Thursday, July 15, 2010

ಆಹಾ ಶ್ಯಾಮ್ ಮದುವೆ ಅಂತೆ ...

ನಮ್ಮ ಪಕ್ಕದ ಮನೆ ಶ್ಯಾಮ್ ತುಂಬಾ ಹೆಣ್ಣುಗಳನ್ನು ನೋಡಿದ್ದ. ಮದುವೆ ಮಾತ್ರ ಕನಸಿನ ಮಾತಾಗಿತ್ತು. ಕಡೆಗೆ ಬೇಸತ್ತು ಮದುವೆ ಬೇಡ ಎನ್ನುವ ಸ್ತಿತಿಗೆ ಬಂದು ತಲುಪಿದ್ದ. ಪರಿಸ್ತಿತಿ ಇಷ್ಟು ಗಂಭೀರ(ಗಮ್ - ಬೀರ ದಾಸ ಆಗಿದ್ದ.) ಆಗುತ್ತೆ ಎಂದು ಅವರ ಮನೆಯಲ್ಲಿ ಯಾರು ಎಣಿಸಿರಲಿಲ್ಲ. ಅವನ ಅಜ್ಜಿ ಮಾತ್ರ ಅವನಿಗೆ ಪೀಡಿಸುತ್ತಲೇ ಇದ್ದರು. ಮದುವೆ ಆದರೇನೇ ಸುಖದಿಂದ ಇರಬಹುದಾ?. ಇಲ್ಲದಿದ್ದರೆ ಇಲ್ಲವಾ ಎಂದು ನನಗೆ ಶ್ಯಾಮ್ ಕೇಳಿದ. ನಾನು ಏನು? ಹೇಳಬೇಕು ಎಂದು ಯೋಚಿಸಹತ್ತಿದೆ. ಅದಕ್ಕೆ ಅವರ ಅಜ್ಜಿ ನೀನಾದ್ರೂ ತಿಳಿ ಹೇಳಿ ಇವನಿಗೆ ಎಂದರು. ಮೊದಲೇ ನನ್ನ ಮತ್ತು ನನ್ನ ಮಡದಿಯ ಜಗಳವಾಗಿ ಮಾತು ಬಿಟ್ಟು ಒಂದು ವಾರ ಆಗಿದೆ ಎಂದು ಮೊದಲೇ ಶ್ಯಾಮ್ ಗೆ ಗೋತ್ತಿತ್ತು.

ಶ್ಯಾಮ್ ನಿನಗೆ ಮದುವೆ ಏಕೆ ಬೇಡಪ್ಪ ಎಂದೆ.
ಮದುವೆಗೆ ವಧು ಬೇಕು ತಾನೇ ಎಂದ. ಶ್ಯಾಮ್ ಅಂತ ಹೆಸರು ಇಟ್ಟ ಮಾತ್ರಕ್ಕೆ ಹೆಣ್ಣುಗಳು ಏನು ತರಕಾರಿ ಅಂಗಡಿಯಲ್ಲಿ ಸಿಗುವ ತರಕಾರಿನಾ?. ಮತ್ತೆ ನೋಡಿ ಅಜ್ಜಿ ಬರಿ ಮದುವೆ ಆಗು... ಮದುವೆ ಆಗು ... ಎಂದು ಪೀಡಿಸಿದರೆ ಎಂದ.
ನನಗೆ ಏನು ಹೇಳಬೇಕೋ ತಿಳಿಯದಾಗದೆ ಗರಬಡಿದವನಂತೆ ನಿಂತೆ. ಅಷ್ಟರಲ್ಲಿ ಮಂಜ ಬಂದ.
ಮಂಜ ಏನು? ಏನೋ ತುಂಬಾ ಯೋಚಿಸುತ್ತಾ ಇದ್ದಿ ಎಂದ.
ಶ್ಯಾಮನ ಮದುವೆ ಬಗ್ಗೆ ಹೇಳಿದೆ.
ಒಂದು ವಧು ಇದೆ. ಮದುವೆ ಸಿದ್ಧತೆ ಮಾಡಿಕೊಳ್ಳಿ ಎಂದ ಮಂಜ.
ಆದರೆ ಅವಳನ್ನೊಮ್ಮೆ ನೋಡಬೇಕಲ್ಲ ಎಂದ ಶ್ಯಾಮ್.
ಓ... ಅದಕ್ಕೇನಂತೆ ನಾಳೆನೇ ಹೆಣ್ಣು ನೋಡುವ ಶಾಸ್ತ್ರ ಎಂದ.
ನೋಡೋದು ಮುಖನಾಲ್ಲಾ ಮೂದೇವಿ, ಅವಳ ಗುಣ. ನಾವೆಲ್ಲ ನೋಡುತ್ತೇವೆ ನೀನು ಸುಮ್ಮನೇ ಹೂಂ... ಅನ್ನು ಎಂದು ಅಜ್ಜಿ ಗದರಿಸಿದಳು.
ಆದರೆ ಒಂದು ವಿಷಯ ಮದುವೆ ಮಾಡಿಕೊಂಡು ನೀವೇನೂ? ಖುಶಿಯಿಂದ ಇದ್ದಿರೋ?. ಎಂದು ಪ್ರಶ್ನೆ ಕೇಳಿದ ಶ್ಯಾಮ್.
ಯಾಕೆ ಅನುಮಾನನಾ? ಎಂದ ಮಂಜ.
ಅನುಮಾನ ಅಲ್ಲ. ನೀವುಗಳು ಪಡುತ್ತಿರುವ ಕಷ್ಟ ನೋಡಿ ಕೇಳಿದೆ ಎಂದ.
ಕಷ್ಟ ಎಂದರೆ ಕಷ್ಟ, ಸುಖ ಎಂದರೆ ಸುಖ. ನಿನ್ನ ಹಾಗೆ ಯೋಚನೆ ಮಾಡ್ತಾ ಇದ್ದರೆ ಭಾರತದ ಜನ ಸಂಖೆ ಇಷ್ಟು ಇರುತ್ತ ಇರಲಿಲ್ಲ. ಮತ್ತೆ ನೋಡು ಎಷ್ಟೊಂದು ಮದುವೆ ಕಾರ್ಡ್ ಗಳು ಬಂದಿವೆ ಮನೆಗೆ ಎಂದ ಮಂಜ.
ಎಷ್ಟೆಲ್ಲಾ ಹೇಳಿದ ಮೇಲೆ ಒಲ್ಲೆ ಎನ್ನಲು ಆಗಲಿಲ್ಲ. ಶ್ಯಾಮ್ ಹಸಿರು ನಿಶಾನೆ ಕೊಟ್ಟ.
ಹೆಣ್ಣು ನೋಡುವ ಶಾಸ್ತ್ರಕ್ಕೆ ಮಂಜ ಮತ್ತು ಅಜ್ಜಿ ಹೋದರು. ಆದರೆ ಅಜ್ಜಿ ಮಾತ್ರ ಶ್ಯಾಮ ಕರೆದು ಕೊಂಡು ಹೋಗುವದು ಬೇಡ ಎಂದು ಹೇಳಿದಳು.
ಮತ್ತೆ ಹೆಣ್ಣು ನೋಡಿದ ಮೇಲೆ ಫೋಟೋ ತೆಗೆದುಕೊಂಡು ಬಂದು ಶ್ಯಾಮ್ ಗೆ ತೋರಿಸಿದರು. ಹೆಣ್ಣು ಮಹಾಲಕ್ಷ್ಮಿ ತರಹ ಇದ್ದಾಳೆ ಬೇಗ ಮದುವೆ ಆಗು ಎಂದು ಅಜ್ಜಿ ಹೇಳಿದಳು. ಫೋಟೋ ನೋಡಿ ಅಜ್ಜಿ ಹೇಳಿದ್ದು ನಿಜ ಎಂದು ಅನ್ನಿಸಿತು. ಶ್ಯಾಮ ಒಪ್ಪಿಗೆ ಸೂಚಿಸಿದ. ಅವನಿಗೆ ಕೂಡ ಹೆಣ್ಣು ನೋಡಿ ನೋಡಿ ಸಾಕಾಗಿತ್ತು.

ಮದುವೆ ತಯಾರಿ ಬರ್ಜರಿ ಇಂದ ಸಾಗಿತ್ತು. ಊರಿಗೆಲ್ಲ ಕಾರ್ಡ್ ಹಂಚಿದ್ದ ಶ್ಯಾಮ್. ಮದುವೆ ದಿನ ಬಂದೆ ಬಿಟ್ಟಿತು. ಮದುವೆ ದಿನ ಹೆಣ್ಣು ನೋಡಲು ನಾಚಿಕೊಳ್ಳುತ್ತ ಹಸೆ ಮಣೆಯಲ್ಲಿ ಕುಳಿತಿದ್ದ ಶ್ಯಾಮ್. ಕಡೆಗೆ ಆಚಾರ್ಯರು "ಸುಮುಹೂರ್ತೆ ಸಾವಧಾನ..." ಎಂದು ಮಂತ್ರ ಹೇಳಿ ಶ್ಯಾಂಗೆ ತಾಳಿ ಕಟ್ಟಲು ಹೇಳಿದರು, ಆಗ ಶ್ಯಾಮ್ ಮುಖ ಬೇರೆಡೆ ಮಾಡಿ ತಾಳಿ ಕಟ್ಟಲು ಹೋದ ಅವಳ ಕತ್ತು ಅವನಿಗೆ ಸಿಗಲಿಲ್ಲ.. ಕೈ ಸಿಕ್ಕಿತು. ಕೈಗೆ ಕಟ್ಟಲು ಅಣಿಯಾದ. ನಾನು ಲೇ ಕೊರಳಿಗೆ ಕಟ್ಟೋ ಎಂದು ಹೇಳಿದೆ. ಮತ್ತೆ ಸ್ವಲ್ಪ ಮೇಲೆ ಕೈ ಮಾಡಿ ಕಟ್ಟಲು ಹೋದ. ಆಗ ಸಿಕ್ಕಿದ್ದು ಅವಳ ಭುಜ . ಆಗ ಅವನ ಅಜ್ಜಿ ಬೈದು ನೋಡಿ ಕಟ್ಟೋ ಎಂದು ಜೋರು ಮಾಡಿದಾಗ ಮುಖ ಎತ್ತಿ ಅವಳ ಕಡೆ ನೋಡಿದ, ಅಷ್ಟೇ ಮೂರ್ಛೆ ತಪ್ಪಿ ಬಿದ್ದು ಬಿಟ್ಟ. ಮತ್ತೆ ನೀರು ಸಿಂಪಡಿಸಿ ಎಬ್ಬಿಸಿ, ನಿಂತು ತಾಳಿ ಕಟ್ಟು ಎಂದು ಹೇಳಿ ತಾಳಿ ಕಟ್ಟಿಸಿದೆವು. ನನಗೆ ಮತ್ತೆ ಮಂಜನಿಗೆ.. ಲೇ ಬಿಜಾಪುರ್ ಹೆಣ್ಣು ಅಂತ ಹೇಳಿ ನನಗೆ ಗೋಲ್ ಗುಂಬಜ್ ತಂದು ಕಟ್ಟಿದ್ದೀರೇನೋ ಎಂದು ಬೈದುಕೊಳ್ಳುತಿದ್ದ. ಮುಖ ಮಾತ್ರ ಹರಳೆಣ್ಣೆ ಕುಡಿದ ಹಾಗೆ ಕೂಡ ಆಗಿತ್ತು. ಮಂಜ ನೋಡು ಅವಳ ಗುಣ ನೋಡು ಅಪರಂಜೀ ಕಣೋ ಇಂತಹ ಹೆಣ್ಣು ನಿನಗೆ ಭೂಲೋಕದಲ್ಲೇ ಸಿಗೋಲ್ಲ. ಅವಳ ಮುಖ ನೋಡು ಎಷ್ಟು ಮುದ್ದಾಗಿದೆ. ಏನೋ ಪ್ರೀತಿಯಿಂದ ಬೆಳಸಿದ್ದಾರೆ ಅಷ್ಟೇ ಎಂದು ಹೇಳಿದ. ವಧು ನಗುತ್ತಾ ಖುಷಿ ಖುಷಿ ಯಾಗಿ ಇದ್ದಳು. ಆದರೆ ಶ್ಯಾಮ ಮಾತ್ರ ಅಳುತ್ತಾ ಕುಳಿತ ಹಾಗೆ ಅನ್ನಿಸಿತು.

ಅಷ್ಟರಲ್ಲಿ ಪಂಡಿತರು ಎಲ್ಲಾ ದೊಡ್ಡವರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯಿರಿ ಎಂದು ಹೇಳಿದರು. ಶ್ಯಾಮ್ ಬಗ್ಗಿ ಬಗ್ಗಿ ನಮಸ್ಕಾರ ಎಲ್ಲರಿಗೂ ಮಾಡಿದ. ಮಂಜನಿಗೆ ನಮಸ್ಕಾರ ಮಾಡಿದ ಮೇಲೆ ವಧು ಅವನನ್ನು ನೋಡಿ ಅಳಲಾರಂಬಿಸಿದಳು. ಏಕೆ? ಎಂದು ನಾನು ಕೇಳಿದಾಗ ಅವಳು ಮಂಜನ ಕಾಕನ ಮಗಳು ಎಂದು ಹೇಳಿದ

ಮದುವೆ ಎಲ್ಲಾ ಮುಗಿದ ಮೇಲೆ ನಮ್ಮಿಬ್ಬರ ಮೇಲೆ ತುಂಬಾ ಕೋಪಗೊಂಡಿದ್ದ ಶ್ಯಾಮ್. ಕಡೆಗೆ ಉಟಕ್ಕೆ ಕುಳಿತಾಗ ಉಂಡಿಯನ್ನು ತಿನ್ನಿಸಿ ಎಂದು ಹೇಳಿದ್ದಾಗ. ಶ್ಯಾಮ ಎದ್ದು ನಿಂತು ತಿನ್ನಿಸುವ ಪರಿ ನೋಡಿ ಎಲ್ಲರೂ ನಗುವವರೇ. ಕಡೆಗೆ ಅವಳೇ ಇವನ ಸ್ತಿತಿ ನೋಡಿ ಬಗ್ಗಿ ತಿನ್ದಳು. ಮದುವೆ ಮುಗಿದ ಮೇಲೆ ಒಂದು ದಿವಸ ಶ್ಯಾಮ್ ಮತ್ತು ಅವನ ಹೆಂಡತಿ ಪಾರ್ಕಿನಲ್ಲಿ ನೋಡಿ ನನಗೆ ನಗು ತಡಿಯಲು ಆಗಲೆ ಇಲ್ಲ. ಮಳೆಯಲ್ಲಿ ಶ್ಯಾಮ ಹೆಂಡತಿ ಕೊಡೆ ಹಿಡಿದು ಕೊಂಡು ಅವನನ್ನು ತನ್ನ ಮಗನ ಹಾಗೆ ರೆದುಕೊಂಡು ಹೋಗುತ್ತಿದ್ದಳು. .

ಅನಂತರ ಕೆಲ ತಿಂಗಳ ಮೇಲೆ ಶ್ಯಾಮ ನಮ್ಮ ಮನೆಗೆ ಬಂದಿದ್ದ. ಅವಳನ್ನು ಹೋಗಳಿದ್ದೆ ಹೋಗಳಿದ್ದು. ಮಹಾಲಕ್ಷ್ಮಿನೇ ಆಗಿದ್ದಳು ಶ್ಯಾಮ್ ಮಡದಿ. ಅಷ್ಟರಲ್ಲಿ ಮಂಜ ನಮ್ಮನೆಗೆ ಬಂದ. ಆಗ ಶ್ಯಾಮ್ ಅವನ್ನನ್ನು ನೋಡಿ ತುಂಬಾ ಅವಸರದಿಂದ ಅವನಡೆಗೆ ಹೋದ ಮಂಜನಿಗೆ ಹೆದರಿಕೆಯಿಂದ ಘಾಬರಿಯಾಗಿ ಓಡುತ್ತಲಿದ್ದ .... ಅವನ ಹಿಂದ ಶ್ಯಾಮ್ ಭಾವ... ಭಾವ... ಎಂದು ಕೂಗುತ್ತಾ ತಿನ್ನುತ್ತಿದ್ದ ಉಂಡಿ ಹಿಡಿದುಕೊಂಡು ಬೆನ್ನು ಹತ್ತಿದ್ದ..:):)

4 comments:

  1. ಹ್ಹ ಹ್ಹ ಹ್ಹ..ಒಳ್ಳೆ ಕಥೆ...
    ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  2. ಒಳ್ಳೆ ಹಾಸ್ಯ ಕಥೆ. ವಿಜಾಪುರ ಹುಡುಗಿ ಅಂಥಾ ಗೊಳಗುಮ್ಬಜಕ್ಕೆ ಮದುವೆ ಮಾಡಿಸಿದ್ರಲ್ಲಾ-ಸುಪರ್!

    ReplyDelete
  3. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್, ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete