Sunday, February 14, 2010

ತರ್ಲೆ ಮಂಜನ ಸಮಯ ಪ್ರಜ್ಞೆ ....

ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ ಮದುವೆ ಫಿಕ್ಸ್ ಅಗುವದಿದೆ ಎಂದು ಹೇಳಿದ. ಮತ್ತೆ ಹುಡುಗಿಯ ಫೋಟೋ ತೋರಿಸಿದ. ನಮ್ಮ ಮೈಸೂರ್ ಟ್ರೈನ್ 7.00 ಘಂಟೆಗೆ ಇದ್ದಿದ್ದರಿಂದ ಚೆನ್ನಾಗಿದ್ದಾಳೆ ಎಂದು ಹೇಳಿ ಅವಸರ ಮಾಡಿ ಹೊರಡುತಲಿದ್ದರು. ನಮ್ಮನ್ನು ತಡೆದು ಮತ್ತೆ ಮತ್ತೆ "ಹೇಗಿದ್ದಾಳೆ ಹುಡುಗಿ" ಎಂದು ಸತಾಯಿಸಹತ್ತಿದ. ಆಗ ಮಂಜ ನೀನು ತಾನೆ ನೋಡಿದ್ದು, ಅವಳ ಗುಣ ಸ್ವಭಾವ ಮತ್ತೆ ಮನೆಯಲ್ಲಿ ಹೊಂದಿಕೊಂಡು ಹೋಗುವ ಹಾಗೆ ಇದ್ದರೆ ಸಾಕು ಎಂದು ಹೇಳಿದ. ಮತ್ತೆ ಈ ರೂಪ, ಸೌಂದರ್ಯ ಎಲ್ಲ ಗೌಣ ಎಂದು ತಿಳಿ ಹೇಳಿದ. ಅಷ್ಟಕ್ಕೇ ಸುಮ್ಮನಿದ್ದರೆ ಸಾಕಾಗಿತ್ತು ಸುಬ್ಬ ಅದನ್ನು ಹೇಗೆ ಕಂಡುಹಿಡಿಯುವದು ಹೇಳು ಎಂದು ಸತಾಯಿಸಹತ್ತಿದ. ನಾನು ಗಡಿಯಾರ ಓಡುವದನ್ನೇ ನೋಡುತ್ತಿದ್ದೆ. ಸುಬ್ಬ ಮಂಜನ ಪೂರ್ತಿ ಪಾಠ ಆಗುವವರೆಗೆ ಬಿಡುವನಲ್ಲ ಎಂದು ಮಂಜನಿಗೆ ನಾನೊಬ್ಬನೇ ಹೊರಡುತ್ತೇನೆ ಎಂದು ಹೇಳಿ ಹೊರಟು ನಿಂತೆ. ಮಂಜ ನಾನು ಬರುವೆ ಒಂದು ನಿಮಿಷ ತಡಿ ಎಂದು ಹೇಳಿದ. ಅರ್ಧ ಘಂಟೆಯಾದರು ಬರುವ ನಿಶಾನೆ ಕಾಣಲಿಲ್ಲ. ಅವಳ ಮನೆ ಸಮೀಪ ಹೋಗಿ ಅವಳ ಬಗ್ಗೆ ವಿಚಾರಿಸು ಎಂದು ಹೇಳಿದ. ಅವಳ ಹಿಂದೆ ಹೋಗಿ ಅವಳ ನಡೆ ನುಡಿಯ ಬಗ್ಗೆ ತಿಳಿದು ಕೊಂಡು ಬಾ ಎಂದು ತಾಕೀತ್ ಮಾಡಿದ. ಸುಬ್ಬನಿಗೆ ಎಲ್ಲಿಲ್ಲದ ಖುಷಿಯೋ ಖುಷಿ. ತನ್ನ ಹರಕು ಮುರುಕು ಇಂಗ್ಲಿಷ್ ನಿಂದ ಮತ್ತೆ ಯಾರಿಗೂ Expose ಮಾಡಬೇಡ ಎಂದು ಹೇಳಿದ.

ನಾನು ಬರುತ್ತೇನೆ ಎಂದು ಹೊರಟು ಗೇಟ್ ಬಳಿ ಬಂದೆ. ಅಷ್ಟರಲ್ಲೇ ಮಂಜ ನಗುತ್ತ ಹೊರಗಡೆ ಬಂದ. ಮತ್ತೆ ಮೇಲೆ ನಿಂತು ಸುಬ್ಬ ಯಾರಿಗೂ Expose ಮಾಡಬೇಡ ಎಂದ. ಮಂಜ ಮತ್ತೆ ನಾನು ಒಬ್ಬರನ್ನ ಒಬ್ಬರು ನೋಡಿ ನಕ್ಕು ಆಟೋ ಹಿಡಿದು ಸ್ಟೇಶನ್ ತಲಿಪಿದೆವು.

ಟ್ರೈನ್ ಹತ್ತಿ ಎರಡೆರಡು ಪ್ಲೇಟ್ ಇಡ್ಲಿ , ದೋಸೆ ಸ್ವಾಹಾ ಮಾಡಿ ಸೀಟ್ ಮೇಲೆ ಬಂದಾಗ ತಿಳಿದಿತ್ತು. ಅವಸರದಲ್ಲಿ ಟಿಕೆಟ್ ತರುವದೆ ಮರೆತುಬಿಟ್ಟಿತ್ತು. ಆಗ ಸುಬ್ಬನಿಗೆ ಹಿಡಿ ಶಾಪ ಹಾಕುತಿದ್ದಂತೆ TC ಹಾಜರ್ ಅದ. ನನಗೆ ತುಂಬಾ ಗಲಿಬಿಲಿ ಶುರು ಆಗಿತ್ತು. ಮನಸಿನೊಳಗೆ ಏನೋ ಗೊಂದಲ,ತಳಮಳ. ಆದರೆ ಮಂಜ ಮಾತ್ರ ಆರಾಮಾಗಿ ಇನ್ನೊಂದು ದೋಸೆ ತಿನ್ನುತ್ತ ಕುಳಿತಿದ್ದ. ಮಂಜ ನೀನು ಸುಮ್ಮನಿರು ನಾನು ಸಂಭಾಳಿಸುವೆ ಎಂದು ಹೇಳಿದ. ಅಷ್ಟರಲ್ಲೇ ನಮ್ಮ ಮಂಜ TC ಇರುವ ಕಡೆ ಹೋಗಿ, ನಮ್ಮ ಕಷ್ಟ ವಿವರಿಸಿದ. ಆದರೆ ಆ TC ತುಂಬಾ ಶಾನೆ ಕಿರಿಕ ಮಾಡಲು ಶುರು ಮಾಡಿದ. ಅದೆಲ್ಲ ಆಗೋಲ್ಲ ಮೊದಲು ಟಿಕೆಟ್ ತೋರಿಸಿ ಎಂದು ಹೇಳಿದ. ಎಲ್ಲರು ನಮ್ಮನ್ನೇ ಗುರಾಯಿಸುತ್ತಾ ಇದ್ದರು. ನನಗೆ ಏನೋ ಒಂದು ಅಪರಾಧಿ ಮನೋಭಾವ. ಕೈಯಲ್ಲಿ ದುಡ್ಡಿಲ್ಲ, ಬರಿ Credit ಇಟ್ಟುಕೊಂಡು ಬಂದಿದ್ದೆವು. ಫೈನ್ ಕಟ್ಟಲು ದುಡ್ಡು ಇರಲಿಲ್ಲ. ಇದ್ದಿರುವ 100 ರೂಪಾಯಿಗಳಲ್ಲಿ ಇಡ್ಲಿ ದೋಸೆ ತಿಂದು ಮುಗಿಸಿದ್ದೆವು. ಇನ್ನು ಉಳಿದಿದ್ದು ಚಿಲ್ಲರೆ ದುಡ್ಡು ಮಾತ್ರ ... ಮತ್ತೆ ತುಂಬಾ ಪಿಡಿಸತೊಡಗಿದ TC. ಇದರಿಂದ ಬೇಸತ್ತ ಮಂಜ, ಆಯಿತು ನಾವು ಮ್ಯಾಜಿಸ್ಟ್ರೇಟ್ ಬಳಿ ಹೋಗಲು ರೆಡಿ ಎಂದು ಹೇಳಿದ. ನನಗೆ ಒಳಗೊಳಗೇ ಭಯ. ನೀವೇನಾದರು ಮ್ಯಾಜಿಸ್ಟ್ರೇಟ್ ಬಳಿ ಕರೆದೊಯ್ದರೆ ನಿಮಗೆ ತೊಂದರೆ ಎಂದ ಮಂಜ. ಅದಕ್ಕೆ ಅದು ಹೇಗೆ ಎಂದು ಮಂಜನಿಗೆ ತರಾಟೆಗೆ ತೆಗೆದುಕೊಂಡ TC. ಅದಕ್ಕೆ ಮಂಜ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತೇನೆ ಎಂದ. ಅದನ್ನು ಹೇಳೋಕೆ ನೀನ್ಯಾರಯ್ಯ ಎಂದ. ನೋಡುತ್ತೀರಿ ನಿಮಗೆ ತೊಂದರೆ ಎಂದ. ಅದು ಹೇಗೆ? ಎಂದು ಕೇಳಿದಾಗ ನಾನು ಮ್ಯಾಜಿಸ್ಟ್ರೇಟ್ ಬಳಿ ಎರಡು ವರ್ಷದಿಂದ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದೇನೆ. ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವೆ ಎಂದಾಗ, TC ಮೈಯಲ್ಲ ಬೆವತಿತ್ತು . ಆಗ ಮತ್ತೆ ನಮ್ಮನ್ನು ಮುಂದೆ ಕರೆದು ಇದೊಂದು ಸರಿ ಸುಮ್ಮನೆ ಬಿಡುವೆ ಎಂದು ತಾಕೀತ್ ಮಾಡಿ ಹೊರಟು ಹೋದ.

ಈಗ ನಮ್ಮ ಮಂಜನಿಗೆ ಚಿಲ್ಲರೆ ದುಡ್ಡು ಮೇಲೂ ಕಣ್ಣು ಬಿತ್ತು. ಚಾ.. ಪಾ.. ಏನರ? ಕೊಡಿಸ್ತಿಯೇನು? ಎಂದ. ಆಗ ಒಬ್ಬ ಕಾಫಿ ತೆಗೆದುಕೊಂಡು ಬಂದ. ಮಂಜ ಅವನನ್ನು ನೋಡಿ ಇನ್ನೊಂದು ಭೋಗಿ ಒಳಗೆ ಇದ್ದರೂ, ಏ "ಕಪಿ" ಎಂದು ಒದರಿದ. ಬರುತ್ತೇನೆ ತಡಿರಿ ಎಂದು ಕಾಫಿ ಮಾರುವವನು ನಿಂತಲ್ಲೇ ಒದರಿದ. ಎಲ್ಲರು ಇವರಿಬ್ಬರನ್ನೇ ಗುರಯಿಸುತ್ತಿದ್ದರು. ನಾನು ಮಾತ್ರ ನಗುತ್ತಲಿದ್ದೆ. ಕಾಫಿ ಬಂತು ಕಾಫಿ ಹಿರಿ ಕುಳಿತಾಗಲೇ, "ಟೀಚಾ" "ಟೀಚಾ" ಎಂಬ ಶಬ್ದ ಬಂತು. ನೋಡಿದಾಗ ತಿಳಿಯಿತು ಟೀ ಮಾರುವವ ಎಂದು. ಮೊದಲು ಇವನನ್ನು ನೋಡಿದ್ದರೆ ಏ "ಹುಚ್ಚ" ಎಂದೇ ಒದರುತ್ತಿದ ಏಕೆಂದರೆ ಅವನು ಟೀ ಮತ್ತು ಚಾ ಸೇರಿಸಿ "ಟೀಚಾ" "ಟೀಚಾ" ಎಂದು ಒದರುತ್ತ ಟೀ ಮಾರುತ್ತಿದ್ದ.

ಅಷ್ಟರಲ್ಲೇ ರಾಮನಗರ ಸಮೀಪ ಬುರುತ್ತಿದ್ದಂತೆ ಒಬ್ಬ ವ್ಯಕ್ತಿ ಹೊಸ ಲ್ಯಾಪ್ಟಾಪ್ , ಪ್ರಿಂಟರ್ ತೆಗೆದು ಕೊಂಡು ಬರುತ್ತಿದ್ದ. ಅವನ ಬಳಿ ತುಂಬಾ ಕೇಳಿಕೊಂಡು ಲ್ಯಾಪ್ಟಾಪ್ ನಲ್ಲಿ ನೆಟ್ ನಲ್ಲಿ ಟಿಕೆಟ್ ಪ್ರಿಂಟ್ ತೆಗೆದು TC ಗೆ ತೋರಿಸಿಬೇಕೆಂದು ಕಾಯುತ್ತ ಕುಳಿತ್ತಿದ್ದೆವು. TC ನಮ್ಮನ್ನು ನೋಡಿ ಹೆದರಿ ನಾವಿರುವ ಭೋಗಿ ಮತ್ತೆ ಹಾಯಲೇ ಇಲ್ಲ. ಮಂಜ ಸ್ಟೇಷನ್ ಬಳಿ ಟಿಕೆಟ್ ಹಿಡಿದು TC ಬಳಿ ಹೋದ TC ಮಾತ್ರ ಮುಂದೆ ಮುಂದೆ ಓಡುತ್ತಲೇ ಇದ್ದರು. ಇದನ್ನು ನೋಡಿ ನಮ್ಮಿಬ್ಬರಿಗೂ ನಗು ತಡಿಯಲು ಆಗಲೇ ಇಲ್ಲ .

7 comments:

  1. ಹ್ಹ..ಹ್ಹ..ಹ್ಹಾ...

    ಚನ್ನಾಗಿದೆ ಫಜೀತಿ...

    ReplyDelete
  2. This comment has been removed by the author.

    ReplyDelete
  3. :)

    ಮಂಜು + ಸಂಗಡಿಗರಿಂದ ಇನ್ನೊಂದಿಷ್ಟು ಬರಲಿ

    ReplyDelete
  4. ಧನ್ಯವಾದಗಳು ಚುಕ್ಕಿ ಚಿತ್ತಾರ ರವರೆ ..

    ReplyDelete
  5. ಧನ್ಯವಾದಗಳು ಲೋದ್ಯಶಿಯವರೇ ..

    ReplyDelete
  6. ಚೆನ್ನಾಗಿದೆ ಹಾಸ್ಯ ಹೂರಣ!

    ReplyDelete
  7. ಹಾಸ್ಯ ಹೂರಣ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್.

    ReplyDelete