Tuesday, November 24, 2009

2012 ರ ಸುಬ್ಬನ ಫ್ಲೈಟ್....

ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.

ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.

ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ ಸಹಿತ ಬುಕ್ ಮಾಡಿಲ್ಲ ಎಂದ.

ಏನು ಹನಿಮೂನಾ ಮಜಾ ಮಾಡು. ಏನು ದುಡ್ಡು ಗಿಡ್ಡು ಬೇಕೇನು? ಎಂದು ಮತ್ತೆ ಕೇಳಿದ ಮಂಜ.

ಇಲ್ಲ ಎಂದ ಪೇಲು ಮುಖದಿಂದ ಸುಬ್ಬ.

ಏನಪ್ಪಾ ಮತ್ತೆ ನಿನ್ನ ಸಮಸ್ಯೆ , ಏನಾದರು ನಿನ್ನ ಹೆಂಡತಿನ ಆ ಫ್ಲ್ಯೆಟ ನವರಿಗೆ ತೋರಿಸಿದ್ದೀಯ ಎಂದು ಕೇಳಿದ ಮಂಜ.

ನಾನು ಅದೇ ಇರಬೇಕು ನಿನ್ನ ಹೆಂಡತಿ(ಅವಳ ಧಡೂತಿ ದೇಹ...) ನೋಡಿ ಫ್ಲ್ಯೆಟ ಕ್ಯಾನ್ಸಲ್ ಮಾಡಿರಬೇಕು ಎಂದೇ.

ಸುಬ್ಬನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ನಿಮ್ಮಿಬ್ಬರಿಗೂ ನನ್ನನ್ನ ಕಂಡ್ರೆ ಅಷ್ಟೇ ಮಕ್ಳ. ನಿಮಗೆ ಇದೆ ಜಾತ್ರೆ ಬರಲಿ 2012 ಅವಾಗ ನಿಮಗ ಗೊತ್ತು ಆಗ್ತದ ಎಂದ.

ಏನಪ್ಪಾ ಗೊತ್ತಾಗೋದು ಹೇಳು ಎಂದು ಇಬ್ಬರು ಕೇಳಿದೆವು.

ಆಗ ಸುಬ್ಬ 2012 Dec 21 ಎಲ್ಲರು ಪ್ರಳಯ ಆಗಿ ಸಾಯಿತರಲ್ಲ ಅವಾಗ ನೀವೇ ಮೊದಲು ಸಾಯೋದು ಮೊದಲು, ನನ್ನ ಹಾಗೆ ಎಷ್ಟು ಜನ ನಿಮ್ಮ ಮೇಲೆ ಶಾಪ ಹಾಕಿರ್ತಾರೆ. ಬರಿ ಜನರನ್ನು ಪಿಡಿಸೋದೆ ನಿಮ್ಮ ಕೆಲಸ ಎಂದ ಸುಬ್ಬ.

ಮಂಜ ಆಯಿತಪ್ಪ ನಾವೇ ಸಾಯಿತಿವಿ ನಿನ್ನ ಸಮಸ್ಯೆ ಏನು?. ನೀನು ಹೋಗೋ ಊರಿಗೆ ಫ್ಲ್ಯೆಟ ಇಲ್ಲ ಏನು ಮತ್ತೆ. ಇದನ್ನು .ಅರೇಂಜ್ ಮಾಡು ಎಂದರೇ ನಮ್ಮ ಕಡೆ ಆಗುದಿಲ್ಲ ನೋಡು ಮತ್ತೆ ಎಂದ.

ನಾನು ಗಗನ ಸಖಿಯರು ಇಲ್ಲವೇನೋ ಆ ಫ್ಲ್ಯೆಟ ಅಲ್ಲಿ ಎಂದೇ.

ನಿಮಗೆ ಹೇಳೋದು ಒಂದೇ "ಆನಿಗೆ ಚಡ್ಡಿ ಹೊಲಸೋದು ಒಂದೇ" ಎಂದು ಎದ್ದು ಮನೆಗೆ ಹೋಗಲು ಅಣಿಯಾದ.

ಹೊ ಹಂಗೆ ಏನು ರೆಡೀಮೇಡ್ ತೆಗೆದುಕೊಳ್ಳುವದಿಲ್ಲ ಎಂದ ಮಂಜ. ಮತ್ತೆ ನೀನು ಒಂಟೆ ಮಹಾರಾಜ ಹೊಲಸಿಕೊಳ್ಳುತ್ತೀಯೋ ಇಲ್ಲವಾ ರೆಡೀಮೇಡೋ.... ಎಂದ ಮಂಜ.

ಆಗ ಸುಬ್ಬ ಹೌದು ಕಣ್ರೋ ನನ್ನ ಹೆಂಡತಿ ಸ್ವಲ್ಪ ದಪ್ಪ ಅದಕ್ಕೆ ಅವಳನ್ನ ಆನೆ ಅಂತ ಇದ್ದೀರ ಎಂದ. ನಾವೆಲ್ಲಿ ಅಂದೆವು ನೀನೆ ತಾನೇ ಆನೆಗೆ ಚಡ್ಡಿ ಹೋಲಿಸೋ ಮಾತು ಆಡಿದ್ದು ಎಂದ ಮಂಜ.

ನಾನು ಒಳಗೊಳಗೆ ನಗುತ್ತಿದ್ದೆ.

ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಬೇರೆದೆ ಚಿಂತೆ ...ಹಾಗಾಯಿತು ನಿಮ್ಮದು ಎಂದ ಸುಬ್ಬ.

ಆಯಿತು ಈಗ ನಿನ್ನ ಸಮಸ್ಯೆ ಏನು ಹೇಳು ಎಂದೆ.

ಆಗ ಸುಬ್ಬ ೨೦೧೨ ಕ್ಕೆ ಎಲ್ಲರೂ ಸತ್ತು ಹೋಗುತ್ತೇವೆ ಕಣೋ. ಇನ್ನೂ ಒಂದು ಫ್ಲೈಟ್ ಅಥವಾ ಮನೆ ಸಹಿತ ಮಾಡ್ಲಿಕ್ಕೆ ಆಗಲಿಲ್ಲ ಎಂದ ಸುಬ್ಬ.

ಆಗ ನಮ್ಮಿಬ್ಬರಿಗೂ ನಗು ತಡಯಲಿಕ್ಕೆ ಆಗದೆ ಜೋರಾಗಿ ನಕ್ಕೆವು. ಅದು ಫ್ಲೈಟ್ ಅಲ್ಲ ಕಣೋ ಸುಬ್ಬ ಅದು ಫ್ಲಾಟ್ ಎಂದು ಎಂದೆ.

ಆಗ ಮಂಜ ಸುಮ್ಮನಿರಲಾರದೇ ಹಾಗೇನೂ ಆಗುವದಿಲ್ಲ ಅದೆಲ್ಲ ಸುಮ್ನೇ ಹಬ್ಬಿಸಿದ್ದಾರೆ. "ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ" ಹಾಗಾಯಿತು ನಿನ್ನ ಕತೆ ಅಷ್ಟು ನಮ್ಮ ಕೈ ಮೀರಿ ಆಯಿತು ಎಂದರೆ. ನಿನಗೆ ಬೇಕಾಗುವದು ಫ್ಲೈಟ್ ಮತ್ತೆ ಫ್ಲಾಟ್ ಅಲ್ಲ ಕಣೋ ಸುಬ್ಬ 6 X 3 ನಿನ್ನ ಹೆಂಡತಿಗೆ ಸ್ವಲ್ಪ ಜ್ಯಾಸ್ತಿ .... ಎನ್ನುವಷ್ಟರಲ್ಲೇ ಸುಬ್ಬ ಕೋಪದಿಂದ ಮಂಜನನ್ನು ಬೈದು ಮನೆಗೆ ಸೇರಿದ.

ಹೀಗೆ ನಮ್ಮ ಸುಬ್ಬ ಬೇರೆ ಬೇರೆ ವಿಷಯ ತಲೆಯಲ್ಲಿ ಹುಳ ಬಿಟ್ಟು ಕೊಳ್ಳುವ ಸ್ವಭಾವ. ಒಂದು ದಿವಸ ಅಕೌಂಟ್ಸ್ ಟ್ಯಾಲೀ ಆಗಿದ್ದಿಲ್ಲ. ಹಾಗೆ ಯೋಚನೆ ಮಾಡುತ್ತಾ ಆಫೀಸದಿಂದ ಮನೆಗೆ ಬಂದ. ಹೆಂಡತಿ ಪೇಟೆಗೆ ಕರೆದುಕೊಂಡು ಹೋಗು ಎಂದು ಹೇಳಿದಳು. ಅವನು ಅದೇ ಗುಂಗಿನಲ್ಲಿ ಅವಳನ್ನು ಕರೆದು ಕೊಂಡು ಹೋಗಿದ್ದ. ಅವಳು ಸಾಮಾನು ತರಲು ಬೇರೆ ಅಂಗಡಿ ಹೋದಾಗ, ಏನೋ ವಿಚಾರ ಹೊಳೆದಿದೆ. ಕೂಡಲೇ ಆಫೀಸಗೆ ಹೋಗಿ ಅಕೌಂಟ್ಸ್ ಟ್ಯಾಲೀ ಮಾಡುತ್ತಾ ಕುಳಿತು ಬಿಟ್ಟಿದ್ದ. ಅನಂತರ ಹೆಂಡತಿಯ ನೆನಪಾಗಿ ಪೇಟೆ ಪೂರ್ತಿ ಸುತ್ತಿ ಬಂದಿದ್ದ. ಹೆಂಡತಿಗೆ ಕೋಪ ಬಂದು ಇವನ ಸಹವಾಸವೇ ಬೇಡ ಎಂದು ತವರು ಮನೆಗೆ ಹೋಗಿಬಿಟ್ಟಿದ್ದಳು. ಮತ್ತೆ ಸಮಜಾಯಿಸಿ ಮನೆಗೆ ಕರೆದುಕೊಂಡು ಬಂದಿದ್ದ.

ಇಷ್ಟೇ ಅಲ್ಲ ಅವನು ಕಂಪ್ಯೂಟರ್ ನಲ್ಲಿ ಲೆಕ್ಕ ಸರಿಯಾಗಿ ಇದೆಯೋ ಇಲ್ಲವೋ ಎಂದು ತಾಳೆ ಹಾಕುವದಕ್ಕೆ ಕ್ಯಾಲ್ಕ್ಯುಲೇಟರ್ ಬಳುಸುತ್ತಾನೆ.

ಸುಬ್ಬನ ಫ್ಲೈಟ್ ರಾತ್ರಿ ಪೂರ್ತಿ ನಮ್ಮ ತಲೆಯಲ್ಲಿ....ಹಾರಾಡುತಿತ್ತು ಲ್ಯಾಂಡಿಂಗ್ ಆಗದೆ.

4 comments:

  1. ಹ್ಹಾ ಹ್ಹಾ ಹ್ಹಾ... ಪಾಪ ರೀ ಸುಬ್ಬು...

    ReplyDelete
  2. ಹ..ಹ..ಹ.. ತುಂಬಾ ಸೊಗಸಾಗಿದೆ ಕಣ್ರಿ ಗೋಪಾಲ್

    ReplyDelete