ನ ಮಂಗಳೂರು ಬಜ್ಜಿ ಅಂತಾರೆ. ಇನ್ನು ಮಂಗಳೂರುನಲ್ಲಿ ಏನೆಂದು ಕರೆಯುತ್ತಾರೋ ಆ ದೇವರೇ ಬಲ್ಲ.

ಮನೆಗೆ ಹೋಗುವದರಷ್ಟರಲ್ಲಿಯೇ ಮನೆಯಲ್ಲಿ ಮುಕುಂದ ಬಂದಿದ್ದ ಅವನು ಮಂಡ್ಯ ಪ್ರಾಜೆಕ್ಟ್ ನೋಡುತಿದ್ದ. ಹಾಗೇ ಪರಸ್ಪರ ಪರಿಚಯ ಮಾಡಿಕೊಂಡೆವು. ರಾತ್ರಿ 9 ಆದರು ಪಾಂಡುರಂಗನ ಸುದ್ದಿ ಇಲ್ಲ. ಹೊಟ್ಟೆ ಹಸಿದಿದ್ದರಿಂದ ಮುಕುಂದನಿಗೆ ನಾನು ಮತ್ತು ಶಿವಾಜಿ ಊಟ ಮಾಡೋಣವೆ ಎಂದು ಕೇಳಿದೆವು. ಸಿಟ್ಟಿನಿಂದ ನಮ್ಮಿಬ್ಬರನ್ನು ದುರುಗುಟ್ಟಿ, ನೀವು ಬೇಕಾದರೆ ಮಾಡಿ ಎಂದ. ನಾನು ಪಾಂಡುರಂಗ ಬರುವವರೆಗೆ ಕಾಯುವೆ ಎಂದು ಓದುತ್ತ ಕುಳಿತ .

ಹೊಟ್ಟೆ ಹಸಿದಿದ್ದರು ನಾವು ಹಾಗೇ ಸುಮ್ಮನೆ ಕುಳಿತೆವು. 10 ಘಂಟೆಗೆ ಪಾಂಡುರಂಗ ಬಂದರು. ಊಟ ಮುಗಿದಮೇಲೆ ಎಲ್ಲರಿಗೂ ನಮ್ಮ ಪ್ರಾಜೆಕ್ಟ್ ಬಗ್ಗೆ ಪ್ರವಚನ ಆಯಿತು. ಮರುದಿನ ರಜೆ ಇದ್ದದ್ದರಿಂದ ಎಲ್ಲರು ಹಾಗೇ ಹರಟಿ ಹಾಸಿಗೆ ಮೇಲೆ ಒರಗಿಕೊಂಡೆವು. ಮರುದಿನ ಪಾಂಡುರಂಗ ಬೆಳಿಗ್ಗೆ ಎದ್ದು ಕಟಿಂಗ ಮಾಡಿಸಲು ಹೋಗಿದ್ದರು. ಇರುವ ನಾಲ್ಕು ಕೂದಲಿಗೆ ೩೦ ರುಪಾಯಿ ದಂಡ ಎಂದು ನಾನು ಮುಕುಂದ ನಕ್ಕಿದ್ದೆವು.

ಊರಿಗೆ ಹೋಗಿದ್ದ ಹೃಷಿಕೇಶ ಅವತ್ತು ಬಂದಿದ್ದ ಎಲ್ಲರು ಮೈಲಾರಿ ಹೋಟೆಲ್ಗೆ ಹೋಗಿ ದೋಸೆ ತಿಂದೆವು. ಅದು ತುಂಬಾ ಫೇಮಸ್ ಹೋಟೆಲ್.

ನನಗೆ ಒಂತರಹ ಹೊಸ ಅನುಭವ ಹೊಸ ಹೊಸ ಗೆಳೆಯರು...ಹೊಸ ಭಾಷೆ ತುಂಬಾ ಎಂಜಾಯ್ ಮಾಡ್ತಾ ಇದ್ದೆ....
ಒಂದು ಸಂಜೆ ಮಂಡ್ಯ ದಿಂದ ಹೃಷಿಕೇಶ ಮತ್ತು ಮುಕುಂದ ಬೇಗನೆ ಬಂದಿದ್ದರು. ಹೃಷಿಕೇಶ ಮಲಗಿದ್ದ ಅವನು ಟೆನ್ಶನ್ ಆಗಿ Low BP ಆಗಿತ್ತು. ಮರುದಿನದಿಂದ ಮುಕುಂದನ ಜೊತೆ ಮಂಡ್ಯಕ್ಕೆ ಹೋಗುವ ಕೆಲಸ ನನಗೆ ಬಿದ್ದಿತ್ತು.ಮಂಡ್ಯಕ್ಕೆ ಹೋದೊಡನೆಯೆ ಮತ್ತೆ ಎಲ್ಲರ ಪರಿಚಯ, ಎಲ್ಲರು ಅರ್ಧ-ಅರ್ಧ ಘಂಟೆ ಮಾತನಾಡಿಸಿ ತಲೆ ತಿಂದಿದ್ದರು. ಮತ್ತೆ ಅಲ್ಲಿಯ MIS ಆಫೀಸರ್ ನಿಮ್ಮ software ನಲ್ಲಿ ತುಂಬಾ debugs ಇವೆ ಎನ್ನಬೇಕೆ ನಕ್ಕು ನಕ್ಕು ಸಾಕಾಗಿತ್ತು. ಮತ್ತೆ ಎಲ್ಲ ಮಾತಿನ ನಂತರ ಲೆಕ್ಕಾಚಾರ ಎನ್ನುವ ಪದ ಬೇರೆ. ಇನ್ನು Marketing ನಲ್ಲಿ ಇರುವ ಮ್ಯಾನೇಜರ್ ಎಲ್ಲದ್ದಕ್ಕೂ ಅಲ್ವೇನ್ರಿ ಎನ್ನುವ ಪದ....ತಲೆ ಕೆಟ್ಟು ಹೋಗಿತ್ತು ಆಗಲೇ ಗೊತ್ತಾಗಿದ್ದು ಹೃಷಿಕೇಶ ನಿಗೆ Low BP ಏಕೆ ಬಂದಿತ್ತೆಂದು. ನನಗೆ ಮಾತ್ರ BP ಪೂರ್ತಿ ಏರಿ High BP ಬಂದಿತ್ತು.
ಹೃಷಿಕೇಶನನ್ನು ಬಳ್ಳಾರಿ ಪ್ರಾಜೆಕ್ಟ್ಗೆ ಕಳುಹಿಸಲಾಯಿತು. ಹಾಗು ಹೀಗು ಹೆಣಗಾಡಿ ಒಂದೆರಡು ಡಿಪಾರ್ಟ್ಮೆಂಟ್ computerise ಮಾಡಿದೆವು. ಆರು ತಿಂಗಳುಗಳು ಹೇಗೆ ಕಳೆದವು ಎನ್ನುವದೇ ನನಗೆ ಯಕ್ಷ ಪ್ರಶ್ನೆ ಅಗತ್ತು. ತುಂಬಾ ಒಳ್ಳೆಯ ಗೆಳೆಯರು.

ಅಷ್ಟೊತ್ತಿಗಾಗಲೇ ಹೃಷಿಕೇಶ ಬಳ್ಳಾರಿ ಬಿಟ್ಟು ಬೆಂಗಳೂರು ಸೇರಿದ. ಬಳ್ಳಾರಿ ಪ್ರಾಜೆಕ್ಟ್ ಗೆ ನಾನು ಹೋಗ ಬೇಕೆಂದು ಪಾಂಡುರಂಗ ಆಜ್ಞೆ ಮಾಡಿದರು. ಅದು ನನಗೆ ನುಂಗಲಾರದ ತುತ್ತಾಗಿತ್ತು. ಒಲ್ಲದ ಮನಸ್ಸಿನಿಂದ ಹೋಗುವೆ ಎಂದು ಹೇಳಿದೆ.

ಬಳ್ಳಾರಿ - ಮೈಸೂರು ಬಸ್ಸಿನಲ್ಲಿ ಕುಳಿತರು ಮೈಸೂರು ನೆನಪು ಮಾತ್ರ ಕಾಡುತಿತ್ತು.. ಮತ್ತೆ ಒಬ್ಬನೇ ಇರುವದು ಹೇಗೆ? ಎನ್ನುವ ಯೋಚನೆ ಬೇರೆ. ಆಗಲೇ ರಾತ್ರಿ 2 ಆಗಿತ್ತು. ನಿದ್ದೆ ಕಣ್ಣಲ್ಲಿದ್ದರು ನಿದ್ದೆ ಮಾಡಿ ನನ್ನ ಸವಿ ನೆನಪುಗಳ ಬೈ ಹೇಳುವ ಮನಸಿರಲಿಲ್ಲ. ಹಾಗೇ ಮೆಲಕು ಹಾಕುತ್ತಿದ್ದಾಗ .. ಆಗಲೇ "ಫಟ" ಎಂಬ ಶಬ್ದ. ಎದುರಿಗೆ ಕುಳಿತ ಒಬ್ಬನಿಗೆ ಮುಂದೆ ಇರುವ ಆಂಟಿ ಕಪಾಳಕ್ಕೆ ಬಾರಿಸಿದ್ದಳು. ಅದು ಏನು ಮಾಡಿದ್ದನೋ ಆ ಮಹಾಶಯ ಬಸಿನ್ನಲ್ಲಿ ಗದ್ದಲದ ವಾತಾವರಣ ಸೃಷ್ಟಿ ಯಾಗಿತ್ತು. ಹೀಗು ಹಾಗು ಬಳ್ಳಾರಿ ತಲುಪಿದೆ ನಿದ್ದೆ ಮಾಡಲಾರದೆ ....

ಮೈಸೂರು ಮಾತ್ರ ನನಗೆ ಮನಸೂರೆಗೊಳ್ಳುವ ಮೆರೆಯಲಾರದ ಮರೀಚಿಕೆಯ ಹಾಗೆ ಸ್ವಲ್ಪು ದಿವಸ ಕಾಡಿತ್ತು...

2 comments: