Monday, March 22, 2010

ಸುಬ್ಬನ ಹೊಸ ವರ್ಷದ resolution(revolution)

ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ ಕಾಫಿ ಕುಡಿಯಲು ಪ್ರಾರಂಬಿಸಿದ್ದ. ರೀ ನೀವು ಆರಂಭ ಶೂರ ಎಂದು ಅವನ ಹೆಂಡತಿ ಕಾಡಿದ್ದಳು. resultion ಏನು ಇಲ್ಲ ಮನೆಯಲ್ಲಿ ನನ್ನ ಹೆಂಡತಿ ಒಂದು revolution ನೆ ಮಾಡಿದ್ದಾಳೆ. ನನ್ನ (revenue) ಜೇಬು ಖಾಲಿ ಮಾಡುವ ಒಂದು solution ಎಂದ. ಅಷ್ಟರಲ್ಲಿ ನಮ್ಮ ಮಂಜ ಮತ್ತೆ ಅವನ ಹೆಂಡತಿ ಕೂಡ ಹಾಜರ ಆದರು. ಸುಬ್ಬ ಬೆಳಿಗ್ಗೆಯಿಂದ ಬರಿ ವಿಕ್ರತಿಗಳೇ ನಡೆಯುತ್ತಿವೆ ಎಂದ ಈ ಸಂವತ್ಸರದ ಹೆಸರಿನ ಹಾಗೆ ಎಂದು ಮುಖ ಕಿಚಾಯಿಸಿ ಮಾತನಾಡಿದ. ಏನು ಆಯಿತೋ? ಸುಬ್ಬ ಎಂದು ಮಂಜ ಕೇಳಿದ. ಏನಿಲ್ಲ ನಾನು ಮುಂಜಾನೆ ಎದ್ದ ಕೂಡಲೇ ನನ್ನ ಹೆಂಡತಿ ನನ್ನ ಮೇಲೆ ಅರ್ಧ ಬಾಟಲಿ ಎಣ್ಣೆ ಸುರುವಿದಳು ಎಂದ. ನಾನು ಮಂಜ ನಗುತ್ತಿದ್ದೆವು. ಸ್ನಾನ ಮಾಡಲು ಹೋಗಬೇಕು ಎಂದು ಎಲ್ಲ ಬಟ್ಟೆ ತೆಗೆದುನಿಂತೆ ನನ್ನ ಮಗ ಹೋಗಿ ಬಚ್ಚಲು ಸೇರಿಕೊಂಡ. ಅಷ್ಟರಲ್ಲೇ ಮನೆ ಎದುರಿಗಿರೋ ಅಂಟಿ ಬಂದು ಬಿಡಬೇಕೆ?. ನಾನು ಓಡಿ ಹೋಗಿ ಮತ್ತೆ ಎಣ್ಣೆ ಮ್ಯೆಯಲ್ಲೇ ಬಟ್ಟೆ ಧರಿಸಿ ಬಂದೆ. ಅಂಟಿ ಹೋದ ಮೇಲೆ ನನ್ನ ಹೆಂಡತಿಯ ಅಷ್ಟೋತ್ತರ. ಏನ್ರಿ ಇದು ಎಣ್ಣೆ ಜಿಡ್ಡು ಎಲ್ಲಾsss ಬಟ್ಟೆಗೆ, ಇದನ್ನು ಒಗೆದರು ಹೋಗುವದಿಲ್ಲ ಎಂದಳು. ನನಗೆ ಬಟ್ಟೆ ಒಗೆಯುವದಕ್ಕೆ ಆಗುವದಿಲ್ಲ. ನನಗೆ ವಾಶಿಂಗ್ ಮಷೀನ್ ಬೇಕು ಎಂದು ಹಠ ಹಿಡಿದಳು. ಇವತ್ತು ದಿನ ಚೆನ್ನಾಗಿದೆ ಇವತ್ತೇ ಬೇಕು ರೀ ಎಂದಳು. ಇವತ್ತು ದಿನ ಏನೋ ಚೆನ್ನಾಗಿದೆ, ಆದರೆ ನನ್ನ ಬಳಿ ದುಡ್ಡು ಬೇಕಲ್ಲ? ಎಂದೇ. ರೀ ನಿಮ್ಮದು ಇದೇ ಗೋಳು ನೋಡಿ ಪಕ್ಕದ ಮನೆ ಪ್ರತಿಮಾ ಎರಡು ವಾಶಿಂಗ್ ಮಷೀನ್ ಇಟ್ಟಿದ್ದಾಳೆ ಎಂದಳು. ನಾನು ಅವಳು ಧೋಬಿ ಇರಬೇಕು ನೋಡು ಎಂದಿದಕ್ಕೆ ನನ್ನ ಮೇಲೆ ಕೋಪ ಮಾಡಿಕೊಂಡು ಮಾತು ಬಿಟ್ಟು ಬಿಟ್ಟಳು ಎಂದ. ಆಗ ಮಂಜ ಸುಮ್ಮನಿರದೆ "ಲೇ ನೀನು ಹೇಳಬೇಕಿತ್ತು ನಾನು ಇದ್ದೇನಲ್ಲ ಬಟ್ಟೆ ವಾಶ್ ಮಾಡೋಕೆ" ಎಂದು ಚುಡಾಯಿಸಿದ.

ಸುಬ್ಬ ಮತ್ತೆ ಶುರು ಹಚ್ಚಿಕೊಂಡ. ಅಷ್ಟರಲ್ಲೇ ನನ್ನ ಮಗ ಸ್ನಾನ ಮುಗಿಸಿ ಬಂದಿದ್ದರಿಂದ. ನಾನು ಬಚ್ಚಲಿಗೆ ಹೋಗಿ ಸ್ನಾನ ಮುಗಿಸಿ ಬಂದೆ. ಮೊದಲೇ ಸಿಟ್ಟಿಗೆ ಎದ್ದ ನನ್ನ ಹೆಂಡತಿ ನನ್ನ ಮಗನಿಗೆ ಉದ್ದೇಶಿಸಿ "ಲೇ ರಾಜ ಇವತ್ತು ನಾವು jcb ಅವರಿಗೆ ಬರಲು ಹೇಳಬೇಕು ನಿನ್ನ ಅಪ್ಪ ಅರ್ಧ ಘಂಟೆ ಸ್ನಾನ ಮಾಡಿ ಬಂದಿದ್ದಾರೆ". ನನಗೆ ಈ ಕೊಳಕು ಸ್ವಚ್ಚ ಮಾಡಲು ಆಗುವದಿಲ್ಲ ಎಂದಳು. ನನಗೆ ತುಂಬಾ ಕೋಪ ಬಂದಿತ್ತು. ಮತ್ತೆ ಪೂಜೆ ಎಲ್ಲ ಮುಗಿದ ಮೇಲೆ, ಪಂಚಾಗ ಶ್ರವಣವಾದ ಮೇಲೆ ನನ್ನ ಭವಿಷ್ಯ ತುಂಬಾ ಕೆಟ್ಟದಾಗಿ ಇತ್ತು ಎಂದು ಹೇಳಿದ. ಅವನ ಮುಖ ನೋಡಿದರೆ ಅಳುವದೊಂದೇ ಬಾಕಿ ಇತ್ತು. ಆಗ ಮಂಜ " ಲೇ ಇದನ್ನು ನೀನು ಮೊದಲೇ ಹೇಳಿದ್ದರೆ ನಾನು ಸರಿ ಮಾಡುತ್ತಿದ್ದೆ" ಎಂದ. ಅದು ಹೇಗೆ ಎಂದು ಕೇಳಿದಾಗ ಈ ಪಂಚಾಂಗ ಯಾರು ಬರೆದಿದ್ದಾರೆ ಗೊತ್ತ?, ಅವ ನಮ್ಮ ಪಂಚಾಮೃತ ಮನ್ಯ( ಮನೋಜ). ಅವನಿಗೆ ಒಂದು ಸ್ವಲ್ಪ ತೀರ್ಥ ಕೊಡಿಸಿದ್ದರೆ ಎಲ್ಲ ಸರಿ ಮಾಡುತ್ತಿದ್ದ ಎಂದ ಮಂಜ. ನೋಡು ನಂದು ಹೇಗೆ ಇದೆ ಭವಿಷ್ಯ. ನಾನು ಮೊದಲೇ ಎಲ್ಲಾ ವ್ಯವಸ್ಥೆ ಮಾಡಿದ್ದೆ ಎಂದ. ಆಗ ಸುಬ್ಬ ನಾವು ಆ ಮನೋಜನ ಪಂಚಾಗ ತೆಗೆದುಕೊಳ್ಳುವದಿಲ್ಲ ಎಂದು ಕೋಪಗೊಂಡು ಹೇಳಿದಾಗ ನನಗೆ ತುಂಬಾ ನಗು ಬಂತು.

ಆಗ ಮಂಜ, ನೋಡು ಸುಬ್ಬ ಈ ಪಂಚಾಂಗ ಎಲ್ಲಾ ಖರೆ ಇರುವದಿಲ್ಲ. ಅದಕ್ಕೆ ಹಿರಿಯರು ಹೇಳಿದ್ದಾರೆ "ಪಂಚ ಭವತಿ ಪಂಚ ನ ಭವತಿ" ಇತಿ ಪಂಚಾಂಗ. ಅಂದರೆ ೫ ಕೆಲಸ ಆಗುತ್ತವೆ ೫ ಆಗುವದಿಲ್ಲ. ಹಾಗೆಂದು ಎಲ್ಲಾ ಸುಳ್ಳೇನೋ ಅಲ್ಲ. ಅಲ್ಲಿ ನಮಗೆ ಒಳ್ಳೆ ವಿಚಾರ ಕೂಡ ಇವೆ. ಆದರೆ ಈ ಭವಿಷ್ಯ ಒಂದು ಬಿಟ್ಟು ಎಂದ ಮಂಜ. ನೋಡು ಸುಬ್ಬ ವಿಕೃತಿ ನಾಮ ಸಂವತ್ಸರ ಬಂತು ಎಂದರೆ, ಎಲ್ಲಾ ವಿಕೃತಿ ಆಗುತ್ತ?. ಮತ್ತೆ ನೋಡು ಸುಬ್ಬ ವಿಕೃತಿ ಇರಲಿ ಏನೇ ಇರಲಿ ಅದು ಕೂಡ ಒಂದು ಸೌಂದರ್ಯದ ಭಾಗ ಕೂಡ. ಕೆಲವರಿಗೆ ಗುಂಡು ಮೂಗಿನ ಹುಡುಗಿಯರು ಇಷ್ಟವಾದರೆ ಮತ್ತೆ ಕೆಲವರಿಗೆ ಉದ್ದನೆ ಮೂಗಿನ ಹುಡುಗಿಯರು. ಅದು ಅವರವರ ಭಾವಕ್ಕೆ ತಕ್ಕ ವಿಚಾರ. ಒಂದು ಇಷ್ಟ ಆಗಲಿಲ್ಲ ಎಂದರೆ ಇನ್ನೊಂದು ವಿಕೃತಿ ಕೂಡ ಆಗುವದಿಲ್ಲ. ಆ ವಿಕೃತಿ ನಮ್ಮ ಮನಸಿನ ಭಾವಕ್ಕೆ ಬಂದ ವಿಚಾರ ಅಷ್ಟೇ ಎಂದು ತಿಳಿಹೇಳಿದ. ನಾವು ಬೇವು ಬೆಲ್ಲ ಎರಡನ್ನು ಸಮನಾಗಿ ಸ್ವೀಕರಿಸಬೇಕು. ಬೇವು ಕಹಿ ಇದ್ದರೂ ಕೂಡ ಅದಕ್ಕೆ ಔಷಧಿಯ ಗುಣ ಇದೆ. ನನ್ನ ಮಾವ ಬೇವಿನ ಎಣ್ಣೆ ದಿನಾಲೂ ಒಂದು ಚಮಚ ಕುಡಿಯುತ್ತಾರೆ. ನಾನು ಒಂದು ಲೋಟದಷ್ಟು ತೊಗೋತೀನಿ, ಆದರೆ ನನ್ನ ಎಣ್ಣೆ ಬೇರೆ ಎಂದಾಗ ನಾವೆಲ್ಲರೂ ನಕ್ಕೆವು.

ಮಂಜ ತನ್ನ ಗೆಳೆಯನಿಗೆ ಫೋನ್ ಮಾಡಿ ವಾಶಿಂಗ್ ಮಷೀನ್ ಬೇಕೆಂದು ಆರ್ಡರ್ ಮಾಡಿದ. ನೀನು ಹೋಗಿ ನಿನ್ನ ಹೆಂಡತಿಗೆ ಒಂದು surprise ಕೊಡು ಎಂದ. ದುಡ್ಡಿನ ಬಗ್ಗೆ ಯೋಚನೆ ಮಾಡಬೇಡ ಕಂತಿನಲ್ಲಿ ಕಟ್ಟು. ಅವನು ನನ್ನ ಗೆಳೆಯ ಇದ್ದಾನೆ ಎಂದು ಹೇಳಿದ. ಈ ಸಾರಿ ನೀನು "ಬಟ್ಟೆ ಒಗೆಯುವದಿಲ್ಲ ಅಂತ resolution" ಮಾಡು ಎಂದಾಗ ನಾವೆಲ್ಲರೂ ಮಂದಹಾಸ ಬೀರಿದ್ದೆವು

ಮರು ದಿನ ಸುಬ್ಬ ನಮ್ಮಿಬ್ಬರಿಗೂ ಮನೆಗೆ ಬನ್ನಿ ಎಂದು ಅಹ್ವಾನ ನೀಡಿದ. ನಾವಿಬ್ಬರು ಮನೆಗೆ ಹಾಜರ ಆದೆವು. ಸುಬ್ಬನ ಮಗ ಹೀಗೆ ಇಂಗ್ಲಿಷ್ ರೈಮ್ಸ ಧಾಟಿಯಲ್ಲಿ ಹಾಡುತ್ತ ಇದ್ದ.

ಅಮ್ಮ ಅಮ್ಮ ಸ್ಕೂಲ್ ಹೋಗ್ತಾನೆ ...
ಅಪ್ಪ ಅಪ್ಪ ಮನೇಲಿ ಇರ್ತಾಳೆ ...
ನಾನು ನಾನು ಆಫೀಸ್ ಹೋಗ್ತಾಳೆ ...

ಮಂಜ ಏನು ನಿನ್ನ ಹೆಂಡತಿ ಕೋಪ ಇಳಿದಿದೆಯೋ ಇಲ್ಲವೋ ಎಂದು ಕೇಳಿದ. ಆಗ ಸುಬ್ಬ ನಿನ್ನೇನೆ ಸಾರಿ ಕೇಳಿದ್ದಾಳೆ ಎಂದ. ಆಗ ಅವನ ಹೆಂಡತಿ ನಮಗೆ ಕಾಫಿ ತಂದು ಕೊಟ್ಟಳು. ನಾವು ಕಾಫಿ ಕುಡಿಯುತ್ತ ಇದ್ದೆವು. ಮತ್ತೆ ಅವನ ಹೆಂಡತಿ "ರೀ ಸಾರೀ" ಎಂದಳು. ನೀನು ನಿನ್ನೇನೆ ಕೇಳಿದೆಯಲ್ಲಾ ಎಂದ ಸುಬ್ಬ. ರೀ ನಾನು ಹೇಳಿದ್ದು ಆ ಸಾರಿ ಅಲ್ಲ, ಕೆಂಪು ಹೊಸ ಸಾರಿ ಬೇಕು ರೀ ನನಗೆ ಹಬ್ಬಕ್ಕೆ ಎಂದಳು. ನನಗೆ ಬಾಯಿಯಲ್ಲಿದ್ದ ಕಾಫಿ ಅನಾಯಾಸವಾಗಿ ಹೊರಗಡೆ ಬಂತು. ನೋಡಿ ನಕ್ಕರೆ ಮತ್ತೆ ಸುಬ್ಬನ ಹೆಂಡತಿ ಸಿಟ್ಟ ಆಗ್ತಾಳೆ ಎಂದು ಸುಮ್ಮನೆ ಇದ್ದೆವು. ಆಗ ಮಂಜ ಸುಮ್ಮನಿರದೆ ನಿಮ್ಮ ವಾಶಿಂಗ್ ಮಷೀನ್ ಗೆ ಮೊದಲು ಹಾಕೋಕೆ ಕೆಂಪು ಸಿರೇನೇ ಆಗಬೇಕಿಲ್ಲಾ, ನೀವು ಬೇಕಾದರೆ ನಮ್ಮ ಸುಬ್ಬನ ಬನಿಯನ್ ಕೂಡ ಹಾಕಬಹುದು ಎಂದಾಗ. ಸುಬ್ಬನ ಹೆಂಡತಿ ಕೋಪ ಇನ್ನು ಜ್ಯಾಸ್ತಿ ಆಗಿ, ಅಡುಗೆಮನೆಗೆ ಹೋದಳು. ಅವಳನ್ನು ಹಿಂಬಾಲಿಸಿ ಒಳಗಡೆ ಸುಬ್ಬ ಹೋದ. ಒಳಗಡೆ ಕರ್ಫ್ಯೂ ಜಾರಿ ಆಗಿತ್ತು. ಸ್ವಲ್ಪ ಸಮಯದ ನಂತರ ಕರ್ಫ್ಯೂನಿಂದ ೧೪೪ ಗೆ ಇಳಿಯಿತು ಎಂದು ಅನಿಸಿತು. ಆಗ ಸುಬ್ಬ ಹೊರಗಡೆ ಬಂದ. ಸುಬ್ಬನ ಹೆಂಡತಿ ಸ್ವಲ್ಪ ಸಮಯದ ನಂತರ ಉಪ್ಪಿಟ್ಟು ತೆಗೆದು ಕೊಂಡು ಬಂದಳು. ಉಪ್ಪಿಲ್ಲದ ಮತ್ತು ಖಾರವಾದ ಉಪ್ಪಿಟ್ಟು ಮತ್ತು ಎರಡು ತಂಬಿಗೆ ನೀರು ಕುಡಿದು ಮನೆಗೆ ಹೋಗುತ್ತೇವೆ ಎಂದು ಹೇಳಿ ಬಂದೆವು. ಇಲ್ಲದಿದ್ದರೆ ಮತ್ತೆ ಸುಬ್ಬ ಯಾವುದಾದರು ಕಂತಿನಲ್ಲಿ ಸೀರೆ ಕೊಡಿಸು ಎಂದು ಗಂಟು ಬಿದ್ದರೆ ಕಷ್ಟ ಎಂದು......D):)

-----------
ಹೊಸ ವರ್ಷ
ಹೊಸ ಹರ್ಷ
ಹೊಸ ರಾಗ
ಹೊಸ ಯುಗ
ಹೊಸತು ಹೊಸತು ಜೀವನ

ಹೊಸ ಜಾವ
ಹೊಸ ಭಾವ
ಹೊಸ ಆಟ (ಊಟ)
ಹೊಸ ಓಟ
ಹೊಸತು ಹೊಸತು ಜೀವನ

(ಏನ್ರಿ ಇದು ಎಲ್ಲಾ, ಹೊಸ ಹೊಸ ಅಂತ ಬರೆದಿದ್ದಿರಾ?. ಇದೇನು ಹೊಸ ಕಾರ್, ಹೊಸ ಮನೆ ಜಾಹಿರಾತಿನ ಹಾಗೆ ಹೊಸ ಹೆಂಡತಿ ಇಲ್ವಾ ಎಂದು ಮಾತ್ರ ಕೇಳಬೇಡಿ. ಹ್ಹಾ ಹ್ಹ ಹ್ಹ ಹಾ :)D))

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

4 comments:

  1. shanyavadagalu sir,ಹೊಸ ವರ್ಷದ ಹಾರ್ದಿಕ ಶುಭಾಶಯಗಳು

    ReplyDelete
  2. ಹಾ...ಚೆನ್ನಾಗಿದೆ. ಕೆಲವೊಂದು ಸಂದೇಶಗಳು -ಪಂಚಾಂಗ, ಬೇವಿನ ಎಣ್ಣೆ ಇವೆ. ಜೊತೆಗೆ ಭರಪೂರ ಹಾಸ್ಯ.

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್ :).

    ReplyDelete