Friday, August 28, 2009

ಅಜ್ಜಿಯ ಆವಾಂತರ ....

ನಮ್ಮ ಪಕ್ಕದ ಮನೆಯ ಪಾರ್ವತಮ್ಮನ ಮಗಳಿಗೆ ಒಂದು ವರ ಬಂದಿತ್ತು. ವರ ನೋಡಿ ಹೋದ ಮೇಲೆ. ವರನ ಬಗ್ಗೆ ನಮ್ಮ ಅಮ್ಮ ವಿಚಾರಿಸಿದಾಗ. ಹುಡುಗಿಯ ಅಮ್ಮ ತುಂಬ "ದೊಡ್ಡ ಮನುಷ್ಯರು" ಅವರು ಎಂದರು. ಯಾವ ಅರ್ಥದಲ್ಲಿ ಹೇಳಿದರು ತಿಳಿಯಲಿಲ್ಲ ಎಲ್ಲರು ಬಡಕಲಾಗೆ ಇದ್ದರು. ಅನಂತರ ಗೊತ್ತಾಗಿದ್ದು ದೊಡ್ಡ ಮನುಷ್ಯರು ಎಂದರೆ ದುಡ್ಡಿರುವವರು ಅಂತ. ದೇಹದಿಂದ ದೊಡ್ಡದಾಗಿ ಇದ್ದು, ದುಡ್ಡಿಲ್ಲದವರಿಗೆ ಏನು ಅನ್ನ ಬೇಕು ತಿಳಿಯಲಿಲ್ಲ. ಮತ್ತೆ ತಮ್ಮ ಮಾತಿನ ವರಸೆ ಪ್ರಾರಂಬಿಸಿದರು ಪಾರ್ವತಮ್ಮ "ಅವರ ಮನೆ ದೆವ್ವನಂತ ಮನೆ" ಎಂದರು. ಅಂದರೆ ದೆವ್ವ ವಿರುವ ಮನೆಯೋ ಅಥವಾ ದೆವ್ವಗಳು ಇರುವ ಮನೆಯ(ಅಂದರೆ ತುಂಬ ಅದ್ಭುತವಾದ ಮನೆ ಅಂತ ಅರ್ಥ). ಅವರ ಅತ್ತೆ, ಮಾವ ಬಂಗಾರದಂತವರು.(ನಿಜ ಕಂತೆ ಕಂತೆ ಬಂಗಾರವನ್ನು ಬಾಚಿಕೊಂಡ ಮೇಲೆ ಬಂಗಾರದಂತವರೆ ಆಗುತ್ತಾರೆ ಮನಸಿನಲ್ಲೇ ಅಮ್ಮ ಅಂದಿದ್ದರು ). ಇನ್ನು ವರನ ಬಗ್ಗೆ ಹೇಳುವದಾದರೆ ದೇವರಂತ ಮನುಷ್ಯ ಎಂದರು. ನಿಜ ಸಾಕ್ಷಾತ ಕೃಷ್ಣ ಪರಮಾತ್ಮನ ಪರಾವತಾರ. ನನ್ನ ಮಗಳ ತಿಂಡಿಯನ್ನು ತುಂಬಾ ಮೆಚ್ಚಿದರು ಎಂದರು. ಸರಿ ಕೆರೆತ ಬಂದರೆ ಒಳ್ಳೆಯದು ಎಂದು ಮನಸ್ಸಿನಲ್ಲೇ ಅಮ್ಮ ಗುನಗುಟ್ಟಿದ್ದರು. ಏಕೆಂದರೆ ಇವಳನ್ನು ನನ್ನ ಅಣ್ಣ ಸಂಜೀವನಿಗೆ ಕೊಡಬೇಕೆಂದು ನಾವು ಕೇಳಿದಾಗ ಅವರು ನಕಾರವೆತ್ತಿದ್ದರು. ನಮ್ಮ ಅಜ್ಜಿ ಊರಿನಿಂದ ನಮ್ಮ ಮನೆಗೆ ಬಂದಿದ್ದರು. ಅಜ್ಜಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುವದಿಲ್ಲವಾದ್ದರಿಂದ ಅವರನ್ನು ಹೊರಗೆ ನಾವು ಬಿಡುವದಿಲ್ಲ. ಅಜ್ಜಿ ತುಂಬ ನೇರವಾಗಿ ಮಾತನಾಡುವರು. ಹೀಗೆ ಒಂದು ದಿವಸ ಅಜ್ಜಿ ಮದುವೆಗೆ ಅಂತ ಹೋದವರು ಯಾರದೋ ತಿಥಿ ಮನೆಗೆ ಹೋಗಿ ಊಟ ಮಾಡಿ ಬರುವಾಗ ೧೦೦ ರೂಪಾಯಿಗಳನ್ನು ಅವರಿಗೆ ಕೊಟ್ಟು ಬಂದಿದ್ದರು. ಅದಾದ ಮೇಲೆ ನಮ್ಮ ಅಜ್ಜಿಯನ್ನು ನಾವು ಒಬ್ಬರೇ ಹೊರಗೆ ಹೋಗಲು ಬಿಡುವದಿಲ್ಲ. ಆದರು ನಮ್ಮ ಅಜ್ಜಿ ಹೊರಗೆ ಹೋಗುವದನ್ನು ಮಾತ್ರ ಬಿಟ್ಟಿಲ್ಲ.
ಕಣ್ಣು ಕಾಣದೆ ಇದ್ದರು, ನಮ್ಮ ಅಜ್ಜಿ ತುಂಬ ಗಡಿಬಿಡಿಯಿಂದ ತುಂಬ ಕೆಲಸಗಳನ್ನು ಮಾಡುತ್ತಾರೆ ಮತ್ತು ಎಲ್ಲರನ್ನು ತುಂಬ ಪ್ರೀತಿಯಿಂದ ಹಚ್ಚಿ ಕೊಳ್ಳುತ್ತಾರೆ. ಹೀಗೆ ಅಜ್ಜಿ ಪಕ್ಕದ ಮನೆ ಹುಡುಗಿ ಪ್ರೀತಿಯನ್ನು ತುಂಬ ಹಚ್ಚಿ ಕೊಂಡಿದ್ದರು. ಅನಂತರ ಕೆಲವು ದಿನಗಳಾದ ಮೇಲೆ ಪ್ರೀತಿಯ Engagement ಗೆ ನಮ್ಮ ಅಜ್ಜಿ ಯನ್ನು ಆಹ್ವಾನಿಸಿದ್ದರು. ಅದರೆ ಅಜ್ಜಿಯನ್ನು ನಾವು ಕಳುಹಿಸಲಿಲ್ಲ. Engagement ಆದ ಮೇಲೆ Engagement ಫೋಟೋ ಗಳನ್ನೂ ಪ್ರೀತಿ ನಮ್ಮ ಮನೆಗೆ ಕೊಟ್ಟು ಹೋದಳು. ಅಜ್ಜಿ ಫೋಟೋ ನೋಡಿ "ಏನೇ Engagement ದಿವಸ ಕರಡಿ ಜೊತೆ ಪೂಜೆ ಮಾಡಿಸ್ತಾರೆ ಏನು ಇಲ್ಲಿ ಕಡೆ ಜನ" ಎಂದು ಅಜ್ಜಿ ಅಮ್ಮನಿಗೆ ಕೇಳಿದಳು. ಆಗ ಅಮ್ಮ ಇದು ಕರಡಿ ಅಲ್ಲ ಪ್ರೀತಿಯ ಗಂಡ ಆಗುವವನು ಎಂದು ಹೇಳಿದಾಗ ಅಜ್ಜಿ ಹಾಗಾದರೆ ನಮ್ಮ ಸಂಜೀವನಿಗೆ ಏನು ಕಮ್ಮಿ ಎಂದು ಕೇಳಿದ್ದಳು. ಸಧ್ಯ ಪ್ರೀತಿ ಫೋಟೋ ತೋರಿಸಲು ಖುದ್ದಾಗಿ ಬಂದಿದ್ದರೆ ಗತಿ ಏನು ಎಂದು ಯೋಚಿಸಿದ್ದೆವು.
ಹೀಗೆ ಒಂದು ದಿವಸ ಬೆಂಗಳೂರಿನಲ್ಲಿ ನಮ್ಮ ಅಜ್ಜಿ ದಿನಸಿ ಸಾಮಾನು ತರಲು ಅಂಗಡಿಗೆ ಹೋದಾಗ. ಆ ಅಂಗಡಿಯವನಿಗೆ ತಿಳಿಯಲಿಲ್ಲ. ಹವಿಜ(ಕೊತಂಬರಿ ಬೀಜ) ಎಂದು ಎಷ್ಟು ಸರಿ ಹೇಳುವದು ಅಂತ ಅಂಗಡಿಯವನನ್ನು ಗದರಿಸುತ್ತಿದ್ದರು. ಮೊದಲೇ ಆ ಅಂಗಡಿ ಮಾಲೀಕ ಉಡುಪಿಯಾವ "ಮಂಡೆ ಬಿಸಿ ಮಹರಾಯ" ಈ ಅಜ್ಜಿಗೆ ಎಷ್ಟು ಹೇಳುವದು ಎಂದಾಗ. ಅಜ್ಜಿಯ ಪಿತ್ತ ನೆತ್ತಿಗೇರಿತ್ತು. ಅಜ್ಜಿಯನ್ನು ಹೇಗೋ ಸಂಧಾನ ಮಾಡಿ ನಾನು ಮನೆಗೆ ಕರೆತಂದಿದ್ದೆ.
ಪ್ರೀತಿಯ ಮದುವೆಯ ಕಾರ್ಯ ಮುಗಿದಿತ್ತು. ಅಜ್ಜಿಗೆ ಮದುವೆಗೆ ಹೋಗುವ ಮನಸ್ಸಿದ್ದರೂ ಅವಳನ್ನು ಕಳುಹಿಸಿರಲಿಲ್ಲ. ಒಂದು ದಿವಸ ಅತ್ತೆ ಮನೆಗೆ ಅಂತ ಬಂದಿದ್ದ ಪ್ರೀತಿಯ ಗಂಡ. ರಾತ್ರಿ ಕರೆಂಟ್ ಹೋಗಿತ್ತು. ಮೊದಲೇ ಕೃಷ್ಣವರ್ಣದ ಪ್ರೀತಿಯ ಗಂಡನನ್ನು ನೋಡದೆ ಹಿಂದಿನಿಂದ ಅಜ್ಜಿ ಡಿಕ್ಕಿ ಹೊಡೆದು ಬಿಟ್ಟರು. ಸಧ್ಯ ಅಜ್ಜಿಗೆ ಏನು ಆಗಿರಲಿಲ್ಲ. ನರಪೇತಲ ನಾರಾಯಣ ಪ್ರೀತಿಯ ಗಂಡ ಕೆಳಕ್ಕೆ ಬಿದಿದ್ದ.
ಅದಕ್ಕೆ ಅಜ್ಜಿ ಈಗ ಬೆಂಗಳೂರು ಸಹವಾಸನೆ ಬೇಡ ಅಂತ ಮತ್ತೆ ಧಾರವಾಡಕ್ಕೆ ಹೋಗಿದ್ದಾರೆ....ಪ್ರೀತಿಗಿಂತಲೂ ಚೆನ್ನಾಗಿರೋ ಹುಡುಗಿನ್ನೇ ತಂದು ನಿನಗೆ ಕಟ್ಟುತ್ತೇನೆ ಅಂದಿದ್ದಾರೆ ನಮ್ಮ ಸಂಜೀವನಿಗೆ. ಸಧ್ಯ ಕನ್ಯಾ ನೋಡಲು ಅಜ್ಜಿ ಸಂಜೆ ಹೋಗದಿರಲೆಂದು ದೇವರನ್ನು ಬೇಡುತ್ತೇನೆ.

ಕಾಫಿಯ ಕಂಪು ...sssss

"ಕಾಫಿ ಗೆ ಬರ್ತಿರಾ ಸರ್" ಅಂತ ಕೇಳಿದ್ದರು ನಟರಾಜ . ಎಲ್ಲಿಗೆ ಹೋಗ್ತೀರಾ ಅಂದಾಗ . " Coffee Day" ಅಂದ ಹಾಗೆ ಅನ್ನಿಸಿತು (ಕರೆದದ್ದು ಕಾಫಿ ಬೋರ್ಡ್ ಗೆ). ನನಗೆ ಸ್ವಲ್ಪ ಕರ್ಣ ದೋಷವಿದೆ . ಜೋರಾಗಿ ಹೇಳಿದರೆ ಮಾತ್ರ ಈ ಕಿವಿಗಳಿಗೆ ಕೇಳಿಸುವದು . "Coffee Day" ಯ ಅನುಭವವಿದ್ದರಿಂದ ಬೇಡ ಎನ್ದೆ. ಒಂದು ದಿವಸ ನನ್ನ ಗೆಳೆಯ ಮಾಧವ coffee day ಗೆ ಹೋಗೋಣ ಎಂದಿದ್ದ . ಈಗ ರಾತ್ರಿಯಾಗಿದೆ ಇಲ್ಲೇ ಎಲ್ಲಾದರೂ ನೈಟ್ ಕಾಫಿ ಕುಡಿಯುವ ಎನ್ದೆ ತಮಾಷೆಗಾಗಿ. ಅನಂತರ coffee day ಗೆ ಹೋದೆವು . ಅಲ್ಲಿ ನೋಡಿದಾಗ ಆಶ್ಚರ್ಯ ಹುಡುಗ ಹುಡುಗಿ ಜೊತೆ ಜೊತೆ ಯಾಗಿಯೇ ಬಂದಿದ್ದರು. ನಮನ್ನು ಬಿಟ್ಟು. Menu ನೋಡಿ ಗಾಬರಿಯಾಗಿತ್ತು . ಒಂದು ಕಾಫಿಯ ಬೆಲೆ ಕಾಲು Kg ಇಂದ ಹಿಡಿದು ಒಂದು Kg ಕಾಫಿ ಪೌಡರ್ ಬೆಲೆಯಷ್ಟು ಇತ್ತು. ಕಾಫಿ Serve ಮಾಡುವವರೆಲ್ಲಾ ಮಾನಿನಿಯರೇ . ಕಾಫಿ ಆರ್ಡರ್ ಮಾಡಿದೆವು . ಕಾಫಿ ೨೦ ನಿಮಿಷದ ನಂತರ ಬಂದಿತು . ತುಂಬಾ ದಿನಗಳಾದ ಮೇಲೆ ನನ್ನ ಗೆಳೆಯ ಸಿಕ್ಕಿದ್ದರಿಂದ ಹಾಗೆ ಹರಟುತ್ತ ಕುಳಿತಿದ್ದೆವು . ಕಾಫಿ ಮೇಲೆ ಅಷ್ಟೊಂದು ನೊರೆ ಮೊದಲ ಬಾರಿ ನಾನು ನೋಡಿದ್ದು . ಇದಕ್ಕೆ ಯಾವ ಸೋಪ್ ಉಪಿಯೋಗಿಸ್ತಾರೆ ಅಂತೆ ಅಂದಿದ್ದೆ ತಮಾಷೆಗಾಗಿ . ನನಗೆ ಸಕ್ಕರೆ ಕಾಯಿಲೆ ಇರಲಿಲ್ಲವಾದ್ದರಿಂದ ಸಕ್ಕರೆಯನ್ನು ಕೇಳಿ ಪಡೆದು ಕುಡಿದು ಮುಗಿಸಿದೆ . ೧೫೦ ರೂಪಾಯಿಗಳ ಬಿಲ್ಲುಬಂದಿತ್ತು . ಇದನ್ನೆನಾದರು ಹೆಂಡತಿಗೆ ಹೇಳಿದರೆ ಅವಳ ಬಿಪಿ ಏರುವದು ಗ್ಯಾರಂಟೀ ಅಂತ ಹೇಳದೆ ಸುಮ್ಮನಾಗಿದ್ದೆ.

ನಟರಾಜ ಅವರು ಮತ್ತೆ ಒಂದು ದಿವಸ ಮತ್ತೆ ಕಾಫಿಗೆ ಅವಹಾನಿಸಿದರು . ಇವರ ಪ್ರೀತಿಯ ಕರೆಯನ್ನು ತಿರಸ್ಕರಿಸುವ ಮನಸಿಲ್ಲವಾದ್ದರಿಂದ ಬರುತ್ತೇನೆ ಎನ್ದೆ . ಆದರೆ ನಾನು ಕುಡಿಯುವದು ಚಹಾ ಮಾತ್ರ ಅಂತ ಹೇಳಿ ಅವರ ಕರೆಗೆ "ಓ" ಕೊಟ್ಟಿದ್ದೆ. ನಮ್ಮ ಗೆಳೆಯರ ಗುಂಪು ಕಾಫಿಗೆ ಪ್ರಯಾಣ ನಡಿಸಿತ್ತು . ಮತ್ತೆ ಕೇಳಿದೆ "Coffee Day" ಗ ಅಂತ . ಇಲ್ಲ ಸರ್ ಕಾಫಿ ಬೋರ್ಡ್ ಅಂತ ಉತ್ತರ ಬಂತು . ಆಗ ನನ್ನ ಮನಸಿಗೆ ಬಂದದ್ದು ನನ್ನ ಮಿಸ್ ಕೊಡುವ ಬ್ಲಾಕ್ ಬೋರ್ಡ್ ನಲ್ಲಿರುವ ಹೋಂ ವರ್ಕ್ . ಇದು ಹಾಗೇನೇ ಇರಬೇಕು ಶಿಕ್ಷೆ ಗ್ಯಾರಂಟೀ ....

ನಮ್ಮ ಗೆಳೆಯರ ಜೊತೆ ಹೋಟೆಲಿನೊಳಗೆ ಕಾಲಿಟ್ಟೆವು . ಆಗಲೇ ಮಾಣಿ ಏನು ಬೇಕು ನಿಮಗೆ ಎಂದ . ನಾನು ಟೀ ಎಂದೊಡನೆ .ಮಾಣಿ ನನ್ನನ್ನು ದುರಗುಟ್ಟಿದ. ಮತ್ತೆ ಇಲ್ಲಿ ಸಿಗುವದು ಕಾಫಿ ಮಾತ್ರ ಎಂಬ ಉತ್ತರ . ಮತ್ತೆ ಎಲ್ಲರಿಗೂ ಕಾಫಿ ಆರ್ಡರ್ ಮಾಡಲಾಯಿತು . ನನಗೆ ಟೀ ,ಕಾಫಿ ಕುಡಿಯುವ ಮೊದಲು ಸ್ವಲ್ಪ ನೀರು ಕುಡಿಯುವ ಅಭ್ಯಾಸ . ನೀರು ಬೇಕೆಂದು ಮಾಣಿಗೆ ಹೇಳಿದೆ . ಕಾಫಿ ಬಂತು ಆದರೆ ನೀರು ಮಾತ್ರ ಬರಿಲಿಲ್ಲ . ಮತ್ತೆ ಸ್ವಲ್ಪ ಸಮಯದ ನoತರ ಸನ್ನೆ ಮಾಡಿ ನೀರು ಬೇಕೆಂದು ಹೇಳಿದಾಗ ನೀರು ತಂದು ಟೇಬಲ್ ಮೇಲೆ ಇಟ್ಟ . ಆಗಲೇ ಕಾಫಿ ಗೆ ತ೦ಪು ಗಾಳಿ ಬಿಸಿತ್ತು . ನನಗೆ ಯಾವಾಗಲು ಬಿಸಿ ಬಿಸಿಯಾದ ಚಹಾ /ಕಾಫಿ ಕುಡಿದೆ ಅಭ್ಯಾಸ . ನನ್ನ ಅಮ್ಮ ಏಷ್ಟು ಬಿಸಿ ಮಾಡಿದರು ತಣ್ಣಗೆ ಇದೆ ಎಂಬ ಆಲಾಪ. ಅದಕ್ಕೆ ನನ್ನ ತಾಯಿ ಇದನ್ನು ತಣ್ಣಗೆ ಕುಡಿದು ಬೇಕಾದರೆ ಗ್ಯಾಸ್ ಮೇಲೆ ಹೋಗಿ ಕೂಡು ಎಂದು ಗದರಿಸುತ್ತಿದ್ದರು .

ನನ್ನ ಎಲ್ಲ ಸಹವರ್ತಿಗಳು ತಮಿಳುನಾಡಿನವರೇ . ಕನ್ನಡವೇ ಸರಿಯಾಗಿ ಕೇಳಿಸದ ಈ ಕೆಪ್ಪ ಕವಿಗೆ ಇಂತಹ ದೊಡ್ಡದಾದ ಶಿಕ್ಷೆ . ಕಾಫಿ ಬೋರ್ಡ್ ನಲ್ಲಿ ಮಾತ್ರ ಕನ್ನಡದ ಕಂಪು ಎಲ್ಲಡೆ ಆವರಿಸಿತ್ತು .ಕಾಫಿ ಗೆಳೆಯರು ಎಲ್ಲರು ಕನ್ನಡಿಗರೇ . ಮೊದಲ ಬಾರಿ ಇಂತಹ ಮಹಾನ ಸನ್ನಿವೇಶವನ್ನು ಕಂಡಿದ್ದು . ಪ್ರತಿಬಾರಿಯೂ ಈ ಕೆಪ್ಪನಿಗೆ ಬೇರೆ ಭಾಷೆ ಗಳೇ ಕೇಳಸಿಗುತ್ತವೆ .

ಕಾಫಿ ಬೋರ್ಡ್ ನಿಂದ ಹೊರಬರುತ್ತಿದಂತೆ ಒಂದು ದೊಡ್ಡ hump ಒಂದು ಹುಡುಗಿಯನ್ನು jump ಮಾಡಿಸಿತ್ತು .ಸಂಪಾದ ತಂಪು ಕಾಫಿಯ ನಶೆ ಇಳಿದಿರಲಿಲ್ಲವಾದ್ದರಿಂದ ಮೇಲೆ ಎಬ್ಬಿಸಲು ಸಾಧ್ಯವಾಗಲಿಲ್ಲ .

ಕಾಫಿ ನಿಜವಾಗಿಯೂ ಮನಸಿಗೆ ಅಹ್ಲಾದಿಸಿತ್ತು. ಈ ಕವಿಯ ಕಪಿ ಚೆಸ್ಟೆಯೊಂದು ಬಿಟ್ಟು. ... ಹೀಗೆ ಕನ್ನಡದ ಕಂಪು ಹರಡಲಿ .. ಕಾಫಿ ಗೆ ಈ ಕೆಪ್ಪ ಕವಿಯನ್ನು ಕರಿಯಲಿ (ಸ್ವಲ್ಪ ಜೋರಾಗಿ ) ಎಂದು ಆಶಿಸೋಣ .

ನಾಕು ತಂತಿ .....ಮನ ಮೀಟಿದಾಗ .......

ಸುಬ್ಬ ರಾಮಸಂದ್ರದ ಮುಗ್ದ ಮನಿಸಿನ ಹುಡುಗ. ಆದರೆ ಹುಡುಗಿಯರೆಂದರೆ ಸಾಕು ಮೈನಿವಿರೆಳುತ್ತಿದ್ದವು. ಇವನ ಹೃದಯ ಸಾಮ್ರಾಜ್ಯದಲ್ಲಿ ಮೀಟಿದ ನಾಲ್ಕು ತಂತಿಯ ಬಗ್ಗೆ ಹೇಳುವೆ.


ಮೊದಲ ತಂತಿ ....

-----------------

ಅವರಪ್ಪ ಅವನನ್ನು ದೊಡ್ಡ ತಬಲಾ ಆರ್ಟಿಸ್ಟ್ ಮಾಡಬೇಕು೦ಬುವ ಹೆಬ್ಬಯಕೆ. ಆದರೆ ಇವನಿಗೆ ಅದು ಸುತರಾಂ ಇಷ್ಟವಿರಲಿಲ್ಲ. ಇವನ ತಬಲಾ ಕ್ಲಾಸ್ ಸಂಜೆ ೫ ಘಂಟೆಗೆ ಇವನು ಕ್ರಿಕೆಟಿನಲ್ಲಿ Expert Allrounder. ಇವನು ಬ್ಯಾಟ್ ಹಿಡಿದರೆ ಇವನ ಸಹ ಆಟಗಾರರಿಗೆ ನಡುಕ. ಇವನ ಆಟದ ಸಮಯದಲ್ಲೇ ಈ ಹಾಳು ತಬಲಾ ಕ್ಲಾಸ್. ಇವನು ಬ್ಯಾಟ್ ಹಿಡಿಯುತ್ತಿದ್ದಂತೆ ಇವನಮ್ಮ ಬಾರೋ ಕ್ಲಾಸ್ ಗೆ ಹೋಗಬೇಕು ಎಂದು ಕೂಗುವಳು. ಆಗ ಅರ್ಧ ಬ್ಯಾಟಿಂಗ್ ಮುಗಿಸಿ ಕ್ಲಾಸ್ಗೆ ಹೋಗಬೇಕು. ಕ್ಲಾಸಿನಲ್ಲೋ ಮೇಸ್ಟ್ರು ಹೇಳಿದ್ದನ್ನೇ ಹೇಳುವರು. ಇವನಿಗೆ ಯಾವತ್ತು ಹೊಸದರಲ್ಲೇ ಆಸಕ್ತಿ. ಇವನಿಗೆ ಹಳಸಿದ ಚಿತ್ರಾನ್ನದ ಹಾಗೆ ಅದೇ "ನಾಧಿನ ಧಿನ್ ... ನಾಧಿನ ಧಿನ್ ... " ಬೇಸತ್ತು ಹೋಗಿದ್ದ. ಅದೇ ಹಳಸಿದ ತಾಳದಿಂದ ಇವನ ಆಲಾಪಕ್ಕೆ ಅಪಶ್ರುತಿ ಹಿಡಿದಿತ್ತು. ಆದರು ತಬಲಾ ಕ್ಲಾಸ್ ಬಿಟ್ಟಿರಲಿಲ್ಲ.(ಅಪ್ಪನ ಹೇದರಿಕೆ ಇಂದ). ಒಂದು ದಿವಸ ಸುಬ್ಬನ ಹೃದಯ ವೀಣೆಯ ತಂತಿ ಮಿಡಿದಿತ್ತು. ಹೊಸದಾಗಿ ಸಂಗೀತಕ್ಕೆ ಸೇರಿಕೊಂಡ ಹುಡುಗಿ ರೂಪಳ ಮೈಮಾಟ ಅವನ ಹೃದಯಕ್ಕೆ ಹೊಸತಾಳ ಹಾಕಿತ್ತು. ಆ ತಾಳ ದಿಂದ ಬೇತಾಳವಾಗಿದ್ದ ಸುಬ್ಬ, ತಬಲಾ ಕ್ಲಾಸ್ ೫ ನಿಮಿಷ ಮೊದಲೇ ಹಾಜರ ಮತ್ತು ಮನೆಯಲ್ಲೂ practise ಅದು ಬೆಳ ಬೆಳಿಗ್ಗೆ ೪ ಘಂಟೆಗೆ. ಅಕ್ಕ ಪಕ್ಕದ ಮನೆಯವರು ಉಗಿಯುವದೊಂದೇ ಬಾಕಿ. ಹೀಗೆ ಅವಳ ನೆನಪಿನಲ್ಲೇ ಮಾಡಿದ್ದೂ ಒಂದು ಮನೆಯೊಳಗಿನ ತಬಲಾ ಮತ್ತು ೨ ಕ್ಲಾಸ್ನಲ್ಲಿರುವ ತಬಲಾಗಳನ್ನು ಚರ್ಮ ಕಿತ್ತುವ ಹಾಗೆ ಬಾರಿಸಿ ಮೂಲೆ ಗುಂಪಾಗಿಸಿದ್ದು ಮಾತ್ರ... ಆ ಹುಡುಗಿಯ ವಿಷಯವೇನು ಕೇಳಬೇಡಿ. ಅವಳನ್ನು ಹೃದಯ ಮಂದಿರದಲ್ಲಿಟ್ಟು ಪೂಜಿಸಿದಷ್ಟೇ ಆಯಿತು. ಮತ್ತೇನೂ ಮಾಡಲಿಲ್ಲ. ಎಲ್ಲಿ ಹೋದಳು ಏನಾದಳು ಏನು ಗೊತ್ತಿಲ್ಲ ..........


ಎರಡನೇ ತಂತಿ ....

------------------

ಶಿಲ್ಪಾ ನಿಜವಾಗಿಯೂ ದಂತದ ಗೊಂಬೆಯ ಹಾಗೆ ಇದ್ದಳು. ಈ ಶಿಲ್ಪವನ್ನು ಆ ಜಕಣಾಚಾರಿಯೀ ಕೆತ್ತಿರಬೇಕು ಹಾಗೆ ಇದ್ದಳು. ಬೇಲೂರು ಶಿಲಾ ಬಾಲಿಕೆಯ ಹಾಗೆ ಮೈಮಾಟ. ಇವಳನ್ನು ಮೊದಲು ಕಂಡಿದು ಸುಬ್ಬ ತನ್ನ ಗೆಳೆಯನ ಪಕ್ಕದಲ್ಲಿರುವ ಶ್ಯಾಮನ ಮನೆಯಲ್ಲಿ. ಶ್ಯಾಮನ ಅತ್ತೆ ಮಗಳು. ಇವಳನ್ನು ನೋಡುವ ಸಲುವಾಗಿ ನಾಯಿಯನ್ನು ಯೋಚಿಸದೆ ಅವರ ಮನೆಯನ್ನು ನುಗ್ಗುತ್ತಿದ್ದ ಈ ಸುಬ್ಬ. ಇವಳ ಜೊತೆ Eye Spice ಆಡಿದ್ದು ಆಯಿತು. ಇವಳ spicy ಮೈಮಾಟಕ್ಕೆ ಸುಬ್ಬ ice ನಂತೆ ಕರಗಿ ಹೋಗಿದ್ದ. ಸ್ವಲ್ಪ ದಿನಗಳ ನಂತರ ಶ್ಯಾಮನ ತಂದೆಗೆ Transfer ಆಯಿತು. ಎಲ್ಲಿ ಹೋದರೆಂದು ತಿಳಿಯಲಿಲ್ಲ. "ಎರಡನೇ ತಂತಿ ಹರಿದಿತ್ತು" ಆದರೆ ಮನಸಿನಲ್ಲಿ ಮಾತ್ರ " ಶಿಲ್ಪಾ ಓ ಮೈ ಶಿಲ್ಪಾ ನೀನು ನನ್ನವಳು ನಾನು ನಿನ್ನವನು ಓ ಮೈ ಡಿಯರ್ ....."


ಮೂರನೆ ತಂತಿ ....

------------------

ಒಂದು ದಿವಸ ತಬಲಾ ಕ್ಲಾಸ್ ನಿಂದ ಬರುತ್ತಿದ್ದ ಸುಬ್ಬ ಸ್ಕೂಲ್ ಡ್ರೆಸ್ ನಲ್ಲಿರುವ ಹುಡುಗಿನ ನೋಡಿದ್ದ. ಅವಳ ಸೌಂದರ್ಯ ಅವನ ಹೃದಯಕ್ಕೆ ವಾಸಿ ಮಾಡಲಾರದಷ್ಟು ಘಾಯ ಮಾಡಿತ್ತು. ಅವನ ಹೃದಯ ಬಡಿತ ದ್ವಿಗುಣವಾಗಿತ್ತು. ಇವಳ ಮುಂದೆ ರೂಪ, ಶಿಲ್ಪಾ ಎಲ್ಲರು ಅಷ್ಟೇ.... ಈಗ ಇವನು ಅವಳ ಹಿಂದೆಯ ಹೋಗಿ ಅವಳ ಮನೆಯನ್ನು ಪತ್ತೆಮಾಡಿದ್ದ. Daily ಎರಡು ಸಾರಿ ಅದೇ ರೂಟ್ನಲ್ಲಿ ಸಂಚಾರ. ಅವಳ ಮುಖ ಎಷ್ಟು ನೋಡಿದರು. ನೋಡಬೇಕು ಎಂದೇ ಅನಿಸಿರಲು ಸಾಕು. ಅವಳ ಶಾಲೆಗೂ ಭೇಟಿ ಕೊಟ್ಟಿದ್ದಾಯಿತು. ಅವಳ ಹೆಸರ ಮೊದಲ ಅಕ್ಷರವನ್ನ ಕೈ ಮೇಲೆ ಹಚ್ಚೆ ಹಾಕಿಸಿದ್ದು ಆಯಿತು. ನಂತರ ಕಾಲೇಜು ಸೇರಿದಳು. ಕಾಲೇಜು ನೋಟೀಸ್ ಬೋರ್ಡ್ ಜಾಲಾಡಿ ಅವಳ ಹೆಸರು ಹುಡುಕಲು ತಡಬಡಾಯಿಸಿದ್ದಾಯಿತು. ಆದರೆ ಅವಳ ಮುಂದೆ ಹೋಗಿ ಪ್ರೀತಿಯನ್ನು ಅರುಹಲು ಮಾತ್ರವಾಗಲಿಲ್ಲ ಈ ಸುಬ್ಬನಿಗೆ. ಅವಳ ಮನೆ ಹಿಂದೆಯೇ ಸುತ್ತುತ್ತಿದ್ದಾಗ ಕಣ್ಣು ಬಿದ್ದಿದ್ದು ಸುವರ್ಣ ... ಇವಳಿಗೆ ಬೈ ಬೈ...


ನಾಲ್ಕನೆ ತಂತಿ....

------------------

ಇವಳ ಹೆಸರು ಸುವರ್ಣ ಪಕ್ಕ ಬ್ರಾಹ್ಮಣರ ಹುಡುಗಿ. ನಮ್ಮನೆಗೆ ನೂರಕ್ಕೆ ನೂರು ಹೊಂದಿಕೊಳ್ಳುತ್ತಾಳೆ ಅಂದಿದ್ದ ನಮ್ಮ ಸುಬ್ಬ. ಸುಬ್ಬ ಇವಳನ್ನು ಮೊದಲು ನೋಡಿದ್ದು ಇವಳು ರಂಗೋಲಿ ಹಾಕುತ್ತ ಇದ್ದಾಗ. ಇವಳು ಹೇಳುವಷ್ಟು ಸೌಂದರ್ಯವತಿ ಏನು ಅಲ್ಲದಿದ್ದರೂ ಇವಳ ನಗು ಇವನ ಹೃದಯಕ್ಕೆ ಪ್ರೀತಿಯನ್ನು ಉಣ್ಣಿಸಿತ್ತು. ಅದೇನೋ ಹೇಳುತ್ತಾರಲ್ಲ ವಕ್ರತೆಯೇ ಸುಂದರತೆಯ ಮೂಲ ಅಂತ. ಅದಕ್ಕೆ ಇರಬೇಕು ಪ್ರತಿಯೊಬ್ಬನ ಟೇಸ್ಟ್ ಬೇರೆ ಬೇರೆನೆ ಆಗಿರುತ್ತೆ. ಒಬ್ಬನಿಗೆ ಐಶ್ವರ್ಯ ಹಿಡಿಸಿದರೆ ಮತ್ತೊರ್ವನಿಗೆ ರಾಣಿ ಮುಖರ್ಜೀ ಹಾಗೆ. ಇಬ್ಬರ ತಾಳವು ಪಕ್ಕ ಹೊಂದಾಣಿಕೆಯಾಗಿತ್ತು. ನೋಡಿ ನಗುವದು ಕಣ್ಣ ಸನ್ನೆ ಎಲ್ಲೆವು ಪಕ್ಕ ಮ್ಯಾಚ್ ಆಗಿತ್ತು. ಒಮ್ಮೆ ಅವಳನ್ನು ಮಾತನಾಡಿಸಿಯು ಆಗಿತ್ತು. ಯಾರ ಕೆಟ್ಟ ದೃಷ್ಟಿ ಬಿತ್ತೋ ಇವರ ಪ್ರೀತಿಗೆ. ಇವರಪ್ಪ ಸುಬ್ಬನನ್ನು ಕರೆದು ಯಾರ ಮಗನಪ್ಪ ನೀನು? ಎಂದು ಕೇಳಿದ್ದ. ಅಷ್ಟೇ ಸುಬ್ಬ ಹೆದರಿ ಅವರ ಮನೆ ಸಮೀಪ ಹೋಗುವದನ್ನು ನಿಲ್ಲಿಸಿಬಿಟ್ಟಿದ್ದ. ಅನಂತರ ೬ ತಿಂಗಳ ನಂತರ ಅವಳನ್ನು ಮಾತನಾಡಿಸಲು ಹೋದಾಗ ಅವಳ ಮೌನವೆ ಮಾತಾಗಿತ್ತು. ನಾಲ್ಕನೆ ತಂತಿಯು ಹರಿದಿತ್ತು .....


ಸುಬ್ಬ ನ ಜೀವನವು "Mera Naam Joker" ನ ರಾಜಕಪೂರ್ ಹಾಗೆ ಆಗಿತ್ತು. ಅದಕ್ಕೆ "Mera Naam Joker" ಸಿನಿಮ ೧೦ ಸಾರಿ ನೋಡಿದ್ದ. ಅವನಿಗೆ ಇಷ್ಟವಾದ ಮತ್ತೊಂದು ಸಿನಿಮ ಅಂದರೆ "My Autograph Please" ಸುದೀಪ ಅಭಿನಯದ.

ಈಗ ಸುಬ್ಬನ ಮನಸ್ಸು ಸ್ವಲ್ಪ ಪರಿಪಕ್ವತೆ ಬಂದಿದೆ. ಇವನ ಹೃದಯ ವೀಣೆಯನ್ನು ಯಾರಾದರು ಮೀಟುವರ ಎಂದು ಕಾದು ನೋಡಿ..............

ಮೂರೂ + ಖಾನ್ ( ಮೂರ್ಖನ ) ಗೆಳೆಯರು

ಇದೇನಪ್ಪ "ಮೂರ್ಖ" ಯಾರು ಅಂತ ಕೇಳ್ತಾ ಇದ್ದೀರಾ . ನಾನೆ ಸ್ವಾಮಿ . ನಿಜವಾಗಿಯೂ ನಾನೆ . ನನಗೆ ಸಿಗುವ ಗೆಳೆಯರೆಲ್ಲರೂ "ಖಾನ್ " ವರ್ಗ ಕ್ಕೆ ಸೇರಿದವರೇ ಜ್ಯಾಸ್ತಿ . (ಸ್ವಲ್ಪ ಗೆಳೆಯರನ್ನು ಬಿಟ್ಟು ). ಅವರ ಪರಿಚಯ ಮಾಡಬೇಕೆಂದಿದ್ದೇನೆ.

೧ . ಶೇರ್ ಖಾನ್ (ಶೆರೆ ಖಾನನ ಅಳಿಯ ) - ಸಿಹಿ ತುತ್ತು ಬಯಸುವವರು.
೨ . ಶೆರೆ ಖಾನ್ (ಸೀರೆ ಖಾನನ ಅಳಿಯ ಮತ್ತು ಶೇರ್ ಖಾನನ ಮಾವ ) - ಸಿಹಿ ಮತ್ತು ಬಯಸುವವರು.
೩ . ಸೀರೆ ಖಾನ್ (ಶೆರೆ ಖಾನನ ಮಾವ ) - ಸಿಹಿ ಮುತ್ತು ಬಯಸುವವರು.

ಶೇರ್ ಖಾನರ ತಲೆಯಲ್ಲಿ ಯಾವತ್ತು ಶೇರಗಳ ಏರಿಳಿತ ಮತ್ತು ಯಾವ , ಯಾವ ಶೇರ್ ಗಳಲ್ಲಿ ಇನ್ವೆಸ್ಟ್ ಮಾಡಬೇಕು ಎಲ್ಲವು ರೆಡಿ . ಅದಕ್ಕೆ ಇರ್ಬೇಕು ನನ್ನ ಗೆಳೆತನವನ್ನು ಸಹ ಇನ್ವೆಸ್ಟ್ಮೆಂಟ್ ತರಹ ಸ್ವಲ್ಪ ಸ್ವಲ್ಪವೆ ಮಾಡುತ್ತಾರೆ. ಇವರಲ್ಲೊಬ್ಬ ಬಬ್ಬರ್ ಶೇರ್ ನನ್ನ ಪ್ರೀತಿಯ ಆತ್ಮೀಯ ಗೆಳೆಯ ಇವನ ಮನಸ್ಸು ಹಂಸದಂತೆ. ತುಂಬಾ ಒಳ್ಳೆಯ ಹುಡುಗ ಇವನಿಗೆ ಎಲ್ಲ ಶೇರ್ ಗಳು ನಮಸ್ತೆ ಮಾಡುತ್ತವೆ .

ಶೆರೆ ಖಾನ್ ನಂತವರು ತುಂಬಾ ಜನ ಸಿಗುತ್ತಾರೆ . ಇವರಲೊಬ್ಬ ತುಂಬಾ ಪಂಟರ್ ಎಲ್ಲ Brandಗಳನ್ನು ಮುಸಿ ಬಿಟ್ಟಿದ್ದಾನೆ. ಅವನು ಮುಸುವದಕ್ಕೆ ಸಹಾಯವಾಗಲೆಂದು ಅವನ ಮೀಸೆ ತೆಗೆಯೆಂದು ಪುಸಲಾಯಿಸಿದ್ದೆ ನಾನು.

ಸೀರೆ ಖಾನ್ ಗಳು ತುಂಬಾ ಇದ್ದಾರೆ . ಬಬ್ಬರ್ ಶೇರ್ ಕೂಡ ಸೀರೆ ಖಾನ್ ಆಗಿದ್ದ. (ಸೀರೆ ಖಾನ್ ಅಂದರೆ ಸೀರೆ ಯಲ್ಲಿರುವ ನೀರೆಯರನ್ನು ಬಯಸುವವರು . ಅಂದರೆ ಪಕ್ಕಾ Bachelors.) ಈ ಶೇರ್ ಖಾನ್ ಒಮ್ಮೆ family restaurant ಗೆ ಹೋಗಿ ಒಬ್ಬ ಹುಡುಗಿ ಯನ್ನು ಕರೆದೊಯಿದಿದ್ದ . ಅನಂತರ ಅವಳನ್ನು ಮದುವೆಯ ಪ್ರಸ್ತಾಪ ಕೂಡ ಮಾಡಿದ್ದ . ಅವಳು ಬಬ್ಬರ್ ಶೇರ್ ನನ್ನು ಬಿಟ್ಟು ಯಾವದೋ ಬಿಲ್ಲಿಯ ಹಿಂದೆ ಹೋಗಿದ್ದಾಳೆ. ಈಗ ಅನಿಸಿರಬೇಕು ತುಂಬಾ ಒಳ್ಳೆಯ ಬಂಗಾರವನ್ನು ಬಿಟ್ಟು ಕಾಗೆ ಬಂಗಾರವನ್ನು ಕಟ್ಟಿಕೊಂಡೆ ಎಂದು . ಇನ್ನು ಒಬ್ಬ ನನ್ನ ಗೆಳೆಯ ಸೀರೆ ಖಾನ್ ಇದ್ದಾನೆ ಒಂದು ಹುಡುಗಿಯ ಮೇಲೆ ಮನಸು ಮಾಡಿದ್ದ. ಅವಳು ಕಳಹಿಸುವ ಮೇಲ್ ಗಳನ್ನೂ ಪೂಜೆ ಮಾಡಿ ಅಪಾರ್ಥ ಮಾಡಿಕೊಂಡು ಮನಸಿನಲ್ಲೇ ಮಂಡಿಗೆ ತಿಂದಿದ್ದ . ಅವನಿಗೆ ಸಿಕ್ಕಿದ್ದು ಬರಿ Mail(Male) ಗಳು ಮಾತ್ರ Female ಮಾತ್ರ ಫ್ಯಾಮಿಲಿಯಾಗಲಿಲ್ಲ. ಶೆರೆ ಖಾನ್ ಮತ್ತು ಶೇರ್ ಖಾನ್ ಏನಾದರು ಸಿಕ್ಕರೆ ಶೆರೆ ಕುಡಿಯುತ್ತ ಮಾತನಾಡುವದು ಸೀರೆಯರ ಬಗ್ಗೆನೇ (ಮದುವೆ ಬಗ್ಗೆನೇ). ಶೆರೆ ಖಾನ್ ನು ಒಬ್ಬ ಹುಡುಗಿಯನ್ನು ಮೆಚ್ಚಿದ್ದ ಆದರೆ ಅವಳನ್ನು ಒಲಿಸುವ ಬದಲು ಅವಳನ್ನು ಓಡಿಸಿದ್ದ (ಹೆದರಿಸಿದ್ದ).

ಏನೇ ಇರಲಿ ಈ ಎಲ್ಲ ಗೆಳೆಯರು ನನ್ನ ಪ್ರೀತಿಯ ಗೆಳೆಯರೇ............... ನನ್ನೊಬ್ಬನನ್ನು ಬಿಟ್ಟು ಏಕೆಂದರೆ ಈ ಮೂರ್ಖ ತುಂಬಾ ಗೆಳಯರನ್ನು ಕಳೆದುಕೊಂಡಿದ್ದಾನೆ(ತನ್ನ ಮು೦ಗೋಪ ಮತ್ತು ಕಪಿ ಚೆಸ್ಟೆ ಇಂದ) . ಎಲ್ಲರೂ ಮನಸಿನಿಂದ ಮಾತ್ರ "ಆಮೀರ್" ಗಳೇ . ಇವರೆಲ್ಲರಿಗೂ ಬೇಗನೆ ಮದುವೆಯಾಗಲೆನ್ದು ಹಾರೈಸುತ್ತೇನೆ . ಈ ಮೂರ್ಖನಿಗೆ ಮದುವೆ Invitation ಬೇಗನೆ ಸಿಗಲಿ. ಶೆರೆ ಮತ್ತು ಶೇರ್ ಖಾನ್ ಗಳಿಗೆ ಸೀರೆ ಸಹಾರಾ ಸಿಗಲಿ. ಶೇರ್ ಮತ್ತು ಶೆರೆ ಜೊತೆ ನನಗೂ ದೊಡ್ಡದೊಂದು ನಮಸ್ಕಾರ ಹೊಡಿಯಲಿ(ಆಶಿರ್ವಾದಪಡೆಯಲಿ).

ಇಂತಿ ನಿಮ್ಮ ಪ್ರೀತಿಯ ಗೆಳೆಯ
ಮೂರ್ಖ

ನಿಂಬಿಯ ಬನದ ಮ್ಯಾಗ ಚಂದ್ರಮ ಚಂಡಾಡಿದ.......... .

ಈಗ ನನ್ನ ಚಂದ್ರಮನಿಗೆ ರಾಮಾಯಣದ ಹುಚ್ಚು ಹಿಡಿದಿದೆ . ಹೊಸದಾಗಿ ತಂದ ನಮ್ಮ DVD ಯಲ್ಲಿ ರಾಮಾಯಣವನ್ನು ವಿಕ್ಷಿಸಿ . ಶ್ರೀ ರಾಮನ ಪಾತ್ರಾಭಿನಯ ಶುರು ಮಾಡಿದ್ದಾನೆ. ಒಂದು ದಿವಸ ಆಫೀಸ್ ನಿಂದ ಮನೆಗೆ ಹೋದ ತಕ್ಷಣ ನನ್ನ ಮಗ ನನ್ನ ನೋಡಿ "ರಾವಣ" ಎಂದು ತನ್ನ ಬಿಲ್ಲು ಬಣಗಳನ್ನು ಹೂಡಿ ನನ್ನ ಮೇಲೆ ಪ್ರಹಾರ ನಡಿಸಿದ್ದಾನೆ . ಅವನಿಗೆ ನಿಜವಾಗಿಯೂ ನಾನು ರಾವಣನೆ ಆಗಿರಬೇಕು ರಾತ್ರಿ ಲೇಟಾಗಿ ಆಫೀಸ್ ನಿಂದ ಮನೆಗೆ ಹೋಗುವದು , ಬೆಳಿಗ್ಗೆ ಎದ್ದ ತಕ್ಷಣ ಆಫೀಸ್ ಗೆ ಹೋಗುವದರಿಂದ ಅವನ ಜೊತೆ ಕಳೆಯುವ ಸಮಯ ಸ್ವಲ್ಪ ಕಡಿಮೇನೆ ಆದ್ದರಿಂದಲೇ ನನ್ನ ಮೇಲೆ ಸಿಟ್ಟಿಗೆದ್ದಿದ್ದರಬೇಕು. ಈಗ ಅನ್ನಿಸಿತು ರಾಮಾಯಣ CD ತಂದು ನಿಜವಾಗಿಯೂ ಒಳ್ಳೆಯದನ್ನೇ ಮಾಡಿದೆ. ಅಪ್ಪಿ ತಪ್ಪಿ ಮಹಾಭಾರತ ಅಥವಾ ಶ್ರೀಕೃಷ್ಣ ಏನಾದರು ತಂದಿದ್ದರೆ ಶ್ರೀ ಕೃಷ್ಣನಂತೆ ನೂರಾರು ಗೊವುಗಳನ್ನ ತಂದು ಮನೆಯಲ್ಲಿ ಇಡಿಸುತ್ತಿದ್ದನೋ ಗೊತ್ತಿಲ್ಲ . ಗೋವುಗಳದರೆ ಪರವಾಗಿಲ್ಲ ಗೋಪಿಕ ಸ್ತ್ರಿಯರಾದರೆ ತುಂಬಾ ಕಷ್ಟ (2 bhk ಯಲ್ಲಿ ಹಿಡಿಸುವದಿಲ್ಲ).

ಹೀಗೆ ದಿನದಿನವೂ ಒಂದೊಂದು ಅವನ ಅವತಾರಗಳು ಮೊನ್ನೆ play home ಗೆ ಹೋದಾಗ ನನಗೆ ಅಮ್ಮ ಕಟ್ಟಿಕೊಟ್ಟ biscuit ಬೇಡ ನನಗೆ ದೋಸೇ ಬೇಕು ಅಂತ ಹಠ ಹಿಡಿದಿದ್ದ . ಅವರ ಮಿಸ್ ತುಂಬಾ ಒಳ್ಳೆಯವರು ದೊಸೇನೆ ಮಾಡಿ ತಿನ್ನಿಸಿದ್ದಾರೆ. ಮತ್ತೆ ನಿನ್ನೆ ಸಲ್ಮಾನ್ ಖಾನ್ ಆಗಿದ್ದ ಅಂದರೆ ನನಗೆ ಸೆಕೆ ಆಗ್ತಾ ಇದೆ ಅಂತ ಹೇಳಿ ಅಂಗಿ ತೆಗೆಸಿ ಬನಿಯನ ಮೇಲೆ ಆಟ ಆಡುತ್ತಾ ಇದ್ದ.
ಮತ್ತೆ ಮನೆಯಲ್ಲಿ ನಾವೇನಾದರೂ ಮಿಸ್ ಹೇಗೆ ಮಾಡ್ತಾರೆ ಅಂತ ಕೇಳಿದಾಗ ವಿಚಿತ್ರವಾದ ಮುಖ ಮಾಡಿ ತೋರಿಸುತ್ತಾನೆ ನಮ್ಮ ಹೀರೋ. ..

ನನ್ನ ಹೆಂಡತಿಗೆ ಸೀರಿಯಲ್ ಗಳ ಹುಚ್ಚು . ಅವಳು ನೋಡುತ್ತಿರುವ ಸೀರಿಯಲ್ ನಲ್ಲಿ ಮಗ್ನವಾಗಿರುವಾಗ TV ಬಂದ ಮಾಡಿ "ಬಂದ ಆಯಿತು " ಎಂಬ ಉದ್ಗಾರ . ಅಪ್ಪಿ ತಪ್ಪಿ ಅವನು ನೋಡುತ್ತಿರುವ cartoon ಅಥವಾ rhymes ಬಂದ ಮಾಡಿದರೆ ಬಿಡಿ ರಂಪನೆ ಗ್ಯಾರಂಟೀ ...

ಇವನಿಗಿನ್ನು ಅಕ್ಷರಾಭ್ಯಾಸವಾಗಿಲ್ಲ ಇಲ್ಲದಿದ್ದರೆ interior decoration ಜವಾಬ್ದಾರಿನು ಹೊರ್ತಿದ್ದನೋ ಗೊತ್ತಿಲ್ಲ . ನನ್ನ ಹೆಂಡತಿಯ ಹೊಸ ರುಚಿಯ ಟೆಸ್ಟಿಂಗ್ ನು ಇವನೇ ಮಾಡುತ್ತಾನೆ . ತಲೆಯಿಂದ ತಿನ್ನಲು ಪ್ರಯತ್ನಿಸಿ ಅವನಮ್ಮ ಗದರಿಸಿದಾಗ ನೀರಿನಲ್ಲಿ ಅದ್ದಿ ಆನ೦ತರ ತಿನ್ನುತ್ತಾನೆ . (ಏನು ಅಷ್ಟು ಗಟ್ಟಿಯಗಿರುತ್ತೋ ಗೊತ್ತಿಲ್ಲ ).
ಈಗಲೆ ಸ್ವಿಮ್ಮಿಂಗ್ ಕೂಡ ಕಲೆಯುತ್ತಿದ್ದಾನೆ . ನೀರೆಂದರೆ ಪಂಚಪ್ರಾಣ .

ಅವನು ಚಿಕ್ಕವನಿದ್ದಾಗ ನನ್ನ ಗೆಳೆಯ ತನ್ನ ಮಗನನ್ನು ಕರೆದುಕೊಂಡು ಬಂದಿದ್ದ . ಸುಮಾರು ೩ ವರ್ಷದವನಿದ್ದ ಅವನ ಮಗ. ಅವನನ್ನು ಕಂಡು ತುಂಬಾ ಖುಷಿಯಾಗಿ ಚಿರಲು ಪ್ರಾರ೦ಬಿಸಿದಾಗ ಅವನ ಮಗ ಹೆದರಿ ಚಡ್ಡಿ ಯಲ್ಲೇ ಸೂಸು ಮಾಡಿದ್ದ .

ನನ್ನ ಮಗನಿಗೆ "ಹಳೆ ಪಾತ್ರೆ .. ಹಳೆ ಪೇಪರ್ " ಹಾಡು ಇಷ್ಟ ಅದಕ್ಕೆ ನ್ಯೂಸ್ ಪೇಪರ್ ಮತ್ತು ನನ್ನ Books ಗಳನ್ನ ಹಳೆಯದಾಗಿ ಮಾಡಿದ್ದಾನೆ . ಇವರಪ್ಪನನ್ನ ಕುಬೇರ ಅಂತ ತಿಳಿದುಕೊಂಡಿದ್ದಾನೋ ಗೊತ್ತಿಲ್ಲಾ ಅವನ ಆಟಿಗೆ ಸಾಮಾನು, ನನ್ನ ಮೊಬೈಲ್ ಮತ್ತು ಮನೆ ಸಾಮಾನು ಎಲ್ಲವನ್ನು ರೆಪೈರಿ ಮಾಡಿ ಮುಗಿಸಿದ್ದಾನೆ . ಒಂದೊಂದು ಬಾರಿ ಅವುಗಳನ್ನು ಅಕ್ಕ ಪಕ್ಕ ದಲ್ಲಿರುವ ಮನೆಗಳಿಗೆ ಕಿಟಕಿ ಇನ್ದ ರವಾನಿಸಿರುತ್ತಾನೆ .

ಇವನಿಗೆ ಇದ್ದಷ್ಟು ಪರಿಚಯ ನನಗೆ ಇಲ್ಲ ನಮ್ಮ ಕಾಲೋನಿಯಲ್ಲಿ. ಇವನಿಗೆ ಎಲ್ಲರು ಆಂಟಿ ,ಅಂಕಲ್ ಮತ್ತು ಅಜ್ಜ , ಅಜ್ಜಿ ಗಳೇ ...
ಏನೇ ಅಗಲಿ ನನ್ನ ಮಗ ಚೌತಿ ಚಂದ್ರಮನೆ . ಅವನಾಡುವ ಆಟಗಳು ನನ್ನ ಬಾಲ್ಯವನ್ನು ನೆನಪಿಸುತ್ತವೆ .

ಮುಗ್ದ ಮನಸಿನ ಮಗುಗಳ ನಗು ಆಟ ನನಗೆ ಹಂಸಲೇಖರ "ಆಗಿ ಬಿಡು ಮಗುವಾಗಿ ಬಿಡು ನಿ ಚಿಂತೆ ಬೆಳೆದಂತೆ .." ಮತ್ತು ಜೋಗುಳ ಸೀರಿಯಲ್ ನ ಶೀರ್ಷಿಕೆ ಹಾಡು ನೆನಪಿಸುತ್ತವೆ ...................

ನೀನಿದ್ದರೆ ನನ್ನ ಜೊತಿ ...

ನೀನಿದ್ದರೆ ನನ್ನ ಜೊತಿ ...

ಮರೆಯುವದು ನನ್ನ ಭೀತಿ ...


ಏನೇ ಇರಲಿ ಇವಳ ಜಾತಿ ...

ಇರಲಿ ಇವಳೇ ನನ್ನ ಸಾಥಿ...


ಮುಖ ಮಾತ್ರ ಮರ ಕೋತಿ ...

ನಡೆದರೆ ಮಾತ್ರ ತೇಟ ಹಾಥೀ ...


ಹೆಸರು ಮಾತ್ರ ಜ್ಯೋತಿ ...

ಅದಕ್ಕೆ ಇಲ್ಲ ನನಗೀಗ ಭೀತಿ...

ನಿನ್ನ ನಾನರಿಯೆ ...

ನಿನ್ನ ನಾನರಿಯೆ ...ನಿನ್ನ ನಾನರಿಯೆ

ನಿನ್ನರಿಯುವ ಹಂಬಲ ನಾರಿಯೇ ...


ಕರೆದಾಗ ಬರದಿರುವದು ನಿ ಸರಿಯೇ ...

ಪ್ರತಿ ಬಾರಿ ಹೇಳುವದು ನಿ ಸಾರಿಯೇ ...


ಹಿಂದೆ ಬಿದ್ದಿರುವದು ನಾ ಜಾರಿಯೇ ...

ಈಗಲಾದರು ಮುಗಿಸು ನಾರಿಯೇ...

ನಿನ್ನ ನಿತ್ಯ ಕರ್ಮಗಳನ್ನು ನನ್ನ ನಾಯಿ ಮರಿಯೇ .......

ಆಶಾ. ಡಿ (ಆಷಾಢ) ಮಾಡಿದ ಮೋಡಿ .....

ಯಾರು ರೀ.. ಆಶಾದೇವಿ ನಿಮಗೇನಾದರೂ ಗೊತ್ತ?. ಹೆದರಬೇಡಿ, ಇವಳು ನನ್ನ ಹೆ೦ಡತಿನು .. ಅಲ್ಲ ಗರ್ಲ್ ಫ್ರೆಂಡ್ ನು.. ಅಲ್ಲ . ಇವಳು ಋತುರಾಜನ ಗರ್ಲ್ ಫ್ರೆಂಡ್ ಮತ್ತು ಪ್ರೇಯಸಿ ಕೂಡ . ಋತು ರಾಜ ಎಲ್ಲ ೧೧ ಮಾಸಗಳನ್ನು ಪಟಾಯಿಸಿ ಮದುವೆಯಾಗಿದ್ದಾನೆ ಅಂತ ಅನ್ನಿಸುತ್ತೆ , ಆದರೆ ಈ ಆಶಾ ದೇವಿ ಮಾತ್ರ ಅವನಿಗೆ ಕೈ ಕೊಟ್ಟಿರಬೇಕು. ಅದಕ್ಕೆ ಇರಬೇಕು ಗಂಡ ಹೆ೦ಡತಿರು ಒಂದಾಗಿ ಇರಬಾರದೆಂದು, ಈ ಆಷಾಢ ಮಾಸದಲ್ಲಿ ಅತ್ತೆ ಸೊಸೆಯ ನೆಪ ಹೇಳಿ ಅವರನ್ನು ವಿರಹ ವೇದನೆ ಇಂದ ಸತಾಯಿಸುತ್ತಿರಬೇಕು .


ಆಶಾ. ಡಿ (ಆಷಾಢ) ಮಾಸದಲ್ಲಿಯ ಚಳಿ ಗಾಳಿ ತುಂಬಾ ಚೆನ್ನಾಗಿ ಬಿಸುತ್ತೆ . ಚಳಿಯಲ್ಲಿ ಏನು ಕೆಲಸ ಮಾಡಲು ಮನಸ್ಸು ಬರುವದಿಲ್ಲ ಹಾಗೆ ಬೆಚ್ಚನೆ ಹಾಸಿಗೆ ಹಾಸಿ ಮಲಗಿ ಬಿಡಬೇಕೆಂದು ಅನಿಸುವದು .


ಇವತ್ತಿನಿಂದ ಆಶಾದೇವಿ ಮನೆಗೆ ಬಂದಿದ್ದಾಳೆ. ಹೆಂಡತಿಗೆ ರಜೆ ಇವಳ ಜೊತೆನೆ ಪ್ರಣಯ ಸಲ್ಲಾಪವೆಲ್ಲ. ನಮ್ಮೂರಲ್ಲಿ ಅಂದರೆ ಮಲೆನಾಡಿ ನಲ್ಲಿ ಈ ಆಶಾ ದೇವಿಯ ಪ್ರತಾಪ ನೋಡಬೇಕು . ಇವಳು ತನ್ನ ಅಮೃತ ಸ್ಪರ್ಶದಿಂದ ಎಲ್ಲ ಹದಿ ಹರೆಯದ ಹುಡುಗ ಹುಡುಗಿಯರನ್ನು ಸತಾಯಿಸಿರುತ್ತಾಳೆ . ಅವಳು ಎಲ್ಲ ಹುಡುಗ , ಹುಡುಗಿಯರಿಗೂ ತನ್ನ ಸಿಹಿ ಮುತ್ತು ಗ್ಯಾರಂಟೀ ನೀಡಿರುತ್ತಾಳೆ (ಅಂದರೆ ತುಟಿಗಳು ತಂಪು ಗಾಳಿಯಿಂದ ಬಿರುಕು ಬಿಟ್ಟಿರುತ್ತವೆ). ಹುಡುಗಿಯರಿಗೆ ಆದರೆ ಪರವಾಗಿಲ್ಲ ಹುಡುಗರಿಗೂ lipstick ಹಾಕಿರುತ್ತಾಳೆ . ಹೀಗೆ ಗೋವಿಂದ ಆಚಾರ್ಯರ ಮಗ ರಮೇಶನಿಗೆ lipstick ಇಟ್ಟಿದ್ದಳು . ಅವಳ lipstick ಮಹಾತ್ಮೆಯಿಂದ ತೇಟ ಹುಡುಗಿಯಂತೆ ಕಾಣುತ್ತಿದ್ದ ರಮೇಶ . ರಮೇಶ ಯಾವತ್ತು ಪ್ಯಾಂಟ್ ಶರ್ಟ್ ದರಿಸಿದವನಲ್ಲ. ಅವನೆನಿದ್ದರು ಹಾಕುವದು ಜುಬ್ಬಾ ಪೈಜಾಮ. ಅವನು ಹೊಸದಾಗಿ ಹೊಲಸಿದ ಜುಬ್ಬಾ ಪೈಜಾಮ ತೇಟ ಹುಡುಗಿಯರ ಚುಡಿದಾರದಂತೆ ಹೊಲೆದಿದ್ದ ಅವನ ಟೈಲರ್. ಅವನ ರೂಪವೋ ಯಾ ಹುಡುಗಿಯರು ನಾಚುವ ಸೌಂದರ್ಯ . ಹೊಸದಾಗಿ transfer ಆಗಿ ಬಂದ ಕಲ್ಲೇಶಪ್ಪನ ಮಗ ಪಕ್ಯ ಈ ರಮೆಶನನ್ನ ಹುಡುಗಿ ಎಂದು ತಿಳಿದು ಅವನ ಹಿಂದೆ ಬಿದ್ದು ಲವ್ ಲೆಟರ್ ಬೇರೆ ಕೊಡಲು ಹೋಗಿದ್ದಾಗ ಅವರಪ್ಪ ಗೋವಿಂದ್ ಆಚರ್ಯರಿಂದ ಕಪಾಳ ಮೋಕ್ಷ ಹೊಂದಿದ್ದ . ಅನಂತರ ಜುಬ್ಬಾ ಪೈಜಮಕ್ಕೆ ದೊಡ್ಡದೊಂದು ನಮಸ್ಕಾರ ಹೇಳಿ ಪ್ಯಾಂಟ್ ಶರ್ಟ್ ಧರಿಸಲು ಶುರು ಮಾಡಿದ್ದ ಪಾಪ.. ನಮ್ಮ ಈ ರಮೇಶ.


ಹೀಗೆ ಗೋವಿಂದ ಆಚಾರ್ಯರ ಇನ್ಸಿಡೆಂಟ್ ನ ಹಾಗೆ ಅತ್ತೆ ಗಂಡನ ಹಾಗೆ ಸೊಸೆಗೆ ಕಾಣುತ್ತಾಳೋ... ಗೊತ್ತಿಲ್ಲ ಅಥವಾ ಋತುರಾಜನ ಶಾಪ ದಿಂದಲೋ? ಒಟ್ಟಿನಲ್ಲಿ ಅವರನ್ನು ದೂರ ದೂರ ಇಡುತ್ತಾರೆ.


ಈ ಆಶಾ ದೇವಿಯ ಮುತ್ತಿನಿಂದ ಬಚಾವ ಆಗಲು ಕೆಲ ನನ್ನ ಸ್ನೇಹಿತರು ಬಿಡಿ ಅಥವಾ ಸಿಗರೇಟ್ ಗೆ ಮೊರೆ ಹೋಗಿರುತ್ತಾರೆ .
ಇದು ಇಲ್ಲಿಯ ಕತೆ ಅಷ್ಟೆ ಅಲ್ಲ ತಮಿಳ್ ನಾಡಿನಲ್ಲೂ ಗಂಡ ಹೆಂಡತಿಯರನ್ನು ಒಂದಾಗಿ ಇರಲು ಬಿಡುವದಿಲ್ಲ . ಆದರೆ ಹೆಸರು ಮಾತ್ರ "ಆಡಿ". ಆದರೆ ನೋಡಲು ಬಿಡಲಾರದೆ ಇಬ್ಬರನ್ನು ದೂರ ದೂರ ಓಡಿಸಿರುತ್ತಾರೆ .


ಅದಕ್ಕೆ ಇರಬೇಕು ನನ್ನ ಗಾಡಿಗೂ ಆಶಾಳ ಗಾಳಿ ಸೊಂಕಿದೆ . ರಾಡಿ(ಕೆಸರು)ಯನ್ನು ಕಂಡು ದೂರ ದೂರ ಓಡುತ್ತಿದ್ದ ಹಾಗೆ ನಾನು ಖುಷಿಪಟ್ಟಿದ್ದು ಅಷ್ಟಿಷ್ಟಲ್ಲ, ಆದರೆ ಹುಡುಗಿಯರ ಗಾಡಿ ಕಡೆಗೆ ವಾಲುತ್ತಿದ್ದಾಗ ಕೆಟ್ಟ ಕೋಪ ಬಂದಿತ್ತು .


ಈ ಆಶಾ ದೇವಿಯ ಪ್ರತಾಪ ನನ್ನ ಗೆಳೆಯನ ಮನೆಯಲ್ಲೂ ನಡೆದಿತ್ತು .ಅವರದು joint family ಎಲ್ಲರು ಒಟ್ಟಿಗೆ ಇರುವದು ತವರು ಮನೆ ಅತ್ತೆ ಮನೆ ಎರಡು ಒಂದೇ . ಹೀಗಾಗಿ ನನ್ನ ಗೆಳಯ ತನ್ನ ಹೆಂಡತಿಯನ್ನು ಅಕ್ಕ ಪಕ್ಕ ದಲ್ಲಿ ಯಾವುದಾದರು ಒಂದು ರೂಂ ಭಾಡಿಗೆ ಹಿಡಿದು ಅಲ್ಲಿ ಇಡಿಸುತ್ತಿದ್ದ . ವರ್ಷದಲ್ಲಿ ೨೦೦೦ ರುಪೈಯಗಳ extra ಖರ್ಚು .ಮಕ್ಕಳಿಗೆ ಹಬ್ಬವೋ ಹಬ್ಬ . ಎರಡೆರಡು ತರಹದ ತಿಂಡಿ ,ಊಟ etc...


ಬೇಗನೆ ಈ ಆಶಾ ದೇವಿ ಹೋಗಿ ವಿರಹ ವೇದನೆ ಮುಗಿಯಲಿ ಎಂದು ಆಶಿಸೋಣ . Dr ರಾಜ ರವರ "ಶ್ರಾವಣ ಮಾಸ ಬಂದಾಗ ಆನಂದ ತಂದಾಗ ..ವಿರಹ ಗೀತೆ ಇನ್ನಿಲ್ಲ ..." ಹಾಡಿನ ಹಾಗೆ ನಮ್ಮೆಲ್ಲರಿಗೂ ಮಡದಿಯ ಪ್ರೀತಿಯನ್ನು ಸವಿಯೋಣ . ವಿರಹ ಗೀತೆಯನ್ನು ಮರೆಯೋಣ .........


(Note:ಆಷಾಢದ ಮೇಲೆ ಕವನ ಬರೆದು ಈ article ಬರೆಯುವದಕ್ಕೆ ಪ್ರೋತ್ಸಾಹಿಸಿದ ಶ್ರೀ ಉಮೇಶ್ ದೇಸಾಯಿ ಯವರಿಗೆ ಅನಂತಾನಂತ ಧನ್ಯವಾದಗಳು).

ಯೋಗ್ಯ ರಾಗಿ ಭೋಗ್ಯ ಮ್ಯಾಗಿ!

"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!....

ಮ್ಯಾಗಿ ಈಗ ನಮ್ಮನೆಯ ಮಹಾಪ್ರಸಾದವಾಗಿ ಪರಿಣಮಿಸಿದೆ . ಮೊದ ಮೊದಲು ಈ ಮ್ಯಾಗಿಯನ್ನು ನಾನು ಕಂಡಿದ್ದು 8 ವರ್ಷಗಳ ಹಿಂದೆ ನನ್ನ ಗೆಳಯ ಶ್ರೀಧರ ಬೆಂಗಳೊರಿನಲ್ಲಿ ಒಂದು ಹೋಟೆಲ್ಲಿಗೆ ಕರೆದುಕೊಂಡು ಹೋಗಿದ್ದಾಗ. ಒಳಗೆ ಹೋಗುವ ಮೊದಲೇ ಇದು ಸಸ್ಯಾಹಾರಿ ಹೋಟೆಲ್ ಹೌದೋ ಅಲ್ಲವೋ ಎಂದು ದೃಡಪಡಿಸಿಕೊಂಡ ಮೇಲೆ ಒಳಗೆ ಹೋಗಿದ್ದು. ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಜಗಿದಿದ್ದ.

ಆನಂತರ ಅವನು ನನಗೆ ಕೇಳಿದ ಏನ್ಬೇಕು ಆರ್ಡರ್ ಮಾಡು ಎಂದು. ನಾನು ಮಸಾಲೆ ದೋಸೆ ಎಂದೆ. ಅದಕ್ಕೆ ಅವನು "ಎ ಡಾಲ್ಡಾ " (ಜಿಡ್ಡು ನನ್ನ ಮಗನೆ) ಏನಾದರು ಸ್ಪೆಷಲ್ ಆರ್ಡರ್ ಮಾಡು ಎಂದ. ಈ ಸ್ಪೇಷಲಗಳ ಅನುಭವವಿರುವುದರಿಂದ ನನಗೆ ಅದೇ ಸಾಕು ಎಂದೆ. (ಒಂದು ದಿವಸ ಹೋಟೆಲ್ಗೆ ಹೋದಾಗ ಪಾಯಸವನ್ನು ಅಂದರೆ "ನವರತ್ನ ಕುರ್ಮಾ" ವನ್ನು ನೆಂಚಿಕೊಂಡು ರೋಟಿ ತಿಂದಿದ್ದು). ಇರಲಿ ಬಿಡು ಮಗ ನನಗೆ ಮಸಾಲೆ ಅಥವಾ ತುಪ್ಪದ ದೋಸೆನೆ ಸಾಕು, ನಿನಗೇನು ಬೇಕೋ ನೀನು ಆರ್ಡರ್ ಮಾಡಿಕೋ ಎಂದೆ. ಅವನು ನನಗೆ ಒಂದು ತುಪ್ಪದ ದೋಸೆ ಮತ್ತು ತನಗೆ ಮಂಚೂರಿ ಮತ್ತು ನೋಡಲ್ಸ ಆರ್ಡರ್ ಮಾಡಿದ.

ಮಾಣಿ ಸ್ವಲ್ಪ ಸಮಯದ ನಂತರ ಇಬ್ಬರ ತಿಂಡಿಯನ್ನು ತಂದಿಟ್ಟ. ನನ್ನಗೆ ಹೇಗಿದ್ದರೂ ಗೊತ್ತಿತಲ್ಲ ಅದಕ್ಕೆ ನಾನು ನನ್ನ ಪ್ಲೇಟ್ ಮಾತ್ರ ತಿನ್ನುತ್ತಿದ್ದೆ . ಅವನಿಗೆ ಎಲ್ಲ ಪ್ಲೇಟ್ ಗಳ ರುಚಿ ನೋಡುವ ಅಭ್ಯಾಸ. ನನ್ನ ಪ್ಲೆಟಿಗೂ ಕೈ ಹಾಕಿದ "ಏ ಮಚ್ಚ ಬೇಡ" ಎಂದೆ ಕೋಪದಿಂದ . ಏಕೆ? ಎಂದಾಗ ಇದೇನೋ ಚಿಕೆನ್ನು ಮತ್ತು ಅದರ ಕರಳುಗಳನ್ನ ತಿಂತ ಇದ್ದೀಯ ನನ್ನ ತಿಂಡಿ ಮುಟಬೇಡ please ...ಎಂದೆ. ಅದಕ್ಕೆ ಅವನು ನಗುತ್ತ ಇದು ಗೋಬಿ ಮಂಚೂರಿ ಅಂತ ಇದನ್ನ ಎಲೆ ಕೊಸಿನಿಂದ ಮಾಡುತ್ತಾರೆ ಇದು ಪೂರ್ತಿ ಸಸ್ಯಾಹಾರಿ ಅಂದ.

ಮತ್ತೇ ಅದು ... ಎಂದು ನಾನು ರಾಗವೆತ್ತಿದಾಗ ಅದು ನಮ್ಮ ಶಾವಿಗೆ ತರಹನೆ ಕಣೋ ಆದರೆ ಸ್ವಲ್ಪ ದಪ್ಪಗಾಗಿರುತ್ತೆ ಎಂದ. ಇದು ಕೂಡ ಸಸ್ಯಹಾರಿನೆ, "Chinese Special" ಆಹಾರ ಎಂದು ಸಣ್ಣ ಭಾಷಣ ಬಿಗಿದ. ಅವನಿಗೆ ನನ್ನ ತಿಂಡಿಯಲ್ಲಿಯ ಸ್ವಲ್ಪ ಭಾಗ ನಾನೇ ಕೊಟ್ಟು , ಇನ್ನು ನನ್ನ ಪ್ಲೇಟ್ ಕಡೆ ತಲೆ ಹಾಕಬೇಡಪ್ಪ ಅಂತ ಹೇಳಿ, ನನ್ನ ತಿಂಡಿಯನ್ನ ತಿಂದು ಮುಗಿಸಿದೆ. ಅವನು ತಿನ್ನುವ ಅವಸ್ಥೆ ನೋಡಿ ದಂಗಾದೆ. ಎರಡು ಕಡ್ಡಿಗಳಿಂದ ಹಿಡಿದು ತಿನ್ನುತಿದ್ದ. ಲೇ ಕೈಗಲಿಂದಲೇ ತಿನ್ನಪ್ಪ ಎಷ್ಟು ಹೊತ್ತು ಮಾಡ್ತಿಯ ನನ್ನ ಬಸ್ ಇರೋದು 7 ಘಂಟೆ ಗೊತ್ತು ತಾನೆ ಎಂದೆ. ಅದು ಟೇಬಲ್ ಮ್ಯಾನರ್ಸ್, ಹಾಗೆಯೆ ತಿನ್ನ ಬೇಕು ಅಂತ ಹೇಳಿ ಹಾಗೆಯೆ ತಿಂದು ಮುಗಿಸಿದ್ದ .ಬೆಂಕಿ ಪೊಟ್ಟಣದ ಕಡ್ಡಿಗಳೆಲ್ಲ ಆ ಗೋಬಿ ಮಂಚುರಿಯ ಮೇಲೆ ನೋಡಿ ನಕ್ಕು ಸುಮ್ಮನಾದೆ.

ಹೋಟೆಲಿನಿಂದ ಹೊರಗೆ ಬಂದ ಮೇಲೆ ಹೇಳಿದೆ ಚೈನೀಸ್ ತಿನ್ದಿದಕ್ಕೆ ಕಣೋ ನಿನ್ನ ಕಣ್ಣುಗಳು ಸ್ವಲ್ಪ ಚಿಕ್ಕದಾಗಿವೆ ಅಂದೆ ತಮಾಷೆಗಾಗಿ . ಹೀಗೆ ಚೈನೀಸ್ ತಿಂತ ಇದ್ರೆ ನಿನಗ್ಯಾರು ಬ್ರಾಹ್ಮಣ ಕನ್ಯಾ ಕೊಡಲ್ಲ ಎಂದು ಸತಾಯಿಸಿದೆ.

ಈಗ ನಮ್ಮನೆಯಲ್ಲಿ ಮಾಗಿಯ ಚಳಿಯೇ ಇರಲಿ... ಇಲ್ಲ ಉರಿಬಿಸಿಲೆ ಇರಲಿ... ಮನೆಯಲ್ಲಿ ಮಾತ್ರ ಮ್ಯಾಗಿಯ ಮಂತ್ರ. ನನ್ನ ಮಡದಿ ಮತ್ತು ಮಗನಿಗೆ ಮ್ಯಾಗಿ ಇದ್ದರೆ ಸಾಕು ಅದೇ ಪಂಚ ಪಕವಾನವಿದ್ದಹಾಗೆ. ಅಷ್ಟೇ ಏಕೆ ಒಂದು ದಿವಸ ತಿಂದು ಉಳಿದ ಮ್ಯಾಗಿಯನ್ನು ನಮ್ಮನೆಯ ಗೋಡೆ ಮೇಲೆ ಹಾಕಿದ್ದೆ ಅದನ್ನು ತಿಂದ ಒಂದು ಕಾಗೆ ಮರುದಿನವೂ ಹಾಜರ ಆಗಿ ... ಕಾ .. ಕಾ .. ಎನ್ನುವ ಬದಲು ಮ್ಯಾಗಿ .. ಮ್ಯಾಗಿ .. ಅಂತ ಜಪ ಮಾಡುತ್ತಿತ್ತು!.

ಹೀಗೆ ಒಂದು ದಿವಸ ಬ್ರಿಗೇಡ್ ರೋಡ್ನಲ್ಲಿ ನನ್ನ ಮಡದಿ ,ಮಗನೊಂದಿಗೆ ಹೋಗುತ್ತಿದ್ದಾಗ ಒಂದು ನಿಗ್ರೋ ಹುಡುಗಿಯ ತಲೆಯನ್ನು ನೋಡಿ "ಮ್ಯಾಗಿ .. ಮ್ಯಾಗಿ .." ಅಂತ ಅಳಹತ್ತಿದ. ಮತ್ತೇ Chinees ಹೋಟೆಲ್ಲಿಗೆ ಹೋಗಿ ಮ್ಯಾಗಿ ತಿನ್ನಿಸಿ ಕರೆದುಕೊಂಡು ಬಂದಾಗ ಸಮಾಧಾನವಾಗಿತ್ತು . ಇಗ ಮಗನ ಜೊತೆ ಈ ಜೋಗಿಗು ಅಭ್ಯಾಸವಾಗಿ ಬಿಟ್ಟಿದೆ .

ನಿಮಗೆ ಯಾವತ್ತಾದರೂ ಶ್ರೀನಿವಾಸನಗರದ ಕಡೆಯಿಂದ ಹೋಗುತ್ತಿದ್ದಿರ ದಯವಿಟ್ಟು ನಿಲ್ಲದೆ ಹಾಗೆ ಹೋಗಿ , ಇಲ್ಲದ್ದಿದರೆ ನಿಮಗೂ ಸಿಗುವುದು ಮ್ಯಾಗಿ ... ಮ್ಯಾಗಿ!!!.

ರಾಗಿ ತಿನ್ನುವದು ನಿರೋಗಿಯಾಗಿರಲು . ಮ್ಯಾಗಿ ತಿನ್ನುವದು ನನ್ನ ಮಗನಿಗಾಗಿ ....