Friday, August 27, 2010

ಮನೇಲಿ ಇಲಿ.... ಬೀದಿಲಿ ಬೀದಿ-ಇಲಿ(ಹೆಗ್ಗಣ) ....

ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದೊಡ್ಡ ಎಂದು ಬಾಯಿ ತೆಗೆಯುವ ಮೊದಲೇ ಅಡುಗೆ ಮನೆಯಿಂದ ಬಂದ ನನ್ನ ಮಡದಿ ರೀ ಈ ಬಾರಿ ಉಡುಪಿಗೆ ಹೋದಾಗ ಬೀಚ್ ಗೆ ಹೋಗೋಣ ಎಂದಳು. ನಾನು ಮುಂದೆ ಹೇಳುವದನ್ನು ನಿಲ್ಲಿಸದಿದ್ದರೆ ನಾನೇ ಅಪಹಾಸ್ಯ ಆಗಿಬಿಡುತ್ತಿದ್ದೆ. ಆಯಿತು ಎಂದು ಹೇಳಿ ಮತ್ತೆ ಬರೆಯುತ್ತಾ ಕುಳಿತೆ. ಏನೋ ಬರೀತಾ ಇದ್ದ ಹಾಗಿದೆ ರಾಯರು ಎಂದಳು. ನಾನು ಬರೆಯುತ್ತಿರುವ ಲೇಖನದ ಬಗ್ಗೆ ಸ್ವಲ್ಪ ವಿವರವಾಗಿ ಹೇಳಲು ಅನುವಾದೆ. ಅಷ್ಟರಲ್ಲಿ ಅವಳ ಮೊಬೈಲ್ ರಿಂಗ್ ಆಯಿತು. ನಾನು ಕಾಯುತ್ತಾ ಕುಳಿತೆ ಬರೋಬ್ಬರಿ ಅರ್ಧ ಘಂಟೆ ಮಾತನಾಡಿದ್ದಳು. ಮತ್ತೆ ಅಡುಗೆ ಮನೆಗೆ ಹೊರಟು ಹೋದಳು.

ಸ್ವಲ್ಪ ಸಮಯದ ನಂತರ ಬಂದು ಏನೋ ಹೇಳುತ್ತ ಇದ್ದ ಹಾಗೆ ಇತ್ತು ಎಂದಳು. ನಾನು ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ. ಈ ಬಾರಿ ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಲೋಕಾರ್ಪಣೆ ಮಾಡಬೇಕು ಎಂದು ಮಾಡಿದ್ದೇನೆ ಎಂದೆ. ರೀ ಅಂದ ಹಾಗೆ ನೆನಪು ಆಯಿತು. ನನಗೆ ೧೨೦ ರೂಪಾಯಿ ರೊಕ್ಕಾರ್ಪಣೆ ಮಾಡಿ ಎಂದಳು. ಏಕೆ? ದುಡ್ಡು ಎಂದೆ. ಮಗನ ಪುಸ್ತಕಕ್ಕೆ ಎಂದು ೧೨೦ ರೂಪಾಯಿ ತೆಗೆದುಕೊಂಡಳು. ಅದೆಲ್ಲ ಏನು ಬೇಡ ನನ್ನನ್ನು ಅಪಹಾಸ್ಯ ಮಾಡಿ ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುತ್ತೀರಾ? ಎಂದಳು. ನಿನ್ನನ್ನ ಹೋಗಳಿದ್ದು ಇದೆ ಅಲ್ಲ ಎಂದೆ. ನಾನು ಎಲ್ಲಿ ನಿಮ್ಮನ್ನ ಬೈದು ಬಿಡುತ್ತೇನೆ ಎಂದು ಕೆಲ ಲೇಖನಗಳಲ್ಲಿ ಹೋಗಳಿದ್ದೀರಾ ಅಷ್ಟೇ ಎಂದು ಅಡುಗೆ ಮನೆಗೆ ಹೊರಟೆ ಹೋದಳು.ನನ್ನ ಹೆಂಡತಿಗೆ ನಾನು ಅರ್ಥನೇ ಆಗಿಲ್ಲ ಎಂದು ಕೊರುಗುತ್ತಾ ಕುಳಿತೆ. ಬರೆಯುವದನ್ನು ಪಕ್ಕಕ್ಕೆ ಇಟ್ಟು ಇದು ನನ್ನ ಒಬ್ಬನ ಸಮಸ್ಯೆಯಾ ಅಥವಾ ಎಲ್ಲರದು ಇದೇನಾ ಎಂದು ಪರೀಕ್ಷಿಸ ಬೇಕು ಎಂದು ಮಂಜನ ಮನೆಗೆ ಹೋದೆ.

ಮಂಜ ಕಾಫೀ ಕುಡಿಯುತ್ತಾ ಕುಳಿತಿದ್ದ. ನನಗು ಕೂಡ ಒಂದು ಕಾಫೀ ಕೊಟ್ಟಳು ಮಂಜನ ಮಡದಿ. ನಾನು ಕಾಫೀ ಕುಡಿಯುತ್ತಾ ಹೆಂಡತಿಯರಿಗೆ ನಾವು ಅರ್ಥವೇ ಆಗೋದಿಲ್ಲವ? ಎಂದು ಕೇಳಿದೆ. ಯಾರ ಹೆಂಡತಿಗೆ ನೀನು ಅರ್ಥ ಆಗ್ಬೇಕೋ ಎಂದ ಮಂಜ. ಕೋಪದಿಂದ, ಲೇssss ನಾನು ನನ್ನ ಹೆಂಡತಿ ಬಗ್ಗೆ ಎಂದೆ. ನಾವು ಹೊರಗೆ ಹುಲಿ ಹಾಗೆ ಇರುತ್ತೇವೆ. ಮನೆಗೆ ನಮ್ಮನ್ನು ನಮ್ಮ ಹೆಂಡತಿಯರು ನಮ್ಮನ್ನು ಇಲಿಯ ಹಾಗೆ ನೋಡುತ್ತಾರಲ್ಲ ಕಣೋ ಎಂದೆ. ಅದು ನಿನ್ನ ಕೇಸ್ ಇರಬಹುದು ಆದರೆ ನಾನು ಮನೆಯಲ್ಲೂ ಹುಲಿನೆ ಎಂದ. ಅಷ್ಟರಲ್ಲಿ ಅವನ ಹೆಂಡತಿ ಕಾಫೀ ಕಪ್ ತೆಗೆದುಕೊಂಡು ಹೋಗಲು ಬಂದಳು. ಆದರೆ ತ್ರಿಶುಲಧಾರಿ (ಲಟ್ಟಣಿಗೆ) ದುರ್ಗಾ ದೇವಿ ಅದರ ಪಕ್ಕದಲ್ಲಿ ಇರುತ್ತಾಳೆ ಎಂದ. ಗಹ ಗಹಿಸಿ ನಗ ಹತ್ತಿದೆ. ಮೊದಲು ಏನು ಹೇಳಿದ ಎಂದು ಗೊತ್ತು ಇಲ್ಲದರಿಂದ ನಾವಿಬ್ಬರು ಬಚಾವ್ ಅದೇವು. ಇಲ್ಲಿದಿದ್ದರೆ ನಮ್ಮ ವಟ ..ವಟ... ಸಾವಿತ್ರಿ ನಮ್ಮನ್ನು ಬಿಡುತಿರಲಿಲ್ಲ. ನಾವು ನಗುವುದನ್ನು ನೋಡಿ ಏನು ವಿಷಯ ಎಂದು ಸಾವಿತ್ರಿ ಕೇಳಿದಳು. ನಾವು ಏನು ಇಲ್ಲ ಎಂದೆವು. ಆದರೂ ಅವಳು ಬಿಡದೆ ನನ್ನನ್ನು ನೋಡಿ ನೀವು ನಗುತ್ತಿರುವದು ಹೇಳಿ ಎಂದು ಪಿಡಿಸಹತ್ತಿದಳು. ನಾವು ಏನು ತೋಚದಾದೇವು ಅಷ್ಟರಲ್ಲಿ ಸುಬ್ಬನ ಫೋನ್ ಬಂತು. ಮಾತನಾಡುತ್ತಾ ಸುಬ್ಬ ಕರೆದಿದ್ದಾನೆ ಎಂದು ಅಲ್ಲಿಂದ ಜಾಗ ಖಾಲಿಮಾಡಿದೆವು. ಮಂಜ ಕೆಲವೊಮ್ಮೆ ನಮ್ಮ ಮೇಲೆ ಸವಾರಿಯೂ ಮಾಡುತ್ತಾರೆ ಎಂದ.

ಸುಬ್ಬನ ಮನೆಗೆ ಹೋದೆವು ಅಲ್ಲಿ ಅವನ ಹೆಂಡತಿ ಅವನು ಕಟ್ಟಿಸಿ ಕೊಂಡಿದ್ದ ರಾಖಿ ಧಾರವನ್ನು ಗಟ್ಟಿಯಾಗಿ ಕಟ್ಟುತಿದ್ದಳು. ಇದನ್ನು ನೋಡಿ ಮಂಜ ಇದೆ ನೋಡು ಸುಬ್ಬನ ಸೀಕ್ರೆಟ್ ಎಂದು ಹೇಳಿದ. ಮಂಜ ಮತ್ತೆ ನಾನು ನೋಡಿ ಗಹ ಗಹಿಸಿ ನಗುತ್ತಿದ್ದನ್ನು ನೋಡಿ ಸುಬ್ಬನಿಗೆ ತುಂಬಾ ಕೋಪ ಬಂದಿತ್ತು. ಏನು ಎಂದು ಕೇಳಿದ ಸುಬ್ಬ. ಏನೋ ಹೆಂಡತಿ ಹತ್ತಿರ ರಾಖಿ ಕಟ್ಟಿಸಿಕೊಳ್ಳುತ್ತಿದ್ದೀಯ ಎಂದ ಮಂಜ. ಲೇ ಅದು ಧಾರ ಸಡಿಲಾಗಿತ್ತು ಅಷ್ಟೇ ಎಂದ ಸುಬ್ಬ. ಅಷ್ಟರಲ್ಲಿ ನಮ್ಮನ್ನು ಹುಡುಕಿಕೊಂಡು ನನ್ನ ಮತ್ತು ಮಂಜನ ಮಡದಿ ಬಂದರು. ಏನು ವಿಶೇಷ ಎಂದು ಕೇಳಿದಳು ನನ್ನ ಮಡದಿ. ಏನು ಇಲ್ಲ ಎಂದ ಸುಬ್ಬ. ಅಷ್ಟೇ ಇಬ್ಬರನ್ನು ದುರುಗುಟ್ಟಿ ನೋಡಿದರು. ನಾವು ಸಾವಕಾಶವಾಗಿ ಆ ಮೂವರು ಮಾತನಾಡುವಾಗ ಜಾಗ ಖಾಲಿ ಮಾಡಿದೆವು. ಇಲ್ಲದಿದ್ದರೆ ನಿಮಗೆ ಗೊತ್ತಲ್ಲ.:).

ಮಂಜ ನನಗೆ ಮತ್ತು ಸುಬ್ಬನಿಗೆ ಹೇಳಿದ ಮನೇಲಿ ಇಲಿ ಆದರೆ ಬಿದೀಲಿ ಹುಲಿ ಎಂದು ತಿಳಿದು ಕೊಂಡಿದ್ದೇವೆ ಅಷ್ಟೇ ಆದರೆ ನಿಜವಾದ ಸಂಗತಿ ನಾವು ಕೂಡ ಬೀದಿಲಿ ಬೀದಿ ಇಲಿ(ಹೆಗ್ಗಣ) ... ಕಣೋ ಎಂದ. ಸುಬ್ಬ ನಾನು ರಸ್ತೆ ಎಂದು ಯೋಚಿಸದೇ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕಿದ್ದೆವು.

4 comments: