Friday, August 28, 2009

ತರ್ಲೆ ಮಂಜ(ಗ) ನಾಟ....

ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.

ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.

ಹೀಗೆ ಮತ್ತೊಂದು ಬಸ್ ಬರುವವರೆಗೆ ಕಾಯುತ್ತಾ ಇದ್ದಾಗ ಒಂದು ಹುಡುಗಿ ನಮ್ಮ ಸಮೀಪ ಬಂದು ನಿಂತಳು. ಅವಳನ್ನು ನೋಡಿ ಹಲ್ಲು ಕಿರಿದ ಮಂಜ. ಇವನನ್ನು ನೋಡಿ ಹೆದರಿ ಆ ಹುಡುಗಿ ಬೇರೆ ಕಡೆಗೆ ಹೋಗಿ ನಿಂತು ಬಿಟ್ಟಳು. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆಗಲೇ ಬೇರೊಂದು ಬಸ್ ಬಂತು. ನಾವು ಅದೇ ಬಸ್ ಹತ್ತಿದರೂ ಸಿಟ್ ಸಿಕ್ಕಲಿಲ್ಲ. ಆ ಹುಡುಗಿಯೂ ಅದೇ ಬುಸ್ ಹತ್ತಿದಳು. ಆದರೆ ಅವಳಿಗೆ ಸೀಟ್ ಸಿಕ್ಕಿತ್ತು. ಮಂಜ ನನಗೆ ಒಂದು ಸೀಟ್ ಕೊಡಿಸುವೆ ಎಂದು ಹೇಳಿದ ನಾನು ಬೇಡ ಎಂದೆ. ಇವನು ಮೊದಲೇ ದೊಡ್ಡ ತರ್ಲೆ ಏನು ಮಹಾಪ್ರಲಾಪ ಮಾಡುತ್ತಾನೋ ಎಂದು. ಕಡೆಗೂ ತನ್ನ ಪಾಠ ಪುರಾಣಗಳಿಂದ ಒಪ್ಪಿಸಿಯೇ ಬಿಟ್ಟ.

ಮೆಲ್ಲನೆ ಆ ಹುಡುಗಿಯ ಸೀಟ್ ಹತ್ತಿರ ಹೋಗಿ ನಿಂತ. ಮತ್ತೆ ಎಲ್ಲಿ ತರ್ಲೆ ಮಾಡುತ್ತಾನೋ ಎಂದು ತುಂಬಾ ಹೆದರಿದ್ದೆ. ಹೋದವನೇ ಹುಡುಗಿಗೆ ನಾನು "Dr ಮಂಜುನಾಥ ಅಂತ" ಎಂದ. ನೀವು ಹೀಗೆ ಕುಳಿತು ಕೊಳ್ಳಬೇಡಿ ಮುಖಕ್ಕೆ ಏನಾದರು ಧರಿಸಿ ಎಂದು "H1N1" ಬಗ್ಗೆ ದೊಡ್ಡದಾದ ಲೆಕ್ಚರ್ ಕೊಟ್ಟ. ಮತ್ತೆ ರೋಗ ತಡೆಹಿಡಿಯುವ Homeopathic ಔಷಧಿ - Gelsemium 30 ( one dram ) for one week (5+5) ಎಂದು ಅವಳಿಗೆ ಹೇಳಿದ. ಮತ್ತೆ ದಿನವೂ ಮುಂಜಾನೆ ಎದ್ದಮೇಲೆ ಒಂದು ತುಳಸಿ ದಳ ತಿನ್ನಿರಿ ಎಂದು ಅಭಯವನ್ನಿತ್ತ. ಆ ಹುಡುಗಿ ಮುಖಕ್ಕೆ ತನ್ನ ಕರ್ಚಿಫ್ ಸುತ್ತಿಕೊಂಡಳು. ಚೆನ್ನಾಗಿ ಹಚ್ಚಿದ್ದ ಲಿಪ್ಸ್ಟಿಕ್ ವೇಸ್ಟ್ ಆಗಿತ್ತು. ಅಷ್ಟರಲ್ಲೇ ನನ್ನನ್ನು ತೋರಿಸಿ "ಈವ ನನ್ನ ಗೆಳೆಯ" ಎಂದು ಪರಿಚಯ ಮಾಡಿ ಕೊಟ್ಟ. ಆ ಹುಡುಗಿ ನನ್ನ ನೋಡಿ ನಮಸ್ಕರಿಸಿತು. ಇವನಿಗೆ ಸ್ವಲ್ಪ ನೆಗಡಿ ಎಲ್ಲಿ "H1N1" ಇದೆಯೋ ಅಂತ ಸ್ವಲ್ಪ ಪರೀಕ್ಷೆ ಮಾಡಿಸಲು ಕರೆದು ಕೊಂಡು ಹೊರಟಿದ್ದೇನೆ ಪ್ಲೀಸ್ ಸ್ವಲ್ಪ ಕೆಟಕಿ ಸೀಟ್ ಬಿಟ್ಟು ಕೊಡುತ್ತೀರಾ ಎಂದು ಅಂದು ಬಿಟ್ಟ. ಎಲ್ಲರು ಒಮ್ಮೆ ನನ್ನ ಹುಚ್ಚನಂತೆ ನೋಡಿದ್ದರು. ನಾನು ಖುದ್ದಾಗಿ ಹೋಗಿ ನಿಮ್ಹಾನ್ಸ್ ಸೇರುವದೊಂದೇ ಬಾಕಿ. ಆನಂತರ ಡ್ರೈವರ್ ಮತ್ತು ಕಂಡಕ್ಟರ್ ಸಮೇತ ಪೂರ್ತಿ ಬಸ್ ಖಾಲಿ ಆಗಿ ಬಿಟ್ಟಿತ್ತು. ಬಸ್ನಲ್ಲಿ ಇದ್ದದ್ದು ನಾನು ಮತ್ತು ಮಂಜು ಮಾತ್ರ. ಒಬ್ಬರನೊಬ್ಬರು ಮುಖ ಮುಖ ನೋಡಿಕೊಂಡು ನಗು ತಡಿಯಲಾರದೆ ಜೋರಾಗಿ ನಕ್ಕು ಬಿಟ್ಟೆವು. ಮತ್ತೆ ಬಸ್ನಿಂದ ಇಳಿದು ಆಟೋ ಹತ್ತಿ ಗೂಡು ಸೇರಿಕೊಂಡೆವು.

ಈ ಗದ್ದಲದಲ್ಲಿ ಪಾನಿಪುರಿ ಮತ್ತು ಮಿರ್ಚಿ ನೆನಪು ಹಾರಿ ಹೋಗಿತ್ತು. ಆದರೆ ಮಂಜನ ತರ್ಲೆಗಳು ಮಾತ್ರ ತಲೆಯಲ್ಲಿ ಗುನುಗುಡುತಿತ್ತು.

ಒಂದು ದಿವಸ ಮಂಜ ರಾಜಣ್ಣ ಮಾಸ್ತರ ಮನೆಗೆ ಹೋಗಿದ್ದ. ಅವರು ಆಗಲೇ ದಾಡಿ ಮಾಡಿಕೊಳ್ಳಲು ನೊರೆ ಮುಖಕ್ಕೆ ಹಚ್ಚಿಕೊಂಡು ಶೇವಿಂಗ್ ಮಾಡಲು ರೆಡಿ ಆಗಿದ್ದರು. ಆಗಲೇ ಈ ಮಂಜ "ಸರ್ ಹೆಡ್ ಮಾಸ್ತರ್ ಕರಿತಿದ್ದಾರೆ ತುಂಬಾ ಅರ್ಜೆಂಟ್ " ಎಂದ. ಮಾಸ್ತರರು ಏನು ಮಾಡಬೇಕೆಂದು ತಿಳಿಯದೆ ಮುಖಕ್ಕೆ ಹಚ್ಚಿದ ಶೇವಿಂಗ್ ಕ್ರೀಂ ಟೊವೆಲ್ನಿಂದ ಒರಿಸಿ ಹೆಡ್ ಮಾಸ್ತರ್ ಮನೆಗೆ ಹೋದರು.

ಹೆಡ್ ಮಾಸ್ತರು ಹೆಂಡತಿಯೊಂದಿಗೆ ಜಗಳವಾಡಿದ್ದರು. ಅವರೇ ತಮ್ಮ ಬಟ್ಟೆ ಮತ್ತು ಹೆಂಡತಿಯ ಸೀರೆಯನ್ನು ತೊಳೆಯುತ್ತಿದ್ದರು. ಹೆಡ್ ಮಾಸ್ತರರನ್ನು ಹುಡುಕುತ್ತ ಪೂರ್ತಿ ಮನೆಯಲ್ಲ ಜಾಲಾಡಿ ಹಿತ್ತಲ ಮನೆಗೆ ಕಾಲಿಟ್ಟು "ಏನ್ ಸರ್ ಅರ್ಜೆಂಟ್ ಕರೆದಿರಲ್ಲ" ಎಂದು ಕೇಳಿದರು. ಮೊದಲೇ ಕೆಂಡ ಮಂಡಲಾಗಿದ್ದ ಹೆಡ್ ಮಾಸ್ತರ್ ಹೆಂಡತಿ ಸೀರೆ ಬೇರೆ ನೋಡಿಬಿಟ್ಟ ಎಂಬ ಕೋಪದಿಂದ. ಯಾರು ರೀ ನಿಮಗೆ ಕರೆದಿದ್ದು ಎಂದು ಕೋಪಿಸಿಕೊಂಡು, ಅಷ್ಟು ಬಟ್ಟೆ ರಾಜಣ್ಣ ಮಾಸ್ತರ ಕಡೆ ಒಗಿಯಿಸಿ ಕಳುಸಿದ್ದರು. ಮನೆಗೆ ಬರುವ ದಾರಿಯಲ್ಲಿ ಈ ಮಂಜ "ಏಪ್ರಿಲ್ ಫೂಲ್ ಸರ್" ಎಂದು ಬಿಟ್ಟ. ಮೊದಲೇ ಉರಿದು ಹೋಗಿದ್ದ ಮಾಸ್ತರರಿಗೆ ಕೆಟ್ಟ ಕೋಪ ಬಂದು ಹುಣಿಸಿ ಬರಲು ತೆಗೆದು ಬಾಸುಂಡೆ ಬರುವ ಹಾಗೆ ಬಾರಿಸಿದ್ದರು.

ಹೀಗೆ ಒಂದು ದಿವಸ ಟ್ರೈನಿನಲ್ಲು ತುಂಬಾ ಜನ ಜಂಗುಳಿ ಇತ್ತು. ಮಂಜನಿಗೆ ಮಲಗಲು ಜಾಗ ಬೇಕಾಗಿತ್ತು. ಆಗ ಮಂಜ "ಹಾವು... ಹಾವು.... " ಎಂದು ಚೀರಿದ. ಒಂದೇ ನಿಮಿಷದಲ್ಲಿ ಪೂರ್ತಿ ಟ್ರೈನ್ ಖಾಲಿಯಾಗಿತ್ತು. ಮಂಜ ಮತ್ತು ರಾಜು ಸಿಟಿನಲ್ಲಿ ಮಲಗಿ ಬಿಟ್ಟರು. ಮರುದಿನ ಎದ್ದು ನೋಡಿದಾಗ ಇಬ್ಬರು ಅದೇ ಊರಲ್ಲಿ ಇದ್ದರು. ಆನಂತರ ಕೇಳಿದಾಗ ಗೊತ್ತಾಯಿತು ಹಾವು ಇದ್ದಿದ್ದರಿಂದ ಅದೊಂದು ಭೋಗಿ ಬಿಟ್ಟು ಟ್ರೈನ್ ಹೊರಟು ಹೋಗಿದೆ ಎಂದು.

ಅದಕ್ಕೆ ಇವನಿಗೆ ನಾವೆಲ್ಲರೂ ಕರೆಯುವದು ತರ್ಲೆ ಮಂಜ(ಗ) ಅಂತ....ಇವನ ಪಾಠ ಪ್ರವಚನಗಳು ಇನ್ನೂ ತುಂಬಾ ಇವೆ.
(ಇವನ ಕಾಲ ಸೆಂಟರ್ ಪ್ರವಚನನು ಓದಿ).

No comments:

Post a Comment