ಇಲ್ಲಿ ಬರೆದಿರುವ ಆರ್ಟಿಕಲ್ ಗಳಲ್ಲಿ ಕೆಲವು ಸತ್ಯ ಘಟನೆಗಳು ಮತ್ತೆ ಕೆಲವು ಕಲ್ಪನೆಗಳು....ಇದರಿಂದ ನಿಮ್ಮ ಮುಖದಲ್ಲಿ ಮುಗುಳ್ನಗೆ ತರಿಸಿದಲ್ಲಿ ಅದೇ ನಮಗೆ ಹಾಲು ಸಕ್ಕರೆ....
Wednesday, October 27, 2010
ಸಿಹಿ ಮೊಗ್ಗೆ ಅರಳಿದಾಗ ....
ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.
ಸುತ್ತಲೂ ತುಂಬಾ ಗಿಡ,ಮರಗಳು ಇದ್ದವು. ಸುಂದರ ಪ್ರಕೃತಿ, ಆದರೆ ಮನೆಯಲ್ಲಿ ಯಾಕೋ ಸ್ವಲ್ಪ ಕೆಟ್ಟ ವಾಸನೆ ಬರುತಿತ್ತು. ಹರ್ಷ ಕ್ಲೀನ್ ಮಾಡಿ ಎಂದು ಹೇಳಿದೆ. ಹರ್ಷ ಎಲ್ಲಿ? ಇದೆ ಸರ್ ವಾಸನೆ ಎಂದರು. ನನಗೆ ಒಬ್ಬನಿಗೆ ವಾಸನೆ ಬರುತಿತ್ತಾ ಅಥವಾ ಅವರು ಆ ವಾಸನೆಗೆ ಹೊಂದಿಕೊಂಡು ಬಿಟ್ಟಿದ್ದರಾ ತಿಳಿಯಲಿಲ್ಲ. ಕೆಲ ಸಮಯದ ನಂತರ ನಾನು ಕೂಡ ಆ ವಾಸನೆ ಹೊಂದಿಕೊಂಡುಬಿಟ್ಟೆ ಎಂದು ಅನ್ನಿಸುತ್ತದೆ.
ಮರುದಿನ ನಮ್ಮ ಡೈರೆಕ್ಟರ್ ಬರುವವರು ಇದ್ದರು. ನಾವು ಅವರು ಬರುವ ಮುಂಚೆ ಎಲ್ಲಾ ಕೆಲಸ ಮುಗಿಸಬೇಕಿತ್ತು. ನಾವು ಮೊದಲು ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್ ಕಂಪ್ಯೂಟರೈಸ್ ಮಾಡುವುದಿತ್ತು, ನಿನ್ನೆ ಅದನ್ನು ಮಾಡಿ ಆಗಿತ್ತು. ಆದರೆ ಸೇಲ್ಸ್ ಸ್ಟೇಟ್ಮೆಂಟ್ ಕರೆಕ್ಟ್ ಇಲ್ಲ ಎಂದು ಮಂಜುನಾಥನಿಗೆ ಬೈಯುತ್ತಾ ಇದ್ದರು. ಅದನ್ನು ನಿಮ್ಮ ಕಂಪನೀಯವರೇ ಕೊಡಬೇಕು ಎಂದು ಹೆದರಿಸುತ್ತಾ ಇದ್ದರು. ನಾನು ಹೋಗಿ ಅದನ್ನು ಸರಿಪಡಿಸಿದೆ. ಮಂಜುನಾಥ ತುಂಬಾ ಹೆದರಿದ್ದರು. ಡೇಲೀ ಅಕೌಂಟ್ ಸರಿಪಡಿಸಿದ ಮೇಲೆ ಅಕೌಂಟ್ ಸ್ಟೇಟ್ಮೆಂಟ್ ನಲ್ಲಿ ದುಡ್ಡು ಹೆಚ್ಚಿಗೆ ಬಂದಿತ್ತು. ಅದನ್ನು ನೀವು ನಮಗೆ ಕೊಡಬೇಕು ಎಂದು ನಾನು ದಬಾಯಿಸಿದಾಗ ಸುಮ್ಮನೇ ದಾರಿಗೆ ಬಂದಿದ್ದರು. ಮಂಜುನಾಥ್ ನೌಕರಿ ಬಿಡುವೆ ನನಗೆ ಈ ಜಂಜಾಟ ಸಾಕು ಎಂದು ಮನೆಗೆ ಹೊರಟು ನಿಂತಿದ್ದ. ನಾನು ಅವನಿಗೆ ಇದು ಎಲ್ಲಾ ಸರ್ವೇ ಸಾಮಾನ್ಯ ಎಂದು ಅವನಿಗೆ ತಿಳಿಹೇಳಿದೆ. ಕಡೆಗೆ ಮಂಜುನಾಥ್ ಒಪ್ಪಿಕೊಂಡರು.
ನಾವೆಲ್ಲರೂ ಸೇರಿ ಸಂಜೆಗೆ ಭದ್ರಾವತಿಯಲ್ಲಿ ಇರುವ ಶ್ರೀ ಲಕ್ಷೀ ನರಸಿಂಹ ದೇವಸ್ಥಾನಕ್ಕೆ ಹೋದೆವು. ಬರುವಾಗ ನೀರದೋಸೆ ತಿಂದು ಬಂದೆವು.
ಮರುದಿನ ಬೆಳಿಗ್ಗೆ ನಮ್ಮ ಡೈರೆಕ್ಟರ್ ಬಂದಿದ್ದರು. ಅವರು ನಮಗೆ ಎಷ್ಟು ಡಿಪಾರ್ಟ್ಮೆಂಟ್ ಕಂಪ್ಯೂಟರೈಸ್ ಆಗಿದೆ ಎಂದು ಕೇಳಿದರು. ನಾವು ಬರಿ ಮಾರ್ಕೆಟಿಂಗ್ ಎಂದಾಗ, ಏನು? ಬರೀ ಮಾರ್ಕೆಟಿಂಗ್ ಮತ್ತೆ ಉಳಿದ ಡಿಪಾರ್ಟ್ಮೆಂಟ್ ಎಂದಾಗ. ನಾನು ಅವರು ತಮ್ಮ ಹಳೆಯ ಸಿಸ್ಟಮ್ ಬಿಟ್ಟು ನಮ್ಮ ಸಾಫ್ಟ್ವೇರ್ಗೆ ಹೊಂದಿಕೊಳ್ಳುತ್ತಿಲ್ಲ ಎಂದಾಗ. ನೀವು ಅವರಿಗೆ ನಮ್ಮ ಸಾಫ್ಟ್ವೇರ್ ರುಚಿ ಹಚ್ಚಿಸಬೇಕು(If you want to eat frog, first put it in water and let it swim, afterwards put fire in the down.) ಎಂದು ಹೇಳಿದರು. ನೀವು ಹೀಗೆ ಆದರೆ ಸಂಡೆ ಕೂಡ ಕೆಲಸ ಮಾಡಬೇಕು ಎಂದರು. ಅದಕ್ಕೆ ಹರ್ಷ ಸಂಡೆ ಸರ್ ಎಂದ. ಅದಕ್ಕೆ ನಮ್ಮ ಕಂಪನೀ ಪಾಲಿಸೀ ಏನು ಗೊತ್ತಾ ನಿಮಗೆ Every day is sunday, But sunday is working day ಎಂದು ಹೇಳಿದರು. ನಾವು ತಿಂಡಿಗೆ ಹೊರಡುತ್ತಲಿದ್ದೆವು, ಆಗ ಡೇರೀ ಮ್ಯಾನೇಜರ್ ಭೇಟಿ ಆಯಿತು. ಅವರ ಕ್ಷೇಮ ಸಮಾಚಾರ ಆದ ಮೇಲೆ ಅವರನ್ನು ತಿಂಡಿಗೆ ಆಹ್ವಾನಿಸಿದೇವು. ಅವರು "ನಾನು ರಾಗಾಡ ಅನ್ನ" ತಿಂದು ಬಂದಿದ್ದೇನೆ ಎಂದು ರಾಗದಲ್ಲಿ ಹೇಳಿದರು. ನನಗೆ ಮತ್ತು ನಮ್ಮ ಡೈರೆಕ್ಟರ್ ಗೆ ಅರ್ಥ ಆಗಲಿಲ್ಲ. ಒಬ್ಬರನ್ನೊಬ್ಬರು ಮುಖ ಮುಖ ನೊಡಿಕೊಂಡೆವು. ಅವರು ಹೋದ ನಂತರ ಹರ್ಷನಿಗೆ ಕೇಳಿದಾಗ ನಮಗೆ ತಿಳಿದಿತ್ತು ಅದು ರಾಗಾಡ ಅಲ್ಲ ರಗಡ(ಬೇಜಾನ) ಎಂದು. ಎಲ್ಲರೂಅದು ಕೇಳಿದ ನಂತರ ನಗೆಯಲ್ಲಿ ತೇಲಿದ್ದೆವು.
ಮೀಟಿಂಗ್ ನಲ್ಲಿ ಒಂದು ತಿಂಗಳಲ್ಲಿ ಎರಡು ಡಿಪಾರ್ಟ್ಮೆಂಟ್ ಕಂಪ್ಯೂಟರೈಸ್ ಮಾಡಬೇಕು ಎಂದು ಹೇಳಿದರು. ನನ್ನ ಠಿಕಾಣಿ ಇನ್ನೂ ಒಂದು ವಾರ ಹೆಚ್ಚು ಆಯಿತು. ನಮ್ಮ ಡೈರೆಕ್ಟರ್ ಊರಿಗೆ ಹೊರಟು ಹೋದರು. ನಾನು ಹರ್ಷ ಮತ್ತು ಮಂಜನಾಥ ಮಲಗಿ ಕೊಂಡಿದ್ದೆವು. ಏನೋ ಕಟ್ ಕಟ್ ಶಬ್ದ ನಾನು ಸುಮ್ಮನೇ ಹಾಗೆ ಹೆದರಿ ಚಾದರ್ ಹೊದ್ದಿಕೊಂಡು ಮಲಗಿ ಬಿಟ್ಟೆ. ಮುಂಜಾನೆ ಎದ್ದು ಏನು? ಆ ಶಬ್ದ ಎಂದು ಹರ್ಷನಿಗೆ ಕೇಳಿದೆ. ಅದು ಹುಳಗಳು ಸರ್ ಎಂದ.ಮಂಜುನಾಥ ಅಗಲೆ ಎದ್ದು ಆಫೀಸ್ ಹೊರಟು ನಿಂತಿದ್ದರು. ನಾನು ಮತ್ತೆ ಹರ್ಷ ರೆಡೀ ಆಗಿ ಪ್ರೊಡಕ್ಶನ್ ಡಿಪಾರ್ಟ್ಮೆಂಟ್ ಗೆ ಹೋದೆವು. ಮಂಜುನಾಥ ಅಲ್ಲೇ ಒಂದು ರಿಪೋರ್ಟ್ ಮಾಡುತ್ತಲಿದ್ದರು. ಇವರು ಪ್ರೊಡಕ್ಶನ್ ಡಿಪಾರ್ಟ್ಮೆಂಟ್ ನಲ್ಲಿ ಕೊಡುವ ಮಜ್ಜಿಗೆ, ಪೇಡ ಅಥವಾ ಮೈಸೂರು ಪಾಕ ಸಲುವಾಗಿ ಎಂದು ತಿಳಿದಿದ್ದೆವು. ಆದರೆ ಅವರು ಅಲ್ಲಿ ಹೋಗುತ್ತಾ ಇದ್ದಿದ್ದು ಒಂದು ಸಿಹಿ ಮೊಗವನ್ನು ಸವಿಯಲು ಎಂದು ಆಮೇಲೆ ತಿಳಿಯಿತು. ಎಲ್ಲಕಿಂತ ಮೊದಲು ಪ್ರೊಡಕ್ಶನ್ ಡಿಪಾರ್ಟ್ಮೆಂಟ್ ಕಂಪ್ಯೂಟರೈಸ್ ಆಗಿತ್ತು. ಸಿಹಿ ಮೊಗದ ಹಿಂದಿನ ಪವಾಡ ಕೆಲಸ ಮಾಡಿತ್ತು.
ಟೀಮ್ ಲೀಡರ್ ಆದ ನನಗೆ ಇದರಿಂದ ಶಹಭಾಷ್ ಗಿರಿ ಸಿಕ್ಕಿತ್ತು. ಮತ್ತೆ ಪ್ರೊಕ್ಯೂರ್ಮೆಂಟ್ ಡಿಪಾರ್ಟ್ಮೆಂಟ್ ಕಂಪ್ಯೂಟರೈಸ್ ಮಾಡಿದೆವು. ನಮ್ಮ ಕೆಲಸ ನೋಡಿ ಖುಷಿಯಾದ ಡೇರೀ ಯಲ್ಲಿರುವ ಅಷ್ಟು ಡಿಪಾರ್ಟ್ಮೆಂಟ್ ನವರು ನಮ್ಮದು ಮುಂದೆ ತಮ್ಮದು ಮುಂದೆ ಎಂದು ನಮ್ಮ ಮುಂದೆ ಕ್ಯೂ ನಿಂತಿದ್ದರು.ಎರಡೇ ತಿಂಗಳಲ್ಲಿ ಅಷ್ಟು ಡಿಪಾರ್ಟ್ಮೆಂಟ್ ಕಂಪ್ಯೂಟರೈಸ್ ಮಾಡಿ ಆಗಿತ್ತು. ಅಷ್ಟರಲ್ಲಿ ಮಂಜುನಾಥ ಬೆಂಗಳೂರು ಬಂದು ಸೇರಿದ. ಕೆಲ ದಿನಗಳು ಆದ ಮೇಲೆ ಸಿಹಿ ಮೊಗದ ಚೆಲುವೆಯನ್ನು ಸೆಕ್ಯೂರಿಟೀ ಆಫೀಸರ್ ಮದುವೆ ಕೊಂಡಿದ್ದ. ಮಂಜುನಾಥನಿಗೆ ಇದನ್ನು ಹೇಳಿದಾಗ ತುಂಬಾ ನೊಂದುಕೊಂಡಿದ್ದ. ಏಕೆಂದರೆ ಅವಳಿಗೆ ಮೊದಲೇ ಮದುವೆ ಫಿಕ್ಸ್ ಆಗಿದೆ ಎಂದು ಅಲ್ಲಿಯೇ ಕೆಲಸ ಮಾಡುವ ಶ್ರೀನಿವಾಸ್ ಹೇಳಿದ್ದ. ಶ್ರೀನಿವಾಸ್ ಮದುವೆ ಫಿಕ್ಸ್ ಆಗಿದೆ ಎಂದು ಎಲ್ಲರಲ್ಲಿಯೂ ಹೇಳಿದ್ದ. ಏಕೆಂದರೆ ಅವನಿಗೆ ಅವಳ ಮೇಲೆ ಮನಸ್ಸಿತ್ತು. ಇದು ಶ್ರೀನಿವಾಸ್ ಮಾಡಿದ ಪ್ಲಾನ್.
ಕೆಲಸ ಮುಗಿದ ಮೇಲೆ ನಾನು ಧಾರವಾಡಕ್ಕೆ ಹೊರಟಿದ್ದೆ. ಆಗ ನನಗೆ ಬಸ್ ಸ್ಟ್ಯಾಂಡ್ ವರೆಗೂ ಕಳುಹಿಸಲು ಹರ್ಷ ಬಂದಿದ್ದರು. ಹರ್ಷಗೇ ನಾನು ಬಸ್ ಹತ್ತಿದ ಮೇಲೆ ಬೈ.. ಬೈ.. ಎಂದೆ. ನನ್ನ ಪಕ್ಕದಲ್ಲಿ ಇದ್ದ ಮನುಷ್ಯ ಕುಡಿದು ಬಂದಿದ್ದ. ರೀ ಕನ್ನಡದಲ್ಲಿ ಮಾತನಾಡಿ ಎಂದು ಅಂದ. ನಾನು ಬಾಯೀ ತಪ್ಪಿ ಸಾರೀ ಎಂದೆ. ಮತ್ತೆ ಸುಧಾರಿಸಿ ಕ್ಷಮಿಸಿ ಎಂದು ಹೇಳುವಷ್ಟರಲ್ಲೇ, ಆಯಿತು ಬಿಡಿ ಸಾರೀ ಹೇಳಿದಿರಲ್ಲ ಎಂದ.
ಕಡೆಗೆ ಇದಾದ ಮೂರೇ ತಿಂಗಳಲ್ಲಿ ನಾನು ಕೂಡ ಬೆಂಗಳೂರು ಸೇರಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು, ತಮಾಷೆಗಳು ಎಲ್ಲವೂ ಮನಸಿಗೆ ಮುದನೀಡುತ್ತವೆ.
Monday, October 11, 2010
ಸೀರೆಯಲ್ಲಿರುವ ನೀರೆ ....
ನಾನು ರಾಜ್ಯದ ರಾಜಕೀಯ ವರ್ತಮಾನ ನೋಡುತ್ತಿರಬಹುದು ಎಂದು ಸುಮ್ಮನಿದ್ದೆ. ರೀsss ಬನ್ನಿ ಇಲ್ಲಿ ಎಂದು ಉಲಿದಳು. ನೋಡಿ ಇದು ಏನು ಸಕ್ಕತ್ತಾಗಿದೆ, ಎಂದು ಸೀರೆ ಜಾಹೀರಾತು ತೋರಿಸಿದಳು. ಆಹಾss ಎಂದು ಬಾಯಿ ತೆಗೆದು, ತುಂಬಾ ಸಕ್ಕತ ಆಗಿದ್ದಾಳೆ ಕಣೆ ಎಂದೆ.ರೀ ನಾನು ಹೇಳಿದ್ದು ಸೀರೆ ಬಗ್ಗೆ ಎಂದಳು. ಓsss ನಾನೆಲ್ಲೋ ಸೀರೆಯಲ್ಲಿರುವ ನೀರೆ ಬಗ್ಗೆ ಎಂದುಕೊಂಡೆ ಎಂದೆ. ಸದಾಶಿವನಿಗೆ ಅದೇ ಧ್ಯಾನ ಎಂದು ಅಂದಳು. ನೀವು ನೋಡಿ ತಂದಿದ್ದೀರ ಸೀರೆ, ಈ ತರಹ ಸೀರೆ ಕೊಡಿಸಬೇಕು ಎಂದಳು. ನಾನೇನೋ ತೆಗೆದುಕೊಂಡು ಬರುತ್ತೇನೆ ಕೊಡಲು ಅವಳು ತಯ್ಯಾರ ಇರಬೇಕಲ್ಲ ಎಂದೆ. ಇದೊಂದು ಕಮ್ಮಿ ಆಗಿತ್ತು ನಿಮಗೆ ಎಂದಳು. ರೀ ನಾನೊಂದು ಬ್ಲೌಸ್ ಹೊಲಸಿದ್ದೇನೆ. ಅದಕ್ಕೆ ಮ್ಯಾಚಿಂಗ್ ಒಂದು ಸೀರೆ ಕೊಡಿಸಿ ಎಂದಳು. ಲೇss ನಮ್ಮ ಕಂಪನೀ ಸಂಬಳ ಜೊತೆ ಬೋನಸ್ ಪ್ರತಿ ತಿಂಗಳು ಕೊಟ್ಟರೆ ಗ್ಯಾರಂಟೀ ಕೊಡಿಸುತ್ತೇನೆ ಎಂದೆ. ತುಂಬಾ ಕೋಪ ಮಾಡಿಕೊಂಡು ಬಿಟ್ಟಳು.
ಅದೇನೋ ಗೊತ್ತಿಲ್ಲ, ನನ್ನ ಹೆಂಡತಿ ಮಾತ್ರ ಪ್ರತಿಬಾರಿ ಗಾಂಧಿ ಬಜಾರ್ ಹೋದಾಗ ಸೀರೆ ಅಂಗಡಿಗಳಿಗೆ ಲಗ್ಗೆ ಇಡುತ್ತಾಳೆ. ಆ ಸೀರೆ ಅಂಗಡಿ ಮಾಲೀಕ ಎಷ್ಟು ಪರಿಚಯ ಆಗಿಬಿಟ್ಟಿದ್ದಾನೆ ಎಂದರೆ ದುಡ್ಡು ಇಲ್ಲ ಎಂದರು "ಸರ್ ನಿಮ್ಮ ಉದ್ರೀ ಕಾರ್ಡ್(Credit Card) ಇದೆ ಅಲ್ಲ ಸಾರ್" ಎಂದು ಬಾಯಿತೆಗೆದು ಜೋರಾಗಿ ನಕ್ಕೂ ಸೀರೆ ಕೊಡುತ್ತಾನೆ.
ಮಗ ಟಿವಿ ನೋಡುತ್ತಾ ಕುಳಿತಿದ್ದ. ನನ್ನ ಮಡದಿ ಊರಗೆ ಹೋಗವ ಸಲುವಾಗಿ ಪ್ಯಾಕಿಂಗ್ ನಡೆಸಿದ್ದಳು. ನಾನು ಏನೇ ಇದು ಹೋಗುವದು ನಾಲ್ಕು ದಿವಸಕ್ಕೆ, ಇಷ್ಟೊಂದು ಸೀರೆ ತೆಗೆದುಕೊಂಡು ಹೊರಟಿದ್ದೀಯ? ಎಂದೆ, ರೀ, ಇವು ನಮ್ಮ ಮನೇಲಿ ತೋರಿಸೋಕೆ ಎಂದು ತೆಗೆದುಕೊಂಡು ಹೊರಟಿದ್ದೇನೆ ಎಂದಳು. ನಾನೆಲ್ಲೋ ಒಂದು ಘಂಟೆಗೆ ಒಂದು ಎಂಬ ಲೆಕ್ಕದಲ್ಲಿ ತೆಗೆದುಕೊಂಡು ಹೊರಟಿರುವೆ ಎಂದು ತಿಳಿದುಕೊಂಡಿದ್ದೆ ಎಂದೆ.
ಅಷ್ಟರಲ್ಲಿ ನಮ್ಮ ಮೂರು ವರ್ಷದ ಸುಪುತ್ರ ಎದ್ದು ಬಂದು ಅಪ್ಪ ರಮೇಶ್ - ಸುರೇಶ್ (ಫೈವ್ ಸ್ಟಾರ್) ಜಾಹೀರಾತು ಮಾಡೋಣ ಬಾ ಎಂದ. ನಾನು ರಮೇಶ್ ಎಂದರೆ, ಅವನು ಸುರೇಶ್ ಅನ್ನುತ್ತಾನೆ. ನಾನು ರಮೇಶ್ ಎಂದೆ, ಅವ ತೊದಲಿ ತುರೇಶ್ ಎಂದು ಅಪ್ಪಿಕೊಂಡ. ನನ್ನ ಮಡದಿ ಗಹ ಗಹಿಸಿ ನಗುತ್ತಾ, ತುರೇಶ್ ಅಲ್ಲ ಕಣೋ ಅದು ಸುರೇಶ್ ಎಂದಳು. ಅವಳು ಸುರೇಶ್ ಎಂದರೂ, ನನಗೆ ಅದೇಕೋ "ಸೀರೆ ತಾ" ಅಂದ ಹಾಗೆ ಕೇಳಿಸೋದು.
ಹೋಗುವ ಸಮಯದಲ್ಲಿ "ಬೇರೆ ಬಾಡಿಗೆ ಮನೆ ನೋಡಿ" ಎಂದು ಹೇಳಿದಳು. ಈಗ ಇರುವ ಮನೆಗೆ ಏನು? ಆಗಿದೆಯೇ ಎಂದೆ. ಬಾತ್ರೂಮ್ ಮತ್ತು ಟಾಯ್ಲೆಟ್ ಒಂದೇ ಕಡೆ ಇದೆ ಅಲ್ಲ ಎಂದಳು. ಅದಕ್ಕೆನೀಗ ಎಂದೆ. ಎರಡು ಒಂದ ಕಡೆ ಇದ್ದರೆ ತೊಂದರೆ ಆಗುವದಿಲ್ಲವ ಎಂದಳು. ಮತ್ತೆ ವಾಸ್ತು ಚೆನ್ನಾಗಿ ಇದೆಯಲ್ಲ ಎಂದೆ. ವಾಸ್ತು ಇದೆ, ಎಂದು ಮನೆಯಲ್ಲಿ ಇದ್ದರೆ ಮನೆ ಹವಾಮಾನ ಕೆಡುತ್ತೆ ಎಂದಳು. ಇಬ್ಬರು ನಕ್ಕೆವು. ನಮ್ಮಿಬ್ಬರನ್ನೂ ನೋಡಿ ನಮ್ಮ ಮಗ ಕೂಡ ಮುಗುಳ್ನಗೆ ಬೀರಿದ. ಅದೇ ನಮ್ಮ ಊರಲ್ಲಿ ನೋಡಿ ಎಲ್ಲ ಸೆಪರೇಟ್ ..ಸೆಪರೇಟ್.. ಆಗಿ ಇರುತ್ತೆ ಎಂದಳು. ನಿಮ್ಮ ಊರ ಏನು? ದೊಡ್ಡ ಸಿಂಗಪೂರ?, ನಿಮ್ಮ ಊರಲ್ಲಿ ಒಂದು ಹೇರಿಗೆ ಆಸ್ಪತ್ರೆ ಕೂಡ ಇಲ್ಲ ಎಂದೆ. ಯಾಕೆ? ಬೇಕು ಆಸ್ಪತ್ರೆ ನಮ್ಮ ಊರಲ್ಲಿ ರೋಡೇss ಸರಿ ಇಲ್ಲ. ಆಸ್ಪತ್ರೆಗೆ ಹೋಗುತ್ತಾ.. ಹೋಗುತ್ತಾ ..ಎಲ್ಲ ಮುಗಿದೆ ಹೋಗಿರುತ್ತೆ ಎಂದು ಗಹ ಗಹಿಸಿ ನಕ್ಕಳು.
ಅವರನ್ನು ಬಸ್ ಹತ್ತಿಸಿ, ಮನೆಗೆ ಬರುವ ದಾರಿಯಲ್ಲಿ ಬಜ್ಜಿ, ಬೋಂಡ ತಿಂದು, ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಬಂದೆ. ಅವಳು ಇದ್ದರೆ, ಬರಿ ಎಣ್ಣೆ ಪದಾರ್ಥ ತಿನ್ನುತ್ತೀರ ಎಂದು ಬೈದಿರೋಳು. ಮನೆಗೆ ಬಂದೊಡನೆ ಅದೇಕೋ ಮನಸೆಲ್ಲ ಭಾರವಾದ ಹಾಗೆ ಅನ್ನಿಸಿತು. ಮನೆಯಲ್ಲಿ ಮಗನ ಚೀರಾಟ, ತುಂಟಾಟ, ಅವಳ ನಗು,ಮಾತು, ಜಗಳ, ಬೇಸರ ಮತ್ತು ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ, ಘಮ ಘಮಿಸುವ ಅಡುಗೆ ವಾಸನೆ ಎಲ್ಲವೂ ಮಾಯವಾಗಿತ್ತು. ಎಲ್ಲವನ್ನು ಯೋಚಿಸುತ್ತಾ ಒಬ್ಬನೇ ಫ್ರಿಡ್ಜ್ ನಲ್ಲಿ ಇರುವ ಊಟ ಮುಗಿಸಿ ನಿದ್ದೆಗೆ ಜಾರಿದೆ.
ಎದ್ದೊಡನೆ ಲೇ ಕಾಫೀ ಎಂದೆ. ಎಲ್ಲಿ ಬರಬೇಕು ಕಾಫೀ... ಅವಳೇ ಇಲ್ಲ. ಮತ್ತೆ ಫೋನ್ ರಿಂಗ್ ಆಯಿತು. ರೀ ಮನೆಗೆ ಬಂದು ಮುಟ್ಟಿದ್ದೇನೆ ಎಂದಳು. ಮೊನ್ನೆ ಮಾಡಿದ ಕಾಫೀ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಬಿಸಿ ಮಾಡಿ ಕುಡಿಯಿರಿ ಎಂದು ಕುಹಕ ಮಾತಿನೊಂದಿಗೆ ಫೋನ್ ಕಟ್ ಮಾಡಿದಳು. ನಾನೇ ಅಡುಗೆ ಮನೆ ಎಂಬ ಗುಹೆಗೆ ಈ ಬಾರಿ ಬಲಗಾಲಿಟ್ಟು (ಎಡಗಾಲಿಟ್ಟು ಪ್ರವೇಶಿಸಿದಾಗ ಆದ ಪ್ರತಾಪ ನಿಮಗೆ ಗೊತ್ತೇ ಇದೆ.ನಳ ಪಾಕ್ .... :)) ಹೋಗಿ ಕಾಫೀ... ಕ್ಷಮಿಸಿ ಚಹಾ ಮಾಡಿಕೊಂಡು ಬಂದು ಹೀರಿದೆ.
Thursday, October 7, 2010
ತಲೆ ಹರಟೆ ಶ್ಯಾಮ್ ರಾಯರು....
ಮದುವೆ ಆಗಿಲ್ಲ. ಅದಕ್ಕೆ ಇರಬೇಕು ಅಷ್ಟು ಫ್ರೀ ಆಗಿ ಇರುತ್ತಾರೆ. ಯಾರಾದರೂ ಹರಟೆಗೆ ಸಿಕ್ಕರೆ ಸಾಕು ಎನ್ನುವಂತ ಪ್ರಾಣಿ. ಆದರೆ ಹೇಳುವದು ಕೂಡ ಪೂರ್ತಿ ಇರಲ್ಲ. ನಾನು ಸ್ವಲ್ಪ ಫ್ರೀ ಇದ್ದೇ. ಏಕೆಂದರೆ ಮಡದಿ ತವರು ಮನೆಗೆ ಹೋಗಿದ್ದಳು.
ನಿಮಗೆ ನಮ್ಮ ಅಳಿಯ ರೋಹಿತ್ ಗೊತ್ತಾ? ಎಂದರು.
ಇಲ್ಲ ಎಂದೆ.
ಏನು ಡೆಲಿವರೀ ಮಾಡುತ್ತಾನೆ ಗೊತ್ತಾ? ಎಂದರು.
ಓ ಹೇರಿಗೆ ಡಾಕ್ಟರ್ರಾ? ಎಂದೆ.
ಅಲ್ಲ ಕಣ್ರೀ, ಸೀರಿಯಲ್ ಆಕ್ಟರ್. ಏನ್ರೀ ಅವರೇ ಗೊತಿಲ್ಲ ಎಂದರೆ ನಿಮ್ಮ ಜೊತೆ ಮಾತನಾಡುವುದೆ ವೇಸ್ಟ್ ಎಂದರು.
ಸರಿ ಬಿಡಿ ನಾನು ಬರುತ್ತೇನೆ ಎಂದೆ.
ರೀ, ತಡಿರಿ, ಸಕ್ಕತ್ ಡೈಲಾಗ್ ಡೆಲಿವರೀ ಕಣ್ರೀ ಅವನದೂ ಎಂದು ಮಾತಿಗಿಳಿದರು.
ಆಯಿತಾ? ಎಂದು ಕೇಳಿದರು,
ಏನು ಆಯಿತು? ಎಂದು ಹೇಳಬೇಕು ಊಟನ, ತಿಂಡಿನ? ಮತ್ತಿನೇನೋ ತಿಳಿಯಲಿಲ್ಲ.
ಏನಪ್ಪಾ ಆಗಬೇಕು? ಎಂದಾಗ ಮದುವೆ ಎಂದು ಕೇಳಿದರು.
ಆಗಿದೆ ಎಂದು ಹೇಳಿದೆ. ಎಷ್ಟು ಎಂದು ಕೇಳಿಯಾರು? ಎಂದು, ನಾನೇ ಒಂದು ಮದುವೆ, ಒಂದು ಗಂಡು ಮಗು ಇದೆ ಎಂದು ಹೇಳಿದೆ.
ರೀ, ನನ್ನ ಅಳಿಯನಿಗೆ ಒಂದು ನೋಡಬೇಕು ನೀವು ಬರುತ್ತೀರಾ?. ಜೊತೆಯಾಗುತ್ತೆ ಎಂದರು.
ಏನು? ಸರ್ ಎಂದೆ.
ಹೆಣ್ಣು.. ಸರ್ ಹೆಣ್ಣು.. ನೋಡೋಕೆ ಎಂದರು.
ಒಳ್ಳೇ ಬಿಡಲಾರದ ಕರ್ಮ ಆಯಿತಲ್ಲಾ ಎಂದು ಮನಸಿನಲ್ಲೇ ಅಂದುಕೊಂಡೆ.
ನನಗೆ ತುಂಬಾ ಕೆಲಸ ಇದೆ ನನಗೆ ಬರಲು ಆಗುವದಿಲ್ಲ ಎಂದೆ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದರು. ಹೇಗೂ ನನ್ನ ಮಡದಿ ಊರಲ್ಲಿ ಇಲ್ಲ, ತಿಂಡಿ ಬೇರೆ ಮಾಡಿರಲಿಲ್ಲ ಹೀಗಾಗಿ ಬರುತ್ತೇನೆ ಎಂದೆ. ಆದರೆ ಅವರು ಅಲ್ಲಿ ಹೋದಾಗ ಏನು ಮಾತನಾಡುತ್ತಾರೆ ಎಂಬ ಕಸಿವಿಸಿ ಮನಸ್ಸಿನಲ್ಲಿ ಇದ್ದೇ ಇತ್ತು. ಅವರ ಮನೆಗೆ ಹೋದೆವು. ಹುಡುಗಿಯ ಅಣ್ಣ ನಮಗೆ ಕುಡಿಯಲು ನೀರು ತೆಗೆದುಕೊಂಡು ಬಂದ.
ಹುಡುಗಿಯ ಅಪ್ಪ, ಇವನು ನನ್ನ ಗಂಡಸ ಮಗ ರಾಜು ವಿಪ್ರೋನಲ್ಲಿ ಕೆಲಸ ಮಾಡುತ್ತಾನೆ ಎಂದರು.
ಅಷ್ಟರಲ್ಲಿ ಶ್ಯಾಮ್ ರಾಯರು, ಇವನು ಗಂಡಸು ಮಗಾನಾ? ಎಂದು ಬಿಡಬೇಕೆ.
ನನಗೆ ಕುಡಿದ ಗುಟುಕು ನೀರು ನೆತ್ತಿಗೆ ಹತ್ತುವ ಹಾಗೆ ಜೋರಾಗಿ ನಗು ಬಂದು ಬಿಟ್ಟಿತು.
ಹುಡುಗಿಯ ಅಮ್ಮ ನಮಗೆ ಉಪ್ಪಿಟ್ಟು ಮತ್ತು ಜಿಲೇಬಿ ತಂದು ಕೊಟ್ಟರು. ಹುಡುಗಿ ಅಪ್ಪ ತನ್ನ ಮಡದಿಗೆ ಇನ್ನೂ ಸ್ವಲ್ಪ ಜಿಲೇಬಿ ಹಾಕು ಎಂದು ಹೇಳಿದರು. ಜಿಲೇಬಿ ತುಂಬಾ.. ತುಂಬಾ.. ಚೆನ್ನಾಗಿತ್ತು. ಹೇಗಾದರೂ ಹಾಕಿ ಎಂದು ಹೇಳಿದ್ದಾರೆ, ಐದು ಜಿಲೇಬಿನಾದರೂ ತಿನ್ನಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ದೆ. ಜೆಲೇಬಿ ಹಾಕುವಾಗ ನಮ್ಮ ಶ್ಯಾಮ್ ರಾಯರು ನನಗೆ ಬೇಡ... ಬೇಡ... ಎಂದು ಕೈ ಅಡ್ಡ ತಂದರು. ನನಗೆ ಶ್ಯಾಮ್ ರಾಯರ ಮೇಲೆ ಸಕ್ಕತ್ ಕೋಪ ಬಂದಿತ್ತು. ಏಕೆಂದರೆ, ಕೈ ಅಡ್ಡ ತಂದಿದ್ದು ನನ್ನ ಪ್ಲೇಟ್ ಮೇಲೆ. ಶ್ಯಾಮ್ ರಾಯರ ಪ್ಲೇಟ್ ಗೆ ಎರಡು ಜೆಲೇಬಿ ಹಾಕಿ ಹುಡುಗಿ ಅಮ್ಮ ಹೋಗಿಬಿಟ್ಟರು. ಹೇಗಿದ್ದರು ಬೇಡ ಎಂದಿದ್ದಾರೆ. ನನಗೆ ಕೊಡಬಹುದು ಎಂದು ಯೋಚನೆ ಮಾಡುತ್ತಿದ್ದರೆ, ಆಸಾಮಿ ಅದನ್ನು ತಿಂದು, ಜೆಲೇಬಿ ತುಂಬಾ ಚೆನ್ನಾಗಿವೆ ಎಂದು ಹೊಗಳಿ, ಎರಡು ಜೆಲೇಬಿ ಮನೆಗೆ ಕಟ್ಟಿಸಿಕೊಂಡರು.
ಹಾಗೂ ಹೀಗೂ ಎಲ್ಲ ಶಾಸ್ತ್ರ ಮುಗಿಸಿಕೊಂಡು ಮನೆಗೆ ಬಂದೆವು.
ಮತ್ತೆ ಒಂದು ದಿವಸ ಶ್ಯಾಮ್ ರಾಯರು ನಮ್ಮ ಮನೆಗೆ ಬಂದಿದ್ದರು. ನನ್ನ ಮಡದಿ ಊರಿನಿಂದ ಬಂದಿದ್ದಳು. ಪಾಪ ಹಿರಿಯರು ಬಂದಿದ್ದಾರೆ ಎಂದು, ನಾನು ಬಾಳೆ ಹಣ್ಣನ್ನು ಕೊಡಲು ಹೋದೆ. ನಾನು ಯಾವಾಗಲಾದರೂ ಬಾಳೆ ಹಣ್ಣನ್ನು ತಿನ್ನುವದನ್ನು ನೋಡಿದ್ದೀರಾ? ಎಂದರು. ಇದು ಒಳ್ಳೇ ಕರ್ಮ ಆಯಿತಲ್ಲ ನನಗೆ, ಇವರು ಏನು ತಿನ್ನುತ್ತಾರೆ, ಏನು ಇಲ್ಲ ಎಂದು ನೋಡುವುದು ಎಂದು ಮನಸಿನಲ್ಲೇ ಅಂದುಕೊಂಡೆ. ರೀss ನಿಮಗೆ ಬಾಳೆ ಹಣ್ಣು ಇಷ್ಟ ಇಲ್ಲ ಎಂದು ಮೊದಲೇ ಗೊತ್ತಿದ್ದರೆ, ನಾನೇಕೆ ಅದನ್ನು ನಿಮಗೆ ಕೊಡಲು ಬರುತ್ತಿದ್ದೆ ಎಂದು ಹೇಳಬೇಕು ಅಂದು ಕೊಂಡರು ಹೇಳಲಿಲ್ಲ. ಶ್ಯಾಮ್ ರಾಯರು ನನ್ನ ಮಡದಿಗೆ, ನಿಮಗೆ ಗೊತ್ತಾ, ನಿಮ್ಮ ಮನೆಯವರನ್ನೂ ಕರೆದುಕೊಂಡು ಹೆಣ್ಣು ನೋಡಲು ಹೋಗಿದ್ದೆವು ಎಂದರು. ಮುಂದಿನದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ಅವರ ಫೋನ್ ರಿಂಗ್ ಆಯಿತು. ಮಾತನಾಡುತ್ತಾ ಎದ್ದು ಹೋಗಿಬಿಟ್ಟರು. ಮತ್ತೆ ವಾಪಸ್ ಬರಲೇ ಇಲ್ಲ. ನಾನು ನನ್ನ ಹೆಂಡತಿಗೆ ತಿಳಿ ಹೇಳಿದೆ. ಆದರೆ, ಅದನ್ನು ನಾನು ಅವರ ಬಾಯಿಂದನೆ ಕೇಳಿ, ಆಮೇಲೆ ಖಚಿತ ಪಡಿಸಿಕೊಳ್ಳುತ್ತೇನೆ ಎಂದು ಕೋಪ ಮಾಡಿಕೊಂಡು ಮೌನ ಗೌರಿ ಆಗಿದ್ದಳು. ಹಿರಿಯರು ಹೇಳಿದ್ದಾರೆ "ಮೌನಂ ಸಮ್ಮತಿ ಲಕ್ಷಣಂ" ಅಂತ, ಆದರೆ ನಮ್ಮ ಮನೇಲಿ ಮಾತ್ರ "ಮೌನ ಯುದ್ಧಮ್ ನಿರಂತರಂ". ಅವಳನ್ನು ಒಲಿಸುವ ಸಲುವಾಗಿ "ನಿನ್ನಾ ಸವಿನೆನಪೆ ಮನದಲ್ಲಿ ಆರಾಧನೆ.... ಪ್ರೀತಿಯ ಸವಿಮಾತೆ ಉಪಾಸನೆ" ಎಂದು ಹಾಡಿದೆ. ಅವಳು ಅದೇ ರಾಗದಲ್ಲಿ "ಇಂದು ನಿಮಗೂ ಕೂಡ ಉಪವಾಸನೆ..." ಎಂದು ಹಾಡಿದಳು. ವಾತಾವರಣ ತಿಳಿ ಆಗುವ ಯಾವ ಲಕ್ಷಣ ಕೂಡ ಕಾಣಲಿಲ್ಲ. ಇನ್ನೂ, ನನ್ನನ್ನು ಶ್ಯಾಮ್ ರಾಯರೆ ಕಾಪಾಡಬೇಕು ಎಂದು. "ಕಾಪಾಡು ಶ್ರೀ ಸತ್ಯ ನಾರಾಯಣ..." ಎಂದು ಹಾಡುತ್ತಾ ಶ್ಯಾಮ್ ರಾಯರ ಮನೆ ಕಡೆಗೆ ಹೋದೆ. ಶ್ಯಾಮ್ ರಾಯರ ಮನೆ ಎದುರು ಸಕ್ಕತ್ ಜನ ಜಂಗುಳಿ. ನನಗೆ ಏನಪ್ಪಾ ಬಂತು ಕರ್ಮ. ಶ್ಯಾಮ್ ರಾಯರು .... ಛೇ! ಛೇ! ಹಾಗೆಲ್ಲಾ ಆಗಿರಲಿಕ್ಕಿಲ್ಲ ಎಂದು ಅವರ ಮನೆ ಒಳಗೆ ಹೋದೆ. ಶ್ಯಾಮ್ ರಾಯರ ಅಳಿಯನ ಎಂಗೇಜ್ಮೆಂಟ್ ಇದೆ ಎಂದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟೆ. ಶ್ಯಾಮ್ ರಾಯರು ಮನೆಯವರನ್ನ ಕರೆದುಕೊಂಡು ಬನ್ನಿ ಎಂದು ಹೇಳಿದರು. ಸಕ್ಕತ್ ಖುಶಿಯಿಂದ ಮನೆಗೆ ಬಂದು ನೋಡೇsss ನನ್ನ ಮೇಲೆ ಅನುಮಾನ ಪಡುತ್ತಿದ್ದೆ. ಇವತ್ತು ಅವರ ಅಳಿಯನ ಎಂಗೇಜ್ಮೆಂಟ್ ಕರೆಯುತ್ತಲಿದ್ದಾರೆ ಬಾ ಎಂದೆ.
ಹೋದ ಮೇಲೆ ನನ್ನ ಮಡದಿ "ಇವನ ಎಂಗೇಜ್ಮೆಂಟ್ ಗೆ ಕರೆದು ಕೊಂಡು ಹೋಗಿದ್ದೀರಾ ನಮ್ಮ ಮನೆಯವರನ್ನ" ಎಂದು ಕೇಳಿ ತಿಳಿದ ಮೇಲೆ ನನ್ನ ಮೇಲಿನ ಕೋಪಕ್ಕೆ ತಿಲಾಂಜಲಿ ಹಾಡಿದ್ದಳು .
Wednesday, September 29, 2010
ನಳ ಪಾಕ್ ....
ಕೆಲಸ ಮುಗಿಸಿ ಮನೆಗೆ ಬಂದು ಕೈ ಕಾಲು ತೊಳೆಯಲು ಟವಲ್ ತೆಗೆದುಕೊಂಡೆ. ಅಮ್ಮsss. ನೋಡು ಅಲ್ಲಿ, ಅಪ್ಪ ನಿನ್ನ ಟವಲ್ ತೆಗೆದುಕೊಂಡಿದ್ದಾರೆ ಎಂದ ನನ್ನ ಸುಪುತ್ರ. ಅಷ್ಟಕ್ಕೇ ನನ್ನ ಮಡದಿ ರೀ ನಿಮಗೆ ನನ್ನದೇ ಟವಲ್ ಬೇಕಾ?, ಬೇರೆ ಬೇಕಾದಷ್ಟು ಮನೆಯಲ್ಲಿ ಇವೆ ತೆಗೆದುಕೊಳ್ಳಬಾರದ? ಎಂದು ಉದ್ಗಾರವೆತ್ತಿದಳು. ಲೇ ನಾನು ಸಾಫ್ಟ್ವೇರ್ ಇಂಜಿನಿಯರ್ ಕಣೇ, ಒಳ್ಳೇ ಬಿ.ಬಿ.ಎಂ.ಪಿ ಚರಂಡಿ ಸ್ವಚ್ಛ ಮಾಡುವ ನೌಕರನ ಹಾಗೆ ವರ್ತಿಸುತ್ತೀಯಲ್ಲೇ ಎಂದೆ. ಗಂಡನನ್ನ ಎಷ್ಟು ಗೋಳು ಹೊಯ್ದುಕೊಳ್ಳುತ್ತೀಯ ಎಂದೆ. ಗಂಡ ಎಂದರೆ ಏನು ಎಂದು ತಿಳಿದಿದ್ದೀಯ. ಪತಿಯೇ ಪರರ ದೈವ ಗೊತ್ತಾ? ಎಂದೆ. ಅವಳಿಗೆ ಅರ್ಥ ಆಗಲಿಲ್ಲ :). ಬಡ ಜೀವ ಬದುಕಿತು ಮತ್ತೆ.
ನನ್ನ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಬರೆದಿದ್ದೀರ ಎಂದಳು. ಯಾರು ಹೇಳಿದರು ಎಂದು ಕೇಳಿದೆ. ಮಂಜಣ್ಣ ಮನೆಗೆ ಬಂದಿದ್ದರು ಎಂದಳು. ಲೇ ಮಂಜ ಎಂದು ಮನಸಿನಲ್ಲೇ ಬೈದು ಹಲ್ಲು ಕಡಿದೆ. ಬರೀ ತೆಗಳಿದ್ದು ಅಷ್ಟೇ ಅಲ್ಲ ಕಣೇ, ನಿನ್ನನ್ನು ಹೋಗಳಿದ್ದು ಇದೆ ಎಂದು ಪೆಕರನಂತೆ ಹೇಳಿ ಬಿಟ್ಟೆ. ಏನು ನನ್ನ ತೆಗಳಿ ಲೇಖನ ಬರೀತೀರಾ? ಎಂದಳು. ಪಾಪ ಅವಳಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಇಲ್ಲ ಕಣೇ ನನ್ನ ರಾಣಿ ಹಾಗೆ ಎಲ್ಲ ಮಾಡುತ್ತೆನಾ ಎಂದೆ. ನಿಮ್ಮದು ಗೊತ್ತಿಲ್ಲವ "ಇಲಿ ಬಂತು ಎಂದರೆ ಹುಲಿ ಬಂತು" ಎನ್ನುವ ಹಾಗೆ ನನ್ನ ಬಗ್ಗೆ ಬರೆದಿರುತ್ತೀರ ಎಂದು, ತುಂಬಾ ಕೋಪ ಮಾಡಿಕೊಂಡುಬಿಟ್ಟಳು.
ಪಕ್ಕದ ಮನೆ ಪೂಜ ಏನಾದರೂ ತಿಂಡಿ ಮಾಡಿದ್ದಾಳ ನೋಡು ಎಂದು ಹಾಗೆ ತಮಾಷೆಗೆ ಹೇಳಿದೆ. ಏನು ಉತ್ತರ ಬರಲಿಲ್ಲ. ಏನು ತಿಂಡಿ ಎಂದೆ. ಏನೋ ಪಕ್ಕದ ಮನೆ ಪೂಜ ಮೇಲೆ ಪ್ರೀತಿ ಉಕ್ಕಿ ಹರೀತಾ ಇತ್ತು ಎಂದಳು. ನದಿ ನೀರು ಎಷ್ಟೇ ರಭಸವಾಗಿ ಹರಿದರು ಕೊನೆಗೆ ಸೇರುವದು ಸಾಗರ ತಾನೇ?. ನೀನು ಒಂದು ತರಹ ಸಾಗರ ಇದ್ದ ಹಾಗೆ ಗೊತ್ತಾ ಎಂದು ಮಸ್ಕ ಹೊಡೆದೆ. ಅಂದ್ರೆ ನಾನು ಉಪ್ಪು ನೀರು, ನೀವು ಸಿಹಿ ನೀರಾ.....? ಎಂದು ಮತ್ತಷ್ಟು ಕೋಪಿಸಿಕೊಂಡಳು.
ಕಡೆಗೆ ನಾನೇ ಏನಾದರೂ ತಿಂಡಿ ಮಾಡುತ್ತೇನೆ ಎಂದು ಅಡಿಗೆ ಮನೆ ಎಂಬ ಗುಹೆಯೊಳಗೆ ಎಡಗಾಲಿಟ್ಟೆ. ಲೇ ಅವಲಕ್ಕಿ ಎಲ್ಲೇ? ಎಂದು ಕೂಗಿ ಕೇಳಿದೆ, ಏನು ಉತ್ತರ ಬರಲಿಲ್ಲ. ಕಡೆಗೆ ನಾನೇ ಹುಡುಕಲು ಶುರು ಮಾಡಿದೆ. ಅದೇನೋ ನಮ್ಮ ಗಂಗಾವತಿ ಬೀಚಿ ಎಂದೆ ಪ್ರಸಿದ್ದಿಯಾದ ಶ್ರೀ ಪ್ರಾಣೇಶ್ ಹೇಳುತ್ತಾರಲ್ಲ "ಡಬ್ಬಿ ಮ್ಯಾಲೆ ಡಬ್ಬಿ... ಡಬ್ಬಿ ಮ್ಯಾಲೆ ಡಬ್ಬಿ" ಎಂದು, ಹಾಗೆ "ಡಬ್ಬಿ ಒಳಗೆ ಡಬ್ಬಿ...ಡಬ್ಬಿ ಒಳಗೆ ಡಬ್ಬಿ" ಹಾಗೆ ಇತ್ತು. ಇದನ್ನು ನೋಡಿದರೆ ನಮ್ಮ ಪ್ರಾಣೇಶ್ ಅವರು ಕೂಡ ಬ್ಯಾಲೆನ್ಸ್ ತಪ್ಪಿ ಬೀಳಬೇಕು ಅಷ್ಟು ಡಬ್ಬಿ ತೆಗೆದ ಮೇಲೆ ಚಿಕ್ಕ ಅವಲಕ್ಕಿ ಪ್ಯಾಕೆಟ್ ಸಿಕ್ಕಿತು. ಅದನ್ನು ನೋಡಿದರೆ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇತ್ತು.
ಚಿಕ್ಕವಾನಿದ್ದಾಗ ಕೂಡ ಹೀಗೆ ನಳ ಪಾಕ್ ಮಾಡುತ್ತಿದ್ದೆ. ಆಗ ಅಮ್ಮ ಎಷ್ಟು ಎಣ್ಣೆ ಹಾಕುತ್ತಿ ಎಂದು ಬೈಯುತ್ತಿದ್ದಳು.
ನಾನು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಎಂದು ಹಾಡುತ್ತಾ, ಎಲ್ಲ ಸಾಮಾನುಗಳನ್ನು ಹುಡುಕುತ್ತಾ ಇದ್ದೆ. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ. ನಾನು ಹುಡುಕಿದಷ್ಟು ಯಾರಾದರೂ ಹುಡುಕಿದ್ದರೆ, ಕೊಲಂಬಸ್ ಹುಡುಕಿದ ಹಾಗೆ ಬೇರೆ ಒಂದು ದೇಶವನ್ನು ಹುಡುಕಬಹುದಿತ್ತು. ನಿಜ ಕಣ್ರೀ ಅದೇನೋ ಹೇಳುತ್ತಾರಲ್ಲ ಗಂಡಸರ ಜುಟ್ಟು ಜನಿವಾರ ಎಲ್ಲ ಹೆಂಗಸರ ಕೈಯಲ್ಲಿ ಎಂದು, ಅದು ನಿಜ ಅನ್ನಿಸಿತು. ಕಡೆಗೂ ಏನು ಸಿಗದೆ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿಂದೆ. ಏನು ಸಾಹೇಬ್ರ ಪಾಕ ಹೇಗಿದೆ ನೋಡುವಾ? ಎಂದು ಬಂದು ನನ್ನನ್ನು ಹೀಯಾಳಿಸಿದಳು. ನೀನು ಮಾಡಿದ ಅವಲಕ್ಕಿ ತುಂಬಾ ಚೆನ್ನಾಗಿದೆ. ಸಕತ್.. ಮಸ್ತ..ಎಂದು ಇದೆ ಚಾನ್ಸ್ ಎಂದು ಅವಳನ್ನು ಮತ್ತಷ್ಟು ಮಸ್ಕ ಹೊಡೆದೆ. ಅದಕ್ಕೆ ಅವಳು ಅವಲಕ್ಕಿ ಅಂಗಡಿ ಇಂದ ತಂದಿದ್ದು ಅದಕ್ಕೆ ವಗ್ಗರಣೆ ಮತ್ತು ಏನು ಹಾಕಿರಲಿಲ್ಲ. ಅದು ನಾನು ಮಾಡಿದ ತಿಂಡಿನಾ? ಎಂದು ನಗುತ್ತಾ ಹುಬ್ಬು ಹಾರಿಸಿದಳು. ನಾನು ಒಂದು ಮುಗುಳ್ನಗೆ ಬೀರಿದೆ. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ..,ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ..ನಿನ್ನ ಹೋಲುವರಾರಿಲ್ಲ.. ಎಂದು ಹಾಡುತ್ತಾ ಅಡುಗೆ ಮನೆಯಿಂದ ಹೊರಗಡೆ ಬಂದೆ.
ಸಧ್ಯ ನನ್ನ ಪ್ರತಾಪ ಇಷ್ಟಕ್ಕೆ ಮುಗೀತು. ಇಲ್ಲ ಅಂದ್ರೆ ಒಂದು ದಿನ ನಳ - ಭೀಮ ಪಾಕ್ ದ ಹಾಗೆ ಗೋಪಾಲ್ ಪಾಕ್ ಕೂಡ ಇರುತಿತ್ತು (ಧಾರವಾಡದಲ್ಲಿ ಸಿಗುವ ಮೈಸೂರ್ ರಾಕ್ ಕ್ಷಮಿಸಿ ಮೈಸೂರ್ ಪಾಕ್ ಹಾಗೆ). ಅಡುಗೆ ಮನೆ ವ್ಯವಹಾರ ಎಲ್ಲ ಹೆಂಡತಿಗೆ ಸೈ ಎಂದು ಅನ್ನಿಸಿತು. ಭೀಮ ಮತ್ತು ನಳರನ್ನು ಬಿಟ್ಟು. ಭೀಮನಿಗೆ ಆವಾಗ, ಈವಾಗ ನನ್ನ ಹಾಗೆ ಬಾಯೀ ಆಡಿಸಲು ಏನಾದರೂ ಬೇಕು ಎಂದು ಅಡುಗೆ ಮನೆ ವ್ಯವಹಾರದಲ್ಲಿ ಕೈ ಹಾಕಿರಬಹುದು. ನಾನು ಕೂಡ ಆವಾಗ, ಈವಾಗ ಬಾಯೀ ಆಡಿಸುತ್ತಾನೆ ಇರುತ್ತೇನೆ. ಆದರೆ, ಎಲ್ಲವೂ ನನ್ನ ಮಡದಿಯ ಮಹಿಮೆ ಇಂದ ಮಾತ್ರ....:).
Friday, September 24, 2010
ಹಲ್ಲುಕಿರಿ (ಹಲಕಾ ರೀ...)....ಎಂಬ ಕಿರಿ ಕಿರಿ
ಹೇಗಿದ್ದರು ಪಕ್ಕದ ಮನೆ ಪೂಜ ಏಳುವದು ಲೇಟ್ ಎಂದು ನನಗೆ ಗೊತ್ತು. ಕಾಫೀ ಆದ ಮೇಲೆ ಪಕ್ಕದ ಮನೆ ಪೂಜ ತರಿಸುವ ಪೇಪರ್ ಬೇಗನೆ ಎದ್ದ ನಾನು ಹಾಗೆ ನೋಡಿ ಮತ್ತೆ ಅದೇ ಜಾಗದಲ್ಲಿ ಇಟ್ಟು ಬಂದು ಬಿಡುತ್ತಿದ್ದೆ. ಆದರೆ ಇವತ್ತು ಏನೋ ಗ್ರಹಚಾರ ಕೆಟ್ಟಿತ್ತು. ಪೇಪರ್ ತೆಗುದು ಕೊಂಡೆ, ಅಷ್ಟರಲ್ಲೇ ಪೂಜ ಬಾಗಿಲು ತೆಗೆದು ಬಿಟ್ಟಳು. ನಾನು ಪೇಪರ್ ಅವಳಿಗೆ ಕೊಟ್ಟು ಹಾಗೆ ಹಲ್ಲು ಕಿರಿದೆ. ಹಲ್ಲು ಕಿರಿದಿದ್ದು ನಾನೇ ಆದರೂ ಹಾವಿನಂತೆ ಬುಸುಗುಟ್ಟಿದ್ದು ಅವಳು.
ನನಗೆ ಕೋಪ ಬಂದಿತ್ತು. ಅವಳು ಬುಸುಗುಟ್ಟಿದ್ದಕ್ಕೆ ಅಲ್ಲವೇ ಅಲ್ಲ. ಅವಳು ಬುಸುಗುಟ್ಟಿದನ್ನು ನನ್ನ ಮಡದಿ ನೋಡಿದ್ದಕ್ಕೆ. ಈಗ ನಗುವ ಸರದಿ ನನ್ನ ಮಡದಿಯದು, ನಾನು ಎಷ್ಟು ಬಾರಿ ಹೇಳಿಲ್ಲ ಅವಳ ಪೇಪರ್ ನೋಡ ಬೇಡಿ ಎಂದು. ಮನೆಗೆ ಪೇಪರ್ ಹಾಕಿಸ ಬರದೇ ಎಂದು ಅಂದಳು. ಅದಕ್ಕೆ ವೇದಾಂತಿಯ ಹಾಗೆ ಅದಕ್ಕೆ ಹೇಳೋದು "ಪ್ರಥಮ ಚುಂಬನಮ್ ದಂತ ಭಗ್ನಮ್" ಎಂದು ಅಂದಳು. ಎಷ್ಟು ಚೆನ್ನಾಗಿ ನನ್ನ ಅರ್ಥ ಮಾಡಿಕೊಂಡಿದ್ದೀಯೆ ನನ್ನ ರಾಣಿ ಎಂದು ಗಹ ಗಹಿಸಿ ನಗಹತ್ತಿದೆ. ಅವಳಿಗೆ ಅರ್ಥ ಆಗಲಿಲ್ಲ. ಏನು ನಗುತ್ತೀರಾ?. ನಿಮ್ಮ ಹಳದಿ ಹಲ್ಲು ಕಾಣಿಸುತ್ತಾ ಇವೆ ನೋಡಿ ಎಂದಳು. ನಗಬೇಕಮ್ಮ ನಗಬೇಕು ಎಲ್ಲರ ನಗಿಸುತ ನಗಬೇಕು ....ಇದೆ ತಾನೇ ಜೀವನ. ನಗೋಕೆ ಬೇಕಾಗಿಲ್ಲ ನಗ-ನಾಣ್ಯ. ನಗದ ಮನುಷ್ಯನಿಗೆ ಏನೋ ದೊಡ್ಡ ಕಾಯಿಲೆ ಇದ್ದ ಹಾಗೆ ಗೊತ್ತಾ ಎಂದು ಹೇಳಿದೆ. ಡಾ ರಾಜಕುಮಾರ್ ಅವರ ಹಾಡು ಕೇಳಿಲ್ಲವಾ "ನಗು ನಗುತಾ ನಲಿ ನಲಿ" ಎಂದು.ಮತ್ತೆ ಡಿ.ವಿ.ಜಿ ಅವರು ಹೇಳಿಲ್ಲವೇ
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।
ನಾನು ಹಲ್ಲು ಕಿರಿದರು ಕೆಲ ಜನ ಅಪಾರ್ಥ ಮಾಡಿ ಕೊಳ್ಳುತ್ತಾರೆ. ನಾನು ಧಾರವಾಡದಲ್ಲಿ ಇರುವಾಗ ಹಾಗೆ ನಗುತ್ತಾ ದಾರಿಯಲ್ಲಿ ಬರುತ್ತಿದ್ದೆ. ಆಗ ಪಕ್ಕದ ಬೀದಿಯ ಸುನೀತ ನನ್ನನ್ನೇ ನೋಡಿ ನಗುತ್ತಿದ್ದಾನೆ ಎಂದು ಭಾವಿಸಿ, ಅವರ ಅಪ್ಪನನ್ನು ಕರೆದು "ನೋಡು ಅಪ್ಪ ಆ ಹುಡುಗ ನನ್ನ ನೋಡಿ ಹಲ್ಲು ಕಿರಿಯುತ್ತಿದ್ದಾನೆ" ಎಂದು ಹೇಳಿದ್ದಳು. "ಏನೋsss ಹಲಕಾ ನನ್ನ ಮಗಳ ನೋಡಿ ಹಲ್ಲು ಕಿರಿತಿ" ಎಂದು ಬೈದು ಬಿಟ್ಟಿದ್ದ. ಹಲ್ಲು ಕಿರಿದು ಹಲಕಾ ಎಂದು ಬೈಸಿ ಕೊಂಡುವನು ನಾನೇ ಮೊದಲನೆಯವನು. ಏನು ನಿಮ್ಮ ಮಗಳು ಏನು ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಮಂಗವೊ ಎಂದು ಕೇಳಬೇಕೆಂದು ಕೊಂಡರು ಕೇಳಲಿಲ್ಲ. ಮುಂದೆ ಕೆಲ ದಿನಗಳ ನಂತರ ಬ್ಯಾಡರ ಒಣಿ ಉಡಾಳ್ ರಾಜಾ ಜೊತೆ ಅಲ್ಲೇ, ಇಲ್ಲೇ ಹಲ್ಲು ಕಿರೀತಾ ತಿರುಗುತ್ತಾ ಇದ್ದಳು ಸುನೀತ.
ಪಾರ್ಕ್ ನಲ್ಲಿ ಕೆಲವರು ಮುಂಜಾನೆ ಎದ್ದ ಕೂಡಲೇ ಹ್ಹ ಹ್ಹ ಹ್ಹ ಎಂದು ನಗುವ ವ್ಯಾಯಾಮ ಮಾಡುತ್ತಾರೆ.ಆದರೆ ಉಳಿದ ಸಮಯದಲ್ಲಿ ಮಾತ್ರ ಮುಖ ಸಿಂಡರಿಸಿಕೊಂಡೆ "ಆನೆ ದಂತ ತೋರಿಸೋಕೆ ಬೇರೆ , ತಿನ್ನೋಕೆ ಬೇರೆ" ತರಹ ಇರುತ್ತಾರೆ. ಅದನ್ನು ನೋಡಿ ನಮ್ಮ ಬೀದಿ ನಾಯಿ ಓsss....ಎಂದು ತಾನು ನಗುತ್ತದೆ ಕ್ಷಮಿಸಿ ಅಳುತ್ತದೆ.
ನಿಮಗೆ ಕೆಲಸದಲ್ಲಿ ಸೀರೀಯಸ್ ನೆಸ್ ಸ್ವಲ್ಪಾನೂ ಇಲ್ಲ ಎಂದು ನಾನು ಹಳೆಯ ಕಂಪನೀಯ ಬಾಸ್ ಬಳಿ ಬೈಸಿಕೊಂಡಿದ್ದು ಎಷ್ಟು ಬಾರಿ ನನಗೆ ಲೆಕ್ಕವಿಲ್ಲ. ಸೀರೀಯಸ್ ಆಗಿ ಕೆಲಸ ಮಾಡಿದರೆ ಪರಿಣಾಮ ಚೆನ್ನಾಗಿ ಇರುತ್ತೆ ಎನ್ನುವ ನಂಬಿಕೆ ನನಗೆ ಇಲ್ಲ. ಅದು ನಮ್ಮ ಬಾಸ್ ಹೇಗೆ ತಿಳೀಬೇಕು. ಗೂಬೆ ಮುಂಡೇದು ಯಾವತ್ತೂ ಮುಖ ಸಿಂಡರಿಸಿಕೊಂಡೆ ಇರುತಿತ್ತು ಎಂದೆ. ನನ್ನ ಹಳೆಯ ಪೂರಾಣವನ್ನು ಕೇಳಿ ಒಂದು ಮುಗುಳ್ನಗೆ ಬೀರಿ ಅಡುಗೆ ಮನೆಗೆ ಹೊರಟು ಹೋದಳು ನನ್ನ ಮಡದಿ.
ಲೇ ಇವತ್ತು ಡ್ರಮ್ ಸ್ಟಿಕ್ ಹಾಕಿ ಸಾಂಬಾರ್ ಮಾಡೇ ಎಂದೆ. ಡ್ರಮ್ ಹಾಕಿ ಚಿಕ್ಕ ಪಾತ್ರೆಲಿ ಸಾಂಬಾರ್ ಮಾಡೋಕೆ ಬರಲ್ಲ. ಬೇಕಾದರೆ ನೀರು ಕಾಯಿಸಲು ಇಟ್ಟ ಸ್ಟಿಕ್ ಹಾಕಿ ಮಾಡುತ್ತೇನೆ ಎಂದು ತರಲೆ ಮಾತು ಆಡಿದಳು.ಅದು ಬೇರೆ ನಿಮಗೆ ಸಾಂಬಾರ್ ನಾಳೆ ಬಿಸಿ ಬೇಳೆ ಬಾತ್ ಮಾಡೋಕ್ಕೆ ಬೇಕಾಗುತ್ತೆ ಎಂದಳು.
ಲೇ ಸ್ವಲ್ಪ ಬಿಸಿಲು ಕಾಯಿಸೋಕೆ ಹೋಗುತ್ತೇನೆ ಎಂದೆ. ಬಿಸಿಲು ನೀವೇನೂ ಕಾಯಿಸೋದು ಮೊದಲು ನೀರು ಕಾಯಿಸಿ ಎಂದಳು. ಅವಳು ಹೇಳಿದ ಮಾತು ಕೇಳಿ ನನ್ನ ಗೆಳೆಯ ಹೇಳುವ " ಆಜ್ ಧೂಪ್ ಖಾನಾ ಹೈ" ಎಂಬ ಮಾತು ನೆನಪು ಆಯಿತು. ಅವನು ಬಿಸಿಲು ಹೇಗೆ ತಿನ್ನುತ್ತಾನೆ ಎಂದು.
Tuesday, September 21, 2010
ಸ್ಪೆಶಲ್ ತಿಂಡಿ....
ಕಡೆಗೆ ಏನಾದರೂ ಸ್ಪೆಶಲ್ ತಿಂಡಿ ಮಾಡೇsss ಎಂದು ನನ್ನ ಮಡದಿಗೆ ಹೇಳಿದೆ. ನೀವು ಆಗಲೇ ಮಾಡಿ ಮುಗಿಸಿದ್ದೀರ ಎಂದು ಕೀಟಲೆ ಮಾತು ಆಡಿದಳು. ನೀವು ಈಗ ಹೇಳಿದರೆ ಹೇಗೆ?. ಮೊದಲೇ ಹೇಳಬೇಕು ಏನಾದರೂ ಮಾಡುತ್ತಿದ್ದೆ ಎಂದಳು. ಉಪ್ಪಿಟ್ಟು ರೆಡಿ ಮಾಡಿ ಆಗಿದೆ ತಿನ್ನಿ ಎಂದಳು. ಈ ಭಾನುವಾರ ಕೂಡ ಉಪ್ಪಿಟ್ಟು ಎಂದು ಮುಖ ಕಿಚಾಯಿಸಿದೆ. ಏನಾದರೂ ಹೊಟೆಲ್ ನಿಂದ ತರುತ್ತೇನೆ ಎಂದು ಹೇಳಿದೆ. ನನ್ನ ಮಡದಿಗೆ ಹೊಟೆಲ್ ಎಂಬ ಶಬ್ದ ಕೇಳಿ ತುಂಬಾ ಕೋಪ ಬಂದಿತ್ತು. ನೋಡಿ ಪಕ್ಕದ ಮನೆ ಪೂಜ ದಿನಾಲೂ ತಾನೇ ಮಾಡಿಕೊಂಡು ತಿನ್ನುತ್ತಾಳೆ ಹೊಟೇಲಿಗೆ ಹೋಗಿರೋದೇ ನೋಡಿಲ್ಲ ಎಂದಳು. ನನಗೆ ಕೂಡ ಹೊಟೆಲ್ ಹೋಗುವ ಇಷ್ಟ ಇಲ್ಲ, ಆದರೆ ಪೂಜ ತಾನು ಮಾಡಿದ ತಿಂಡಿ ನನಗೆ ಕೊಡಬೇಕಲ್ಲ ಎಂದೆ. ಇದು ಒಂದು ಬಾಕಿ ಇತ್ತು ಎಂದು, ನನ್ನ ಮಡದಿ ಕೋಪದಿಂದ ಅಡುಗೆ ಮನೆಗೆ ಹೊರಟು ಹೋದಳು.
ಅವಳನ್ನು ರಮಿಸಲು ಅಡುಗೆ ಮನೆಗೆ ಹೋದೆ. ಹೆಂಡತಿ ತನ್ನ ಓಘ ಬದಲಿಸಿ ಕೋಪದಿಂದ ಅಂದಳು .
ಮದುವೆ ಆಗಿ ಆಯಿತು ಐದು ವರ್ಷ
ಇನ್ನೂ ಕಾಣಲಿಲ್ಲ ಹೊಸ ಮನೆ ಹರ್ಷ
ನಾನು ಕೇಳುದ್ದು ಬರಿ ತಿಂಡಿ ಮಾತ್ರ ಎಂದು ಅವಳನ್ನು ಒಲಿಸುವ ಸಲುವಾಗಿ ಅಂದೆ...
ನನ್ನ ಹೃದಯ ಅರಮನೆ ಬೇಡವಾಗೀತೆ ಚಿನ್ನ
ಅದರಲ್ಲಿ ಇಟ್ಟು ಆರಾಧಿಸುವೆ ಅನುದಿನವೂ ನಿನ್ನ
ಚಿನ್ನ.. ರನ್ನ.. ಎಂದು ಮಸ್ಕಾ ಹೊಡೆದಿದ್ದು ಸಾಕು. ನಾನು ಹೋಗಿ ಏನಾದರೂ ತಿಂಡಿ ಮಾಡಿ ತರುತ್ತೇನೆ ಎಂದು ಅಡುಗೆ ಮನೆಗೆ ಹೊರಟು ಹೋದಳು. ನಾನು ಠೀವಿ ಇಂದ ಹೊರಬಂದು ಟಿ.ವಿ. ರಿಮೋಟ್ ತಿವಿದೆ. ಕೆಲ ಸಮಯದ ನಂತರ ನನಗೆ ಎಂದು ನನ್ನ ಮಡದಿ ಬಿಸಿ ಬೇಳೆ ಬಾತ್ ಮಾಡಿ ತಂದಳು. ತುಂಬಾ ಚೆನ್ನಾಗಿ ಇತ್ತು. ನನ್ನ ಹೆಂಡತಿಗೆ ಕೇಳಿದೆ ಇಷ್ಟು ಬೇಗ ತುಂಬಾ ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಹೋಗಳಿದೆ. ನನ್ನ ಮಡದಿ ಹಿರಿ ಹಿರಿ ಹಿಗ್ಗಿದ್ದಳು. ಅವಳನ್ನು ಇಂಪ್ರೆಸ್ ಮಾಡುವ ಸಲುವಾಗಿ ನಾನೇ ನೆಲವನ್ನು ಕ್ಲೀನ್ ಮಾಡಿದೆ. ಅಷ್ಟರಲ್ಲಿ ನನ್ನ ಮಡದಿ ನೀವು ಹೀಗೆ ಕ್ಲೀನ್ ಮಾಡಿದರೆ ನಾನು ಆ ತುದಿಗೆ ಹೋಗಬೇಕೆಂದರೆ ಒಂದು ದೋಣಿ ಬೇಕಾಗುತ್ತೆ ಎಂದು ತಮಾಷೆ ಮಾಡಿದಳು. ಏಕೆಂದರೆ ನಾನು ಅಷ್ಟು ನೀರು ಹಾಕಿ ಒರೆಸಿದ್ದೆ.
ಆಗ ನನ್ನ ಮಡದಿ ರೀssss... ಎಂದು ರಾಗ ಎಳೆಯ ತೊಡಗಿದಳು. ಏನು? ಎಂದಾಗ. ಶೆಟ್ಟರ ಅಂಗಡೀಲಿ ಒಂದು ಹೊಸ ಸೀರೆ ಬಂದಿದೆ. ನನಗೆ ಕೊಡಿಸಿ ಎಂದು ಹಟ ಹಿಡಿದಳು. ಆಯಿತು ನೀನು ಇಷ್ಟು ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಸಂಜೆಗೆ ಅವಳಿಗೆ ಸೀರೆ ಕೊಡಿಸಿಕೊಂಡು ಬರುವ ದಾರಿಯಲ್ಲಿ ಗೋಪಾಲನ್ ಮಾಲ್ ನೋಡಿದಳು. ರೀ ಗೋಪಾಲನ್ ಮಾಲ್ ಗೆ ಹೋಗೋಣ ಎಂದಳು. ಅದನ್ನು ಕೇಳಿ ನನ್ನ ಮಗ ಜೋರಾಗಿ ನಗಹತ್ತಿದ. ಅವನ ನಗು ನೋಡಿ ನಾವು ಕೂಡ ನಕ್ಕೆವು. ಕಡೆಗೆ ಗೋಪಾಲನ್ ಮಾಲ್ ಗೆ ಕರೆದು ಕೊಂಡು ಹೋಗಿ ಈ ಗೋಪಾಲನ ಕಿಸಿಯಲ್ಲಿರುವ ೧೦೦೦ ಮಾಲ್(ರೂ.) ಖಾಲಿ ಮಾಡಿ ಮನೆಗೆ ಬಂದೆವು.
ಅನಂತರ ಮನೆಗೆ ಬಂದ ಮೇಲೆ ನಿಮಗೆ ಒಂದು ವಿಷಯ ಗೊತ್ತಾ?. ನಾನು ಬೆಳಿಗ್ಗೆ, ನಿನ್ನೆ ಉಳಿದಿರೋ ಸಾರು,ಪಲ್ಯ ಮತ್ತು ಅನ್ನ ಹಾಕಿ ಬಿಸಿ ಬೇಳೆ ಬಾತ್ ಮಾಡಿದ್ದು ಎಂದಳು. ಹೇಗಿದೆ ನನ್ನ ಸ್ಪೆಶಲ್ ತಿಂಡಿ ಎಂದು ಹುಬ್ಬು ಹಾರಿಸಿದಳು.
ನಾನು ಫ್ರಿಡ್ಜ್ ಕಂಡು ಹಿಡಿದ ಮಹಾಶಯನಿಗೆ ಹಿಡಿ ಶಾಪ ಹಾಕಿದೆ. ಆದರೂ ಮಡದಿ ಮಾಡಿದ ಹೊಸ ರುಚಿ ಬಿಸಿ ಬೇಳೆ ಬಾತ್ ಚೆನ್ನಾಗೆ ಇತ್ತು. ಆದರೆ ಎರಡೆರಡು ಸ್ಪೆಶಲ್ ತಿಂಡಿ ತಿಂದ ನನಗೆ ಅವಳು ಮಾಡಿದ ಬಿಸಿ ಬೇಳೆ ಬಾತ್ ತಿನ್ನುವಾಗ ಮಾತ್ರ ಕಪಾಳ ಮತ್ತು ಗದ್ದ ಉರಿಯುತಿತ್ತು.
Thursday, September 2, 2010
ನನಗೆ ಮದಿರೆ ಬೇಡ ಸ್ವಾಮಿ....
ಶ್ಯಾಮ್ ಮನೆಗೆ ಬಂದೆವು. ಶ್ಯಾಮ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದ. ಕೆಲ ಹನಿ ಹೊಟ್ಟೆಗೆ ಇಳಿದ ಮೇಲೆ, ನಮ್ಮ ಮಂಜಿನ ಹನಿಗಳು (ಮಂಜನ ಮಾತುಗಳು) ಶುರು ಆದವು. ಮಂಜ ಎಡಬಿಡದೆ ಮಾತನಾಡುತ್ತಿದ್ದ.ಮಂಜನ ಸರದಿ ಮುಗಿದ ಮೇಲೆ,ಶ್ಯಾಮ್ ತನ್ನ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹೇಳಹತ್ತಿದ.
ಮೊದಲು ನಾನು ನೋಡ ಹೋಗಿದ್ದು ರಾಜೇಶ್ವರಿ ಎನ್ನುವ ದಾವಣಗೆರೆ ಹುಡಿಗಿನ. ಅವಳು ತುಂಬಾ ಸುಂದರವಾಗಿದ್ದಳು ಎಂದ. ನಿಜವಾಗಿಯೂ ಕನಸಿನ ರಾಣಿ ಎಂದ. ಯಾರ ಕನಸಿನ ನಿನ್ನದಾ ಅಥವಾ? ಬೇರೆಯವರ ಕನಸಿನ ರಾಣಿನ? ಎಂದ ಮಂಜ. ಮತ್ತೆ ಏಕೆ? ಮದುವೆ ಆಗಲಿಲ್ಲ ಎಂದು ಕೇಳಿದ. ನನ್ನ ಅಪ್ಪ ಅವಳಿಗೆ ಹಾಡು ಹೇಳಲು ಹೇಳಿದರು ಅವಳು ತುಂಬಾ ಚೆನ್ನಾಗಿ ಹಾಡಿದಳು. ಅವಳ ಸರದಿ ಆದ ಮೇಲೆ ನಾನು ಒಂದು ಹಾಡು ಹೇಳುತ್ತೇನೆ ಎಂದು ಹಾಡು ಹೇಳಿದೆ ಅಷ್ಟೇ. ಅವಳು ನನ್ನನ್ನು ವರಿಸಲಿಲ್ಲ ಎಂದ.
ಮಂದೆ ಶಾಂಭವಿ ಎನ್ನುವ ಬೆಳಗಾವಿ ಹುಡುಗಿ ನೋಡಿದೆ. ಅವಳು ತುಂಬಾ ಚೆನ್ನಾಗಿ ಇದ್ದಳು ಎಂದ. ಅವಳು ಎಲ್ಲರಿಗೂ ನಮಸ್ಕಾರ ಮಾಡುತ್ತಾ, ನನಗು ಬಂದು ನಮಸ್ಕಾರ ಮಾಡುತ್ತಿದ್ದಾಗ, ನಾನು ನನಗೆ ಏಕೆ? ಎಂದು ಜಿಗಿದು ಸೋಫಾ ಮೇಲೆ ಕುಳಿತೆ ಅಷ್ಟೇ. ಅವಳು ನನ್ನನ್ನು ಒಪ್ಪಲಿಲ್ಲ ಎಂದ.
ಮುಂದೆ ಭಾರತಿ ನಮ್ಮ ಊರಿನ ಹುಡುಗಿನ ನೋಡಿದೆ. ಅವಳು ಸ್ವಲ್ಪ ಕಪ್ಪು ಆದರೆ ಮುಖದಲ್ಲಿ ಕಳೆ ಇತ್ತು. ಅವಳ ಜೊತೆ ಮಾತನಾಡುವಾಗ ನಾನು ಡೈರೆಕ್ಟ್ ಆಗಿ ಐ ಲೈಕ್ ಯೂ. ನಿನ್ನ ಇಚ್ಛೆ ಏನು ಎಂದು ಕೇಳಿದ್ದಕ್ಕಾಗಿ ಒಪ್ಪಲಿಲ್ಲ ಎಂದ. ಹೀಗೆ ತುಂಬಾ ಹೆಣ್ಣುಗಳನ್ನು ನೋಡಿದ್ದೆ. ಅನಂತರ ಮದುವೆ ಯೋಚನೇಲಿ ಕೂದಲೆಲ್ಲ ಉದಿರಿದವು. ಈಗೀಗ ಬರೋ ಹುಡಿಗಿರು ನನ್ನನ್ನು ಯಾರು ಒಪ್ಪಿರಲಿಲ್ಲ. ಆಮೇಲೆ ಮದುವೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ನೀವು ನನಗೆ ತುಂಬಾ ಒಳ್ಳೆಯ ಹೆಂಡತಿ ಕರುಣಿಸಿದ್ದೀರ ಎಂದು ಮಂಜನ ಕಾಲಿಗೆ ಬಿದ್ದ. ಮಂಜ ಏಳಿ.. ಏಳಿ.. ಶ್ಯಾಮ್ ಎಂದ. ಆದರೆ ಶ್ಯಾಮ್ ಅಲ್ಲಿಯೇ ಮಲಗಿ ಬಿಟ್ಟಿದ್ದ. ಶ್ಯಾಮ್ ನ ಎತ್ತಿ ಸೋಫಾ ಮೇಲೆ ಮಲಗಿಸಿದೆವು. ಅಷ್ಟರಲ್ಲಿ ಟ್ರಿನ್.. ಟ್ರಿನ್.. ಎಂದು ಬಾಗಿಲ ಬೆಲ್ ಶಬ್ದ. ಹೋಗಿ ಮಂಜ ಬಾಗಿಲು ತೆಗೆದ. ಅಣ್ಣssss ನೀನು ಎಂದು ಬಂದಳು ಶ್ಯಾಮ್ ಹೆಂಡತಿ. ನಾನು ಮತ್ತು ಮಂಜ ಏನು ತೋಚದಾಗಿದ್ದೆವು. ಎದಿರು ಎಲ್ಲ ಬಾಟಲಿಗಳು ಇದ್ದವು. ನಾನು ಮನೇಲಿ ಇಲ್ಲ ಎಂದು ಇದೆಲ್ಲಾ ನಡೆಸಿದ್ದೀರ ಎಂದಳು. ನಾನು ವೈನಿಗೆ ಹೇಳುತ್ತೇನೆ ಎಂದಳು. ಆಗ ಮಂಜ ನನಗೆ ವೈನ್ ಇಷ್ಟ ಇಲ್ಲ. ಅದು ಬೇರೆ ನನಗೆ ಕಾಕ್-ಟೇಲ್ ಆಗಿ ಬರಲ್ಲ ಎಂದ. ನಾನು ಹೇಳಿದ್ದು ಸಾವಿತ್ರಿ ವೈನಿ ಬಗ್ಗೆ ಎಂದಳು. ಓsss... ಆ ಹೆಸರಲ್ಲೂ ವೈನ್ ಇದೆಯಾ? ಎಂದ ಮಂಜ. ಲೇ ಅವರು ಹೇಳುತ್ತಿರುವದು ನಿನ್ನ ಹೆಂಡತಿ ಬಗ್ಗೆ ಹೆಂಡದ ಬಗ್ಗೆ ಅಲ್ಲ ಎಂದೆ. ಶ್ಯಾಮ್ ಮಡದಿ ಇದನ್ನು ಹೇಳಿದ್ದೆ ತಡ. ಮಂಜ ಹಾಗೆ ಮಾತ್ರ ಮಾಡಬೇಡಮ್ಮ ಎಂದು ಪರಿ ಪರಿಯಾಗಿ ಅವಳಿಗೆ ಬೇಡಿಕೊಂಡ. ಇವತ್ತು ಒಂದು ರಾತ್ರಿ ಇಲ್ಲಿ ಇರಲು ಬಿಡು ಎಂದ.ಅಷ್ಟರಲ್ಲಿ ಮಂಜನ ಫೋನ್ ರಿಂಗ್ ಆಯಿತು. ಮೀಟಿಂಗ್ ನಲ್ಲಿ ಇದ್ದೇನೆ ನಾಳೆ ಮುಂಜಾನೆ ಫೋನ್ ಮಾಡುತ್ತೇನೆ ಎಂದ. ಮಂಜ ತನ್ನ ಹೆಂಡತಿಗೆ ನೈಟ್ ಶಿಫ್ಟ್ ಎಂದು ಸುಳ್ಳು ಹೇಳಿ ಬಂದಿದ್ದ.
ಶ್ಯಾಮ್ ಮಡದಿ ಶ್ಯಾಮ್ ನನ್ನು ಮಗುವಿನ ಹಾಗೆ ಎತ್ತಿಕೊಂಡು ಹೋಗಿ ಬೆಡ್ ರೂಮ್ ನಲ್ಲಿ ಮಲಗಿಸಿದಳು. ನಾನು ಮತ್ತು ಮಂಜ ಎಲ್ಲೇ ಹಾಲ್ ನಲ್ಲಿ ಮಲಗಿದೆವು. ಮರು ದಿವಸ ಶ್ಯಾಮ್ ಮಡದಿ ಚಹಾ ಮಾಡಿದ್ದಳು. ಚಹಾ ಕೂಡ ವಿಸ್ಕೀ ವಾಸನೆ ಬರುತಿತ್ತು. ನಮ್ಮ ನಶೆ ಇಳಿದಿಲ್ಲ ಎಂದು ತಿಳಿದು ಸುಮ್ಮನೇ ಕುಡಿಯುತ್ತಿದ್ದೆವು. ಆದರೆ ಶ್ಯಾಮ್ ಮಡದಿ ಒಯಿಕ.. ಒಯಿಕ ...ಎಂದು ವಾಂತಿ ಮಾಡಿದ್ದಳು. ಏಕೆಂದರೆ ಬಾಟಲ್ ತೆಗೆಯುವಾಗ ಸ್ವಲ್ಪು ಒಡೆದಿತ್ತು. ಅದನ್ನು ಚಹಾ ಸೋಸುವದರಿಂದ ಸೋಸಿ ಶ್ಯಾಮ್ ಅದನ್ನು ತೊಳೆಯದೇ ಹಾಗೆ ಇಟ್ಟಿದ್ದ.
ಇದಾದ ಮೇಲೆ ಮೊದಲ ಬಾರಿ ಶ್ಯಾಮ್ ಮನೇಲಿ ದೊಡ್ಡ ಜಗಳವೇ ಆಗಿತ್ತು. ಮೊದಲು ಶ್ಯಾಮ್ "ನನಗೆ ಮದುವೆ ಬೇಡ ಸ್ವಾಮಿ" ಎಂದು ಹಾಡುತ್ತಿದ್ದ. ಆದರೆ ಈಗ "ನನಗೆ ಮದಿರೆ ಬೇಡ ಸ್ವಾಮಿ" ಎಂದು ಹೇಳುತ್ತಾನೆ.
Friday, August 27, 2010
ಮನೇಲಿ ಇಲಿ.... ಬೀದಿಲಿ ಬೀದಿ-ಇಲಿ(ಹೆಗ್ಗಣ) ....
ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದೊಡ್ಡ ಎಂದು ಬಾಯಿ ತೆಗೆಯುವ ಮೊದಲೇ ಅಡುಗೆ ಮನೆಯಿಂದ ಬಂದ ನನ್ನ ಮಡದಿ ರೀ ಈ ಬಾರಿ ಉಡುಪಿಗೆ ಹೋದಾಗ ಬೀಚ್ ಗೆ ಹೋಗೋಣ ಎಂದಳು. ನಾನು ಮುಂದೆ ಹೇಳುವದನ್ನು ನಿಲ್ಲಿಸದಿದ್ದರೆ ನಾನೇ ಅಪಹಾಸ್ಯ ಆಗಿಬಿಡುತ್ತಿದ್ದೆ. ಆಯಿತು ಎಂದು ಹೇಳಿ ಮತ್ತೆ ಬರೆಯುತ್ತಾ ಕುಳಿತೆ. ಏನೋ ಬರೀತಾ ಇದ್ದ ಹಾಗಿದೆ ರಾಯರು ಎಂದಳು. ನಾನು ಬರೆಯುತ್ತಿರುವ ಲೇಖನದ ಬಗ್ಗೆ ಸ್ವಲ್ಪ ವಿವರವಾಗಿ ಹೇಳಲು ಅನುವಾದೆ. ಅಷ್ಟರಲ್ಲಿ ಅವಳ ಮೊಬೈಲ್ ರಿಂಗ್ ಆಯಿತು. ನಾನು ಕಾಯುತ್ತಾ ಕುಳಿತೆ ಬರೋಬ್ಬರಿ ಅರ್ಧ ಘಂಟೆ ಮಾತನಾಡಿದ್ದಳು. ಮತ್ತೆ ಅಡುಗೆ ಮನೆಗೆ ಹೊರಟು ಹೋದಳು.
ಸ್ವಲ್ಪ ಸಮಯದ ನಂತರ ಬಂದು ಏನೋ ಹೇಳುತ್ತ ಇದ್ದ ಹಾಗೆ ಇತ್ತು ಎಂದಳು. ನಾನು ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ. ಈ ಬಾರಿ ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಲೋಕಾರ್ಪಣೆ ಮಾಡಬೇಕು ಎಂದು ಮಾಡಿದ್ದೇನೆ ಎಂದೆ. ರೀ ಅಂದ ಹಾಗೆ ನೆನಪು ಆಯಿತು. ನನಗೆ ೧೨೦ ರೂಪಾಯಿ ರೊಕ್ಕಾರ್ಪಣೆ ಮಾಡಿ ಎಂದಳು. ಏಕೆ? ದುಡ್ಡು ಎಂದೆ. ಮಗನ ಪುಸ್ತಕಕ್ಕೆ ಎಂದು ೧೨೦ ರೂಪಾಯಿ ತೆಗೆದುಕೊಂಡಳು. ಅದೆಲ್ಲ ಏನು ಬೇಡ ನನ್ನನ್ನು ಅಪಹಾಸ್ಯ ಮಾಡಿ ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುತ್ತೀರಾ? ಎಂದಳು. ನಿನ್ನನ್ನ ಹೋಗಳಿದ್ದು ಇದೆ ಅಲ್ಲ ಎಂದೆ. ನಾನು ಎಲ್ಲಿ ನಿಮ್ಮನ್ನ ಬೈದು ಬಿಡುತ್ತೇನೆ ಎಂದು ಕೆಲ ಲೇಖನಗಳಲ್ಲಿ ಹೋಗಳಿದ್ದೀರಾ ಅಷ್ಟೇ ಎಂದು ಅಡುಗೆ ಮನೆಗೆ ಹೊರಟೆ ಹೋದಳು.ನನ್ನ ಹೆಂಡತಿಗೆ ನಾನು ಅರ್ಥನೇ ಆಗಿಲ್ಲ ಎಂದು ಕೊರುಗುತ್ತಾ ಕುಳಿತೆ. ಬರೆಯುವದನ್ನು ಪಕ್ಕಕ್ಕೆ ಇಟ್ಟು ಇದು ನನ್ನ ಒಬ್ಬನ ಸಮಸ್ಯೆಯಾ ಅಥವಾ ಎಲ್ಲರದು ಇದೇನಾ ಎಂದು ಪರೀಕ್ಷಿಸ ಬೇಕು ಎಂದು ಮಂಜನ ಮನೆಗೆ ಹೋದೆ.
ಮಂಜ ಕಾಫೀ ಕುಡಿಯುತ್ತಾ ಕುಳಿತಿದ್ದ. ನನಗು ಕೂಡ ಒಂದು ಕಾಫೀ ಕೊಟ್ಟಳು ಮಂಜನ ಮಡದಿ. ನಾನು ಕಾಫೀ ಕುಡಿಯುತ್ತಾ ಹೆಂಡತಿಯರಿಗೆ ನಾವು ಅರ್ಥವೇ ಆಗೋದಿಲ್ಲವ? ಎಂದು ಕೇಳಿದೆ. ಯಾರ ಹೆಂಡತಿಗೆ ನೀನು ಅರ್ಥ ಆಗ್ಬೇಕೋ ಎಂದ ಮಂಜ. ಕೋಪದಿಂದ, ಲೇssss ನಾನು ನನ್ನ ಹೆಂಡತಿ ಬಗ್ಗೆ ಎಂದೆ. ನಾವು ಹೊರಗೆ ಹುಲಿ ಹಾಗೆ ಇರುತ್ತೇವೆ. ಮನೆಗೆ ನಮ್ಮನ್ನು ನಮ್ಮ ಹೆಂಡತಿಯರು ನಮ್ಮನ್ನು ಇಲಿಯ ಹಾಗೆ ನೋಡುತ್ತಾರಲ್ಲ ಕಣೋ ಎಂದೆ. ಅದು ನಿನ್ನ ಕೇಸ್ ಇರಬಹುದು ಆದರೆ ನಾನು ಮನೆಯಲ್ಲೂ ಹುಲಿನೆ ಎಂದ. ಅಷ್ಟರಲ್ಲಿ ಅವನ ಹೆಂಡತಿ ಕಾಫೀ ಕಪ್ ತೆಗೆದುಕೊಂಡು ಹೋಗಲು ಬಂದಳು. ಆದರೆ ತ್ರಿಶುಲಧಾರಿ (ಲಟ್ಟಣಿಗೆ) ದುರ್ಗಾ ದೇವಿ ಅದರ ಪಕ್ಕದಲ್ಲಿ ಇರುತ್ತಾಳೆ ಎಂದ. ಗಹ ಗಹಿಸಿ ನಗ ಹತ್ತಿದೆ. ಮೊದಲು ಏನು ಹೇಳಿದ ಎಂದು ಗೊತ್ತು ಇಲ್ಲದರಿಂದ ನಾವಿಬ್ಬರು ಬಚಾವ್ ಅದೇವು. ಇಲ್ಲಿದಿದ್ದರೆ ನಮ್ಮ ವಟ ..ವಟ... ಸಾವಿತ್ರಿ ನಮ್ಮನ್ನು ಬಿಡುತಿರಲಿಲ್ಲ. ನಾವು ನಗುವುದನ್ನು ನೋಡಿ ಏನು ವಿಷಯ ಎಂದು ಸಾವಿತ್ರಿ ಕೇಳಿದಳು. ನಾವು ಏನು ಇಲ್ಲ ಎಂದೆವು. ಆದರೂ ಅವಳು ಬಿಡದೆ ನನ್ನನ್ನು ನೋಡಿ ನೀವು ನಗುತ್ತಿರುವದು ಹೇಳಿ ಎಂದು ಪಿಡಿಸಹತ್ತಿದಳು. ನಾವು ಏನು ತೋಚದಾದೇವು ಅಷ್ಟರಲ್ಲಿ ಸುಬ್ಬನ ಫೋನ್ ಬಂತು. ಮಾತನಾಡುತ್ತಾ ಸುಬ್ಬ ಕರೆದಿದ್ದಾನೆ ಎಂದು ಅಲ್ಲಿಂದ ಜಾಗ ಖಾಲಿಮಾಡಿದೆವು. ಮಂಜ ಕೆಲವೊಮ್ಮೆ ನಮ್ಮ ಮೇಲೆ ಸವಾರಿಯೂ ಮಾಡುತ್ತಾರೆ ಎಂದ.
ಸುಬ್ಬನ ಮನೆಗೆ ಹೋದೆವು ಅಲ್ಲಿ ಅವನ ಹೆಂಡತಿ ಅವನು ಕಟ್ಟಿಸಿ ಕೊಂಡಿದ್ದ ರಾಖಿ ಧಾರವನ್ನು ಗಟ್ಟಿಯಾಗಿ ಕಟ್ಟುತಿದ್ದಳು. ಇದನ್ನು ನೋಡಿ ಮಂಜ ಇದೆ ನೋಡು ಸುಬ್ಬನ ಸೀಕ್ರೆಟ್ ಎಂದು ಹೇಳಿದ. ಮಂಜ ಮತ್ತೆ ನಾನು ನೋಡಿ ಗಹ ಗಹಿಸಿ ನಗುತ್ತಿದ್ದನ್ನು ನೋಡಿ ಸುಬ್ಬನಿಗೆ ತುಂಬಾ ಕೋಪ ಬಂದಿತ್ತು. ಏನು ಎಂದು ಕೇಳಿದ ಸುಬ್ಬ. ಏನೋ ಹೆಂಡತಿ ಹತ್ತಿರ ರಾಖಿ ಕಟ್ಟಿಸಿಕೊಳ್ಳುತ್ತಿದ್ದೀಯ ಎಂದ ಮಂಜ. ಲೇ ಅದು ಧಾರ ಸಡಿಲಾಗಿತ್ತು ಅಷ್ಟೇ ಎಂದ ಸುಬ್ಬ. ಅಷ್ಟರಲ್ಲಿ ನಮ್ಮನ್ನು ಹುಡುಕಿಕೊಂಡು ನನ್ನ ಮತ್ತು ಮಂಜನ ಮಡದಿ ಬಂದರು. ಏನು ವಿಶೇಷ ಎಂದು ಕೇಳಿದಳು ನನ್ನ ಮಡದಿ. ಏನು ಇಲ್ಲ ಎಂದ ಸುಬ್ಬ. ಅಷ್ಟೇ ಇಬ್ಬರನ್ನು ದುರುಗುಟ್ಟಿ ನೋಡಿದರು. ನಾವು ಸಾವಕಾಶವಾಗಿ ಆ ಮೂವರು ಮಾತನಾಡುವಾಗ ಜಾಗ ಖಾಲಿ ಮಾಡಿದೆವು. ಇಲ್ಲದಿದ್ದರೆ ನಿಮಗೆ ಗೊತ್ತಲ್ಲ.:).
ಮಂಜ ನನಗೆ ಮತ್ತು ಸುಬ್ಬನಿಗೆ ಹೇಳಿದ ಮನೇಲಿ ಇಲಿ ಆದರೆ ಬಿದೀಲಿ ಹುಲಿ ಎಂದು ತಿಳಿದು ಕೊಂಡಿದ್ದೇವೆ ಅಷ್ಟೇ ಆದರೆ ನಿಜವಾದ ಸಂಗತಿ ನಾವು ಕೂಡ ಬೀದಿಲಿ ಬೀದಿ ಇಲಿ(ಹೆಗ್ಗಣ) ... ಕಣೋ ಎಂದ. ಸುಬ್ಬ ನಾನು ರಸ್ತೆ ಎಂದು ಯೋಚಿಸದೇ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕಿದ್ದೆವು.
Friday, August 13, 2010
ಎಂಗೇಜ್ಮೆಂಟ್ (ಯಂಗ್ ಏಜ್ ಮೆಂಟ್)
ಪ್ರಕಾಶ್ ಮಾಮಾ ನನಗಿಂತ ೨೫ ವರ್ಷ ದೊಡ್ಡವರು. ನೋಡಿಕೊಳ್ಳಲು ಯಾರು ಇರಲಿಲ್ಲ. ತಂದೆ - ತಾಯಿ ತೀರಿ ೪ ವರ್ಷ ಆಗಿತ್ತು. ತುಂಬಾ ಕಷ್ಟ ಜೀವಿ. ತನ್ನ ಎಲ್ಲಾ ಆಸೆ ಆಕಾಂಕ್ಷೆ ತೊರೆದು ಮನೆಗಾಗಿ ದುಡಿದವರು. ಅಪ್ಪ - ಅಮ್ಮ ಏನು ಆಸ್ತಿ ಮಾಡಿರಲಿಲ್ಲ. ಅವರು ಮಾಡಿರುವ ಏಕೈಕ ಆಸ್ತಿ ಎಂದರೆ ೨ ಅಕ್ಕಂದಿರು, ೪ ತಂಗಿಯರು. ಈಗೀಗ ಸ್ವಲ್ಪ ಕಣ್ಣು ಮತ್ತೆ ಕಿವಿ ಮಂದಾಗಿತ್ತು. ಈಗ ಎಂಗೇಜ್ಮೆಂಟ್ ಮಾಡುವದಾದರೂ ನಾವೇ ಮಾಡಬೇಕು.ನಾನು ಎಂಗೇಜ್ಮೆಂಟ್ ಹೋಗುವದರ ಸಲುವಾಗಿ ಟಿಕೆಟ್ ಬುಕ್ ಮಾಡಿದೆ. ಎಲ್ಲ ಕೆಲಸಗಳನ್ನು ನಾನು ಮತ್ತು ನನ್ನ ಮಡದಿ ಮಾಡಲು ಆಗುವದಿಲ್ಲ ಎಂದು, ನನ್ನ ಗೆಳೆಯರಾದ ಸುಬ್ಬ, ಮಂಜ ಮತ್ತು ಮನೋಜನನ್ನು ಕರೆದುಕೊಂಡು ಹೋದೆ.
ಎಂಗೇಜ್ಮೆಂಟ್ ದಿವಸ ಬಂದೆ ಬಿಟ್ಟಿತು. ಹಣ್ಣುಗಳನ್ನು ತಂದಿರಲಿಲ್ಲ ಹೀಗಾಗಿ ಹಣ್ಣುಗಳನ್ನು ತರಲು ಮಂಜನಿಗೆ ಹೇಳಿದೆ. ಮತ್ತೆ ನಾವು ಕುಳಿತುಕೊಂಡೆವು. ಆಗ ರಾಮಾಚಾರ್ಯರು ನೀವು ನಡುವೆ ಕುಳಿತುಕೊಳ್ಳಿ ಎಂದರು. ರೀ .. ಸುಮ್ಮನಿರಿ ಇದು ನಮ್ಮ ಮಾಮಾನ ಎಂಗೇಜ್ಮೆಂಟ್ ಎಂದು ತೋರಿಸಿದಾಗ ಸುಮ್ಮನಾದರು. ಮತ್ತೆ ಮಂತ್ರ ಎಲ್ಲವನ್ನು ಮುಗಿಸಿದರು. ಹಣ್ಣು ಕೊಡುವ ಶಾಸ್ತ್ರ ಮುಗಿಸಿ ಎಂದರು ಶಾಸ್ತ್ರಿಗಳು. ಹಣ್ಣುಗಳನ್ನು ನಾವು ಕೊಡಬೇಕಾಗಿತ್ತು. ಅಷ್ಟರಲ್ಲಿ ಮಂಜ ಬಂದ. ಹಣ್ಣು ತಂದಿದ್ದ ಆದರೆ ಅವನು ತಂದಿದ್ದು 2 ಖಾರಬೂಜ ,2 ಹಲಸಿನ ಹಣ್ಣು, ಮತ್ತೆ 2 ಕಲ್ಲಂಗಡಿ ಹಣ್ಣು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದಿತ್ತು. ಇದೇನೋ ಹಣ್ಣು ತೆಗೆದುಕೊಂಡು ಬಾ ಎಂದರೆ ಎಂದು ಗದರಿಸಿದ್ದೆ. ಕಡೆಗೆ ಅದನ್ನೇ ತೆಗೆದುಕೊಂಡು ಒಂದು ದೊಡ್ಡ ಪಾತ್ರೆಯಲ್ಲಿ ಇಟ್ಟು ನನ್ನ ಕೈಗೆ ಕೊಟ್ಟರು. ಆ ಭಾರದಿಂದ ಧಪ್ ಎಂದು ನೆಲಕ್ಕೆ ಉರುಳಿದೆ. ಮತ್ತೆ ಸುಬ್ಬ ಮತ್ತೆ ಮಂಜ ಸೇರಿ ನನ್ನನ್ನು ಎತ್ತಿದರು. ಒಂದು ಕಲ್ಲಂಗಡಿ ಹಣ್ಣು ಎರಡು ಹೋಳು ಆಗಿತ್ತು. ಅದನ್ನೇ ಎಲ್ಲರಿಗೂ ಜೂಸ್ ಮಾಡಲು ಕಳುಹಿಸಿದೆವು. ಹಾಗೂ ಹೀಗೂ ಮತ್ತೆ ನಾವೆಲ್ಲರೂ ಕೂಡಿ ಅದನ್ನು ನಮ್ಮ ಬೀಗರ ಕೈಗೆ ಕೊಟ್ಟೆವು. ಪಾಪ ಒಬ್ಬರೇ ಹೇಗೆ ಅದನ್ನು ಹಿಡಿಯಲು ಆಗುತ್ತೆ. ನನ್ನ ಅರ್ಧ ಕೂಡ ಇರಲಿಲ್ಲ ನಮ್ಮ ಬೀಗರು. ಅವರು ನನ್ನ ತಲೆಗೆ ಡಿಕ್ಕಿ ಹೊಡೆದು ಬಿಟ್ಟರು. ನನ್ನ ತಲೆಗೆ ಒಂದು ಗುಮ್ಮಟಿ ಆಗಿತ್ತು.
ಕಡೆಗೆ ಎಲ್ಲ ಶಾಸ್ತ್ರ ಮುಗಿದ ಮೇಲೆ ಉಟಕ್ಕೆ ಕುಳಿತಿದ್ದೆವು. ನಮ್ಮ ಮಾಮಾ ಕಣ್ಣು ಕಾಣಲಾರದೇ ಉಂಡಿ ತನ್ನ ಮಡದಿಗೆ ತಿನ್ನಿಸುವ ಬದಲು ನನಗೆ ತಿನ್ನಿಸಲು ಶುರು ಮಾಡಿದ್ದ. ನಾನು ಮತ್ತೆ ಅದನ್ನು ಅವನ ಹೆಂಡತಿಗೆ ತಿನ್ನಿಸಲು ಹೇಳಿದೆ. ಮತ್ತೆ ತಿನ್ನಿಸಿದ. ಆದರೆ ಅವನ ಮಡದಿ ನನ್ನ ಹೆಂಡತಿಯ ಎಲೆ ಮೇಲೆ ಇರುವ ಉಂಡಿ ತೆಗೆದು ಮಾಮಾನಿಗೆ ತಿನ್ನಿಸುತ್ತಿದ್ದಳು. ಎಲ್ಲರೂ ಇವರನ್ನು ನೋಡಿ ನಗುತ್ತಿದ್ದರು.
ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು. ನಾನು ನನ್ನ ಮಡದಿಗೆ ಹೇಳಿದೆ ಸುಮ್ಮನೇ ಇದೆಲ್ಲವೂ ಬೇಕಿತ್ತಾ. ರಿಜಿಸ್ಟರ್ ಆಫೀಸ್ ನಲ್ಲಿ ಮದುವೆನೇ ಮಾಡಬಹುದಿತ್ತು ಎಂದೆ. ಆಗ ಏನೋ ಮಾವ ಆಸೆ ಪಟ್ಟರು. ಅವರಿಗೆ ಎಲ್ಲವೂ ಶಾಸ್ತ್ರೋಕ್ತವಾಗಿ ಆಗಬೇಕು. ಅದಕ್ಕೆ ಏನು ಈಗ ಎಂದಳು. ಅಲ್ಲ ಕಣೆ ..ಇದು ಒಂದು ತರಹ ಓಲ್ಡ್ ಏಜ್ ಮೆಂಟ್ ಅನ್ನಬಹುದು..ಎಂದಾಗ ನನ್ನ ಮಡದಿಗೂ ನಗು ತಡಿಯಲು ಆಗಲಿಲ್ಲ.