Monday, September 7, 2009

ಮೂಢನಂಬಿಕೆ ....

ಒಂದು ದಿವಸ ಸುಬ್ಬನಿಗೆ ಟೀ ಪೌಡರ್ ತರಲು ಹೇಳಿದ್ದಾಗ ಹಾಗೆ ೫ ನೇ ಕ್ರಾಸ್ನಲ್ಲಿ ತಿರುಗಾಡುತ್ತ ಇದ್ದ. ಮಂಜನಿಗೆ ಟೀ ಕುಡಿಯದೆ ಪ್ರಾತಃ ಕಾಲದ ಕೆಲಸಗಳು ಆಗುವದಿಲ್ಲವಾದ್ದರಿಂದ ಅವನೇ ಹೋಗಿ ನೋಡಿದಾಗ , ಅವನು ಹಾಗೆ ತಿರುಗಾಡುತ್ತ ಇದ್ದದ್ದನ್ನು ನೋಡಿದ, ಆಗಲೇ ಎದುರಿಗಿನ ಮನೆ ಆಂಟಿನು ಹೊರಗಡೆ ಬಂದಿದ್ದನ್ನು ನೋಡಿ ಮಂಜ ಅವನಿಗೆ ಏನೋ? ಆಂಟಿಗೆ ಲೈನ್ ಹೋಡಿತ ಇದ್ದೀಯ ಟೀ ಪೌಡರ್ ತರುವದು ಬಿಟ್ಟು ಎಂದು ಗದರಿಸಿದ್ದ. ಅನಂತರ ಸುಬ್ಬ ಬೆಕ್ಕು ಅಡ್ಡ ಹೋಯಿತು ಅದಕ್ಕೆ 3 ಜನ ದಾಟಿ ಹೋದ ಮೇಲೆ ತರಬೇಕೆಂದು ಕಾಯುತ್ತಿದ್ದೆ ಎಂದು ಹೇಳಿದರು ಕೂಡ ಮಂಜ ಮಾತ್ರ ಅವನನ್ನು ಪೀಡಿಸುವದು ಬಿಡಲಿಲ್ಲ.

ಸುಬ್ಬ ಮೂಡನಂಬಿಕೆ, ಗೊಡ್ಡು ಸಾಂಪ್ರದಾಯಗಳ ಒಂದು ಆಗರವೇ ಆಗಿದ್ದಾನೆ. ಹೀಗೆ ಒಂದು ದಿವಸ ಬೆಕ್ಕಿಗೆ ಅವರ ಮನೆ ಹಾಲು ಕುಡಿಯುತ್ತಿದ್ದಾಗ ಜೋರಾಗಿ ಹೊಡೆದಿದ್ದಾನೆ ಅದು ಮೂರ್ಚೆ ಹೋಗಿದೆ. ಅಪ್ಪ ಹೇಳಿದ ವೇದಾಂತ ನೆನಪಾಗಿದೆ "ಬೆಕ್ಕನ್ನ ಸಾಯಿಸಿದರೆ ಬಂಗಾರದ ಬೆಕ್ಕು ಮಾಡಿಕೊಟ್ಟರು ಪಾಪ ಹೋಗುವದಿಲ್ಲ" ವೆಂದು. ಹೆದರಿ ಅಳುತ್ತ ಕುಳಿತಿದ್ದ. ಅಷ್ಟರಲ್ಲೇ ಬೆಕ್ಕು ಮೂರ್ಚೆಯಿಂದ ಎಚ್ಹೆತ್ತು ಅವನ ಕಾಲಿಗೆ ಅದರ ಉಗುರಿನಿಂದ ಚೂರಿ(ಜೆಬರಿ) ಓಡಿ ಹೋಗಿತ್ತು .

ಸುಬ್ಬನಿಗೆ ಒಂದು ದಿವಸ ತುಂಬ ಅರ್ಜೆಂಟ್ ಸಂಡಾಸ ಬಂದಿತ್ತು ಬೆಕ್ಕು ಅಡ್ಡ ಬಂತು ಅಂತ ಸಂಡಾಸ ಮಾಡದೇ ಬೇರೆ ಮೂರೂ ಜನ ಹೋದ ಮೇಲೆ ಹೋಗುವೆ ಎಂದು ಹಾಗೆ ನಿಂತಿದ್ದ ಆಮೇಲೆ ಚಡ್ಡಿಯಲ್ಲಿಯೇ ಎಲ್ಲವನ್ನು ಮುಗಿಸಿದ್ದ.

ಈಗ ಸುಬ್ಬ "ಬ್ಲೂ ಸಫಾಯರ" ಉಂಗುರವನ್ನು ಮಾಡಿಸಿದ್ದಾನೆ. ಏನಾದರು ಕೇಳಿದರೆ ದೊಡ್ಡ ದೊಡ್ಡ ಸ್ಟಾರ್ ಗಳು ಹಾಕಿಕೊಳ್ಳುತ್ತಾರೆ ಅದಕ್ಕೆ ಹಾಕಿಕೊಂಡಿದ್ದೇನೆ ಎಂದು ಬೀಗುತ್ತಾನೆ. ಮತ್ತೆ ಒಂದು ದಿವಸ ಬ್ಲೂ ಸಫಾಯರ ತೆಗೆದು "ಪಚ್ಚೆ" ಉಂಗುರ ಹಾಕಿಕೊಂಡಿದ್ದ. ಕೇಳಿದಾಗ ಒಬ್ಬ ಮಹಾನ ಜ್ಯೋತಿಷಿಗಳು ಹೇಳಿದ್ದಾರೆ ಎಂದ. ಸ್ವಲ್ಪೇ ದಿವಸದಲ್ಲಿ ಅದನ್ನು ತೆಗೆದು ಮತ್ತೆ ಬ್ಲೂ ಸಫಾಯರ ಹಾಕಿಕೊಂಡಿದ್ದ. ಅನಾಮತ್ತಾಗಿ 6೦೦೦/- ರೂಪಾಯಿಗಳನ್ನು ಇದಕ್ಕೆ ಖರ್ಚು ಮಾಡಿದ್ದ.

ಏ ಸುಬ್ಬ ಇದನ್ನೆಲ್ಲಾ ನಂಬ ಬಾರದೋ ಎಂದು ಮಂಜ ಗಳಗನಾಥ್ ಆಚರ್ಯರರ ಕಾಗೆ ಶಾಂತಿ ಕಥೆ ಹೇಳಲು ಪ್ರಾರಂಬಿಸಿದ.

ಹೀಗೆ ನನ್ನ ಮನೆಯ ಸಮೀಪವಿರುವ ಗಳಗನಾಥ ಆಚಾರ್ಯರು ಮಗನಿಗೆ ಅವರ ಅಮ್ಮನ ಪಿಂಡವನ್ನು ಕಾಗೆಗೆ ಇಡಲು ಹೇಳಿದ್ದರು. ಯಾವದೇ ಕಾಗೆ ಅದನ್ನು ಮುಟ್ಟಲಿಲ್ಲ. ಆಗ ಜಯೇಂದ್ರ ಕಾಗೆಯನ್ನು ಹಿಡಿದು ತಂದು ಅವರಜ್ಜಿ ಪಿಂಡದ ಮುಂದೆ ಕಟ್ಟಿ ಹಾಕಿದ್ದ. ಕಾಗೆಯ ಚೀರಾಟದಿಂದ ತುಂಬ ಕಾಗೆಗಳು ಗಳಗನಾಥ್ ಆಚಾರ್ಯರರ ಮನೆಯ ಮುಂದೆ ಜಮಾಯಿಸಿದ್ದವು. ಅವುಗಳ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ಮಗ ಜಯೇಂದ್ರ ಪಿಂಡವನ್ನು ಕಾಗೆಗೆ ತಿನ್ನಿಸಲು ಪ್ರಯತ್ನಿಸುತ್ತಿದ್ದ. ಅದನ್ನು ನೋಡಿದ ಗಳಗನಾಥ ಆಚಾರ್ಯರು ಜಯೇಂದ್ರನಿಗೆ ಉಗಿದು ಕಾಗೆ ಶಾಂತಿ ಮಾಡಿಸಿದ್ದರು. ಕಾಗೆಗಳು ಮಾತ್ರ ಪಿಂಡವನ್ನು ಮುಟ್ಟಲಿಲ್ಲ.

ವಾಸ್ತು ಪ್ರಕಾರ ಒಂದು ಚಿಕ್ಕದಾದ ಮೀನ ತಂದು ಇಟ್ಟಿದ್ದ ಗಳಗನಾಥ ಆಚಾರ್ಯರ ಮಗ ಜಯೇಂದ್ರ. ಕಣ್ಣು ಕಾಣದ ಅವನ ಅಜ್ಜಿ ಅದನ್ನು ಸಾರಿಗೆ ಹಾಕಿ ಮೀನಿನ ಸಾರನ್ನು ಮಾಡಿದ್ದಳು.

ನಾನು ಮತ್ತು ನನ್ನ ಗೆಳೆಯ ಶಿವಮೊಗ್ಗ ದಲ್ಲಿ ಇದ್ದಾಗ ತುಂಬ ಹಲ್ಲಿಗಳು ಇದ್ದವು ಅವು ದಿನವು ನಮ್ಮ ಮೇಲೆ ಬೀಳುತ್ತಿದ್ದವು ಎಂದು ಹೇಳಿದ. ಇವೆಲ್ಲ ಮೂಡ ನಂಬಿಕೆಗಳು ನಂಬಬಾರದು

ನಿನಗೆ ಗೊತ್ತ ಚೀನಾ ದೇಶದಲ್ಲಿ ಚೈನೀಸ್ಗಳು ಬೆಕ್ಕು ಮತ್ತು ಕೊತೀನ ತಿನ್ನುತ್ತಾರೆ ಎಂದು ಹೇಳಿದ.

ಅದಕ್ಕೆ ಸೊಪ್ಪು ಹಾಕಿದಂತೆ ನಾನು ಶುರು ಹಚ್ಚಿಕೊಂಡೆ ನೋಡು ಸುಬ್ಬ ವಿವೇಕಾನಂದ ಅವರು ಹೇಳಿದಂತೆ "Strength is Life Weekness is death". ಯಾವತ್ತು ನಮ್ಮ ಮನಸ್ಸಿಗೆ ಇಂತಹ ವಿಚಾರಗಳನ್ನು ಎಡೆ ಮಾಡಿ ಕೊಡಬಾರದು ಎಂದು.

ಹೀಗೆ ಒಂದು ದಿವಸ ಕಪ್ಪೆ ಮದುವೆ ಮಾಡಿಸಿದರೆ ಮಳೆಯಾಗುತ್ತೆ ಎಂದು ನಮ್ಮ ರೈತರು ಕಪ್ಪೆಯನ್ನು ಹಿಡಿಯಲು ಹೋಗಿ ಎಷ್ಟು ಕಪ್ಪೆ ಸಾಯ್ಸಿದ್ದರೋ ಏನೋ. ಕಡೆಗೂ ಹಿಡಿದು ಮದುವೆಯಾದ ಮೇಲೆ ಗೊತ್ತಾಗಿತ್ತು ಅವೆರಡು ಗಂಡು ಕಪ್ಪೆಗಳು ಅಂತ.

ನೋಡು ಸುಬ್ಬ ಜೀವನ ದೇವರು ನಡೆಸಿದ ಹಾಗೆ ಆಗುತ್ತೆ ಅದಕ್ಕೆ ಅಂತ ನಾವು ತೆಲೆಯಲ್ಲಿ ಏನೇನೋ ಗೊಡ್ಡು ಸಂಪ್ರದಾಯಗಳನ್ನ ಹಾಕಿ ಕೊಳ್ಳಬಾರದು.

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ


ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು....

ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ
ಯಾರು ಇಂದು ಬಲ್ಲವರು

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು....

ಕಾನನ ಬರಲಿ ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ
ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ
ನಿಲ್ಲದ ಈ ಪಯಣದ ಗುರಿಯ
ಯಾರು ಇಂದು ಕಂಡವರು

ದೇವರ ಆಟ ಬಲ್ಲವರಾರು
ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ
ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ಚಿ ಉದಯ್ ಶಂಕರ್ ಅವರ ಈ ಹಾಡು ಎಷ್ಟು ಸಮಂಜಸ ಎಂದು ಹೇಳಿದೆ. ದೇವರು ಯಾವತ್ತು ವಿಶಾಲವಾದಂತ ಹೃದಯವಿದ್ದವನು ಅವನು ಎಲ್ಲರಿಗು ಒಳ್ಳೆಯದನ್ನು ಮಾಡುತ್ತಾನೆ. ಎಲ್ಲವು ದೇವರೇ ಆಗಿದ್ದಾನೆ ಈ ಪುರುಂದರ ದಾಸರ ಹಾಡು ನೆನಪಿಸಿಕೋ ಎಂದಾದರೂ ಇಂತಹ ವಿಚಾರಗಳು ಬಂದಾಗ ಎಂದು ಹೇಳಿದೆ.

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ಪ

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ೧

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ೨

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರ ವಿಟ್ಟಲನೆ
ಶ್ರುತಿಗೇ ಸಿಲುಕದ ಮಹಾಮಹಿಮನು ನೀನೇ ೩

ನಮ್ಮ ಪ್ರಖ್ಯಾತ ಕವಿ ಕೆ. ಎಸ್. ನರಸಿಂಹಸ್ವಾಮಿ ಗಳು ಇದನ್ನೇ ಹೇಳಿದ್ದು.

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ,
ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ
ಎಲ್ಲವೂ ನಿನ್ನವೆ
ಇರಲಿ ಏಕ

ದೀಪವು ನಿನ್ನದೆ
ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಆಗೊಂದು ಸಿಡಿಲು
ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ
ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಕಡಲೂ ನಿನ್ನದೆ,ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಮತ್ತೆ ಈ ಹಿಂದಿ ಹಾಡಿನಲ್ಲಿ ಹೀಗೆ ಹೇಳಿದ್ದಾರೆ.
जिसका जितना हो आंचल यहां पर उसको सौगात उतनी मिलेगी

ಮತ್ತೆ ಸಂಸ್ಕೃತದಲ್ಲಿ ಹೀಗೆ ಹೇಳಿದ್ದಾರೆ.
ತೇನ ವಿನಾ ತೃಣಮಪಿ ನ ಚಲತಿ - ಅವನಿಲ್ಲದೆ(ಭಗವಂತನಿಲ್ಲದೆ) ಒಂದು ಹುಲ್ಲುಕಡ್ಡಿಯೂ ಅಲುಗಾಡದು.

ಎಂದು ಅವನನ್ನು ತಿಳಿಹೇಳಿದಾಗ ಅವನು ಸ್ವಲ್ಪ ಸುಧಾರಿಸಿದ್ದಾನೆ. ಮತ್ತೆ ಬೆಕ್ಕು ಅಡ್ಡ ಬರದಿರಲಿ ಎಂದು ಆಶಿಸೋಣ....

2 comments:

  1. ಆತ್ಮೀಯ ಗೋಪಾಲರೆ ,

    ಗಳಗನಾಥ ಆಚಾರ್ಯಾರು, ಅವ್ರ ಮಗ ಹಾಗೂ ಕಾಗೆಯ ವಿಶ್ಲೇಷಣೆ ಮನಸ್ಸಿಗೆ ಹಿಡಿಸ್ತು.

    ಹಾಗೂ ಚಿ. ಉದಯಶಂಕರ್, ಪುರಂದರದಾಸರು, ಕೇ, ಎಸ್, ಆರ್. ಎಲ್ಲರ ನೆನೆಪು ಮಾಡಿದ್ದೀರಿ.

    ಅಭಿನಂದನೆಗಳು.

    ಕೂಡಲೇ "http://www.youtube.com/watch?v=4iczBtt1f0Q" ಹೋಗಿ, ಇನ್ನೊಂದ್ಸಾರಿ ಆಲಿಸಿದೆ...
    ಈ ಗೀತೆಯು ನೂರಾರು ಪುಟಗಳ, ನೂರಾರು ಪುಸ್ಕಕಗಳಿಗೆ ಸರಿ-ಸಮಾನ ಅನ್ನೋದು ನನ್ನ ಅನಿನಿಕೆ.

    ReplyDelete
  2. ತುಂಬಾ ಧನ್ಯವಾದಗಳು.ನಿಜ ನೀವು ಹೇಳಿದ್ದು ಸರಿ ಚಿ. ಉದಯಶಂಕರ್, ಪುರಂದರದಾಸರು, ಕೇ, ಎಸ್, ಆರ್. ಅವರು ಪ್ರಂಪಚ ಕಂಡ ತುಂಬಾ ಮಹಾನ ವ್ಯಕ್ತಿಗಳು. ನೀವು ನನ್ನ ಬಳಗಕ್ಕೆ ಬಂದಿದ್ದು ಬೆಣ್ಣೆ ಮಸಾಲ ದೋಸೆ ತಿಂದಷ್ಟೇ ಖುಷಿ ಆಯಿತು.

    ReplyDelete