ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ. ಅವನು ಶಾಲೆಯಲ್ಲಿ ಕಂಡು ಹಿಡಿದ ಕೆಲವು ವಿಷಯಗಳು ...
Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
ಯಾವತ್ತಾದರೂ ಹೋಟೆಲಿಗೆ ಹೋಗುವ ವಿಷಯ ಬಂದರೆ ನಮ್ಮ ಮಂಜ ಲೇ ಇವತ್ತು mathemetics ಓದಬೇಕು ಕಣ್ರೋ ಎಂದು ಹೇಳುತ್ತಿದ್ದ.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.
ಮತ್ತೆ ನಿವೇನಾದರು ಕಂಡು ಹಿಡಿದಿದ್ದಿರಾ? ಮತ್ತೆ ನಮೂದಿಸಿ....
ಇಲ್ಲಿ ಬರೆದಿರುವ ಆರ್ಟಿಕಲ್ ಗಳಲ್ಲಿ ಕೆಲವು ಸತ್ಯ ಘಟನೆಗಳು ಮತ್ತೆ ಕೆಲವು ಕಲ್ಪನೆಗಳು....ಇದರಿಂದ ನಿಮ್ಮ ಮುಖದಲ್ಲಿ ಮುಗುಳ್ನಗೆ ತರಿಸಿದಲ್ಲಿ ಅದೇ ನಮಗೆ ಹಾಲು ಸಕ್ಕರೆ....
Monday, March 22, 2010
Saturday, March 6, 2010
ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ....
"ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ ಎದ್ದು ಯಾರನ್ನೋ ನೆನಸುತ್ತ ಇದ್ದ ಹಾಗೆ ಇತ್ತು ಎಂದೇ. ಮಹಾಭಾರತದ ಪಾತ್ರಗಳನ್ನಾ? ಎಂದೇ. ಅದಕ್ಕೆ ನಸು ನಕ್ಕು ಕುಂಭಕರ್ಣ ಮಹಾಭಾರತದಲ್ಲಿ ಯಾವಾಗ ಬಂದ ಎಂದಳು ನನ್ನಾಕೆ. ನಾನು ಕುಂಭ ರಾಶಿಯ ಕರ್ಣನ ಬಗ್ಗೆ ಅಂತ ತಿಳಿದುಕೊಂಡು ಕೇಳಿದೆ ಅಷ್ಟೇ ಎಂದು ಸುಮ್ಮನೆ ಮಾತು ಹಾರಿಸಿದೆ. ನಿಮಗೆ ಇದೊಂದು ಗೊತ್ತು, ಬರಿ ಮಾತು ಎಂದಳು. ನಿನ್ನ ಕಟ್ಟಿಕೊಂಡ ಮೇಲೆ ತತ್ವಜ್ಞಾನಿ ಆಗಲೇ ಬೇಕಲ್ಲ ಎಂದು ಅನ್ನಬೇಕು ಅಂದು ಕೊಂಡರು ಅನ್ನಲಿಲ್ಲ. ಇರುವ ಒಂದು ಭಾನುವಾರವಾದರೂ ಒಂದೊಳ್ಳೆ ರುಚಿ ತಿಂಡಿ ಕಳೆದುಕೊಳ್ಳುವ ಮನಸ್ಸಿಲ್ಲದೆ . ದಿನಾಲೂ ಹೋಟೆಲಿನಲ್ಲಿ ತಿಂದು ತಿಂದು ಬಾಯಿ ಕೆಟ್ಟುಹೋಗಿತ್ತು. ರೀ ಇವತ್ತೇನು ಬೇಗ ಬೇಗ ಸ್ನಾನ ಮುಗಿಸಿ, ಎಲ್ಲಾದರೂ ತಿಂಡಿ ತಿನ್ನಲು ಹೋಟೆಲ್ಗೆ ಹೋಗೋಣ ಎಂದಾಗ, ಇಂಗು ತಿಂದ ಮಂಗನಂತೆ ಅವಳನ್ನು ನೋಡಿದ್ದೇ.
ಟೀ ಪಾತ್ರೆ ಕುಕ್ಕುತ್ತ ಇದ್ದ ನನ್ನ ಮಡದಿನ ನೋಡಿ, ಇವಳ ಕೋಪ ಯಾಕೋ ಕಡಿಮೇ ಆಗುವ ಲಕ್ಷಣ ಕಂಡು ಬರಲಿಲ್ಲ. ಹೊರಗೆ ಹೋಗುವದನ್ನು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಇವತ್ತು ಹೋಳಿ ಕಣೆ ಯಾರಾದರು ಬಣ್ಣ ಗಿಣ್ಣ ಎರಚಿದರೆ ಕಷ್ಟ ಎಂದೇ. ಅದೇನು ಇಲ್ಲ, ಇದೇನು ಧಾರವಾಡನಾ?. ಅಷ್ಟರಲ್ಲಿ ಯಾಕೋ ಹೊಟ್ಟೆ ನೋವು ಕಣೆ ಎಂದು ಹಾಗೆ ಒಂದು ರೈಲು ಬಿಟ್ಟೆ. ಮತ್ತೆ "ಯಾಕೆ ರೀ ಏನಾಯಿತು ನಡೀರಿ ಹಾಸ್ಪಿಟಲ್ಗೆ " ಎಂದು ಗಂಟುಬೀದ್ದಳು. ಅದೆಲ್ಲ ಏನು ಇಲ್ಲ ಕಣೆ. ಸುಮ್ಮನೆ ಸ್ವಲ್ಪ ನೋಯುತ್ತಾ ಇದೆ ಟೀ ಕೊಡೆ ಎಂದೇ. ಎಲ್ಲಾ ಟೀ ಇಂದಾನೆ ಅಗಿದ್ದು, ಇದರ ಮನೆ ಹಾಳಾಗ ಎಂದು ಟೀ ನೆಲ್ಲಾ ವಾಶ್ ಬೇಸಿನಗೆ ಸುರಿದಳು. ತಡಿರಿ ಸ್ವಲ್ಪ ಕಷಾಯ ಮಾಡುತ್ತೇನೆ ಎಂದು ಕಷಾಯ ಮಾಡಿದಳು. ಅದೇಕೆ ಗೊತ್ತಿಲ್ಲ ಕಷಾಯ ಒಲ್ಲದ ಮನಸ್ಸಿನಿಂದ ಕುಡಿದು ಮುಗಿಸುವಷ್ಟರಲ್ಲಿ ಹೊಟ್ಟೆ ನೋವು ನಿಜವಾಗಿಯೂ ಶುರು ಹಚ್ಚಿ ಕೊಂಡಿತು. ಲೇ ತುಂಬಾ ನೋವು ಕಣೆ ನಡಿ ಯಾವುದಾದರು ಹಾಸ್ಪಿಟಲ್ಗೆ ಹೋಗೋಣ ಎಂದು ಹೇಳಿದೆ.
ಇಬ್ಬರು ಸ್ಕೂಟರ್ ಏರಿ ಹಾಸ್ಪಿಟಲ್ ದಾರಿ ಹಿಡಿದೆವು. ಸ್ವಲ್ಪ ದೂರ ಹೋಗುವಷ್ಟರಲ್ಲಿ ತುಂಬಾ ಟ್ರಾಫಿಕ್ ಜಾಮ್ ಆಗಿತ್ತು. ಸಿಗ್ನಲ್ ಇಲ್ಲದ ಜಾಗದಲ್ಲಿ ಇಷ್ಟೊಂದು ಟ್ರಾಫಿಕ್ ಎಂದು ನೋಡಿದಾಗ ತಿಳಿಯಿತು ಅಲ್ಲಿ ಒಬ್ಬ ಪಾಲಿಟಿಸಿಯನ್ ಬರುತ್ತಿದ್ದಾರೆ ಎಂದು. ನನ್ನ ಹೆಂಡತಿ ಮಾತ್ರ ಅವನಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಳು. ನನ್ನ ಹೆಂಡತಿಯನ್ನು ನೋಡಿ ಒಬ್ಬ ಮನುಷ್ಯ ನಕ್ಕು, ಅವರು ಹಾಗೆ ಮೇಡಂ, ಅವರು ಬಂದರೆ ನಮ್ಮ ಆಫೀಸಿಗೆ ಲೇಟ್. ಇನ್ನು ಯಾರದಾದರೂ ಪರೀಕ್ಷೆ ಇದ್ದರೆ ಅಧೋಗತಿ. ಇವರು ಪಾಲಿಟಿಸಿಯನ್ ಅಲ್ಲ ಪೋಲಿ-ಟಿಸಿಯನ್ ಎಂದಾಗ ನನ್ನ ಮಡದಿಯ ಮುಖದಲ್ಲಿ ಮಂದಹಾಸ ಮೂಡಿತ್ತು. ನನ್ನ ಮಡದಿಯ ಮುಖದಲ್ಲಿಯ ಕಳೆ ಕಂಡ ಮೇಲೆ, ಹೊಟ್ಟೆ ನೋವು ಸ್ವಲ್ಪ ಕಡಿಮೆ ಅನ್ನಿಸತೊಡಗಿತು. ಮನೆಗೆ ಹೋಗೋಣ ಕಣೆ ಈಗ ಸ್ವಲ್ಪ ಪರವಾಗಿಲ್ಲ ಎಂದರು ನನ್ನ ಹೆಂಡತಿ ಕೇಳಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ಮಾರುತಿ ಕಾರು ನನ್ನ ಸ್ಕೂಟರ್ ಪಕ್ಕ ಬಂದು ನಿಂತಿತು. ಹಾಗೆ ಕಣ್ಣು ಹಾಯಿಸಿದಾಗ ಹೆಲ್ಮೆಟ್ ಹಾಕಿಕೊಂಡು ಒಬ್ಬ ಮನುಷ್ಯ ಕಾರಿನೊಳಗೆ ಕುಳಿತ ಹಾಗೆ ಕಾಣಿಸಿತು, ನೋಡೇ ಅಲ್ಲಿ ಯಾರೋ ಹೆಲ್ಮೆಟ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದಾರೆ ಎಂದು ಹೇಳಿದೆ. ಆಗ ನನ್ನ ಹೆಂಡತಿ ಗಹ ಗಹಿಸಿ ನಗಲು ಶುರು ಮಾಡಿದಳು. ರೀ ನೋಡ್ರಿ ಅದು ಇಲಿಯ ಮೇಲಿನ ಗಣಪ ಎಂದಾಗ, ನಾನು ಕೂಡ ಮಂದಹಾಸ ಬಿರಿದೆ. ಆಗ ನನ್ನನ್ನು ಒಮ್ಮೆ ನಾನೆ ಅನಾಮತ್ತಾಗಿ ಪೂರ್ತಿ ನೋಡಿದಾಗ ತಿಳಿಯಿತು ನಾನು ಇಷ್ಟು ಅನಾಹುತವಾಗಿ ನನ್ನಷ್ಟಕ್ಕೆ ನಾನೆ ಘಾಬರಿ ಪಡುವಷ್ಟು ದಪ್ಪಗಾಗಿದ್ದೇನೆ ಎಂದು.
ಕ್ಲಿನಿಕ್ ಒಳಗೆ ಬಂದು ಕುಳಿತೆವು ಡಾಕ್ಟರ ಇನ್ನು ಬಂದಿರಲಿಲ್ಲ. ಯಾರು ಪೇಷೆಂಟ್ ಕೂಡ ಇರಲಿಲ್ಲ. ನಾವೇ ಮೊದಲು ಹೋಗಿದ್ದು. ರಿಸೆಪ್ಶನಿಷ್ಟ ಬಳಿ ಹೋಗಿ ಹೆಸರು ಹೇಳಿ ಬಂದೆವು. ಈ ಡಾಕ್ಟರಗೆ ಇಷ್ಟು ಸುಂದರವಾದ ರಿಸೆಪ್ಶನಿಷ್ಟ ಏಕೆ ಬೇಕು? ಎಂದು ಯೋಚಿಸುತ್ತಿರುವಾಗಲೇ, ಡಾಕ್ಟರ ಹಾಜರಾಗ ಬೇಕೇ. ಯೋಚಿಸುವದು ಬಿಟ್ಟು ಅವಳನ್ನು ಚೆನ್ನಾಗಿ ನೋಡಬಹುದಿತ್ತು. ಸ್ವಲ್ಪ ಸಮಯದ ನಂತರ ರಿಸೆಪ್ಶನಿಷ್ಟ ನನ್ನ ಹೆಸರು ಕೂಗಿದಳು. ಡಾಕ್ಟರ ತಿಂಡಿ ಮಾಡುತ್ತಿದ್ದರು. ವಾಸನೆ ತುಂಬಾ ಚೆನ್ನಾಗಿ ಬರುತಿತ್ತು. ತಿಂಡಿಯ ಚಮಚ ಹಿಡಿದು ನನ್ನ ಬಳಿ ಬಂದು ಎಲ್ಲಿ ಬಾಯಿ ತೆಗೆಯಿರಿ ಎಂದರು. ಬೇಡ ಡಾಕ್ಟರ ಹೊಟ್ಟೆ ನೋವು.... ಎಂದು ಮಕ್ಕಳು ಆಸೆ ಪಟ್ಟರು ದೊಡ್ಡವರ ಅನುಮತಿ ಪಡೆಯುವ ಹಾಗೆ ನನ್ನ ಮಡದಿಯ ಮುಖ ನೋಡಿದೆ. ಚಮಚದಲ್ಲಿಯ ತಿಂಡಿ ಬೇಗನೆ ತಿಂದು. (ಮನಸಿನಲ್ಲಿ ಬಕಾಸುರ ಎಂದುಕೊಂಡಿರಬಹುದು) ರೀ ಬಾಯಿ ತೆಗಿರಿ ನೋಡಬೇಕು ಎಂದರು. ನಾನು ಹಲ್ಲು ಚೆನ್ನಾಗೆ ಉಜ್ಜಿದ್ದೇನೆ ಡಾಕ್ಟರ ಎಂದೇ. ರೀ ನಿಮಗೆ ತಿಂಡಿ ತಿನಿಸೋಕು,ಹಲ್ಲು ಉಜ್ಜೋಕೆ , ಅಥವಾ ಹಲ್ಲು ಉಜ್ಜಿದ್ದು ನೋಡುವದಕ್ಕೆ ಅಲ್ಲ. ನಾನು ಹೇಳಿದಷ್ಟು ಮಾಡಿ ಎಂದರು. ಇದೆ ಮೊದಲ ಸರಿ ನಾ ಹೊಟ್ಟೆ ನೋವು? ಎಂದರು. ಈಗೀಗ ಸ್ವಲ್ಪ ಜ್ಯಾಸ್ತಿ ಡಾಕ್ಟರ ಎಂದೇ. ಈಗೀಗ ಎಂದರೆ ಒಂದೆರಡು ವರ್ಷದಿಂದ ಎಂದೇ. ಹೋಗಿ ತಮ್ಮ ಸಿಟ್ ಮೇಲೆ ಒರಗಿ, ಏನಾದರು ಹಾಳು-ಮುಳು ತಿನ್ದಿರೆನು? ಎಂದು ಕೇಳಿದರು. ನನಗೆ ಹಾಲು ಮೂಳೆ ಅಂದ ಹಾಗೆ ಅನ್ನಿಸಿ, ನನಗೆ ಹಾಲು ಇಷ್ಟ ಇಲ್ಲ ಡಾಕ್ಟರ, ಇನ್ನು ಮೂಳೆ ನಾನು ಮುಟ್ಟೋದೇ ಇಲ್ಲ ನಾನು ಸಸ್ಯಾಹಾರಿ ನೋಡಿ ಬೇಕಾದರೆ ಎಂದು ಜನಿವಾರ ತೋರಿಸಿದೆ. ಆಗ ಡಾಕ್ಟರ ನನ್ನ ಬಿಟ್ಟು ಹೆಂಡತಿಯ ಬಳಿ ಮಾತು ಆರಂಬಿಸಿದರು. ಏನು ತಿಂದರು ನಿಮ್ಮ ಯಜಮಾನರು. ಆಗ ನನ್ನ ಹೆಂಡತಿ ಅಪ್ಪ ಮಗನಿಗೆ ಅದೇ ಧ್ಯಾನ ಡಾಕ್ಟರ ಪಿಜ್ಜಾ.. ಪಿಜ್ಜಾ.. ಮತ್ತೆ ಆ ಚಿಪ್ಸ್ ಎಂದಳು. ನೋಡ್ರಿ ಯಾವತ್ತು ತಳಪಾಯ ಘಟ್ಟಿ ಇರಬೇಕು ಎಂದರು. ನಾನು ಘಾಬರಿ ಇವರೇನು ಡಾಕ್ಟರ ಅಥವಾ ಆಕ್ಟರ್?. ಏನಿದು ಡಬಲ್ ಮೀನಿಂಗ್ ಎಂದು ಮನಸಿನಲ್ಲೇ (ಅಂದುಕೊಂಡೆ ಅವರಂದ ಮಾತಿಗೆ ಹಿಂದೆ ನೋಡದೆ). ಮತ್ತೆ ನಿಮ್ಮ ದಿನಚರಿ ಏನು? ಎಂದು ನನ್ನನ್ನು ಕೇಳಿದರು. ಆಗ ನಾನು ಬೆಳಿಗ್ಗೆ ೭ ಘಂಟೆ ಏಳುವದು ಮತ್ತೆ ಟೀ, ಸ್ನಾನ , ತಿಂಡಿ, ಆಫೀಸ್, ಊಟ, ಮನೆ ಮತ್ತೆ ತಿಂಡಿ ಮತ್ತು ಟೀ ಅನಂತರ ರಾತ್ರಿ ಊಟ ಎಂದೇ. ಡಾಕ್ಟರ ೫ ವರ್ಷದ ಹಿಂದಿನ ದಿನಚರಿ ನೆನಪು ಮಾಡಿ ಹೇಳಿ ಎಂದರು. ಆಗ ಸ್ವಲ್ಪ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಸಂದ್ಯಾವಂದನೆ, ಸ್ನಾನ ನಂತರ ತಿಂಡಿ ಟೀ..... ಅಷ್ಟಕ್ಕೇ ತಡೆದು ನೋಡಿ ನೀವು ಆಗ ಹೇಗೆ ಇದ್ದೀರಿ. ಈಗ ಏನಾಗಿದೆ? ಎಂದು ನೀವೇ ಊಹಿಸಿಕೊಳ್ಳಿ. ನಾವು ನಮ್ಮ ಸಂಸ್ಕೃತಿಯ ಕೆಲವು ವಿಷಯಗಳನ್ನು ಎಂದು ಮರೆಯಬಾರದು. ನಾನು ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ, ಸಂದ್ಯಾವಂದನೆ, ಪ್ರಾಣಾಯಾಮ ಇವುಗಳನ್ನು ತಪ್ಪದೆ ಮಾಡುತ್ತೇನೆ. ಅಲ್ಲದೆ ದಿನಾಲೂ ಒಂದು ತುಳಸಿದಳ ತಿನ್ನುತ್ತೇನೆ. ಹೀಗೆ ಹತ್ತು ಹಲವಾರು ವಿಷಯಗಳನ್ನೂ ತಿಳಿ ಹೇಳಿದರು. ನಿಮ್ಮ ಆಲಸ್ಯತನವನ್ನು ಬಿಟ್ಟು ಮೊದಲಿನ ಹಾಗೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ ಮತ್ತೆ ಹಾಳು-ಮುಳು ತಿನ್ನುವದು ಬಿಟ್ಟು ಬಿಡಿ ಎಂದು ಹೇಳಿದರು. ಮಡದಿ ಇವರು ಯಾವಾಗಲು ಹೀಗೆ ತಲೆ ಇಲ್ಲ.... ಹೊಟ್ಟೆ ಇಲ್ಲ... ಕಣ್ಣು ಯಾವುದಾದರು ಒಂದು ನೋಯುತ್ತಿರುತ್ತದೆ. ಇವರಿಗೆ ಏನಾದರು ಒಳ್ಳೆಯ ಔಷಧ ಕೊಡಿ ಎಂದಳು. ಆಗ ಡಾಕ್ಟರ ನಮಗೂ ಬದುಕಲು ಬಿಡಿ ಮೇಡಂ ಎಂದು ಗಹ ಗಹಿಸಿ ನಕ್ಕು, ನೋಡಿ "ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ". ಎಂದರು. ನೋಡಿ ಯಾರಿಗೆ ಏನೂ ಆಗುವದಿಲ್ಲವೋ ಅವ್ರಿಗೆ ಒಮ್ಮೆ ಲೇ ಏನಾದರು ಆಗುತ್ತೆ ಎಂದರು. ಈ ವಾಕ್ಯ ನನಗೆ ತುಂಬಾ ಹಿಡಿಸಿತು. ನಾವು ಮಣಿದಾಗ ಮಾತ್ರ ಮತ್ತೆ ಸರಿ ಮಾಡಬಹುದು, ಆದರೆ ಮುರಿದೆ ಹೋದರೆ ...?. ಒಂದೆರಡು ಮಾತ್ರೆ ಕೊಟ್ಟರು.ಡಾಕ್ಟರ ಫೀಸ್ ಎಂದಾಗ, 10 ರುಪಾಯಿ ಮಾತ್ರ ತೆಗೆದು ಕೊಂಡರು.
ಪುಣ್ಯಾತ್ಮ ಎಂದು ಮನಸಿನಲ್ಲೇ ಅಂದುಕೊಂಡು ಹೊರಗೆ ಬಂದೆವು. ಅವರ ಮಾತುಗಳು ನನಗೆ ತಲೆಯಲಿ ಗುನುಗುಡುತಿತ್ತು. ಅದೇ ಗುಂಗಿನಲ್ಲಿ ಮತ್ತೆ ರಿಸೆಪ್ಶನಿಷ್ಟ ನೆನಪೇ ಹಾರಿ ಹೋಗಿದ್ದಳು ಛೆ.. ಛೆ... ನೋಡೋಣ ನಾಳೆ ಮತ್ತೆ ಚಾನ್ಸ್ ಸಿಗುತ್ತಾ ಅಂತ. ಆದರೆ ದಿನಚರಿ ಬದಲಿಸಬೇಕು ಎಂಬ ನಿರ್ಧಾರ ?......
ಟೀ ಪಾತ್ರೆ ಕುಕ್ಕುತ್ತ ಇದ್ದ ನನ್ನ ಮಡದಿನ ನೋಡಿ, ಇವಳ ಕೋಪ ಯಾಕೋ ಕಡಿಮೇ ಆಗುವ ಲಕ್ಷಣ ಕಂಡು ಬರಲಿಲ್ಲ. ಹೊರಗೆ ಹೋಗುವದನ್ನು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಇವತ್ತು ಹೋಳಿ ಕಣೆ ಯಾರಾದರು ಬಣ್ಣ ಗಿಣ್ಣ ಎರಚಿದರೆ ಕಷ್ಟ ಎಂದೇ. ಅದೇನು ಇಲ್ಲ, ಇದೇನು ಧಾರವಾಡನಾ?. ಅಷ್ಟರಲ್ಲಿ ಯಾಕೋ ಹೊಟ್ಟೆ ನೋವು ಕಣೆ ಎಂದು ಹಾಗೆ ಒಂದು ರೈಲು ಬಿಟ್ಟೆ. ಮತ್ತೆ "ಯಾಕೆ ರೀ ಏನಾಯಿತು ನಡೀರಿ ಹಾಸ್ಪಿಟಲ್ಗೆ " ಎಂದು ಗಂಟುಬೀದ್ದಳು. ಅದೆಲ್ಲ ಏನು ಇಲ್ಲ ಕಣೆ. ಸುಮ್ಮನೆ ಸ್ವಲ್ಪ ನೋಯುತ್ತಾ ಇದೆ ಟೀ ಕೊಡೆ ಎಂದೇ. ಎಲ್ಲಾ ಟೀ ಇಂದಾನೆ ಅಗಿದ್ದು, ಇದರ ಮನೆ ಹಾಳಾಗ ಎಂದು ಟೀ ನೆಲ್ಲಾ ವಾಶ್ ಬೇಸಿನಗೆ ಸುರಿದಳು. ತಡಿರಿ ಸ್ವಲ್ಪ ಕಷಾಯ ಮಾಡುತ್ತೇನೆ ಎಂದು ಕಷಾಯ ಮಾಡಿದಳು. ಅದೇಕೆ ಗೊತ್ತಿಲ್ಲ ಕಷಾಯ ಒಲ್ಲದ ಮನಸ್ಸಿನಿಂದ ಕುಡಿದು ಮುಗಿಸುವಷ್ಟರಲ್ಲಿ ಹೊಟ್ಟೆ ನೋವು ನಿಜವಾಗಿಯೂ ಶುರು ಹಚ್ಚಿ ಕೊಂಡಿತು. ಲೇ ತುಂಬಾ ನೋವು ಕಣೆ ನಡಿ ಯಾವುದಾದರು ಹಾಸ್ಪಿಟಲ್ಗೆ ಹೋಗೋಣ ಎಂದು ಹೇಳಿದೆ.
ಇಬ್ಬರು ಸ್ಕೂಟರ್ ಏರಿ ಹಾಸ್ಪಿಟಲ್ ದಾರಿ ಹಿಡಿದೆವು. ಸ್ವಲ್ಪ ದೂರ ಹೋಗುವಷ್ಟರಲ್ಲಿ ತುಂಬಾ ಟ್ರಾಫಿಕ್ ಜಾಮ್ ಆಗಿತ್ತು. ಸಿಗ್ನಲ್ ಇಲ್ಲದ ಜಾಗದಲ್ಲಿ ಇಷ್ಟೊಂದು ಟ್ರಾಫಿಕ್ ಎಂದು ನೋಡಿದಾಗ ತಿಳಿಯಿತು ಅಲ್ಲಿ ಒಬ್ಬ ಪಾಲಿಟಿಸಿಯನ್ ಬರುತ್ತಿದ್ದಾರೆ ಎಂದು. ನನ್ನ ಹೆಂಡತಿ ಮಾತ್ರ ಅವನಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಳು. ನನ್ನ ಹೆಂಡತಿಯನ್ನು ನೋಡಿ ಒಬ್ಬ ಮನುಷ್ಯ ನಕ್ಕು, ಅವರು ಹಾಗೆ ಮೇಡಂ, ಅವರು ಬಂದರೆ ನಮ್ಮ ಆಫೀಸಿಗೆ ಲೇಟ್. ಇನ್ನು ಯಾರದಾದರೂ ಪರೀಕ್ಷೆ ಇದ್ದರೆ ಅಧೋಗತಿ. ಇವರು ಪಾಲಿಟಿಸಿಯನ್ ಅಲ್ಲ ಪೋಲಿ-ಟಿಸಿಯನ್ ಎಂದಾಗ ನನ್ನ ಮಡದಿಯ ಮುಖದಲ್ಲಿ ಮಂದಹಾಸ ಮೂಡಿತ್ತು. ನನ್ನ ಮಡದಿಯ ಮುಖದಲ್ಲಿಯ ಕಳೆ ಕಂಡ ಮೇಲೆ, ಹೊಟ್ಟೆ ನೋವು ಸ್ವಲ್ಪ ಕಡಿಮೆ ಅನ್ನಿಸತೊಡಗಿತು. ಮನೆಗೆ ಹೋಗೋಣ ಕಣೆ ಈಗ ಸ್ವಲ್ಪ ಪರವಾಗಿಲ್ಲ ಎಂದರು ನನ್ನ ಹೆಂಡತಿ ಕೇಳಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ಮಾರುತಿ ಕಾರು ನನ್ನ ಸ್ಕೂಟರ್ ಪಕ್ಕ ಬಂದು ನಿಂತಿತು. ಹಾಗೆ ಕಣ್ಣು ಹಾಯಿಸಿದಾಗ ಹೆಲ್ಮೆಟ್ ಹಾಕಿಕೊಂಡು ಒಬ್ಬ ಮನುಷ್ಯ ಕಾರಿನೊಳಗೆ ಕುಳಿತ ಹಾಗೆ ಕಾಣಿಸಿತು, ನೋಡೇ ಅಲ್ಲಿ ಯಾರೋ ಹೆಲ್ಮೆಟ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದಾರೆ ಎಂದು ಹೇಳಿದೆ. ಆಗ ನನ್ನ ಹೆಂಡತಿ ಗಹ ಗಹಿಸಿ ನಗಲು ಶುರು ಮಾಡಿದಳು. ರೀ ನೋಡ್ರಿ ಅದು ಇಲಿಯ ಮೇಲಿನ ಗಣಪ ಎಂದಾಗ, ನಾನು ಕೂಡ ಮಂದಹಾಸ ಬಿರಿದೆ. ಆಗ ನನ್ನನ್ನು ಒಮ್ಮೆ ನಾನೆ ಅನಾಮತ್ತಾಗಿ ಪೂರ್ತಿ ನೋಡಿದಾಗ ತಿಳಿಯಿತು ನಾನು ಇಷ್ಟು ಅನಾಹುತವಾಗಿ ನನ್ನಷ್ಟಕ್ಕೆ ನಾನೆ ಘಾಬರಿ ಪಡುವಷ್ಟು ದಪ್ಪಗಾಗಿದ್ದೇನೆ ಎಂದು.
ಕ್ಲಿನಿಕ್ ಒಳಗೆ ಬಂದು ಕುಳಿತೆವು ಡಾಕ್ಟರ ಇನ್ನು ಬಂದಿರಲಿಲ್ಲ. ಯಾರು ಪೇಷೆಂಟ್ ಕೂಡ ಇರಲಿಲ್ಲ. ನಾವೇ ಮೊದಲು ಹೋಗಿದ್ದು. ರಿಸೆಪ್ಶನಿಷ್ಟ ಬಳಿ ಹೋಗಿ ಹೆಸರು ಹೇಳಿ ಬಂದೆವು. ಈ ಡಾಕ್ಟರಗೆ ಇಷ್ಟು ಸುಂದರವಾದ ರಿಸೆಪ್ಶನಿಷ್ಟ ಏಕೆ ಬೇಕು? ಎಂದು ಯೋಚಿಸುತ್ತಿರುವಾಗಲೇ, ಡಾಕ್ಟರ ಹಾಜರಾಗ ಬೇಕೇ. ಯೋಚಿಸುವದು ಬಿಟ್ಟು ಅವಳನ್ನು ಚೆನ್ನಾಗಿ ನೋಡಬಹುದಿತ್ತು. ಸ್ವಲ್ಪ ಸಮಯದ ನಂತರ ರಿಸೆಪ್ಶನಿಷ್ಟ ನನ್ನ ಹೆಸರು ಕೂಗಿದಳು. ಡಾಕ್ಟರ ತಿಂಡಿ ಮಾಡುತ್ತಿದ್ದರು. ವಾಸನೆ ತುಂಬಾ ಚೆನ್ನಾಗಿ ಬರುತಿತ್ತು. ತಿಂಡಿಯ ಚಮಚ ಹಿಡಿದು ನನ್ನ ಬಳಿ ಬಂದು ಎಲ್ಲಿ ಬಾಯಿ ತೆಗೆಯಿರಿ ಎಂದರು. ಬೇಡ ಡಾಕ್ಟರ ಹೊಟ್ಟೆ ನೋವು.... ಎಂದು ಮಕ್ಕಳು ಆಸೆ ಪಟ್ಟರು ದೊಡ್ಡವರ ಅನುಮತಿ ಪಡೆಯುವ ಹಾಗೆ ನನ್ನ ಮಡದಿಯ ಮುಖ ನೋಡಿದೆ. ಚಮಚದಲ್ಲಿಯ ತಿಂಡಿ ಬೇಗನೆ ತಿಂದು. (ಮನಸಿನಲ್ಲಿ ಬಕಾಸುರ ಎಂದುಕೊಂಡಿರಬಹುದು) ರೀ ಬಾಯಿ ತೆಗಿರಿ ನೋಡಬೇಕು ಎಂದರು. ನಾನು ಹಲ್ಲು ಚೆನ್ನಾಗೆ ಉಜ್ಜಿದ್ದೇನೆ ಡಾಕ್ಟರ ಎಂದೇ. ರೀ ನಿಮಗೆ ತಿಂಡಿ ತಿನಿಸೋಕು,ಹಲ್ಲು ಉಜ್ಜೋಕೆ , ಅಥವಾ ಹಲ್ಲು ಉಜ್ಜಿದ್ದು ನೋಡುವದಕ್ಕೆ ಅಲ್ಲ. ನಾನು ಹೇಳಿದಷ್ಟು ಮಾಡಿ ಎಂದರು. ಇದೆ ಮೊದಲ ಸರಿ ನಾ ಹೊಟ್ಟೆ ನೋವು? ಎಂದರು. ಈಗೀಗ ಸ್ವಲ್ಪ ಜ್ಯಾಸ್ತಿ ಡಾಕ್ಟರ ಎಂದೇ. ಈಗೀಗ ಎಂದರೆ ಒಂದೆರಡು ವರ್ಷದಿಂದ ಎಂದೇ. ಹೋಗಿ ತಮ್ಮ ಸಿಟ್ ಮೇಲೆ ಒರಗಿ, ಏನಾದರು ಹಾಳು-ಮುಳು ತಿನ್ದಿರೆನು? ಎಂದು ಕೇಳಿದರು. ನನಗೆ ಹಾಲು ಮೂಳೆ ಅಂದ ಹಾಗೆ ಅನ್ನಿಸಿ, ನನಗೆ ಹಾಲು ಇಷ್ಟ ಇಲ್ಲ ಡಾಕ್ಟರ, ಇನ್ನು ಮೂಳೆ ನಾನು ಮುಟ್ಟೋದೇ ಇಲ್ಲ ನಾನು ಸಸ್ಯಾಹಾರಿ ನೋಡಿ ಬೇಕಾದರೆ ಎಂದು ಜನಿವಾರ ತೋರಿಸಿದೆ. ಆಗ ಡಾಕ್ಟರ ನನ್ನ ಬಿಟ್ಟು ಹೆಂಡತಿಯ ಬಳಿ ಮಾತು ಆರಂಬಿಸಿದರು. ಏನು ತಿಂದರು ನಿಮ್ಮ ಯಜಮಾನರು. ಆಗ ನನ್ನ ಹೆಂಡತಿ ಅಪ್ಪ ಮಗನಿಗೆ ಅದೇ ಧ್ಯಾನ ಡಾಕ್ಟರ ಪಿಜ್ಜಾ.. ಪಿಜ್ಜಾ.. ಮತ್ತೆ ಆ ಚಿಪ್ಸ್ ಎಂದಳು. ನೋಡ್ರಿ ಯಾವತ್ತು ತಳಪಾಯ ಘಟ್ಟಿ ಇರಬೇಕು ಎಂದರು. ನಾನು ಘಾಬರಿ ಇವರೇನು ಡಾಕ್ಟರ ಅಥವಾ ಆಕ್ಟರ್?. ಏನಿದು ಡಬಲ್ ಮೀನಿಂಗ್ ಎಂದು ಮನಸಿನಲ್ಲೇ (ಅಂದುಕೊಂಡೆ ಅವರಂದ ಮಾತಿಗೆ ಹಿಂದೆ ನೋಡದೆ). ಮತ್ತೆ ನಿಮ್ಮ ದಿನಚರಿ ಏನು? ಎಂದು ನನ್ನನ್ನು ಕೇಳಿದರು. ಆಗ ನಾನು ಬೆಳಿಗ್ಗೆ ೭ ಘಂಟೆ ಏಳುವದು ಮತ್ತೆ ಟೀ, ಸ್ನಾನ , ತಿಂಡಿ, ಆಫೀಸ್, ಊಟ, ಮನೆ ಮತ್ತೆ ತಿಂಡಿ ಮತ್ತು ಟೀ ಅನಂತರ ರಾತ್ರಿ ಊಟ ಎಂದೇ. ಡಾಕ್ಟರ ೫ ವರ್ಷದ ಹಿಂದಿನ ದಿನಚರಿ ನೆನಪು ಮಾಡಿ ಹೇಳಿ ಎಂದರು. ಆಗ ಸ್ವಲ್ಪ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಸಂದ್ಯಾವಂದನೆ, ಸ್ನಾನ ನಂತರ ತಿಂಡಿ ಟೀ..... ಅಷ್ಟಕ್ಕೇ ತಡೆದು ನೋಡಿ ನೀವು ಆಗ ಹೇಗೆ ಇದ್ದೀರಿ. ಈಗ ಏನಾಗಿದೆ? ಎಂದು ನೀವೇ ಊಹಿಸಿಕೊಳ್ಳಿ. ನಾವು ನಮ್ಮ ಸಂಸ್ಕೃತಿಯ ಕೆಲವು ವಿಷಯಗಳನ್ನು ಎಂದು ಮರೆಯಬಾರದು. ನಾನು ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ, ಸಂದ್ಯಾವಂದನೆ, ಪ್ರಾಣಾಯಾಮ ಇವುಗಳನ್ನು ತಪ್ಪದೆ ಮಾಡುತ್ತೇನೆ. ಅಲ್ಲದೆ ದಿನಾಲೂ ಒಂದು ತುಳಸಿದಳ ತಿನ್ನುತ್ತೇನೆ. ಹೀಗೆ ಹತ್ತು ಹಲವಾರು ವಿಷಯಗಳನ್ನೂ ತಿಳಿ ಹೇಳಿದರು. ನಿಮ್ಮ ಆಲಸ್ಯತನವನ್ನು ಬಿಟ್ಟು ಮೊದಲಿನ ಹಾಗೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ ಮತ್ತೆ ಹಾಳು-ಮುಳು ತಿನ್ನುವದು ಬಿಟ್ಟು ಬಿಡಿ ಎಂದು ಹೇಳಿದರು. ಮಡದಿ ಇವರು ಯಾವಾಗಲು ಹೀಗೆ ತಲೆ ಇಲ್ಲ.... ಹೊಟ್ಟೆ ಇಲ್ಲ... ಕಣ್ಣು ಯಾವುದಾದರು ಒಂದು ನೋಯುತ್ತಿರುತ್ತದೆ. ಇವರಿಗೆ ಏನಾದರು ಒಳ್ಳೆಯ ಔಷಧ ಕೊಡಿ ಎಂದಳು. ಆಗ ಡಾಕ್ಟರ ನಮಗೂ ಬದುಕಲು ಬಿಡಿ ಮೇಡಂ ಎಂದು ಗಹ ಗಹಿಸಿ ನಕ್ಕು, ನೋಡಿ "ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ". ಎಂದರು. ನೋಡಿ ಯಾರಿಗೆ ಏನೂ ಆಗುವದಿಲ್ಲವೋ ಅವ್ರಿಗೆ ಒಮ್ಮೆ ಲೇ ಏನಾದರು ಆಗುತ್ತೆ ಎಂದರು. ಈ ವಾಕ್ಯ ನನಗೆ ತುಂಬಾ ಹಿಡಿಸಿತು. ನಾವು ಮಣಿದಾಗ ಮಾತ್ರ ಮತ್ತೆ ಸರಿ ಮಾಡಬಹುದು, ಆದರೆ ಮುರಿದೆ ಹೋದರೆ ...?. ಒಂದೆರಡು ಮಾತ್ರೆ ಕೊಟ್ಟರು.ಡಾಕ್ಟರ ಫೀಸ್ ಎಂದಾಗ, 10 ರುಪಾಯಿ ಮಾತ್ರ ತೆಗೆದು ಕೊಂಡರು.
ಪುಣ್ಯಾತ್ಮ ಎಂದು ಮನಸಿನಲ್ಲೇ ಅಂದುಕೊಂಡು ಹೊರಗೆ ಬಂದೆವು. ಅವರ ಮಾತುಗಳು ನನಗೆ ತಲೆಯಲಿ ಗುನುಗುಡುತಿತ್ತು. ಅದೇ ಗುಂಗಿನಲ್ಲಿ ಮತ್ತೆ ರಿಸೆಪ್ಶನಿಷ್ಟ ನೆನಪೇ ಹಾರಿ ಹೋಗಿದ್ದಳು ಛೆ.. ಛೆ... ನೋಡೋಣ ನಾಳೆ ಮತ್ತೆ ಚಾನ್ಸ್ ಸಿಗುತ್ತಾ ಅಂತ. ಆದರೆ ದಿನಚರಿ ಬದಲಿಸಬೇಕು ಎಂಬ ನಿರ್ಧಾರ ?......
Sunday, February 14, 2010
ತರ್ಲೆ ಮಂಜನ ಸಮಯ ಪ್ರಜ್ಞೆ ....
ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ ಮದುವೆ ಫಿಕ್ಸ್ ಅಗುವದಿದೆ ಎಂದು ಹೇಳಿದ. ಮತ್ತೆ ಹುಡುಗಿಯ ಫೋಟೋ ತೋರಿಸಿದ. ನಮ್ಮ ಮೈಸೂರ್ ಟ್ರೈನ್ 7.00 ಘಂಟೆಗೆ ಇದ್ದಿದ್ದರಿಂದ ಚೆನ್ನಾಗಿದ್ದಾಳೆ ಎಂದು ಹೇಳಿ ಅವಸರ ಮಾಡಿ ಹೊರಡುತಲಿದ್ದರು. ನಮ್ಮನ್ನು ತಡೆದು ಮತ್ತೆ ಮತ್ತೆ "ಹೇಗಿದ್ದಾಳೆ ಹುಡುಗಿ" ಎಂದು ಸತಾಯಿಸಹತ್ತಿದ. ಆಗ ಮಂಜ ನೀನು ತಾನೆ ನೋಡಿದ್ದು, ಅವಳ ಗುಣ ಸ್ವಭಾವ ಮತ್ತೆ ಮನೆಯಲ್ಲಿ ಹೊಂದಿಕೊಂಡು ಹೋಗುವ ಹಾಗೆ ಇದ್ದರೆ ಸಾಕು ಎಂದು ಹೇಳಿದ. ಮತ್ತೆ ಈ ರೂಪ, ಸೌಂದರ್ಯ ಎಲ್ಲ ಗೌಣ ಎಂದು ತಿಳಿ ಹೇಳಿದ. ಅಷ್ಟಕ್ಕೇ ಸುಮ್ಮನಿದ್ದರೆ ಸಾಕಾಗಿತ್ತು ಸುಬ್ಬ ಅದನ್ನು ಹೇಗೆ ಕಂಡುಹಿಡಿಯುವದು ಹೇಳು ಎಂದು ಸತಾಯಿಸಹತ್ತಿದ. ನಾನು ಗಡಿಯಾರ ಓಡುವದನ್ನೇ ನೋಡುತ್ತಿದ್ದೆ. ಸುಬ್ಬ ಮಂಜನ ಪೂರ್ತಿ ಪಾಠ ಆಗುವವರೆಗೆ ಬಿಡುವನಲ್ಲ ಎಂದು ಮಂಜನಿಗೆ ನಾನೊಬ್ಬನೇ ಹೊರಡುತ್ತೇನೆ ಎಂದು ಹೇಳಿ ಹೊರಟು ನಿಂತೆ. ಮಂಜ ನಾನು ಬರುವೆ ಒಂದು ನಿಮಿಷ ತಡಿ ಎಂದು ಹೇಳಿದ. ಅರ್ಧ ಘಂಟೆಯಾದರು ಬರುವ ನಿಶಾನೆ ಕಾಣಲಿಲ್ಲ. ಅವಳ ಮನೆ ಸಮೀಪ ಹೋಗಿ ಅವಳ ಬಗ್ಗೆ ವಿಚಾರಿಸು ಎಂದು ಹೇಳಿದ. ಅವಳ ಹಿಂದೆ ಹೋಗಿ ಅವಳ ನಡೆ ನುಡಿಯ ಬಗ್ಗೆ ತಿಳಿದು ಕೊಂಡು ಬಾ ಎಂದು ತಾಕೀತ್ ಮಾಡಿದ. ಸುಬ್ಬನಿಗೆ ಎಲ್ಲಿಲ್ಲದ ಖುಷಿಯೋ ಖುಷಿ. ತನ್ನ ಹರಕು ಮುರುಕು ಇಂಗ್ಲಿಷ್ ನಿಂದ ಮತ್ತೆ ಯಾರಿಗೂ Expose ಮಾಡಬೇಡ ಎಂದು ಹೇಳಿದ.
ನಾನು ಬರುತ್ತೇನೆ ಎಂದು ಹೊರಟು ಗೇಟ್ ಬಳಿ ಬಂದೆ. ಅಷ್ಟರಲ್ಲೇ ಮಂಜ ನಗುತ್ತ ಹೊರಗಡೆ ಬಂದ. ಮತ್ತೆ ಮೇಲೆ ನಿಂತು ಸುಬ್ಬ ಯಾರಿಗೂ Expose ಮಾಡಬೇಡ ಎಂದ. ಮಂಜ ಮತ್ತೆ ನಾನು ಒಬ್ಬರನ್ನ ಒಬ್ಬರು ನೋಡಿ ನಕ್ಕು ಆಟೋ ಹಿಡಿದು ಸ್ಟೇಶನ್ ತಲಿಪಿದೆವು.
ಟ್ರೈನ್ ಹತ್ತಿ ಎರಡೆರಡು ಪ್ಲೇಟ್ ಇಡ್ಲಿ , ದೋಸೆ ಸ್ವಾಹಾ ಮಾಡಿ ಸೀಟ್ ಮೇಲೆ ಬಂದಾಗ ತಿಳಿದಿತ್ತು. ಅವಸರದಲ್ಲಿ ಟಿಕೆಟ್ ತರುವದೆ ಮರೆತುಬಿಟ್ಟಿತ್ತು. ಆಗ ಸುಬ್ಬನಿಗೆ ಹಿಡಿ ಶಾಪ ಹಾಕುತಿದ್ದಂತೆ TC ಹಾಜರ್ ಅದ. ನನಗೆ ತುಂಬಾ ಗಲಿಬಿಲಿ ಶುರು ಆಗಿತ್ತು. ಮನಸಿನೊಳಗೆ ಏನೋ ಗೊಂದಲ,ತಳಮಳ. ಆದರೆ ಮಂಜ ಮಾತ್ರ ಆರಾಮಾಗಿ ಇನ್ನೊಂದು ದೋಸೆ ತಿನ್ನುತ್ತ ಕುಳಿತಿದ್ದ. ಮಂಜ ನೀನು ಸುಮ್ಮನಿರು ನಾನು ಸಂಭಾಳಿಸುವೆ ಎಂದು ಹೇಳಿದ. ಅಷ್ಟರಲ್ಲೇ ನಮ್ಮ ಮಂಜ TC ಇರುವ ಕಡೆ ಹೋಗಿ, ನಮ್ಮ ಕಷ್ಟ ವಿವರಿಸಿದ. ಆದರೆ ಆ TC ತುಂಬಾ ಶಾನೆ ಕಿರಿಕ ಮಾಡಲು ಶುರು ಮಾಡಿದ. ಅದೆಲ್ಲ ಆಗೋಲ್ಲ ಮೊದಲು ಟಿಕೆಟ್ ತೋರಿಸಿ ಎಂದು ಹೇಳಿದ. ಎಲ್ಲರು ನಮ್ಮನ್ನೇ ಗುರಾಯಿಸುತ್ತಾ ಇದ್ದರು. ನನಗೆ ಏನೋ ಒಂದು ಅಪರಾಧಿ ಮನೋಭಾವ. ಕೈಯಲ್ಲಿ ದುಡ್ಡಿಲ್ಲ, ಬರಿ Credit ಇಟ್ಟುಕೊಂಡು ಬಂದಿದ್ದೆವು. ಫೈನ್ ಕಟ್ಟಲು ದುಡ್ಡು ಇರಲಿಲ್ಲ. ಇದ್ದಿರುವ 100 ರೂಪಾಯಿಗಳಲ್ಲಿ ಇಡ್ಲಿ ದೋಸೆ ತಿಂದು ಮುಗಿಸಿದ್ದೆವು. ಇನ್ನು ಉಳಿದಿದ್ದು ಚಿಲ್ಲರೆ ದುಡ್ಡು ಮಾತ್ರ ... ಮತ್ತೆ ತುಂಬಾ ಪಿಡಿಸತೊಡಗಿದ TC. ಇದರಿಂದ ಬೇಸತ್ತ ಮಂಜ, ಆಯಿತು ನಾವು ಮ್ಯಾಜಿಸ್ಟ್ರೇಟ್ ಬಳಿ ಹೋಗಲು ರೆಡಿ ಎಂದು ಹೇಳಿದ. ನನಗೆ ಒಳಗೊಳಗೇ ಭಯ. ನೀವೇನಾದರು ಮ್ಯಾಜಿಸ್ಟ್ರೇಟ್ ಬಳಿ ಕರೆದೊಯ್ದರೆ ನಿಮಗೆ ತೊಂದರೆ ಎಂದ ಮಂಜ. ಅದಕ್ಕೆ ಅದು ಹೇಗೆ ಎಂದು ಮಂಜನಿಗೆ ತರಾಟೆಗೆ ತೆಗೆದುಕೊಂಡ TC. ಅದಕ್ಕೆ ಮಂಜ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತೇನೆ ಎಂದ. ಅದನ್ನು ಹೇಳೋಕೆ ನೀನ್ಯಾರಯ್ಯ ಎಂದ. ನೋಡುತ್ತೀರಿ ನಿಮಗೆ ತೊಂದರೆ ಎಂದ. ಅದು ಹೇಗೆ? ಎಂದು ಕೇಳಿದಾಗ ನಾನು ಮ್ಯಾಜಿಸ್ಟ್ರೇಟ್ ಬಳಿ ಎರಡು ವರ್ಷದಿಂದ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದೇನೆ. ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವೆ ಎಂದಾಗ, TC ಮೈಯಲ್ಲ ಬೆವತಿತ್ತು . ಆಗ ಮತ್ತೆ ನಮ್ಮನ್ನು ಮುಂದೆ ಕರೆದು ಇದೊಂದು ಸರಿ ಸುಮ್ಮನೆ ಬಿಡುವೆ ಎಂದು ತಾಕೀತ್ ಮಾಡಿ ಹೊರಟು ಹೋದ.
ಈಗ ನಮ್ಮ ಮಂಜನಿಗೆ ಚಿಲ್ಲರೆ ದುಡ್ಡು ಮೇಲೂ ಕಣ್ಣು ಬಿತ್ತು. ಚಾ.. ಪಾ.. ಏನರ? ಕೊಡಿಸ್ತಿಯೇನು? ಎಂದ. ಆಗ ಒಬ್ಬ ಕಾಫಿ ತೆಗೆದುಕೊಂಡು ಬಂದ. ಮಂಜ ಅವನನ್ನು ನೋಡಿ ಇನ್ನೊಂದು ಭೋಗಿ ಒಳಗೆ ಇದ್ದರೂ, ಏ "ಕಪಿ" ಎಂದು ಒದರಿದ. ಬರುತ್ತೇನೆ ತಡಿರಿ ಎಂದು ಕಾಫಿ ಮಾರುವವನು ನಿಂತಲ್ಲೇ ಒದರಿದ. ಎಲ್ಲರು ಇವರಿಬ್ಬರನ್ನೇ ಗುರಯಿಸುತ್ತಿದ್ದರು. ನಾನು ಮಾತ್ರ ನಗುತ್ತಲಿದ್ದೆ. ಕಾಫಿ ಬಂತು ಕಾಫಿ ಹಿರಿ ಕುಳಿತಾಗಲೇ, "ಟೀಚಾ" "ಟೀಚಾ" ಎಂಬ ಶಬ್ದ ಬಂತು. ನೋಡಿದಾಗ ತಿಳಿಯಿತು ಟೀ ಮಾರುವವ ಎಂದು. ಮೊದಲು ಇವನನ್ನು ನೋಡಿದ್ದರೆ ಏ "ಹುಚ್ಚ" ಎಂದೇ ಒದರುತ್ತಿದ ಏಕೆಂದರೆ ಅವನು ಟೀ ಮತ್ತು ಚಾ ಸೇರಿಸಿ "ಟೀಚಾ" "ಟೀಚಾ" ಎಂದು ಒದರುತ್ತ ಟೀ ಮಾರುತ್ತಿದ್ದ.
ಅಷ್ಟರಲ್ಲೇ ರಾಮನಗರ ಸಮೀಪ ಬುರುತ್ತಿದ್ದಂತೆ ಒಬ್ಬ ವ್ಯಕ್ತಿ ಹೊಸ ಲ್ಯಾಪ್ಟಾಪ್ , ಪ್ರಿಂಟರ್ ತೆಗೆದು ಕೊಂಡು ಬರುತ್ತಿದ್ದ. ಅವನ ಬಳಿ ತುಂಬಾ ಕೇಳಿಕೊಂಡು ಲ್ಯಾಪ್ಟಾಪ್ ನಲ್ಲಿ ನೆಟ್ ನಲ್ಲಿ ಟಿಕೆಟ್ ಪ್ರಿಂಟ್ ತೆಗೆದು TC ಗೆ ತೋರಿಸಿಬೇಕೆಂದು ಕಾಯುತ್ತ ಕುಳಿತ್ತಿದ್ದೆವು. TC ನಮ್ಮನ್ನು ನೋಡಿ ಹೆದರಿ ನಾವಿರುವ ಭೋಗಿ ಮತ್ತೆ ಹಾಯಲೇ ಇಲ್ಲ. ಮಂಜ ಸ್ಟೇಷನ್ ಬಳಿ ಟಿಕೆಟ್ ಹಿಡಿದು TC ಬಳಿ ಹೋದ TC ಮಾತ್ರ ಮುಂದೆ ಮುಂದೆ ಓಡುತ್ತಲೇ ಇದ್ದರು. ಇದನ್ನು ನೋಡಿ ನಮ್ಮಿಬ್ಬರಿಗೂ ನಗು ತಡಿಯಲು ಆಗಲೇ ಇಲ್ಲ .
ನಾನು ಬರುತ್ತೇನೆ ಎಂದು ಹೊರಟು ಗೇಟ್ ಬಳಿ ಬಂದೆ. ಅಷ್ಟರಲ್ಲೇ ಮಂಜ ನಗುತ್ತ ಹೊರಗಡೆ ಬಂದ. ಮತ್ತೆ ಮೇಲೆ ನಿಂತು ಸುಬ್ಬ ಯಾರಿಗೂ Expose ಮಾಡಬೇಡ ಎಂದ. ಮಂಜ ಮತ್ತೆ ನಾನು ಒಬ್ಬರನ್ನ ಒಬ್ಬರು ನೋಡಿ ನಕ್ಕು ಆಟೋ ಹಿಡಿದು ಸ್ಟೇಶನ್ ತಲಿಪಿದೆವು.
ಟ್ರೈನ್ ಹತ್ತಿ ಎರಡೆರಡು ಪ್ಲೇಟ್ ಇಡ್ಲಿ , ದೋಸೆ ಸ್ವಾಹಾ ಮಾಡಿ ಸೀಟ್ ಮೇಲೆ ಬಂದಾಗ ತಿಳಿದಿತ್ತು. ಅವಸರದಲ್ಲಿ ಟಿಕೆಟ್ ತರುವದೆ ಮರೆತುಬಿಟ್ಟಿತ್ತು. ಆಗ ಸುಬ್ಬನಿಗೆ ಹಿಡಿ ಶಾಪ ಹಾಕುತಿದ್ದಂತೆ TC ಹಾಜರ್ ಅದ. ನನಗೆ ತುಂಬಾ ಗಲಿಬಿಲಿ ಶುರು ಆಗಿತ್ತು. ಮನಸಿನೊಳಗೆ ಏನೋ ಗೊಂದಲ,ತಳಮಳ. ಆದರೆ ಮಂಜ ಮಾತ್ರ ಆರಾಮಾಗಿ ಇನ್ನೊಂದು ದೋಸೆ ತಿನ್ನುತ್ತ ಕುಳಿತಿದ್ದ. ಮಂಜ ನೀನು ಸುಮ್ಮನಿರು ನಾನು ಸಂಭಾಳಿಸುವೆ ಎಂದು ಹೇಳಿದ. ಅಷ್ಟರಲ್ಲೇ ನಮ್ಮ ಮಂಜ TC ಇರುವ ಕಡೆ ಹೋಗಿ, ನಮ್ಮ ಕಷ್ಟ ವಿವರಿಸಿದ. ಆದರೆ ಆ TC ತುಂಬಾ ಶಾನೆ ಕಿರಿಕ ಮಾಡಲು ಶುರು ಮಾಡಿದ. ಅದೆಲ್ಲ ಆಗೋಲ್ಲ ಮೊದಲು ಟಿಕೆಟ್ ತೋರಿಸಿ ಎಂದು ಹೇಳಿದ. ಎಲ್ಲರು ನಮ್ಮನ್ನೇ ಗುರಾಯಿಸುತ್ತಾ ಇದ್ದರು. ನನಗೆ ಏನೋ ಒಂದು ಅಪರಾಧಿ ಮನೋಭಾವ. ಕೈಯಲ್ಲಿ ದುಡ್ಡಿಲ್ಲ, ಬರಿ Credit ಇಟ್ಟುಕೊಂಡು ಬಂದಿದ್ದೆವು. ಫೈನ್ ಕಟ್ಟಲು ದುಡ್ಡು ಇರಲಿಲ್ಲ. ಇದ್ದಿರುವ 100 ರೂಪಾಯಿಗಳಲ್ಲಿ ಇಡ್ಲಿ ದೋಸೆ ತಿಂದು ಮುಗಿಸಿದ್ದೆವು. ಇನ್ನು ಉಳಿದಿದ್ದು ಚಿಲ್ಲರೆ ದುಡ್ಡು ಮಾತ್ರ ... ಮತ್ತೆ ತುಂಬಾ ಪಿಡಿಸತೊಡಗಿದ TC. ಇದರಿಂದ ಬೇಸತ್ತ ಮಂಜ, ಆಯಿತು ನಾವು ಮ್ಯಾಜಿಸ್ಟ್ರೇಟ್ ಬಳಿ ಹೋಗಲು ರೆಡಿ ಎಂದು ಹೇಳಿದ. ನನಗೆ ಒಳಗೊಳಗೇ ಭಯ. ನೀವೇನಾದರು ಮ್ಯಾಜಿಸ್ಟ್ರೇಟ್ ಬಳಿ ಕರೆದೊಯ್ದರೆ ನಿಮಗೆ ತೊಂದರೆ ಎಂದ ಮಂಜ. ಅದಕ್ಕೆ ಅದು ಹೇಗೆ ಎಂದು ಮಂಜನಿಗೆ ತರಾಟೆಗೆ ತೆಗೆದುಕೊಂಡ TC. ಅದಕ್ಕೆ ಮಂಜ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತೇನೆ ಎಂದ. ಅದನ್ನು ಹೇಳೋಕೆ ನೀನ್ಯಾರಯ್ಯ ಎಂದ. ನೋಡುತ್ತೀರಿ ನಿಮಗೆ ತೊಂದರೆ ಎಂದ. ಅದು ಹೇಗೆ? ಎಂದು ಕೇಳಿದಾಗ ನಾನು ಮ್ಯಾಜಿಸ್ಟ್ರೇಟ್ ಬಳಿ ಎರಡು ವರ್ಷದಿಂದ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದೇನೆ. ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವೆ ಎಂದಾಗ, TC ಮೈಯಲ್ಲ ಬೆವತಿತ್ತು . ಆಗ ಮತ್ತೆ ನಮ್ಮನ್ನು ಮುಂದೆ ಕರೆದು ಇದೊಂದು ಸರಿ ಸುಮ್ಮನೆ ಬಿಡುವೆ ಎಂದು ತಾಕೀತ್ ಮಾಡಿ ಹೊರಟು ಹೋದ.
ಈಗ ನಮ್ಮ ಮಂಜನಿಗೆ ಚಿಲ್ಲರೆ ದುಡ್ಡು ಮೇಲೂ ಕಣ್ಣು ಬಿತ್ತು. ಚಾ.. ಪಾ.. ಏನರ? ಕೊಡಿಸ್ತಿಯೇನು? ಎಂದ. ಆಗ ಒಬ್ಬ ಕಾಫಿ ತೆಗೆದುಕೊಂಡು ಬಂದ. ಮಂಜ ಅವನನ್ನು ನೋಡಿ ಇನ್ನೊಂದು ಭೋಗಿ ಒಳಗೆ ಇದ್ದರೂ, ಏ "ಕಪಿ" ಎಂದು ಒದರಿದ. ಬರುತ್ತೇನೆ ತಡಿರಿ ಎಂದು ಕಾಫಿ ಮಾರುವವನು ನಿಂತಲ್ಲೇ ಒದರಿದ. ಎಲ್ಲರು ಇವರಿಬ್ಬರನ್ನೇ ಗುರಯಿಸುತ್ತಿದ್ದರು. ನಾನು ಮಾತ್ರ ನಗುತ್ತಲಿದ್ದೆ. ಕಾಫಿ ಬಂತು ಕಾಫಿ ಹಿರಿ ಕುಳಿತಾಗಲೇ, "ಟೀಚಾ" "ಟೀಚಾ" ಎಂಬ ಶಬ್ದ ಬಂತು. ನೋಡಿದಾಗ ತಿಳಿಯಿತು ಟೀ ಮಾರುವವ ಎಂದು. ಮೊದಲು ಇವನನ್ನು ನೋಡಿದ್ದರೆ ಏ "ಹುಚ್ಚ" ಎಂದೇ ಒದರುತ್ತಿದ ಏಕೆಂದರೆ ಅವನು ಟೀ ಮತ್ತು ಚಾ ಸೇರಿಸಿ "ಟೀಚಾ" "ಟೀಚಾ" ಎಂದು ಒದರುತ್ತ ಟೀ ಮಾರುತ್ತಿದ್ದ.
ಅಷ್ಟರಲ್ಲೇ ರಾಮನಗರ ಸಮೀಪ ಬುರುತ್ತಿದ್ದಂತೆ ಒಬ್ಬ ವ್ಯಕ್ತಿ ಹೊಸ ಲ್ಯಾಪ್ಟಾಪ್ , ಪ್ರಿಂಟರ್ ತೆಗೆದು ಕೊಂಡು ಬರುತ್ತಿದ್ದ. ಅವನ ಬಳಿ ತುಂಬಾ ಕೇಳಿಕೊಂಡು ಲ್ಯಾಪ್ಟಾಪ್ ನಲ್ಲಿ ನೆಟ್ ನಲ್ಲಿ ಟಿಕೆಟ್ ಪ್ರಿಂಟ್ ತೆಗೆದು TC ಗೆ ತೋರಿಸಿಬೇಕೆಂದು ಕಾಯುತ್ತ ಕುಳಿತ್ತಿದ್ದೆವು. TC ನಮ್ಮನ್ನು ನೋಡಿ ಹೆದರಿ ನಾವಿರುವ ಭೋಗಿ ಮತ್ತೆ ಹಾಯಲೇ ಇಲ್ಲ. ಮಂಜ ಸ್ಟೇಷನ್ ಬಳಿ ಟಿಕೆಟ್ ಹಿಡಿದು TC ಬಳಿ ಹೋದ TC ಮಾತ್ರ ಮುಂದೆ ಮುಂದೆ ಓಡುತ್ತಲೇ ಇದ್ದರು. ಇದನ್ನು ನೋಡಿ ನಮ್ಮಿಬ್ಬರಿಗೂ ನಗು ತಡಿಯಲು ಆಗಲೇ ಇಲ್ಲ .
Tuesday, January 12, 2010
ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ..
ನೀ ಸುಮ ಬಾಲೆಯೇ .. ಕುಸುಮ ಬಾಲೆಯೇ ಅಥವಾ ಬೆಳದಿಂಗಳ ಬಾಲೆಯೇ .. ಎಂದೆಲ್ಲಾ ಹೊಗಳುತ್ತಿದ್ದ ಅವಳನ್ನ ರವಿ. ಆ ಅವಳು ಯಾರು? ಎಂಬುದು ಮಾತ್ರ ಒಂದು ದೊಡ್ಡ ಯಕ್ಷ ಪ್ರಶ್ನೆ ಆಗಿತ್ತು. ಏನೇನೋ ಮನಸಿನಲ್ಲಿ ಅಂದು ಕೊಳ್ಳುವದು, ಕೈ ಸನ್ನೆ ಇವೆಲ್ಲವೂ ನೋಡಿದರೆ ಇವನನ್ನು ನಿಜವಾಗಿಯೂ ಒಬ್ಬ ಹುಚ್ಚ ಎಂದು ಯಾರುಬೇಕಾದರು ಹಣೆ ಪಟ್ಟಿ ಅಂಟಿಸಿ ಬಿಡುತ್ತಿದ್ದರು.ಹೆಸರು ಮಾತ್ರ ರವಿ ಆದರೆ ನಿಜವಾಗಿಯೂ ಕಪಿಯ ಪರಾವತಾರವೇ ಆಗಿದ್ದ. ಮೇಘ ಸಂದೇಶ ಅವನಿಗೆ ತುಂಬಾ ಮನಸಿಗೆ ಹಿಡಿಸಿದ ಒಂದು ಕೃತಿ.... ಕ್ಷಮಿಸಿ ಮೇಘನಾ ಅಂತ ಸಂದೇಹ. ಅದನ್ನು ನಮ್ಮೆಲ್ಲರಿಗೂ ವಿವರಣೆ ನೀಡುವಾಗ ಪ್ರತಿಯೊಂದು ಜೀವಿಗೂ ಒಂದೊಂದು ಕನೆಕ್ಷನ್ ಇದೆ ಎಂತಲೂ. ಮತ್ತೆ ನಾವು ಗುನುಗಿಸುತ್ತಿರುವ ಒಂದು ಹಾಡು ಕೂಡ ಬೇರೆಲ್ಲಾದರೂ ತರಂಗಗಳ ಮೂಲಕ ನಮಗೆ ಪ್ರಚೋದಿಸಿ ಅದನ್ನು ಹಾಡುವಂತೆ ಮಾಡುತ್ತವೆ ಎಂದು ಹೇಳುತ್ತಿದ್ದ. ಅವನ ಯಾವ ಮಾತು ನಮಗೆ ಅರ್ಥವಾಗುತ್ತಿರಲಿಲ್ಲ. ಹತ್ತಿರದಿಂದ ಅವನನ್ನು ನೋಡಿದ ಎಲ್ಲರೂ ಅವನ ಅಪ್ಪ ಅಮ್ಮನಿಗೂ ಅರ್ಥವಾಗದ ಒಂದು ಜೀವ ಅದು. ನಮ್ಮ ಮಾಸ್ಟರ್ ಕೂಡ ಅವನಿಗೆ ಎಷ್ಟು ಬೈದರು ಎಂದಿಗೂ ಅದನ್ನು ಕ್ಷುಲ್ಲಕವಾಗಿಯ ಪರಿಗಣಿಸುತ್ತಿದ್ದ. ಅವನ ನಿಜವಾದ ಹಂಬಲಿಕೆ ಏನು?.[ಆದರೆ ನನಗೆ ಗೋತಿತ್ತು :) ಮೇಘನಾ] ಎಂದು ನಾವೆಲ್ಲ ಗೆಳೆಯರು ಕೇಳಿದರು ಹೇಳಲಿಲ್ಲ. ಮಂಜ ಇವನ ಹಾಡನ್ನು ಒಂದು ದಿವಸ ಕೇಳಿದ್ದರಿಂದ "ಲೇ ಅವಳು ಕುಸುಮ ಇರಬೇಕು ಎಂದು". ನಮಗೆ ಹೇಳಿದ. ಲೇ ಆ ಕುಳ್ಳಿ ಕುಸುಮ ಎಂದು ಮಂಜನ ಮೇಲೆ ತುಂಬಾ ಕೆಂಡಾಮಂಡಾಲಾಗಿದ್ದ ರವಿ. ಕಡೆಗೆ ಶಾಲೆ ಬಿಟ್ಟು ಬೇರೆಡೆ ಸೇರಿಕೊಂಡಬಿಟ್ಟ ರವಿ.
ಮೊನ್ನೆ ಗಾಂಧಿ ಬಜಾರ್ ನಲ್ಲಿ ಭೇಟಿಯಾದ ಹಳೆಯ ಎಲ್ಲ ವಿಚಾರಗಳನ್ನು ಮತ್ತೆ ಸ್ಮರಿಸಿಕೊಂಡೆವು. ಮತ್ತೆ ಕಾಫೀ ಕುಡಿದು ಮನೆ ಸೇರಿಕೊಂಡೆವು. ಅನಂತರ ನಮ್ಮ ನಮ್ಮ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತಿಳಿದುಕೊಂಡೆವು. ಮೊದಲಿನ ಹಾಗೆ ಇವ ಇಲ್ಲ ಎಂದು ಅಂದು ಕೊಂಡು, ಇದನ್ನು ಮಂಜನಿಗೆ ಹೇಳಿದೆ. ಆಗ ಮಂಜ ಲೇ "ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ" ಎಂದು ನನಗೆ ಹೇಳಿದ. ಆದರೂ ಅವನು ಸುಧಾರಿಸಿದ್ದಾನೆ ಎಂದು ಹೇಳಿದೆ. ಮಂಜನಿಗೆ ಆಯಿತು ನೋಡೋಣ ಎಂದು ಅವನ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತೆಗೆದುಕೊಂಡ.
ನಾನು ಒಂದು ಹಾಸ್ಯ ಪ್ರಸಂಗದ ಬಗ್ಗೆ ಲೇಖನ ಬರೆದು, ಅದನ್ನು ನನ್ನೆಲ್ಲ ಮಿತ್ರ ಬಾಂಧವರಿಗೆ ಕಳುಹಿಸಿದ್ದೆ. ಎಲ್ಲರು ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಆದರೆ ರವಿ ಯಾರು ಬರೆದಿದ್ದು ಇದು. ಮಂಜನಾ ಎಂದು ಕೇಳಿದ . ಏಕೆಂದರೆ ಎಲ್ಲರಿಗೂ ಪ್ರೀತಿಯ ಮತ್ತು ಪ್ರಣಯ ಸಂದೇಶ ರವಾನಿಸುವದಕ್ಕೆ ಪ್ರೇಮ ಪತ್ರ ಬರೆಯುವ ಏಕೈಕ ವ್ಯಕ್ತಿ ನಮ್ಮ ಮಂಜ ಒಬ್ಬನೇ. ಇದೇನು ಏನು ಅರ್ಥನೆ ಆಗಲಿಲ್ಲ, ಇದರಲ್ಲಿ ಹೇಳಿಕೊಳ್ಳುವಂತಹ ಏನು ವಿಶೇಷತೆ ಇಲ್ಲ ಎಂದ. ನನಗೆ ಬರೆಯುವ ಹಂಬಲ ಏನೋ ಇದೆ, ಆದರೆ ಓದುವವರು ನನಗೆ ಹೀಗೆ ಹೀಯಾಳಿಸಿದರೆ ಹೇಗೆ ಎಂದು ಯೋಚನೆ ಮಾಡಿ. ನಾನೇ ಬರೆದಿದ್ದು ಎಂದು ಧೈರ್ಯ ಮಾಡಿ ಹೇಳದೇ ಸುಮ್ಮನಾದೆ. ನಾನು ಆಗಿನಿಂದ ಏನು ಬರೆಯ ಬಾರದೆಂದು ನಿರ್ಧಾರಕ್ಕೆ ಬಂದು. ತುಂಬಾ ದಿನಗಳ ಕಾಲ ಏನು ಬರೆಯದೆ ಇದ್ದು ಬಿಟ್ಟೆ. ಒಂದು ದಿನ ಅದೇ ಗೆಳೆಯ ಮತ್ತೆ ನನಗೆ ಫೋನ್ ಮಾಡಿ " ಲೇ ಮತ್ತೆ ಏನು ಬರೆದಿಲ್ಲವಾ? ಎಂದು ಕೇಳಿದ". ನನಗೆ ಆಶ್ಚರ್ಯ, ಹೃದಯಾಘಾತ ಅಗುವದೊಂದೇ ಬಾಕಿ. ಏನಪ್ಪಾ, ನಿನ್ನ ಅರೋಗ್ಯ ಸರಿಯಾಗಿದೆಯಾ? ಎಂದು ನಾನು ವಿಚಾರಿಸಿದೆ. ಆಗ ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ. ನಿನ್ನ ಲೇಖನ ನಿಜವಾಗಿಯೂ ಚೆನ್ನಾಗೆ ಇತ್ತು. ಹಾಗೆ ತಮಾಷೆ ಮಾಡಿದ್ದೆ ನಿನಗೆ ಎಂದ. ನನಗೆ ಬರಬಾರದ ಕೋಪ ಬಂದಿತ್ತು. ತನ್ನ ಮನೆಗೆ ನನ್ನನ್ನು ಕಾಫಿಗೆ ಆಹ್ವಾನಿಸಿದ. ನಿನಗೆ ಯಾರು ಹೇಳಿದ್ದು ನಾನು ಬರೆದಿದ್ದೆ ಎಂದು ಕೇಳಿದಾಗ ಮಂಜ ಎಂದು ತಿಳಿಯಿತು.
ಮತ್ತೆ ಮನೆಗೆ ಹೋದ ಮೇಲೆ ತುಂಬಾ ಚೆನ್ನಾಗಿ ನನ್ನನ್ನು ಉಪ್ಪಿಟ್ಟು ಕಾಫಿಯಿಂದ ಉಪಚರಿಸಿದ. ಅನಂತರ ನನಗೆ ಒಂದು ಮುದ್ದು ಮುದ್ದಾದ ಚಿಕ್ಕ ಮಗುವನ್ನು ಕರೆದು ತೋರಿಸಿ ಇವಳು ನನ್ನ ಮಗಳು ಸಹನಾ ಇವಳ ಸ್ಕೂಲ್ ನಲ್ಲಿ ಪ್ರಬಂದ ಸ್ಪರ್ಧೆ ಇದೆ. ಇವಳಿಗೆ ಒಂದು ಪ್ರಬಂದ ಬೆರೆದು ಕೊಡು ಎಂದು ಅಲವತ್ತುಕೊಂಡ. ಈಗ ಅವನ ನಿಜವಾದ ವಿಚಾರ ಏನೆಂದು ನನಗೆ ತಿಳಿಯ ಹತ್ತಿತು. ನನಗೆ ಆ ಮುದ್ದಾದ ಮಗುವನ್ನು ನೋಡಿ ಬರೆಯುವದಿಲ್ಲ ಎಂದು ಹೇಳುವ ಮನಸಾಗಲಿಲ್ಲ ಮತ್ತು ಆಗಲೇ ಉಪ್ಪಿಟ್ಟು ಕಾಫಿ ಹೊಟ್ಟೆ ಸೇರಿದ್ದರಿಂದ ಏನು ಹೇಳುವ ಸ್ತಿತಿಯಲ್ಲಿರಲ್ಲ. ಮೊದಲೇ ಇದನ್ನು ಹೇಳಿದ್ದರೆ ಉಪ್ಪಿಟ್ಟು ಕಾಫಿ ಶತಯುಗತಾಯ ಮುಟ್ಟುತ್ತಿರಲಿಲ್ಲ. ಈಗ ಏನು ಮಾಡಲಾರದೆ ಪ್ರಬಂದ ಬರೆದು ಕೊಟ್ಟು ಮನೆಗೆ ಬಂದೆ.
ಆದರೂ ತನ್ನ ಆ ಮೊದಲಿನ ಬುದ್ಧಿ ಮಾತ್ರ ರವಿ ಬಿಟ್ಟಿರಲಿಲ್ಲಾ. ಸುತಾರಾಂ ತನ್ನ ಹೆಂಡತಿಯನ್ನು ತೋರಿಸಲಿಲ್ಲ ಮತ್ತು ಅವಳ ಬಗ್ಗೆ ಒಂದು ಮಾತನಾಡಲಿಲ್ಲ. ಅವಳು ಮಾತ್ರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಪಾತ್ರೆಗಳ ಶಬ್ದ ಮಾಡುತ್ತಿದ್ದರಿಂದ ಮನೆಯಲ್ಲಿಯೇ ಇದ್ದಾಳೆ ಎಂಬ ವಿಷಯ ಮಾತ್ರ ತಿಳಿಯಿತು. ಅವನ ಮಖಿನ ಬುದ್ಧಿ ಗೊತ್ತಿದ್ದರಿಂದ ಮುಂದೆಂದೂ ಅವನ ಮನೆ ದಿಕ್ಕಿಗೂ ಮುಖ ಮಾಡಿ ಮಲಗೂವದು ಬೇಡ ಎಂದು ತೀರ್ಮಾನಿಸಿ ಮನೆಗೆ ಬಂದುಬಿಟ್ಟೆ.
ಮೊನ್ನೆ ಗಾಂಧಿ ಬಜಾರ್ ನಲ್ಲಿ ಭೇಟಿಯಾದ ಹಳೆಯ ಎಲ್ಲ ವಿಚಾರಗಳನ್ನು ಮತ್ತೆ ಸ್ಮರಿಸಿಕೊಂಡೆವು. ಮತ್ತೆ ಕಾಫೀ ಕುಡಿದು ಮನೆ ಸೇರಿಕೊಂಡೆವು. ಅನಂತರ ನಮ್ಮ ನಮ್ಮ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತಿಳಿದುಕೊಂಡೆವು. ಮೊದಲಿನ ಹಾಗೆ ಇವ ಇಲ್ಲ ಎಂದು ಅಂದು ಕೊಂಡು, ಇದನ್ನು ಮಂಜನಿಗೆ ಹೇಳಿದೆ. ಆಗ ಮಂಜ ಲೇ "ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ" ಎಂದು ನನಗೆ ಹೇಳಿದ. ಆದರೂ ಅವನು ಸುಧಾರಿಸಿದ್ದಾನೆ ಎಂದು ಹೇಳಿದೆ. ಮಂಜನಿಗೆ ಆಯಿತು ನೋಡೋಣ ಎಂದು ಅವನ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತೆಗೆದುಕೊಂಡ.
ನಾನು ಒಂದು ಹಾಸ್ಯ ಪ್ರಸಂಗದ ಬಗ್ಗೆ ಲೇಖನ ಬರೆದು, ಅದನ್ನು ನನ್ನೆಲ್ಲ ಮಿತ್ರ ಬಾಂಧವರಿಗೆ ಕಳುಹಿಸಿದ್ದೆ. ಎಲ್ಲರು ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಆದರೆ ರವಿ ಯಾರು ಬರೆದಿದ್ದು ಇದು. ಮಂಜನಾ ಎಂದು ಕೇಳಿದ . ಏಕೆಂದರೆ ಎಲ್ಲರಿಗೂ ಪ್ರೀತಿಯ ಮತ್ತು ಪ್ರಣಯ ಸಂದೇಶ ರವಾನಿಸುವದಕ್ಕೆ ಪ್ರೇಮ ಪತ್ರ ಬರೆಯುವ ಏಕೈಕ ವ್ಯಕ್ತಿ ನಮ್ಮ ಮಂಜ ಒಬ್ಬನೇ. ಇದೇನು ಏನು ಅರ್ಥನೆ ಆಗಲಿಲ್ಲ, ಇದರಲ್ಲಿ ಹೇಳಿಕೊಳ್ಳುವಂತಹ ಏನು ವಿಶೇಷತೆ ಇಲ್ಲ ಎಂದ. ನನಗೆ ಬರೆಯುವ ಹಂಬಲ ಏನೋ ಇದೆ, ಆದರೆ ಓದುವವರು ನನಗೆ ಹೀಗೆ ಹೀಯಾಳಿಸಿದರೆ ಹೇಗೆ ಎಂದು ಯೋಚನೆ ಮಾಡಿ. ನಾನೇ ಬರೆದಿದ್ದು ಎಂದು ಧೈರ್ಯ ಮಾಡಿ ಹೇಳದೇ ಸುಮ್ಮನಾದೆ. ನಾನು ಆಗಿನಿಂದ ಏನು ಬರೆಯ ಬಾರದೆಂದು ನಿರ್ಧಾರಕ್ಕೆ ಬಂದು. ತುಂಬಾ ದಿನಗಳ ಕಾಲ ಏನು ಬರೆಯದೆ ಇದ್ದು ಬಿಟ್ಟೆ. ಒಂದು ದಿನ ಅದೇ ಗೆಳೆಯ ಮತ್ತೆ ನನಗೆ ಫೋನ್ ಮಾಡಿ " ಲೇ ಮತ್ತೆ ಏನು ಬರೆದಿಲ್ಲವಾ? ಎಂದು ಕೇಳಿದ". ನನಗೆ ಆಶ್ಚರ್ಯ, ಹೃದಯಾಘಾತ ಅಗುವದೊಂದೇ ಬಾಕಿ. ಏನಪ್ಪಾ, ನಿನ್ನ ಅರೋಗ್ಯ ಸರಿಯಾಗಿದೆಯಾ? ಎಂದು ನಾನು ವಿಚಾರಿಸಿದೆ. ಆಗ ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ. ನಿನ್ನ ಲೇಖನ ನಿಜವಾಗಿಯೂ ಚೆನ್ನಾಗೆ ಇತ್ತು. ಹಾಗೆ ತಮಾಷೆ ಮಾಡಿದ್ದೆ ನಿನಗೆ ಎಂದ. ನನಗೆ ಬರಬಾರದ ಕೋಪ ಬಂದಿತ್ತು. ತನ್ನ ಮನೆಗೆ ನನ್ನನ್ನು ಕಾಫಿಗೆ ಆಹ್ವಾನಿಸಿದ. ನಿನಗೆ ಯಾರು ಹೇಳಿದ್ದು ನಾನು ಬರೆದಿದ್ದೆ ಎಂದು ಕೇಳಿದಾಗ ಮಂಜ ಎಂದು ತಿಳಿಯಿತು.
ಮತ್ತೆ ಮನೆಗೆ ಹೋದ ಮೇಲೆ ತುಂಬಾ ಚೆನ್ನಾಗಿ ನನ್ನನ್ನು ಉಪ್ಪಿಟ್ಟು ಕಾಫಿಯಿಂದ ಉಪಚರಿಸಿದ. ಅನಂತರ ನನಗೆ ಒಂದು ಮುದ್ದು ಮುದ್ದಾದ ಚಿಕ್ಕ ಮಗುವನ್ನು ಕರೆದು ತೋರಿಸಿ ಇವಳು ನನ್ನ ಮಗಳು ಸಹನಾ ಇವಳ ಸ್ಕೂಲ್ ನಲ್ಲಿ ಪ್ರಬಂದ ಸ್ಪರ್ಧೆ ಇದೆ. ಇವಳಿಗೆ ಒಂದು ಪ್ರಬಂದ ಬೆರೆದು ಕೊಡು ಎಂದು ಅಲವತ್ತುಕೊಂಡ. ಈಗ ಅವನ ನಿಜವಾದ ವಿಚಾರ ಏನೆಂದು ನನಗೆ ತಿಳಿಯ ಹತ್ತಿತು. ನನಗೆ ಆ ಮುದ್ದಾದ ಮಗುವನ್ನು ನೋಡಿ ಬರೆಯುವದಿಲ್ಲ ಎಂದು ಹೇಳುವ ಮನಸಾಗಲಿಲ್ಲ ಮತ್ತು ಆಗಲೇ ಉಪ್ಪಿಟ್ಟು ಕಾಫಿ ಹೊಟ್ಟೆ ಸೇರಿದ್ದರಿಂದ ಏನು ಹೇಳುವ ಸ್ತಿತಿಯಲ್ಲಿರಲ್ಲ. ಮೊದಲೇ ಇದನ್ನು ಹೇಳಿದ್ದರೆ ಉಪ್ಪಿಟ್ಟು ಕಾಫಿ ಶತಯುಗತಾಯ ಮುಟ್ಟುತ್ತಿರಲಿಲ್ಲ. ಈಗ ಏನು ಮಾಡಲಾರದೆ ಪ್ರಬಂದ ಬರೆದು ಕೊಟ್ಟು ಮನೆಗೆ ಬಂದೆ.
ಆದರೂ ತನ್ನ ಆ ಮೊದಲಿನ ಬುದ್ಧಿ ಮಾತ್ರ ರವಿ ಬಿಟ್ಟಿರಲಿಲ್ಲಾ. ಸುತಾರಾಂ ತನ್ನ ಹೆಂಡತಿಯನ್ನು ತೋರಿಸಲಿಲ್ಲ ಮತ್ತು ಅವಳ ಬಗ್ಗೆ ಒಂದು ಮಾತನಾಡಲಿಲ್ಲ. ಅವಳು ಮಾತ್ರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಪಾತ್ರೆಗಳ ಶಬ್ದ ಮಾಡುತ್ತಿದ್ದರಿಂದ ಮನೆಯಲ್ಲಿಯೇ ಇದ್ದಾಳೆ ಎಂಬ ವಿಷಯ ಮಾತ್ರ ತಿಳಿಯಿತು. ಅವನ ಮಖಿನ ಬುದ್ಧಿ ಗೊತ್ತಿದ್ದರಿಂದ ಮುಂದೆಂದೂ ಅವನ ಮನೆ ದಿಕ್ಕಿಗೂ ಮುಖ ಮಾಡಿ ಮಲಗೂವದು ಬೇಡ ಎಂದು ತೀರ್ಮಾನಿಸಿ ಮನೆಗೆ ಬಂದುಬಿಟ್ಟೆ.
Friday, December 18, 2009
ಮುಡಿ ಕೊಡುತ್ತಾರಾ....
ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ, ಚಹಾ, ಕಾಫಿ ಮತ್ತು ಆಟಕ್ಕೆ ಕ್ಷಮಿಸಿ.... ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ. ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ, ಅಪ್ಪಿ ತಪ್ಪಿ ಬಂದರು ಇವರ ಧಡೂತಿ ಹೊಟ್ಟೆ ಇವರನ್ನು ಆಡಲು ಬಿಡುವದಿಲ್ಲ . ಇವರೆನಿದ್ದರು ತಿನ್ನಲು ಕುಡಿಯಲು ಯೋಗ್ಯ ಎಂದು.
140 ಜನ ಕೆಲಸ ಮಾಡುವ ಕಂಪನಿಯಲ್ಲಿ ಸುಮಾರು 20 ಜನ ಮಾತ್ರ ಕನ್ನಡಿಗರು. ಹೋಟೆಲ್ ಹೋಗುವ ಸಮಯದಲ್ಲಿ ನಟರಾಜ್ ಮಾತು ಶುರು ಹಚ್ಚಿ ಕೊಂಡರು. ನಾನು ದಿನ ಮುಂಜಾನೆ ಸುಪ್ರಭಾತ ಕೇಳುತ್ತೇನೋ ಇಲ್ಲವೋ, ಆದರೆ ದಿನ ಮುಂಜಾನೆ "ನಲ್ಲ ಇರಕ", "ಸಾಪಟಿಯ" ಎಂಬ ಶಬ್ದಗಳು ಘಂಟಾಘೋಷವಾಗಿ ನನ್ನ ಕಿವಿಗೆ ಬಂದು ಒರಗುತ್ತವೆ. ಅದ್ಯಾವ ಜನ್ಮದ ಪಾಪದ ಫಲವೋ ನಾ ಕಾಣೆ. ನಾನು ಕೆಲವೊಂದು ಸಾರಿ ಬೆಂಗಳೂರಿನಲ್ಲೇ ಇದ್ದೆನಾ?. ಎಂಬ ಸಂದೇಹ ಬಂದಿದ್ದು ಉಂಟು. ನನ್ನ ಲೀಡರ್ ಕೂಡ ಅವರೇ. ಇದಲ್ಲದೆ ನನ್ನ ಕೈ ಕೆಳಗೆ ಕೆಲಸ ಮಾಡುವ ಸಹ ಕೆಲಸಗಾರರು ಇಬ್ಬರು ಕೂಡ ಅವರೇ. ಇದಿಷ್ಟೇ ಇದ್ದಿದ್ದರೆ ಪರವಾಗಿಲ್ಲ, ಅವರು ಏನಾದರು ಕೆಲಸದ ವಿಷಯ ಮಾತನಾಡುವ ಸಮಯದಲ್ಲಿ ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಿದರೆ ಎಷ್ಟು ಕೋಪ ಬರಬೇಡ. ಆ ಸಮಯದಲ್ಲಿ ಯಾರಾದರು "ನಲ್ಲ ಇರಕ" ಎಂದರೆ ಇರಿದು ಅಲ್ಲೇ ಕೊಂದು ಬಿಡುವಷ್ಟು ಕೋಪ ಬರುತ್ತೆ.
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಡಾ|| ರಾಜ ಹಾಡು ಕೇಳಿ ಬೆಳೆದವ ನಾನು. ಕನ್ನಡದ ಬಗ್ಗೆ ಅಪಾರ ಪ್ರೀತಿ ಎಂದ.ಆಗ ನಾವೆಲ್ಲರೂ ಅವರನ್ನು ಸಮಾಧಾನ ಮಾಡಿದೆವು.
ಜನರನ್ನು ಒಗ್ಗೂಡಿಸುವ ಒಂದು ಒಳ್ಳೆ ಕೆಲಸ ನಟರಾಜ್ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಇವರನ್ನು ಎಂ ಎಲ್ ಎ ಅನ್ನೋದು. ಈ ಸಾರಿ ಕೂಡ ಊಟಕ್ಕೆ ಬನ್ನಿ ಎಂದರು. ನಾನು ಒಲ್ಲೇ ಒಲ್ಲೇ ಎಂದೇ. ನನ್ನದು ಏನಿದ್ದರು "ವಂದೇ ಮಾತರಂ" ಎಂದು ಹೊರಟು ಹೋದರು. ಇದೇನು ವಂದೇ ಮಾತರಂ ಎಂದು ಕೇಳಿದಾಗ ತಿಳಿಯಿತು ಒಂದೇ ಮಾತು ಎಂದು ತಿಳಿಯಿತು.
ಕಡೆಗೆ ಆಯಿತು ಎಂದು ಒಪ್ಪಿಕೊಂಡ ಮೇಲೆ ಎಲ್ಲರು ಹೋಟೆಲ್ ಯಾವುದೆಂದು ತೀರ್ಮಾನ ಮಾಡಿ ಹೊರಟೆವು. ನಮ್ಮ 7 ಜನರಲ್ಲಿ ಒಬ್ಬ ಸುವೆಂದು ಆಚಾರ್ಯ ಎಂಬ ಒಬ್ಬ ಒರಿಸ್ಸಾ ಹುಡುಗ ಕೂಡ ಬಂದಿದ್ದ. ಅವನಿಗೆ ಗೊತ್ತಿದದ್ದು ಹಿಂದಿ ಮತ್ತೆ ಒರಿಸ್ಸಾ ಈಗ ಅವನು ಸ್ವಲ್ಪ ಸ್ವಲ್ಪ ಕನ್ನಡ ಕಲಿಯಲು ಶುರು ಹಚ್ಚಿಕೊಂಡಿದ್ದಾನೆ. ಅದು ಏಕೆಂದರೆ ಒಂದೆರಡು ಕನ್ನಡದ ಹುಡುಗಿಯರು ನಮ್ಮ ಕಂಪನಿಗೆ ಸೇರಿದ ಮೇಲೆ.
ಎಲ್ಲರು ಹೋಟೆಲ್ ಒಳಗೆ ಕಾಲಿಟ್ಟೆವು. ಅವನು ಮಾತ್ರ ಹುಡುಗಿಯರನ್ನು ಅತ್ತಿತ್ತ ನೋಡುತ್ತಾ ಕಾಲಿಟ್ಟ. ಅಲ್ಲಿ ಒಂದು ಹುಡುಗಿ ಪ್ಲೇಟ್ ನೋಡಿದವನೇ. ಏನೋ ತಿಳಿದವನಂತೆ "ಇಲ್ಲಿ ಮುಡಿ ಕೊಡುತ್ತಾರಾ?" ಎಂದು ಕೇಳಿದ. ನಮ್ಮೆಲ್ಲರಿಗೂ ಆಶ್ಚರ್ಯ ಆಯಿತು ಏನಿದು ಇದೇನು ತಿರುಪತಿ ನಾ ಎಂದು ಕೇಳಿದೆ. ಮತ್ತೆ ಆ ಹುಡುಗಿ ಪ್ಲೇಟ್ ತೋರಿಸಿ ಕೇಳಿದಾಗ ತಿಳಿಯಿತು ಅದು "ಕಳೆ ಪುರಿ"(ಚುರ ಮುರಿ) ಎಂದು. ನಾವೆಲ್ಲರೂ ನಕ್ಕೂ ಒಳಗೆ ಹೋದೆವು.
ಊಟಕ್ಕೆ ಆರ್ಡರ್ ಮಾಡಿದೆವು. ಊಟಕ್ಕೆ ಸಂಜೀವ್ ಬಂದಿರಲಿಲ್ಲ. ಸಂಜೀವ್ ಸುವೆಂದು ಟೀಂ ಲೀಡರ್. ಊಟ ಬಂತು. ನಾನು ಊಟಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿದೆ. ಆಗ ಸುವೆಂದು "ಲೇ ಊಟಕ್ಕೆ ಮೊದಲು ನೀರಾ" ಎಂದ . ಅದು ನೀರಾ ಅಲ್ಲ ನೀರು ಎಂದೇ. ಮತ್ತೆ ನಾನು ಅವನಿಗೆ ಊಟಕ್ಕೆ ಮೊದಲು ನೀರು ಕುಡಿದರೆ ಊಟಕ್ಕೆ ಚೆನ್ನಾಗಿ ಹೋಗುತ್ತೆ ಎಂದೇ. ಆಗ ನೋಡ ನೋಡುತ್ತಲೇ ಒಂದು ಜಗ್ ನೀರು ಕುಡಿದು ಬಿಟ್ಟ. ಲೇ ಒಂದು ಗ್ಲಾಸ್ ಅಂತ ಹೇಳಿದ್ದು ನೀನು ಒಂದು ಜಗ್ ಕುಡಿದೆಯಾ ಎಂದು ಹೇಳಿದೆ.
ಊಟದಲ್ಲಿ ನುಗ್ಗೆ ಕಾಯಿ ಸಾರು ಮಾಡಿದ್ದರು. ಆಗ ಸುವೆಂದು ನನಗೆ ನಗ್ಗೆ ಕಾಯಿ ಬೇಡ ಎಂದ. ಸದ್ಯ ಸೀಗೆ ಕಾಯಿ ಅನ್ನಲಿಲ್ಲ. ಊಟ ಮುಗಿದ ಮೇಲೆ ಎಲ್ಲರಿಗೆ ಏಳಲು ಬರಲಾರದಷ್ಟು ಹೊಟ್ಟೆ ತುಂಬಿತ್ತು. ಸುವೆಂದು ಹೊಟ್ಟೆ ಮಾತ್ರ ನೀರಿನಿಂದ ಕೊಳ್ಳ ಕೊಳ್ಳ ಎನ್ನುತಿತ್ತು. ಆಗ ಸರ್ವರ್ ಬಂದು "ಊಟ ಫಸ್ಟ್ ಟೈಮ್ ಮಾಡುತ್ತ ಇರುವದ ಎಂದು ಕೇಳಿದ". ಅದಕ್ಕೆ ನಮ್ಮ ನಟರಾಜ "ಇಲ್ಲಿ ಮೊದಲ ಬಾರಿ" ಎಂದ. ಆಗ ಸುವೆಂದು ಮಾತ್ರ ತುಂಬಾ ಅವಸರ ಮಾಡುತಿದ್ದ. ಏಕೆಂದರೆ ಅವನಿಗೆ ಒಂದು ಅರ್ಜೆಂಟ್ ಕೆಲಸ ಹೇಳಿದ್ದರು ಸಂಜೀವ್. ನಾವು ಇಂತಹ ಊಟಕ್ಕೆ ಸಂಜೀವನನ್ನು ಕರೆದು ಕೊಂಡು ಬಂದಿದ್ದರೆ ನಿನಗೆ ಕೆಲಸ ಮಾಡದಿದ್ದರೂ ನಡೆಯುತ್ತಿತ್ತು ಎಂದು ಹಾಸ್ಯ ಮಾಡುತ್ತ ಹೋಟೆಲ್ ನಿಂದ ಹೊರನಡೆದೆವು.
ಸುವೆಂದು ಅರ್ಧ ಮರ್ಧ ಕನ್ನಡದ ಜೊತೆಗೆ ಊಟ ಕೂಡ ತುಂಬಾ ಚೆನ್ನಾಗಿತ್ತು,
140 ಜನ ಕೆಲಸ ಮಾಡುವ ಕಂಪನಿಯಲ್ಲಿ ಸುಮಾರು 20 ಜನ ಮಾತ್ರ ಕನ್ನಡಿಗರು. ಹೋಟೆಲ್ ಹೋಗುವ ಸಮಯದಲ್ಲಿ ನಟರಾಜ್ ಮಾತು ಶುರು ಹಚ್ಚಿ ಕೊಂಡರು. ನಾನು ದಿನ ಮುಂಜಾನೆ ಸುಪ್ರಭಾತ ಕೇಳುತ್ತೇನೋ ಇಲ್ಲವೋ, ಆದರೆ ದಿನ ಮುಂಜಾನೆ "ನಲ್ಲ ಇರಕ", "ಸಾಪಟಿಯ" ಎಂಬ ಶಬ್ದಗಳು ಘಂಟಾಘೋಷವಾಗಿ ನನ್ನ ಕಿವಿಗೆ ಬಂದು ಒರಗುತ್ತವೆ. ಅದ್ಯಾವ ಜನ್ಮದ ಪಾಪದ ಫಲವೋ ನಾ ಕಾಣೆ. ನಾನು ಕೆಲವೊಂದು ಸಾರಿ ಬೆಂಗಳೂರಿನಲ್ಲೇ ಇದ್ದೆನಾ?. ಎಂಬ ಸಂದೇಹ ಬಂದಿದ್ದು ಉಂಟು. ನನ್ನ ಲೀಡರ್ ಕೂಡ ಅವರೇ. ಇದಲ್ಲದೆ ನನ್ನ ಕೈ ಕೆಳಗೆ ಕೆಲಸ ಮಾಡುವ ಸಹ ಕೆಲಸಗಾರರು ಇಬ್ಬರು ಕೂಡ ಅವರೇ. ಇದಿಷ್ಟೇ ಇದ್ದಿದ್ದರೆ ಪರವಾಗಿಲ್ಲ, ಅವರು ಏನಾದರು ಕೆಲಸದ ವಿಷಯ ಮಾತನಾಡುವ ಸಮಯದಲ್ಲಿ ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಿದರೆ ಎಷ್ಟು ಕೋಪ ಬರಬೇಡ. ಆ ಸಮಯದಲ್ಲಿ ಯಾರಾದರು "ನಲ್ಲ ಇರಕ" ಎಂದರೆ ಇರಿದು ಅಲ್ಲೇ ಕೊಂದು ಬಿಡುವಷ್ಟು ಕೋಪ ಬರುತ್ತೆ.
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಡಾ|| ರಾಜ ಹಾಡು ಕೇಳಿ ಬೆಳೆದವ ನಾನು. ಕನ್ನಡದ ಬಗ್ಗೆ ಅಪಾರ ಪ್ರೀತಿ ಎಂದ.ಆಗ ನಾವೆಲ್ಲರೂ ಅವರನ್ನು ಸಮಾಧಾನ ಮಾಡಿದೆವು.
ಜನರನ್ನು ಒಗ್ಗೂಡಿಸುವ ಒಂದು ಒಳ್ಳೆ ಕೆಲಸ ನಟರಾಜ್ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಇವರನ್ನು ಎಂ ಎಲ್ ಎ ಅನ್ನೋದು. ಈ ಸಾರಿ ಕೂಡ ಊಟಕ್ಕೆ ಬನ್ನಿ ಎಂದರು. ನಾನು ಒಲ್ಲೇ ಒಲ್ಲೇ ಎಂದೇ. ನನ್ನದು ಏನಿದ್ದರು "ವಂದೇ ಮಾತರಂ" ಎಂದು ಹೊರಟು ಹೋದರು. ಇದೇನು ವಂದೇ ಮಾತರಂ ಎಂದು ಕೇಳಿದಾಗ ತಿಳಿಯಿತು ಒಂದೇ ಮಾತು ಎಂದು ತಿಳಿಯಿತು.
ಕಡೆಗೆ ಆಯಿತು ಎಂದು ಒಪ್ಪಿಕೊಂಡ ಮೇಲೆ ಎಲ್ಲರು ಹೋಟೆಲ್ ಯಾವುದೆಂದು ತೀರ್ಮಾನ ಮಾಡಿ ಹೊರಟೆವು. ನಮ್ಮ 7 ಜನರಲ್ಲಿ ಒಬ್ಬ ಸುವೆಂದು ಆಚಾರ್ಯ ಎಂಬ ಒಬ್ಬ ಒರಿಸ್ಸಾ ಹುಡುಗ ಕೂಡ ಬಂದಿದ್ದ. ಅವನಿಗೆ ಗೊತ್ತಿದದ್ದು ಹಿಂದಿ ಮತ್ತೆ ಒರಿಸ್ಸಾ ಈಗ ಅವನು ಸ್ವಲ್ಪ ಸ್ವಲ್ಪ ಕನ್ನಡ ಕಲಿಯಲು ಶುರು ಹಚ್ಚಿಕೊಂಡಿದ್ದಾನೆ. ಅದು ಏಕೆಂದರೆ ಒಂದೆರಡು ಕನ್ನಡದ ಹುಡುಗಿಯರು ನಮ್ಮ ಕಂಪನಿಗೆ ಸೇರಿದ ಮೇಲೆ.
ಎಲ್ಲರು ಹೋಟೆಲ್ ಒಳಗೆ ಕಾಲಿಟ್ಟೆವು. ಅವನು ಮಾತ್ರ ಹುಡುಗಿಯರನ್ನು ಅತ್ತಿತ್ತ ನೋಡುತ್ತಾ ಕಾಲಿಟ್ಟ. ಅಲ್ಲಿ ಒಂದು ಹುಡುಗಿ ಪ್ಲೇಟ್ ನೋಡಿದವನೇ. ಏನೋ ತಿಳಿದವನಂತೆ "ಇಲ್ಲಿ ಮುಡಿ ಕೊಡುತ್ತಾರಾ?" ಎಂದು ಕೇಳಿದ. ನಮ್ಮೆಲ್ಲರಿಗೂ ಆಶ್ಚರ್ಯ ಆಯಿತು ಏನಿದು ಇದೇನು ತಿರುಪತಿ ನಾ ಎಂದು ಕೇಳಿದೆ. ಮತ್ತೆ ಆ ಹುಡುಗಿ ಪ್ಲೇಟ್ ತೋರಿಸಿ ಕೇಳಿದಾಗ ತಿಳಿಯಿತು ಅದು "ಕಳೆ ಪುರಿ"(ಚುರ ಮುರಿ) ಎಂದು. ನಾವೆಲ್ಲರೂ ನಕ್ಕೂ ಒಳಗೆ ಹೋದೆವು.
ಊಟಕ್ಕೆ ಆರ್ಡರ್ ಮಾಡಿದೆವು. ಊಟಕ್ಕೆ ಸಂಜೀವ್ ಬಂದಿರಲಿಲ್ಲ. ಸಂಜೀವ್ ಸುವೆಂದು ಟೀಂ ಲೀಡರ್. ಊಟ ಬಂತು. ನಾನು ಊಟಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿದೆ. ಆಗ ಸುವೆಂದು "ಲೇ ಊಟಕ್ಕೆ ಮೊದಲು ನೀರಾ" ಎಂದ . ಅದು ನೀರಾ ಅಲ್ಲ ನೀರು ಎಂದೇ. ಮತ್ತೆ ನಾನು ಅವನಿಗೆ ಊಟಕ್ಕೆ ಮೊದಲು ನೀರು ಕುಡಿದರೆ ಊಟಕ್ಕೆ ಚೆನ್ನಾಗಿ ಹೋಗುತ್ತೆ ಎಂದೇ. ಆಗ ನೋಡ ನೋಡುತ್ತಲೇ ಒಂದು ಜಗ್ ನೀರು ಕುಡಿದು ಬಿಟ್ಟ. ಲೇ ಒಂದು ಗ್ಲಾಸ್ ಅಂತ ಹೇಳಿದ್ದು ನೀನು ಒಂದು ಜಗ್ ಕುಡಿದೆಯಾ ಎಂದು ಹೇಳಿದೆ.
ಊಟದಲ್ಲಿ ನುಗ್ಗೆ ಕಾಯಿ ಸಾರು ಮಾಡಿದ್ದರು. ಆಗ ಸುವೆಂದು ನನಗೆ ನಗ್ಗೆ ಕಾಯಿ ಬೇಡ ಎಂದ. ಸದ್ಯ ಸೀಗೆ ಕಾಯಿ ಅನ್ನಲಿಲ್ಲ. ಊಟ ಮುಗಿದ ಮೇಲೆ ಎಲ್ಲರಿಗೆ ಏಳಲು ಬರಲಾರದಷ್ಟು ಹೊಟ್ಟೆ ತುಂಬಿತ್ತು. ಸುವೆಂದು ಹೊಟ್ಟೆ ಮಾತ್ರ ನೀರಿನಿಂದ ಕೊಳ್ಳ ಕೊಳ್ಳ ಎನ್ನುತಿತ್ತು. ಆಗ ಸರ್ವರ್ ಬಂದು "ಊಟ ಫಸ್ಟ್ ಟೈಮ್ ಮಾಡುತ್ತ ಇರುವದ ಎಂದು ಕೇಳಿದ". ಅದಕ್ಕೆ ನಮ್ಮ ನಟರಾಜ "ಇಲ್ಲಿ ಮೊದಲ ಬಾರಿ" ಎಂದ. ಆಗ ಸುವೆಂದು ಮಾತ್ರ ತುಂಬಾ ಅವಸರ ಮಾಡುತಿದ್ದ. ಏಕೆಂದರೆ ಅವನಿಗೆ ಒಂದು ಅರ್ಜೆಂಟ್ ಕೆಲಸ ಹೇಳಿದ್ದರು ಸಂಜೀವ್. ನಾವು ಇಂತಹ ಊಟಕ್ಕೆ ಸಂಜೀವನನ್ನು ಕರೆದು ಕೊಂಡು ಬಂದಿದ್ದರೆ ನಿನಗೆ ಕೆಲಸ ಮಾಡದಿದ್ದರೂ ನಡೆಯುತ್ತಿತ್ತು ಎಂದು ಹಾಸ್ಯ ಮಾಡುತ್ತ ಹೋಟೆಲ್ ನಿಂದ ಹೊರನಡೆದೆವು.
ಸುವೆಂದು ಅರ್ಧ ಮರ್ಧ ಕನ್ನಡದ ಜೊತೆಗೆ ಊಟ ಕೂಡ ತುಂಬಾ ಚೆನ್ನಾಗಿತ್ತು,
Wednesday, December 16, 2009
ತರ್ಲೆ ಮಂಜ(ಗ)ನ ಬಾರ್ ಪುರಾಣ!!!!
ಮತ್ತೆ ಒಂದು ದಿವಸ ಮಂಜ, ಮನೋಜ ಮತ್ತೆ ನಾನು ಸೇರಿದ್ದೇವು. ಇವರಿಬ್ಬರನ್ನು ನಾನು ಎಷ್ಟೇ ತಪ್ಪಿಸಲು ಪ್ರಯತ್ನ ಪಟ್ಟರು ಬಿಡದೆ ಬಾರ್ ಗೆ ಹೊರಟು ನಿಂತರು.
ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ ಮಂಜ ತನ್ನ ಮಾತಿನ ವರಸೆ ಶುರು ಹಚ್ಚಿಕೊಂಡ.
ಅತ್ಯಂತ ಪ್ರಾಚೀನ ಪುರಾಣಕ್ಕೆ ಸೇರಿದ್ದು ಈ ಬಾರ್ ಪುರಾಣ. ಇದಕ್ಕೆ ಇದು.. ಇದೆ ಪುರಾಣ ಇಷ್ಟನೇ ಅಧ್ಯಾಯದಲ್ಲಿ ಇರಬಹುದೆದೆಂದು ಊಹಿಸಲು ಅಸಾದ್ಯವಾದಷ್ಟು ಪ್ರಾಚೀನ ಪುರಾಣ. ಒಂದಾನೊಂದು ಕಾಲದಲ್ಲಿ ರಣಧೀರ ಎಂಬ ರಾಜ ಇದ್ದ. ಒಂದು ದಿವಸ ತನ್ನ ಮಹಾರಾಣಿಯ ಜೊತೆಗೆ ಜಗಳವಾಡಿದ. ಅವನ ಹೆಂಡತಿ ರಾಜನ ಮೇಲೆ ತುಂಬಾ ಕೋಪಗೊಂಡು ತವರುಮನೆಗೆ ಹೊರಟುಹೋದಳು. ಆಗ ರಾಜ ಅವಳ ಯೋಚನೆಯಲ್ಲೇ ಕಾಲ ಕಳೆಯುತ್ತಾ ಹುಚ್ಚನ ಹಾಗೆ ಅಲೆದಾಡುತ್ತ ಇದ್ದಾಗ... ಅವನ ಮಂತ್ರಿ ರಾಜನ ದುಃಖ ನೋಡಲಾರದೆ. ಅವನ ವೈದ್ಯ ನವೀನಚಂದ್ರನಿಗೆ ಅದನ್ನು ಅರುಹಿದ. ಆಗ ಆ ವೈದ್ಯ ಮನಸಿನ ನೋವನ್ನು ಮರೆಯುವ ಒಂದು ಔಷಧ ತಯಾರಿಸಿ ತಂದು ಮಂತ್ರಿಗೆ ಕೊಟ್ಟ. ಮಂತ್ರಿ ಖುಷಿಯಾಗಿ ಅವನಿಗೆ 100 ವರಾಹ ಕೊಟ್ಟು ಕಳುಹಿಸಿದ. ಅದನ್ನು ರಾಜನಿಗೆ ಕುಡಿಸಿದಾಗ... ರಾಜ ತುಂಬಾ ಮನೋಲ್ಲಾಸಗೊಂಡು ಮಂತ್ರಿಗೆ.. ಕಂತ್ರಿ ಕಂತ್ರಿ ಎಂದು ಹೇಳಲಾರಂಬಿಸಿದ. ಅದೇ ಶಬ್ದ ಬಾಯಿಂದ ಬಾಯಿಗೆ ಹರಿದು "ಕ೦ಟ್ರಿ" ಪಾನ ಆಯಿತು.
ರಾಜ ಪಾನವಿಲ್ಲದೆ ಬದುಕಲು ಅಸಾಧ್ಯವಾಯಿತು. ದಿನ ನಿತ್ಯ ಮುಂಜಾನೆ ಇಂದ ಸಂಜೆವರೆಗೆ ಪಾನ ಮತ್ತನಾಗಿ ಇರುತ್ತಿದ್ದ. ಇದು ಅವನ ಹೆಂಡತಿಗೆ ತಿಳಿಯಿತು. ಮಹಾರಾಣಿ ಮತ್ತೆ ತನ್ನ ಗಂಡನ ಅರಮನೆಗೆ ಹಿಂತಿರುಗಿದಳು. ಆಗ ಮಹಾರಾಜ ಅದನ್ನು ಸಾವಕಾಶವಾಗಿ ಬಿಡಲು ಆರಂಬಿಸಿದ.
ರಾಜ ಹೆಂಡತಿ ಬಂದ ಮೇಲೆ ಅದನ್ನು ಬಿಟ್ಟದ್ದರಿಂದ ಮತ್ತು ಅದು ಹೆಂಡತಿ ಇಲ್ಲದಿದ್ದಾಗ ಸವತಿಯ ಹಾಗೆ ಕೆಲಸ ಮಾಡಿದ್ದರಿಂದ ಹೆಂಡ ಎಂಬ ಮತ್ತೊಂದು ನಾಮಾಂಕಿತ ಪಡೆದು ಪ್ರಸಿದ್ದಿಪಡೆಯಿತು. ರಾಜ ಅದನ್ನು ಮೊದಲು ಸೇವಿಸಿದ್ದರಿಂದ ಅದೇ ಹೆಸರಿನ ಪೇಯ ಇಗಲೂ ತುಂಬಾ ಪ್ರಸಿದ್ದಿ ಪಡೆದಿದೆ.
ಮುಂದೆ ಆ ವೈದ್ಯ ಈ ಪೇಯದಿಂದ ತುಂಬಾ ಪ್ರಸಿದ್ದಿ ಪಡೆದ. ಮತ್ತು ಅದನ್ನು ಇನ್ನಷ್ಟು ವಿನ್ಯಾಸಗೊಳಿಸಿದ. ಆಗ ಮಂತ್ರಿ ಅವನಿಗೆ ಅವನ ಉದ್ಯೋಗವಾದ "ವೈದ್ಯ" ಮತ್ತೆ ಅವನ ಹೆಸರಿನ(ನವೀನಚಂದ್ರ) ಮೊದಲ ಅಕ್ಷರ ಸೇರಿಸಿ "ವೈನ" ಎಂದು ನಾಮಕರಣ ಮಾಡಿ ಮಾರುಕಟ್ಟೆಗೆ ಬಿಟ್ಟ. ಅದು ತುಂಬಾ ಪ್ರಸಿದ್ದಿ ಪಡೆಯಿತು.
ಅದಕ್ಕೆ ನಮ್ಮ ಮನೋಜ ಹೌದು ಹೌದು ಎಂದು ಗೋಣು ಅಲ್ಲಾಡಿಸುತ್ತ ಕುಳಿತಿದ್ದ.
ನಾನು ಸಾಕು ಬಿಡಪ್ಪ ನಿನ್ನ ಬಾರ್ ಪುರಾಣ ಎಂದೆ. ಆದರು ಮಂಜ ಕೇಳಲಿಲ್ಲ ನನಗೆ ಕಿವಿಗಳಿಗೆ ಬರೆ ಕೊಡುವ ಹಾಗೆ ತನ್ನ ಪುರಾಣ ಶುರು ಹಚ್ಚಿ ಕೊಂಡ.
ಲೇ ಇದಕ್ಕೆ ಶೆರೆ ಅಂತ ಏಕೆ? ಅಂತಾರೆ ಗೊತ್ತೇನು ಎಂದ. ನಾನು ಇಲ್ಲ ಎಂದೆ. ಶೇರ್ ಎಂದರೆ ಹಂಚಿಕೋ ಅಂತ ಅರ್ಥ ಎಂದ..
ಹೌದೌದು ಎಂದು ಮನೋಜ ಅವನ ಎ೦ಜಲದ ಗ್ಲಾಸ್ ಎತ್ತಿ ಕುಡಿಯುತ್ತಿದ್ದ. .
ಆಗ ನಾನು ತಿಳಿಯಿತು ಬಿಡು ಎಂದೆ.
ಲೇ ಅದಲ್ಲ ಕಣೋ, ನಮ್ಮ ಮನಸಿನ ಭಾವನೆಗಳನ್ನು ಹಂಚ್ಕೊಳ್ಳಲು ಒಂದು ವೇದಿಕೆ ಕಣೋ ಎಂದ. ಇಲ್ಲಿ ನಿಜವಾಗಿಯೂ ಚರ್ಚೆ ಆಗುವದು ನಮ್ಮ ಹೆಂಡತಿಯರ ಬಗ್ಗೆ ಅದಕ್ಕೆ ಶೇರ್ ಗೆ ಸ್ತ್ರೀಲಿಂಗ ಸೇರಿಸಿ ಶೆರೆ ಅಂತ ಕರೆದಿದ್ದಾರೆ ಹಿರಿಯರು ಎಂದ.
ನೀನು ಬೀರ್ ಕುಡಿ ಬೀರಬಲ್ಲ ತರಹ ಶ್ಯಾಣ್ಯ ಆಗುತ್ತೀಯ ಎಂದ.
ಹೆಂಡತಿ ಜಗಳವಾಡಿ ತವರುಮನೆಗೆ ಹೋದಾಗ "ಬಾರ" "ಬಾರ" ಎನ್ನುವ ಬದಲು ಬಾರಿಗೆ ಬಾ ಎಲ್ಲ ಮರೆಯುತ್ತೆ ಎಂದ.
ಅಷ್ಟೊತ್ಟಿಗಾಗಲೆ ಹೆಂಡತಿ ಫೋನ್ ಬಂತು ಖಾರವಾಗಿ ಎಷ್ಟೊತ್ತು ಮನೆಗೆ ಬರೋದು ಎಂದಳು.
ಅವರೀಬ್ಬರಿಗೂ ಬೇಗೆನೆ ಬೈ ಹೇಳಿ ಹೊರಟು ಹೋದೆ. ಇಲ್ಲದೇ ಇದ್ದರೆ ಎನ್ನು ಏನೇನೋ ಪುರಾಣ ಕೇಳುವ ಪರಿಸ್ತಿತಿ ಬರುತಿತ್ತು.
ನಾನು ಕೇಳಬಾರದ ಒಂದು ಪ್ರಶ್ನೆ ಕೇಳಿಬಿಟ್ಟೆ. "ಯಾಕೆ ಇಷ್ಟು ಕುಡಿತಿರೋ"? ಎಂದು. ಆಗ ನಮ್ಮ ಮಂಜ ತನ್ನ ಮಾತಿನ ವರಸೆ ಶುರು ಹಚ್ಚಿಕೊಂಡ.
ಅತ್ಯಂತ ಪ್ರಾಚೀನ ಪುರಾಣಕ್ಕೆ ಸೇರಿದ್ದು ಈ ಬಾರ್ ಪುರಾಣ. ಇದಕ್ಕೆ ಇದು.. ಇದೆ ಪುರಾಣ ಇಷ್ಟನೇ ಅಧ್ಯಾಯದಲ್ಲಿ ಇರಬಹುದೆದೆಂದು ಊಹಿಸಲು ಅಸಾದ್ಯವಾದಷ್ಟು ಪ್ರಾಚೀನ ಪುರಾಣ. ಒಂದಾನೊಂದು ಕಾಲದಲ್ಲಿ ರಣಧೀರ ಎಂಬ ರಾಜ ಇದ್ದ. ಒಂದು ದಿವಸ ತನ್ನ ಮಹಾರಾಣಿಯ ಜೊತೆಗೆ ಜಗಳವಾಡಿದ. ಅವನ ಹೆಂಡತಿ ರಾಜನ ಮೇಲೆ ತುಂಬಾ ಕೋಪಗೊಂಡು ತವರುಮನೆಗೆ ಹೊರಟುಹೋದಳು. ಆಗ ರಾಜ ಅವಳ ಯೋಚನೆಯಲ್ಲೇ ಕಾಲ ಕಳೆಯುತ್ತಾ ಹುಚ್ಚನ ಹಾಗೆ ಅಲೆದಾಡುತ್ತ ಇದ್ದಾಗ... ಅವನ ಮಂತ್ರಿ ರಾಜನ ದುಃಖ ನೋಡಲಾರದೆ. ಅವನ ವೈದ್ಯ ನವೀನಚಂದ್ರನಿಗೆ ಅದನ್ನು ಅರುಹಿದ. ಆಗ ಆ ವೈದ್ಯ ಮನಸಿನ ನೋವನ್ನು ಮರೆಯುವ ಒಂದು ಔಷಧ ತಯಾರಿಸಿ ತಂದು ಮಂತ್ರಿಗೆ ಕೊಟ್ಟ. ಮಂತ್ರಿ ಖುಷಿಯಾಗಿ ಅವನಿಗೆ 100 ವರಾಹ ಕೊಟ್ಟು ಕಳುಹಿಸಿದ. ಅದನ್ನು ರಾಜನಿಗೆ ಕುಡಿಸಿದಾಗ... ರಾಜ ತುಂಬಾ ಮನೋಲ್ಲಾಸಗೊಂಡು ಮಂತ್ರಿಗೆ.. ಕಂತ್ರಿ ಕಂತ್ರಿ ಎಂದು ಹೇಳಲಾರಂಬಿಸಿದ. ಅದೇ ಶಬ್ದ ಬಾಯಿಂದ ಬಾಯಿಗೆ ಹರಿದು "ಕ೦ಟ್ರಿ" ಪಾನ ಆಯಿತು.
ರಾಜ ಪಾನವಿಲ್ಲದೆ ಬದುಕಲು ಅಸಾಧ್ಯವಾಯಿತು. ದಿನ ನಿತ್ಯ ಮುಂಜಾನೆ ಇಂದ ಸಂಜೆವರೆಗೆ ಪಾನ ಮತ್ತನಾಗಿ ಇರುತ್ತಿದ್ದ. ಇದು ಅವನ ಹೆಂಡತಿಗೆ ತಿಳಿಯಿತು. ಮಹಾರಾಣಿ ಮತ್ತೆ ತನ್ನ ಗಂಡನ ಅರಮನೆಗೆ ಹಿಂತಿರುಗಿದಳು. ಆಗ ಮಹಾರಾಜ ಅದನ್ನು ಸಾವಕಾಶವಾಗಿ ಬಿಡಲು ಆರಂಬಿಸಿದ.
ರಾಜ ಹೆಂಡತಿ ಬಂದ ಮೇಲೆ ಅದನ್ನು ಬಿಟ್ಟದ್ದರಿಂದ ಮತ್ತು ಅದು ಹೆಂಡತಿ ಇಲ್ಲದಿದ್ದಾಗ ಸವತಿಯ ಹಾಗೆ ಕೆಲಸ ಮಾಡಿದ್ದರಿಂದ ಹೆಂಡ ಎಂಬ ಮತ್ತೊಂದು ನಾಮಾಂಕಿತ ಪಡೆದು ಪ್ರಸಿದ್ದಿಪಡೆಯಿತು. ರಾಜ ಅದನ್ನು ಮೊದಲು ಸೇವಿಸಿದ್ದರಿಂದ ಅದೇ ಹೆಸರಿನ ಪೇಯ ಇಗಲೂ ತುಂಬಾ ಪ್ರಸಿದ್ದಿ ಪಡೆದಿದೆ.
ಮುಂದೆ ಆ ವೈದ್ಯ ಈ ಪೇಯದಿಂದ ತುಂಬಾ ಪ್ರಸಿದ್ದಿ ಪಡೆದ. ಮತ್ತು ಅದನ್ನು ಇನ್ನಷ್ಟು ವಿನ್ಯಾಸಗೊಳಿಸಿದ. ಆಗ ಮಂತ್ರಿ ಅವನಿಗೆ ಅವನ ಉದ್ಯೋಗವಾದ "ವೈದ್ಯ" ಮತ್ತೆ ಅವನ ಹೆಸರಿನ(ನವೀನಚಂದ್ರ) ಮೊದಲ ಅಕ್ಷರ ಸೇರಿಸಿ "ವೈನ" ಎಂದು ನಾಮಕರಣ ಮಾಡಿ ಮಾರುಕಟ್ಟೆಗೆ ಬಿಟ್ಟ. ಅದು ತುಂಬಾ ಪ್ರಸಿದ್ದಿ ಪಡೆಯಿತು.
ಅದಕ್ಕೆ ನಮ್ಮ ಮನೋಜ ಹೌದು ಹೌದು ಎಂದು ಗೋಣು ಅಲ್ಲಾಡಿಸುತ್ತ ಕುಳಿತಿದ್ದ.
ನಾನು ಸಾಕು ಬಿಡಪ್ಪ ನಿನ್ನ ಬಾರ್ ಪುರಾಣ ಎಂದೆ. ಆದರು ಮಂಜ ಕೇಳಲಿಲ್ಲ ನನಗೆ ಕಿವಿಗಳಿಗೆ ಬರೆ ಕೊಡುವ ಹಾಗೆ ತನ್ನ ಪುರಾಣ ಶುರು ಹಚ್ಚಿ ಕೊಂಡ.
ಲೇ ಇದಕ್ಕೆ ಶೆರೆ ಅಂತ ಏಕೆ? ಅಂತಾರೆ ಗೊತ್ತೇನು ಎಂದ. ನಾನು ಇಲ್ಲ ಎಂದೆ. ಶೇರ್ ಎಂದರೆ ಹಂಚಿಕೋ ಅಂತ ಅರ್ಥ ಎಂದ..
ಹೌದೌದು ಎಂದು ಮನೋಜ ಅವನ ಎ೦ಜಲದ ಗ್ಲಾಸ್ ಎತ್ತಿ ಕುಡಿಯುತ್ತಿದ್ದ. .
ಆಗ ನಾನು ತಿಳಿಯಿತು ಬಿಡು ಎಂದೆ.
ಲೇ ಅದಲ್ಲ ಕಣೋ, ನಮ್ಮ ಮನಸಿನ ಭಾವನೆಗಳನ್ನು ಹಂಚ್ಕೊಳ್ಳಲು ಒಂದು ವೇದಿಕೆ ಕಣೋ ಎಂದ. ಇಲ್ಲಿ ನಿಜವಾಗಿಯೂ ಚರ್ಚೆ ಆಗುವದು ನಮ್ಮ ಹೆಂಡತಿಯರ ಬಗ್ಗೆ ಅದಕ್ಕೆ ಶೇರ್ ಗೆ ಸ್ತ್ರೀಲಿಂಗ ಸೇರಿಸಿ ಶೆರೆ ಅಂತ ಕರೆದಿದ್ದಾರೆ ಹಿರಿಯರು ಎಂದ.
ನೀನು ಬೀರ್ ಕುಡಿ ಬೀರಬಲ್ಲ ತರಹ ಶ್ಯಾಣ್ಯ ಆಗುತ್ತೀಯ ಎಂದ.
ಹೆಂಡತಿ ಜಗಳವಾಡಿ ತವರುಮನೆಗೆ ಹೋದಾಗ "ಬಾರ" "ಬಾರ" ಎನ್ನುವ ಬದಲು ಬಾರಿಗೆ ಬಾ ಎಲ್ಲ ಮರೆಯುತ್ತೆ ಎಂದ.
ಅಷ್ಟೊತ್ಟಿಗಾಗಲೆ ಹೆಂಡತಿ ಫೋನ್ ಬಂತು ಖಾರವಾಗಿ ಎಷ್ಟೊತ್ತು ಮನೆಗೆ ಬರೋದು ಎಂದಳು.
ಅವರೀಬ್ಬರಿಗೂ ಬೇಗೆನೆ ಬೈ ಹೇಳಿ ಹೊರಟು ಹೋದೆ. ಇಲ್ಲದೇ ಇದ್ದರೆ ಎನ್ನು ಏನೇನೋ ಪುರಾಣ ಕೇಳುವ ಪರಿಸ್ತಿತಿ ಬರುತಿತ್ತು.
Monday, December 7, 2009
ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....
ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹೋಗದೇ ಆ ಸಂಜೆ ನೀಲಾಕಾಶ ನೋಡುತ್ತಾ ಕುಳಿತು ಬಿಟ್ಟೆ. ಆ ಸಂಜೆ ಆಕಾಶದ ಮೇಲೆ ಮೂಡಿರುವ ಛಾಯಾ ಚಿತ್ತಾರ ಅದೇನೋ ಒಂದು ಸುಮಧುರವಾದಂತ ಭಾವನೆಯನ್ನು ಮೂಡಿಸುತ್ತಿತ್ತು. ನೀಲಾಕಾಶದಲ್ಲಿ ಬರೆದಿರುವ ಬಿಳಿ ರಂಗೋಲಿ ಮನಸಿಗೆ ತುಂಬಾ ಮುದ ನೀಡುತಿತ್ತು. ಆ ಬಿಳಿ ಮೋಡಗಳ ಹಿಂದೆ ದೇವರು ಇರಬಹುದಾ? ಎಂಬ ಭಾವನೆ ಆಗಾಗ ಮೂಡುತ್ತಿತ್ತು. ದೇವರದೇ ಒಂದು ಸಾಮ್ರಾಜ್ಯ ಇರಬಹುದಾ?. ನಾವು ಓದಿರುವ ರಾಜ ಮಹಾರಾಜರ ಕಥೆಯ ಹಾಗೆ ತನ್ನದು ಒಂದು ಆಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿರಬಹುದಾ?. ಎಂಬ ಪ್ರಶ್ನೆಗಳನ್ನು ಮೆಲಕು ಹಾಕುತ್ತ ಕುಳಿತ್ತಿದ್ದೆ. ಸಂಜೆಯಾಗುತ್ತಲೇ ಆಗ ತಾನೆ ಇಣುಕುತ್ತಿರುವ ತಾರೆಗಳನ್ನು ವೀಕ್ಷಿಸುತ್ತಿದ್ದರೆ ಅದೇನೋ ಒಂದು ಮಹದಾನಂದ. ನಾನು ಇಷ್ಟೊಂದು ಆಳವಾಗಿ ಯೋಚಿಸಿಯೇ ಇರಲಿಲ್ಲ. ಆಗ ದೇವರು ಮುಂದೆ ಪ್ರತಕ್ಷ್ಯವಾದರೆ ಏನು ವರ ಕೇಳುವದು ಎಂಬ ಪ್ರಶ್ನೆಗೆ ನನ್ನ ನೇರವಾದ ದಿಟವಾದ ಉತ್ತರ "ಶಾಲೆ ಎಂಬುದೇ ಇರಬಾರದು" ಹಾಗೆ ಮಾಡು ಎಂದು.
ಆಗ ದೇವರು ಪ್ರತ್ಯಕ್ಷವಾಗಲಿಲ್ಲವಾದರೂ ಪ್ರತ್ಯಕ್ಷವಾಗಿದ್ದು ಮಂಜ ಮತ್ತೆ ಮನೋಜ. ಮಂಜನ ಮುಖದಲ್ಲಿ ಏನೋ ಕಸಿವಿಸಿ. ಮನೋಜ ಬಂದವನೇ "ಲೇ ಇವತ್ತು ಒಬ್ಬ ಹೊಸ ವಿದ್ಯಾರ್ಥಿ ನಮ್ಮ ಶಾಲೆಗೆ ಸೇರಿದ್ದಾನೆ ಕಣೋ" ಎಂದ. ಅವನ ಹೆಸರು ವಿಳಾಸ ಎಂದ.
ಅದಕ್ಕೆ ನಾನು ಮತ್ತೆ ಮಂಜ ಜೋರಾಗಿ ನಕ್ಕೆವು.
ಲೇ ಅದು ವಿಳಾಸ ಅಲ್ಲ ಕಣೋ ವಿಲಾಸ ಎಂದ ಮಂಜ.
ಏನೇ ಆಗಲಿ ಮಗ ಅವನಿಗೆ ಸರಿಸಾಟಿ ಯಾರು ಇಲ್ಲ ಎಂದು ಮನೋಜ ಹೊಗಳುತಿದ್ದ. ಅವ ಎಲ್ಲದರಲ್ಲೂ ನ೦ ೧ ಎಂದ . ಮಾಸ್ಟರ್ಗೆ ಪ್ರಶ್ನೆಹಾಕಿ ಪೇಚಿಗೆ ಬೀಳಿಸಿದ್ದ ಕಣೋ. ಮತ್ತೆ ಗೋಳಿ ಆಟದಲ್ಲೂ ಎಕ್ಸ್ಪರ್ಟ್ ಎಂದ.
ಅವನ ವರ್ಣನೆ ಕೇಳಿ ಮಂಜ ಮಾತ್ರ ಉರಿದುಬೀಳುವ ಹಾಗೆ ಮುಖ ಮಾಡಿದ್ದ.
ಆಗ ನಾನು ಹೌದೆನೋ ಮಂಜ ಎಂದು ಕೇಳಿದೆ.
ಅದಕ್ಕೆ ಮಂಜ ಈಗ ಮೊದಲನೆ ದಿವಸ ಮುಂದೆ ನೋಡೋಣ ಇವನ ಪ್ರತಾಪ ಎಂದ.
ಅದಕ್ಕೆ ಮನೋಜ "ಲೇ ಸುಮ್ನೇ ಹೊಟ್ಟೆ ಉರ್ಕೋ ಬೇಡ" ಅವ ಭಾಳ ಶ್ಯಾಣ್ಯ ಎಂದ.
ಇರಲಿ ಇರಲಿ ಎಂದು ಮಂಜ ಮನೆಗೆ ಹೋಗಿಬಿಟ್ಟ . ಮನೋಜ ಮಾತ್ರ ರಾತ್ರಿ ಪೂರ್ತಿ ಅವನ ವರ್ಣನೆ ಮಾಡಿದ್ದ. ನನಗು ಮರುದಿನ ಅವನನ್ನು ನೋಡುವ ಮತ್ತೆ ಗೆಳೆತನ ಬೆಳೆಸುವ ಆಸೆಯಾಗಿತ್ತು.
ಮರುದಿನ ಶಾಲೆಗೆ ಯಾವದೆ ತಕರಾರು ಇಲ್ಲದೇ ಶಾಲೆಗೆ ಹೊರಟು ನಿಂತಿದ್ದು ನೋಡಿ ಅಪ್ಪ ನನ್ನನ್ನು ನೋಡಿ ನಕ್ಕೂ ಆಶ್ಚರ್ಯದಿಂದ "ಏನ ರಾಜ ಮತ್ತೆ ಹೇಗಿದೆ? ನಿನ್ನ ಹೊಟ್ಟೆ ನೋವು ಎಂದು" ಕೇಳಿದರು.
ನಾನು ಇಲ್ಲ ಎಂದು ಗೋಣು ಆಡಿಸಿ ಶಾಲೆಗೆ ಹೋದೆ. ಮತ್ತೆ ನಾನು ಮನೋಜ ಎಲ್ಲರೂ ಮಂಜನ ಹಿಂದೆ ಬಿಟ್ಟು ವಿಲಾಸ್ ಹಿಂದೆ ಬಿದ್ದೆವು. ಮಂಜ ಮಾತ್ರ ಒಬ್ಬನೇ ಆಗಿಬಿಟ್ಟ. ಮಂಜ ಒಬ್ಬನೇ ಆದರೂ ವಿಲಾಸ್ ಬಗ್ಗೆ ತಿಳಿದು ಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದ. ಅದು ನಮಗೆ ಕಂಡರು ನಾವು ಸುಮ್ಮನೇ ಇದ್ದೆವು. ಒಂದು ದಿನ ಮಂಜ ವಿಲಾಸನನ್ನು ಹಿಂಬಾಲಿಸುತ್ತಿದ್ದ. ಆಗ ವಿಲಾಸನಿಗೆ ಒಂದು ಹಾವು ಸಿಕ್ಕಿದೆ ಅದನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ಹೆದರಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದ. ನಾವೆಲ್ಲರೂ ತುಂಬಾ ಹೆದರಿದ್ದೆವು. ಮಂಜ ಅವನನ್ನು ಮನೆಯವರಿಗೂ ಹಿಂಬಾಲಿಸಿದ. ಆಗ ಆ ಹಾವು ಹಿಂದೆ ತಿರುಗಿ ವಿಳಾಸನ ಹೆಬ್ಬರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು. ವಿಳಾಸ ಎಷ್ಟೇ ತಡಕಾಡಿದರು ಕೈ ಬಿಡಲಿಲ್ಲ.
ಆಗ ಇದೆ ಅವಕಾಶ ಕಾಯುತಿದ್ದ ಮಂಜ ಅವನಿಗೆ ಕಡೆ ಹೋಗಿ "ನಾನು ಬಿಡಿಸುತ್ತೇನೆ" ಎಂದು ಹೇಳಿ ಅವನನ್ನು ಪೂರ್ತಿ ಶಾಲೆಯಲ್ಲಾ ತಿರುಗಿಸಿ ಅವನ ಪ್ರತಾಪವನ್ನು ಎಲ್ಲರಿಗೂ ತೋರಿಸಿಬಿಟ್ಟಿದ್ದ.
ಆಗ ನಮ್ಮ ಮಾಸ್ಟರ್ ಇವನಿಗೆ "ಲೇ ಒಂದು ವರ್ಷ ಫೈಲಾಗಿ ಇಲ್ಲಿ ಬಂದು ಮತ್ತೆ ಅದೇ ವರ್ಸೆ ಹಚ್ಚಿ ಕೊನ್ಡಿದ್ದಿಯ ಎಂದು" ಉಗಿದಿದ್ದರು.
ಕಡೆಗೆ ಮಂಜ ಒಬ್ಬ ಹವಾಡಿಗನ ಹತ್ತಿರ ಕರೆದುಕೊಂಡು ಹೋಗಿ ಅವನನ್ನು ಹಾವಿನಿಂದ ಮುಕ್ತ ಗೊಳಿಸಿದ್ದ. ಮಂಜನಿಗೆ ಎಲ್ಲಿಲ್ಲದ ದಿಗ್ವಿಜಯ ಸಾಧಿಸಿದ ಹಾಗೆ ಹಿರಿ ಹಿರಿ ಹಿಗ್ಗಿದ್ದ. ಮತ್ತೆ ನಾವೆಲ್ಲರೂ ಸಾವಕಾಶವಾಗಿ ಮಂಜನಿಗೆ ಹತ್ತಿರವಾಗ ತೊಡಗಿದೆವು.
ಇಷ್ಟೆಲ್ಲಾ ಆದರೂ ತನ್ನ ಹೆರೆತನದ ಬುದ್ಧಿಮಾತ್ರ ಬಿಟ್ಟಿರಲಿಲ್ಲ ವಿಲಾಸ. ಮತ್ತೊಂದು ದಿನ ಒಬ್ಬ ಪೋಲೀಸ್ ಇನ್ಸ್ಪೆಕ್ಟರ್ ಬೈಕ್ ಕೆಟ್ಟಿತ್ತು. ಆ ಉರಿಬಿಸಿಲಲ್ಲಿ ಎಷ್ಟೇ ಕಿಕ್ ಹೊಡೆದರೂ ಗಾಡಿ ಶುರುವಾಗಲಿಲ್ಲ. ಪೂರ್ತಿ ಮೈಯಲ್ಲ ಬೆವರಿಸಿತ್ತು. ಇನ್ಸ್ಪೆಕ್ಟರ್ ಹಾಗೆ ಕಿಕ್ ಹೊಡೆಯುವಾಗ ನಾವೆಲ್ಲರೂ ಹೆದರಿ ಹಿಂದೆ ನಿಂತು ನೋಡುತ್ತಿದ್ದೆವು.
ಆದರೆ ವಿಲಾಸ್ ಅವರ ಬಳಿ ಹೋಗಿ ಹಿರೇ ಮನುಷ್ಯರ ಹಾಗೆ ಹಿಂದೆ ಕೈಕಟ್ಟಿ ನೋಡುತ್ತಾ ನಿಂತ ಆನಂತರ ಸ್ವಲ್ಪ ಸಮಯದ ನಂತರ "ಏನ ಸರ್ ಬೈಕ್ ಶುರು ಆಗವಲ್ಲದ?" ಎಂದು ಕೇಳಿದ . ಆಗ ಇನ್ಸ್ಪೆಕ್ಟರ್ ಗೆ ಮೊದಲೇ ಕಿಕ್ ಹೊಡೆದು ಹೊಡೆದು ತಲೆ ಕೆಟ್ಟಿತ್ತು. ಇವನನ್ನು ನೋಡಿ "ಸುಮ್ಮನೇ ಹೋಗುವೆಯೋ ಅಥವಾ ಬೇಕೋ ಕಪಾಳಕ್ಕೆ ಎರಡು?" ಎಂದು ಗದರಿಸಿ ಅವನ ಮೇಲೆ ಕೈ ಎತ್ತಿದಾಗ ನಾವೆಲ್ಲರೂ ನಕ್ಕ್ಕಿದ್ದೆ ನಕ್ಕಿದ್ದು.
ಆನಂತರ ಒಂದೇ ವರ್ಷದಲ್ಲಿ ಮತ್ತೆ ವಿಲಾಸ ಬೇರೆ ವಿಳಾಸಕ್ಕೆ ವರ್ಗಾಯಿಸಿಕೊಂಡು ಹೋಗಿಬಿಟ್ಟಿದ್ದ.
ಆಗ ದೇವರು ಪ್ರತ್ಯಕ್ಷವಾಗಲಿಲ್ಲವಾದರೂ ಪ್ರತ್ಯಕ್ಷವಾಗಿದ್ದು ಮಂಜ ಮತ್ತೆ ಮನೋಜ. ಮಂಜನ ಮುಖದಲ್ಲಿ ಏನೋ ಕಸಿವಿಸಿ. ಮನೋಜ ಬಂದವನೇ "ಲೇ ಇವತ್ತು ಒಬ್ಬ ಹೊಸ ವಿದ್ಯಾರ್ಥಿ ನಮ್ಮ ಶಾಲೆಗೆ ಸೇರಿದ್ದಾನೆ ಕಣೋ" ಎಂದ. ಅವನ ಹೆಸರು ವಿಳಾಸ ಎಂದ.
ಅದಕ್ಕೆ ನಾನು ಮತ್ತೆ ಮಂಜ ಜೋರಾಗಿ ನಕ್ಕೆವು.
ಲೇ ಅದು ವಿಳಾಸ ಅಲ್ಲ ಕಣೋ ವಿಲಾಸ ಎಂದ ಮಂಜ.
ಏನೇ ಆಗಲಿ ಮಗ ಅವನಿಗೆ ಸರಿಸಾಟಿ ಯಾರು ಇಲ್ಲ ಎಂದು ಮನೋಜ ಹೊಗಳುತಿದ್ದ. ಅವ ಎಲ್ಲದರಲ್ಲೂ ನ೦ ೧ ಎಂದ . ಮಾಸ್ಟರ್ಗೆ ಪ್ರಶ್ನೆಹಾಕಿ ಪೇಚಿಗೆ ಬೀಳಿಸಿದ್ದ ಕಣೋ. ಮತ್ತೆ ಗೋಳಿ ಆಟದಲ್ಲೂ ಎಕ್ಸ್ಪರ್ಟ್ ಎಂದ.
ಅವನ ವರ್ಣನೆ ಕೇಳಿ ಮಂಜ ಮಾತ್ರ ಉರಿದುಬೀಳುವ ಹಾಗೆ ಮುಖ ಮಾಡಿದ್ದ.
ಆಗ ನಾನು ಹೌದೆನೋ ಮಂಜ ಎಂದು ಕೇಳಿದೆ.
ಅದಕ್ಕೆ ಮಂಜ ಈಗ ಮೊದಲನೆ ದಿವಸ ಮುಂದೆ ನೋಡೋಣ ಇವನ ಪ್ರತಾಪ ಎಂದ.
ಅದಕ್ಕೆ ಮನೋಜ "ಲೇ ಸುಮ್ನೇ ಹೊಟ್ಟೆ ಉರ್ಕೋ ಬೇಡ" ಅವ ಭಾಳ ಶ್ಯಾಣ್ಯ ಎಂದ.
ಇರಲಿ ಇರಲಿ ಎಂದು ಮಂಜ ಮನೆಗೆ ಹೋಗಿಬಿಟ್ಟ . ಮನೋಜ ಮಾತ್ರ ರಾತ್ರಿ ಪೂರ್ತಿ ಅವನ ವರ್ಣನೆ ಮಾಡಿದ್ದ. ನನಗು ಮರುದಿನ ಅವನನ್ನು ನೋಡುವ ಮತ್ತೆ ಗೆಳೆತನ ಬೆಳೆಸುವ ಆಸೆಯಾಗಿತ್ತು.
ಮರುದಿನ ಶಾಲೆಗೆ ಯಾವದೆ ತಕರಾರು ಇಲ್ಲದೇ ಶಾಲೆಗೆ ಹೊರಟು ನಿಂತಿದ್ದು ನೋಡಿ ಅಪ್ಪ ನನ್ನನ್ನು ನೋಡಿ ನಕ್ಕೂ ಆಶ್ಚರ್ಯದಿಂದ "ಏನ ರಾಜ ಮತ್ತೆ ಹೇಗಿದೆ? ನಿನ್ನ ಹೊಟ್ಟೆ ನೋವು ಎಂದು" ಕೇಳಿದರು.
ನಾನು ಇಲ್ಲ ಎಂದು ಗೋಣು ಆಡಿಸಿ ಶಾಲೆಗೆ ಹೋದೆ. ಮತ್ತೆ ನಾನು ಮನೋಜ ಎಲ್ಲರೂ ಮಂಜನ ಹಿಂದೆ ಬಿಟ್ಟು ವಿಲಾಸ್ ಹಿಂದೆ ಬಿದ್ದೆವು. ಮಂಜ ಮಾತ್ರ ಒಬ್ಬನೇ ಆಗಿಬಿಟ್ಟ. ಮಂಜ ಒಬ್ಬನೇ ಆದರೂ ವಿಲಾಸ್ ಬಗ್ಗೆ ತಿಳಿದು ಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದ. ಅದು ನಮಗೆ ಕಂಡರು ನಾವು ಸುಮ್ಮನೇ ಇದ್ದೆವು. ಒಂದು ದಿನ ಮಂಜ ವಿಲಾಸನನ್ನು ಹಿಂಬಾಲಿಸುತ್ತಿದ್ದ. ಆಗ ವಿಲಾಸನಿಗೆ ಒಂದು ಹಾವು ಸಿಕ್ಕಿದೆ ಅದನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ಹೆದರಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದ. ನಾವೆಲ್ಲರೂ ತುಂಬಾ ಹೆದರಿದ್ದೆವು. ಮಂಜ ಅವನನ್ನು ಮನೆಯವರಿಗೂ ಹಿಂಬಾಲಿಸಿದ. ಆಗ ಆ ಹಾವು ಹಿಂದೆ ತಿರುಗಿ ವಿಳಾಸನ ಹೆಬ್ಬರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು. ವಿಳಾಸ ಎಷ್ಟೇ ತಡಕಾಡಿದರು ಕೈ ಬಿಡಲಿಲ್ಲ.
ಆಗ ಇದೆ ಅವಕಾಶ ಕಾಯುತಿದ್ದ ಮಂಜ ಅವನಿಗೆ ಕಡೆ ಹೋಗಿ "ನಾನು ಬಿಡಿಸುತ್ತೇನೆ" ಎಂದು ಹೇಳಿ ಅವನನ್ನು ಪೂರ್ತಿ ಶಾಲೆಯಲ್ಲಾ ತಿರುಗಿಸಿ ಅವನ ಪ್ರತಾಪವನ್ನು ಎಲ್ಲರಿಗೂ ತೋರಿಸಿಬಿಟ್ಟಿದ್ದ.
ಆಗ ನಮ್ಮ ಮಾಸ್ಟರ್ ಇವನಿಗೆ "ಲೇ ಒಂದು ವರ್ಷ ಫೈಲಾಗಿ ಇಲ್ಲಿ ಬಂದು ಮತ್ತೆ ಅದೇ ವರ್ಸೆ ಹಚ್ಚಿ ಕೊನ್ಡಿದ್ದಿಯ ಎಂದು" ಉಗಿದಿದ್ದರು.
ಕಡೆಗೆ ಮಂಜ ಒಬ್ಬ ಹವಾಡಿಗನ ಹತ್ತಿರ ಕರೆದುಕೊಂಡು ಹೋಗಿ ಅವನನ್ನು ಹಾವಿನಿಂದ ಮುಕ್ತ ಗೊಳಿಸಿದ್ದ. ಮಂಜನಿಗೆ ಎಲ್ಲಿಲ್ಲದ ದಿಗ್ವಿಜಯ ಸಾಧಿಸಿದ ಹಾಗೆ ಹಿರಿ ಹಿರಿ ಹಿಗ್ಗಿದ್ದ. ಮತ್ತೆ ನಾವೆಲ್ಲರೂ ಸಾವಕಾಶವಾಗಿ ಮಂಜನಿಗೆ ಹತ್ತಿರವಾಗ ತೊಡಗಿದೆವು.
ಇಷ್ಟೆಲ್ಲಾ ಆದರೂ ತನ್ನ ಹೆರೆತನದ ಬುದ್ಧಿಮಾತ್ರ ಬಿಟ್ಟಿರಲಿಲ್ಲ ವಿಲಾಸ. ಮತ್ತೊಂದು ದಿನ ಒಬ್ಬ ಪೋಲೀಸ್ ಇನ್ಸ್ಪೆಕ್ಟರ್ ಬೈಕ್ ಕೆಟ್ಟಿತ್ತು. ಆ ಉರಿಬಿಸಿಲಲ್ಲಿ ಎಷ್ಟೇ ಕಿಕ್ ಹೊಡೆದರೂ ಗಾಡಿ ಶುರುವಾಗಲಿಲ್ಲ. ಪೂರ್ತಿ ಮೈಯಲ್ಲ ಬೆವರಿಸಿತ್ತು. ಇನ್ಸ್ಪೆಕ್ಟರ್ ಹಾಗೆ ಕಿಕ್ ಹೊಡೆಯುವಾಗ ನಾವೆಲ್ಲರೂ ಹೆದರಿ ಹಿಂದೆ ನಿಂತು ನೋಡುತ್ತಿದ್ದೆವು.
ಆದರೆ ವಿಲಾಸ್ ಅವರ ಬಳಿ ಹೋಗಿ ಹಿರೇ ಮನುಷ್ಯರ ಹಾಗೆ ಹಿಂದೆ ಕೈಕಟ್ಟಿ ನೋಡುತ್ತಾ ನಿಂತ ಆನಂತರ ಸ್ವಲ್ಪ ಸಮಯದ ನಂತರ "ಏನ ಸರ್ ಬೈಕ್ ಶುರು ಆಗವಲ್ಲದ?" ಎಂದು ಕೇಳಿದ . ಆಗ ಇನ್ಸ್ಪೆಕ್ಟರ್ ಗೆ ಮೊದಲೇ ಕಿಕ್ ಹೊಡೆದು ಹೊಡೆದು ತಲೆ ಕೆಟ್ಟಿತ್ತು. ಇವನನ್ನು ನೋಡಿ "ಸುಮ್ಮನೇ ಹೋಗುವೆಯೋ ಅಥವಾ ಬೇಕೋ ಕಪಾಳಕ್ಕೆ ಎರಡು?" ಎಂದು ಗದರಿಸಿ ಅವನ ಮೇಲೆ ಕೈ ಎತ್ತಿದಾಗ ನಾವೆಲ್ಲರೂ ನಕ್ಕ್ಕಿದ್ದೆ ನಕ್ಕಿದ್ದು.
ಆನಂತರ ಒಂದೇ ವರ್ಷದಲ್ಲಿ ಮತ್ತೆ ವಿಲಾಸ ಬೇರೆ ವಿಳಾಸಕ್ಕೆ ವರ್ಗಾಯಿಸಿಕೊಂಡು ಹೋಗಿಬಿಟ್ಟಿದ್ದ.
Tuesday, November 24, 2009
2012 ರ ಸುಬ್ಬನ ಫ್ಲೈಟ್....
ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.
ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.
ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ ಸಹಿತ ಬುಕ್ ಮಾಡಿಲ್ಲ ಎಂದ.
ಏನು ಹನಿಮೂನಾ ಮಜಾ ಮಾಡು. ಏನು ದುಡ್ಡು ಗಿಡ್ಡು ಬೇಕೇನು? ಎಂದು ಮತ್ತೆ ಕೇಳಿದ ಮಂಜ.
ಇಲ್ಲ ಎಂದ ಪೇಲು ಮುಖದಿಂದ ಸುಬ್ಬ.
ಏನಪ್ಪಾ ಮತ್ತೆ ನಿನ್ನ ಸಮಸ್ಯೆ , ಏನಾದರು ನಿನ್ನ ಹೆಂಡತಿನ ಆ ಫ್ಲ್ಯೆಟ ನವರಿಗೆ ತೋರಿಸಿದ್ದೀಯ ಎಂದು ಕೇಳಿದ ಮಂಜ.
ನಾನು ಅದೇ ಇರಬೇಕು ನಿನ್ನ ಹೆಂಡತಿ(ಅವಳ ಧಡೂತಿ ದೇಹ...) ನೋಡಿ ಫ್ಲ್ಯೆಟ ಕ್ಯಾನ್ಸಲ್ ಮಾಡಿರಬೇಕು ಎಂದೇ.
ಸುಬ್ಬನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.
ನಿಮ್ಮಿಬ್ಬರಿಗೂ ನನ್ನನ್ನ ಕಂಡ್ರೆ ಅಷ್ಟೇ ಮಕ್ಳ. ನಿಮಗೆ ಇದೆ ಜಾತ್ರೆ ಬರಲಿ 2012 ಅವಾಗ ನಿಮಗ ಗೊತ್ತು ಆಗ್ತದ ಎಂದ.
ಏನಪ್ಪಾ ಗೊತ್ತಾಗೋದು ಹೇಳು ಎಂದು ಇಬ್ಬರು ಕೇಳಿದೆವು.
ಆಗ ಸುಬ್ಬ 2012 Dec 21 ಎಲ್ಲರು ಪ್ರಳಯ ಆಗಿ ಸಾಯಿತರಲ್ಲ ಅವಾಗ ನೀವೇ ಮೊದಲು ಸಾಯೋದು ಮೊದಲು, ನನ್ನ ಹಾಗೆ ಎಷ್ಟು ಜನ ನಿಮ್ಮ ಮೇಲೆ ಶಾಪ ಹಾಕಿರ್ತಾರೆ. ಬರಿ ಜನರನ್ನು ಪಿಡಿಸೋದೆ ನಿಮ್ಮ ಕೆಲಸ ಎಂದ ಸುಬ್ಬ.
ಮಂಜ ಆಯಿತಪ್ಪ ನಾವೇ ಸಾಯಿತಿವಿ ನಿನ್ನ ಸಮಸ್ಯೆ ಏನು?. ನೀನು ಹೋಗೋ ಊರಿಗೆ ಫ್ಲ್ಯೆಟ ಇಲ್ಲ ಏನು ಮತ್ತೆ. ಇದನ್ನು .ಅರೇಂಜ್ ಮಾಡು ಎಂದರೇ ನಮ್ಮ ಕಡೆ ಆಗುದಿಲ್ಲ ನೋಡು ಮತ್ತೆ ಎಂದ.
ನಾನು ಗಗನ ಸಖಿಯರು ಇಲ್ಲವೇನೋ ಆ ಫ್ಲ್ಯೆಟ ಅಲ್ಲಿ ಎಂದೇ.
ನಿಮಗೆ ಹೇಳೋದು ಒಂದೇ "ಆನಿಗೆ ಚಡ್ಡಿ ಹೊಲಸೋದು ಒಂದೇ" ಎಂದು ಎದ್ದು ಮನೆಗೆ ಹೋಗಲು ಅಣಿಯಾದ.
ಹೊ ಹಂಗೆ ಏನು ರೆಡೀಮೇಡ್ ತೆಗೆದುಕೊಳ್ಳುವದಿಲ್ಲ ಎಂದ ಮಂಜ. ಮತ್ತೆ ನೀನು ಒಂಟೆ ಮಹಾರಾಜ ಹೊಲಸಿಕೊಳ್ಳುತ್ತೀಯೋ ಇಲ್ಲವಾ ರೆಡೀಮೇಡೋ.... ಎಂದ ಮಂಜ.
ಆಗ ಸುಬ್ಬ ಹೌದು ಕಣ್ರೋ ನನ್ನ ಹೆಂಡತಿ ಸ್ವಲ್ಪ ದಪ್ಪ ಅದಕ್ಕೆ ಅವಳನ್ನ ಆನೆ ಅಂತ ಇದ್ದೀರ ಎಂದ. ನಾವೆಲ್ಲಿ ಅಂದೆವು ನೀನೆ ತಾನೇ ಆನೆಗೆ ಚಡ್ಡಿ ಹೋಲಿಸೋ ಮಾತು ಆಡಿದ್ದು ಎಂದ ಮಂಜ.
ನಾನು ಒಳಗೊಳಗೆ ನಗುತ್ತಿದ್ದೆ.
ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಬೇರೆದೆ ಚಿಂತೆ ...ಹಾಗಾಯಿತು ನಿಮ್ಮದು ಎಂದ ಸುಬ್ಬ.
ಆಯಿತು ಈಗ ನಿನ್ನ ಸಮಸ್ಯೆ ಏನು ಹೇಳು ಎಂದೆ.
ಆಗ ಸುಬ್ಬ ೨೦೧೨ ಕ್ಕೆ ಎಲ್ಲರೂ ಸತ್ತು ಹೋಗುತ್ತೇವೆ ಕಣೋ. ಇನ್ನೂ ಒಂದು ಫ್ಲೈಟ್ ಅಥವಾ ಮನೆ ಸಹಿತ ಮಾಡ್ಲಿಕ್ಕೆ ಆಗಲಿಲ್ಲ ಎಂದ ಸುಬ್ಬ.
ಆಗ ನಮ್ಮಿಬ್ಬರಿಗೂ ನಗು ತಡಯಲಿಕ್ಕೆ ಆಗದೆ ಜೋರಾಗಿ ನಕ್ಕೆವು. ಅದು ಫ್ಲೈಟ್ ಅಲ್ಲ ಕಣೋ ಸುಬ್ಬ ಅದು ಫ್ಲಾಟ್ ಎಂದು ಎಂದೆ.
ಆಗ ಮಂಜ ಸುಮ್ಮನಿರಲಾರದೇ ಹಾಗೇನೂ ಆಗುವದಿಲ್ಲ ಅದೆಲ್ಲ ಸುಮ್ನೇ ಹಬ್ಬಿಸಿದ್ದಾರೆ. "ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ" ಹಾಗಾಯಿತು ನಿನ್ನ ಕತೆ ಅಷ್ಟು ನಮ್ಮ ಕೈ ಮೀರಿ ಆಯಿತು ಎಂದರೆ. ನಿನಗೆ ಬೇಕಾಗುವದು ಫ್ಲೈಟ್ ಮತ್ತೆ ಫ್ಲಾಟ್ ಅಲ್ಲ ಕಣೋ ಸುಬ್ಬ 6 X 3 ನಿನ್ನ ಹೆಂಡತಿಗೆ ಸ್ವಲ್ಪ ಜ್ಯಾಸ್ತಿ .... ಎನ್ನುವಷ್ಟರಲ್ಲೇ ಸುಬ್ಬ ಕೋಪದಿಂದ ಮಂಜನನ್ನು ಬೈದು ಮನೆಗೆ ಸೇರಿದ.
ಹೀಗೆ ನಮ್ಮ ಸುಬ್ಬ ಬೇರೆ ಬೇರೆ ವಿಷಯ ತಲೆಯಲ್ಲಿ ಹುಳ ಬಿಟ್ಟು ಕೊಳ್ಳುವ ಸ್ವಭಾವ. ಒಂದು ದಿವಸ ಅಕೌಂಟ್ಸ್ ಟ್ಯಾಲೀ ಆಗಿದ್ದಿಲ್ಲ. ಹಾಗೆ ಯೋಚನೆ ಮಾಡುತ್ತಾ ಆಫೀಸದಿಂದ ಮನೆಗೆ ಬಂದ. ಹೆಂಡತಿ ಪೇಟೆಗೆ ಕರೆದುಕೊಂಡು ಹೋಗು ಎಂದು ಹೇಳಿದಳು. ಅವನು ಅದೇ ಗುಂಗಿನಲ್ಲಿ ಅವಳನ್ನು ಕರೆದು ಕೊಂಡು ಹೋಗಿದ್ದ. ಅವಳು ಸಾಮಾನು ತರಲು ಬೇರೆ ಅಂಗಡಿ ಹೋದಾಗ, ಏನೋ ವಿಚಾರ ಹೊಳೆದಿದೆ. ಕೂಡಲೇ ಆಫೀಸಗೆ ಹೋಗಿ ಅಕೌಂಟ್ಸ್ ಟ್ಯಾಲೀ ಮಾಡುತ್ತಾ ಕುಳಿತು ಬಿಟ್ಟಿದ್ದ. ಅನಂತರ ಹೆಂಡತಿಯ ನೆನಪಾಗಿ ಪೇಟೆ ಪೂರ್ತಿ ಸುತ್ತಿ ಬಂದಿದ್ದ. ಹೆಂಡತಿಗೆ ಕೋಪ ಬಂದು ಇವನ ಸಹವಾಸವೇ ಬೇಡ ಎಂದು ತವರು ಮನೆಗೆ ಹೋಗಿಬಿಟ್ಟಿದ್ದಳು. ಮತ್ತೆ ಸಮಜಾಯಿಸಿ ಮನೆಗೆ ಕರೆದುಕೊಂಡು ಬಂದಿದ್ದ.
ಇಷ್ಟೇ ಅಲ್ಲ ಅವನು ಕಂಪ್ಯೂಟರ್ ನಲ್ಲಿ ಲೆಕ್ಕ ಸರಿಯಾಗಿ ಇದೆಯೋ ಇಲ್ಲವೋ ಎಂದು ತಾಳೆ ಹಾಕುವದಕ್ಕೆ ಕ್ಯಾಲ್ಕ್ಯುಲೇಟರ್ ಬಳುಸುತ್ತಾನೆ.
ಸುಬ್ಬನ ಫ್ಲೈಟ್ ರಾತ್ರಿ ಪೂರ್ತಿ ನಮ್ಮ ತಲೆಯಲ್ಲಿ....ಹಾರಾಡುತಿತ್ತು ಲ್ಯಾಂಡಿಂಗ್ ಆಗದೆ.
ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.
ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ ಸಹಿತ ಬುಕ್ ಮಾಡಿಲ್ಲ ಎಂದ.
ಏನು ಹನಿಮೂನಾ ಮಜಾ ಮಾಡು. ಏನು ದುಡ್ಡು ಗಿಡ್ಡು ಬೇಕೇನು? ಎಂದು ಮತ್ತೆ ಕೇಳಿದ ಮಂಜ.
ಇಲ್ಲ ಎಂದ ಪೇಲು ಮುಖದಿಂದ ಸುಬ್ಬ.
ಏನಪ್ಪಾ ಮತ್ತೆ ನಿನ್ನ ಸಮಸ್ಯೆ , ಏನಾದರು ನಿನ್ನ ಹೆಂಡತಿನ ಆ ಫ್ಲ್ಯೆಟ ನವರಿಗೆ ತೋರಿಸಿದ್ದೀಯ ಎಂದು ಕೇಳಿದ ಮಂಜ.
ನಾನು ಅದೇ ಇರಬೇಕು ನಿನ್ನ ಹೆಂಡತಿ(ಅವಳ ಧಡೂತಿ ದೇಹ...) ನೋಡಿ ಫ್ಲ್ಯೆಟ ಕ್ಯಾನ್ಸಲ್ ಮಾಡಿರಬೇಕು ಎಂದೇ.
ಸುಬ್ಬನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.
ನಿಮ್ಮಿಬ್ಬರಿಗೂ ನನ್ನನ್ನ ಕಂಡ್ರೆ ಅಷ್ಟೇ ಮಕ್ಳ. ನಿಮಗೆ ಇದೆ ಜಾತ್ರೆ ಬರಲಿ 2012 ಅವಾಗ ನಿಮಗ ಗೊತ್ತು ಆಗ್ತದ ಎಂದ.
ಏನಪ್ಪಾ ಗೊತ್ತಾಗೋದು ಹೇಳು ಎಂದು ಇಬ್ಬರು ಕೇಳಿದೆವು.
ಆಗ ಸುಬ್ಬ 2012 Dec 21 ಎಲ್ಲರು ಪ್ರಳಯ ಆಗಿ ಸಾಯಿತರಲ್ಲ ಅವಾಗ ನೀವೇ ಮೊದಲು ಸಾಯೋದು ಮೊದಲು, ನನ್ನ ಹಾಗೆ ಎಷ್ಟು ಜನ ನಿಮ್ಮ ಮೇಲೆ ಶಾಪ ಹಾಕಿರ್ತಾರೆ. ಬರಿ ಜನರನ್ನು ಪಿಡಿಸೋದೆ ನಿಮ್ಮ ಕೆಲಸ ಎಂದ ಸುಬ್ಬ.
ಮಂಜ ಆಯಿತಪ್ಪ ನಾವೇ ಸಾಯಿತಿವಿ ನಿನ್ನ ಸಮಸ್ಯೆ ಏನು?. ನೀನು ಹೋಗೋ ಊರಿಗೆ ಫ್ಲ್ಯೆಟ ಇಲ್ಲ ಏನು ಮತ್ತೆ. ಇದನ್ನು .ಅರೇಂಜ್ ಮಾಡು ಎಂದರೇ ನಮ್ಮ ಕಡೆ ಆಗುದಿಲ್ಲ ನೋಡು ಮತ್ತೆ ಎಂದ.
ನಾನು ಗಗನ ಸಖಿಯರು ಇಲ್ಲವೇನೋ ಆ ಫ್ಲ್ಯೆಟ ಅಲ್ಲಿ ಎಂದೇ.
ನಿಮಗೆ ಹೇಳೋದು ಒಂದೇ "ಆನಿಗೆ ಚಡ್ಡಿ ಹೊಲಸೋದು ಒಂದೇ" ಎಂದು ಎದ್ದು ಮನೆಗೆ ಹೋಗಲು ಅಣಿಯಾದ.
ಹೊ ಹಂಗೆ ಏನು ರೆಡೀಮೇಡ್ ತೆಗೆದುಕೊಳ್ಳುವದಿಲ್ಲ ಎಂದ ಮಂಜ. ಮತ್ತೆ ನೀನು ಒಂಟೆ ಮಹಾರಾಜ ಹೊಲಸಿಕೊಳ್ಳುತ್ತೀಯೋ ಇಲ್ಲವಾ ರೆಡೀಮೇಡೋ.... ಎಂದ ಮಂಜ.
ಆಗ ಸುಬ್ಬ ಹೌದು ಕಣ್ರೋ ನನ್ನ ಹೆಂಡತಿ ಸ್ವಲ್ಪ ದಪ್ಪ ಅದಕ್ಕೆ ಅವಳನ್ನ ಆನೆ ಅಂತ ಇದ್ದೀರ ಎಂದ. ನಾವೆಲ್ಲಿ ಅಂದೆವು ನೀನೆ ತಾನೇ ಆನೆಗೆ ಚಡ್ಡಿ ಹೋಲಿಸೋ ಮಾತು ಆಡಿದ್ದು ಎಂದ ಮಂಜ.
ನಾನು ಒಳಗೊಳಗೆ ನಗುತ್ತಿದ್ದೆ.
ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಬೇರೆದೆ ಚಿಂತೆ ...ಹಾಗಾಯಿತು ನಿಮ್ಮದು ಎಂದ ಸುಬ್ಬ.
ಆಯಿತು ಈಗ ನಿನ್ನ ಸಮಸ್ಯೆ ಏನು ಹೇಳು ಎಂದೆ.
ಆಗ ಸುಬ್ಬ ೨೦೧೨ ಕ್ಕೆ ಎಲ್ಲರೂ ಸತ್ತು ಹೋಗುತ್ತೇವೆ ಕಣೋ. ಇನ್ನೂ ಒಂದು ಫ್ಲೈಟ್ ಅಥವಾ ಮನೆ ಸಹಿತ ಮಾಡ್ಲಿಕ್ಕೆ ಆಗಲಿಲ್ಲ ಎಂದ ಸುಬ್ಬ.
ಆಗ ನಮ್ಮಿಬ್ಬರಿಗೂ ನಗು ತಡಯಲಿಕ್ಕೆ ಆಗದೆ ಜೋರಾಗಿ ನಕ್ಕೆವು. ಅದು ಫ್ಲೈಟ್ ಅಲ್ಲ ಕಣೋ ಸುಬ್ಬ ಅದು ಫ್ಲಾಟ್ ಎಂದು ಎಂದೆ.
ಆಗ ಮಂಜ ಸುಮ್ಮನಿರಲಾರದೇ ಹಾಗೇನೂ ಆಗುವದಿಲ್ಲ ಅದೆಲ್ಲ ಸುಮ್ನೇ ಹಬ್ಬಿಸಿದ್ದಾರೆ. "ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ" ಹಾಗಾಯಿತು ನಿನ್ನ ಕತೆ ಅಷ್ಟು ನಮ್ಮ ಕೈ ಮೀರಿ ಆಯಿತು ಎಂದರೆ. ನಿನಗೆ ಬೇಕಾಗುವದು ಫ್ಲೈಟ್ ಮತ್ತೆ ಫ್ಲಾಟ್ ಅಲ್ಲ ಕಣೋ ಸುಬ್ಬ 6 X 3 ನಿನ್ನ ಹೆಂಡತಿಗೆ ಸ್ವಲ್ಪ ಜ್ಯಾಸ್ತಿ .... ಎನ್ನುವಷ್ಟರಲ್ಲೇ ಸುಬ್ಬ ಕೋಪದಿಂದ ಮಂಜನನ್ನು ಬೈದು ಮನೆಗೆ ಸೇರಿದ.
ಹೀಗೆ ನಮ್ಮ ಸುಬ್ಬ ಬೇರೆ ಬೇರೆ ವಿಷಯ ತಲೆಯಲ್ಲಿ ಹುಳ ಬಿಟ್ಟು ಕೊಳ್ಳುವ ಸ್ವಭಾವ. ಒಂದು ದಿವಸ ಅಕೌಂಟ್ಸ್ ಟ್ಯಾಲೀ ಆಗಿದ್ದಿಲ್ಲ. ಹಾಗೆ ಯೋಚನೆ ಮಾಡುತ್ತಾ ಆಫೀಸದಿಂದ ಮನೆಗೆ ಬಂದ. ಹೆಂಡತಿ ಪೇಟೆಗೆ ಕರೆದುಕೊಂಡು ಹೋಗು ಎಂದು ಹೇಳಿದಳು. ಅವನು ಅದೇ ಗುಂಗಿನಲ್ಲಿ ಅವಳನ್ನು ಕರೆದು ಕೊಂಡು ಹೋಗಿದ್ದ. ಅವಳು ಸಾಮಾನು ತರಲು ಬೇರೆ ಅಂಗಡಿ ಹೋದಾಗ, ಏನೋ ವಿಚಾರ ಹೊಳೆದಿದೆ. ಕೂಡಲೇ ಆಫೀಸಗೆ ಹೋಗಿ ಅಕೌಂಟ್ಸ್ ಟ್ಯಾಲೀ ಮಾಡುತ್ತಾ ಕುಳಿತು ಬಿಟ್ಟಿದ್ದ. ಅನಂತರ ಹೆಂಡತಿಯ ನೆನಪಾಗಿ ಪೇಟೆ ಪೂರ್ತಿ ಸುತ್ತಿ ಬಂದಿದ್ದ. ಹೆಂಡತಿಗೆ ಕೋಪ ಬಂದು ಇವನ ಸಹವಾಸವೇ ಬೇಡ ಎಂದು ತವರು ಮನೆಗೆ ಹೋಗಿಬಿಟ್ಟಿದ್ದಳು. ಮತ್ತೆ ಸಮಜಾಯಿಸಿ ಮನೆಗೆ ಕರೆದುಕೊಂಡು ಬಂದಿದ್ದ.
ಇಷ್ಟೇ ಅಲ್ಲ ಅವನು ಕಂಪ್ಯೂಟರ್ ನಲ್ಲಿ ಲೆಕ್ಕ ಸರಿಯಾಗಿ ಇದೆಯೋ ಇಲ್ಲವೋ ಎಂದು ತಾಳೆ ಹಾಕುವದಕ್ಕೆ ಕ್ಯಾಲ್ಕ್ಯುಲೇಟರ್ ಬಳುಸುತ್ತಾನೆ.
ಸುಬ್ಬನ ಫ್ಲೈಟ್ ರಾತ್ರಿ ಪೂರ್ತಿ ನಮ್ಮ ತಲೆಯಲ್ಲಿ....ಹಾರಾಡುತಿತ್ತು ಲ್ಯಾಂಡಿಂಗ್ ಆಗದೆ.
Tuesday, November 10, 2009
ರಾಹು ಕೇತು ಮನೋಜ ಮನೆಗೆ ಹೋದಾಗ....
ನಾನು ಮತ್ತೆ ಮಂಜ ಒಂದು ದಿವಸ ಮನೋಜನ ಮನೆಗೆ ಹೋಗಬೇಕೆಂದು ನಿರ್ಧರಿಸಿದೆವು. ಮನೋಜನಿಗೆ ಮೊದಲೇ ಫೋನ್ ಮಾಡಿ ಅವನ ಹೆಂಡತಿಯ ನಮ್ಮ ಮೇಲೆ ಇರುವ ಕೋಪದ ಬಗ್ಗೆ ಕೇಳಿ ತಿಳಿದುಕೊಂಡು ಆನಂತರನೇ ಅವನ ಮನೆಗೆ ಹೋಗುವುದೆಂದು ನಿರ್ಧಾರ ಮಾಡಿದೆವು. ಮನೋಜನ ಮನೆ ಸಮೀಪ ಒಂದು ದೊಡ್ಡದಾದ ಕ್ಯು ಇತ್ತು, ಅದು ಯಾವುದು ನೀರಿನ ಅಥವಾ ಸಿಮೇಯೆಣ್ಣೆ ಕ್ಯು ಇರಬೇಕೆಂದು ನಾವು ಗೇಟ್ ಮುಂದೆ ಹೋಗುತ್ತಿದ್ದಾಗ ಗೊತ್ತಾಯಿತು ಅದು ಶಾಸ್ತ್ರ ಕೇಳಲು ಬಂದ ಜನರ ಸಾಲು ಎಂದು. ಒಬ್ಬ ಹಿರಿಯರು "ರೀ ಸಾಲಿನಲ್ಲಿ ಬನ್ನಿರಿ ಎಂದರು". ಅವರ ಮಾತು ಕೇಳಿ ನಾವು ಮನೋಜನ ಗೆಳೆಯರು ಎಂದು ಹೇಳಿದೆವು. ಆದರು ನಮ್ಮನ್ನು ಒಳಗೆ ಬಿಡಲಿಲ್ಲ. ಆಗ ಆ ಹಿರಿಯರು ನಾನು ಅವರ ಸಂಭಂದಿನೆ ಸಾಲಿನಲ್ಲಿ ಬರುತ್ತಿಲ್ಲವಾ? ಎಂದು ವ್ಯಂಗ್ಯವಾಗಿ ನುಡಿದರು. ಮತ್ತೆ ಸಾಲಿನಲ್ಲಿ ಇದ್ದ ಎಲ್ಲ ಜನರು ನಮ್ಮನ್ನು ಗದರಿಸಿ ಸಾಲಿನಲ್ಲಿ ಬರಬೇಕೆಂದು ಆಜ್ಞೆ ಮಾಡಿದರು. ಮತ್ತೆ ಅವರ ಸೆಕ್ಯೂರಿಟಿ ಗಾರ್ಡ್ ಕೂಡ ನಮ್ಮನ್ನು ಸಾಲಿನಲ್ಲಿ ತಂದು ನಿಲ್ಲಿಸಿದ. ನಮ್ಮಿಬ್ಬರಿಗೂ ಏನು ಮಾಡಬೇಕೆಂಬುದೇ ತೋಚದಾಗಿತ್ತು. ಆಗ ಮಂಜ ಮನೋಜನ ಮೊಬೈಲ್ ಫೋನ್ ಮಾಡಿದ ಆದರೆ ಅದು ಸ್ವಿಚ್ ಆಫ್ ಆಗಿತ್ತು. ಆಗ ತಾನೆ ಬಿಸಿಲಿನ ಬೇಗೆ ಏರುತಿತ್ತು. ನಾನು ಮತ್ತೆ ಮಂಜ ಬೆವರಿನಿಂದ ಸ್ನಾನ ಮಾಡಿದ ಹಾಗೆ ಆಗಿತ್ತು. ಮುಂದೆ ಇರುವ ವ್ಯಕ್ತಿ ಬೇಗನೆ ಎದ್ದು ಹಳ್ಳಿಯಿಂದ ಇಲ್ಲಿಗೆ ಬಂದಿದ್ದ. ಅವನು ಸ್ನಾನ ಮಾಡಿರಲಿಲ್ಲವಾದ್ದರಿಂದ ಬೆವರಿನ ವಾಸನೆ ಇಂದ ಕೆಟ್ಟದಾಗಿ ನಾರುತಿದ್ದ. ಮತ್ತೆ ನಮಗೆ ಹೇಳಿದ "ಸ್ವಾಮಿ ಈ ಜ್ಯೋತಿಷಿಗಳು ತುಂಬ ಶ್ಯಾಣ್ಯಾ ರೀ" ಎಂದ. ನಾನು ನೋಡಿರಿ ಹಳ್ಳಿಯಿಂದ ಬಂದು ಇಲ್ಲೇ ಶಾಸ್ತ್ರ ಕೇಳೋದು ಎಂದ. ಅವನ ಬಾಯಿ ವಾಸನೆ ಇಂದ ನಮಗೆ ವಾಂತಿ ಬರುವುದೊಂದೇ ಬಾಕಿ. ಮಂಜ ಸುಮ್ಮನಿರದೆ ಏನು ಶಾಸ್ತ್ರ ಕೇಳುವುದಕ್ಕೆ ಬಂದಿದ್ದಿರಾ? ಎಂದು ಕೇಳಿದ. ಅದಕ್ಕೆ ಆ ಮನುಷ್ಯ ಏನಿಲ್ಲ ಶಾನೆ ದಿವಸದಿಂದ ಹೊಟ್ಟೆ ನೋವು ಅದಕ್ಕೆ ಎಂದ. ರೀ ನಿಮಗೆ ಬೇಕಾಗಿರೋದು ಶಾಸ್ತ್ರ ಅಲ್ಲರಿ ಶಸ್ತ್ರ ಚಿಕಿತ್ಸೆ ಹೋಗಿ ಯಾವುದಾದರೂ ಡಾಕ್ಟರ ಬಳಿ ಚಿಕಿತ್ಸೆ ಪಡಿರಿ ಎಂದ ಮಂಜ. ಆಗ ಆ ಮನುಷ್ಯ ರೀ ಸುಮ್ನಿರಿ ರಾಯರ ಬಗ್ಗೆ ಹಂಗೆಲ್ಲ ಮಾತನಾಡಬೇಡಿ. ಅವರು ತುಂಬಾ ಜಾಣರು. ಡಾಕ್ಟರ ಕಡೆ ಹೋದ್ರ ಇದ್ದಿರೋ ದುಡ್ಡು ಮತ್ತೆ ಹೊಟ್ಟಿ ಒಳಗಿನ ಸಾಮಾನು ಎಲ್ಲ ತೋಗೊತಾರ. ಆ ಮನುಷ್ಯ ಪ್ರತಿ ಬಾರಿ ಮಾತನಾಡುವಾಗಲು ಅವನ ಬಾಯಿಯಿಂದ ವಾಸನೆ ಬರುತಿತ್ತು. ಮತ್ತೆ ನಮ್ಮಿಬ್ಬರ ಮೇಲೆ ಆ ಉರಿಬಿಸಿಲಲ್ಲೂ ಮುಂಗಾರು ಮಳೆ (ಉಗಳಿನ ಹನಿಗಳು). ನಾನು ಸುಮ್ಮನೆ ಇರು ಎಂದರು ಮಂಜ ಕೇಳದೆ ನಿನ್ನ ಒಳಗ ಏನು ಸಾಮಾನು ಅದ ಹೇಳು? ಎಂದ. ಛಿ ನನಗ ನಾಚಿಗಿ ಆಗ್ತೈತ್ರಿ ಎಂದ. ಏನು ಹೇಳು ನಾಚಿಗಿ ಯಾಕ ಎಂದು ಹುರುದುಂಬಿಸಿದ ಮೇಲೆ. ಅದು ಅದು ಕಿಡ್ನಿ ಎಂದ. ನಾವಿಬ್ಬರು ಹಾಗೆ ಮುಗುಳ್ನಕ್ಕೆವು. ಆದರು ಸುಮ್ಮನೆ ಬಿಡದೆ ನಮ್ಮ ತಲೆ ತಿನ್ನ ಹತ್ತಿದ ಆ ಮನುಷ್ಯ. ಆಗ ನಾನು ಹೇಳಿದೆ ಲೇ ಇನ್ನೊ ಸ್ವಲ್ಪ ಬೇಗನೆ ಬರಬಹುದಿತ್ತು ಇವನ ಕಾಟನಾದರೂ ತಪ್ಪುತ್ತಿತ್ತು. ನಾನು ಆಟೋಕೆ ಹೋಗೋಣ ಎಂದೆ ನೀನು ಬೇಡ ಅಂದೇ ನೋಡು ಈಗ ಪರಿಸ್ಥಿತಿ ಎಂದೆ. ಆಗ ಮಂಜ ನನಗೇನು ಗೋತ್ತಾಪ್ಪ ಈ ಮಹರಾಯ ಇಷ್ಟು ಬ್ಯುಸಿ ಮನುಷ್ಯ ಎಂದು ಅಂದ.
ಏನು ಮಾಡಲಾರದೆ ಉರಿಬಿಸಿಲಲ್ಲಿ ಎರಡು ಘಂಟೆ ಕ್ಯುನಲ್ಲಿ ನಿಂತು ಒಳಗಡೆ ಹೋದೆವು.
ಮನೋಜನ ಥೇಟ ಸ್ವಾಮೀಜಿಯಂತೆ ವೇಷ ಧರಿಸಿದ್ದ. ಮನೆ ತುಂಬ ದೇವರ ಫೋಟೋಗಳು. ಯಾವದೋ ಒಂದು ಮಠಕ್ಕೆ ಹೋದ ಹಾಗೆ ಅನ್ನಿಸಿತು. ನಮ್ಮನ್ನು ನೋಡಿ ಮನೋಜ "ಲೇ ಯಾವಾಗ ಬಂದಿರೋ ಎಂದು ಕೇಳಿದ". ನನಗೆ ಮತ್ತೆ ಮಂಜನಿಗೆ ತುಂಬ ಕೋಪ ಬಂದಿತ್ತು ಬಂದು ಎರಡು ಘಂಟೆ ಆಯಿತು. ನಿನ್ನ ಕ್ಯು ನಲ್ಲಿ ಬರುವ ಹೊತ್ತಿಗೆ ಇಷ್ಟೊತ್ತು ಆಯಿತು ಎಂದೆ.ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಇಷ್ಟು ಕಷ್ಟ ಪಟ್ಟಿರಲಿಲ್ಲ ಎಂದ ಮಂಜ. ಆಗ ಮನೋಜ ಸಾರೀ ಕಣ್ರೋ ನಾನು ನನ್ನ ಸೆಕ್ಯೂರಿಟಿಯವನಿಗೆ ಹೇಳುವುದನ್ನು ಮರೆತೆ ಅದಕ್ಕೆ ನಿಮಗೆ ಅವ ಒಳಗೆ ಬಿಡಲಿಲ್ಲ ಎಂದು ತಾನೆ ಹೋಗಿ ಎರಡು ಕಪ್ ಕಾಫಿ ತೆಗೆದು ಕೊಂಡು ಬಂದ. ಆಗ ನಾನು ಮತ್ತೆ ಮಂಜ ನಮಗೆ ಸ್ವಲ್ಪ ಕೈ ಕಾಲು ತೊಳೆದು ಬರಬೇಕೆಂದು ಹೋಗಿ ಪೂರ್ತಿ ಬಕೆಟ್ ತಣ್ಣೀರು ಮೈಯಲ್ಲ ಸುರಿದು ಕೊಂಡು ಬಂದೆವು. ಕಾಫಿ ಆಗಲೇ ತಂಪಾಗಿತ್ತು ಆದರು ಅದನ್ನೇ ಹೀರಿದೆವು. ಮತ್ತೆ ಹೇಗೆ ಬಂದಿರಿ ಎಂದ ಮನೋಜ. ಆಗ ಮಂಜ ಬಸ್ನಲ್ಲಿ ಎಂದಾ. ನೆರೆ ಸಂತ್ರಸ್ತರ ನಿಧಿಗೆ ಚೆಕ್ ಏನಾದರು ಕೊಡುವೆಯ ಎಂದು ಕೇಳಿದ ಮಂಜ. ಆಗ ಮೊನೋಜ ನಾನು ಆಗಲೇ ಕೊಟ್ಟಿದ್ದೇನೆ ನೋಡಿ ಇಲ್ಲಿದೆ ಬ್ಯಾಂಕ್ ಸ್ಟೇಟ್ಮೆಂಟ್ ಎಂದು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿದ. ಆಗ ಮನೋಜ "ಲೇ ನೀವು ಆಟೋ ನಲ್ಲೆ ಬರಬೇಕಿತ್ತು" ಬೇಗ ಬರುತ್ತಿದ್ದಿರಿ ಎಂದ. ನಾನು ಹೇಳಿದೆ ಮಂಜ ಕೇಳಲಿಲ್ಲ ಎಂದೆ. ಆಗ ಮಂಜ ಯಾಕಪ್ಪ ಅಷ್ಟು ದುಡ್ಡು ವೇಸ್ಟ್ ಎಂದ. ಅದಕ್ಕೆ ಮನೋಜ ಎಲ್ಲರು ನಿನ್ನ ಹಾಗೆ ಯೋಚನೆ ಮಾಡ್ತಾ ಹೋದರೆ ಈ ಆಟೋನವರು ಹೇಗೆ ಬದುಕಬೇಕೋ ಎಂದು ನಮಗೆ ಬುದ್ಧಿವಾದ ಹೇಳಿದ. ಆಗಲೇ ನಮಗೆ ಗೊತ್ತಾಗಿತ್ತು ಇವನ ೨೦ ಜನರಲ್ಲಿ ೧೨ ರಷ್ಟು ಬರಿ ಆಟೋ ಚಾಲಕರೆ ಇದ್ದರು. ಇವನು ಹೇಳಿದ್ದು ತನ್ನ ವ್ಯವಹಾರ ಚೆನ್ನಾಗಿರಲೆಂದು ಎಂದು ತಿಳಿಯಿತು. ಮನೋಜ ಇನ್ನು ಇಬ್ಬರು ಇದ್ದಾರೆ ಮುಗಿಸಿ ಬಿಡುತ್ತೇನೆ ಎಂದ. ನಾವು ಆಯಿತು ಎಂದು ಅಲ್ಲೇ ಮನೆ ಮುಂದೆ ಇರುವ ಚೇರ್ ಮೇಲೆ ಕುಳಿತೆವು. ಆಗ ಒಬ್ಬ ಮನುಷ್ಯ ಬಂದು ನಮಗೆ ಕಾಲು ಬಿದ್ದು ತನ್ನ ಸಮಸ್ಯೆ ಹೇಳಲಾರಮ್ಬಿಸಿದ. ನಾವು ಏನು ತೋಚದೆ ಅವನಿಗೆ ಒಳಗೆ ಹೋಗಪ್ಪ ನಿಮ್ಮ ಸ್ವಾಮೀಜಿ ಇದ್ದಾರೆ ಎಂದು ಕಳುಹಿಸಿದೆವು.
ಆಗ ಹೋಗುತ್ತಲೇ ಆ ಮನುಷ್ಯನ ಜಾತಕ ನೋಡಿ .. ಮನೋಜ
ನಿನಗೆ ಗ್ರಹಗಳು ಚೆನ್ನಾಗಿಲ್ಲ.. ನೀನು ಬುಧ , ಶನಿ ಮತ್ತೆ ಗುರು ಶಾಂತಿ ಮಾಡಿಸಬೇಕು ಎಂದು ಹೇಳಿದ.
ಅದನ್ನು ಮಾಡಿಸಿ ನೀನು ಧರ್ಮಸ್ಥಳಕ್ಕೆ ಹೋಗಿ ನಿನ್ನ ಅಳತೆಯಷ್ಟು ಅಕ್ಕಿ ಕೊಡಬೇಕು ಎಂದ. ಮತ್ತೆ ಮಂತ್ರಾಲಯಕ್ಕೆ ಹೋಗಿ ಅಲ್ಲಿ ಒಬ್ಬ ಆಚಾರ್ಯರಿದ್ದಾರೆ ಅವರ ಹತ್ತಿರ ಒಂದು ವಿಶೇಷ ಪೂಜೆ ಮಾಡಿಸುತ್ತಾರೆ ಬರೀ 10000 ಅಷ್ಟೇ ಎಂದ. ಎಲ್ಲ ಒಳ್ಳೆಯದಾಗುತ್ತೆ ಎಂದ. ಆಗ ಮನುಷ್ಯ ಸರ್ ಇದು ನನ್ನ ಜಾತಕ ಅಲ್ಲ ಇದು ನನ್ನ ಮಾವನವರ ಜಾತಕ ಅವರಿಗೆ ತುಂಬಾ ಹಣವಿದೆ ಅವರು ಯಾವಾಗ ಶಿವನ ಪಾದ ಸೇರುತ್ತಾರೆ ನೋಡಿ ಹೇಳಿ ಎಂದ. ಮೊದಲೇ ಹೇಳಬಾರದ ಎಂದು ಕೋಪಗೊಂಡ ಮನೋಜ. ಯಾಕಪ್ಪ ನಿನ್ನ ಮಾವನ್ನ ಸಾಯಿಸಬೇಕು ಎಂಬ ವಿಚಾರ ಎಂದ. ಅವರ ಆಸ್ತಿ ಎಲ್ಲ ನಂದೇ ಆಗುತ್ತಲ್ಲ ಅದಕ್ಕೆ ...ಎಂದ. ಅದಕ್ಕೆ ಮನೋಜ ಇಂತಹ ಕೆಲಸಕ್ಕೆ ಬೇರೆಯವರನ್ನು ಕೇಳು ನಾನು ಇಂತಹ ಕೀಳು ಕೆಲಸ ಮಾಡುವುದಿಲ್ಲ ಎಂದು ಬೈದು ಕಳುಹಿಸಿದ.
ಇಬ್ಬರನ್ನು ಶಾಸ್ತ್ರ ಹೇಳಿ ಮುಗಿಸಿವಷ್ಟರಲ್ಲಿ ಒಂದು ಘಂಟೆ ಆಗಿತ್ತು. ಮತ್ತೆ ಮನೋಜ ಇಲ್ಲಿಯೇ ಊಟ ಮಾಡಿ ಹೋಗಿ ಎಂದು ಹೇಳಿದ. ನಮಗೂ ಮನೆ ಬಿಟ್ಟು ತುಂಬ ಸಮಯವಾಗಿದ್ದರಿಂದ. ನಾವು ಆಯಿತು ಎಂದು ಹೇಳಿದೆವು. ಆಗ ನಮಗೆ ತಿಳಿಯಿತು ಅವನ ಹೆಂಡತಿನೇ ಅವನ ಗುರು ಎಂದು. ಅಂದರೆ ಊಟ ಹಾಕುವದನ್ನು ಗುಣಿಸಿ ಭಾಗಿಸಿ ಲೆಕ್ಕಾಚಾರ ಹಾಕಿ ನಮಗೆ ಊಟ ಬಡಿಸಿದಳು . ನಮಗೆ ಅನ್ನಿಸಿತು ನಾವಿಬ್ಬರು ಏನು ರಾಹು ಕೇತುಗಳ ಎಂದು. ಕಡೆಗೆ ಮನೆಯ ದಾರಿ ಹಿಡಿದೆವು. ಮನೆ ಸಮೀಪಿಸುತ್ತಿದ್ದಂತೆ ಮತ್ತೆ ಹೊಟ್ಟೆ ಚುರುಗುಡುತಿತ್ತು. ಅನಂತನ ಹೋಟೆಲ್ಗೆ ಹೋಗಿ ಬೆಣ್ಣೆ ದೋಸೆ ತಿಂದು ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದು ಗೂಡು ಸೇರಿಕೊಂಡೆವು.
ಏನು ಮಾಡಲಾರದೆ ಉರಿಬಿಸಿಲಲ್ಲಿ ಎರಡು ಘಂಟೆ ಕ್ಯುನಲ್ಲಿ ನಿಂತು ಒಳಗಡೆ ಹೋದೆವು.
ಮನೋಜನ ಥೇಟ ಸ್ವಾಮೀಜಿಯಂತೆ ವೇಷ ಧರಿಸಿದ್ದ. ಮನೆ ತುಂಬ ದೇವರ ಫೋಟೋಗಳು. ಯಾವದೋ ಒಂದು ಮಠಕ್ಕೆ ಹೋದ ಹಾಗೆ ಅನ್ನಿಸಿತು. ನಮ್ಮನ್ನು ನೋಡಿ ಮನೋಜ "ಲೇ ಯಾವಾಗ ಬಂದಿರೋ ಎಂದು ಕೇಳಿದ". ನನಗೆ ಮತ್ತೆ ಮಂಜನಿಗೆ ತುಂಬ ಕೋಪ ಬಂದಿತ್ತು ಬಂದು ಎರಡು ಘಂಟೆ ಆಯಿತು. ನಿನ್ನ ಕ್ಯು ನಲ್ಲಿ ಬರುವ ಹೊತ್ತಿಗೆ ಇಷ್ಟೊತ್ತು ಆಯಿತು ಎಂದೆ.ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಇಷ್ಟು ಕಷ್ಟ ಪಟ್ಟಿರಲಿಲ್ಲ ಎಂದ ಮಂಜ. ಆಗ ಮನೋಜ ಸಾರೀ ಕಣ್ರೋ ನಾನು ನನ್ನ ಸೆಕ್ಯೂರಿಟಿಯವನಿಗೆ ಹೇಳುವುದನ್ನು ಮರೆತೆ ಅದಕ್ಕೆ ನಿಮಗೆ ಅವ ಒಳಗೆ ಬಿಡಲಿಲ್ಲ ಎಂದು ತಾನೆ ಹೋಗಿ ಎರಡು ಕಪ್ ಕಾಫಿ ತೆಗೆದು ಕೊಂಡು ಬಂದ. ಆಗ ನಾನು ಮತ್ತೆ ಮಂಜ ನಮಗೆ ಸ್ವಲ್ಪ ಕೈ ಕಾಲು ತೊಳೆದು ಬರಬೇಕೆಂದು ಹೋಗಿ ಪೂರ್ತಿ ಬಕೆಟ್ ತಣ್ಣೀರು ಮೈಯಲ್ಲ ಸುರಿದು ಕೊಂಡು ಬಂದೆವು. ಕಾಫಿ ಆಗಲೇ ತಂಪಾಗಿತ್ತು ಆದರು ಅದನ್ನೇ ಹೀರಿದೆವು. ಮತ್ತೆ ಹೇಗೆ ಬಂದಿರಿ ಎಂದ ಮನೋಜ. ಆಗ ಮಂಜ ಬಸ್ನಲ್ಲಿ ಎಂದಾ. ನೆರೆ ಸಂತ್ರಸ್ತರ ನಿಧಿಗೆ ಚೆಕ್ ಏನಾದರು ಕೊಡುವೆಯ ಎಂದು ಕೇಳಿದ ಮಂಜ. ಆಗ ಮೊನೋಜ ನಾನು ಆಗಲೇ ಕೊಟ್ಟಿದ್ದೇನೆ ನೋಡಿ ಇಲ್ಲಿದೆ ಬ್ಯಾಂಕ್ ಸ್ಟೇಟ್ಮೆಂಟ್ ಎಂದು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿದ. ಆಗ ಮನೋಜ "ಲೇ ನೀವು ಆಟೋ ನಲ್ಲೆ ಬರಬೇಕಿತ್ತು" ಬೇಗ ಬರುತ್ತಿದ್ದಿರಿ ಎಂದ. ನಾನು ಹೇಳಿದೆ ಮಂಜ ಕೇಳಲಿಲ್ಲ ಎಂದೆ. ಆಗ ಮಂಜ ಯಾಕಪ್ಪ ಅಷ್ಟು ದುಡ್ಡು ವೇಸ್ಟ್ ಎಂದ. ಅದಕ್ಕೆ ಮನೋಜ ಎಲ್ಲರು ನಿನ್ನ ಹಾಗೆ ಯೋಚನೆ ಮಾಡ್ತಾ ಹೋದರೆ ಈ ಆಟೋನವರು ಹೇಗೆ ಬದುಕಬೇಕೋ ಎಂದು ನಮಗೆ ಬುದ್ಧಿವಾದ ಹೇಳಿದ. ಆಗಲೇ ನಮಗೆ ಗೊತ್ತಾಗಿತ್ತು ಇವನ ೨೦ ಜನರಲ್ಲಿ ೧೨ ರಷ್ಟು ಬರಿ ಆಟೋ ಚಾಲಕರೆ ಇದ್ದರು. ಇವನು ಹೇಳಿದ್ದು ತನ್ನ ವ್ಯವಹಾರ ಚೆನ್ನಾಗಿರಲೆಂದು ಎಂದು ತಿಳಿಯಿತು. ಮನೋಜ ಇನ್ನು ಇಬ್ಬರು ಇದ್ದಾರೆ ಮುಗಿಸಿ ಬಿಡುತ್ತೇನೆ ಎಂದ. ನಾವು ಆಯಿತು ಎಂದು ಅಲ್ಲೇ ಮನೆ ಮುಂದೆ ಇರುವ ಚೇರ್ ಮೇಲೆ ಕುಳಿತೆವು. ಆಗ ಒಬ್ಬ ಮನುಷ್ಯ ಬಂದು ನಮಗೆ ಕಾಲು ಬಿದ್ದು ತನ್ನ ಸಮಸ್ಯೆ ಹೇಳಲಾರಮ್ಬಿಸಿದ. ನಾವು ಏನು ತೋಚದೆ ಅವನಿಗೆ ಒಳಗೆ ಹೋಗಪ್ಪ ನಿಮ್ಮ ಸ್ವಾಮೀಜಿ ಇದ್ದಾರೆ ಎಂದು ಕಳುಹಿಸಿದೆವು.
ಆಗ ಹೋಗುತ್ತಲೇ ಆ ಮನುಷ್ಯನ ಜಾತಕ ನೋಡಿ .. ಮನೋಜ
ನಿನಗೆ ಗ್ರಹಗಳು ಚೆನ್ನಾಗಿಲ್ಲ.. ನೀನು ಬುಧ , ಶನಿ ಮತ್ತೆ ಗುರು ಶಾಂತಿ ಮಾಡಿಸಬೇಕು ಎಂದು ಹೇಳಿದ.
ಅದನ್ನು ಮಾಡಿಸಿ ನೀನು ಧರ್ಮಸ್ಥಳಕ್ಕೆ ಹೋಗಿ ನಿನ್ನ ಅಳತೆಯಷ್ಟು ಅಕ್ಕಿ ಕೊಡಬೇಕು ಎಂದ. ಮತ್ತೆ ಮಂತ್ರಾಲಯಕ್ಕೆ ಹೋಗಿ ಅಲ್ಲಿ ಒಬ್ಬ ಆಚಾರ್ಯರಿದ್ದಾರೆ ಅವರ ಹತ್ತಿರ ಒಂದು ವಿಶೇಷ ಪೂಜೆ ಮಾಡಿಸುತ್ತಾರೆ ಬರೀ 10000 ಅಷ್ಟೇ ಎಂದ. ಎಲ್ಲ ಒಳ್ಳೆಯದಾಗುತ್ತೆ ಎಂದ. ಆಗ ಮನುಷ್ಯ ಸರ್ ಇದು ನನ್ನ ಜಾತಕ ಅಲ್ಲ ಇದು ನನ್ನ ಮಾವನವರ ಜಾತಕ ಅವರಿಗೆ ತುಂಬಾ ಹಣವಿದೆ ಅವರು ಯಾವಾಗ ಶಿವನ ಪಾದ ಸೇರುತ್ತಾರೆ ನೋಡಿ ಹೇಳಿ ಎಂದ. ಮೊದಲೇ ಹೇಳಬಾರದ ಎಂದು ಕೋಪಗೊಂಡ ಮನೋಜ. ಯಾಕಪ್ಪ ನಿನ್ನ ಮಾವನ್ನ ಸಾಯಿಸಬೇಕು ಎಂಬ ವಿಚಾರ ಎಂದ. ಅವರ ಆಸ್ತಿ ಎಲ್ಲ ನಂದೇ ಆಗುತ್ತಲ್ಲ ಅದಕ್ಕೆ ...ಎಂದ. ಅದಕ್ಕೆ ಮನೋಜ ಇಂತಹ ಕೆಲಸಕ್ಕೆ ಬೇರೆಯವರನ್ನು ಕೇಳು ನಾನು ಇಂತಹ ಕೀಳು ಕೆಲಸ ಮಾಡುವುದಿಲ್ಲ ಎಂದು ಬೈದು ಕಳುಹಿಸಿದ.
ಇಬ್ಬರನ್ನು ಶಾಸ್ತ್ರ ಹೇಳಿ ಮುಗಿಸಿವಷ್ಟರಲ್ಲಿ ಒಂದು ಘಂಟೆ ಆಗಿತ್ತು. ಮತ್ತೆ ಮನೋಜ ಇಲ್ಲಿಯೇ ಊಟ ಮಾಡಿ ಹೋಗಿ ಎಂದು ಹೇಳಿದ. ನಮಗೂ ಮನೆ ಬಿಟ್ಟು ತುಂಬ ಸಮಯವಾಗಿದ್ದರಿಂದ. ನಾವು ಆಯಿತು ಎಂದು ಹೇಳಿದೆವು. ಆಗ ನಮಗೆ ತಿಳಿಯಿತು ಅವನ ಹೆಂಡತಿನೇ ಅವನ ಗುರು ಎಂದು. ಅಂದರೆ ಊಟ ಹಾಕುವದನ್ನು ಗುಣಿಸಿ ಭಾಗಿಸಿ ಲೆಕ್ಕಾಚಾರ ಹಾಕಿ ನಮಗೆ ಊಟ ಬಡಿಸಿದಳು . ನಮಗೆ ಅನ್ನಿಸಿತು ನಾವಿಬ್ಬರು ಏನು ರಾಹು ಕೇತುಗಳ ಎಂದು. ಕಡೆಗೆ ಮನೆಯ ದಾರಿ ಹಿಡಿದೆವು. ಮನೆ ಸಮೀಪಿಸುತ್ತಿದ್ದಂತೆ ಮತ್ತೆ ಹೊಟ್ಟೆ ಚುರುಗುಡುತಿತ್ತು. ಅನಂತನ ಹೋಟೆಲ್ಗೆ ಹೋಗಿ ಬೆಣ್ಣೆ ದೋಸೆ ತಿಂದು ನಮ್ಮ ಗ್ರಹಗತಿ ಚೆನ್ನಾಗಿಲ್ಲ ಎಂದು ಗೂಡು ಸೇರಿಕೊಂಡೆವು.
Subscribe to:
Posts (Atom)