Thursday, July 22, 2010

ತರ್ಲೆ ಮಂ(ಗ)ಜನ ಸಂಗೀತ ಸಾಂಗತ್ಯ....

ಮಂಜನಿಗೆ ಆಗ ಸುಮಾರು ೮ ವರ್ಷ ಇರಬೇಕು. ನಮ್ಮ ಮಂಜನ ಮನೆಗೆ ಬಾಡಿಗೆಗೆ ರಂಗಣ್ಣ ಶಾಸ್ತ್ರಿ ಬಂದಿದ್ದರು. ತುಂಬಾ ದಿನಗಳಿಂದಲೂ ಮನೆ ಖಾಲಿ ಇತ್ತು. ಮನೆಯ ಕೀಲಿ ಕೈ ಕೊಟ್ಟು ಬಾ ಎಂದು ಮಂಜನ ತಂದೆ ಮಂಜನಿಗೆ ಹೇಳಿದ್ದರು. ಮಂಜ ರಂಗಣ್ಣ ಶಾಸ್ತ್ರಿಯವರ ಮನೆಗೆ ಹೋದ. ಅಲ್ಲಿ ಅವರನ್ನು ನೋಡಿ ಘಾಬರಿಯಾಗಿ ಅವರ ಕೈಗೆ ಕೀಲಿ ಕೈ ಕೊಟ್ಟ. ಅದನ್ನು ಕೆಳಗೆ ಇಟ್ಟರು. ಮಂಜ ಘಾಬರಿಯಿಂದ ಮನೆಗೆ ಬಂದು ಒಂದು ಈರುಳ್ಳಿ ತೆಗೆಂದುಕೊಂಡು ಶಾಸ್ತ್ರಿಗಳ ಮನೆಗೆ ಓಡಿದ. ಮಂಜನ ಅಪ್ಪ ಏನು ಆಯಿತು ನೋಡು ಅವನು ಏಕೆ? ಹೀಗೆ ಓಡುತ್ತಿದ್ದಾನೆ ಎಂದು ಹೆಂಡತಿಗೆ ಕೇಳಿದರು. ಅಷ್ಟರಲ್ಲಿ ಮಂಜ ಈರುಳ್ಳಿ ತೆಗೆದು ಅವರ ಮೂಗಿಗೆ ಹಿಡಿದ. ರಂಗಣ್ಣ ಶಾಸ್ತ್ರಿಗಳು "ಅಕ್ಷಿ ಅಕ್ಷಿ .. ಎಂದು ಸೀನುತ್ತ, ಮಂಜನಿಗೆ ಎರಡು ಹೊಡೆಯುತ್ತಾ ಇದ್ದರು. ಅಷ್ಟರಲ್ಲಿ ಮಂಜನ ತಾಯಿ ಬಂದು ಏಕೆ? ಏನು ಆಯಿತು. ಎಂದು ಕೇಳಿದರು. ನಿಮ್ಮ ಮಂಜ ನಾನು ನಿದ್ರೆ ಮಾಡುತ್ತಿದ್ದಾಗ ಬಂದು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತಿದ್ದಾನೆ ಎಂದರು. ಆಗ ಮಂಜನ ಅಮ್ಮ ಗದರಿಸಿ ಮಂಜನಿಗೆ ಏಕೆ? ಹೀಗೆ ಮಾಡಿದೆ ಎಂದು ಕೇಳಿದರು. ನನಗೆ ಏನು ಗೊತ್ತಮ್ಮ ಮೊನ್ನೆ ಶಾಲೆಯಿಂದ ಬರುವ ಸಮಯದಲ್ಲಿ ಒಬ್ಬ ಮನುಷ್ಯ ಇವರ ಹಾಗೆ ಮಾಡುತ್ತಿದ್ದ, ಇವರ ಹಾಗೆ ಬಾಯಿಂದ ಜೊಲ್ಲು ಬರುತಿತ್ತು ಎಂದ. ಆಗ ರಂಗಣ್ಣ ಶಾಸ್ತ್ರಿಗಳು ತಮ್ಮ ಎಲೆ ಅಡಿಕೆ ಬಾಯಿಂದ ಬರುತ್ತಿದ್ದ ಜೊಲ್ಲನ್ನು ಒರಿಸಿಕೊಂಡರು. ಅದಕ್ಕೆ ಅವನಿಗೆ ಕೀಲಿ ಕೈ ಕೈಯಲ್ಲಿ ಕೊಟ್ಟು ಮತ್ತೆ ಈರುಳ್ಳಿ ಮೂಸುತ್ತಿದ್ದರು. ಅವನಿಗೆ ಪಿಡ್ಸ್ ಅಂತೆ ಅಮ್ಮ. ಅದಕ್ಕೆ ಇವರಿಗೂ ಹಾಗೆ ಆಗಿರಬಹುದು ಎಂದು ನಾನು ಮಾಡಿದೆ ಎಂದ. ಆಗ ಅವರ ಅಮ್ಮ ಏನೋ? ತಪ್ಪು ನಡೆಯಿತು ಕ್ಷಮಿಸಿ ಎಂದು ಹೇಳಿ ಮನೆಗೆ ಕರೆದುಕೊಂಡು ಹೋದರು.

ಮಂಜನಿಗೆ ಅವರ ಅಪ್ಪ ಬೈದು ಅವರು ನಿನ್ನ ಸಂಗೀತದ ಮೇಸ್ಟ್ರು ಕಣೋ ಎಂದು ಉಗಿದು ಬುದ್ದಿ ಹೇಳಿದ್ದರು. ಮಂಜ ಆಶ್ಚರ್ಯ ಚಕಿತನಾಗಿದ್ದ. ಅವರ ಸಂಗೀತ ಕಛೇರಿಗೆ ಮಂಜನನ್ನು ಕರೆದು ಕೊಂಡು ಹೋಗುತ್ತಿದ್ದರು. ಒಂದು ದಿವಸ ಮಂಜ "ಅಪ್ಪ ಅವರು ಅಷ್ಟು ಕೆಟ್ಟು ಮುಖ ಮಾಡಿ ಏಕೆ ಹಾಡುತ್ತಾರೆ ಎಂದು ಕೇಳಿದ್ದ". ಎ ಸುಮ್ಮನಿರೋ ಹಾಗೆಲ್ಲಾ ಹೇಳ ಬಾರದು ಸಂಗೀತದಲ್ಲಿ ಅವರ ಮುಖ ಅಲ್ಲ ಅವರ ಧ್ವನಿ ಮಾತ್ರ ಆಲಿಸಬೇಕು ಎಂದು ಉಗಿದಿದ್ದರು. ನೀನು ಸಂಗೀತ ಕಲಿಬೇಕು ದೊಡ್ಡ ಸಂಗೀತ ವಿದ್ವಾಂಸ ಆಗಬೇಕು ಎಂದು ಹೇಳಿ ಅವನನ್ನು ಅವರ ಬಳಿ ಸೇರಿಸಿದ್ದರು. ಅವರಪ್ಪ ಮಂಜ ಸಂಗೀತ ಬೇಡ ಎಂದು ಎಷ್ಟು ಕೇಳಿಕೊಂಡರು ಬಿಡಲಿಲ್ಲ. ಕಡೆಗೆ ಮಂಜ ಸಂಗೀತ ಶಾಲೆಗೆ ಸೇರಬೇಕಾಯಿತು. ಅಪ್ಪ ರಂಗಣ್ಣ ಸರ್ ಬಳಿ ಬೇಡ ಎಂದ ಮಂಜ. ಬೇರೆ ಎಲ್ಲಿ ಆದರೂ ಹಾಕು ಎಂದ. ಆದರೂ ಅವನ ಮಾತು ಕೇಳದೇ ಅಲ್ಲೇ ಸಂಗೀತ ಶಾಲೆಗೆ ಸೇರಿಸಿದರು. ರಂಗಣ್ಣ ಶಾಸ್ತ್ರಿಗಳು ಚೆನ್ನಾಗಿ ಸಂಗೀತ ಹೇಳಿ ಕೊಡುತ್ತಿದ್ದರು. ಆದರೆ ಮಂಜ ಸರ್ ನನಗೆ ಯಾವುದಾದರೂ ಫಿಲ್ಮ್ ಸಾಂಗ್ ಹೇಳಿ ಕೊಡಿ ಎಂದು ದಿನವೂ ಪೀಡಿಸುತ್ತಿದ್ದ. ಹೀಗಾಗಿ ಕಡೆಗೆ ಇವನ ಕಾಟ ತಾಳಲಾರದೇ, ತುಂಬಾ ಹೊಡೆಯಲು ಪ್ರಾರಂಬಿಸಿದರು. ಮಂಜ ಹೇಗಾದರೂ ಮಾಡಿ ಅದನ್ನು ತಪ್ಪಿಸಿಕೊಳ್ಳಲು, ದಿನ ಮುಂಜಾನೆ ಬೇಗನೆ ಎದ್ದು ಸಂಗೀತ ಪ್ರಾಕ್ಟಿಸ್ ಎಂದು ಹೇಳಿ ಕತ್ತೆ ಹಾಗೆ ಕಿರುಚಿತ್ತ ಇದ್ದ. ಕಡೆಗೆ ಅಕ್ಕ- ಪಕ್ಕದ ಜನಗಳೆಲ್ಲ ಇವನ ಮೇಲೆ ಕಂಪ್ಲೇಂಟ್ ಮಾಡಿದರು. ಕಡೆಗೆ ಅವರ ತಂದೆ ಇದು ಇವನಗೆ ಸರಿ ಹೊಂದಲ್ಲಾ ಎಂದು ಸಂಗೀತ ಶಾಲೆ ಬಿಡಿಸಿ ಬಿಟ್ಟರು. ಮಂಜ ಖುಷಿಯಿಂದ ಕೇಕೆ ಹಾಕಿದ್ದ.

ಮಂಜನ ಅಪ್ಪನಿಗೆ ಮಾತ್ರ ಅವನನ್ನು ಸಂಗೀತ ಪ್ರವೀಣ ಮಾಡಬೇಕೆಂಬ ಅದಮ್ಯ ಆಸೆ ಮಾತ್ರ ಮನಸಿನಲ್ಲಿ ಹಾಗೆ ಉಳಿದಿತ್ತು. ಮತ್ತೆ ಅವನನ್ನು ಕೊಳಲು ಕ್ಲಾಸ್ ಗೆ ಹಚ್ಚಿದರು. ಮಂಜ ತುಂಬಾ ಶೃದ್ಧೆ ಇಂದ ಕ್ಲಾಸ್ ಹೋಗುತ್ತಿದ್ದ. ಇದೇನೋ ಪಿಳ್ಳನ್ಗೊವಿ ನಿನಗೆ ಸೂಟ್ ಆಗಲ್ಲಾ ಕಣೋ ಎಂದು ಸುಬ್ಬ ಹೇಳಿದ ಅಷ್ಟೇ, ಕೊಳಲು ಕ್ಲಾಸ್ ಕೂಡ ಬಿಟ್ಟು ಬಿಟ್ಟ. ಅಪ್ಪ ನನಗೆ ತಬಲಾ ಕ್ಲಾಸ್ ಹಚ್ಚು ಎಂದು ಕೇಳಿದ. ಕಡೆಗೆ ಅವನನ್ನು ತಬಲಾ ಕ್ಲಾಸ್ ಹಚ್ಚಿದರು. ತಬಲಾ ಹಲಿಗೆ ತರಹ ಬಾರಿಸುತ್ತಿದ್ದ. ಮತ್ತೆ ಅದರ ಟೆಕ ಹಿಡಿಯುವ ಸಲುವಾಗಿ ಸುತ್ತಿಗೆ ಬಳಸಿ ಅದನ್ನು ಸರಿ ಮಾಡುವ ವಿಧಾನ ನೋಡಿ ತಾನು ಸರಿ ಮಾಡಲು ಹೋಗಿ ಎರಡು ತಬಲಾಗಳನ್ನು ತಬ್ಬಲಿ ಮಾಡಿ ಬಿಟ್ಟಿದ್ದ.

ಅವರ ಅಪ್ಪ ಅವನಿಗೆ ಒಬ್ಬ ಸಂಗೀತ ಪ್ರವೀಣ ಮಾಡಬೇಕೆಂದು ಕೊಂಡಿದ್ದರು. ಒಂದು ದಿನ ಶಾಲೆ ಕಾರ್ಯಕ್ರಮದಲ್ಲಿ ರಾಜೀವ್ ಗಿಟಾರ್ ಬಾರಿಸಿದ್ದ. ಶಾಲೆಯ ಎಲ್ಲ ಹುಡುಗರು,ಹುಡುಗಿಯರು ಮತ್ತು ಉಪಾಧ್ಯಾಯರು ಅವನನ್ನು ಹೋಗಳಿದ್ದೆ.. ಹೋಗಳಿದ್ದು. ಅದರಿಂದ ಮಂಜ ಮನೆಗೆ ಹೋಗಿ ಅಪ್ಪ ನಾನು ಗಿಟಾರ್ ಕಲೆಯುತ್ತೆನೆ ಎಂದು ಹೇಳಿದ. ಅಪ್ಪ ನೀನು ಕಲೆತಿದ್ದೆ ಸಾಕು ಎಂದರು ಕೇಳಲಿಲ್ಲ. ಅಪ್ಪನನ್ನು ಪೀಡಿಸ ಹತ್ತಿದ. ಆಗ ಅವರ ಅಪ್ಪ ಅವನಿಗೆ ಚಟಾರ ಎಂದು ಎರಡು ಕೆನ್ನೆಗೆ ಬಿಟ್ಟರು ಅಷ್ಟೇ, ಅಲ್ಲೇ ಮಂಜ ತನ್ನ ಸಂಗೀತ ಶುರು ಹಚ್ಚಿ ಕೊಂಡಿದ್ದ. ಹೀಗೆ ನಮ್ಮ ಮಂಜ ತನ್ನ ತರ್ಲೆಗಳಿಂದ ಅದರ ಸಾಂಗತ್ಯ ಅಂತ್ಯ ಗೊಳಿಸಿದ್ದ.

ಈಗ ಎಲ್ಲಾದರೂ ಸಂಗೀತ ಕಾರ್ಯಕ್ರಮ ಇದ್ದರೆ ತಪ್ಪದೇ ಹಾಜರ ಆಗುತ್ತಾನೆ. ನಾನು ಅಪ್ಪನ ಮಾತು ಕೇಳಬೇಕಿತ್ತು ಎಂದು ಗೊಣಗುತ್ತಾನೆ.

5 comments:

  1. he he he..Manjana story super..
    Raaghu

    ReplyDelete
  2. ಧನ್ಯವಾದಗಳು ರಘು ಮತ್ತು ಚುಕ್ಕಿ ಚಿತ್ತಾರ ಅವರೇ. :)

    ReplyDelete
  3. ತುಂಬಾ ಹಾಸ್ಯಭರಿತವಾಗಿದೆ ಮಂಜಣ್ಣನ ಸಂಗೀತ ಪ್ರಹಸನ.

    ReplyDelete
  4. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete