Friday, December 18, 2009

ಮುಡಿ ಕೊಡುತ್ತಾರಾ....

ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ, ಚಹಾ, ಕಾಫಿ ಮತ್ತು ಆಟಕ್ಕೆ ಕ್ಷಮಿಸಿ.... ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ. ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ, ಅಪ್ಪಿ ತಪ್ಪಿ ಬಂದರು ಇವರ ಧಡೂತಿ ಹೊಟ್ಟೆ ಇವರನ್ನು ಆಡಲು ಬಿಡುವದಿಲ್ಲ . ಇವರೆನಿದ್ದರು ತಿನ್ನಲು ಕುಡಿಯಲು ಯೋಗ್ಯ ಎಂದು.

140 ಜನ ಕೆಲಸ ಮಾಡುವ ಕಂಪನಿಯಲ್ಲಿ ಸುಮಾರು 20 ಜನ ಮಾತ್ರ ಕನ್ನಡಿಗರು. ಹೋಟೆಲ್ ಹೋಗುವ ಸಮಯದಲ್ಲಿ ನಟರಾಜ್ ಮಾತು ಶುರು ಹಚ್ಚಿ ಕೊಂಡರು. ನಾನು ದಿನ ಮುಂಜಾನೆ ಸುಪ್ರಭಾತ ಕೇಳುತ್ತೇನೋ ಇಲ್ಲವೋ, ಆದರೆ ದಿನ ಮುಂಜಾನೆ "ನಲ್ಲ ಇರಕ", "ಸಾಪಟಿಯ" ಎಂಬ ಶಬ್ದಗಳು ಘಂಟಾಘೋಷವಾಗಿ ನನ್ನ ಕಿವಿಗೆ ಬಂದು ಒರಗುತ್ತವೆ. ಅದ್ಯಾವ ಜನ್ಮದ ಪಾಪದ ಫಲವೋ ನಾ ಕಾಣೆ. ನಾನು ಕೆಲವೊಂದು ಸಾರಿ ಬೆಂಗಳೂರಿನಲ್ಲೇ ಇದ್ದೆನಾ?. ಎಂಬ ಸಂದೇಹ ಬಂದಿದ್ದು ಉಂಟು. ನನ್ನ ಲೀಡರ್ ಕೂಡ ಅವರೇ. ಇದಲ್ಲದೆ ನನ್ನ ಕೈ ಕೆಳಗೆ ಕೆಲಸ ಮಾಡುವ ಸಹ ಕೆಲಸಗಾರರು ಇಬ್ಬರು ಕೂಡ ಅವರೇ. ಇದಿಷ್ಟೇ ಇದ್ದಿದ್ದರೆ ಪರವಾಗಿಲ್ಲ, ಅವರು ಏನಾದರು ಕೆಲಸದ ವಿಷಯ ಮಾತನಾಡುವ ಸಮಯದಲ್ಲಿ ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಿದರೆ ಎಷ್ಟು ಕೋಪ ಬರಬೇಡ. ಆ ಸಮಯದಲ್ಲಿ ಯಾರಾದರು "ನಲ್ಲ ಇರಕ" ಎಂದರೆ ಇರಿದು ಅಲ್ಲೇ ಕೊಂದು ಬಿಡುವಷ್ಟು ಕೋಪ ಬರುತ್ತೆ.

"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಡಾ|| ರಾಜ ಹಾಡು ಕೇಳಿ ಬೆಳೆದವ ನಾನು. ಕನ್ನಡದ ಬಗ್ಗೆ ಅಪಾರ ಪ್ರೀತಿ ಎಂದ.ಆಗ ನಾವೆಲ್ಲರೂ ಅವರನ್ನು ಸಮಾಧಾನ ಮಾಡಿದೆವು.

ಜನರನ್ನು ಒಗ್ಗೂಡಿಸುವ ಒಂದು ಒಳ್ಳೆ ಕೆಲಸ ನಟರಾಜ್ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಇವರನ್ನು ಎಂ ಎಲ್ ಎ ಅನ್ನೋದು. ಈ ಸಾರಿ ಕೂಡ ಊಟಕ್ಕೆ ಬನ್ನಿ ಎಂದರು. ನಾನು ಒಲ್ಲೇ ಒಲ್ಲೇ ಎಂದೇ. ನನ್ನದು ಏನಿದ್ದರು "ವಂದೇ ಮಾತರಂ" ಎಂದು ಹೊರಟು ಹೋದರು. ಇದೇನು ವಂದೇ ಮಾತರಂ ಎಂದು ಕೇಳಿದಾಗ ತಿಳಿಯಿತು ಒಂದೇ ಮಾತು ಎಂದು ತಿಳಿಯಿತು.

ಕಡೆಗೆ ಆಯಿತು ಎಂದು ಒಪ್ಪಿಕೊಂಡ ಮೇಲೆ ಎಲ್ಲರು ಹೋಟೆಲ್ ಯಾವುದೆಂದು ತೀರ್ಮಾನ ಮಾಡಿ ಹೊರಟೆವು. ನಮ್ಮ 7 ಜನರಲ್ಲಿ ಒಬ್ಬ ಸುವೆಂದು ಆಚಾರ್ಯ ಎಂಬ ಒಬ್ಬ ಒರಿಸ್ಸಾ ಹುಡುಗ ಕೂಡ ಬಂದಿದ್ದ. ಅವನಿಗೆ ಗೊತ್ತಿದದ್ದು ಹಿಂದಿ ಮತ್ತೆ ಒರಿಸ್ಸಾ ಈಗ ಅವನು ಸ್ವಲ್ಪ ಸ್ವಲ್ಪ ಕನ್ನಡ ಕಲಿಯಲು ಶುರು ಹಚ್ಚಿಕೊಂಡಿದ್ದಾನೆ. ಅದು ಏಕೆಂದರೆ ಒಂದೆರಡು ಕನ್ನಡದ ಹುಡುಗಿಯರು ನಮ್ಮ ಕಂಪನಿಗೆ ಸೇರಿದ ಮೇಲೆ.

ಎಲ್ಲರು ಹೋಟೆಲ್ ಒಳಗೆ ಕಾಲಿಟ್ಟೆವು. ಅವನು ಮಾತ್ರ ಹುಡುಗಿಯರನ್ನು ಅತ್ತಿತ್ತ ನೋಡುತ್ತಾ ಕಾಲಿಟ್ಟ. ಅಲ್ಲಿ ಒಂದು ಹುಡುಗಿ ಪ್ಲೇಟ್ ನೋಡಿದವನೇ. ಏನೋ ತಿಳಿದವನಂತೆ "ಇಲ್ಲಿ ಮುಡಿ ಕೊಡುತ್ತಾರಾ?" ಎಂದು ಕೇಳಿದ. ನಮ್ಮೆಲ್ಲರಿಗೂ ಆಶ್ಚರ್ಯ ಆಯಿತು ಏನಿದು ಇದೇನು ತಿರುಪತಿ ನಾ ಎಂದು ಕೇಳಿದೆ. ಮತ್ತೆ ಆ ಹುಡುಗಿ ಪ್ಲೇಟ್ ತೋರಿಸಿ ಕೇಳಿದಾಗ ತಿಳಿಯಿತು ಅದು "ಕಳೆ ಪುರಿ"(ಚುರ ಮುರಿ) ಎಂದು. ನಾವೆಲ್ಲರೂ ನಕ್ಕೂ ಒಳಗೆ ಹೋದೆವು.

ಊಟಕ್ಕೆ ಆರ್ಡರ್ ಮಾಡಿದೆವು. ಊಟಕ್ಕೆ ಸಂಜೀವ್ ಬಂದಿರಲಿಲ್ಲ. ಸಂಜೀವ್ ಸುವೆಂದು ಟೀಂ ಲೀಡರ್. ಊಟ ಬಂತು. ನಾನು ಊಟಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿದೆ. ಆಗ ಸುವೆಂದು "ಲೇ ಊಟಕ್ಕೆ ಮೊದಲು ನೀರಾ" ಎಂದ . ಅದು ನೀರಾ ಅಲ್ಲ ನೀರು ಎಂದೇ. ಮತ್ತೆ ನಾನು ಅವನಿಗೆ ಊಟಕ್ಕೆ ಮೊದಲು ನೀರು ಕುಡಿದರೆ ಊಟಕ್ಕೆ ಚೆನ್ನಾಗಿ ಹೋಗುತ್ತೆ ಎಂದೇ. ಆಗ ನೋಡ ನೋಡುತ್ತಲೇ ಒಂದು ಜಗ್ ನೀರು ಕುಡಿದು ಬಿಟ್ಟ. ಲೇ ಒಂದು ಗ್ಲಾಸ್ ಅಂತ ಹೇಳಿದ್ದು ನೀನು ಒಂದು ಜಗ್ ಕುಡಿದೆಯಾ ಎಂದು ಹೇಳಿದೆ.

ಊಟದಲ್ಲಿ ನುಗ್ಗೆ ಕಾಯಿ ಸಾರು ಮಾಡಿದ್ದರು. ಆಗ ಸುವೆಂದು ನನಗೆ ನಗ್ಗೆ ಕಾಯಿ ಬೇಡ ಎಂದ. ಸದ್ಯ ಸೀಗೆ ಕಾಯಿ ಅನ್ನಲಿಲ್ಲ. ಊಟ ಮುಗಿದ ಮೇಲೆ ಎಲ್ಲರಿಗೆ ಏಳಲು ಬರಲಾರದಷ್ಟು ಹೊಟ್ಟೆ ತುಂಬಿತ್ತು. ಸುವೆಂದು ಹೊಟ್ಟೆ ಮಾತ್ರ ನೀರಿನಿಂದ ಕೊಳ್ಳ ಕೊಳ್ಳ ಎನ್ನುತಿತ್ತು. ಆಗ ಸರ್ವರ್ ಬಂದು "ಊಟ ಫಸ್ಟ್ ಟೈಮ್ ಮಾಡುತ್ತ ಇರುವದ ಎಂದು ಕೇಳಿದ". ಅದಕ್ಕೆ ನಮ್ಮ ನಟರಾಜ "ಇಲ್ಲಿ ಮೊದಲ ಬಾರಿ" ಎಂದ. ಆಗ ಸುವೆಂದು ಮಾತ್ರ ತುಂಬಾ ಅವಸರ ಮಾಡುತಿದ್ದ. ಏಕೆಂದರೆ ಅವನಿಗೆ ಒಂದು ಅರ್ಜೆಂಟ್ ಕೆಲಸ ಹೇಳಿದ್ದರು ಸಂಜೀವ್. ನಾವು ಇಂತಹ ಊಟಕ್ಕೆ ಸಂಜೀವನನ್ನು ಕರೆದು ಕೊಂಡು ಬಂದಿದ್ದರೆ ನಿನಗೆ ಕೆಲಸ ಮಾಡದಿದ್ದರೂ ನಡೆಯುತ್ತಿತ್ತು ಎಂದು ಹಾಸ್ಯ ಮಾಡುತ್ತ ಹೋಟೆಲ್ ನಿಂದ ಹೊರನಡೆದೆವು.

ಸುವೆಂದು ಅರ್ಧ ಮರ್ಧ ಕನ್ನಡದ ಜೊತೆಗೆ ಊಟ ಕೂಡ ತುಂಬಾ ಚೆನ್ನಾಗಿತ್ತು,

Wednesday, December 16, 2009

ತರ್ಲೆ ಮಂಜ(ಗ)ನ ಬಾರ್ ಪುರಾಣ!!!!

ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು.

ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ ಮಂಜ ತನ್ನ ಮಾತಿನ ವರಸೆ ಶುರು ಹಚ್ಚಿಕೊಂಡ.

ಅತ್ಯಂತ ಪ್ರಾಚೀನ ಪುರಾಣಕ್ಕೆ ಸೇರಿದ್ದು ಈ ಬಾರ್ ಪುರಾಣ. ಇದಕ್ಕೆ ಇದು.. ಇದೆ ಪುರಾಣ ಇಷ್ಟನೇ ಅಧ್ಯಾಯದಲ್ಲಿ ಇರಬಹುದೆದೆಂದು ಊಹಿಸಲು ಅಸಾದ್ಯವಾದಷ್ಟು ಪ್ರಾಚೀನ ಪುರಾಣ. ಒಂದಾನೊಂದು ಕಾಲದಲ್ಲಿ ರಣಧೀರ ಎಂಬ ರಾಜ ಇದ್ದ. ಒಂದು ದಿವಸ ತನ್ನ ಮಹಾರಾಣಿಯ ಜೊತೆಗೆ ಜಗಳವಾಡಿದ. ಅವನ ಹೆಂಡತಿ ರಾಜನ ಮೇಲೆ ತುಂಬಾ ಕೋಪಗೊಂಡು ತವರುಮನೆಗೆ ಹೊರಟುಹೋದಳು. ಆಗ ರಾಜ ಅವಳ ಯೋಚನೆಯಲ್ಲೇ ಕಾಲ ಕಳೆಯುತ್ತಾ ಹುಚ್ಚನ ಹಾಗೆ ಅಲೆದಾಡುತ್ತ ಇದ್ದಾಗ... ಅವನ ಮಂತ್ರಿ ರಾಜನ ದುಃಖ ನೋಡಲಾರದೆ. ಅವನ ವೈದ್ಯ ನವೀನಚಂದ್ರನಿಗೆ ಅದನ್ನು ಅರುಹಿದ. ಆಗ ಆ ವೈದ್ಯ ಮನಸಿನ ನೋವನ್ನು ಮರೆಯುವ ಒಂದು ಔಷಧ ತಯಾರಿಸಿ ತಂದು ಮಂತ್ರಿಗೆ ಕೊಟ್ಟ. ಮಂತ್ರಿ ಖುಷಿಯಾಗಿ ಅವನಿಗೆ 100 ವರಾಹ ಕೊಟ್ಟು ಕಳುಹಿಸಿದ. ಅದನ್ನು ರಾಜನಿಗೆ ಕುಡಿಸಿದಾಗ... ರಾಜ ತುಂಬಾ ಮನೋಲ್ಲಾಸಗೊಂಡು ಮಂತ್ರಿಗೆ.. ಕಂತ್ರಿ ಕಂತ್ರಿ ಎಂದು ಹೇಳಲಾರಂಬಿಸಿದ. ಅದೇ ಶಬ್ದ ಬಾಯಿಂದ ಬಾಯಿಗೆ ಹರಿದು "ಕ೦ಟ್ರಿ" ಪಾನ ಆಯಿತು.

ರಾಜ ಪಾನವಿಲ್ಲದೆ ಬದುಕಲು ಅಸಾಧ್ಯವಾಯಿತು. ದಿನ ನಿತ್ಯ ಮುಂಜಾನೆ ಇಂದ ಸಂಜೆವರೆಗೆ ಪಾನ ಮತ್ತನಾಗಿ ಇರುತ್ತಿದ್ದ. ಇದು ಅವನ ಹೆಂಡತಿಗೆ ತಿಳಿಯಿತು. ಮಹಾರಾಣಿ ಮತ್ತೆ ತನ್ನ ಗಂಡನ ಅರಮನೆಗೆ ಹಿಂತಿರುಗಿದಳು. ಆಗ ಮಹಾರಾಜ ಅದನ್ನು ಸಾವಕಾಶವಾಗಿ ಬಿಡಲು ಆರಂಬಿಸಿದ.


ರಾಜ ಹೆಂಡತಿ ಬಂದ ಮೇಲೆ ಅದನ್ನು ಬಿಟ್ಟದ್ದರಿಂದ ಮತ್ತು ಅದು ಹೆಂಡತಿ ಇಲ್ಲದಿದ್ದಾಗ ಸವತಿಯ ಹಾಗೆ ಕೆಲಸ ಮಾಡಿದ್ದರಿಂದ ಹೆಂಡ ಎಂಬ ಮತ್ತೊಂದು ನಾಮಾಂಕಿತ ಪಡೆದು ಪ್ರಸಿದ್ದಿಪಡೆಯಿತು. ರಾಜ ಅದನ್ನು ಮೊದಲು ಸೇವಿಸಿದ್ದರಿಂದ ಅದೇ ಹೆಸರಿನ ಪೇಯ ಇಗಲೂ ತುಂಬಾ ಪ್ರಸಿದ್ದಿ ಪಡೆದಿದೆ.


ಮುಂದೆ ಆ ವೈದ್ಯ ಈ ಪೇಯದಿಂದ ತುಂಬಾ ಪ್ರಸಿದ್ದಿ ಪಡೆದ. ಮತ್ತು ಅದನ್ನು ಇನ್ನಷ್ಟು ವಿನ್ಯಾಸಗೊಳಿಸಿದ. ಆಗ ಮಂತ್ರಿ ಅವನಿಗೆ ಅವನ ಉದ್ಯೋಗವಾದ "ವೈದ್ಯ" ಮತ್ತೆ ಅವನ ಹೆಸರಿನ(ನವೀನಚಂದ್ರ) ಮೊದಲ ಅಕ್ಷರ ಸೇರಿಸಿ "ವೈನ" ಎಂದು ನಾಮಕರಣ ಮಾಡಿ ಮಾರುಕಟ್ಟೆಗೆ ಬಿಟ್ಟ. ಅದು ತುಂಬಾ ಪ್ರಸಿದ್ದಿ ಪಡೆಯಿತು.

ಅದಕ್ಕೆ ನಮ್ಮ ಮನೋಜ ಹೌದು ಹೌದು ಎಂದು ಗೋಣು ಅಲ್ಲಾಡಿಸುತ್ತ ಕುಳಿತಿದ್ದ.

ನಾನು ಸಾಕು ಬಿಡಪ್ಪ ನಿನ್ನ ಬಾರ್ ಪುರಾಣ ಎಂದೆ. ಆದರು ಮಂಜ ಕೇಳಲಿಲ್ಲ ನನಗೆ ಕಿವಿಗಳಿಗೆ ಬರೆ ಕೊಡುವ ಹಾಗೆ ತನ್ನ ಪುರಾಣ ಶುರು ಹಚ್ಚಿ ಕೊಂಡ.

ಲೇ ಇದಕ್ಕೆ ಶೆರೆ ಅಂತ ಏಕೆ? ಅಂತಾರೆ ಗೊತ್ತೇನು ಎಂದ. ನಾನು ಇಲ್ಲ ಎಂದೆ. ಶೇರ್ ಎಂದರೆ ಹಂಚಿಕೋ ಅಂತ ಅರ್ಥ ಎಂದ..

ಹೌದೌದು ಎಂದು ಮನೋಜ ಅವನ ಎ೦ಜಲದ ಗ್ಲಾಸ್ ಎತ್ತಿ ಕುಡಿಯುತ್ತಿದ್ದ. .

ಆಗ ನಾನು ತಿಳಿಯಿತು ಬಿಡು ಎಂದೆ.

ಲೇ ಅದಲ್ಲ ಕಣೋ, ನಮ್ಮ ಮನಸಿನ ಭಾವನೆಗಳನ್ನು ಹಂಚ್ಕೊಳ್ಳಲು ಒಂದು ವೇದಿಕೆ ಕಣೋ ಎಂದ. ಇಲ್ಲಿ ನಿಜವಾಗಿಯೂ ಚರ್ಚೆ ಆಗುವದು ನಮ್ಮ ಹೆಂಡತಿಯರ ಬಗ್ಗೆ ಅದಕ್ಕೆ ಶೇರ್ ಗೆ ಸ್ತ್ರೀಲಿಂಗ ಸೇರಿಸಿ ಶೆರೆ ಅಂತ ಕರೆದಿದ್ದಾರೆ ಹಿರಿಯರು ಎಂದ.

ನೀನು ಬೀರ್ ಕುಡಿ ಬೀರಬಲ್ಲ ತರಹ ಶ್ಯಾಣ್ಯ ಆಗುತ್ತೀಯ ಎಂದ.

ಹೆಂಡತಿ ಜಗಳವಾಡಿ ತವರುಮನೆಗೆ ಹೋದಾಗ "ಬಾರ" "ಬಾರ" ಎನ್ನುವ ಬದಲು ಬಾರಿಗೆ ಬಾ ಎಲ್ಲ ಮರೆಯುತ್ತೆ ಎಂದ.

ಅಷ್ಟೊತ್ಟಿಗಾಗಲೆ ಹೆಂಡತಿ ಫೋನ್ ಬಂತು ಖಾರವಾಗಿ ಎಷ್ಟೊತ್ತು ಮನೆಗೆ ಬರೋದು ಎಂದಳು.

ಅವರೀಬ್ಬರಿಗೂ ಬೇಗೆನೆ ಬೈ ಹೇಳಿ ಹೊರಟು ಹೋದೆ. ಇಲ್ಲದೇ ಇದ್ದರೆ ಎನ್ನು ಏನೇನೋ ಪುರಾಣ ಕೇಳುವ ಪರಿಸ್ತಿತಿ ಬರುತಿತ್ತು.

Monday, December 7, 2009

ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....

ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹೋಗದೇ ಆ ಸಂಜೆ ನೀಲಾಕಾಶ ನೋಡುತ್ತಾ ಕುಳಿತು ಬಿಟ್ಟೆ. ಆ ಸಂಜೆ ಆಕಾಶದ ಮೇಲೆ ಮೂಡಿರುವ ಛಾಯಾ ಚಿತ್ತಾರ ಅದೇನೋ ಒಂದು ಸುಮಧುರವಾದಂತ ಭಾವನೆಯನ್ನು ಮೂಡಿಸುತ್ತಿತ್ತು. ನೀಲಾಕಾಶದಲ್ಲಿ ಬರೆದಿರುವ ಬಿಳಿ ರಂಗೋಲಿ ಮನಸಿಗೆ ತುಂಬಾ ಮುದ ನೀಡುತಿತ್ತು. ಆ ಬಿಳಿ ಮೋಡಗಳ ಹಿಂದೆ ದೇವರು ಇರಬಹುದಾ? ಎಂಬ ಭಾವನೆ ಆಗಾಗ ಮೂಡುತ್ತಿತ್ತು. ದೇವರದೇ ಒಂದು ಸಾಮ್ರಾಜ್ಯ ಇರಬಹುದಾ?. ನಾವು ಓದಿರುವ ರಾಜ ಮಹಾರಾಜರ ಕಥೆಯ ಹಾಗೆ ತನ್ನದು ಒಂದು ಆಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿರಬಹುದಾ?. ಎಂಬ ಪ್ರಶ್ನೆಗಳನ್ನು ಮೆಲಕು ಹಾಕುತ್ತ ಕುಳಿತ್ತಿದ್ದೆ. ಸಂಜೆಯಾಗುತ್ತಲೇ ಆಗ ತಾನೆ ಇಣುಕುತ್ತಿರುವ ತಾರೆಗಳನ್ನು ವೀಕ್ಷಿಸುತ್ತಿದ್ದರೆ ಅದೇನೋ ಒಂದು ಮಹದಾನಂದ. ನಾನು ಇಷ್ಟೊಂದು ಆಳವಾಗಿ ಯೋಚಿಸಿಯೇ ಇರಲಿಲ್ಲ. ಆಗ ದೇವರು ಮುಂದೆ ಪ್ರತಕ್ಷ್ಯವಾದರೆ ಏನು ವರ ಕೇಳುವದು ಎಂಬ ಪ್ರಶ್ನೆಗೆ ನನ್ನ ನೇರವಾದ ದಿಟವಾದ ಉತ್ತರ "ಶಾಲೆ ಎಂಬುದೇ ಇರಬಾರದು" ಹಾಗೆ ಮಾಡು ಎಂದು.

ಆಗ ದೇವರು ಪ್ರತ್ಯಕ್ಷವಾಗಲಿಲ್ಲವಾದರೂ ಪ್ರತ್ಯಕ್ಷವಾಗಿದ್ದು ಮಂಜ ಮತ್ತೆ ಮನೋಜ. ಮಂಜನ ಮುಖದಲ್ಲಿ ಏನೋ ಕಸಿವಿಸಿ. ಮನೋಜ ಬಂದವನೇ "ಲೇ ಇವತ್ತು ಒಬ್ಬ ಹೊಸ ವಿದ್ಯಾರ್ಥಿ ನಮ್ಮ ಶಾಲೆಗೆ ಸೇರಿದ್ದಾನೆ ಕಣೋ" ಎಂದ. ಅವನ ಹೆಸರು ವಿಳಾಸ ಎಂದ.

ಅದಕ್ಕೆ ನಾನು ಮತ್ತೆ ಮಂಜ ಜೋರಾಗಿ ನಕ್ಕೆವು.

ಲೇ ಅದು ವಿಳಾಸ ಅಲ್ಲ ಕಣೋ ವಿಲಾಸ ಎಂದ ಮಂಜ.

ಏನೇ ಆಗಲಿ ಮಗ ಅವನಿಗೆ ಸರಿಸಾಟಿ ಯಾರು ಇಲ್ಲ ಎಂದು ಮನೋಜ ಹೊಗಳುತಿದ್ದ. ಅವ ಎಲ್ಲದರಲ್ಲೂ ನ೦ ೧ ಎಂದ . ಮಾಸ್ಟರ್‌ಗೆ ಪ್ರಶ್ನೆಹಾಕಿ ಪೇಚಿಗೆ ಬೀಳಿಸಿದ್ದ ಕಣೋ. ಮತ್ತೆ ಗೋಳಿ ಆಟದಲ್ಲೂ ಎಕ್ಸ್‌ಪರ್ಟ್ ಎಂದ.

ಅವನ ವರ್ಣನೆ ಕೇಳಿ ಮಂಜ ಮಾತ್ರ ಉರಿದುಬೀಳುವ ಹಾಗೆ ಮುಖ ಮಾಡಿದ್ದ.

ಆಗ ನಾನು ಹೌದೆನೋ ಮಂಜ ಎಂದು ಕೇಳಿದೆ.

ಅದಕ್ಕೆ ಮಂಜ ಈಗ ಮೊದಲನೆ ದಿವಸ ಮುಂದೆ ನೋಡೋಣ ಇವನ ಪ್ರತಾಪ ಎಂದ.

ಅದಕ್ಕೆ ಮನೋಜ "ಲೇ ಸುಮ್ನೇ ಹೊಟ್ಟೆ ಉರ್ಕೋ ಬೇಡ" ಅವ ಭಾಳ ಶ್ಯಾಣ್ಯ ಎಂದ.

ಇರಲಿ ಇರಲಿ ಎಂದು ಮಂಜ ಮನೆಗೆ ಹೋಗಿಬಿಟ್ಟ . ಮನೋಜ ಮಾತ್ರ ರಾತ್ರಿ ಪೂರ್ತಿ ಅವನ ವರ್ಣನೆ ಮಾಡಿದ್ದ. ನನಗು ಮರುದಿನ ಅವನನ್ನು ನೋಡುವ ಮತ್ತೆ ಗೆಳೆತನ ಬೆಳೆಸುವ ಆಸೆಯಾಗಿತ್ತು.

ಮರುದಿನ ಶಾಲೆಗೆ ಯಾವದೆ ತಕರಾರು ಇಲ್ಲದೇ ಶಾಲೆಗೆ ಹೊರಟು ನಿಂತಿದ್ದು ನೋಡಿ ಅಪ್ಪ ನನ್ನನ್ನು ನೋಡಿ ನಕ್ಕೂ ಆಶ್ಚರ್ಯದಿಂದ "ಏನ ರಾಜ ಮತ್ತೆ ಹೇಗಿದೆ? ನಿನ್ನ ಹೊಟ್ಟೆ ನೋವು ಎಂದು" ಕೇಳಿದರು.

ನಾನು ಇಲ್ಲ ಎಂದು ಗೋಣು ಆಡಿಸಿ ಶಾಲೆಗೆ ಹೋದೆ. ಮತ್ತೆ ನಾನು ಮನೋಜ ಎಲ್ಲರೂ ಮಂಜನ ಹಿಂದೆ ಬಿಟ್ಟು ವಿಲಾಸ್ ಹಿಂದೆ ಬಿದ್ದೆವು. ಮಂಜ ಮಾತ್ರ ಒಬ್ಬನೇ ಆಗಿಬಿಟ್ಟ. ಮಂಜ ಒಬ್ಬನೇ ಆದರೂ ವಿಲಾಸ್ ಬಗ್ಗೆ ತಿಳಿದು ಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದ. ಅದು ನಮಗೆ ಕಂಡರು ನಾವು ಸುಮ್ಮನೇ ಇದ್ದೆವು. ಒಂದು ದಿನ ಮಂಜ ವಿಲಾಸನನ್ನು ಹಿಂಬಾಲಿಸುತ್ತಿದ್ದ. ಆಗ ವಿಲಾಸನಿಗೆ ಒಂದು ಹಾವು ಸಿಕ್ಕಿದೆ ಅದನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ಹೆದರಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದ. ನಾವೆಲ್ಲರೂ ತುಂಬಾ ಹೆದರಿದ್ದೆವು. ಮಂಜ ಅವನನ್ನು ಮನೆಯವರಿಗೂ ಹಿಂಬಾಲಿಸಿದ. ಆಗ ಆ ಹಾವು ಹಿಂದೆ ತಿರುಗಿ ವಿಳಾಸನ ಹೆಬ್ಬರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು. ವಿಳಾಸ ಎಷ್ಟೇ ತಡಕಾಡಿದರು ಕೈ ಬಿಡಲಿಲ್ಲ.

ಆಗ ಇದೆ ಅವಕಾಶ ಕಾಯುತಿದ್ದ ಮಂಜ ಅವನಿಗೆ ಕಡೆ ಹೋಗಿ "ನಾನು ಬಿಡಿಸುತ್ತೇನೆ" ಎಂದು ಹೇಳಿ ಅವನನ್ನು ಪೂರ್ತಿ ಶಾಲೆಯಲ್ಲಾ ತಿರುಗಿಸಿ ಅವನ ಪ್ರತಾಪವನ್ನು ಎಲ್ಲರಿಗೂ ತೋರಿಸಿಬಿಟ್ಟಿದ್ದ.

ಆಗ ನಮ್ಮ ಮಾಸ್ಟರ್‌ ಇವನಿಗೆ "ಲೇ ಒಂದು ವರ್ಷ ಫೈಲಾಗಿ ಇಲ್ಲಿ ಬಂದು ಮತ್ತೆ ಅದೇ ವರ್ಸೆ ಹಚ್ಚಿ ಕೊನ್ಡಿದ್ದಿಯ ಎಂದು" ಉಗಿದಿದ್ದರು.

ಕಡೆಗೆ ಮಂಜ ಒಬ್ಬ ಹವಾಡಿಗನ ಹತ್ತಿರ ಕರೆದುಕೊಂಡು ಹೋಗಿ ಅವನನ್ನು ಹಾವಿನಿಂದ ಮುಕ್ತ ಗೊಳಿಸಿದ್ದ. ಮಂಜನಿಗೆ ಎಲ್ಲಿಲ್ಲದ ದಿಗ್ವಿಜಯ ಸಾಧಿಸಿದ ಹಾಗೆ ಹಿರಿ ಹಿರಿ ಹಿಗ್ಗಿದ್ದ. ಮತ್ತೆ ನಾವೆಲ್ಲರೂ ಸಾವಕಾಶವಾಗಿ ಮಂಜನಿಗೆ ಹತ್ತಿರವಾಗ ತೊಡಗಿದೆವು.

ಇಷ್ಟೆಲ್ಲಾ ಆದರೂ ತನ್ನ ಹೆರೆತನದ ಬುದ್ಧಿಮಾತ್ರ ಬಿಟ್ಟಿರಲಿಲ್ಲ ವಿಲಾಸ. ಮತ್ತೊಂದು ದಿನ ಒಬ್ಬ ಪೋಲೀಸ್ ಇನ್‌ಸ್ಪೆಕ್ಟರ್ ಬೈಕ್ ಕೆಟ್ಟಿತ್ತು. ಆ ಉರಿಬಿಸಿಲಲ್ಲಿ ಎಷ್ಟೇ ಕಿಕ್ ಹೊಡೆದರೂ ಗಾಡಿ ಶುರುವಾಗಲಿಲ್ಲ. ಪೂರ್ತಿ ಮೈಯಲ್ಲ ಬೆವರಿಸಿತ್ತು. ಇನ್‌ಸ್ಪೆಕ್ಟರ್ ಹಾಗೆ ಕಿಕ್ ಹೊಡೆಯುವಾಗ ನಾವೆಲ್ಲರೂ ಹೆದರಿ ಹಿಂದೆ ನಿಂತು ನೋಡುತ್ತಿದ್ದೆವು.

ಆದರೆ ವಿಲಾಸ್ ಅವರ ಬಳಿ ಹೋಗಿ ಹಿರೇ ಮನುಷ್ಯರ ಹಾಗೆ ಹಿಂದೆ ಕೈಕಟ್ಟಿ ನೋಡುತ್ತಾ ನಿಂತ ಆನಂತರ ಸ್ವಲ್ಪ ಸಮಯದ ನಂತರ "ಏನ ಸರ್ ಬೈಕ್ ಶುರು ಆಗವಲ್ಲದ?" ಎಂದು ಕೇಳಿದ . ಆಗ ಇನ್‌ಸ್ಪೆಕ್ಟರ್ ಗೆ ಮೊದಲೇ ಕಿಕ್ ಹೊಡೆದು ಹೊಡೆದು ತಲೆ ಕೆಟ್ಟಿತ್ತು. ಇವನನ್ನು ನೋಡಿ "ಸುಮ್ಮನೇ ಹೋಗುವೆಯೋ ಅಥವಾ ಬೇಕೋ ಕಪಾಳಕ್ಕೆ ಎರಡು?" ಎಂದು ಗದರಿಸಿ ಅವನ ಮೇಲೆ ಕೈ ಎತ್ತಿದಾಗ ನಾವೆಲ್ಲರೂ ನಕ್ಕ್ಕಿದ್ದೆ ನಕ್ಕಿದ್ದು.

ಆನಂತರ ಒಂದೇ ವರ್ಷದಲ್ಲಿ ಮತ್ತೆ ವಿಲಾಸ ಬೇರೆ ವಿಳಾಸಕ್ಕೆ ವರ್ಗಾಯಿಸಿಕೊಂಡು ಹೋಗಿಬಿಟ್ಟಿದ್ದ.

Tuesday, November 24, 2009

2012 ರ ಸುಬ್ಬನ ಫ್ಲೈಟ್....

ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.

ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.

ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ ಸಹಿತ ಬುಕ್ ಮಾಡಿಲ್ಲ ಎಂದ.

ಏನು ಹನಿಮೂನಾ ಮಜಾ ಮಾಡು. ಏನು ದುಡ್ಡು ಗಿಡ್ಡು ಬೇಕೇನು? ಎಂದು ಮತ್ತೆ ಕೇಳಿದ ಮಂಜ.

ಇಲ್ಲ ಎಂದ ಪೇಲು ಮುಖದಿಂದ ಸುಬ್ಬ.

ಏನಪ್ಪಾ ಮತ್ತೆ ನಿನ್ನ ಸಮಸ್ಯೆ , ಏನಾದರು ನಿನ್ನ ಹೆಂಡತಿನ ಆ ಫ್ಲ್ಯೆಟ ನವರಿಗೆ ತೋರಿಸಿದ್ದೀಯ ಎಂದು ಕೇಳಿದ ಮಂಜ.

ನಾನು ಅದೇ ಇರಬೇಕು ನಿನ್ನ ಹೆಂಡತಿ(ಅವಳ ಧಡೂತಿ ದೇಹ...) ನೋಡಿ ಫ್ಲ್ಯೆಟ ಕ್ಯಾನ್ಸಲ್ ಮಾಡಿರಬೇಕು ಎಂದೇ.

ಸುಬ್ಬನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ನಿಮ್ಮಿಬ್ಬರಿಗೂ ನನ್ನನ್ನ ಕಂಡ್ರೆ ಅಷ್ಟೇ ಮಕ್ಳ. ನಿಮಗೆ ಇದೆ ಜಾತ್ರೆ ಬರಲಿ 2012 ಅವಾಗ ನಿಮಗ ಗೊತ್ತು ಆಗ್ತದ ಎಂದ.

ಏನಪ್ಪಾ ಗೊತ್ತಾಗೋದು ಹೇಳು ಎಂದು ಇಬ್ಬರು ಕೇಳಿದೆವು.

ಆಗ ಸುಬ್ಬ 2012 Dec 21 ಎಲ್ಲರು ಪ್ರಳಯ ಆಗಿ ಸಾಯಿತರಲ್ಲ ಅವಾಗ ನೀವೇ ಮೊದಲು ಸಾಯೋದು ಮೊದಲು, ನನ್ನ ಹಾಗೆ ಎಷ್ಟು ಜನ ನಿಮ್ಮ ಮೇಲೆ ಶಾಪ ಹಾಕಿರ್ತಾರೆ. ಬರಿ ಜನರನ್ನು ಪಿಡಿಸೋದೆ ನಿಮ್ಮ ಕೆಲಸ ಎಂದ ಸುಬ್ಬ.

ಮಂಜ ಆಯಿತಪ್ಪ ನಾವೇ ಸಾಯಿತಿವಿ ನಿನ್ನ ಸಮಸ್ಯೆ ಏನು?. ನೀನು ಹೋಗೋ ಊರಿಗೆ ಫ್ಲ್ಯೆಟ ಇಲ್ಲ ಏನು ಮತ್ತೆ. ಇದನ್ನು .ಅರೇಂಜ್ ಮಾಡು ಎಂದರೇ ನಮ್ಮ ಕಡೆ ಆಗುದಿಲ್ಲ ನೋಡು ಮತ್ತೆ ಎಂದ.

ನಾನು ಗಗನ ಸಖಿಯರು ಇಲ್ಲವೇನೋ ಆ ಫ್ಲ್ಯೆಟ ಅಲ್ಲಿ ಎಂದೇ.

ನಿಮಗೆ ಹೇಳೋದು ಒಂದೇ "ಆನಿಗೆ ಚಡ್ಡಿ ಹೊಲಸೋದು ಒಂದೇ" ಎಂದು ಎದ್ದು ಮನೆಗೆ ಹೋಗಲು ಅಣಿಯಾದ.

ಹೊ ಹಂಗೆ ಏನು ರೆಡೀಮೇಡ್ ತೆಗೆದುಕೊಳ್ಳುವದಿಲ್ಲ ಎಂದ ಮಂಜ. ಮತ್ತೆ ನೀನು ಒಂಟೆ ಮಹಾರಾಜ ಹೊಲಸಿಕೊಳ್ಳುತ್ತೀಯೋ ಇಲ್ಲವಾ ರೆಡೀಮೇಡೋ.... ಎಂದ ಮಂಜ.

ಆಗ ಸುಬ್ಬ ಹೌದು ಕಣ್ರೋ ನನ್ನ ಹೆಂಡತಿ ಸ್ವಲ್ಪ ದಪ್ಪ ಅದಕ್ಕೆ ಅವಳನ್ನ ಆನೆ ಅಂತ ಇದ್ದೀರ ಎಂದ. ನಾವೆಲ್ಲಿ ಅಂದೆವು ನೀನೆ ತಾನೇ ಆನೆಗೆ ಚಡ್ಡಿ ಹೋಲಿಸೋ ಮಾತು ಆಡಿದ್ದು ಎಂದ ಮಂಜ.

ನಾನು ಒಳಗೊಳಗೆ ನಗುತ್ತಿದ್ದೆ.

ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಬೇರೆದೆ ಚಿಂತೆ ...ಹಾಗಾಯಿತು ನಿಮ್ಮದು ಎಂದ ಸುಬ್ಬ.

ಆಯಿತು ಈಗ ನಿನ್ನ ಸಮಸ್ಯೆ ಏನು ಹೇಳು ಎಂದೆ.

ಆಗ ಸುಬ್ಬ ೨೦೧೨ ಕ್ಕೆ ಎಲ್ಲರೂ ಸತ್ತು ಹೋಗುತ್ತೇವೆ ಕಣೋ. ಇನ್ನೂ ಒಂದು ಫ್ಲೈಟ್ ಅಥವಾ ಮನೆ ಸಹಿತ ಮಾಡ್ಲಿಕ್ಕೆ ಆಗಲಿಲ್ಲ ಎಂದ ಸುಬ್ಬ.

ಆಗ ನಮ್ಮಿಬ್ಬರಿಗೂ ನಗು ತಡಯಲಿಕ್ಕೆ ಆಗದೆ ಜೋರಾಗಿ ನಕ್ಕೆವು. ಅದು ಫ್ಲೈಟ್ ಅಲ್ಲ ಕಣೋ ಸುಬ್ಬ ಅದು ಫ್ಲಾಟ್ ಎಂದು ಎಂದೆ.

ಆಗ ಮಂಜ ಸುಮ್ಮನಿರಲಾರದೇ ಹಾಗೇನೂ ಆಗುವದಿಲ್ಲ ಅದೆಲ್ಲ ಸುಮ್ನೇ ಹಬ್ಬಿಸಿದ್ದಾರೆ. "ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ" ಹಾಗಾಯಿತು ನಿನ್ನ ಕತೆ ಅಷ್ಟು ನಮ್ಮ ಕೈ ಮೀರಿ ಆಯಿತು ಎಂದರೆ. ನಿನಗೆ ಬೇಕಾಗುವದು ಫ್ಲೈಟ್ ಮತ್ತೆ ಫ್ಲಾಟ್ ಅಲ್ಲ ಕಣೋ ಸುಬ್ಬ 6 X 3 ನಿನ್ನ ಹೆಂಡತಿಗೆ ಸ್ವಲ್ಪ ಜ್ಯಾಸ್ತಿ .... ಎನ್ನುವಷ್ಟರಲ್ಲೇ ಸುಬ್ಬ ಕೋಪದಿಂದ ಮಂಜನನ್ನು ಬೈದು ಮನೆಗೆ ಸೇರಿದ.

ಹೀಗೆ ನಮ್ಮ ಸುಬ್ಬ ಬೇರೆ ಬೇರೆ ವಿಷಯ ತಲೆಯಲ್ಲಿ ಹುಳ ಬಿಟ್ಟು ಕೊಳ್ಳುವ ಸ್ವಭಾವ. ಒಂದು ದಿವಸ ಅಕೌಂಟ್ಸ್ ಟ್ಯಾಲೀ ಆಗಿದ್ದಿಲ್ಲ. ಹಾಗೆ ಯೋಚನೆ ಮಾಡುತ್ತಾ ಆಫೀಸದಿಂದ ಮನೆಗೆ ಬಂದ. ಹೆಂಡತಿ ಪೇಟೆಗೆ ಕರೆದುಕೊಂಡು ಹೋಗು ಎಂದು ಹೇಳಿದಳು. ಅವನು ಅದೇ ಗುಂಗಿನಲ್ಲಿ ಅವಳನ್ನು ಕರೆದು ಕೊಂಡು ಹೋಗಿದ್ದ. ಅವಳು ಸಾಮಾನು ತರಲು ಬೇರೆ ಅಂಗಡಿ ಹೋದಾಗ, ಏನೋ ವಿಚಾರ ಹೊಳೆದಿದೆ. ಕೂಡಲೇ ಆಫೀಸಗೆ ಹೋಗಿ ಅಕೌಂಟ್ಸ್ ಟ್ಯಾಲೀ ಮಾಡುತ್ತಾ ಕುಳಿತು ಬಿಟ್ಟಿದ್ದ. ಅನಂತರ ಹೆಂಡತಿಯ ನೆನಪಾಗಿ ಪೇಟೆ ಪೂರ್ತಿ ಸುತ್ತಿ ಬಂದಿದ್ದ. ಹೆಂಡತಿಗೆ ಕೋಪ ಬಂದು ಇವನ ಸಹವಾಸವೇ ಬೇಡ ಎಂದು ತವರು ಮನೆಗೆ ಹೋಗಿಬಿಟ್ಟಿದ್ದಳು. ಮತ್ತೆ ಸಮಜಾಯಿಸಿ ಮನೆಗೆ ಕರೆದುಕೊಂಡು ಬಂದಿದ್ದ.

ಇಷ್ಟೇ ಅಲ್ಲ ಅವನು ಕಂಪ್ಯೂಟರ್ ನಲ್ಲಿ ಲೆಕ್ಕ ಸರಿಯಾಗಿ ಇದೆಯೋ ಇಲ್ಲವೋ ಎಂದು ತಾಳೆ ಹಾಕುವದಕ್ಕೆ ಕ್ಯಾಲ್ಕ್ಯುಲೇಟರ್ ಬಳುಸುತ್ತಾನೆ.

ಸುಬ್ಬನ ಫ್ಲೈಟ್ ರಾತ್ರಿ ಪೂರ್ತಿ ನಮ್ಮ ತಲೆಯಲ್ಲಿ....ಹಾರಾಡುತಿತ್ತು ಲ್ಯಾಂಡಿಂಗ್ ಆಗದೆ.

Tuesday, November 10, 2009

ರಾಹು ಕೇತು ಮನೋಜ ಮನೆಗೆ ಹೋದಾಗ....

ನಾನು ಮತ್ತೆ ಮಂಜ ಒಂದು ದಿವಸ ಮನೋಜನ ಮನೆಗೆ ಹೋಗಬೇಕೆಂದು ನಿರ್ಧರಿಸಿದೆವು. ಮನೋಜನಿಗೆ ಮೊದಲೇ ಫೋನ್ ಮಾಡಿ ಅವನ ಹೆಂಡತಿಯ ನಮ್ಮ ಮೇಲೆ ಇರುವ ಕೋಪದ ಬಗ್ಗೆ ಕೇಳಿ ತಿಳಿದುಕೊಂಡು ಆನಂತರನೇ ಅವನ ಮನೆಗೆ ಹೋಗುವುದೆಂದು ನಿರ್ಧಾರ ಮಾಡಿದೆವು. ಮನೋಜನ ಮನೆ ಸಮೀಪ ಒಂದು ದೊಡ್ಡದಾದ ಕ್ಯು ಇತ್ತು, ಅದು ಯಾವುದು ನೀರಿನ ಅಥವಾ ಸಿಮೇಯೆಣ್ಣೆ ಕ್ಯು ಇರಬೇಕೆಂದು ನಾವು ಗೇಟ್ ಮುಂದೆ ಹೋಗುತ್ತಿದ್ದಾಗ ಗೊತ್ತಾಯಿತು ಅದು ಶಾಸ್ತ್ರ ಕೇಳಲು ಬಂದ ಜನರ ಸಾಲು ಎಂದು. ಒಬ್ಬ ಹಿರಿಯರು "ರೀ ಸಾಲಿನಲ್ಲಿ ಬನ್ನಿರಿ ಎಂದರು". ಅವರ ಮಾತು ಕೇಳಿ ನಾವು ಮನೋಜನ ಗೆಳೆಯರು ಎಂದು ಹೇಳಿದೆವು. ಆದರು ನಮ್ಮನ್ನು ಒಳಗೆ ಬಿಡಲಿಲ್ಲ. ಆಗ ಆ ಹಿರಿಯರು ನಾನು ಅವರ ಸಂಭಂದಿನೆ ಸಾಲಿನಲ್ಲಿ ಬರುತ್ತಿಲ್ಲವಾ? ಎಂದು ವ್ಯಂಗ್ಯವಾಗಿ ನುಡಿದರು. ಮತ್ತೆ ಸಾಲಿನಲ್ಲಿ ಇದ್ದ ಎಲ್ಲ ಜನರು ನಮ್ಮನ್ನು ಗದರಿಸಿ ಸಾಲಿನಲ್ಲಿ ಬರಬೇಕೆಂದು ಆಜ್ಞೆ ಮಾಡಿದರು. ಮತ್ತೆ ಅವರ ಸೆಕ್ಯೂರಿಟಿ ಗಾರ್ಡ್ ಕೂಡ ನಮ್ಮನ್ನು ಸಾಲಿನಲ್ಲಿ ತಂದು ನಿಲ್ಲಿಸಿದ. ನಮ್ಮಿಬ್ಬರಿಗೂ ಏನು ಮಾಡಬೇಕೆಂಬುದೇ ತೋಚದಾಗಿತ್ತು. ಆಗ ಮಂಜ ಮನೋಜನ ಮೊಬೈಲ್ ಫೋನ್ ಮಾಡಿದ ಆದರೆ ಅದು ಸ್ವಿಚ್ ಆಫ್ ಆಗಿತ್ತು. ಆಗ ತಾನೆ ಬಿಸಿಲಿನ ಬೇಗೆ ಏರುತಿತ್ತು. ನಾನು ಮತ್ತೆ ಮಂಜ ಬೆವರಿನಿಂದ ಸ್ನಾನ ಮಾಡಿದ ಹಾಗೆ ಆಗಿತ್ತು. ಮುಂದೆ ಇರುವ ವ್ಯಕ್ತಿ ಬೇಗನೆ ಎದ್ದು ಹಳ್ಳಿಯಿಂದ ಇಲ್ಲಿಗೆ ಬಂದಿದ್ದ. ಅವನು ಸ್ನಾನ ಮಾಡಿರಲಿಲ್ಲವಾದ್ದರಿಂದ ಬೆವರಿನ ವಾಸನೆ ಇಂದ ಕೆಟ್ಟದಾಗಿ ನಾರುತಿದ್ದ. ಮತ್ತೆ ನಮಗೆ ಹೇಳಿದ "ಸ್ವಾಮಿ ಈ ಜ್ಯೋತಿಷಿಗಳು ತುಂಬ ಶ್ಯಾಣ್ಯಾ ರೀ" ಎಂದ. ನಾನು ನೋಡಿರಿ ಹಳ್ಳಿಯಿಂದ ಬಂದು ಇಲ್ಲೇ ಶಾಸ್ತ್ರ ಕೇಳೋದು ಎಂದ. ಅವನ ಬಾಯಿ ವಾಸನೆ ಇಂದ ನಮಗೆ ವಾಂತಿ ಬರುವುದೊಂದೇ ಬಾಕಿ. ಮಂಜ ಸುಮ್ಮನಿರದೆ ಏನು ಶಾಸ್ತ್ರ ಕೇಳುವುದಕ್ಕೆ ಬಂದಿದ್ದಿರಾ? ಎಂದು ಕೇಳಿದ. ಅದಕ್ಕೆ ಆ ಮನುಷ್ಯ ಏನಿಲ್ಲ ಶಾನೆ ದಿವಸದಿಂದ ಹೊಟ್ಟೆ ನೋವು ಅದಕ್ಕೆ ಎಂದ. ರೀ ನಿಮಗೆ ಬೇಕಾಗಿರೋದು ಶಾಸ್ತ್ರ ಅಲ್ಲರಿ ಶಸ್ತ್ರ ಚಿಕಿತ್ಸೆ ಹೋಗಿ ಯಾವುದಾದರೂ ಡಾಕ್ಟರ ಬಳಿ ಚಿಕಿತ್ಸೆ ಪಡಿರಿ ಎಂದ ಮಂಜ. ಆಗ ಆ ಮನುಷ್ಯ ರೀ ಸುಮ್ನಿರಿ ರಾಯರ ಬಗ್ಗೆ ಹಂಗೆಲ್ಲ ಮಾತನಾಡಬೇಡಿ. ಅವರು ತುಂಬಾ ಜಾಣರು. ಡಾಕ್ಟರ ಕಡೆ ಹೋದ್ರ ಇದ್ದಿರೋ ದುಡ್ಡು ಮತ್ತೆ ಹೊಟ್ಟಿ ಒಳಗಿನ ಸಾಮಾನು ಎಲ್ಲ ತೋಗೊತಾರ. ಆ ಮನುಷ್ಯ ಪ್ರತಿ ಬಾರಿ ಮಾತನಾಡುವಾಗಲು ಅವನ ಬಾಯಿಯಿಂದ ವಾಸನೆ ಬರುತಿತ್ತು. ಮತ್ತೆ ನಮ್ಮಿಬ್ಬರ ಮೇಲೆ ಆ ಉರಿಬಿಸಿಲಲ್ಲೂ ಮುಂಗಾರು ಮಳೆ (ಉಗಳಿನ ಹನಿಗಳು). ನಾನು ಸುಮ್ಮನೆ ಇರು ಎಂದರು ಮಂಜ ಕೇಳದೆ ನಿನ್ನ ಒಳಗ ಏನು ಸಾಮಾನು ಅದ ಹೇಳು? ಎಂದ. ಛಿ ನನಗ ನಾಚಿಗಿ ಆಗ್ತೈತ್ರಿ ಎಂದ. ಏನು ಹೇಳು ನಾಚಿಗಿ ಯಾಕ ಎಂದು ಹುರುದುಂಬಿಸಿದ ಮೇಲೆ. ಅದು ಅದು ಕಿಡ್ನಿ ಎಂದ. ನಾವಿಬ್ಬರು ಹಾಗೆ ಮುಗುಳ್ನಕ್ಕೆವು. ಆದರು ಸುಮ್ಮನೆ ಬಿಡದೆ ನಮ್ಮ ತಲೆ ತಿನ್ನ ಹತ್ತಿದ ಆ ಮನುಷ್ಯ. ಆಗ ನಾನು ಹೇಳಿದೆ ಲೇ ಇನ್ನೊ ಸ್ವಲ್ಪ ಬೇಗನೆ ಬರಬಹುದಿತ್ತು ಇವನ ಕಾಟನಾದರೂ ತಪ್ಪುತ್ತಿತ್ತು. ನಾನು ಆಟೋಕೆ ಹೋಗೋಣ ಎಂದೆ ನೀನು ಬೇಡ ಅಂದೇ ನೋಡು ಈಗ ಪರಿಸ್ಥಿತಿ ಎಂದೆ. ಆಗ ಮಂಜ ನನಗೇನು ಗೋತ್ತಾಪ್ಪ ಈ ಮಹರಾಯ ಇಷ್ಟು ಬ್ಯುಸಿ ಮನುಷ್ಯ ಎಂದು ಅಂದ.

ಏನು ಮಾಡಲಾರದೆ ಉರಿಬಿಸಿಲಲ್ಲಿ ಎರಡು ಘಂಟೆ ಕ್ಯುನಲ್ಲಿ ನಿಂತು ಒಳಗಡೆ ಹೋದೆವು.

ಮನೋಜನ ಥೇಟ ಸ್ವಾಮೀಜಿಯಂತೆ ವೇಷ ಧರಿಸಿದ್ದ. ಮನೆ ತುಂಬ ದೇವರ ಫೋಟೋಗಳು. ಯಾವದೋ ಒಂದು ಮಠಕ್ಕೆ ಹೋದ ಹಾಗೆ ಅನ್ನಿಸಿತು. ನಮ್ಮನ್ನು ನೋಡಿ ಮನೋಜ "ಲೇ ಯಾವಾಗ ಬಂದಿರೋ ಎಂದು ಕೇಳಿದ". ನನಗೆ ಮತ್ತೆ ಮಂಜನಿಗೆ ತುಂಬ ಕೋಪ ಬಂದಿತ್ತು ಬಂದು ಎರಡು ಘಂಟೆ ಆಯಿತು. ನಿನ್ನ ಕ್ಯು ನಲ್ಲಿ ಬರುವ ಹೊತ್ತಿಗೆ ಇಷ್ಟೊತ್ತು ಆಯಿತು ಎಂದೆ.ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಇಷ್ಟು ಕಷ್ಟ ಪಟ್ಟಿರಲಿಲ್ಲ ಎಂದ ಮಂಜ. ಆಗ ಮನೋಜ ಸಾರೀ ಕಣ್ರೋ ನಾನು ನನ್ನ ಸೆಕ್ಯೂರಿಟಿಯವನಿಗೆ ಹೇಳುವುದನ್ನು ಮರೆತೆ ಅದಕ್ಕೆ ನಿಮಗೆ ಅವ ಒಳಗೆ ಬಿಡಲಿಲ್ಲ ಎಂದು ತಾನೆ ಹೋಗಿ ಎರಡು ಕಪ್ ಕಾಫಿ ತೆಗೆದು ಕೊಂಡು ಬಂದ. ಆಗ ನಾನು ಮತ್ತೆ ಮಂಜ ನಮಗೆ ಸ್ವಲ್ಪ ಕೈ ಕಾಲು ತೊಳೆದು ಬರಬೇಕೆಂದು ಹೋಗಿ ಪೂರ್ತಿ ಬಕೆಟ್ ತಣ್ಣೀರು ಮೈಯಲ್ಲ ಸುರಿದು ಕೊಂಡು ಬಂದೆವು. ಕಾಫಿ ಆಗಲೇ ತಂಪಾಗಿತ್ತು ಆದರು ಅದನ್ನೇ ಹೀರಿದೆವು. ಮತ್ತೆ ಹೇಗೆ ಬಂದಿರಿ ಎಂದ ಮನೋಜ. ಆಗ ಮಂಜ ಬಸ್ನಲ್ಲಿ ಎಂದಾ. ನೆರೆ ಸಂತ್ರಸ್ತರ ನಿಧಿಗೆ ಚೆಕ್ ಏನಾದರು ಕೊಡುವೆಯ ಎಂದು ಕೇಳಿದ ಮಂಜ. ಆಗ ಮೊನೋಜ ನಾನು ಆಗಲೇ ಕೊಟ್ಟಿದ್ದೇನೆ ನೋಡಿ ಇಲ್ಲಿದೆ ಬ್ಯಾಂಕ್ ಸ್ಟೇಟ್ಮೆಂಟ್ ಎಂದು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿದ. ಆಗ ಮನೋಜ "ಲೇ ನೀವು ಆಟೋ ನಲ್ಲೆ ಬರಬೇಕಿತ್ತು" ಬೇಗ ಬರುತ್ತಿದ್ದಿರಿ ಎಂದ. ನಾನು ಹೇಳಿದೆ ಮಂಜ ಕೇಳಲಿಲ್ಲ ಎಂದೆ. ಆಗ ಮಂಜ ಯಾಕಪ್ಪ ಅಷ್ಟು ದುಡ್ಡು ವೇಸ್ಟ್ ಎಂದ. ಅದಕ್ಕೆ ಮನೋಜ ಎಲ್ಲರು ನಿನ್ನ ಹಾಗೆ ಯೋಚನೆ ಮಾಡ್ತಾ ಹೋದರೆ ಈ ಆಟೋನವರು ಹೇಗೆ ಬದುಕಬೇಕೋ ಎಂದು ನಮಗೆ ಬುದ್ಧಿವಾದ ಹೇಳಿದ. ಆಗಲೇ ನಮಗೆ ಗೊತ್ತಾಗಿತ್ತು ಇವನ ೨೦ ಜನರಲ್ಲಿ ೧೨ ರಷ್ಟು ಬರಿ ಆಟೋ ಚಾಲಕರೆ ಇದ್ದರು. ಇವನು ಹೇಳಿದ್ದು ತನ್ನ ವ್ಯವಹಾರ ಚೆನ್ನಾಗಿರಲೆಂದು ಎಂದು ತಿಳಿಯಿತು. ಮನೋಜ ಇನ್ನು ಇಬ್ಬರು ಇದ್ದಾರೆ ಮುಗಿಸಿ ಬಿಡುತ್ತೇನೆ ಎಂದ. ನಾವು ಆಯಿತು ಎಂದು ಅಲ್ಲೇ ಮನೆ ಮುಂದೆ ಇರುವ ಚೇರ್ ಮೇಲೆ ಕುಳಿತೆವು. ಆಗ ಒಬ್ಬ ಮನುಷ್ಯ ಬಂದು ನಮಗೆ ಕಾಲು ಬಿದ್ದು ತನ್ನ ಸಮಸ್ಯೆ ಹೇಳಲಾರಮ್ಬಿಸಿದ. ನಾವು ಏನು ತೋಚದೆ ಅವನಿಗೆ ಒಳಗೆ ಹೋಗಪ್ಪ ನಿಮ್ಮ ಸ್ವಾಮೀಜಿ ಇದ್ದಾರೆ ಎಂದು ಕಳುಹಿಸಿದೆವು.

ಆಗ ಹೋಗುತ್ತಲೇ ಆ ಮನುಷ್ಯನ ಜಾತಕ ನೋಡಿ .. ಮನೋಜ

ನಿನಗೆ ಗ್ರಹಗಳು ಚೆನ್ನಾಗಿಲ್ಲ.. ನೀನು ಬುಧ , ಶನಿ ಮತ್ತೆ ಗುರು ಶಾಂತಿ ಮಾಡಿಸಬೇಕು ಎಂದು ಹೇಳಿದ.
ಅದನ್ನು ಮಾಡಿಸಿ ನೀನು ಧರ್ಮಸ್ಥಳಕ್ಕೆ ಹೋಗಿ ನಿನ್ನ ಅಳತೆಯಷ್ಟು ಅಕ್ಕಿ ಕೊಡಬೇಕು ಎಂದ. ಮತ್ತೆ ಮಂತ್ರಾಲಯಕ್ಕೆ ಹೋಗಿ ಅಲ್ಲಿ ಒಬ್ಬ ಆಚಾರ್ಯರಿದ್ದಾರೆ ಅವರ ಹತ್ತಿರ ಒಂದು ವಿಶೇಷ ಪೂಜೆ ಮಾಡಿಸುತ್ತಾರೆ ಬರೀ 10000 ಅಷ್ಟೇ ಎಂದ. ಎಲ್ಲ ಒಳ್ಳೆಯದಾಗುತ್ತೆ ಎಂದ. ಆಗ ಮನುಷ್ಯ ಸರ್ ಇದು ನನ್ನ ಜಾತಕ ಅಲ್ಲ ಇದು ನನ್ನ ಮಾವನವರ ಜಾತಕ ಅವರಿಗೆ ತುಂಬಾ ಹಣವಿದೆ ಅವರು ಯಾವಾಗ ಶಿವನ ಪಾದ ಸೇರುತ್ತಾರೆ ನೋಡಿ ಹೇಳಿ ಎಂದ. ಮೊದಲೇ ಹೇಳಬಾರದ ಎಂದು ಕೋಪಗೊಂಡ ಮನೋಜ. ಯಾಕಪ್ಪ ನಿನ್ನ ಮಾವನ್ನ ಸಾಯಿಸಬೇಕು ಎಂಬ ವಿಚಾರ ಎಂದ. ಅವರ ಆಸ್ತಿ ಎಲ್ಲ ನಂದೇ ಆಗುತ್ತಲ್ಲ ಅದಕ್ಕೆ ...ಎಂದ. ಅದಕ್ಕೆ ಮನೋಜ ಇಂತಹ ಕೆಲಸಕ್ಕೆ ಬೇರೆಯವರನ್ನು ಕೇಳು ನಾನು ಇಂತಹ ಕೀಳು ಕೆಲಸ ಮಾಡುವುದಿಲ್ಲ ಎಂದು ಬೈದು ಕಳುಹಿಸಿದ.


ಇಬ್ಬರನ್ನು ಶಾಸ್ತ್ರ ಹೇಳಿ ಮುಗಿಸಿವಷ್ಟರಲ್ಲಿ ಒಂದು ಘಂಟೆ ಆಗಿತ್ತು. ಮತ್ತೆ ಮನೋಜ ಇಲ್ಲಿಯೇ ಊಟ ಮಾಡಿ ಹೋಗಿ ಎಂದು ಹೇಳಿದ. ನಮಗೂ ಮನೆ ಬಿಟ್ಟು ತುಂಬ ಸಮಯವಾಗಿದ್ದರಿಂದ. ನಾವು ಆಯಿತು ಎಂದು ಹೇಳಿದೆವು. ಆಗ ನಮಗೆ ತಿಳಿಯಿತು ಅವನ ಹೆಂಡತಿನೇ ಅವನ ಗುರು ಎಂದು. ಅಂದರೆ ಊಟ ಹಾಕುವದನ್ನು ಗುಣಿಸಿ ಭಾಗಿಸಿ ಲೆಕ್ಕಾಚಾರ ಹಾಕಿ ನಮಗೆ ಊಟ ಬಡಿಸಿದಳು . ನಮಗೆ ಅನ್ನಿಸಿತು ನಾವಿಬ್ಬರು ಏನು ರಾಹು ಕೇತುಗಳ ಎಂದು. ಕಡೆಗೆ ಮನೆಯ ದಾರಿ ಹಿಡಿದೆವು. ಮನೆ ಸಮೀಪಿಸುತ್ತಿದ್ದಂತೆ ಮತ್ತೆ ಹೊಟ್ಟೆ ಚುರುಗುಡುತಿತ್ತು. ಅನಂತನ ಹೋಟೆಲ್ಗೆ ಹೋಗಿ ಬೆಣ್ಣೆ ದೋಸೆ ತಿಂದು ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದು ಗೂಡು ಸೇರಿಕೊಂಡೆವು.

Monday, October 12, 2009

ನಾ ಕಷ್ಟ ಪಟ್ಟೆ....

ಮೊನ್ನೆ ಮನೋಜ್ (ಪಂಚಾಮೃತ ಮನ್ಯ) ಭೇಟಿಯಾಗಿದ್ದ. ಅವನನ್ನು ನೋಡಿ ನನಗೆ ಗುರುತು ಹಿಡಿಯಲಾಗಲಿಲ್ಲ. ಏಕೆಂದರೆ, ಮೊದಲು ಅವನು ಹರಕು ಬಟ್ಟೆ ಮತ್ತೆ ಹವಾಯಿ ಚಪ್ಪಲ ಮೇಲೆ ಇರುತ್ತಿದ್ದ. ಈವಾಗ ಅವನ ರೂಪು ರೇಷೆ ಎಲ್ಲವು ಬದಲಾಗಿತ್ತು. ಅವನು ಸೂಟ್ ಮೇಲೆ ಮತ್ತೆ ಒಂದು ಹೊಸ ಕಾರ್ ನೊಳಗಿಂದ ಇಳಿದು ಬಂದು ನನ್ನನ್ನು ಮಾತನಾಡಿಸಿದ. ಹಾಗೆ ಕಾಫಿ ಕುಡಿದ ನಮ್ಮ ಕ್ಷೇಮ ಸಂಚಾರಗಳನ್ನು ಮಾತನಾಡುತ್ತ ಇದ್ದೆವು.

ನಾನು: ಏನು ಸಮಾಚಾರ?

ಮನೋಜ್: ಏನು ಅಂತಹ ವಿಶೇಷ ಇಲ್ಲ ಎಂದ.


ಸ್ವಲ್ಪ ಸಮಯದ ನಂತರ ಮನೋಜ ಶುರು ಹಚ್ಚಿಕೊಂಡ ನಾನು ತುಂಬಾ ಕಷ್ಟ ಪಟ್ಟೆ. ಮನೆಯಲ್ಲಿ ಬೇಗನೆ ಮದುವೆ ಬೇರೆ ಮಾಡಿಬಿಟ್ಟರು ಅವಳ ಜವಾಬ್ದಾರಿ. ಮತ್ತು ತಂಗಿಯ ಮದುವೆ ಜವಾಬ್ದಾರಿ ಕೂಡ ನಿಭಾಯಿಸಿದೆ . ಎಂದೆಲ್ಲ ಹೇಳುತ್ತಿದ್ದ. ಅಷ್ಟರಲ್ಲೇ ನಮ್ಮ ಮಂಜ ಬಂದ.

ನಾನು ತುಂಬಾ ಕಷ್ಟ ಪಟ್ಟೆ ಎಂಬ ಮನ್ಯಾನ ಉದ್ಗಾರ ಮಾತ್ರ ನಿಲ್ಲಲಿಲ್ಲ.

ಮದುವೆ ಆದ ಮೇಲು ತುಂಬಾ ಕಷ್ಟ ಎಂದ. ಅಮ್ಮ ಮೊಮ್ಮಕ್ಕಳು ಬೇಕು ಎಂದು ಹಠ ಹಿಡಿದಳು. ನಾನು ಏನು ಮಾಡಲಿ ತುಂಬಾ ಕಷ್ಟ. ಯಾರು ಸಹಾಯಕ್ಕೆ ಬರಲಿಲ್ಲ ಎಂದ.

ಮಂಜನಿಗೆ ಮತ್ತು ನನಗೆ ತುಂಬಾ ಗಾಬರಿ ಆಯಿತು..

ಯಾರ ಬರಬೇಕಿತ್ತು ಸಹಾಯಕ್ಕೆ.... ಎಂದು ಕೇಳಿದ ಮಂಜ.

ನನ್ನ ಹೆಂಡತಿ ಕಡೆ ಯಾರು ಹೆರಿಗೆ ಸಮಯದಲ್ಲಿ ಸಹಾಯಕ್ಕೆ ಬರಿಲಿಲ್ಲ ಎಂದಾಗ. ನಾನು ಮತ್ತು ಮಂಜ ನಿಟ್ಟುಸಿರು ಬಿಟ್ಟೆವು.

ಮತ್ತೆ ಮನೋಜ ಗುಡಿಗೆ ಹೋಗೋಣವೆ ಎಂದು ಕರೆದ...

ದಾರಿಯುದ್ದಕ್ಕೂ ಇವನ ಕಷ್ಟ ಕೇಳಿ ಕೇಳಿ ನಮ್ಮ ಕಿವಿ Burst ಆಗುವದೊಂದೇ ಬಾಕಿ ಉಳಿದಿತ್ತು.

ಮಂದಿರ ಪ್ರವೇಶಿಸಿದೆವು... ಮಂಗಳಾರತಿ ಮುಗಿದ ಮೇಲೆ ಗರಿ ಗರಿ ಯಾದ 500 ರೂಪಾಯಿಗಳ ನೋಟನ್ನು ಸ್ವಾಮೀಜಿಗೆ ಕೊಟ್ಟ.ಮಂದಿರದಿಂದ ಹೊರಗೆ ಬಂದೆವು.

ಮತ್ತೆ ನಮ್ಮ ಸಂಭಾಷಣೆ ಉತ್ತರ ಕರ್ನಾಟಕದಲ್ಲಿ ನಡೆದ ಭೀಕರ ಜಲ ಪ್ರಳಯದ ಬಗ್ಗೆ ಶುರು ಆಯಿತು.ಮನೋಜ ಮತ್ತೆ ಕಷ್ಟ ಕಷ್ಟ ....ಎಂದು ಎಷ್ಟು ಜನ ನಿರಾಶ್ರಿತರಾಗಿದ್ದಾರೆ. ಅವರಿಗೆ ಊಟ ವಸತಿ ಕಲ್ಪಿಸುವ ಕೆಲಸ ನಾವು ಮಾಡಬೇಕು ಎಂದಲ್ಲ ಬೊಗಳೆ ಬಿಟ್ಟ...

ನಮ್ಮ ಆಫೀಸ್ನಲ್ಲಿ ನಾವು ಫಂಡ್ collect ಮಾಡ್ತಾ ಇದ್ದೇವಿ. ನೀನು ಕೊಡು ಎಂದು ಮನೋಜನಿಗೆ ಕೇಳಿದ ಮಂಜ.


ಅದಕ್ಕೆ ಮನೋಜ ಕಷ್ಟ ಕಷ್ಟ ಕೊಟ್ಟಿದ್ದೆಲ್ಲ, ಏನು ಅವರಿಗೆ ಸೇರುತ್ತೇನೋ...ಅದೆಲ್ಲ ಬೇರೆ ಬೇರೆಯವರು ತಿಂದು ಬಿಡುತ್ತಾರೆ ಎಂದ.


ಅದಕ್ಕೆ ಮಂಜನಿಗೆ ಕೆಟ್ಟ ಕೋಪ ಬಂದಿತ್ತು. ಸ್ವಾಮಿಜಿಗೆ ಕೊಡೋಕೆ 500 ರೂಪಾಯಿ. ಆದರೆ ಇಂತಹ ಸಹಾಯ ಕಾರ್ಯಗಳಿಗೆ ಸುಮ್ಮನೆ ಬೊಗಳೆ ಎಂದು. ಏನ ಲೇ "ಮನ್ಯಾ ನೀನು ಏನಾದರು ತಿಂದೆ ಅಂದರೆ ಅದೆಲ್ಲ ಏನು ಜೀರ್ಣವಾಗುತ್ತ. ಸ್ವಲ್ಪ ...ಏನು... 70% ಹೊರಗೆ ಬರುತ್ತೆ ತಾನೆ ಎಂದ ಮಂಜ.

ಆಯಿತು ಬನ್ನಿ ಕೊಡೋಣ ಎಂದ. ಪಂಚಾಮೃತ ಏನರ ಕುಡಿಯೋಣವೇ ಎಂದು ಕೇಳಿದ ನಮ್ಮ ಮನೋಜ. ಆಯಿತು ಎಂದು ನಾವೆಲ್ಲರೂ ಬಾರ್ ಪ್ರವೇಶಿಸಿದೆವು. ಮತ್ತೆ ನಾವೆಲ್ಲರೂ ಆರ್ಡರ್ ಮಾಡಿದೆವು. ವೈಟರ್ ಬರುವದು ಲೇಟ್ ಆದರು ಕಷ್ಟ ಕಷ್ಟ ಎಂಬ ಉದ್ಗಾರ..ನಾನು ಮಾತ್ರ ನನಗೆ ಪಂಚಾಮೃತ ಬೇಡ ಎಂದು ನನಗೆ ಕೋಕ್ ಹೇಳಿದೆ.


ಮತ್ತೆ ಮಾತನಾಡುತ್ತ ಏನಪ್ಪಾ ಏನು ಕೆಲಸ ಮಾಡುತ್ತ ಇದ್ದೀಯ ಎಂದ ನಮ್ಮ ಮಂಜ ಮನೋಜನಿಗೆ.

ಅಯ್ಯೋ ಅದು ಏನು ಕೇಳುತ್ತೀಯ ಎಂದ ಮನೋಜ.

ಹಾಗಾದರೆ ಬಿಡು ಹೇಳಬೇಡ ಎಂದು ನಾನು ಹೇಳಿದೆ.

ಅಷ್ಟಕ್ಕೆ ಬಿಟ್ಟಾನೆ ಇವನು "ಕಷ್ಟ ಕಷ್ಟ ಕಣೋ" ಮೊದಲು ನಾನು ಒಂದು ಇಲೆಕ್ಟ್ರಾನಿಕ್ ಶಾಪ್ ನಲ್ಲಿ ಸಲೆಸ್ಮನ್ ಆಗಿ ಇದ್ದೆ. ಆಗ ಅಲ್ಲಿಂದ ಅನ್ಯಾಯವಾಗಿ ಹೊರ ಬರಬೇಕಾಯಿತು ಎಂದ. ಅಂತ ಕೆಲಸ ಏನು ಮಾಡಿದಿಯೋ ಮಹಾರಾಯ ಎಂದಾಗ.


ಒಮ್ಮೆ ಒಬ್ಬ ಕಸ್ಟಮರ್ ಬಂದಿದ್ದರು..

ಅವರು ನನಗೆ ಯಾವುದಾದರು ಒಳ್ಳೆಯ ಟಿವಿ ತೋರಿಸಿ ಎಂದರು. ನಾನು ಆಗ ಒಂದು ಚೆನ್ನಾಗಿರೋ ಟಿವಿ ಎಂದು ಹಚ್ಚಿ ತೋರಿಸಿದೆ. ಅನಂತರ ಬೇರೆ ಬೇರೆ ಚಾನೆಲ್ ಹಚ್ಚಿ ತೋರಿಸಿದೆ ಅಷ್ಟಕ್ಕೆ ಅವರು ಕೋಪ ಮಾಡಿಕೊಂಡು ಹೋಗಿಬಿಟ್ಟರು ಎಂದ.


ಅಷ್ಟಕ್ಕೆ ಕೋಪ ಹೇಗಪ್ಪ ಮಾಡ್ಕೊತಾರೆ ನೀನೆ ಏನೋ ಮಾಡಿರಬೇಕು ಎಂದ ಮಂಜ. ಅವರ ಜೊತಿ ಹುಡುಗಿ-ಗಿಡುಗಿ ಬಂದಿದ್ಲೇನು.

"ಲೇ ಛೆ ಛೆ ಹಾಗಲ್ಲ" ಅದು ನನ್ನ ದುರದೃಷ್ಟ ಕಣೋ ಎಂದು ತಲೆ ತಿನ್ನ ಹತ್ತಿದ ಮನೋಜ.

ಮಂಜನಿಗೆ ಕೆಟ್ಟ ಸಿಟ್ಟು ಬಂದಿತ್ತು "ಲೇ ಕುಡುಕ ನನ್ನ ಮಗನೆ" ಏನಾಯಿತು ಹೇಳಲೇ.

ಮತ್ತೆ "ಕಷ್ಟ.. ಕಷ್ಟ.." ಅವತ್ತು ನನ್ನ ಗ್ರಹಚಾರಕ್ಕೆ ಅದೇ ಬ್ರಾಂಡ್ ಟಿವಿ Advirtisement ತೋರಿಸುತ್ತಾ ಇದ್ದರು ಎಂದ.


ಮಂಜನಿಗೆ ಮತ್ತೆ ಪಿತ್ತ ನೆತ್ತಿಗೇರಿತ್ತು. ಇನ್ನೇನು ಚೆನ್ನಾಗೆ ಆಯಿತಲ್ಲ ಮತ್ತೆ ಏಕೆ? ಕೋಪ ಮಾಡಿಕೊಂಡರು ಎಂದ ಮಂಜ ಕೋಪದಿಂದ.

ಅದು ನಾನು ತೋರಿಸಿದ ಟಿವಿಯಲ್ಲಿ ಅದೇ ಟಿವಿ Advirtisement ಚೆನ್ನಾಗಿ ಬರುತ್ತಾ ಇರಲಿಲ್ಲ. ಆದರೆ ಅದು ಬೇರೆ ಬ್ರಾಂಡ್ ಟಿವಿ ಯಲ್ಲಿ ಚೆನ್ನಾಗಿ ಕಾಣಿಸುತ್ತ ಇತ್ತು ಎಂದಾಗ. ನನ್ನ ಬಾಯಿಯಲ್ಲಿ ಇದ್ದ ಕೋಕ್ ಪೂರ್ತಿ ಮೊನೋಜನ ಮುಖದ ಮೇಲೆ..... ಏಕೆಂದರೆ ಅಷ್ಟು ಜೋರಾಗಿ ನಗು ಬರುತ್ತಾ ಇತ್ತು.

ಮತ್ತೆ ಮನೋಜ ಇನ್ನೊಂದು ಪೆಗ್ ಅಂದ. ಮಂಜ ಬೇಡ.. ಬೇಡ.. ಅಂದರು ಕೇಳಲಿಲ್ಲ. ಈ ನನ್ನ ಮಗ ನನಗೆ ಕೋಕ್ ಸ್ನಾನ ಮಾಡಿಸಿ ನಶೆ ಇಳಿಸಿಬಿಟ್ಟ ಎಂದ.

ಮತ್ತೆ ಶುರು ಹಚ್ಚಿ ಕೊಂಡ, ತುಂಬ ಕಷ್ಟ ಕಣೋ... ಹೇಳಿ ಇದರಲ್ಲಿ ನನ್ನದೇನೂ ತಪ್ಪು... ಆ ಮ್ಯಾನೇಜೆರ ಗೂಬೆ ನನಗೆ ಚೆನ್ನಾಗಿ ಬೈದಿದ್ದ ಎಂದ...

ಮತ್ತೆ ಒಂದು ದಿವಸ ಇನ್ನೊಬ್ಬ ಕಸ್ಟಮರ್ ಬಂದಿದ್ದರು. ಅವರಿಗೆ ನಾನು ಚೆನ್ನಾಗಿ ಡೆಮೋ ಕೊಟ್ಟೆ ... ಎಂದ.

ಆಗ ನಮ್ಮ ಮ್ಯಾನೇಜರ್ ನನ್ನ ಕರೆದು ಕಸ್ಟಮರ್ ಉದ್ದೇಶಿಸಿ "ಸರ್ ಗೆ ಒಂದು ಕೋಲ್ಡ್ ಡ್ರಿಂಕ್ಸ್ ಕೊಡು" ಎಂದ.

ಆಗ ಕಸ್ಟಮರ್ ನನಗೆ ಮೇಲೆ ಇಡಪ್ಪ ಕೋಲ್ಡ್ ಇರಬೇಕು ಎಂದರು......ಕಸ್ಟಮರ್ ಇಸ್ ಗಾಡ್ ಎಂಬ ಮ್ಯಾನೇಜರ್ ಹೇಳಿಕೆಯನ್ನು ಶಿರಸಾ ಪಾಲಿಸುವಂತವನು ನಾನು.

ನಾನು ಗೊತ್ತಾಗದೆ ಕೋಕ್ ಅನ್ನು ಫ್ರಿಜ್ ಮೇಲೆ ಇರುವ ಮೈಕ್ರೋ-ಓವನ್ ಒಳಗೆ ಇಟ್ಟು ಬಿಟ್ಟೆ... ಅಷ್ಟೆ......ಕೆಲವೇ ಕ್ಷಣ ಗಳಲ್ಲಿ "ಡುಂ ಡುಂ" ಶಬ್ದ... ಕಸ್ಟಮರ್ ಮತ್ತು ಎಲ್ಲ ಆಫೀಸ್ ಸಿಬ್ಬಂದಿ ಸಹಿತವಾಗಿ ಎಲ್ಲರು ಮಾಯವಾಗಿದ್ದರು... ಅದಕ್ಕೂ ನನ್ನ ಗೂಬೆ ಮ್ಯಾನೇಜರ್ ನನಗೆ ಬೈದ.

ಇದರಲ್ಲಿ ನನ್ನದೇನು ತಪ್ಪು ನೀನೆ ಹೇಳು ಆ ಕಸ್ಟಮರ್ ತಾನೆ ಹೇಳಿದ್ದು ಮೇಲೆ ಇಡು ಅಂತ. ತುಂಬ ಕಷ್ಟ ಕಣೋ ಈ ಕಸ್ಟಮರ್ ಗಳ ಜೊತೆ ಹೆಣಗಾಡೋದು ....

ಮತ್ತೆ ಇನ್ನೊಂದು ದಿವಸ ವಾಶಿಂಗ್ ಮೆಶಿನ್ ನೋಡಲು ಬಂದಿದ್ದರು ಅದಕ್ಕೆ ಒಂದು ವಾಶಿಂಗ್ ಮೆಶಿನ್ ತೊಗೊಂಡರೆ ಇನ್ನೊಂದು ಫ್ರೀ ಇತ್ತು. ನಾನು ಈ ಸಾರಿ ತುಂಬ ಜಾಗ್ರತೆವಹಿಸಿದ್ದೆ. ಆದರು ಅನಾಹುತ ನಡೆದೇ ಹೋಯಿತು ಎಂದ.

ಏನಪ್ಪಾ ಅನಾಹುತ ಎಂದಾಗ ಮನೋಜ ಕಸ್ಟಮರ್ ಡೆಮೋ ತೋರಿಸಬೇಕಾದರೆ ಅವರ ಕರ ವಸ್ತ್ರ ತೊಗೊಂಡು ಅದರೊಳಗೆ ಹಾಕಿದೆ ಆಗ ಅದು ಕ್ಲೀನ್ ಆಗಿ ಎರಡು ಪೀಸ್ ಆಗಿ ಹೊರಬಂದಿತ್ತು. ಅದಕ್ಕೆ ಆ ಕಸ್ಟಮರ್ ನನಗೆ ಈದೇನಾ.... ಒಂದು ತೊಗೊಂಡರೆ ಮತ್ತೊಂದು ಫ್ರೀ ಎಂದು ಹಿಯಾಳಿಸುವದೆ.

ಆಗಲಾದರೂ ನಿನ್ನನ್ನ ಕೆಲಸದಿಂದ ಹೊರಗೆ ಹಾಕಿರಬೇಕು ಎಂದು ಕೇಳಿದ ಮಂಜ.

"ಲೇ ಈ ಗೂಬೆ ಮ್ಯಾನೇಜರ್ ಜೊತೆ ಹೆಣಗುವದು ಬೇಡವಾಗಿ" ನಾನೆ ಕಷ್ಟ ಅಂತ ನೌಕರಿ ಬಿಟ್ಟು ಬಂದೆ ಎಂದ.
ಈಗ ಏನೋ ಮಾಡುತ್ತ ಇದ್ದಿ ಎಂದು ಕೇಳಿದಾಗ ನಾನು ಈಗ ಜ್ಯೋತಿಷ್ಯ ಶಾಸ್ತ್ರ ಪಾರಾಯಣ ಮಾಡಿ ಜ್ಯೋತಿಷ್ಯ ಹೇಳುತ್ತಿದ್ದೇನೆ ಎಂದ.

ಹಾಗಾದರೆ ಈ ಗೋಪಾಲ್ ನ ಬಗ್ಗೆ ಹೇಳು ನೋಡೋಣ ಎಂದ ಮಂಜ. ಹೇಳುವದಕ್ಕೆ ಬಾಯಿ ತೆಗೆದ ಆ ಕೆಟ್ಟ ಬೀರ್ ವಾಸನೆ ಹೊಡೆಯುತ್ತಿತ್ತು. ಹೇಳುವದಕ್ಕೆ ಎಲ್ಲಿಂದ ಬರಬೇಕು ಬಂತು ನೋಡಿ "ಒಅಕ್ ಒಅಕ್" ಎಂದು ತಿನ್ದಿದೆಲ್ಲ ನನ್ನ ಮೈಮೇಲೆ ಹಾಕಿಬಿಟ್ಟ.

ಆಗ ಮಂಜ ಸುಮ್ಮನಿರಲಾರದೆ ಇದೆ ನೋಡು ನಿನ್ನ ಭವಿಷ್ಯ ಎಂದು ಗಹ ಗಹಿಸಿ ನಕ್ಕ . ಅವನು ನಗುತ್ತಿದ್ದಾಗ ನಾನು ಸ್ವಲ್ಪ ದೂರ ನಿಂತೆ. ಎಲ್ಲಿ ಇವನೂ ವಾಂತಿ ಮಾಡಿಕೊಂಡರೆ ಕಷ್ಟ ಅಂತ. ಮತ್ತೆ ಬಿಲ್ಲು ಸಹ ನಾನೆ ಕೊಟ್ಟು ಬರಬೇಕಾಯಿತು.

ಮತ್ತೆ ಅವನನ್ನು ಕರೆದು ಕೊಂಡು ಹೋಗಿ ಮನೆ ಮುಟ್ಟಿಸಿದೇವು... ಅಷ್ಟಾದರೂ ಬಿಟ್ಟಿತೆ...? ನಮ್ಮ ಕಷ್ಟ. ಅವನ ಹೆಂಡತಿ ಮತ್ತೆ ನಮಗೆ ಉಗಿಯುವದೆ, ನೀವೇ ಕುಡಿಸಿ ಕರೆದು ಕೊಂಡು ಬಂದಿದ್ದೀರಾ ಅಂತ.

ಅಯ್ಯೋ ಕಷ್ಟ ಕಷ್ಟ ಅವನಿಗೆ ಪರಿಹಾರದ ದುಡ್ಡು ಕೇಳುವದೆ ಮರೆತು ಹೋಗಿತ್ತು....

Tuesday, October 6, 2009

ತರ್ಲೆ ಮಂಜ(ಗ)ನಿಗೆ ದೇವರನಾಮ ....

ನಮ್ಮ ಶಾಲೆಗೆ ಶಂಭು ಎಂಬ ವಿದ್ಯಾರ್ಥಿ ಸೇರಿ ಕೊಂಡಿದ್ದ. ಶಂಭು ತನ್ನ ಬಗ್ಗೆ ಕೊಚ್ಚಿ ಕೊಳ್ಳುತ್ತಾ ತಿರುಗುತ್ತಿದ್ದ. ಅವನು ಬಾಯಿ ಎತ್ತಿದರೆ ಸಾಕು ಬರಿ ಬೈಗುಳಗಳು. ಒಂದು ದಿವಸ ನನಗೆ , ನಿಮ್ಮ ತಂದೆಗೂ ನನ್ನ ತಂದೇನೆ ಸಂಬಳ ಕೊಡುವುದು ಎಂದು ಬೂಸಿ ಬಿಟ್ಟಿದ್ದ. ನಾನು ಇದನ್ನೇ ಹೋಗಿ ನನ್ನ ತಂದೆಗೆ ಕೇಳಿದಾಗ, ನನ್ನ ತಂದೆ ಜೋರಾಗಿ ಬಿದ್ದು ಬಿದ್ದು ನಕ್ಕು ಬಿಟ್ಟಿದ್ದರು.

ಶಂಭು ಒಂದು ದಿವಸ ಆಟದ ಸಮಯದಲ್ಲಿ ಮಂಜನ ಜೊತೆ ಜಗಳ ಆಡಿ, ಅವನಿಗೆ ಕೆಟ್ಟ ಅವಾಚ್ಯ ಶಬ್ದಗಳಿಂದ ಚೆನ್ನಾಗಿ ಬೈದಿದ್ದ. ಅಷ್ಟರಲ್ಲಿ ಅವರ ಜಗಳ ನೋಡಿ ಮಾಸ್ತರ್ ಅವರಿಬ್ಬರನ್ನು ಕೇಳಿದಾಗ. ಮಂಜ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದ. ಆದರೆ ಶಂಭು ಏನು ಇಲ್ಲ? ಸರ್ ದೇವರನಾಮ ಹೇಳುತ್ತಿದ್ದೇನೆ ಎಂದು ಬಿಟ್ಟ. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ಒಂದು ದಿವಸ ಶಾಲೆಯಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮ ಇತ್ತು. ಅದರ ನಿರ್ವಹಣೆಯ ಕಾರ್ಯ ನಮ್ಮ ಮಂಜನದು. ಮಂಜನಿಗೆ ಮೊದಲೇ ಶಂಭು ಮೇಲೆ ಸಿಟ್ಟು ಇತ್ತು. ಕಾರ್ಯಕ್ರಮದಲ್ಲಿ ಅವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಮ್ಮೆಲ್ಲರಿಗೂ ಒಂದು ಐಡಿಯಾ ಹೇಳಿದ.

ಮತ್ತೆ ಕಾರ್ಯಕ್ರಮ ಶುರು ಆಯಿತು. ಮಂಜ ಆರಂಭಿಕ ಭಾಷಣ ಮುಗಿದ ಮೇಲೆ. "ಈಗ ಶಂಭು ಅವರಿಂದ ದೇವರನಾಮ" ಎಂದು ಬಿಟ್ಟ. ಶಂಭು ಮಾತ್ರ ತನ್ನ ಸೀಟ್ ಮೇಲಿಂದ ಏಳಲಿಲ್ಲ. ಮತ್ತೆ ಇನ್ನೊಂದು ಸಾರಿ ಮೈಕ್ ಮೇಲೆ ಕೂಗಿದ "ಶ್ರೀ ಶಂಭು ಅವರಿಂದ ದೇವರನಾಮ" ಎಂದು. ಶ್ರೀ ಶಂಬು ಎಂದಾಗ ನಾವೆಲ್ಲರೂ ಗೊಳ್ ಎಂದು ನಕ್ಕುಬಿಟ್ಟೆವು. ನಮ್ಮ ಪ್ಲಾನ್ ಪ್ರಕಾರ ನಾವೆಲ್ಲರೂ ಶಂಭುನ ತಲೆಯ ಮೇಲೆ ಹೊತ್ತುಕೊಂಡು. ಶಂಭು ಅವರಿಗೆ ಜಯವಾಗಲಿ ಎಂದು ಜೈಕಾರ ಹಾಕುತ್ತ ಬಂದು ಸಭಾಂಗಣದ ಮೈಕ್ ಮುಂದೆ ಬಿಟ್ಟು ಹೋದೆವು. ಶಂಭು ನಡುಗುತ್ತ ನಿಂತಿದ್ದ ಪೂರ್ತಿ ಮೈಯಲ್ಲ ಸ್ನಾನ ಮಾಡಿದ ಹಾಗೆ ಬೆವತು ಬಿಟ್ಟಿತ್ತು. ಏನು ತಿಳಿಯದೆ ಮಂಜನನ್ನು ಒಮ್ಮೆ ನೋಡಿದ. ಮಂಜ ಹಾಗೆ ಸುಮ್ಮನೆ ಬಿಟ್ಟಾನೆ ಬೈದು ದೇವರನಾಮ ಅನ್ನುವಷ್ಟು ಸೋಕ್ಕಲ್ಲ ನಿನಗೆ ಈಗ ಹೇಳು ದೇವರನಾಮ ಎಂದು ಹೇಳಿದ. ಕಡೆಗೆ ಶಂಭು ಕಾಪಾಡು ಎಂದು ಮಂಜನಿಗೆ ಬೇಡಿಕೊಂಡ. ಆಗ ಮಂಜ ಶಂಭುನಿಗೆ ಒಂದು ಸಿನಿಮ ಹಾಡು ಹಾಡು ಎಂದು ಸೂಚಿಸಿದ. ಮತ್ತೆ ಅದರ ಸಾಹಿತ್ಯ ಬರೆದು ಕೊಂಡು ಬಂದಿರುವೆ ತೆಗೆದುಕೋ ಎಂದು ಪೇಪರ್ ಅವನ ಕೈಯಲ್ಲಿ ಇಟ್ಟ. ಆನಂತರ ಮೈಕ್ ನಲ್ಲಿ ಹೇಳಿದ ಶಂಭು ಅವ್ರಿಗೆ ದೇವರನಾಮ ಹೇಳಲು ಮೂಡಿಲ್ಲ ಆದ್ದರಿಂದ ಅವರು ಸಿನಿಮ ಹಾಡು ಹಾಡಲಿದ್ದಾರೆ ಎಂದು. ಶಂಭು ಸಾವಕಾಶವಾಗಿ ನಡುಗುತ್ತ ಪೇಪರ್ ತೆಗೆದು ಹಾಡಲು ಶುರು ಹಚ್ಚಿಕೊಂಡ. "ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ.. ಗುರುಗಳು ಹೇಳಿದ ಮಾತುಗಳೆಲ್ಲ ಎಂದು ನಿಜವಲ್ಲ" ಎಂದು. ಅಲ್ಲಿ ಸಭೆಯಲ್ಲಿ ಕುಳಿತಿದ್ದ ಗುರುಗಳಿಗೆಲ್ಲ ಪಿತ್ತ ನೆತ್ತಿಗೇರಿತ್ತು. ನಾವೆಲ್ಲರೂ ಹಿಂದೆ ಕುಳಿತು ಶಿಳ್ಳೆ ಹೊಡಿದಿದ್ದೆ ಹೊಡದಿದ್ದು. ಪೂರ್ತಿ ಸಭಾಂಗಣ ಕೇಕೆ ಹಾಕುತಿತ್ತು. ಮತ್ತೆ ಕೆಲವರು ಡಾನ್ಸ್ ಸಹ ಮಾಡಲು ಶುರು ಮಾಡಿದ್ದರು. ಶಂಭು ತುಂಬ ಹುರುಪಿನಿಂದ ತಾನು ಡಾನ್ಸ್ ಮಾಡುತ್ತ ಹಾಡಿದ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರು ಶಂಭುನ ಹೊಗಳಿದ್ದ ಹೊಗಳಿದ್ದು... ಶಂಭು ಹಿರಿ ಹಿರಿ ಹಿಗ್ಗಿದ್ದ.

ಮರು ದಿನ ಶಂಭುನಿಗೆ ಅಟೆಂಡರ ಕರೆದು, ಮಾಸ್ತರ ಕರೆಯುತ್ತಿದ್ದಾರೆ ಎಂದು ಹೇಳಿದ. ಮಂಜ ಶಂಭುವಿಗೆ ಹುರುದುಂಬಿಸಿ ನಿನಗೆ ಬಹುಮಾನ ಕೊಡಬಹುದು ನೀನು ತುಂಬ ಚೆನ್ನಾಗಿ ಹಾಡಿದೆ. ಬೇಗ ಹೋಗು ಎಂದು ಹೇಳಿದ . ಶಂಭು ತುಂಬಾ ಖುಷಿಯಾಗಿ ಸ್ಟಾಫ್ ರೂಮಿಗೆ ಹೋದ. ತಕ್ಷಣ ಎಲ್ಲಾ ಮಾಸ್ತರರು ಸೇರಿ ಶಂಭುನಿಗೆ ಸಹಸ್ರನಾಮ, ಅಷ್ಟೋತ್ತರ ಹೀಗೆ. ಎಲ್ಲ ದೇವರನಾಮವನ್ನು ಕೇಳಿಸಿ ಬಿಟ್ಟಿದ್ದರು. ಮತ್ತೆ ಅವನಿಗೆ ನಿನ್ನ ತಂದೆಯನ್ನು ಕರೆದುಕೊಂಡು ಶಾಲೆಗೆ ಬಾ ಎಂದು ತಾಕಿತ್ ಮಾಡಿದ್ದರು. ಶಂಭುನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆದರು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ....ಅಳುತ್ತ ಬಂದು ಕುಳಿತ.

ಶಂಭು ತನ್ನ ತಂದೆಗೆ ಹೇಗೆ ಹೇಳುವದೆಂದು ಯೋಚಿಸಿ. ಅವರ ತಂದೆ ತುಂಬಾ ಕೋಪಿಷ್ಠ ಹೀಗಾಗಿ ಕಡೆಗೆ ಮಂಜನ ಸಹಾಯ ಕೇಳಿದ. ಮಂಜ ತನ್ನ ಅತ್ತೆಯ ಮಗನನ್ನು ಕರೆದು ತಂದು ಇವ ನಿನ್ನ ಅಣ್ಣ ಎಂದು ಹೇಳು ಎಂದು ಹೇಳಿದ. ಶಂಭು ಅವನನ್ನು ಕರೆದು ಕೊಂಡು ಹೋದ. ಮಾಸ್ತರ ಮುಂದೆ ಕೆನ್ನೆ ಕೆಂಪಾಗುವ ಹಾಗೆ ಸಿಕ್ಕಿದ್ದೇ ಚಾನ್ಸ್ ಎಂದು ಮಂಜನ ಅತ್ತೆ ಮಗ ಬಾರಿಸಿದ್ದ. ಮತ್ತೆ ಶಂಭು ಅವರಿಬ್ಬರಿಗೂ ಹೋಟೆಲ್ ನಲ್ಲಿ ಪಾರ್ಟಿ ಕೊಡಿಸಿದ.

ನಾವೆಲ್ಲರೂ ಅವನಿಗೆ ಶಿಕಾರಿ ಶಂಭು, ಶಂಭು ಮಹಾರಾಜ ಮತ್ತು ತೊಗರಿ ತಿಪ್ಪ ಎಂದೆಲ್ಲ ನಾಮಾಂಕಿತ ಮಾಡಿದ್ದೆವು. ಅವನು ಮತ್ತೆ ಯಾವತ್ತು ಬೂಸಿ ಬಿಡುವ ಗೋಜಿಗೆ ಹೋಗಲಿಲ್ಲ....ಮತ್ತೆ ತನ್ನ ಭಾಷಾ ಪ್ರಯೋಗ ಕೂಡ ಸುಧಾರಿಸಿ ಕೊಂಡಿದ್ದ.

Monday, September 28, 2009

ತರ್ಲೆ ಮಂಜ(ಗ)ನ ಐಡಿಯಾಗಳು ....

ಒಂದು ದಿವಸ ಶಾಲೆಯಲ್ಲಿ ಕೆಮಿಸ್ಟ್ರಿ ಕ್ಲಾಸ್ ಮುಗಿದ ಮೇಲೆ ಮಾಸ್ತರ ಪ್ರಯೋಗಗಳನ್ನು ತೋರಿಸಲು ಪ್ರಯೋಗಾಲಯಕ್ಕೆ ಕರೆದು ಕೊಂಡು ಹೋಗಿದ್ದರು. ಅವರು ಪ್ರಯೋಗಗಳನ್ನು ತೋರಿಸುತ್ತಿದ್ದರು, ಸುಬ್ಬನಿಗೆ ಮಾತ್ರ ಬೇರೆ ಕಡೆಗೆ ಲಕ್ಷ್ಯವಿತ್ತು. ಅವನು ಎಲ್ಲ ಬಣ್ಣ ಬಣ್ಣದ ಬಾಟಲಿಗಳನ್ನು ನೋಡುತ್ತಾ ನಿಂತಿದ್ದ. ಆಮೇಲೆ ಸುಮ್ಮನಿರದೆ ಒಂದು ಬಾಟಲಿಯ ಮುಚ್ಚಳವನ್ನು ತೆಗೆದ. ಆಗ ಬಾಟಲಿಯಿಂದ ಹೊಗೆ ಬರಲು ಆರಂಭಿಸಿತು. ಅದನ್ನು ನೋಡಿದ ಸುಬ್ಬ ತುಂಬಾ ಗಲಿಬಿಲಿಗೊಂಡ. ಎಲ್ಲಿ ಮಾಸ್ತರ್ ಅದನ್ನು ನೋಡಿ ಬೈಯುತ್ತಾರೆ ಎಂದು. ಎಲ್ಲಿ ಲ್ಯಾಬ್ ತುಂಬಾ ಹೊಗೆ ಬಂದರೆ ಕಷ್ಟ ಎಂದು ಮುಂದೆ ನಿಂತಿರುವ ಮಂಜನಿಗೆ ಇದನ್ನು ಹೇಳಿದ. ಮಂಜ ಅದನ್ನು ನೋಡಿ ಲೇ ಅದು "ಬಿಸಿಯಾಗಿರಬೇಕು" ಅದಕ್ಕೆ ಸ್ವಲ್ಪ ನೀರು ಸುರಿ ಎಂದು ಐಡಿಯಾ ಕೊಟ್ಟ. ಆನಂತರ ನಮ್ಮ ಸುಬ್ಬ ಸುಮ್ಮನಿರದೆ ಅದಕ್ಕೆ ನೀರು ಸುರಿದು ಬಿಟ್ಟ. ನೋಡ ನೋಡುತ್ತಲೇ ಎರಡೇ ಸೆಕೆಂಡಿನಲ್ಲಿ "ಪಟ ಪಟ " ಎಂಬ ಶಬ್ದ ಬಂದು ಬಾಟಲಿ ಚೂರು ಚೂರು ಆಗಿ ಸುಬ್ಬ ಮತ್ತು ಅವನ ಸಂಗಡ ನಿಂತ ವಿನಯ ಆಸ್ಪತ್ರೆ ಸೇರುವ ಹಾಗೆ ಆಗಿತ್ತು. ಆನಂತರ ಗೊತ್ತಾಗಿತ್ತು ಅದು sulpuric acid ಎಂದು. ಅದಕ್ಕೆ ಯಾವತ್ತು ನೀರು ಹಾಕಬಾರದು ಎಂದು ಅನಂತರ ಕ್ಲಾಸಿನಲ್ಲಿ ಮಾಸ್ತರ್ ಹೇಳಿದ್ದರು.

ಮತ್ತೊಂದು ದಿನ biology ಮಾಸ್ತರ ನಾಳೆ ಲ್ಯಾಬ್ ಇದೆ ಎಲ್ಲರು ಒಂದು ಕಪ್ಪೆ ಹಿಡಿದು ತನ್ನಿರಿ ಎಂದು ಹೇಳಿದರು. ನಾನು ಮತ್ತೆ ಮಂಜ ಕಪ್ಪೆ ಹಿಡಿಯೋಣವೆಂದು ಸಂಜೆ ಮಳೆಯಲ್ಲಿ ಗ್ರೌಂಡ್ಗೆ ಹೋದೆವು. ಎಲ್ಲಿ ಕಪ್ಪೆಗಳು ವಟಗುಡುವಿಕೆ ಕೇಳಿಸುವದೋ ಅಲ್ಲಿ ಟಾರ್ಚ್ ಹಿಡಿದು ಹಿಡಿಯುವ ಹುನ್ನಾರ ನಡಿಸಿದೆವು. ಆದರೆ ಒಂದು ಕಪ್ಪೆ ನಮ್ಮ ಕೈಗೆ ಸಿಗಲೇ ಇಲ್ಲ. ಮತ್ತೆ ಸ್ವಲ್ಪ ಮುಂದೆ ಹೋಗೋಣ ಎಂದು ಮಂಜ ಹೇಳಿದ, ಹಾಗೆಯೇ ಮುಂದೆ ಹೋದೆವು. ಅಷ್ಟರಲ್ಲೇ ತುಂಬಾ ರಭಸದಿಂದ ಚರಂಡಿ ನೀರು ನುಗ್ಗಿ ಬಂದಿತ್ತು. ಮೊಣ ಕಾಲುವರೆಗೆ ಚರಂಡಿ ನೀರು ಇತ್ತು. ಅಷ್ಟರಲ್ಲೇ ಒಂದು ಕಪ್ಪೆ ಕಾಣಿಸಿತು ನಾನು ಹಿಡಿಯೋಣ ಎಂದು ಕ್ರಿಕೆಟ್ ಚಾಂಪಿಯನ್ ಹಾಗೆ ಜಂಪ್ ಮಾಡಿ ಕ್ಯಾಚ್ ಹಿಡಿದ ಹಾಗೆ ಹಿಡಿಯಲು ಹೋದೆ. ದಪ ಎಂದು ಬಿದ್ದು ಬಿಟ್ಟು ಮೊಣ ಕಾಲು ಕೆತಿತ್ತು ರಕ್ತ ಸುರಿಯುತ್ತಿತ್ತು. ಅದನ್ನು ನೋಡಿ ಮಂಜ ನನ್ನನ್ನು ಎಬ್ಬಿಸದೆ ಬಿದ್ದು ಬಿದ್ದು ಗಹ ಗಹಿಸಿ ನಗಹತ್ತಿದ್ದ. ಚರಂಡಿ ನೀರು ಮೈಯಲ್ಲ ಆವರಿಸಿತ್ತು. ನನ್ನಷ್ಟಕ್ಕೇ ನನಗೆ ಹೇಸಿಗೆ ಬರುವಷ್ಟು ಕೆಟ್ಟ ವಾಸನೆ ಹೊಡೆಯುತ್ತಿತ್ತು. ನಾನು ಕೋಪದಿಂದ ಮಂಜನಿಗೆ ಬೈದು ಮತ್ತೆ ನಮ್ಮ ಬೇಟೆಗೆ ಹೋದೆವಾದರು ಪ್ರಯತ್ನ ಮಾತ್ರ ಸಫಲವಾಗಲಿಲ್ಲ.

ಈ ರೂಪದಿಂದ ಮನೆಗೆ ಹೋಗುವದು ಅಸಾಧ್ಯವಾಗಿತ್ತು. ಇಬ್ಬರು ಮಂಜನ ಮನೆಗೆ ಹೋದೆವು ನಾನು ಕೈ ಕಾಲು ತೊಳೆದು ಕೊಳ್ಳಲು ಮಂಜನ ಮನೆಯ ಹಿತ್ತಲಕ್ಕೆ ಹೋದೆ. ನನಗೆ ಅಲ್ಲಿಯ ದೃಶ್ಯ ನೋಡಿ ಮಂಜನನ್ನು ಕೊಲೆ ಮಾಡುವಷ್ಟು ಕೋಪ ಬಂದಿತ್ತು. ಏಕೆಂದರೆ ಅವನ ಮನೆಯ ಹಿತ್ತಲಲ್ಲಿ 10-15 ಕಪ್ಪೆಗಳು ಇದ್ದವು. ನಾನು ಕೈ ಕಾಲು ತೊಳೆಯದೇ ಸೀದಾ ಬಂದು ಮಂಜನ ಮೇಲೆ ಏಗರಾಡಿದೆ. ಮಂಜ ಮುಂಜಾನೆ ಒಂದು ಇದ್ದಿರಲಿಲ್ಲ ಈಗ ಹೇಗೆ ಬಂದವು ನನಗೆ ಆಶ್ಚರ್ಯ ಎಂದ. ಮತ್ತೆ ಇಬ್ಬರು ಹೋಗಿ 8 ಕಪ್ಪೆ ಹಿಡಿದೆವು. ಅನಂತರ ಕೈ ಕಾಲು ತೊಳೆದು ಮನೆಗೆ ಹೋದೆ.

ಮರು ದಿವಸ ಮತ್ತೆ ಕೆಲವರಿಗೆ ನಾವೇ ಕಪ್ಪೆ ಹಂಚಿದೆವು. Biology ಲ್ಯಾಬ್ ಕನ್ನಡ ಕ್ಲಾಸ್ ಆದ ಮೇಲೆ ಇತ್ತು. ಸುಬ್ಬ ಕೂಡ ಒಂದು ಕಪ್ಪೆ ಹಿಡಿದು ತಂದಿದ್ದ. ಅವನ ಪ್ಲಾಸ್ಟಿಕ್ ಚೀಲದಲ್ಲಿ ಅದು ಸೂಸು ಮಾಡಿ ಅದರಲ್ಲೇ ಈಜಾಡುತಿತ್ತು. ಸ್ವಲ್ಪ ಸಮಯದ ನಂತರ ಅದರ ವಾಸನೆ ಎಲ್ಲಡೆ ಹರಡಿತ್ತು. ಅದನ್ನು ನೋಡಿ ಮಂಜ ಲೇ ಪ್ಲಾಸ್ಟಿಕ್ ಚೀಲಕ್ಕೆ ಒಂದು ತೂತು(Hole) ಮಾಡಿ ಅದರ ಸೂಸು ಹೊರಗೆ ಚೆಲ್ಲು ಎಂದು ಸುಬ್ಬನಿಗೆ ಹೇಳಿದ. ಸುಬ್ಬ ಅದನ್ನು ಕತ್ತರಿಯಿಂದ ಕಟ್ ಮಾಡಿದ. ಚೀಲವನ್ನು ದೊಡ್ಡದಾಗಿ ಕತ್ತರಿಸಿ ಬಿಟ್ಟಿದ್ದ. ಅದರಿಂದ ಕಪ್ಪೆ ಟುಂಗನೆ ಜಿಗಿದು ಬಿಟ್ಟಿತ್ತು. ಅಲ್ಲೇ ಕುಳಿತು ಕೊಂಡಿದ್ದ ಹುಡುಗಿಯರೆಲ್ಲ ಎದ್ದು ಡಾನ್ಸ್ ಮಾಡಲು ಶುರು ಹಚ್ಚಿ ಕೊಂಡಿದ್ದರು.

ಅಷ್ಟರಲ್ಲೇ ಕನ್ನಡ ಮಾಸ್ತರ್ ಆಗಮಿಸಿ ಈ ದೃಶ್ಯ ನೋಡಿ ಕೋಪದಿಂದ ಸುಬ್ಬನಿಗೆ ಅದನ್ನು ಹಿಡಿದು ತೆಗೆದುಕೊಂಡು ಹೋಗಿ ಕ್ಲಾಸ್ ಆಗುವವರಿಗೆ ಹೊರಗೆ ನಿಲ್ಲು ಎಂದು ಆಜ್ಞೆ ಮಾಡಿದ್ದರು.

ಮತ್ತೊಂದು ದಿವಸ ಜೇನಿನ ಗೂಡಿಗೆ ಯಾರೋ ಕಲ್ಲು ಎಸೆದಿದ್ದರು. ನಾನು,ಮಂಜ ಮತ್ತೆ ಸುಧೀರ ಲೈಬ್ರರಿ ಹೋಗಲು ಬರುತ್ತಿದ್ದೆವು. ಜೇನು ಎದ್ದಿದ್ದು ನೋಡಿ ಮಂಜ "ಲೇ ಓಡಿರಿ ಜೇನು ಎಂದು ಬಿಟ್ಟ". ನಾನು,ಮಂಜ ಮತ್ತೆ ಸುಧೀರ ಎದ್ದು ಬಿದ್ದು ಓಡಲು ಶುರು ಮಾಡಿದೆವು. ಜೇನುಗಳು ನಮ್ಮನ್ನು ಅಟ್ಟಿಸಿಕೊಂಡು ಕಡಿಯಲಾರಂಬಿಸಿದವು. ನನಗೆ ಮಂಜ ಒಂದು ದಿವಸ ಪ್ರವಚನ ಮಾಡಿದ್ದ "ಜೇನು ಬೆನ್ನು ಹತ್ತಿದರೆ ಹುಲ್ಲಿನಲ್ಲಿ ಉಸಿರಾಡದೆ ಮಲೆಗಿದರೆ ಹಾಗೆ ಹೋಗುತ್ತವೆ ಎಂದು". ನಾನು ಮತ್ತೆ ಮಂಜ ಹಾಗೆ ಮಾಡಿದೆವು. ನಮಗೆ ಒಂದೆರಡು ಕಡಿದಿದ್ದವು. ಆದರೆ ಸುಧಿರನನ್ನ ಜೇನುಗಳು ಪೂರ್ತಿ ಶಾಲೆ ಓಡಾಡಿಸಿ ಕಡಿದಿದ್ದವು. ಇವನು ಸುಮ್ಮನೆ ಇರಲಾರೆದೆ ಹಾಸ್ಟೆಲ್ ನಲ್ಲಿ ಒಣಗಲು ಹಾಕಿದ ಟಾವೆಲ್ ಅವುಗಳ ಮೇಲೆ ಎಸೆದಿದ್ದ. ಅವು ಮತ್ತಷ್ಟು ಕೋಪಗೋಂಡು ಪೂರ್ತಿ ಮುಖಕ್ಕೆ ಕಡೆದಿದ್ದವು. ಅನಂತರ ಹಾಸ್ಟೆಲ್ ಹುಡುಗರು ಕಂಬಳಿ ಹೊದಿಸಿ ಸುಧಿರನನ್ನು ಕಾಪಾಡಿದ್ದರು. ಸುಧೀರ ನಾಲ್ಕು ದಿನ ಜ್ವರ ಬಂದು ಹಾಸಿಗೆ ಹಿಡಿದಿದ್ದ.

ಮತ್ತೆ ಒಂದು ದಿವಸ ಕಾಲೇಜ್ ನಲ್ಲಿ ಶೇವಿಂಗ್ ಮಾಡದೇ ಬಂದರೆ ಫೈನ್ ಹಾಕುತಿದ್ದರು. ಆಗ ಸಂಜೀವನಿಗೆ ತುಂಬಾ ಮೊಡವೆಗಳು ಇದ್ದವು. ಅದಕ್ಕೆ ಶೇವಿಂಗ್ ಮಾಡುವಾಗ ತುಂಬಾ ರಕ್ತ ಬರುತಿತ್ತು. ಅದಕ್ಕೆ ನಮ್ಮ ಮಂಜ ಅವನಿಗೆ ನೀನು ಒಂದು ಹೇರ್ ರಿಮೂವರ್ ಹಾಕಿ ಕೋ ಎಂದು ಐಡಿಯಾ ಕೊಟ್ಟ. ಹೇರ್ ರಿಮೂವರ್ ಹಾಕಿ ಎರಡು ಘಂಟೆ ಹಾಗೆ ಬಿಟ್ಟ ನಮ್ಮ ಸಂಜೀವ. ಅನಂತರ ಮುಖ ತೊಳೆದು ಕೊಂಡಾಗ ಕೂದಲು ಜೊತೆ ಚರ್ಮ ಕೂಡ ಕಿತ್ತು ಬಂದು ಒಳಗಿನ ಮಾಂಸ ಕೂಡ ಕಾಣಿಸಲು ಶುರು ಮಾಡಿತ್ತು. ಅವನಿಗೆ ಮಂಜನ ಮೇಲೆ ಕೆಟ್ಟ ಕೋಪ ಬಂದಿತ್ತು. ಮಂಜನಿಗೆ ಕೇಳಿದರೆ ಅವನ ಮುಖ ನೋಡಿ ಬಿದ್ದು ಬಿದ್ದು ನಕ್ಕಿದ್ದ. ಮತ್ತೆ "ಎರಡು ಘಂಟೆ" ಯಾಕೆ ಹಾಕಿಕೊಂಡೆ ಎರಡು ನಿಮಿಷ ಸಾಕು ಎಂದು ಹೇಳಿದ. ಅನಂತರ ಹೇರ್ ರಿಮೂವರ್ ಸಾಹಸಕ್ಕೆ ಹೋಗಲಿಲ್ಲ ಪಾಪ ಸಂಜೀವ. ಮತ್ತೆ ಹುಡುಗಿಯರ ಮಧ್ಯ ಕೂಡ ಸಂಜೀವ ಮುಖ ಮುಚ್ಚಿ ಹೋಗುವ ಪರಿಸ್ತಿತಿ ನಿರ್ಮಾಣವಾಗಿತ್ತು.

ಮತ್ತೊಂದು ದಿವಸ ನಾವೆಲ್ಲರೂ ಟೂರ್ ಗೆ ಹೋಗಿದ್ದೆವು ನಾನು ಅವತ್ತು ಟೂಥ್ ಪೇಸ್ಟ್ ತೆಗೆದು ಕೊಂಡು ಬಂದಿರಲಿಲ್ಲ. ಅದ್ದರಿಂದ ಮಂಜನಿಗೆ ಟೂಥ್ ಪೇಸ್ಟ್ ಕೇಳಿದ್ದೆ ತಪ್ಪಾಯಿತು ಎನ್ನುವ ಹಾಗೆ ಮಾಡಿದ್ದ. ಟೂಥ್ ಪೇಸ್ಟ್ ಬದಲು ತನ್ನ ಶವಿಂಗ್ ಕ್ರೀಂ ಹಚ್ಚಿ ಬಚ್ಚಲಿನಲ್ಲಿದ್ದ ನನಗೆ ಕೊಟ್ಟಿದ್ದ. ನಾನು ಹಾಗೆ ತಿಕ್ಕಿ ಕೊಳ್ಳುತ್ತಿದ್ದಾಗ ಅದರ ನೊರೆ ಮತ್ತೆ ವಾಸನೆ ಇಂದ ಗೊತ್ತಯಿತಾದರು, ಎರಡು ದಿನ ಮಾತ್ರ ಅದರ ವಾಸನೆ ನನ್ನ ಬಾಯಿಯಿಂದ ಹೋಗಲಿಲ್ಲ.

ತರ್ಲೆ ಮಂಜನ ಐಡಿಯಾಗಳು ಮತ್ತೆ ತರ್ಲೆ ಕೆಲಸಗಳು ಇನ್ನು ಬಹಳಷ್ಟು ಇವೆ.....

Thursday, September 24, 2009

ತರ್ಲೆ ಮಂಜ(ಗ)ನ ಓದುವ ಹವ್ಯಾಸ ....

ಮೊನ್ನೆ ನಾನು ಮತ್ತು ಮಂಜ ಸುಮ್ಮನೆ ಪೇಟೆಯಲ್ಲಿ ಸುತ್ತುತ್ತಿದ್ದಾಗ ಮಂಜ ಒಮ್ಮೆಲೇ "ಅವರಪ್ಪನ" ಎಂದ. ಅದು ಯಾರಿಗೆ ಅಂದ ಎಂದು ನಾನು ನೋಡಿದಾಗ ಅದು "ಆವಾರಾಪನ" ಎಂಬ ಚಲನ ಚಿತ್ರದ ಪೋಸ್ಟರ್ ಆಗಿತ್ತು. ಹೀಗೆ ಬೇರೆ ಬೇರೆ ಭಾಷೆಯ ಬೋರ್ಡ್ ಮತ್ತು ಚಿತ್ರಗಳನ್ನೂ ಕೆಟ್ಟದಾಗಿ ಓದುವ ಹವ್ಯಾಸ ನಮ್ಮ ಮಂಜನಿಗೆ.

ಹೀಗೆ ಅವ ಯಾವುದಾದರು tolet ಎಂಬ ನೋಡಿದ ಅಂದರೆ ಅನ್ನುವದು toilet ಅಂತ. ಮತ್ತೆ ಒಂದು "ಕಸ್ತೂರಿ ಕಿರಾಣಿ" ಅಂಗಡಿ ಇತ್ತು. ಅವ ಎಲ್ಲ ರೇಟ್ ಜ್ಯಾಸ್ತಿ ಇರುತಿತ್ತು ಅದಕ್ಕೆ ಇವ ಅವನಿಗೆ ಹಜಾಮರ ಅಂಗಡಿ ಅಥವಾ ಕಷ್ಟ ಮಾಡಿಸಿ ಕೊಳ್ಳಲಿಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿತ್ತಿದ್ದ. ಅದು ಏಕೆ ಎಂದು ಕೇಳಿದಾಗ ಕಸ್ತೂರಿನ (ಕಷ್ಟರಿ ಮಾಡಿದ್ದ ಕಷ್ಟ ಎಂದರೆ ಹಜಾಮತಿ ಎಂಬ ಅರ್ಥ) ಎಂದು ಮಾಡಿದ್ದ.

ಮೆತ್ತೆ ಒಂದು ದಿವಸ "ಹೆತ ಹೆತ ಹೋಗಯ್ಯ" ಎಂದು ಓದಿ ಬಿಟ್ಟ. ಅದು ಹೊತೆ ಹೊತೆ ಹೋಗಯಾ ಎಂಬ ಹಿಂದಿ ಧಾರವಾಹಿ ಇತ್ತು.

ಮತ್ತೆ ಒಂದು ದಿವಸ ಹಿಂದಿ ಹುಡುಗಿ ಚೇತನ ನಮ್ಮ ಶಾಲೆಗೆ ಸೇರಿಕೊಂಡಿದ್ದಳು. ಅವಳ ಹಿಂದೆ ತುಂಬಾ ಹುಡುಗರು ಬಿದಿದ್ದರು. ಅವಳು ಮಾತ್ರ ರಾಜೀವನನ್ನು ಬಿಟ್ಟು ಬೇರೆ ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ರಾಜೀವನಿಗೆ ಹಿಂದಿ ಬರುತ್ತಿರಲಿಲ್ಲ. ನಮ್ಮ ಮಂಜನಿಗೆ ಹಿಂದಿ ಚೆನ್ನಾಗಿ ಬರುತಿತ್ತು. ಅವಳು ಬರೆದು ಕೊಡುವ ಹಿಂದಿ ಪ್ರೇಮ ಪತ್ರ ನಮ್ಮ ಮಂಜ ಓದಿ ರಾಜೀವನಿಗೆ ಹೇಳುತ್ತಿದ್ದ.

ಒಂದು ದಿವಸ ಅವಳ ಪ್ರೇಂ ಪತ್ರ ಬಂದಿತ್ತು. ಅವಳು ಹೀಗೆ ಬರೆದಿದ್ದಳು.

ಮೈ ತುಮ್ಸೆ ಬಹುತ್ ಪ್ಯಾರ ಕರತಿ ಹು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಮಂಜ ಓದಿ ಹೇಳಿದ. ಹಾಲಾ ಕಿ ಹಮಾರಾ ಜಾತ ಅಲಗ್ ಅಲಗ್ ಹೈ ಫಿರ್ ಭಿ ತುಮ್ಸೆ ಶಾದಿ ಕರುಂಗಿ. ಎಂದರೆ ನೀನು ನಾಳೆ ಹಳದಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಮತ್ತೆ ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಮತ್ತೆ ಮೀಸೆ ಬೋಳಿಸಿ, ಕಿವಿಯಲ್ಲಿ ರಿಂಗ್ ಹಾಕಿಕೊಂಡು ಬಂದರೆ ಮಾತ್ರ ಮದುವೆ ಆಗುತ್ತೇನೆ ಎಂದು ಮಂಜ ಹೇಳಿದ.

ಹಾಗೆ ನಮ್ಮ ರಾಜೀವ ಮರುದಿವಸ ಅದೇ ವೇಷದಲ್ಲಿ ಶಾಲೆಗೆ ಹಾಜರ ಆಗಿದ್ದ. ಅದನ್ನು ನೋಡಿ ನಾವಲ್ಲದೆ ಚೇತನನು ಬಿದ್ದು ಬಿದ್ದು ನಕ್ಕಿದ್ದಳು.

ಆನಂತರ ನಮ್ಮ ಮಂಜನ ಜೊತೆ ದೊಡ್ಡ ಜಗಳ ಮಾಡಿದ್ದ ರಾಜೀವ. ಅನಂತರ ನಮ್ಮ ರಾಜೀವ ಹಿಂದಿ ಕಲಿಯುವ ಪುಸ್ತಕ ತಂದು ಒಂದೇ ತಿಂಗಳಲ್ಲಿ ಹಿಂದಿ ಕಲೆತಿದ್ದ.

ಮಂಜನಿಗೆ ಹಿಂದಿ ಹೇಗೆ ಬರುತಿತ್ತು ಎಂದರೆ ಮಂಜ ಒಂದು ವರ್ಷ ಮಧ್ಯಪ್ರದೇಶದಲ್ಲಿ ಕಲೆತಿದ್ದ. ಮಧ್ಯಪ್ರದೇಶದಲ್ಲಿ ಮಂಜ ಇದ್ದಾಗ, ಪರೀಕ್ಷೆ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಪ್ರಬಂಧ ಕೇಳಿಯೇ ಕೇಳುತ್ತಿದ್ದರು. ಮಂಜ ಎಲ್ಲ ಪ್ರಬಂಧ ಓದಿ ಕೊಂಡು ಹೋಗಿದ್ದ. ಆದರೆ ಪರೀಕ್ಷೆಯಲ್ಲಿ ಅವನು ಓದಿದ ಪ್ರಬಂಧ ಬಿಟ್ಟು ಬೇರೆ ಗಾಯ( गाय ಅಂದರೆ ಆಕಳು) ಬಗ್ಗೆ ಪುಟಕ್ಕೆ ಮೀರದಂತೆ ಬರೆಯಿರಿ ಎಂದು ಬಂದಿತ್ತು. ಮಂಜನಿಗೆ ಎಷ್ಟೇ ಯೋಚಿಸಿದರು ಏನು ಹೋಳಿಲೆ ಇಲ್ಲ. ಆಗ ಹೀಗೆ ಬರೆದ ನಮ್ಮ ತರ್ಲೆ ಮಂಜ....

गाय मेरा माता है - ಗಾಯ್ ಮೇರಾ ಮಾತಾ ಹೈ (ಆಕಳು ನನ್ನ ಮಾತೆ)
आगे कुछ नहीं आता है - ಆಗೇ ಕುಚ್ ನಹಿ ಆತಾ ಹೈ (ಮುಂದೆ ಬೇರೇನೂ ಗೊತ್ತಿಲ್ಲ)

ಅದನ್ನು ನೋಡಿದ ನಮ್ಮ ಮಾಸ್ತರಿಗೆ ಕೋಪ ಬಂದಿತ್ತು. ಅವರು ಹೀಗೆ ಬರೆದರು...

भैस मेरा बाप है - ಭೈಸ್ ಮೇರಾ ಬಾಪ್ ಹೈ (ಕೋಣ ನನ್ನ ಅಪ್ಪ)
अंक देना पाप है - ಅಂಕ ದೇನಾ ಪಾಪ ಹೈ (ಅಂಕ ಕೊಡುವದು ತಪ್ಪು)

ಮತ್ತೆ ಒಂದು ದಿವಸ ಪಕ್ಕದ ಮನೆ ನಾರಾಯಣ ಮೂರ್ತಿಗಳಿಗೆ ಒಂದು ಪತ್ರ ಬಂದಿತ್ತು. ಅದನ್ನು ನಮ್ಮ ಮಂಜ ತೆಗೆದುಕೊಂಡು ಹೋಗಿ ಅವರ ಮನೆಗೆ ಕೊಟ್ಟು ನೋಡಿ ಸರ್ ರಮಾ ಎನ್ನುವವರ ಪತ್ರ ಬಂದಿದೆ ಎಂದು ಅವರ ಮಡದಿಯ ಮುಂದೆ ಹೇಳಿ ಕೊಟ್ಟು ಬಿಟ್ಟ. ಎರಡು ದಿನ ಅವರ ಮನೆಯಲ್ಲಿ ರಸ್ತೆ ಬೀದಿಗೆ ಕೇಳುವ ಹಾಗೆ ಜಗಳವೋ ಜಗಳ ... ಅನಂತರ ಗೊತ್ತಾಗಿದ್ದು ಅದು ರಮಾ(rama) ಅಲ್ಲ ರಾಮ(rama) ಅವರಿಂದ ಬಂದ ಪತ್ರ.

ಏನೇ ಆದರು ನಮ್ಮ ಮಂಜ ಮಾತ್ರ ಈಗಲೂ ಸಹ ಓದುವ ಹವ್ಯಾಸ ಮಾತ್ರ ಬಿಟ್ಟಿಲ್ಲ.