Friday, December 18, 2009

ಮುಡಿ ಕೊಡುತ್ತಾರಾ....

ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ, ಚಹಾ, ಕಾಫಿ ಮತ್ತು ಆಟಕ್ಕೆ ಕ್ಷಮಿಸಿ.... ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ. ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ, ಅಪ್ಪಿ ತಪ್ಪಿ ಬಂದರು ಇವರ ಧಡೂತಿ ಹೊಟ್ಟೆ ಇವರನ್ನು ಆಡಲು ಬಿಡುವದಿಲ್ಲ . ಇವರೆನಿದ್ದರು ತಿನ್ನಲು ಕುಡಿಯಲು ಯೋಗ್ಯ ಎಂದು.

140 ಜನ ಕೆಲಸ ಮಾಡುವ ಕಂಪನಿಯಲ್ಲಿ ಸುಮಾರು 20 ಜನ ಮಾತ್ರ ಕನ್ನಡಿಗರು. ಹೋಟೆಲ್ ಹೋಗುವ ಸಮಯದಲ್ಲಿ ನಟರಾಜ್ ಮಾತು ಶುರು ಹಚ್ಚಿ ಕೊಂಡರು. ನಾನು ದಿನ ಮುಂಜಾನೆ ಸುಪ್ರಭಾತ ಕೇಳುತ್ತೇನೋ ಇಲ್ಲವೋ, ಆದರೆ ದಿನ ಮುಂಜಾನೆ "ನಲ್ಲ ಇರಕ", "ಸಾಪಟಿಯ" ಎಂಬ ಶಬ್ದಗಳು ಘಂಟಾಘೋಷವಾಗಿ ನನ್ನ ಕಿವಿಗೆ ಬಂದು ಒರಗುತ್ತವೆ. ಅದ್ಯಾವ ಜನ್ಮದ ಪಾಪದ ಫಲವೋ ನಾ ಕಾಣೆ. ನಾನು ಕೆಲವೊಂದು ಸಾರಿ ಬೆಂಗಳೂರಿನಲ್ಲೇ ಇದ್ದೆನಾ?. ಎಂಬ ಸಂದೇಹ ಬಂದಿದ್ದು ಉಂಟು. ನನ್ನ ಲೀಡರ್ ಕೂಡ ಅವರೇ. ಇದಲ್ಲದೆ ನನ್ನ ಕೈ ಕೆಳಗೆ ಕೆಲಸ ಮಾಡುವ ಸಹ ಕೆಲಸಗಾರರು ಇಬ್ಬರು ಕೂಡ ಅವರೇ. ಇದಿಷ್ಟೇ ಇದ್ದಿದ್ದರೆ ಪರವಾಗಿಲ್ಲ, ಅವರು ಏನಾದರು ಕೆಲಸದ ವಿಷಯ ಮಾತನಾಡುವ ಸಮಯದಲ್ಲಿ ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಿದರೆ ಎಷ್ಟು ಕೋಪ ಬರಬೇಡ. ಆ ಸಮಯದಲ್ಲಿ ಯಾರಾದರು "ನಲ್ಲ ಇರಕ" ಎಂದರೆ ಇರಿದು ಅಲ್ಲೇ ಕೊಂದು ಬಿಡುವಷ್ಟು ಕೋಪ ಬರುತ್ತೆ.

"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಡಾ|| ರಾಜ ಹಾಡು ಕೇಳಿ ಬೆಳೆದವ ನಾನು. ಕನ್ನಡದ ಬಗ್ಗೆ ಅಪಾರ ಪ್ರೀತಿ ಎಂದ.ಆಗ ನಾವೆಲ್ಲರೂ ಅವರನ್ನು ಸಮಾಧಾನ ಮಾಡಿದೆವು.

ಜನರನ್ನು ಒಗ್ಗೂಡಿಸುವ ಒಂದು ಒಳ್ಳೆ ಕೆಲಸ ನಟರಾಜ್ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಇವರನ್ನು ಎಂ ಎಲ್ ಎ ಅನ್ನೋದು. ಈ ಸಾರಿ ಕೂಡ ಊಟಕ್ಕೆ ಬನ್ನಿ ಎಂದರು. ನಾನು ಒಲ್ಲೇ ಒಲ್ಲೇ ಎಂದೇ. ನನ್ನದು ಏನಿದ್ದರು "ವಂದೇ ಮಾತರಂ" ಎಂದು ಹೊರಟು ಹೋದರು. ಇದೇನು ವಂದೇ ಮಾತರಂ ಎಂದು ಕೇಳಿದಾಗ ತಿಳಿಯಿತು ಒಂದೇ ಮಾತು ಎಂದು ತಿಳಿಯಿತು.

ಕಡೆಗೆ ಆಯಿತು ಎಂದು ಒಪ್ಪಿಕೊಂಡ ಮೇಲೆ ಎಲ್ಲರು ಹೋಟೆಲ್ ಯಾವುದೆಂದು ತೀರ್ಮಾನ ಮಾಡಿ ಹೊರಟೆವು. ನಮ್ಮ 7 ಜನರಲ್ಲಿ ಒಬ್ಬ ಸುವೆಂದು ಆಚಾರ್ಯ ಎಂಬ ಒಬ್ಬ ಒರಿಸ್ಸಾ ಹುಡುಗ ಕೂಡ ಬಂದಿದ್ದ. ಅವನಿಗೆ ಗೊತ್ತಿದದ್ದು ಹಿಂದಿ ಮತ್ತೆ ಒರಿಸ್ಸಾ ಈಗ ಅವನು ಸ್ವಲ್ಪ ಸ್ವಲ್ಪ ಕನ್ನಡ ಕಲಿಯಲು ಶುರು ಹಚ್ಚಿಕೊಂಡಿದ್ದಾನೆ. ಅದು ಏಕೆಂದರೆ ಒಂದೆರಡು ಕನ್ನಡದ ಹುಡುಗಿಯರು ನಮ್ಮ ಕಂಪನಿಗೆ ಸೇರಿದ ಮೇಲೆ.

ಎಲ್ಲರು ಹೋಟೆಲ್ ಒಳಗೆ ಕಾಲಿಟ್ಟೆವು. ಅವನು ಮಾತ್ರ ಹುಡುಗಿಯರನ್ನು ಅತ್ತಿತ್ತ ನೋಡುತ್ತಾ ಕಾಲಿಟ್ಟ. ಅಲ್ಲಿ ಒಂದು ಹುಡುಗಿ ಪ್ಲೇಟ್ ನೋಡಿದವನೇ. ಏನೋ ತಿಳಿದವನಂತೆ "ಇಲ್ಲಿ ಮುಡಿ ಕೊಡುತ್ತಾರಾ?" ಎಂದು ಕೇಳಿದ. ನಮ್ಮೆಲ್ಲರಿಗೂ ಆಶ್ಚರ್ಯ ಆಯಿತು ಏನಿದು ಇದೇನು ತಿರುಪತಿ ನಾ ಎಂದು ಕೇಳಿದೆ. ಮತ್ತೆ ಆ ಹುಡುಗಿ ಪ್ಲೇಟ್ ತೋರಿಸಿ ಕೇಳಿದಾಗ ತಿಳಿಯಿತು ಅದು "ಕಳೆ ಪುರಿ"(ಚುರ ಮುರಿ) ಎಂದು. ನಾವೆಲ್ಲರೂ ನಕ್ಕೂ ಒಳಗೆ ಹೋದೆವು.

ಊಟಕ್ಕೆ ಆರ್ಡರ್ ಮಾಡಿದೆವು. ಊಟಕ್ಕೆ ಸಂಜೀವ್ ಬಂದಿರಲಿಲ್ಲ. ಸಂಜೀವ್ ಸುವೆಂದು ಟೀಂ ಲೀಡರ್. ಊಟ ಬಂತು. ನಾನು ಊಟಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿದೆ. ಆಗ ಸುವೆಂದು "ಲೇ ಊಟಕ್ಕೆ ಮೊದಲು ನೀರಾ" ಎಂದ . ಅದು ನೀರಾ ಅಲ್ಲ ನೀರು ಎಂದೇ. ಮತ್ತೆ ನಾನು ಅವನಿಗೆ ಊಟಕ್ಕೆ ಮೊದಲು ನೀರು ಕುಡಿದರೆ ಊಟಕ್ಕೆ ಚೆನ್ನಾಗಿ ಹೋಗುತ್ತೆ ಎಂದೇ. ಆಗ ನೋಡ ನೋಡುತ್ತಲೇ ಒಂದು ಜಗ್ ನೀರು ಕುಡಿದು ಬಿಟ್ಟ. ಲೇ ಒಂದು ಗ್ಲಾಸ್ ಅಂತ ಹೇಳಿದ್ದು ನೀನು ಒಂದು ಜಗ್ ಕುಡಿದೆಯಾ ಎಂದು ಹೇಳಿದೆ.

ಊಟದಲ್ಲಿ ನುಗ್ಗೆ ಕಾಯಿ ಸಾರು ಮಾಡಿದ್ದರು. ಆಗ ಸುವೆಂದು ನನಗೆ ನಗ್ಗೆ ಕಾಯಿ ಬೇಡ ಎಂದ. ಸದ್ಯ ಸೀಗೆ ಕಾಯಿ ಅನ್ನಲಿಲ್ಲ. ಊಟ ಮುಗಿದ ಮೇಲೆ ಎಲ್ಲರಿಗೆ ಏಳಲು ಬರಲಾರದಷ್ಟು ಹೊಟ್ಟೆ ತುಂಬಿತ್ತು. ಸುವೆಂದು ಹೊಟ್ಟೆ ಮಾತ್ರ ನೀರಿನಿಂದ ಕೊಳ್ಳ ಕೊಳ್ಳ ಎನ್ನುತಿತ್ತು. ಆಗ ಸರ್ವರ್ ಬಂದು "ಊಟ ಫಸ್ಟ್ ಟೈಮ್ ಮಾಡುತ್ತ ಇರುವದ ಎಂದು ಕೇಳಿದ". ಅದಕ್ಕೆ ನಮ್ಮ ನಟರಾಜ "ಇಲ್ಲಿ ಮೊದಲ ಬಾರಿ" ಎಂದ. ಆಗ ಸುವೆಂದು ಮಾತ್ರ ತುಂಬಾ ಅವಸರ ಮಾಡುತಿದ್ದ. ಏಕೆಂದರೆ ಅವನಿಗೆ ಒಂದು ಅರ್ಜೆಂಟ್ ಕೆಲಸ ಹೇಳಿದ್ದರು ಸಂಜೀವ್. ನಾವು ಇಂತಹ ಊಟಕ್ಕೆ ಸಂಜೀವನನ್ನು ಕರೆದು ಕೊಂಡು ಬಂದಿದ್ದರೆ ನಿನಗೆ ಕೆಲಸ ಮಾಡದಿದ್ದರೂ ನಡೆಯುತ್ತಿತ್ತು ಎಂದು ಹಾಸ್ಯ ಮಾಡುತ್ತ ಹೋಟೆಲ್ ನಿಂದ ಹೊರನಡೆದೆವು.

ಸುವೆಂದು ಅರ್ಧ ಮರ್ಧ ಕನ್ನಡದ ಜೊತೆಗೆ ಊಟ ಕೂಡ ತುಂಬಾ ಚೆನ್ನಾಗಿತ್ತು,

Wednesday, December 16, 2009

ತರ್ಲೆ ಮಂಜ(ಗ)ನ ಬಾರ್ ಪುರಾಣ!!!!

ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು.

ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ ಮಂಜ ತನ್ನ ಮಾತಿನ ವರಸೆ ಶುರು ಹಚ್ಚಿಕೊಂಡ.

ಅತ್ಯಂತ ಪ್ರಾಚೀನ ಪುರಾಣಕ್ಕೆ ಸೇರಿದ್ದು ಈ ಬಾರ್ ಪುರಾಣ. ಇದಕ್ಕೆ ಇದು.. ಇದೆ ಪುರಾಣ ಇಷ್ಟನೇ ಅಧ್ಯಾಯದಲ್ಲಿ ಇರಬಹುದೆದೆಂದು ಊಹಿಸಲು ಅಸಾದ್ಯವಾದಷ್ಟು ಪ್ರಾಚೀನ ಪುರಾಣ. ಒಂದಾನೊಂದು ಕಾಲದಲ್ಲಿ ರಣಧೀರ ಎಂಬ ರಾಜ ಇದ್ದ. ಒಂದು ದಿವಸ ತನ್ನ ಮಹಾರಾಣಿಯ ಜೊತೆಗೆ ಜಗಳವಾಡಿದ. ಅವನ ಹೆಂಡತಿ ರಾಜನ ಮೇಲೆ ತುಂಬಾ ಕೋಪಗೊಂಡು ತವರುಮನೆಗೆ ಹೊರಟುಹೋದಳು. ಆಗ ರಾಜ ಅವಳ ಯೋಚನೆಯಲ್ಲೇ ಕಾಲ ಕಳೆಯುತ್ತಾ ಹುಚ್ಚನ ಹಾಗೆ ಅಲೆದಾಡುತ್ತ ಇದ್ದಾಗ... ಅವನ ಮಂತ್ರಿ ರಾಜನ ದುಃಖ ನೋಡಲಾರದೆ. ಅವನ ವೈದ್ಯ ನವೀನಚಂದ್ರನಿಗೆ ಅದನ್ನು ಅರುಹಿದ. ಆಗ ಆ ವೈದ್ಯ ಮನಸಿನ ನೋವನ್ನು ಮರೆಯುವ ಒಂದು ಔಷಧ ತಯಾರಿಸಿ ತಂದು ಮಂತ್ರಿಗೆ ಕೊಟ್ಟ. ಮಂತ್ರಿ ಖುಷಿಯಾಗಿ ಅವನಿಗೆ 100 ವರಾಹ ಕೊಟ್ಟು ಕಳುಹಿಸಿದ. ಅದನ್ನು ರಾಜನಿಗೆ ಕುಡಿಸಿದಾಗ... ರಾಜ ತುಂಬಾ ಮನೋಲ್ಲಾಸಗೊಂಡು ಮಂತ್ರಿಗೆ.. ಕಂತ್ರಿ ಕಂತ್ರಿ ಎಂದು ಹೇಳಲಾರಂಬಿಸಿದ. ಅದೇ ಶಬ್ದ ಬಾಯಿಂದ ಬಾಯಿಗೆ ಹರಿದು "ಕ೦ಟ್ರಿ" ಪಾನ ಆಯಿತು.

ರಾಜ ಪಾನವಿಲ್ಲದೆ ಬದುಕಲು ಅಸಾಧ್ಯವಾಯಿತು. ದಿನ ನಿತ್ಯ ಮುಂಜಾನೆ ಇಂದ ಸಂಜೆವರೆಗೆ ಪಾನ ಮತ್ತನಾಗಿ ಇರುತ್ತಿದ್ದ. ಇದು ಅವನ ಹೆಂಡತಿಗೆ ತಿಳಿಯಿತು. ಮಹಾರಾಣಿ ಮತ್ತೆ ತನ್ನ ಗಂಡನ ಅರಮನೆಗೆ ಹಿಂತಿರುಗಿದಳು. ಆಗ ಮಹಾರಾಜ ಅದನ್ನು ಸಾವಕಾಶವಾಗಿ ಬಿಡಲು ಆರಂಬಿಸಿದ.


ರಾಜ ಹೆಂಡತಿ ಬಂದ ಮೇಲೆ ಅದನ್ನು ಬಿಟ್ಟದ್ದರಿಂದ ಮತ್ತು ಅದು ಹೆಂಡತಿ ಇಲ್ಲದಿದ್ದಾಗ ಸವತಿಯ ಹಾಗೆ ಕೆಲಸ ಮಾಡಿದ್ದರಿಂದ ಹೆಂಡ ಎಂಬ ಮತ್ತೊಂದು ನಾಮಾಂಕಿತ ಪಡೆದು ಪ್ರಸಿದ್ದಿಪಡೆಯಿತು. ರಾಜ ಅದನ್ನು ಮೊದಲು ಸೇವಿಸಿದ್ದರಿಂದ ಅದೇ ಹೆಸರಿನ ಪೇಯ ಇಗಲೂ ತುಂಬಾ ಪ್ರಸಿದ್ದಿ ಪಡೆದಿದೆ.


ಮುಂದೆ ಆ ವೈದ್ಯ ಈ ಪೇಯದಿಂದ ತುಂಬಾ ಪ್ರಸಿದ್ದಿ ಪಡೆದ. ಮತ್ತು ಅದನ್ನು ಇನ್ನಷ್ಟು ವಿನ್ಯಾಸಗೊಳಿಸಿದ. ಆಗ ಮಂತ್ರಿ ಅವನಿಗೆ ಅವನ ಉದ್ಯೋಗವಾದ "ವೈದ್ಯ" ಮತ್ತೆ ಅವನ ಹೆಸರಿನ(ನವೀನಚಂದ್ರ) ಮೊದಲ ಅಕ್ಷರ ಸೇರಿಸಿ "ವೈನ" ಎಂದು ನಾಮಕರಣ ಮಾಡಿ ಮಾರುಕಟ್ಟೆಗೆ ಬಿಟ್ಟ. ಅದು ತುಂಬಾ ಪ್ರಸಿದ್ದಿ ಪಡೆಯಿತು.

ಅದಕ್ಕೆ ನಮ್ಮ ಮನೋಜ ಹೌದು ಹೌದು ಎಂದು ಗೋಣು ಅಲ್ಲಾಡಿಸುತ್ತ ಕುಳಿತಿದ್ದ.

ನಾನು ಸಾಕು ಬಿಡಪ್ಪ ನಿನ್ನ ಬಾರ್ ಪುರಾಣ ಎಂದೆ. ಆದರು ಮಂಜ ಕೇಳಲಿಲ್ಲ ನನಗೆ ಕಿವಿಗಳಿಗೆ ಬರೆ ಕೊಡುವ ಹಾಗೆ ತನ್ನ ಪುರಾಣ ಶುರು ಹಚ್ಚಿ ಕೊಂಡ.

ಲೇ ಇದಕ್ಕೆ ಶೆರೆ ಅಂತ ಏಕೆ? ಅಂತಾರೆ ಗೊತ್ತೇನು ಎಂದ. ನಾನು ಇಲ್ಲ ಎಂದೆ. ಶೇರ್ ಎಂದರೆ ಹಂಚಿಕೋ ಅಂತ ಅರ್ಥ ಎಂದ..

ಹೌದೌದು ಎಂದು ಮನೋಜ ಅವನ ಎ೦ಜಲದ ಗ್ಲಾಸ್ ಎತ್ತಿ ಕುಡಿಯುತ್ತಿದ್ದ. .

ಆಗ ನಾನು ತಿಳಿಯಿತು ಬಿಡು ಎಂದೆ.

ಲೇ ಅದಲ್ಲ ಕಣೋ, ನಮ್ಮ ಮನಸಿನ ಭಾವನೆಗಳನ್ನು ಹಂಚ್ಕೊಳ್ಳಲು ಒಂದು ವೇದಿಕೆ ಕಣೋ ಎಂದ. ಇಲ್ಲಿ ನಿಜವಾಗಿಯೂ ಚರ್ಚೆ ಆಗುವದು ನಮ್ಮ ಹೆಂಡತಿಯರ ಬಗ್ಗೆ ಅದಕ್ಕೆ ಶೇರ್ ಗೆ ಸ್ತ್ರೀಲಿಂಗ ಸೇರಿಸಿ ಶೆರೆ ಅಂತ ಕರೆದಿದ್ದಾರೆ ಹಿರಿಯರು ಎಂದ.

ನೀನು ಬೀರ್ ಕುಡಿ ಬೀರಬಲ್ಲ ತರಹ ಶ್ಯಾಣ್ಯ ಆಗುತ್ತೀಯ ಎಂದ.

ಹೆಂಡತಿ ಜಗಳವಾಡಿ ತವರುಮನೆಗೆ ಹೋದಾಗ "ಬಾರ" "ಬಾರ" ಎನ್ನುವ ಬದಲು ಬಾರಿಗೆ ಬಾ ಎಲ್ಲ ಮರೆಯುತ್ತೆ ಎಂದ.

ಅಷ್ಟೊತ್ಟಿಗಾಗಲೆ ಹೆಂಡತಿ ಫೋನ್ ಬಂತು ಖಾರವಾಗಿ ಎಷ್ಟೊತ್ತು ಮನೆಗೆ ಬರೋದು ಎಂದಳು.

ಅವರೀಬ್ಬರಿಗೂ ಬೇಗೆನೆ ಬೈ ಹೇಳಿ ಹೊರಟು ಹೋದೆ. ಇಲ್ಲದೇ ಇದ್ದರೆ ಎನ್ನು ಏನೇನೋ ಪುರಾಣ ಕೇಳುವ ಪರಿಸ್ತಿತಿ ಬರುತಿತ್ತು.

Monday, December 7, 2009

ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....

ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹೋಗದೇ ಆ ಸಂಜೆ ನೀಲಾಕಾಶ ನೋಡುತ್ತಾ ಕುಳಿತು ಬಿಟ್ಟೆ. ಆ ಸಂಜೆ ಆಕಾಶದ ಮೇಲೆ ಮೂಡಿರುವ ಛಾಯಾ ಚಿತ್ತಾರ ಅದೇನೋ ಒಂದು ಸುಮಧುರವಾದಂತ ಭಾವನೆಯನ್ನು ಮೂಡಿಸುತ್ತಿತ್ತು. ನೀಲಾಕಾಶದಲ್ಲಿ ಬರೆದಿರುವ ಬಿಳಿ ರಂಗೋಲಿ ಮನಸಿಗೆ ತುಂಬಾ ಮುದ ನೀಡುತಿತ್ತು. ಆ ಬಿಳಿ ಮೋಡಗಳ ಹಿಂದೆ ದೇವರು ಇರಬಹುದಾ? ಎಂಬ ಭಾವನೆ ಆಗಾಗ ಮೂಡುತ್ತಿತ್ತು. ದೇವರದೇ ಒಂದು ಸಾಮ್ರಾಜ್ಯ ಇರಬಹುದಾ?. ನಾವು ಓದಿರುವ ರಾಜ ಮಹಾರಾಜರ ಕಥೆಯ ಹಾಗೆ ತನ್ನದು ಒಂದು ಆಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿರಬಹುದಾ?. ಎಂಬ ಪ್ರಶ್ನೆಗಳನ್ನು ಮೆಲಕು ಹಾಕುತ್ತ ಕುಳಿತ್ತಿದ್ದೆ. ಸಂಜೆಯಾಗುತ್ತಲೇ ಆಗ ತಾನೆ ಇಣುಕುತ್ತಿರುವ ತಾರೆಗಳನ್ನು ವೀಕ್ಷಿಸುತ್ತಿದ್ದರೆ ಅದೇನೋ ಒಂದು ಮಹದಾನಂದ. ನಾನು ಇಷ್ಟೊಂದು ಆಳವಾಗಿ ಯೋಚಿಸಿಯೇ ಇರಲಿಲ್ಲ. ಆಗ ದೇವರು ಮುಂದೆ ಪ್ರತಕ್ಷ್ಯವಾದರೆ ಏನು ವರ ಕೇಳುವದು ಎಂಬ ಪ್ರಶ್ನೆಗೆ ನನ್ನ ನೇರವಾದ ದಿಟವಾದ ಉತ್ತರ "ಶಾಲೆ ಎಂಬುದೇ ಇರಬಾರದು" ಹಾಗೆ ಮಾಡು ಎಂದು.

ಆಗ ದೇವರು ಪ್ರತ್ಯಕ್ಷವಾಗಲಿಲ್ಲವಾದರೂ ಪ್ರತ್ಯಕ್ಷವಾಗಿದ್ದು ಮಂಜ ಮತ್ತೆ ಮನೋಜ. ಮಂಜನ ಮುಖದಲ್ಲಿ ಏನೋ ಕಸಿವಿಸಿ. ಮನೋಜ ಬಂದವನೇ "ಲೇ ಇವತ್ತು ಒಬ್ಬ ಹೊಸ ವಿದ್ಯಾರ್ಥಿ ನಮ್ಮ ಶಾಲೆಗೆ ಸೇರಿದ್ದಾನೆ ಕಣೋ" ಎಂದ. ಅವನ ಹೆಸರು ವಿಳಾಸ ಎಂದ.

ಅದಕ್ಕೆ ನಾನು ಮತ್ತೆ ಮಂಜ ಜೋರಾಗಿ ನಕ್ಕೆವು.

ಲೇ ಅದು ವಿಳಾಸ ಅಲ್ಲ ಕಣೋ ವಿಲಾಸ ಎಂದ ಮಂಜ.

ಏನೇ ಆಗಲಿ ಮಗ ಅವನಿಗೆ ಸರಿಸಾಟಿ ಯಾರು ಇಲ್ಲ ಎಂದು ಮನೋಜ ಹೊಗಳುತಿದ್ದ. ಅವ ಎಲ್ಲದರಲ್ಲೂ ನ೦ ೧ ಎಂದ . ಮಾಸ್ಟರ್‌ಗೆ ಪ್ರಶ್ನೆಹಾಕಿ ಪೇಚಿಗೆ ಬೀಳಿಸಿದ್ದ ಕಣೋ. ಮತ್ತೆ ಗೋಳಿ ಆಟದಲ್ಲೂ ಎಕ್ಸ್‌ಪರ್ಟ್ ಎಂದ.

ಅವನ ವರ್ಣನೆ ಕೇಳಿ ಮಂಜ ಮಾತ್ರ ಉರಿದುಬೀಳುವ ಹಾಗೆ ಮುಖ ಮಾಡಿದ್ದ.

ಆಗ ನಾನು ಹೌದೆನೋ ಮಂಜ ಎಂದು ಕೇಳಿದೆ.

ಅದಕ್ಕೆ ಮಂಜ ಈಗ ಮೊದಲನೆ ದಿವಸ ಮುಂದೆ ನೋಡೋಣ ಇವನ ಪ್ರತಾಪ ಎಂದ.

ಅದಕ್ಕೆ ಮನೋಜ "ಲೇ ಸುಮ್ನೇ ಹೊಟ್ಟೆ ಉರ್ಕೋ ಬೇಡ" ಅವ ಭಾಳ ಶ್ಯಾಣ್ಯ ಎಂದ.

ಇರಲಿ ಇರಲಿ ಎಂದು ಮಂಜ ಮನೆಗೆ ಹೋಗಿಬಿಟ್ಟ . ಮನೋಜ ಮಾತ್ರ ರಾತ್ರಿ ಪೂರ್ತಿ ಅವನ ವರ್ಣನೆ ಮಾಡಿದ್ದ. ನನಗು ಮರುದಿನ ಅವನನ್ನು ನೋಡುವ ಮತ್ತೆ ಗೆಳೆತನ ಬೆಳೆಸುವ ಆಸೆಯಾಗಿತ್ತು.

ಮರುದಿನ ಶಾಲೆಗೆ ಯಾವದೆ ತಕರಾರು ಇಲ್ಲದೇ ಶಾಲೆಗೆ ಹೊರಟು ನಿಂತಿದ್ದು ನೋಡಿ ಅಪ್ಪ ನನ್ನನ್ನು ನೋಡಿ ನಕ್ಕೂ ಆಶ್ಚರ್ಯದಿಂದ "ಏನ ರಾಜ ಮತ್ತೆ ಹೇಗಿದೆ? ನಿನ್ನ ಹೊಟ್ಟೆ ನೋವು ಎಂದು" ಕೇಳಿದರು.

ನಾನು ಇಲ್ಲ ಎಂದು ಗೋಣು ಆಡಿಸಿ ಶಾಲೆಗೆ ಹೋದೆ. ಮತ್ತೆ ನಾನು ಮನೋಜ ಎಲ್ಲರೂ ಮಂಜನ ಹಿಂದೆ ಬಿಟ್ಟು ವಿಲಾಸ್ ಹಿಂದೆ ಬಿದ್ದೆವು. ಮಂಜ ಮಾತ್ರ ಒಬ್ಬನೇ ಆಗಿಬಿಟ್ಟ. ಮಂಜ ಒಬ್ಬನೇ ಆದರೂ ವಿಲಾಸ್ ಬಗ್ಗೆ ತಿಳಿದು ಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದ. ಅದು ನಮಗೆ ಕಂಡರು ನಾವು ಸುಮ್ಮನೇ ಇದ್ದೆವು. ಒಂದು ದಿನ ಮಂಜ ವಿಲಾಸನನ್ನು ಹಿಂಬಾಲಿಸುತ್ತಿದ್ದ. ಆಗ ವಿಲಾಸನಿಗೆ ಒಂದು ಹಾವು ಸಿಕ್ಕಿದೆ ಅದನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ಹೆದರಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದ. ನಾವೆಲ್ಲರೂ ತುಂಬಾ ಹೆದರಿದ್ದೆವು. ಮಂಜ ಅವನನ್ನು ಮನೆಯವರಿಗೂ ಹಿಂಬಾಲಿಸಿದ. ಆಗ ಆ ಹಾವು ಹಿಂದೆ ತಿರುಗಿ ವಿಳಾಸನ ಹೆಬ್ಬರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು. ವಿಳಾಸ ಎಷ್ಟೇ ತಡಕಾಡಿದರು ಕೈ ಬಿಡಲಿಲ್ಲ.

ಆಗ ಇದೆ ಅವಕಾಶ ಕಾಯುತಿದ್ದ ಮಂಜ ಅವನಿಗೆ ಕಡೆ ಹೋಗಿ "ನಾನು ಬಿಡಿಸುತ್ತೇನೆ" ಎಂದು ಹೇಳಿ ಅವನನ್ನು ಪೂರ್ತಿ ಶಾಲೆಯಲ್ಲಾ ತಿರುಗಿಸಿ ಅವನ ಪ್ರತಾಪವನ್ನು ಎಲ್ಲರಿಗೂ ತೋರಿಸಿಬಿಟ್ಟಿದ್ದ.

ಆಗ ನಮ್ಮ ಮಾಸ್ಟರ್‌ ಇವನಿಗೆ "ಲೇ ಒಂದು ವರ್ಷ ಫೈಲಾಗಿ ಇಲ್ಲಿ ಬಂದು ಮತ್ತೆ ಅದೇ ವರ್ಸೆ ಹಚ್ಚಿ ಕೊನ್ಡಿದ್ದಿಯ ಎಂದು" ಉಗಿದಿದ್ದರು.

ಕಡೆಗೆ ಮಂಜ ಒಬ್ಬ ಹವಾಡಿಗನ ಹತ್ತಿರ ಕರೆದುಕೊಂಡು ಹೋಗಿ ಅವನನ್ನು ಹಾವಿನಿಂದ ಮುಕ್ತ ಗೊಳಿಸಿದ್ದ. ಮಂಜನಿಗೆ ಎಲ್ಲಿಲ್ಲದ ದಿಗ್ವಿಜಯ ಸಾಧಿಸಿದ ಹಾಗೆ ಹಿರಿ ಹಿರಿ ಹಿಗ್ಗಿದ್ದ. ಮತ್ತೆ ನಾವೆಲ್ಲರೂ ಸಾವಕಾಶವಾಗಿ ಮಂಜನಿಗೆ ಹತ್ತಿರವಾಗ ತೊಡಗಿದೆವು.

ಇಷ್ಟೆಲ್ಲಾ ಆದರೂ ತನ್ನ ಹೆರೆತನದ ಬುದ್ಧಿಮಾತ್ರ ಬಿಟ್ಟಿರಲಿಲ್ಲ ವಿಲಾಸ. ಮತ್ತೊಂದು ದಿನ ಒಬ್ಬ ಪೋಲೀಸ್ ಇನ್‌ಸ್ಪೆಕ್ಟರ್ ಬೈಕ್ ಕೆಟ್ಟಿತ್ತು. ಆ ಉರಿಬಿಸಿಲಲ್ಲಿ ಎಷ್ಟೇ ಕಿಕ್ ಹೊಡೆದರೂ ಗಾಡಿ ಶುರುವಾಗಲಿಲ್ಲ. ಪೂರ್ತಿ ಮೈಯಲ್ಲ ಬೆವರಿಸಿತ್ತು. ಇನ್‌ಸ್ಪೆಕ್ಟರ್ ಹಾಗೆ ಕಿಕ್ ಹೊಡೆಯುವಾಗ ನಾವೆಲ್ಲರೂ ಹೆದರಿ ಹಿಂದೆ ನಿಂತು ನೋಡುತ್ತಿದ್ದೆವು.

ಆದರೆ ವಿಲಾಸ್ ಅವರ ಬಳಿ ಹೋಗಿ ಹಿರೇ ಮನುಷ್ಯರ ಹಾಗೆ ಹಿಂದೆ ಕೈಕಟ್ಟಿ ನೋಡುತ್ತಾ ನಿಂತ ಆನಂತರ ಸ್ವಲ್ಪ ಸಮಯದ ನಂತರ "ಏನ ಸರ್ ಬೈಕ್ ಶುರು ಆಗವಲ್ಲದ?" ಎಂದು ಕೇಳಿದ . ಆಗ ಇನ್‌ಸ್ಪೆಕ್ಟರ್ ಗೆ ಮೊದಲೇ ಕಿಕ್ ಹೊಡೆದು ಹೊಡೆದು ತಲೆ ಕೆಟ್ಟಿತ್ತು. ಇವನನ್ನು ನೋಡಿ "ಸುಮ್ಮನೇ ಹೋಗುವೆಯೋ ಅಥವಾ ಬೇಕೋ ಕಪಾಳಕ್ಕೆ ಎರಡು?" ಎಂದು ಗದರಿಸಿ ಅವನ ಮೇಲೆ ಕೈ ಎತ್ತಿದಾಗ ನಾವೆಲ್ಲರೂ ನಕ್ಕ್ಕಿದ್ದೆ ನಕ್ಕಿದ್ದು.

ಆನಂತರ ಒಂದೇ ವರ್ಷದಲ್ಲಿ ಮತ್ತೆ ವಿಲಾಸ ಬೇರೆ ವಿಳಾಸಕ್ಕೆ ವರ್ಗಾಯಿಸಿಕೊಂಡು ಹೋಗಿಬಿಟ್ಟಿದ್ದ.