Tuesday, January 12, 2010

ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ..

ನೀ ಸುಮ ಬಾಲೆಯೇ .. ಕುಸುಮ ಬಾಲೆಯೇ ಅಥವಾ ಬೆಳದಿಂಗಳ ಬಾಲೆಯೇ .. ಎಂದೆಲ್ಲಾ ಹೊಗಳುತ್ತಿದ್ದ ಅವಳನ್ನ ರವಿ. ಆ ಅವಳು ಯಾರು? ಎಂಬುದು ಮಾತ್ರ ಒಂದು ದೊಡ್ಡ ಯಕ್ಷ ಪ್ರಶ್ನೆ ಆಗಿತ್ತು. ಏನೇನೋ ಮನಸಿನಲ್ಲಿ ಅಂದು ಕೊಳ್ಳುವದು, ಕೈ ಸನ್ನೆ ಇವೆಲ್ಲವೂ ನೋಡಿದರೆ ಇವನನ್ನು ನಿಜವಾಗಿಯೂ ಒಬ್ಬ ಹುಚ್ಚ ಎಂದು ಯಾರುಬೇಕಾದರು ಹಣೆ ಪಟ್ಟಿ ಅಂಟಿಸಿ ಬಿಡುತ್ತಿದ್ದರು.ಹೆಸರು ಮಾತ್ರ ರವಿ ಆದರೆ ನಿಜವಾಗಿಯೂ ಕಪಿಯ ಪರಾವತಾರವೇ ಆಗಿದ್ದ. ಮೇಘ ಸಂದೇಶ ಅವನಿಗೆ ತುಂಬಾ ಮನಸಿಗೆ ಹಿಡಿಸಿದ ಒಂದು ಕೃತಿ.... ಕ್ಷಮಿಸಿ ಮೇಘನಾ ಅಂತ ಸಂದೇಹ. ಅದನ್ನು ನಮ್ಮೆಲ್ಲರಿಗೂ ವಿವರಣೆ ನೀಡುವಾಗ ಪ್ರತಿಯೊಂದು ಜೀವಿಗೂ ಒಂದೊಂದು ಕನೆಕ್ಷನ್ ಇದೆ ಎಂತಲೂ. ಮತ್ತೆ ನಾವು ಗುನುಗಿಸುತ್ತಿರುವ ಒಂದು ಹಾಡು ಕೂಡ ಬೇರೆಲ್ಲಾದರೂ ತರಂಗಗಳ ಮೂಲಕ ನಮಗೆ ಪ್ರಚೋದಿಸಿ ಅದನ್ನು ಹಾಡುವಂತೆ ಮಾಡುತ್ತವೆ ಎಂದು ಹೇಳುತ್ತಿದ್ದ. ಅವನ ಯಾವ ಮಾತು ನಮಗೆ ಅರ್ಥವಾಗುತ್ತಿರಲಿಲ್ಲ. ಹತ್ತಿರದಿಂದ ಅವನನ್ನು ನೋಡಿದ ಎಲ್ಲರೂ ಅವನ ಅಪ್ಪ ಅಮ್ಮನಿಗೂ ಅರ್ಥವಾಗದ ಒಂದು ಜೀವ ಅದು. ನಮ್ಮ ಮಾಸ್ಟರ್ ಕೂಡ ಅವನಿಗೆ ಎಷ್ಟು ಬೈದರು ಎಂದಿಗೂ ಅದನ್ನು ಕ್ಷುಲ್ಲಕವಾಗಿಯ ಪರಿಗಣಿಸುತ್ತಿದ್ದ. ಅವನ ನಿಜವಾದ ಹಂಬಲಿಕೆ ಏನು?.[ಆದರೆ ನನಗೆ ಗೋತಿತ್ತು :) ಮೇಘನಾ] ಎಂದು ನಾವೆಲ್ಲ ಗೆಳೆಯರು ಕೇಳಿದರು ಹೇಳಲಿಲ್ಲ. ಮಂಜ ಇವನ ಹಾಡನ್ನು ಒಂದು ದಿವಸ ಕೇಳಿದ್ದರಿಂದ "ಲೇ ಅವಳು ಕುಸುಮ ಇರಬೇಕು ಎಂದು". ನಮಗೆ ಹೇಳಿದ. ಲೇ ಆ ಕುಳ್ಳಿ ಕುಸುಮ ಎಂದು ಮಂಜನ ಮೇಲೆ ತುಂಬಾ ಕೆಂಡಾಮಂಡಾಲಾಗಿದ್ದ ರವಿ. ಕಡೆಗೆ ಶಾಲೆ ಬಿಟ್ಟು ಬೇರೆಡೆ ಸೇರಿಕೊಂಡಬಿಟ್ಟ ರವಿ.

ಮೊನ್ನೆ ಗಾಂಧಿ ಬಜಾರ್ ನಲ್ಲಿ ಭೇಟಿಯಾದ ಹಳೆಯ ಎಲ್ಲ ವಿಚಾರಗಳನ್ನು ಮತ್ತೆ ಸ್ಮರಿಸಿಕೊಂಡೆವು. ಮತ್ತೆ ಕಾಫೀ ಕುಡಿದು ಮನೆ ಸೇರಿಕೊಂಡೆವು. ಅನಂತರ ನಮ್ಮ ನಮ್ಮ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತಿಳಿದುಕೊಂಡೆವು. ಮೊದಲಿನ ಹಾಗೆ ಇವ ಇಲ್ಲ ಎಂದು ಅಂದು ಕೊಂಡು, ಇದನ್ನು ಮಂಜನಿಗೆ ಹೇಳಿದೆ. ಆಗ ಮಂಜ ಲೇ "ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ" ಎಂದು ನನಗೆ ಹೇಳಿದ. ಆದರೂ ಅವನು ಸುಧಾರಿಸಿದ್ದಾನೆ ಎಂದು ಹೇಳಿದೆ. ಮಂಜನಿಗೆ ಆಯಿತು ನೋಡೋಣ ಎಂದು ಅವನ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತೆಗೆದುಕೊಂಡ.

ನಾನು ಒಂದು ಹಾಸ್ಯ ಪ್ರಸಂಗದ ಬಗ್ಗೆ ಲೇಖನ ಬರೆದು, ಅದನ್ನು ನನ್ನೆಲ್ಲ ಮಿತ್ರ ಬಾಂಧವರಿಗೆ ಕಳುಹಿಸಿದ್ದೆ. ಎಲ್ಲರು ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಆದರೆ ರವಿ ಯಾರು ಬರೆದಿದ್ದು ಇದು. ಮಂಜನಾ ಎಂದು ಕೇಳಿದ . ಏಕೆಂದರೆ ಎಲ್ಲರಿಗೂ ಪ್ರೀತಿಯ ಮತ್ತು ಪ್ರಣಯ ಸಂದೇಶ ರವಾನಿಸುವದಕ್ಕೆ ಪ್ರೇಮ ಪತ್ರ ಬರೆಯುವ ಏಕೈಕ ವ್ಯಕ್ತಿ ನಮ್ಮ ಮಂಜ ಒಬ್ಬನೇ. ಇದೇನು ಏನು ಅರ್ಥನೆ ಆಗಲಿಲ್ಲ, ಇದರಲ್ಲಿ ಹೇಳಿಕೊಳ್ಳುವಂತಹ ಏನು ವಿಶೇಷತೆ ಇಲ್ಲ ಎಂದ. ನನಗೆ ಬರೆಯುವ ಹಂಬಲ ಏನೋ ಇದೆ, ಆದರೆ ಓದುವವರು ನನಗೆ ಹೀಗೆ ಹೀಯಾಳಿಸಿದರೆ ಹೇಗೆ ಎಂದು ಯೋಚನೆ ಮಾಡಿ. ನಾನೇ ಬರೆದಿದ್ದು ಎಂದು ಧೈರ್ಯ ಮಾಡಿ ಹೇಳದೇ ಸುಮ್ಮನಾದೆ. ನಾನು ಆಗಿನಿಂದ ಏನು ಬರೆಯ ಬಾರದೆಂದು ನಿರ್ಧಾರಕ್ಕೆ ಬಂದು. ತುಂಬಾ ದಿನಗಳ ಕಾಲ ಏನು ಬರೆಯದೆ ಇದ್ದು ಬಿಟ್ಟೆ. ಒಂದು ದಿನ ಅದೇ ಗೆಳೆಯ ಮತ್ತೆ ನನಗೆ ಫೋನ್ ಮಾಡಿ " ಲೇ ಮತ್ತೆ ಏನು ಬರೆದಿಲ್ಲವಾ? ಎಂದು ಕೇಳಿದ". ನನಗೆ ಆಶ್ಚರ್ಯ, ಹೃದಯಾಘಾತ ಅಗುವದೊಂದೇ ಬಾಕಿ. ಏನಪ್ಪಾ, ನಿನ್ನ ಅರೋಗ್ಯ ಸರಿಯಾಗಿದೆಯಾ? ಎಂದು ನಾನು ವಿಚಾರಿಸಿದೆ. ಆಗ ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ. ನಿನ್ನ ಲೇಖನ ನಿಜವಾಗಿಯೂ ಚೆನ್ನಾಗೆ ಇತ್ತು. ಹಾಗೆ ತಮಾಷೆ ಮಾಡಿದ್ದೆ ನಿನಗೆ ಎಂದ. ನನಗೆ ಬರಬಾರದ ಕೋಪ ಬಂದಿತ್ತು. ತನ್ನ ಮನೆಗೆ ನನ್ನನ್ನು ಕಾಫಿಗೆ ಆಹ್ವಾನಿಸಿದ. ನಿನಗೆ ಯಾರು ಹೇಳಿದ್ದು ನಾನು ಬರೆದಿದ್ದೆ ಎಂದು ಕೇಳಿದಾಗ ಮಂಜ ಎಂದು ತಿಳಿಯಿತು.

ಮತ್ತೆ ಮನೆಗೆ ಹೋದ ಮೇಲೆ ತುಂಬಾ ಚೆನ್ನಾಗಿ ನನ್ನನ್ನು ಉಪ್ಪಿಟ್ಟು ಕಾಫಿಯಿಂದ ಉಪಚರಿಸಿದ. ಅನಂತರ ನನಗೆ ಒಂದು ಮುದ್ದು ಮುದ್ದಾದ ಚಿಕ್ಕ ಮಗುವನ್ನು ಕರೆದು ತೋರಿಸಿ ಇವಳು ನನ್ನ ಮಗಳು ಸಹನಾ ಇವಳ ಸ್ಕೂಲ್ ನಲ್ಲಿ ಪ್ರಬಂದ ಸ್ಪರ್ಧೆ ಇದೆ. ಇವಳಿಗೆ ಒಂದು ಪ್ರಬಂದ ಬೆರೆದು ಕೊಡು ಎಂದು ಅಲವತ್ತುಕೊಂಡ. ಈಗ ಅವನ ನಿಜವಾದ ವಿಚಾರ ಏನೆಂದು ನನಗೆ ತಿಳಿಯ ಹತ್ತಿತು. ನನಗೆ ಆ ಮುದ್ದಾದ ಮಗುವನ್ನು ನೋಡಿ ಬರೆಯುವದಿಲ್ಲ ಎಂದು ಹೇಳುವ ಮನಸಾಗಲಿಲ್ಲ ಮತ್ತು ಆಗಲೇ ಉಪ್ಪಿಟ್ಟು ಕಾಫಿ ಹೊಟ್ಟೆ ಸೇರಿದ್ದರಿಂದ ಏನು ಹೇಳುವ ಸ್ತಿತಿಯಲ್ಲಿರಲ್ಲ. ಮೊದಲೇ ಇದನ್ನು ಹೇಳಿದ್ದರೆ ಉಪ್ಪಿಟ್ಟು ಕಾಫಿ ಶತಯುಗತಾಯ ಮುಟ್ಟುತ್ತಿರಲಿಲ್ಲ. ಈಗ ಏನು ಮಾಡಲಾರದೆ ಪ್ರಬಂದ ಬರೆದು ಕೊಟ್ಟು ಮನೆಗೆ ಬಂದೆ.

ಆದರೂ ತನ್ನ ಆ ಮೊದಲಿನ ಬುದ್ಧಿ ಮಾತ್ರ ರವಿ ಬಿಟ್ಟಿರಲಿಲ್ಲಾ. ಸುತಾರಾಂ ತನ್ನ ಹೆಂಡತಿಯನ್ನು ತೋರಿಸಲಿಲ್ಲ ಮತ್ತು ಅವಳ ಬಗ್ಗೆ ಒಂದು ಮಾತನಾಡಲಿಲ್ಲ. ಅವಳು ಮಾತ್ರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಪಾತ್ರೆಗಳ ಶಬ್ದ ಮಾಡುತ್ತಿದ್ದರಿಂದ ಮನೆಯಲ್ಲಿಯೇ ಇದ್ದಾಳೆ ಎಂಬ ವಿಷಯ ಮಾತ್ರ ತಿಳಿಯಿತು. ಅವನ ಮಖಿನ ಬುದ್ಧಿ ಗೊತ್ತಿದ್ದರಿಂದ ಮುಂದೆಂದೂ ಅವನ ಮನೆ ದಿಕ್ಕಿಗೂ ಮುಖ ಮಾಡಿ ಮಲಗೂವದು ಬೇಡ ಎಂದು ತೀರ್ಮಾನಿಸಿ ಮನೆಗೆ ಬಂದುಬಿಟ್ಟೆ.

6 comments:

  1. hahaha, Gopal chennagide...nimage uppittina runa teerisbekittu allavaa? aadroo nimma dostu kilaadi bidri...help tagonde bitta...allavaa?

    ReplyDelete
  2. ತುಂಬಾ ಚೆನ್ನಾಗಿದೆ ಸರ್
    ನಿಮ್ಮ ಶೈಲಿ ವೊಂಡರ್ಫುಲ್

    ReplyDelete
  3. ಇಂತಹ ಜನ ತುಂಬಾ ಇದ್ದಾರೆ ಜಲಾನಯನ ಸರ್... ಧನ್ಯವಾದಗಳು.

    ReplyDelete
  4. ತುಂಬಾ ಚೆನ್ನಾಗಿದೆ ಪಾತ್ರ.

    ReplyDelete
  5. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ ಸರ್:).

    ReplyDelete