Tuesday, November 10, 2009

ರಾಹು ಕೇತು ಮನೋಜ ಮನೆಗೆ ಹೋದಾಗ....

ನಾನು ಮತ್ತೆ ಮಂಜ ಒಂದು ದಿವಸ ಮನೋಜನ ಮನೆಗೆ ಹೋಗಬೇಕೆಂದು ನಿರ್ಧರಿಸಿದೆವು. ಮನೋಜನಿಗೆ ಮೊದಲೇ ಫೋನ್ ಮಾಡಿ ಅವನ ಹೆಂಡತಿಯ ನಮ್ಮ ಮೇಲೆ ಇರುವ ಕೋಪದ ಬಗ್ಗೆ ಕೇಳಿ ತಿಳಿದುಕೊಂಡು ಆನಂತರನೇ ಅವನ ಮನೆಗೆ ಹೋಗುವುದೆಂದು ನಿರ್ಧಾರ ಮಾಡಿದೆವು. ಮನೋಜನ ಮನೆ ಸಮೀಪ ಒಂದು ದೊಡ್ಡದಾದ ಕ್ಯು ಇತ್ತು, ಅದು ಯಾವುದು ನೀರಿನ ಅಥವಾ ಸಿಮೇಯೆಣ್ಣೆ ಕ್ಯು ಇರಬೇಕೆಂದು ನಾವು ಗೇಟ್ ಮುಂದೆ ಹೋಗುತ್ತಿದ್ದಾಗ ಗೊತ್ತಾಯಿತು ಅದು ಶಾಸ್ತ್ರ ಕೇಳಲು ಬಂದ ಜನರ ಸಾಲು ಎಂದು. ಒಬ್ಬ ಹಿರಿಯರು "ರೀ ಸಾಲಿನಲ್ಲಿ ಬನ್ನಿರಿ ಎಂದರು". ಅವರ ಮಾತು ಕೇಳಿ ನಾವು ಮನೋಜನ ಗೆಳೆಯರು ಎಂದು ಹೇಳಿದೆವು. ಆದರು ನಮ್ಮನ್ನು ಒಳಗೆ ಬಿಡಲಿಲ್ಲ. ಆಗ ಆ ಹಿರಿಯರು ನಾನು ಅವರ ಸಂಭಂದಿನೆ ಸಾಲಿನಲ್ಲಿ ಬರುತ್ತಿಲ್ಲವಾ? ಎಂದು ವ್ಯಂಗ್ಯವಾಗಿ ನುಡಿದರು. ಮತ್ತೆ ಸಾಲಿನಲ್ಲಿ ಇದ್ದ ಎಲ್ಲ ಜನರು ನಮ್ಮನ್ನು ಗದರಿಸಿ ಸಾಲಿನಲ್ಲಿ ಬರಬೇಕೆಂದು ಆಜ್ಞೆ ಮಾಡಿದರು. ಮತ್ತೆ ಅವರ ಸೆಕ್ಯೂರಿಟಿ ಗಾರ್ಡ್ ಕೂಡ ನಮ್ಮನ್ನು ಸಾಲಿನಲ್ಲಿ ತಂದು ನಿಲ್ಲಿಸಿದ. ನಮ್ಮಿಬ್ಬರಿಗೂ ಏನು ಮಾಡಬೇಕೆಂಬುದೇ ತೋಚದಾಗಿತ್ತು. ಆಗ ಮಂಜ ಮನೋಜನ ಮೊಬೈಲ್ ಫೋನ್ ಮಾಡಿದ ಆದರೆ ಅದು ಸ್ವಿಚ್ ಆಫ್ ಆಗಿತ್ತು. ಆಗ ತಾನೆ ಬಿಸಿಲಿನ ಬೇಗೆ ಏರುತಿತ್ತು. ನಾನು ಮತ್ತೆ ಮಂಜ ಬೆವರಿನಿಂದ ಸ್ನಾನ ಮಾಡಿದ ಹಾಗೆ ಆಗಿತ್ತು. ಮುಂದೆ ಇರುವ ವ್ಯಕ್ತಿ ಬೇಗನೆ ಎದ್ದು ಹಳ್ಳಿಯಿಂದ ಇಲ್ಲಿಗೆ ಬಂದಿದ್ದ. ಅವನು ಸ್ನಾನ ಮಾಡಿರಲಿಲ್ಲವಾದ್ದರಿಂದ ಬೆವರಿನ ವಾಸನೆ ಇಂದ ಕೆಟ್ಟದಾಗಿ ನಾರುತಿದ್ದ. ಮತ್ತೆ ನಮಗೆ ಹೇಳಿದ "ಸ್ವಾಮಿ ಈ ಜ್ಯೋತಿಷಿಗಳು ತುಂಬ ಶ್ಯಾಣ್ಯಾ ರೀ" ಎಂದ. ನಾನು ನೋಡಿರಿ ಹಳ್ಳಿಯಿಂದ ಬಂದು ಇಲ್ಲೇ ಶಾಸ್ತ್ರ ಕೇಳೋದು ಎಂದ. ಅವನ ಬಾಯಿ ವಾಸನೆ ಇಂದ ನಮಗೆ ವಾಂತಿ ಬರುವುದೊಂದೇ ಬಾಕಿ. ಮಂಜ ಸುಮ್ಮನಿರದೆ ಏನು ಶಾಸ್ತ್ರ ಕೇಳುವುದಕ್ಕೆ ಬಂದಿದ್ದಿರಾ? ಎಂದು ಕೇಳಿದ. ಅದಕ್ಕೆ ಆ ಮನುಷ್ಯ ಏನಿಲ್ಲ ಶಾನೆ ದಿವಸದಿಂದ ಹೊಟ್ಟೆ ನೋವು ಅದಕ್ಕೆ ಎಂದ. ರೀ ನಿಮಗೆ ಬೇಕಾಗಿರೋದು ಶಾಸ್ತ್ರ ಅಲ್ಲರಿ ಶಸ್ತ್ರ ಚಿಕಿತ್ಸೆ ಹೋಗಿ ಯಾವುದಾದರೂ ಡಾಕ್ಟರ ಬಳಿ ಚಿಕಿತ್ಸೆ ಪಡಿರಿ ಎಂದ ಮಂಜ. ಆಗ ಆ ಮನುಷ್ಯ ರೀ ಸುಮ್ನಿರಿ ರಾಯರ ಬಗ್ಗೆ ಹಂಗೆಲ್ಲ ಮಾತನಾಡಬೇಡಿ. ಅವರು ತುಂಬಾ ಜಾಣರು. ಡಾಕ್ಟರ ಕಡೆ ಹೋದ್ರ ಇದ್ದಿರೋ ದುಡ್ಡು ಮತ್ತೆ ಹೊಟ್ಟಿ ಒಳಗಿನ ಸಾಮಾನು ಎಲ್ಲ ತೋಗೊತಾರ. ಆ ಮನುಷ್ಯ ಪ್ರತಿ ಬಾರಿ ಮಾತನಾಡುವಾಗಲು ಅವನ ಬಾಯಿಯಿಂದ ವಾಸನೆ ಬರುತಿತ್ತು. ಮತ್ತೆ ನಮ್ಮಿಬ್ಬರ ಮೇಲೆ ಆ ಉರಿಬಿಸಿಲಲ್ಲೂ ಮುಂಗಾರು ಮಳೆ (ಉಗಳಿನ ಹನಿಗಳು). ನಾನು ಸುಮ್ಮನೆ ಇರು ಎಂದರು ಮಂಜ ಕೇಳದೆ ನಿನ್ನ ಒಳಗ ಏನು ಸಾಮಾನು ಅದ ಹೇಳು? ಎಂದ. ಛಿ ನನಗ ನಾಚಿಗಿ ಆಗ್ತೈತ್ರಿ ಎಂದ. ಏನು ಹೇಳು ನಾಚಿಗಿ ಯಾಕ ಎಂದು ಹುರುದುಂಬಿಸಿದ ಮೇಲೆ. ಅದು ಅದು ಕಿಡ್ನಿ ಎಂದ. ನಾವಿಬ್ಬರು ಹಾಗೆ ಮುಗುಳ್ನಕ್ಕೆವು. ಆದರು ಸುಮ್ಮನೆ ಬಿಡದೆ ನಮ್ಮ ತಲೆ ತಿನ್ನ ಹತ್ತಿದ ಆ ಮನುಷ್ಯ. ಆಗ ನಾನು ಹೇಳಿದೆ ಲೇ ಇನ್ನೊ ಸ್ವಲ್ಪ ಬೇಗನೆ ಬರಬಹುದಿತ್ತು ಇವನ ಕಾಟನಾದರೂ ತಪ್ಪುತ್ತಿತ್ತು. ನಾನು ಆಟೋಕೆ ಹೋಗೋಣ ಎಂದೆ ನೀನು ಬೇಡ ಅಂದೇ ನೋಡು ಈಗ ಪರಿಸ್ಥಿತಿ ಎಂದೆ. ಆಗ ಮಂಜ ನನಗೇನು ಗೋತ್ತಾಪ್ಪ ಈ ಮಹರಾಯ ಇಷ್ಟು ಬ್ಯುಸಿ ಮನುಷ್ಯ ಎಂದು ಅಂದ.

ಏನು ಮಾಡಲಾರದೆ ಉರಿಬಿಸಿಲಲ್ಲಿ ಎರಡು ಘಂಟೆ ಕ್ಯುನಲ್ಲಿ ನಿಂತು ಒಳಗಡೆ ಹೋದೆವು.

ಮನೋಜನ ಥೇಟ ಸ್ವಾಮೀಜಿಯಂತೆ ವೇಷ ಧರಿಸಿದ್ದ. ಮನೆ ತುಂಬ ದೇವರ ಫೋಟೋಗಳು. ಯಾವದೋ ಒಂದು ಮಠಕ್ಕೆ ಹೋದ ಹಾಗೆ ಅನ್ನಿಸಿತು. ನಮ್ಮನ್ನು ನೋಡಿ ಮನೋಜ "ಲೇ ಯಾವಾಗ ಬಂದಿರೋ ಎಂದು ಕೇಳಿದ". ನನಗೆ ಮತ್ತೆ ಮಂಜನಿಗೆ ತುಂಬ ಕೋಪ ಬಂದಿತ್ತು ಬಂದು ಎರಡು ಘಂಟೆ ಆಯಿತು. ನಿನ್ನ ಕ್ಯು ನಲ್ಲಿ ಬರುವ ಹೊತ್ತಿಗೆ ಇಷ್ಟೊತ್ತು ಆಯಿತು ಎಂದೆ.ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಇಷ್ಟು ಕಷ್ಟ ಪಟ್ಟಿರಲಿಲ್ಲ ಎಂದ ಮಂಜ. ಆಗ ಮನೋಜ ಸಾರೀ ಕಣ್ರೋ ನಾನು ನನ್ನ ಸೆಕ್ಯೂರಿಟಿಯವನಿಗೆ ಹೇಳುವುದನ್ನು ಮರೆತೆ ಅದಕ್ಕೆ ನಿಮಗೆ ಅವ ಒಳಗೆ ಬಿಡಲಿಲ್ಲ ಎಂದು ತಾನೆ ಹೋಗಿ ಎರಡು ಕಪ್ ಕಾಫಿ ತೆಗೆದು ಕೊಂಡು ಬಂದ. ಆಗ ನಾನು ಮತ್ತೆ ಮಂಜ ನಮಗೆ ಸ್ವಲ್ಪ ಕೈ ಕಾಲು ತೊಳೆದು ಬರಬೇಕೆಂದು ಹೋಗಿ ಪೂರ್ತಿ ಬಕೆಟ್ ತಣ್ಣೀರು ಮೈಯಲ್ಲ ಸುರಿದು ಕೊಂಡು ಬಂದೆವು. ಕಾಫಿ ಆಗಲೇ ತಂಪಾಗಿತ್ತು ಆದರು ಅದನ್ನೇ ಹೀರಿದೆವು. ಮತ್ತೆ ಹೇಗೆ ಬಂದಿರಿ ಎಂದ ಮನೋಜ. ಆಗ ಮಂಜ ಬಸ್ನಲ್ಲಿ ಎಂದಾ. ನೆರೆ ಸಂತ್ರಸ್ತರ ನಿಧಿಗೆ ಚೆಕ್ ಏನಾದರು ಕೊಡುವೆಯ ಎಂದು ಕೇಳಿದ ಮಂಜ. ಆಗ ಮೊನೋಜ ನಾನು ಆಗಲೇ ಕೊಟ್ಟಿದ್ದೇನೆ ನೋಡಿ ಇಲ್ಲಿದೆ ಬ್ಯಾಂಕ್ ಸ್ಟೇಟ್ಮೆಂಟ್ ಎಂದು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿದ. ಆಗ ಮನೋಜ "ಲೇ ನೀವು ಆಟೋ ನಲ್ಲೆ ಬರಬೇಕಿತ್ತು" ಬೇಗ ಬರುತ್ತಿದ್ದಿರಿ ಎಂದ. ನಾನು ಹೇಳಿದೆ ಮಂಜ ಕೇಳಲಿಲ್ಲ ಎಂದೆ. ಆಗ ಮಂಜ ಯಾಕಪ್ಪ ಅಷ್ಟು ದುಡ್ಡು ವೇಸ್ಟ್ ಎಂದ. ಅದಕ್ಕೆ ಮನೋಜ ಎಲ್ಲರು ನಿನ್ನ ಹಾಗೆ ಯೋಚನೆ ಮಾಡ್ತಾ ಹೋದರೆ ಈ ಆಟೋನವರು ಹೇಗೆ ಬದುಕಬೇಕೋ ಎಂದು ನಮಗೆ ಬುದ್ಧಿವಾದ ಹೇಳಿದ. ಆಗಲೇ ನಮಗೆ ಗೊತ್ತಾಗಿತ್ತು ಇವನ ೨೦ ಜನರಲ್ಲಿ ೧೨ ರಷ್ಟು ಬರಿ ಆಟೋ ಚಾಲಕರೆ ಇದ್ದರು. ಇವನು ಹೇಳಿದ್ದು ತನ್ನ ವ್ಯವಹಾರ ಚೆನ್ನಾಗಿರಲೆಂದು ಎಂದು ತಿಳಿಯಿತು. ಮನೋಜ ಇನ್ನು ಇಬ್ಬರು ಇದ್ದಾರೆ ಮುಗಿಸಿ ಬಿಡುತ್ತೇನೆ ಎಂದ. ನಾವು ಆಯಿತು ಎಂದು ಅಲ್ಲೇ ಮನೆ ಮುಂದೆ ಇರುವ ಚೇರ್ ಮೇಲೆ ಕುಳಿತೆವು. ಆಗ ಒಬ್ಬ ಮನುಷ್ಯ ಬಂದು ನಮಗೆ ಕಾಲು ಬಿದ್ದು ತನ್ನ ಸಮಸ್ಯೆ ಹೇಳಲಾರಮ್ಬಿಸಿದ. ನಾವು ಏನು ತೋಚದೆ ಅವನಿಗೆ ಒಳಗೆ ಹೋಗಪ್ಪ ನಿಮ್ಮ ಸ್ವಾಮೀಜಿ ಇದ್ದಾರೆ ಎಂದು ಕಳುಹಿಸಿದೆವು.

ಆಗ ಹೋಗುತ್ತಲೇ ಆ ಮನುಷ್ಯನ ಜಾತಕ ನೋಡಿ .. ಮನೋಜ

ನಿನಗೆ ಗ್ರಹಗಳು ಚೆನ್ನಾಗಿಲ್ಲ.. ನೀನು ಬುಧ , ಶನಿ ಮತ್ತೆ ಗುರು ಶಾಂತಿ ಮಾಡಿಸಬೇಕು ಎಂದು ಹೇಳಿದ.
ಅದನ್ನು ಮಾಡಿಸಿ ನೀನು ಧರ್ಮಸ್ಥಳಕ್ಕೆ ಹೋಗಿ ನಿನ್ನ ಅಳತೆಯಷ್ಟು ಅಕ್ಕಿ ಕೊಡಬೇಕು ಎಂದ. ಮತ್ತೆ ಮಂತ್ರಾಲಯಕ್ಕೆ ಹೋಗಿ ಅಲ್ಲಿ ಒಬ್ಬ ಆಚಾರ್ಯರಿದ್ದಾರೆ ಅವರ ಹತ್ತಿರ ಒಂದು ವಿಶೇಷ ಪೂಜೆ ಮಾಡಿಸುತ್ತಾರೆ ಬರೀ 10000 ಅಷ್ಟೇ ಎಂದ. ಎಲ್ಲ ಒಳ್ಳೆಯದಾಗುತ್ತೆ ಎಂದ. ಆಗ ಮನುಷ್ಯ ಸರ್ ಇದು ನನ್ನ ಜಾತಕ ಅಲ್ಲ ಇದು ನನ್ನ ಮಾವನವರ ಜಾತಕ ಅವರಿಗೆ ತುಂಬಾ ಹಣವಿದೆ ಅವರು ಯಾವಾಗ ಶಿವನ ಪಾದ ಸೇರುತ್ತಾರೆ ನೋಡಿ ಹೇಳಿ ಎಂದ. ಮೊದಲೇ ಹೇಳಬಾರದ ಎಂದು ಕೋಪಗೊಂಡ ಮನೋಜ. ಯಾಕಪ್ಪ ನಿನ್ನ ಮಾವನ್ನ ಸಾಯಿಸಬೇಕು ಎಂಬ ವಿಚಾರ ಎಂದ. ಅವರ ಆಸ್ತಿ ಎಲ್ಲ ನಂದೇ ಆಗುತ್ತಲ್ಲ ಅದಕ್ಕೆ ...ಎಂದ. ಅದಕ್ಕೆ ಮನೋಜ ಇಂತಹ ಕೆಲಸಕ್ಕೆ ಬೇರೆಯವರನ್ನು ಕೇಳು ನಾನು ಇಂತಹ ಕೀಳು ಕೆಲಸ ಮಾಡುವುದಿಲ್ಲ ಎಂದು ಬೈದು ಕಳುಹಿಸಿದ.


ಇಬ್ಬರನ್ನು ಶಾಸ್ತ್ರ ಹೇಳಿ ಮುಗಿಸಿವಷ್ಟರಲ್ಲಿ ಒಂದು ಘಂಟೆ ಆಗಿತ್ತು. ಮತ್ತೆ ಮನೋಜ ಇಲ್ಲಿಯೇ ಊಟ ಮಾಡಿ ಹೋಗಿ ಎಂದು ಹೇಳಿದ. ನಮಗೂ ಮನೆ ಬಿಟ್ಟು ತುಂಬ ಸಮಯವಾಗಿದ್ದರಿಂದ. ನಾವು ಆಯಿತು ಎಂದು ಹೇಳಿದೆವು. ಆಗ ನಮಗೆ ತಿಳಿಯಿತು ಅವನ ಹೆಂಡತಿನೇ ಅವನ ಗುರು ಎಂದು. ಅಂದರೆ ಊಟ ಹಾಕುವದನ್ನು ಗುಣಿಸಿ ಭಾಗಿಸಿ ಲೆಕ್ಕಾಚಾರ ಹಾಕಿ ನಮಗೆ ಊಟ ಬಡಿಸಿದಳು . ನಮಗೆ ಅನ್ನಿಸಿತು ನಾವಿಬ್ಬರು ಏನು ರಾಹು ಕೇತುಗಳ ಎಂದು. ಕಡೆಗೆ ಮನೆಯ ದಾರಿ ಹಿಡಿದೆವು. ಮನೆ ಸಮೀಪಿಸುತ್ತಿದ್ದಂತೆ ಮತ್ತೆ ಹೊಟ್ಟೆ ಚುರುಗುಡುತಿತ್ತು. ಅನಂತನ ಹೋಟೆಲ್ಗೆ ಹೋಗಿ ಬೆಣ್ಣೆ ದೋಸೆ ತಿಂದು ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದು ಗೂಡು ಸೇರಿಕೊಂಡೆವು.

6 comments:

  1. ಮನೋಜ ಟೀ ವಿ, ವಾಶಿಂಗ್ ಮೆಶಿನ್ ಮಾರೋದ್ ಬಿಟ್ಟು ಈಗ ರಾಹು ಕೇತು ಹಿಂದೆ ಹೋದನೆನ್ರಿ? ಹ ಹ ಹ

    ಚೆನ್ನಾಗಿದೆ !

    ಯಾಕ್ರೀ ಬಹಳ ದಿನದಿಂದ ಯಾವ್ ಬ್ಲಾಗಲ್ಲೂ ಕಾಣಿಸಲಿಲ್ಲ. ನಿಮ್ಮ ಬ್ಲಾಗಿಗೂ ಈವತ್ತು ಬಂದೀರಿ.

    ReplyDelete
  2. ಹೌದು ಸರ್... ಕೆಲಸ ಸ್ವಲ್ಪ ಜ್ಯಾಸ್ತಿ ಇತ್ತು ಅದಕ್ಕೆ ಇಷ್ಟು ದಿನ ಬ್ರೇಕ್ ತೊಗೊಂಡಿದ್ದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. ಲೇಖನ ತುಂಬಾ ಚೆನ್ನಾಗಿದೆ
    ಅಭಿನಂದನೆಗಳು

    ReplyDelete