Sunday, September 6, 2009

ತರ್ಲೆ ಮಂಜ(ಗ) ಮತ್ತು ಸೀದಾ ಸಾದಾ ಸುಬ್ಬ ....

ಒಂದು ದಿವಸ ನಮ್ಮ ಶಾಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. ಗೋವಾ ತಲುಪಿ ಅಲ್ಲಿ ಬೀಚ್ ನೋಡಲು ಕರೆದುಕೊಂಡು ಹೋಗಿದ್ದರು. ಅಲ್ಲಿ ಬೀಚ್ ನೋಡಿ ಬರುವಾಗ ನಮ್ಮ ಮಂಜನ ಕೈಯಲ್ಲಿ ಫೌಂಟೆನ್ ಪೆನ್ ಇತ್ತು. ಅದನ್ನು ನೋಡಿ ನಮ್ಮ ಸುಬ್ಬ ಎಲ್ಲಿಂದ ತೆಗೆದುಕೊಂಡೆ ಎಂದು ಕೇಳಿದ. ನಿನಗೂ ಬೇಕಾದರೆ ಹೇಳುವೆ ಯಾರಿಗೂ ಹೇಳಬೇಡ ಎಂದ.

ಅನಂತರ ಸ್ವಲ್ಪ ಮುಂದೆ ಹೋದ ಮೇಲೆ ಸುಬ್ಬ ಒಬ್ಬ ಬಿಳುಪು(ತೊನ್ನು) ಹತ್ತಿದ ಹುಡುಗಿಗೆ ಏನೋ ಹೇಳಲು ಹೋಗಿ ಹೊಡೆತ ತಿಂದಿದ್ದ. ಏನು ಆಯಿತು ಎಂದು ಕೇಳಿದಾಗ ಆ ಹುಡುಗಿ ಧಾರವಾಡದವಳೇ ಆಗಿದ್ದಳು. ಅವಳಿಗೆ ಇವನು ಕೆಟ್ಟ ಧಾರವಾಡದ ಶಬ್ದಗಳಿಂದ ಬೈದಿದ್ದ. ಟೀಚರ್ ಚೆನ್ನಾಗಿ ಏಟುಗಳು ಕೊಟ್ಟು ಬಿಟ್ಟಿದ್ದರು.

ಆನಂತರ ಸಂಜೆ ಸುಬ್ಬ ಮಂಜನೊಂದಿಗೆ ಜಗಳ ಶುರು ಮಾಡಿಕೊಂಡಿದ್ದ. ಏನು ಆಯಿತು? ಎಂದು ನಾವು ಜಗಳ ಬಿಡಿಸಿ ಕೇಳಿದಾಗ. ಸುಬ್ಬ ತೊದಲುತ್ತ ಇವನ ಕಡೆ ಒಂದು ಫೌಂಟೆನ್ ಪೆನ್ ಇತ್ತು. ಅದು ಹೇಗೆ ಬಂತು ಎಂದು ಕೇಳಿದೆ ಅದಕ್ಕೆ ಇವ.. ಇವ.. ಎಂದು ಬಿಕ್ಕಿ ಬಿಕ್ಕಿ ಅಳಲಾರಂಬಿಸಿದ. ಲೇ ನಾ ಹೇಳುತ್ತೇನೆ ಎಂದ ಮಂಜ ಬೀಚಿನಲ್ಲಿ ಇರೋ ಅರೆ ಬೆತ್ತೆಲೆ ಫಾರಿನ್ ಹುಡುಗಿಯರನ್ನು ನೋಡಿ ನಾನು ಧಾರವಾಡ ಭಾಷಾದಾಗ ಬೈದೆ ಅವ್ರಿಗೆ ಏನು ತಿಳಿತೋ ನನಗೆ ಗೊತ್ತಿಲ್ಲ ಅವರು ನನಗೆ ಈ ಫೌಂಟೆನ್ ಪೆನ್ ಕೊಟ್ಟರು. ಅದನ್ನು ಇವನಿಗೆ ಹೇಳಿದೆ ಇವ ಹೋಗಿ ಹೋಗಿ .. ಫಾರಿನ್ ಹುಡುಗಿ ಅಂತ ತಿಳ್ಕೊಂಡು ಧಾರವಾಡದ ಬಿಳುಪು (ತೊನ್ನು) ಹತ್ತಿದ ಹುಡುಗಿ ಮ್ಯಾಲೆ ಪ್ರಯೋಗ ಮಾಡ್ಯಾನ... ಲೇ ಮೊದಲು ಅವರು ಬೆತ್ತಲೆ ಇದ್ದಾರೋ ಇಲ್ಲೋ ನೋಡ್ಬೇಕು ಆಮೇಲೆ ಬೈಬೇಕು. ಎಂದಾಗ ನಾವೆಲ್ಲರೂ ನಕ್ಕಿದ್ದೆ ನಕ್ಕಿದ್ದು.

ನಮ್ಮ ಸೀದ ಸಾದಾ ಸುಬ್ಬನಿಗೆ ಎಷ್ಟೇ ತೊಂದರೆಯಾದರು.. ನಮ್ಮ ತರ್ಲೆ ಮಂಜನ ಪಾಠ ಪ್ರವಚನ ಕೇಳುವದು ಬಿಟ್ಟಿಲ್ಲ. ಹೀಗೆ ಒಂದು ದಿವಸ ಕೆಮೆಸ್ಟ್ರಿ ಮಾಸ್ತರರು ಒಂದು ದಿವಸ ನಾಳೆ Alcohol ತಯಾರಿಸುವ ಪ್ರಾಕ್ಟಿಕಲ್ ತೋರಿಸುತ್ತೇನೆ. ಎಲ್ಲರು ಒಂದು ನ್ಯಾಪ್ಕಿನ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಲೇ "ಪಂಚಾಮೃತ ಮನ್ಯಾ" ನೀನು ಮುಂದ ಇರೋ.. ಎಂದು ಕೂಗಿ ಕೆಮೆಸ್ಟ್ರಿ ಮಾಸ್ತರರು ಹೇಳಿದ್ದರು. ಸುಬ್ಬ ನಿದ್ದೆಗಣ್ಣಲ್ಲಿ ಇದ್ದ. ಅವರು ಏನು ಹೇಳಿದ್ದರು ಎಂದು ತಿಳಿಯಲಿಲ್ಲ.

ಅನಂತರ ಸುಬ್ಬ ನಮ್ಮ ತರೆಲೆ ಮಂಜನಿಗೆ ಕೇಳಿದ್ದಾನೆ. ಅವನು ಏನು ಇಲ್ಲ ಕಣೋ ನ್ಯಾಪ್ಕಿನ್ ತೊಗೊಂಡು ಬಾ ಎಂದು ಹೇಳಿದ್ದಾರೆ ಎಂದ. "ಹಾಗೆ ಎಂದರೆ" ಎಂದು ಕೇಳಿದ. ಅಷ್ಟೇ ಬೇಕಾಗಿತ್ತು ನಮ್ಮ ಮಂಜನಿಗೆ ಏನು ಇಲ್ಲ ಲೇ ಹೋಗಿ Medical Shop ನ್ಯಾಗ ಕೇಳು ಕೊಡ್ತಾರ ಎಂದಿದ್ದಾನೆ.

ಮರುದಿನ ಮಾಸ್ತರ ಎಲ್ಲರು "ನ್ಯಾಪ್ಕಿನ್ ತಂದಿರೆನೋ" ಎಂದು ಕೇಳಿದರು. ಎಲ್ಲರು ನ್ಯಾಪ್ಕಿನ್ ತೋರಿಸಿದರು ಆದರೆ ಸುಬ್ಬನ ಕೈನಲ್ಲಿ ಇದ್ದ ಹಸಿರು ಪ್ಯಾಕೆಟ ನೋಡಿ ಮಾಸ್ತರರಿಗೆ ಮೈಯಲ್ಲ ಮುಳ್ಳು ಬಂದಿತ್ತು. ಅದು ಹುಡುಗಿಯರ ಎದುರಿಗೆ ಇದೇನು ತೆಗೆದು ಕೊಂಡು ಬಂದಿದ್ದಾನೆ ಎಂದು. ಮಾಸ್ತರ ಹುಣಿಸೆ ಬರಲು ತೆಗೆದು ಬಾರಿಸಲು ಶುರು ಮಾಡಿದ್ದಾರೆ. ಆಗ ಸುಬ್ಬ ಸರ್.. ಸರ್ .. ನನಗೆ ಏನು ಗೊತ್ತಿಲ್ಲ ಸರ್ .. ಎಂದ. ಮತ್ಯಾರಿಗೆ ಗೊತ್ತ ನಮ್ಮಪ್ಪ ಗೊತ್ತೇನೆ. ನಾಳೆ ನಿಮ್ಮ ಅಪ್ಪನ ಕರ್ಕೊಂಡು ಬಾ .. ಎಂದು ಮಾಸ್ತರ ಹೇಳಿದ್ದಾರೆ. ಆಗ ಮಂಜನೆ ಹೇಳಿದ್ದು ಎಂದು ಹೇಳಿದ್ದಾನೆ. ಆಗ ಮಾಸ್ತರ ತುಂಬಾ ಸಿಟ್ಟಿಗೆದ್ದು ಮಾಸ್ತರ ಮಂಜನ ಕಡೆಗೆ ಬಂದು ಏನು ಕೇಳದೆ ಬಾರಿಸಲು ಶುರು ಮಾಡಿ ಬಿಟ್ಟರು. ನೀನು ಯಾವಾಗಲೇ ಕೆಮೆಸ್ಟ್ರಿ ಹೇಳಲಿಕ್ಕೆ ಶುರು ಮಾಡಿದೆ. ಲೇ .. ಎಂದು. ಆಗ ಮಂಜ ಇಲ್ಲ.. ಇಲ್ಲ... ಸರ್ ನಾನೇನು ಹೇಳಿಲ್ಲ ನೋಡ್ರಿ ಬೇಕಾರ ನಾನು ಕರವಸ್ತ್ರ ತೊಗೊಂಡು ಬಂದೇನಿ. ಅವ ಸುಳ್ಳ ಹೇಳಾ ಕತ್ತ್ಯಾನ ಸರ್ ಎಂದು ಗೊಳೋ ಅಂತ ಅಳಲಾರಂಬಿಸಿದ. ಮಾಸ್ತರ ಮಂಜನ ಕೈ ಯಲ್ಲಿ ವಸ್ತ್ರ ನೋಡಿ. ಮಂಜನ ಬಿಟ್ಟು ಮತ್ತೆ ಸುಬ್ಬನ ಕಡೆ ಹೋಗಿ "ಸುಳ್ಳು ಹೇಳ್ತಿ ಮಗನ" ಎಂದು ಚೆನ್ನಾಗಿ ಬಾರಿಸಿ. ಪ್ರಾಕ್ಟಿಕಲ್ ಹೇಳದೆ staff ರೂಂ ಹೋಗಿ ಬಿಟ್ಟರು. ಅನಂತರ ಸುಬ್ಬನನ್ನು ಕರೆದು ಹೀಗೆಲ್ಲ ಮಾಡಬಾರದು ಎಂದು ತಿಳಿ ಹೇಳಿದ್ದರು.

2 comments:

  1. ಆತ್ಮೀಯ ಗೋಪಾಲರೆ ,
    ಅಭಿನಂದನೆಗಳು

    ಒನ್ಸ್ ಎಗೈನ್, ಮಂಜ ರಾಕ್ಸ್

    ReplyDelete
  2. ಆತ್ಮೀಯ ಲೋದ್ಯಾಶಿಯವರೇ

    ತುಂಬಾ ಧನ್ಯವಾದಗಳು.

    ReplyDelete