Thursday, September 2, 2010

ನನಗೆ ಮದಿರೆ ಬೇಡ ಸ್ವಾಮಿ....

ಶ್ಯಾಮ್ ಮೊದಲು ತುಂಬಾ ಹುಂಬನಂತೆ ವರ್ತಿಸುತ್ತಿದ್ದ. ಮದುವೆ ಆದ ಮೇಲೆ ತುಂಬಾ ಸುಧಾರಿಸಿದ್ದಾನೆ. ಒಂದು ದಿನ ಶ್ಯಾಮ್ ಹೆಂಡತಿ ಊರಲ್ಲಿ ಇರಲಿಲ್ಲ. ಹೀಗಾಗಿ ನನಗೆ ಮತ್ತು ಮಂಜನಿಗೆ ವಿಶೇಷ ಆಹ್ವಾನ ಇತ್ತು. ಇಬ್ಬರು ಸೇರಿ ಬಾಡಿಗೆ ೯೦ ಎಣ್ಣೆ ಹಾಕಿಸಿ ಹೊರಟೆವು. ನಮ್ಮ ಬಾಡಿಗೆ ಅಲ್ಲ... ಅದು ಬೈಕ್ ಬಾಡಿಗೆ....:). ನಮ್ಮ ಬಾಡಿಗೆ ಶ್ಯಾಮ್ ಮನೇಲಿ ವಿಶೇಷ ವ್ಯವಸ್ಥೆ ಇತ್ತು. ಮೊದಲನೆ ಬಾರಿ ಶ್ಯಾಮ್ ತನ್ನ ಹೆಂಡತಿನ ಬೇರೆ ಊರಿಗೆ ಮದುವೆಗೆ ಕಳುಹಿಸಿದ್ದ. ಅವಳಷ್ಟೇ ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಅವಳ ಜೊತೆ ಇದ್ದಾಗ ಎಂದು ಕುಡಿದಿಲ್ಲ. ಅದಕ್ಕೆ ಕಾರಣ ಅವಳ ಮೇಲಿನ ಪ್ರೀತಿಯಿಂದ.

ಶ್ಯಾಮ್ ಮನೆಗೆ ಬಂದೆವು. ಶ್ಯಾಮ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದ. ಕೆಲ ಹನಿ ಹೊಟ್ಟೆಗೆ ಇಳಿದ ಮೇಲೆ, ನಮ್ಮ ಮಂಜಿನ ಹನಿಗಳು (ಮಂಜನ ಮಾತುಗಳು) ಶುರು ಆದವು. ಮಂಜ ಎಡಬಿಡದೆ ಮಾತನಾಡುತ್ತಿದ್ದ.ಮಂಜನ ಸರದಿ ಮುಗಿದ ಮೇಲೆ,ಶ್ಯಾಮ್ ತನ್ನ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹೇಳಹತ್ತಿದ.

ಮೊದಲು ನಾನು ನೋಡ ಹೋಗಿದ್ದು ರಾಜೇಶ್ವರಿ ಎನ್ನುವ ದಾವಣಗೆರೆ ಹುಡಿಗಿನ. ಅವಳು ತುಂಬಾ ಸುಂದರವಾಗಿದ್ದಳು ಎಂದ. ನಿಜವಾಗಿಯೂ ಕನಸಿನ ರಾಣಿ ಎಂದ. ಯಾರ ಕನಸಿನ ನಿನ್ನದಾ ಅಥವಾ? ಬೇರೆಯವರ ಕನಸಿನ ರಾಣಿನ? ಎಂದ ಮಂಜ. ಮತ್ತೆ ಏಕೆ? ಮದುವೆ ಆಗಲಿಲ್ಲ ಎಂದು ಕೇಳಿದ. ನನ್ನ ಅಪ್ಪ ಅವಳಿಗೆ ಹಾಡು ಹೇಳಲು ಹೇಳಿದರು ಅವಳು ತುಂಬಾ ಚೆನ್ನಾಗಿ ಹಾಡಿದಳು. ಅವಳ ಸರದಿ ಆದ ಮೇಲೆ ನಾನು ಒಂದು ಹಾಡು ಹೇಳುತ್ತೇನೆ ಎಂದು ಹಾಡು ಹೇಳಿದೆ ಅಷ್ಟೇ. ಅವಳು ನನ್ನನ್ನು ವರಿಸಲಿಲ್ಲ ಎಂದ.
ಮಂದೆ ಶಾಂಭವಿ ಎನ್ನುವ ಬೆಳಗಾವಿ ಹುಡುಗಿ ನೋಡಿದೆ. ಅವಳು ತುಂಬಾ ಚೆನ್ನಾಗಿ ಇದ್ದಳು ಎಂದ. ಅವಳು ಎಲ್ಲರಿಗೂ ನಮಸ್ಕಾರ ಮಾಡುತ್ತಾ, ನನಗು ಬಂದು ನಮಸ್ಕಾರ ಮಾಡುತ್ತಿದ್ದಾಗ, ನಾನು ನನಗೆ ಏಕೆ? ಎಂದು ಜಿಗಿದು ಸೋಫಾ ಮೇಲೆ ಕುಳಿತೆ ಅಷ್ಟೇ. ಅವಳು ನನ್ನನ್ನು ಒಪ್ಪಲಿಲ್ಲ ಎಂದ.

ಮುಂದೆ ಭಾರತಿ ನಮ್ಮ ಊರಿನ ಹುಡುಗಿನ ನೋಡಿದೆ. ಅವಳು ಸ್ವಲ್ಪ ಕಪ್ಪು ಆದರೆ ಮುಖದಲ್ಲಿ ಕಳೆ ಇತ್ತು. ಅವಳ ಜೊತೆ ಮಾತನಾಡುವಾಗ ನಾನು ಡೈರೆಕ್ಟ್ ಆಗಿ ಐ ಲೈಕ್ ಯೂ. ನಿನ್ನ ಇಚ್ಛೆ ಏನು ಎಂದು ಕೇಳಿದ್ದಕ್ಕಾಗಿ ಒಪ್ಪಲಿಲ್ಲ ಎಂದ. ಹೀಗೆ ತುಂಬಾ ಹೆಣ್ಣುಗಳನ್ನು ನೋಡಿದ್ದೆ. ಅನಂತರ ಮದುವೆ ಯೋಚನೇಲಿ ಕೂದಲೆಲ್ಲ ಉದಿರಿದವು. ಈಗೀಗ ಬರೋ ಹುಡಿಗಿರು ನನ್ನನ್ನು ಯಾರು ಒಪ್ಪಿರಲಿಲ್ಲ. ಆಮೇಲೆ ಮದುವೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ನೀವು ನನಗೆ ತುಂಬಾ ಒಳ್ಳೆಯ ಹೆಂಡತಿ ಕರುಣಿಸಿದ್ದೀರ ಎಂದು ಮಂಜನ ಕಾಲಿಗೆ ಬಿದ್ದ. ಮಂಜ ಏಳಿ.. ಏಳಿ.. ಶ್ಯಾಮ್ ಎಂದ. ಆದರೆ ಶ್ಯಾಮ್ ಅಲ್ಲಿಯೇ ಮಲಗಿ ಬಿಟ್ಟಿದ್ದ. ಶ್ಯಾಮ್ ನ ಎತ್ತಿ ಸೋಫಾ ಮೇಲೆ ಮಲಗಿಸಿದೆವು. ಅಷ್ಟರಲ್ಲಿ ಟ್ರಿನ್.. ಟ್ರಿನ್.. ಎಂದು ಬಾಗಿಲ ಬೆಲ್ ಶಬ್ದ. ಹೋಗಿ ಮಂಜ ಬಾಗಿಲು ತೆಗೆದ. ಅಣ್ಣssss ನೀನು ಎಂದು ಬಂದಳು ಶ್ಯಾಮ್ ಹೆಂಡತಿ. ನಾನು ಮತ್ತು ಮಂಜ ಏನು ತೋಚದಾಗಿದ್ದೆವು. ಎದಿರು ಎಲ್ಲ ಬಾಟಲಿಗಳು ಇದ್ದವು. ನಾನು ಮನೇಲಿ ಇಲ್ಲ ಎಂದು ಇದೆಲ್ಲಾ ನಡೆಸಿದ್ದೀರ ಎಂದಳು. ನಾನು ವೈನಿಗೆ ಹೇಳುತ್ತೇನೆ ಎಂದಳು. ಆಗ ಮಂಜ ನನಗೆ ವೈನ್ ಇಷ್ಟ ಇಲ್ಲ. ಅದು ಬೇರೆ ನನಗೆ ಕಾಕ್-ಟೇಲ್ ಆಗಿ ಬರಲ್ಲ ಎಂದ. ನಾನು ಹೇಳಿದ್ದು ಸಾವಿತ್ರಿ ವೈನಿ ಬಗ್ಗೆ ಎಂದಳು. ಓsss... ಆ ಹೆಸರಲ್ಲೂ ವೈನ್ ಇದೆಯಾ? ಎಂದ ಮಂಜ. ಲೇ ಅವರು ಹೇಳುತ್ತಿರುವದು ನಿನ್ನ ಹೆಂಡತಿ ಬಗ್ಗೆ ಹೆಂಡದ ಬಗ್ಗೆ ಅಲ್ಲ ಎಂದೆ. ಶ್ಯಾಮ್ ಮಡದಿ ಇದನ್ನು ಹೇಳಿದ್ದೆ ತಡ. ಮಂಜ ಹಾಗೆ ಮಾತ್ರ ಮಾಡಬೇಡಮ್ಮ ಎಂದು ಪರಿ ಪರಿಯಾಗಿ ಅವಳಿಗೆ ಬೇಡಿಕೊಂಡ. ಇವತ್ತು ಒಂದು ರಾತ್ರಿ ಇಲ್ಲಿ ಇರಲು ಬಿಡು ಎಂದ.ಅಷ್ಟರಲ್ಲಿ ಮಂಜನ ಫೋನ್ ರಿಂಗ್ ಆಯಿತು. ಮೀಟಿಂಗ್ ನಲ್ಲಿ ಇದ್ದೇನೆ ನಾಳೆ ಮುಂಜಾನೆ ಫೋನ್ ಮಾಡುತ್ತೇನೆ ಎಂದ. ಮಂಜ ತನ್ನ ಹೆಂಡತಿಗೆ ನೈಟ್ ಶಿಫ್ಟ್ ಎಂದು ಸುಳ್ಳು ಹೇಳಿ ಬಂದಿದ್ದ.

ಶ್ಯಾಮ್ ಮಡದಿ ಶ್ಯಾಮ್ ನನ್ನು ಮಗುವಿನ ಹಾಗೆ ಎತ್ತಿಕೊಂಡು ಹೋಗಿ ಬೆಡ್ ರೂಮ್ ನಲ್ಲಿ ಮಲಗಿಸಿದಳು. ನಾನು ಮತ್ತು ಮಂಜ ಎಲ್ಲೇ ಹಾಲ್ ನಲ್ಲಿ ಮಲಗಿದೆವು. ಮರು ದಿವಸ ಶ್ಯಾಮ್ ಮಡದಿ ಚಹಾ ಮಾಡಿದ್ದಳು. ಚಹಾ ಕೂಡ ವಿಸ್ಕೀ ವಾಸನೆ ಬರುತಿತ್ತು. ನಮ್ಮ ನಶೆ ಇಳಿದಿಲ್ಲ ಎಂದು ತಿಳಿದು ಸುಮ್ಮನೇ ಕುಡಿಯುತ್ತಿದ್ದೆವು. ಆದರೆ ಶ್ಯಾಮ್ ಮಡದಿ ಒಯಿಕ.. ಒಯಿಕ ...ಎಂದು ವಾಂತಿ ಮಾಡಿದ್ದಳು. ಏಕೆಂದರೆ ಬಾಟಲ್ ತೆಗೆಯುವಾಗ ಸ್ವಲ್ಪು ಒಡೆದಿತ್ತು. ಅದನ್ನು ಚಹಾ ಸೋಸುವದರಿಂದ ಸೋಸಿ ಶ್ಯಾಮ್ ಅದನ್ನು ತೊಳೆಯದೇ ಹಾಗೆ ಇಟ್ಟಿದ್ದ.

ಇದಾದ ಮೇಲೆ ಮೊದಲ ಬಾರಿ ಶ್ಯಾಮ್ ಮನೇಲಿ ದೊಡ್ಡ ಜಗಳವೇ ಆಗಿತ್ತು. ಮೊದಲು ಶ್ಯಾಮ್ "ನನಗೆ ಮದುವೆ ಬೇಡ ಸ್ವಾಮಿ" ಎಂದು ಹಾಡುತ್ತಿದ್ದ. ಆದರೆ ಈಗ "ನನಗೆ ಮದಿರೆ ಬೇಡ ಸ್ವಾಮಿ" ಎಂದು ಹೇಳುತ್ತಾನೆ.

5 comments:

  1. ಹ್ಹಾ ಹ್ಹಾ ಪ್ರಸನ್ಗ ಚೆನ್ನಾಗಿದೆ.... ನನ್ನ ಬ್ಲೊಗಿಗೊಮ್ಮೆ ಬನ್ನಿ.....

    ReplyDelete
  2. ಧನ್ಯವಾದಗಳು ಮೇಡಂ ಮತ್ತು ದಿನಕರ್ ಸರ್.

    ReplyDelete
  3. ತುಂಬಾ ಚೆನ್ನಾಗಿದೆ. ಶ್ಯಾಮನ ಹೆಂಡತಿ ಸಧ್ಯ ನಿಮಗೆಲ್ಲಾ ಪೊರಕೆ ಪೂಜೆ ಮಾಡಿಲ್ವಲ್ಲಾ...ಸಧ್ಯ..
    ನಕ್ಕು ನಕ್ಕು ಸಾಕಾಯ್ತು...
    ರಸವತ್ತಾಗಿ ಕಥೆ ಹೆಣೆದಿದ್ದಿರಾ...

    ReplyDelete
  4. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್,ನಿಜ, ಪೂರಕೆ ಪೂಜೆ ಆಗದೆ ಬಚಾವ್ ಅದೇವು , ನೀವು ನಕ್ಕಿದ್ದು ನನಗೆ ತುಂಬಾ ಖುಷಿ ತಂದಿತು.

    ReplyDelete