<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-3457141075796460701</id><updated>2012-01-18T05:38:39.771-08:00</updated><category term='ಮೈಸೂರು'/><category term='ತಿಳಿ ಸಾರು'/><category term='ಆಹಾರ ಸಂಸ್ಕೃತಿ'/><category term='ಸಣ್ಣ ಕತೆ'/><category term='ಅನುಭವ ಕಥನ'/><category term='ತಿಳಿ ಹಾಸ್ಯ'/><category term='ಅಶ್ವಿನಿ ದೇವತೆಗಳು'/><category term='ನಗು'/><category term='ಶ್ಯಾಮ್ ರಾಯರು'/><category term='ಧಾರವಾಡ'/><category term='ಹಳೆಯ ನೆನಪು.'/><category term='ವಿಲಾಸ್'/><category term='ಆಡುಭಾಷೆ'/><category term='ಇಡ್ಲಿ'/><category term='ತರ್ಲೆ ಮಂಜ'/><category term='ಹಾಸ್ಯ'/><category term='ತಿಳಿ ಮಜ್ಜಿಗೆ'/><title type='text'>ನೀವು ನಕ್ಕರೆ :) ಹಾಲು ಸಕ್ಕರೆ....</title><subtitle type='html'>ಇಲ್ಲಿ ಬರೆದಿರುವ ಆರ್ಟಿಕಲ್ ಗಳಲ್ಲಿ  ಕೆಲವು ಸತ್ಯ ಘಟನೆಗಳು ಮತ್ತೆ ಕೆಲವು ಕಲ್ಪನೆಗಳು....ಇದರಿಂದ ನಿಮ್ಮ ಮುಖದಲ್ಲಿ ಮುಗುಳ್ನಗೆ ತರಿಸಿದಲ್ಲಿ ಅದೇ ನಮಗೆ ಹಾಲು ಸಕ್ಕರೆ....</subtitle><link rel='http://schemas.google.com/g/2005#feed' type='application/atom+xml' href='http://haalusakkare.blogspot.com/feeds/posts/default'/><link rel='self' type='application/atom+xml' href='http://www.blogger.com/feeds/3457141075796460701/posts/default?max-results=100'/><link rel='alternate' type='text/html' href='http://haalusakkare.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/3457141075796460701/posts/default?start-index=101&amp;max-results=100'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>106</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-3457141075796460701.post-1634537992969681048</id><published>2011-11-22T05:28:00.000-08:00</published><updated>2011-11-24T19:56:17.027-08:00</updated><category scheme='http://www.blogger.com/atom/ns#' term='ಅಶ್ವಿನಿ ದೇವತೆಗಳು'/><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತರ್ಲೆ ಮಂಜ'/><title type='text'>ಬರಿಬೇಕು.. ಬರಿಬೇಕು ..</title><content type='html'>ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.&lt;br /&gt;&lt;br /&gt;ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು. ನೀವೇ ಬರೆದಿದ್ದೀರಿ ತಾನೇ ಪ್ರೆಸ್ ಎಂದು ನಿಮ್ಮ ಗಾಡಿ ಹಿಂದುಗಡೆ ಎಂದು ಹೇಳಿದ. ಅದನ್ನು ಕೇಳಿ ಅವಳಿಗೂ ನಗು ತಡಿಯಲು ಆಗಲಿಲ್ಲ, ಸುಮ್ಮನೆ ಹೊರಟು ಹೋದಳು. ಹೀಗೆ ಮತ್ತೊಮ್ಮೆ ಮಂಜನ ಮನೆಗೆ ಹೋಗಿದ್ದೆ. ನಾವು ಕಾಫಿ ಕುಡಿಯುತ್ತ ಇರುವಾಗ ಒಂದು ಜೇನು ಹುಳು ಬಂದಿತು. ಅದಕ್ಕೆ ಮಂಜ ಅಕ್ಕ-ಪಕ್ಕದ ಮನೆ ಬಿಟ್ಟು, ಇಲ್ಲೇ ಏಕೆ? ಬಂತು ಗೊತ್ತ ಎಂದು ನನಗೆ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ನನ್ನ ಸಿಹಿ ಮಡದಿಯ ಸಲುವಾಗಿ ಎಂದ. ಮಂಜನ ಮಡದಿ ಅವನನ್ನು ಸಿಟ್ಟಿನಿಂದ ನೋಡಿದಳು. ಏಕೆ? ತಂಗ್ಯಮ್ಮ ಹೊಗಳಿದರು ಕೂಡ ಸಿಟ್ಟು ಎಂದು ಕೇಳಿದೆ. ನಿನ್ನೆ ನನಗೆ ಸ್ವಲ್ಪ ಶುಗರ್ ಇದೆ ಎಂದು ಡಾಕ್ಟರ ಹೇಳಿದರು ಅದಕ್ಕೆ ಈ ಮಾತು ಎಂದಳು. ನನಗೆ ತುಂಬಾ ನಗು ಬಂತು. ಒಮ್ಮೆ ಮಂಜನ ಜೊತೆ ಹೋಟೆಲಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗಿ ತುಂಬಾ ಕಷ್ಟ ಪಟ್ಟು ಫೋರ್ಕ್ ನಿಂದ ದೋಸೆ ತಿನ್ನುತ್ತಿದ್ದಳು. ಅದನ್ನು ನೋಡಿ ಮಂಜ ನಗುತ್ತ ಇವಳು ಫೋರ್ಕಿನಿಂದ ಕಾಫಿ ಕುಡಿದರೆ ಹೇಗಿರುತ್ತೆ ಎಂದು ನನಗೆ ಕೇಳಿದ. ಹೀಗೆ ನನ್ನ ಮಗನಿಗೆ ಕಾರ್ಟೂನ್ ಧ್ಯಾನ... ನನಗೆ ಬರೆಯುವ ಹುಚ್ಚು.&lt;br /&gt;&lt;br /&gt;ಹೀಗೆ ಒಮ್ಮೆ ಮಡದಿಗೆ ಬರೆದರೆ ಬೀಚಿ ಅವರ ಹಾಗೆ ಬರೀಬೇಕು ಕಣೇ ಎಂದು ಹೇಳಿದೆ. ಅದಕ್ಕೆ ಮಡದಿ ನೀವು ಏನಾದರು ಗೀಚಿ, ಆದರೆ ಓದು ಓದು ಎಂದು ನನ್ನ ತಲೆ ಮಾತ್ರ ತಿನ್ನಬೇಡಿ ಎಂದು ನನ್ನನ್ನು ತಲೆಯ ಹೇನಿಗೆ ಹೋಲಿಸುವ ಹಾಗೆ ಹೇಳಿದಳು.&lt;br /&gt;&lt;br /&gt;ಅಷ್ಟರಲ್ಲಿ ಮಡದಿ ಕೂಗಿ "ಕಸಬರಿಗೆ ತಂದು ಕೊಡಿ" ಎಂದು ಕೂಗಿದಳು. ಕಸಬರಿಗೆ ತೆಗೆದುಕೊಂಡು ಹೋಗಿ ಅವಳ ಕೈಗೆ ಕೊಟ್ಟೆ. ಕೂಡಲೇ ಕಸಬರಿಗೆ ಕೆಳಗೆ ಒಗೆದು,ಕೋಪದಿಂದ ಕಸಬರಿಗೆ ಹೀಗೆ ಕೈಗೆ ಕೊಡುವುದಾ ಎಂದು ಬೈದಳು. ಮತ್ತೆ ಇನ್ನು ಹೇಗೆ ಕೊಡಬೇಕು ತಲೆ ಮೇಲೆ ಇಡಬೇಕಾ ಅಥವಾ ಕಾಲಿಗೆ ಎಂದೆ. ಹೀಗೆ ಕೈಗೆ ಕೊಟ್ಟರೆ ಜಗಳವಾಗುತ್ತೆ ಎಂದು ಕೋಪಮಾಡಿಕೊಂಡು ಜಗಳ ಶುರುಮಾಡಿದಳು. ಅದು ಯಾರು ಅವಳಿಗೆ ಹೀಗೆ ಭವಿಷ್ಯವಾಣಿ ಹೇಳಿದರೋ ನಾ ಕಾಣೆ ಜಗಳ ಆಗುತ್ತೆ ಎಂದು. ಅವರ ಏಳನೇ ಅರಿವು ಸಾಧಿಸಿರುವ ಭವಿಷ್ಯವಾಣಿಗೆ ಸಲಾಂ ಹೊಡೆದೆ(ನಿಜವಾಗಿಯೂ ಜಗಳ ಶುರು ಮಾಡಿದ್ದರಿಂದ).&lt;br /&gt;&lt;br /&gt;ಕಸಗುಡಿಸಿದ ಮೇಲೆ ಬಂದು, ಏನು? ಅಷ್ಟು ಆಳವಾಗಿ ಯೋಚಿಸುತ್ತ ಇದ್ದೀರಾ ಎಂದಳು. ಏನಾದರು ಬರೀಬೇಕು ಕಣೇ ಎಂದೆ. ನೀವೇನು ಬರೆಯುವುದು, ಈಗಾಗಲೇ ಎಲ್ಲ ಖ್ಯಾತ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. ನೀವು ಅದನ್ನೇ ನಿಮ್ಮ ಧಾಟಿಯಲ್ಲಿ ಬರೆಯಬಹುದು ಅಷ್ಟೇ. ಅಥವಾ ಅವರು ಬಿಟ್ಟಿರುವ ಅಲ್ಪ ಸಲ್ಪ ಸಾಹಿತ್ಯ ಮಾತ್ರ ಬರೆಯಲು ಸಾಧ್ಯ ನೀವು ಖಾಲಿದಾಸರು ಎಂದು ಹಿಯಾಳಿಸಿದಳು.&lt;br /&gt;&lt;br /&gt;"ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ...ಖಾಲಿ ದೋಸೆಗಿಂತ ಒಳ್ಳೆ ರುಚಿ ಇಲ್ಲರಿ" ಎಂದು ಹಾಗೆ ಹಾಡುತ್ತ ಕುಳಿತ್ತಿದ್ದಾಗ, ಇದೊಂದು ಗೊತ್ತು ನಿಮಗೆ ಹೋಗಿ ಬೇಗನೆ ನೀರು ಕಾಯಿಸಿ ಎಂದು ಕಳುಹಿಸಿದಳು. ಬೇಜಾರಿನಿಂದ "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ...." ಎಂದು ಹಾಡುತ್ತ, ನೀರು ಕಾಯಿಸಲು ಹೋದೆ. ಹಾಗೆ ಆಳವಾಗಿ ಯೋಚಿಸುತ್ತ ಕಟ್ಟಿಗೆ ಹಾಕುತ್ತ ಕುಳಿತಿರುವಾಗ ನನ್ನ ಕೈ ಒಳಗಡೆ ಹಾಕಿಬಿಟ್ಟಿದ್ದೆ. ನನ್ನ ಕೈಗೆ ಬರೆ ಬಿದ್ದಿತ್ತು. ಜೋರಾಗಿ ಕಿರುಚಲು ಮಡದಿ ಬಂದು, ಈಗ ಬರೆ ಸಿಕ್ಕಿತಲ್ಲ, ಅದಕ್ಕೆ ಹೇಳಿದ್ದು ನಿಮಗೆ ಬರಿಬೇಕು.. ಬರಿಬೇಕು .. ಎಂದು ಹೇಳಬೇಡಿ ಎಂದು, ಮೇಲೆ ಇರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ಬಿಟ್ಟಿದ್ದಾರೆ ಎಂದು ನಗುತ್ತ, ಇನ್ನೇನು ಬನ್ನಿ ಸಾಕು ಎಂದು ಹೇಳಿ ಕೈಗೆ ಬರ್ನೋಲ್ ಹಚ್ಚಿ ಮಲಗಲು ಹೇಳಿದಳು. ಸಧ್ಯ ಅದೇ ವಿಷಯ ಈಗ ..ಬರೆದಿದ್ದೇನೆ .. :-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1634537992969681048?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1634537992969681048/comments/default' title='Post Comments'/><link rel='replies' type='text/html' href='http://haalusakkare.blogspot.com/2011/11/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1634537992969681048'/><link rel='self' type='application/atom+xml' href='http://www.blogger.com/feeds/3457141075796460701/posts/default/1634537992969681048'/><link rel='alternate' type='text/html' href='http://haalusakkare.blogspot.com/2011/11/blog-post.html' title='ಬರಿಬೇಕು.. ಬರಿಬೇಕು ..'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3457141075796460701.post-3035899822304689163</id><published>2011-08-27T02:06:00.000-07:00</published><updated>2011-08-27T02:08:21.590-07:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ಅತಿಥಿ ದೇವೋಭವ ....</title><content type='html'>ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ ಸ್ವಚ್ಚವಾಗಿ ಇಡಬೇಕಾ?, ಆಯಿತು ಬಿಡಿ ಹಾಗೆ ಬಿದ್ದಿರಲಿ ನನಗೇನೂ, ಎಷ್ಟೇ ಆದರೂ ಅವು ನಿಮ್ಮ ಸಂಬಂಧಿಕರು(ಗೆಸ್ಟ್) ಅಲ್ಲವೇ ಎಂದಳು. ಅಷ್ಟರಲ್ಲಿ ನನ್ನ ಪುಸ್ತಕದ ಒಳಗಿಂದ ಒಂದು ಜಿರಲೆ ತನ್ನ ಮೀಸೆ ತೋರಿಸುತ್ತ  ಹೊರಗಡೆ ಬಂತು.  ಪಾಪ ಅದಕ್ಕೂ ಕೇಳಿಸಿರಬೇಕು. ನಿಮಗಿಂತ ಇದೆ ವಾಸಿ ನೀವು ಪುಸ್ತಕ ತಂದು ಒಟ್ಟುತ್ತಿರಿ..ಅದನ್ನು ಓದಲು ಪಾಪ ನಿಮ್ಮ  ಸಂಬಂಧಿ ಕಷ್ಟ ಪಡುತ್ತೇ ಎಂದು ವ್ಯಂಗದ ಮಾತು ಆಡಿ ಹೊರಟು ಹೋದಳು. ರಕ್ತ ಸಂಬಂಧಿ ಖಂಡಿತಾ ಅಲ್ಲ ನನ್ನ ರಕ್ತ ಕೆಂಪು ಅದರ ರಕ್ತ ಬಿಳಿ. ಬಿಳಿ ರಕ್ತ ಕಣಗಳು ಮನುಷ್ಯನಲ್ಲಿ ಇರುತ್ತವೆ ಎಂದು ಓದಿದ ನೆನಪು. ಆದರೆ ಸಂಬಂಧಿ ಆಗುವಷ್ಟು ಇವೆ ಎಂದು ಹೇಳಿದ್ದು ಅರಗಿಸಿ ಕೊಳ್ಳಲಾಗಲಿಲ್ಲ.&lt;br /&gt;&lt;br /&gt;ಅದು ನಿರ್ಭಯದಿಂದ ನನ್ನ ಪುಸ್ತಕಗಳ ಮೇಲೆ ನಡೆದಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿ ಅದನ್ನು ಹೊಡೆಯಲು ಪೊರಕೆ ತೆಗೆದುಕೊಂಡು ಬರುವಷ್ಟರಲ್ಲಿ ಮಾಯವಾಗಿತ್ತು. ಕಡೆಗೆ ಎಲ್ಲ ಪುಸ್ತಕಗಳನ್ನು ಹೊಂದಿಸಿ ಇಟ್ಟೆ. ಮರೆಯಲ್ಲಿ ಇದ್ದ ಜಿರಲೆ ಮತ್ತೆ ಹೊರಬಂತು. ಈ ಬಾರಿ ಅದನ್ನು ತಿಥಿ ಮಾಡಿ ಅತಿಥಿಯನ್ನು ಮೀಸೆಯಿಂದ ಹಿಡಿದು ಹೊರಗಡೆ ಎಸೆದು ಬಂದೆ.&lt;br /&gt;&lt;br /&gt;ಯಾವುದೇ ದೇವರು ಜಿರಳೆಯನ್ನು ವಾಹನ ಮಾಡಿಕೊಳ್ಳದೆ ಇದ್ದದ್ದಕ್ಕೆ, ನಾನು ಎಲ್ಲಾ ದೇವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಏಕೆಂದರೆ, ಮಹಾಭಾರತದಲ್ಲಿ ಆದ ಮಾರಣಹೋಮಕ್ಕಿಂತ, ಒಂದಿಷ್ಟು ಜಾಸ್ತಿ ಅನ್ನುವಷ್ಟು  ಜಿರಲೆ ಸಂಹಾರ ಮಾಡಿದ ಕೀರ್ತಿ ನನಗೆ ಸಲ್ಲುತ್ತೆ.  ಅದೆಲ್ಲದರ ಪಾಪದ ಜೊತೆಗೆ ಜಿರಲೆ ವಾಹನ ಮಾಡಿಸಿಕೊಂಡ ದೇವರು ಕೂಡ ನನಗೆ ಶಾಪ ಹಾಕುತ್ತಿದ್ದರು.  ಇದೆ ಕಾರಣಕ್ಕಾಗಿ ನಮ್ಮ ಇಲಿ ಮಹಾಶಯನಿಗೆ ಪೂರ್ತಿ ಸ್ವಾತಂತ್ರ ನಮ್ಮ ಮನೆಯಲ್ಲಿ ಇದೆ. ನಾನು ಕಾಲಿಡದ ಜಾಗಕ್ಕೂ ಕೂಡ ನಮ್ಮನೆ ಇಲಿ ಮರಿಗಳು ಓಡಾಡುತ್ತವೆ. ಮೊದಮೊದಲು ಜಿರಲೆ  ಕಂಡ ಕೂಡಲೇ ಚೀರಲು ಶುರು ಮಾಡುತ್ತಿದ್ದೆ.  ಆಮೇಲೆ ಜಿರಲೆ ನನಗೆ ಒಂದು ಚಿಲ್ಲರೆ ಪ್ರಾಣಿಯಾಗಿ ಕಾಣಿಸತೊಡಗಿತು.&lt;br /&gt;&lt;br /&gt;&lt;br /&gt;ನಾನು ಕಲಿತ ಕೆಲ ವಿಧ್ಯೆ ಪ್ರದರ್ಶಿಸಬೇಕು ಎಂದು ಮಡದಿಯ ಬಳಿ ಬಂದು ಜಿರಲೆಗೆ ಮೀಸೆ ಹೇಗೆ ಉಪಯೋಗಕ್ಕೆ ಬರುತ್ತೆ ಹೇಳು ಎಂದು ಕೇಳಿದೆ. ಅದಕ್ಕೆ ಮಡದಿ ಅದನ್ನು ಸಾಯಿಸಿದ ಮೇಲೆ ಅದನ್ನು ಎತ್ತಿ  ಹಿಡಿದು ಬಿಸಾಡುವುದಕ್ಕೆ ಎಂದು ಹೇಳಿದಳು. ಅದಲ್ಲಾ ಕಣೇ ಏಕೆ? ಇರುತ್ತೆ ಹೇಳು ಎಂದೆ. ಮತ್ತೆ ಯೋಚಿಸಿ, ಅದು ಶೇವಿಂಗ್ ಮಾಡಿಕೊಂಡಿರಲ್ಲ ಅದಕ್ಕೆ ಇರುತ್ತೆ ಎಂದು ಹೇಳಿ ನಗಹತ್ತಿದಳು. ನಾನು ಅದರ ಮೀಸೆಯಿಂದ ಅದು ಆಹಾರ ಹುಡುಕುತ್ತೆ, ಮತ್ತು ಅದರಿಂದ ಹೆಣ್ಣು ಜಿರಲೆಗಳನ್ನು ಆಕರ್ಷಿಸಲು ಉಪಯೋಗಿಸುತ್ತೆ ಎಂದು ಹೇಳಿದೆ. ಓ ಹಾಗಾ.. ಎಂದು ರಾಗ ಎಳೆದು, ಹೇಗೆ ಇದ್ದರೂ ಇಷ್ಟು ಸ್ವಚ್ಚ ಮಾಡಿದ್ದೀರಾ, ಪೂರ್ತಿ ಮನೆ ಸ್ವಚ್ಚ  ಮಾಡಿಬಿಡಿ ಮೀಸೆ ಹೊತ್ತ ಗಂಡಸರೇ...ನಾನು ಅಡುಗೆ ಮಾಡುತ್ತೇನೆ ಎಂದಳು ಮಡದಿ. ಪೂರ್ತಿ ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮತ್ತಷ್ಟು ಮಾರಣಹೋಮ ನಡೆಯಿತು. ಮನೆಯಲ್ಲಿ ತುಂಬಾ ಧೂಳು ಇದ್ದಂದರಿಂದ ಸ್ವಲ್ಪ  ನೆಗಡಿ  ಆಯಿತು.  ಹೀಗಾಗಿ ಸಂಜೆ ಡಾಕ್ಟರ ಬಳಿ ಹೋಗುವ ಪರಿಸ್ತಿತಿ ಬಂತು.&lt;br /&gt;&lt;br /&gt;&lt;br /&gt;ಡಾಕ್ಟರ ಎಲ್ಲ ಪರೀಕ್ಷಿಸಿ ಒಂದಿಷ್ಟು ಮಾತ್ರೆ ಕೊಟ್ಟರು. ತೆಗೆದುಕೊಂಡು ಮನೆಗೆ ಬಂದೆ. ಊಟವಾದ ಮೇಲೆ ಹಾಗೆ ಮಲಗಿಕೊಳ್ಳುವ ಸಮಯದಲ್ಲಿ ಜ್ಞ್ಯಾಪಕಕ್ಕೆ ಬಂತು ಮಾತ್ರೆ ತೆಗೆದುಕೊಂಡಿಲ್ಲವೆಂದು. ಮಡಿದಿಗೆ ಒದರಿ ಹೇಳಿದೆ ಮಾತ್ರೆ ತೆಗೆದುಕೊಂಡು ಬಾ ಎಂದು. ಅವಳು ಮಾತ್ರೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಹೋಯಿತು. ಅವಳು ತೆಗೆದುಕೊಂಡು ಬಂದು ಕೊಟ್ಟಳು. ಅದನ್ನು ಹಿಡಿದುಕೊಂಡು ಕುಳಿತಿದ್ದೆ. ಅವಳು  ನೀರು ತರಲು ಹೋದಳು. ನೀರು ತಂದು ಕೊಟ್ಟಳು. ಅಷ್ಟರಲ್ಲಿ ಮತ್ತೆ ಕರೆಂಟ್ ಬಂತು. ಅವಳು ನನ್ನನು ನೋಡಿ ಜೋರಾಗಿ ನಗಹತ್ತಿದಳು. ನಾನು ನನ್ನ  ಕೈಯಲ್ಲಿ ಇದ್ದದ್ದು ನೋಡಿ ನನಗೆ ಗಾಬರಿ, ಏಕೆಂದರೆ? ಅದು ಡಾಕ್ಟರ ಕೊಟ್ಟ ಮಾತ್ರೆ ಇರಲಿಲ್ಲ.  ಕ್ಯಾಪ್ಸುಲ್  ಹಾಗೆ ಇದ್ದ ನಮ್ಮ ಸಂಬಂಧಿ ಬಿಟ್ಟು ಹೋದ  ಗಿಫ್ಟ್. ಅದೇ ... ಅದರ ಕ್ಯಾಪ್ಸುಲ್ ಗಾತ್ರದ ಜಿರಳೆ ಮೊಟ್ಟೆ. ಸಧ್ಯ ಸ್ವಲ್ಪದರಲ್ಲೇ ಬಚಾವ ಅದನ್ನು ಬಿಸಾಡಿ ಮಾತ್ರೆ ತೆಗೆದುಕೊಂಡು, ನನ್ನ ಪ್ರೀತಿಯ ಶ್ರೀ ರಾಮನನ್ನು ನೆನೆದು ನಿದ್ದೆಗೆ ಜಾರಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3035899822304689163?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3035899822304689163/comments/default' title='Post Comments'/><link rel='replies' type='text/html' href='http://haalusakkare.blogspot.com/2011/08/blog-post_27.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3035899822304689163'/><link rel='self' type='application/atom+xml' href='http://www.blogger.com/feeds/3457141075796460701/posts/default/3035899822304689163'/><link rel='alternate' type='text/html' href='http://haalusakkare.blogspot.com/2011/08/blog-post_27.html' title='ಅತಿಥಿ ದೇವೋಭವ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3457141075796460701.post-1106552033349872683</id><published>2011-08-24T07:46:00.000-07:00</published><updated>2011-08-24T07:47:10.595-07:00</updated><category scheme='http://www.blogger.com/atom/ns#' term='ತರ್ಲೆ ಮಂಜ'/><title type='text'>ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....</title><content type='html'>ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.&lt;br /&gt;&lt;br /&gt;ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.&lt;br /&gt;&lt;br /&gt;ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.&lt;br /&gt;&lt;br /&gt;ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.&lt;br /&gt;&lt;br /&gt;ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1106552033349872683?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1106552033349872683/comments/default' title='Post Comments'/><link rel='replies' type='text/html' href='http://haalusakkare.blogspot.com/2011/08/blog-post_24.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1106552033349872683'/><link rel='self' type='application/atom+xml' href='http://www.blogger.com/feeds/3457141075796460701/posts/default/1106552033349872683'/><link rel='alternate' type='text/html' href='http://haalusakkare.blogspot.com/2011/08/blog-post_24.html' title='ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3457141075796460701.post-5025766667559294416</id><published>2011-08-05T07:29:00.000-07:00</published><updated>2011-08-06T01:16:30.313-07:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><title type='text'>ಭೀಮನ ಅಮಾವಾಸ್ಯೆ!!!!</title><content type='html'>ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್  ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ.  ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ  ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.&lt;br /&gt;&lt;br /&gt;ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.&lt;br /&gt;&lt;br /&gt;ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.&lt;br /&gt;&lt;br /&gt;ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ  ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.&lt;br /&gt;&lt;br /&gt;ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು"  ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.&lt;br /&gt;&lt;br /&gt;ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-5025766667559294416?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/5025766667559294416/comments/default' title='Post Comments'/><link rel='replies' type='text/html' href='http://haalusakkare.blogspot.com/2011/08/blog-post.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/5025766667559294416'/><link rel='self' type='application/atom+xml' href='http://www.blogger.com/feeds/3457141075796460701/posts/default/5025766667559294416'/><link rel='alternate' type='text/html' href='http://haalusakkare.blogspot.com/2011/08/blog-post.html' title='ಭೀಮನ ಅಮಾವಾಸ್ಯೆ!!!!'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-8467597329062475564</id><published>2011-07-12T07:56:00.000-07:00</published><updated>2011-07-12T07:57:10.028-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ಎಲ್ಲಾರೂ ಮಾಡುವುದು ಹೊಟ್ಟೆಗಾಗಿ!!!!</title><content type='html'>ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗಲಾರದ ಮಡದಿ, ಮಗ ಇಬ್ಬರೂ, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.&lt;br /&gt;&lt;br /&gt;ನಾವು ಚಿಕ್ಕವರಿದ್ದಾಗ ಕೂಡ ಕೆಲ ಹುಡುಗರು ಗ್ಯಾಸ್ ಬಿಡುತ್ತಿದ್ದರು. ಅದು ಶಬ್ಧ ಮಾಡಿ ಹೊರಬಂದರೆ ಎಲ್ಲರಿಗೂ ತಿಳಿಯುತ್ತಿತ್ತು, ಆದರೆ ಕೆಲವೊಮ್ಮೆ ನಿಶ್ಯಬ್ಧವಾಗಿ ಬಂದಾಗ, ಯಾರು ಜೋರಾಗಿ ನಗುತ್ತಾರೆ ಅವರೇ...ಅದರ ಕಾರಣ ಕರ್ತರೆಂದು ನಿರ್ಧಾರಕ್ಕೆ ಬಂದು ಬಿಡುತ್ತಿದ್ದೆವು. ಕೆಲವರಿಗೆ ಕೈಯಿಂದ ಸಿಳ್ಳೆ ಹೊಡೆಯಲು ಬಾರದಿದ್ದರೂ ಕೂಡ ಶಬ್ದ ಮಾಡಿ ಬರುತಿತ್ತು.&lt;br /&gt;&lt;br /&gt;ಲೇ ಹೊಟ್ಟೆ ನೋವು ಕಣೇ ಎಂದು ಮಡದಿಗೆ ಹೇಳಿದೆ. ಲಗುಬಗೆಯಿಂದ ತನ್ನ ಕೈಯಲ್ಲಿ ಇದ್ದ ಮೊಬೈಲ್ ಟೇಬಲ್ ಮೇಲೆ ಇಟ್ಟು, ನನ್ನ ಮೊಬೈಲ್ ತೆಗೆದುಕೊಂಡು, ತನ್ನ ಡಾಕ್ಟರ ಗೆಳತಿಗೆ ಕರೆ ಮಾಡಿದಳು. ನನ್ನ ಎಲ್ಲ ಗೆಳೆಯರು ಇಂಜಿನಿಯರಿಂಗ್ ಓದಿದ್ದರಿಂದ ಮಿತ್ರ ದ್ರೋಹಿಗಳು ಎಂದು ಕೋಪ ಕೂಡ ಬಂತು. ಮಿತ್ರರು ಎಂದರೆ ಇವರು, ಒಬ್ಬರಿಗೆ.. ಒಬ್ಬರು.. ಸಹಾಯ ಮಾಡುವವರು ಎಂದು ಅನ್ನಿಸಿತು. ಅವರಿಬ್ಬರ ಸುಧೀರ್ಘ ಕ್ಷೇಮ ಸಮಾಚಾರವಾದ ಮೇಲೆ, ನನ್ನ ಬಡಪಾಯಿಯ ಹೊಟ್ಟೆಯ ಮುಖ್ಯಾ೦ಶಗಳು ಶುರು ಆದವು. ಹೊಟ್ಟೆ ನೋವು ನಮ್ಮ ಯಜಮಾನರಿಗೆ ಎಂದು ಹೇಳಿ, ಅವಳೇ ಎಲ್ಲವನ್ನು ಸವಿಸ್ತಾರವಾಗಿ ವಿವರಣೆ ಕೊಟ್ಟು, ಫೋನ್ ಕಟ್ ಮಾಡಿ, ಗಾಬರಿಯಿಂದ ನಡೆಯಿರಿ ಡಾಕ್ಟರ ಬಳಿ ಎಂದು, ಬೇಗನೆ ಡಾಕ್ಟರ ಬಳಿ ಕರೆದುಕೊಂಡು ಹೋದಳು.&lt;br /&gt;&lt;br /&gt;ಡಾಕ್ಟರ ಬಳಿ ಹೋದ ಕೂಡಲೇ "ಡಾಕ್ಟರ ಬೇಗ ಪರೀಕ್ಷಿಸಿ" ಎಂದು ಹೇಳಿದಳು. ಅವಳ ಗಾಬರಿಯನ್ನು ನೋಡಿ, ಡಾಕ್ಟರ ಅವರ ಹೆಂಡತಿಗೆ ಪರೀಕ್ಷಿಸಲು ಹೇಳಿದರು. ನಾನು ಲೇಡಿ ಡಾಕ್ಟರ ಎಂದು ಖುಷಿಯಿಂದ ಮುಖ ಅರಳಿಸಿ ನಿಂತಿದ್ದೆ. ಬಂದವರೇ ನನ್ನ ಹೆಂಡತಿಯನ್ನು ಪರೀಕ್ಷಿಸಲು ಶುರು ಮಾಡಿದರು. ಹೆಂಡತಿ ನನಗೆ ಅಲ್ಲ, ನನ್ನ ಮನೆಯವರಿಗೆ ಎಂದಳು. ಓ ಅವರಾ ಪೇಶಂಟ್ ಎಂದು, ಲೇಡಿ ಡಾಕ್ಟರ ತಮ್ಮ ಗಂಡನಿಗೆ ಪರೀಕ್ಷೆ ಮಾಡಲು ಹೇಳಿ ಹೋಗಿ ಕುಳಿತರು. "ಮುಖ ನೋಡಿ ಮಣೆ ಹಾಕುವವರು" ಎಂದರೆ ಇದೆ ಎಂದು, ನನಗೆ ಆಗ ಅರ್ಥ ಆಗಿತ್ತು. ಡಾಕ್ಟರ ಪರೀಕ್ಷಿಸಲು ಶುರು ಮಾಡಿದರು. ಎಲ್ಲಿ ನೋವು ಎಂದರು, ನಾನು ಹೇಳುವ ಮೊದಲೇ, ನನ್ನ ಮಡದಿ ಬಲಗಡೆ ಎಂದಳು. ನಾನು ಇಲ್ಲಾ ಸರ್ ಎಡಗಡೆ ಎಂದೆ. ನಿಮಗೆ ಏನು ಆಗಿಲ್ಲ ಗ್ಯಾಸ್ ಆಗಿದೆ ಅಷ್ಟೇ ಎಂದು ಹೇಳಿ ಎರಡು-ಮೂರೂ ಮಾತ್ರೆ ಬರೆದುಕೊಟ್ಟು ಕಳುಹಿಸಿದರು.&lt;br /&gt;&lt;br /&gt;ಹೊರ ಬಂದ ಮೇಲೆ, ಹೆಂಡತಿ ಜೋರಾಗಿ ನಗಲು ಶುರು ಮಾಡಿದಳು. ಏಕೆಂದು ಕೇಳಿದೆ. ಆಗ ನಿಮಗೆ ಎಡಗಡೆ ನೋಯುತ್ತಿದ್ದರು, ನನ್ನ ಬಲಗಡೆ ಎಂದು ತಿಳಿದು ನನ್ನ ಗೆಳತಿಗೆ ಹೇಳಿದ್ದೆ ಎಂದಳು. ಅದಕ್ಕೇನೀಗ ಎಂದೆ. ಅದಕ್ಕೆ ಅವಳ ಗೆಳತಿ ಎಡಗಡೆ ನೋಯುತ್ತಿದ್ದರೆ ಗ್ಯಾಸ್, ಬಲಗಡೆ ನೋಯುತ್ತಿದ್ದರೆ ಅಪೇ೦ಡಿಸ್ ತುಂಬಾ ಸಿರಿಯಸ್ ಎಂದು ಹೆದರಿಸಿ ತನ್ನ ಬುದ್ಧಿ ಮತ್ತೆ ಪ್ರದರ್ಶಿಸಿದ್ದಳು. ಅದಕ್ಕೆ ನಾನು ಗಾಬರಿಯಿಂದ ನಿಮ್ಮನ್ನು ಡಾಕ್ಟರ ಬಳಿ ಕರೆದುಕೊಂಡು ಬಂದೆ ಎಂದಳು. ಹೊಟ್ಟೆ ನೋವು ಎಂದು ಹೆರೆಗೆ ಆಸ್ಪತ್ರೆಗೆ ಹಾಕಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ನಗುತ್ತ ಮನೆಗೆ ಬಂದೆವು.&lt;br /&gt;&lt;br /&gt;ಮರುದಿನ ಆಫೀಸ್ ಹೋಗುವ ಸಮಯದಲ್ಲಿ ಶೂ ಲೇಸ್ ನ್ನು ಲೇಸ್.. ಲೇಸ್.. ಎನ್ನುತ್ತಾ ಮನೆ ತುಂಬಾ ಹುಡುಕುತ್ತಿದ್ದೆ, ಅಷ್ಟರಲ್ಲಿ ಮಡದಿ ಅಡುಗೆಮನೆಯಿಂದ ಬಂದು ರೀ ನಿನ್ನೇನೆ ಗ್ಯಾಸ್ ಎಂದು ಒದ್ದಾಡುತ್ತಾ ಇದ್ದೀರಿ, ಆಗಲೇ ಲೆಯ್ಸ್ ಚಿಪ್ಸ್ ಬೇಕಾ? ಎಂದಳು. ನಾನು ಲೆಯ್ಸ್ ಚಿಪ್ಸ್ ಅಲ್ಲ ಲೇಸ್ ಎಂದು ಹೇಳಿದೆ. ಅವಳೇ ಹುಡುಕಿ ಕೊಟ್ಟಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-8467597329062475564?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/8467597329062475564/comments/default' title='Post Comments'/><link rel='replies' type='text/html' href='http://haalusakkare.blogspot.com/2011/07/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/8467597329062475564'/><link rel='self' type='application/atom+xml' href='http://www.blogger.com/feeds/3457141075796460701/posts/default/8467597329062475564'/><link rel='alternate' type='text/html' href='http://haalusakkare.blogspot.com/2011/07/blog-post.html' title='ಎಲ್ಲಾರೂ ಮಾಡುವುದು ಹೊಟ್ಟೆಗಾಗಿ!!!!'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-7206360977662787067</id><published>2011-06-12T00:42:00.001-07:00</published><updated>2011-06-12T00:44:27.224-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ಚಹಾ ಗರಮ್ !!!!</title><content type='html'>ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ ಇಲ್ಲದೆ ಬಿಸಿ ಚಹಾ ಕೋಡುತ್ತಿದ್ದ ಮಡದಿ, ಈವತ್ತು ಸ್ವಲ್ಪ ಗರಮ್ ಅಗಿದ್ದಳು. ಕೆಲವರು ಹೆ೦ಡತಿಯ ಉಪದ್ರವ ತಾಳಲಾರದೆ ಕೆಲ ಗ೦ಡಸರು ಹೆ೦ಡ ಎ೦ಬ ದ್ರವದ ಉಪಾಸಕರಾಗಿರುತ್ತಾರೆ. ಸ೦ಜೆ ಸಮಯದಲ್ಲಿ ಚಹಾ ಸಿಗುವುದು ಸ್ವಲ್ಪ ಕಷ್ಟನೇ. ಆದರೂ ಹುಡುಕಿಕೊ೦ಡು ಹೊರಟೆ, ಅದೆ ಧಾರವಾಡದಲ್ಲಿ ಇದ್ದಿದ್ದರೆ ಯಾವುದಾದರು ಗೆಳೆಯರ ಮನೆಗೆ ಹೊಕ್ಕರೆ ಸಾಕು ಚಹಾ ಅನಾಯಾಸವಾಗಿ ಸಿಗುತ್ತಿತ್ತು. ಧಾರವಾಡದಲ್ಲಿ ಊರಿ ಬಿಸಿಲಲ್ಲೂ ಕೂಡ ಚಹಾ ಸರಾಗವಾಗಿ ಎಲ್ಲರೂ ಹೀರುತ್ತಾರೆ. ಟೂಥಪೆಸ್ಟ್ ತೆಗೆದುಕೊ೦ಡು ಬರುತ್ತೇನೆ ಎ೦ದು ನೆಪ ಹೇಳಿದೆ. ಮು೦ಜಾನೆ ಕೇಳಿದರೆ ಟೂಥಪೆಸ್ಟ್ ಕಲಿಯುಗದ ಅಕ್ಷಯ ಪಾತ್ರೆ ಅಲ್ಲಿ-ಇಲ್ಲಿ ಸ೦ದಿ ಗೊ೦ದಿಯಲ್ಲಿ ಸ್ವಲ್ಪ ಇದ್ದೆ ಇರುತ್ತೆ, ಇಷ್ಟರಲ್ಲೆ ಮುಗಿಸು ತಿ೦ಗಳ ಕೊನೆ ಎ೦ದಿರಿ ಅ೦ದಳು. ಮ೦ಜನ ಹತ್ತಿರ ದುಡ್ಡು ಕೇಳಿ ಇಸಿದುಕೊ೦ಡಿದ್ದೇನೆ ಎ೦ದು ಹೇಳಿ ಹೊರಬಿದ್ದೆ. ಅಷ್ಟರಲ್ಲಿ ಮ೦ಜ ಸಿಕ್ಕ. ಮ೦ಜನಿಗೆ ನಾನು ಏನು ಹೇಳದಿದ್ದರು, ಏನಪ್ಪ, ಚಹಾ ಅ೦ಗಡಿ ಹುಡುಕುತ್ತಾ ಇದ್ದೀಯಾ? ಎ೦ದ. ನನಗೆ ಆಶ್ಚರ್ಯ ಇವನಿಗೆ ಹೇಗೆ ತಿಳಿಯಿತು ಎ೦ದು.&lt;br /&gt;&lt;br /&gt;ಅವನೇ ಒ೦ದು ಚಹಾ ಅ೦ಗಡಿಗೆ ಕರೆದುಕೊ೦ಡು ಹೋದ, ಚಹಾ ಹೀರುತ್ತಾ ಇದು ಮಹಿಳಾ ಮಣಿಗಳ ಸ೦ಘಟನೆ ಎ೦ದಾಗ ತಿಳಿಯಿತು. ಅದಕ್ಕೆ ನಾನು ನೀನು ಚಹಾ ಕೇಳಿ ಬೈಯಿಸಿಕೊ೦ಡೆ ಎ೦ದು ನಗ ಹತ್ತಿದೆ. ಅದಕ್ಕೆ ಮ೦ಜ ನಾನು ಚಹಾ ಮತ್ತು ಕಾಫಿ ಎರಡು ಕೇಳಿದ್ದೆ ಕಣೊ, ಆದರೆ ನಿಮ್ಮ ಅತ್ತಿಗೆ ಗೊತ್ತು ತಾನೆ, ಮತ್ತಷ್ಟು ಬೈದಳು ಎ೦ದ. ಎರಡು ಏನಕ್ಕೆ ಕೇಳಿದೆ ಎ೦ದೆ. ಅವಳು ಚಹಾ ಕೇಳಿದರೆ ನಿದ್ರೆ ಬರಲ್ಲ ಎ೦ದಳು. ಅದಕ್ಕೆ ಚಹಾ ಮತ್ತು ಕಾಫಿ ಎರಡೂ ಮಾಡು, ಎರಡು ಸೇರಿದರೆ ಚಾಪಿ ಅಗುತ್ತೆ, ಅಮೆಲೆ ತಾನೇ ನಿದ್ರೆ ಬರುತ್ತೆ ಎ೦ದೆ ಅ೦ದ. ಮತ್ತಷ್ಟೂ ನಗು ಬ೦ತು. ಆದರೆ ಈವನ ಬುದ್ಧಿಮತ್ತೆಗೆ ಭೇಷ್ ಎ೦ದೆ. ಮದುವೆ ಆದರೂ ನಮಗೆ ಈ ಹೋಟೆಲ್ ಚಹಾ ತಪ್ಪಲಿಲ್ಲ ಎ೦ದ ಮ೦ಜ. ಹೆ೦ಡತಿಗೆ ಅರ್ಧಾ೦ಗಿ ತು೦ಬಾ ಅನ್ವರ್ಥಕ ಅಗುತ್ತೆ ನೋಡು ಎ೦ದ. ಅ೦ದರೆ... ಎ೦ದೆ. ಅರ್ಧಾ೦ಗಿ ಎ೦ದರೆ ಅರ್ಧ ಅ೦ಗಿನೇ. ಯಾರಾದರು ಅರ್ಧ ಅ೦ಗಿ ಹಾಕಿ ಹೊರಗಡೆ ಬರುತ್ತಾರಾ ಎ೦ದ. ಅದಕ್ಕೆ ನೋಡು ಸೆಲೆಬ್ರಿಟೀಗಳು ಎರಡೆರಡು ಮದುವೆ ಅಗುತ್ತಾರೆ, ಆಗ ಅರ್ಧ ಮತ್ತೊ೦ದು ಅರ್ಧ ಸೇರಿ ಪೂರ್ತಿ ಅ೦ಗಿ ಅಗುತ್ತೆ ಅಲ್ಲವಾ ಎ೦ದು ಹೇಳಿದ. ನಮ್ಮ ನಗುವಿನ ಜೊತೆಗೆ ಒ೦ದು ಮತ್ತು ಇನ್ನು ಅರ್ಧ ಹೆಚ್ಚಿಗೆ ಅ೦ಗಿ ತೊಟ್ಟ ಹೊಟೇಲ್ ಮಾಲೀಕ ಕೂಡ ನಕ್ಕ.&lt;br /&gt;&lt;br /&gt;ಕಡೆಗೆ ಚಹಾ ಕುಡಿದು, ಟೂಥಪೆಸ್ಟ್ ತೆಗೆದುಕೊ೦ಡು ಮನೆಗೆ ಬ೦ದೆ. ಮರುದಿನ ಬೇಗನೆ ಎಬ್ಬಿಸಿದ ಮಡದಿ ಚಹಾ ತೆಗೆದುಕೊಳ್ಳಿ ಎ೦ದು ಕೂಗುತ್ತ ಇದ್ದಾಗ, ಕನಸಿನಲ್ಲಿ ನಾನು ಫಾರಿನ್ಹನಲ್ಲಿ ಮಸಾಲೆ ದೋಸೆ ತಿನ್ನುತ್ತ ಇದ್ದೆ. ಇನ್ನು ಅರ್ಧ ತುತ್ತು ಬಾಯಿಗೆ ಬ೦ದಿರಲಿಲ್ಲ. ಎದ್ದು ಹಲ್ಲು ಉಜ್ಜಿ ಚಹಾ ಹೀರಿದೆ. ಎಕೋ ಸ್ವಲ್ಪ ಬೆನ್ನು ನೋವು ಶುರು ಆಯಿತು. ಬೆನ್ನು ನೋವು ಕಣೇ ಎ೦ದೆ. ನಿಮ್ಮ ಮಗನ ಕಡೆ ಮುರು ಬಾರಿ ಸ್ವಲ್ಪ ಒದಯಿಸಿಕೊಳ್ಳಿ ಹೊಗುತ್ತೆ ಎ೦ದಳು. ಹಾ.. ಏನ೦ದೆ ಎ೦ದು ಬಾಯಿ ಬಿಟ್ಟು ಕೇಳಿದೆ. ಕಾಲು ಮು೦ದು ಮಾಡಿ ಹುಟ್ಟಿದ ಮಕ್ಕಳಿ೦ದ ಒದಯಿಸಿಕೊ೦ಡರೆ ಹೊಗುತ್ತೆ. ಬೇಕಾದರೆ ನಾನು ಕೂಡ ಕಾಲು ಮು೦ದೆ ಮಾಡಿ ಹುಟ್ಟಿದ್ದು ಎ೦ದಳು. ಅರ್ಥ ಆಯಿತು ಬಿಡು ನೀವಿಬ್ಬರೂ ಹುಟ್ಟಿದ್ದೆ ನನ್ನ ಒದೆಯೊದಕ್ಕೆ ತಾನೇ ಎ೦ದೆ. ನೋಡಿ ಬೇಕಾದರೆ ಮಾಡಿಸಿಕೋಳ್ಳಿ ಇಲ್ಲಾ ಬಿಡಿ ಎ೦ದಳು.&lt;br /&gt;&lt;br /&gt;ಆಫೀಸ್ ಲೇಟ್ ಆಗುತ್ತೆ ಎಂದು ಕಡೆಗೆ ಒದಯಿಸಿಕೊಂಡು ಹೊರಟೆ. ಸ್ವಲ್ಪ ಆರಾಮ ಅನ್ನಿಸಿದರೂ ಆಫೀಸ್ ಹೋದ ಮೇಲೆ ಮತ್ತಷ್ಟು ನೋವು ಶುರು ಆಯಿತು. ಕಡೆಗೆ ಆಫೀಸ್ ರಜೆ ಹಾಕಿ ಮನೆಗೆ ಬಂದೆ. ಕಡೆ ಪ್ರಯೋಗವಾಗಿ ಮಡದಿಯಿಂದ ಕೂಡ ಒದೆ ಪ್ರಯೋಗ ಆಯಿತು ಆದರೂ ಕಡಿಮೆ ಆಗಲಿಲ್ಲ. ಸಂಜೆ ಸ್ವಲ್ಪ ನೋವು ಜ್ಯಾಸ್ತಿ ಅನ್ನಿಸಿ ಮಡದಿ ಜೊತೆ ಆಸ್ಪತ್ರೆಗೆ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ ನಿಮಗೆ ಏನೋ ಆಗಿಲ್ಲ ಅಸಿಡಿಟೀ ಅಷ್ಟೇ ಎಂದರು. ತುಂಬಾ ಚಹಾ-ಕಾಫೀ ಕೂಡಿ ಬೇಡಿ ಎಂದು ಹೇಳಿದರು.&lt;br /&gt;&lt;br /&gt;ಕಡೆಗೆ ಮನೆಗೆ ಬಂದ ಮೇಲೆ ಪಕ್ಕದ ಮನೆಯಲ್ಲಿ ಆಡುತ್ತಾ ಇದ್ದ ಮಗ, ಅಪ್ಪನಿಗೆ ಡಾಕ್ಟರ್ ಏನು? ಮಾಡಿದರು ಎಂದು ಕೇಳಿದ. ಅದಕ್ಕೆ ಮಡದಿ ಸ್ವಲ್ಪ ಒದ್ದರು ಎಂದು ಅಪಹಾಸ್ಯ ಮಾಡಿದಳು. ಅದಕ್ಕೆ ಮಗ ನಾನು ಒದೆಯುತ್ತೇನೆ ಎಂದು ಬಂದ. ನಾಳೆಯಿಂದ ನನ್ನ ಪ್ರಿಯವಾದ ಚಹಾಕ್ಕೆ ಬೈ ಬೈ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7206360977662787067?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7206360977662787067/comments/default' title='Post Comments'/><link rel='replies' type='text/html' href='http://haalusakkare.blogspot.com/2011/06/blog-post.html#comment-form' title='3 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7206360977662787067'/><link rel='self' type='application/atom+xml' href='http://www.blogger.com/feeds/3457141075796460701/posts/default/7206360977662787067'/><link rel='alternate' type='text/html' href='http://haalusakkare.blogspot.com/2011/06/blog-post.html' title='ಚಹಾ ಗರಮ್ !!!!'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-3457141075796460701.post-9111093077214144589</id><published>2011-05-20T06:37:00.001-07:00</published><updated>2011-05-20T06:37:49.159-07:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ಸಮರ ಆರ೦ಭ ....</title><content type='html'>ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು ಹೋಗಿ. ನನಗೆ ಬೇಗ ಏಳೋಕೆ ಆಗಲ್ಲ ಎಂದು ಬೈದಿದ್ದಳು . ಸಮಾರಂಭದಲ್ಲಿ ಏನಾದರೂ ಸಿಗುತ್ತೆ, ನಾನು ಅಲ್ಲೇ ತಿನ್ನುತ್ತೇನೆ ಎಂದು ಹೇಳಿ ಸಮರದ ಅಂತ್ಯ ಹಾಡಿ ಬಂದಿದ್ದೆ.&lt;br /&gt;&lt;br /&gt;ಸಮಾರಂಭದಲ್ಲಿ ಇದ್ದ ಉಪಿಟ್ಟು ನೋಡಿ, ಬೇಡ ಎಂದು ಕಾಫೀ ಕುಡಿದು ಬಂದು ಕುಳಿತೆ. ಆರಂಭಿಕ ಭಾಷಣ ಮಾಡುವವರು, ನನ್ನ ನೋಡಿ ಭಾಷಣ ಮಾತನಾಡುತ್ತಾ ಇದ್ದಾರೆ ಎಂದು ಅನ್ನಿಸಿತು. ಮೊದಲು ನಾನೊಬ್ಬನೇ ಇದ್ದೇನೆ ಎಂದು ಅಕ್ಕ ಪಕ್ಕ ನೋಡಿದೆ ತುಂಬಾ ಜನರಿದ್ದರು. ಪಕ್ಕದಲ್ಲಿ ಒಬ್ಬ ನಿದ್ದೆ ಹೊಡೆಯುತ್ತಿದ್ದ. ನಾನು ಅವನನ್ನೇ ನೋಡಿ ಭಾಷಣ ಮಾಡುತ್ತಿರಬೇಕು ಎಂದು ಎಬ್ಬಿಸಿದೆ. ಆಸಾಮಿ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಿ ಎದ್ದು ಹೋದ. ಮತ್ತೆ.. ಮತ್ತೆ ನನ್ನ ನೋಡಿ ಭಾಷಣ ಮಾಡುತ್ತ ಇದ್ದಿದ್ದರಿಂದ, ನನಗೆ ಇನ್ನಷ್ಟು ಸಂಶಯ ಬಂದು ಮೊದಲು ನನ್ನನ್ನು ನಾನು ಪೂರ್ತಿ ನೋಡಿಕೊಂಡೆ. ಕಡೆಗೆ ನಾನು ಹಾಕಿರುವ ಡ್ರೆಸ್ ಎಲ್ಲವು ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡೆ. ಆದರು ಭಾಷಣಕಾರ ನನ್ನ ಕಡೆನೇ ನೋಡಿ ಮಾತನಾಡುತ್ತಿದ್ದರು. ಹುರುಪಿನಿಂದ ಭಾಷಣ ಮುಗಿದ ಮೇಲೆ ಜೋರಾಗಿ ಚಪ್ಪಾಳೆ ತಟ್ಟಿದೆ. ಈಗ ಭಾಷಣಕಾರನಲ್ಲದೆ ಎಲ್ಲರು ನನ್ನನ್ನೇ ನೋಡಿದರು. ಸಧ್ಯ ಶಿಳ್ಳೆ ಹೋಡಿಲಿಲ್ಲ ಬಚಾವ ಅನ್ನಿಸಿತು.&lt;br /&gt;&lt;br /&gt;ಆಮೇಲೆ ಸುಗಮ ಸಂಗೀತ ಶುರು ಆಯಿತು. ಆಗ ಕೂಡ ಸುಗಮ ಸಂಗೀತ ಹಾಡುವ ಮನುಷ್ಯ ಕೂಡ ನನ್ನ ಕಡೆನೆ ದೃಷ್ಟಿ ಹರಿಸಿ ತನ್ನ ಗಾನ ಸುಧೆಯನ್ನು ಹರಿಸಿದ. ಮತ್ತೆ ಕೆಲ ಸಮಯದ ನಂತರ "ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.." ಎಂದು ಹಾಡಬೇಕೆ?. ಅವನಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಯಿತು. ಮತ್ತೆ ಹೀಗೆಲ್ಲ ಆಗುವುದನ್ನು ನೋಡಿ ನನಗೆ ಮಂಜ ನೆನಪಿಗೆ ಬಂದ. ಅವನೇನಾದರೂ ಕಿತಾಪತಿ ಎಂದು ಛೆ... ಛೆ... ಅವನಿಗೆ ಹೇಗೆ ಗೊತ್ತು ನಾನು ಇಲ್ಲಿ ಬಂದಿರೋದು. ಅವನು ಇಲ್ಲಿ ಇಲ್ಲ ಬೇರೆ ಎಂದು ಯೋಚಿಸಿದೆ.&lt;br /&gt;&lt;br /&gt;ಸಭಾಂಗಣಕ್ಕೆ ಹೋಗಿ ಕೇಳಿಯೇ ಬಿಡೋಣ ಎಂದು ಹೊರಟು ನಿಂತ ಸಮಯದಲ್ಲಿ, ಒಬ್ಬ ಈ ಸಮರ ಆರ೦ಭ ಆಯಿತು ಅಂದರೆ ಮುಗಿತು ನೋಡಿ ಎಂದರು. ನನಗೆ ಆಶ್ಚರ್ಯ ನಾನು ಸಮರ ಆರಂಭ ಮಾಡುವುದು ಸಹ ಇವರಿಗೆ ಹೇಗೆ ತಿಳಿಯಿತು ಎಂದು. ಬನ್ನಿ ಫ್ಯಾನ್ ಕೆಳಗಡೆ ಕುಳಿತುಕೊಳ್ಳೋಣ ಎಂದು ಮುಂದೆ ಹೊರಟಾಗ ತಿಳಿಯಿತು, ಅವರು ಅಂದಿದ್ದು ಇಂಗ್ಲಿಷ್ Summer ಎಂದು.&lt;br /&gt;&lt;br /&gt;ಮುಂದೆ ಹೋಗುವ ಸಮಯದಲ್ಲಿ ಹಿಂದೆ ಒಮ್ಮೆ ಕಣ್ಣಾಡಿಸಿದೆ. ಹಿಂದೆ ಯಾರು ಇದ್ದಾರೆ ಎಂದು ನೋಡಿದ ಮೇಲೆ ನನಗೆ ಅರಿವಿಗೆ ಬಂದಿದ್ದು. ಒಬ್ಬ ಸುಂದರ ಚಿತ್ರ ನಟಿ, ಅವರು ಅವಳನ್ನು ನೋಡಿ ತಮ್ಮ ಭಾಷಣ ಮಾಡುತ್ತ ಇದ್ದರು ಎ೦ದು. ಅದು ನನ್ನ ಕುರ್ಚಿ ಹಿಂದೆ. ಹಿಂದೆ ನೋಡುತ್ತೇನೆ ಮಂಜ ಬೇರೆ ಬಂದುಬಿಟ್ಟಿದ್ದಾನೆ. ಅವನಿಗೆ ಇಂತಹ ಸಮಾರಂಭದಲ್ಲಿ ಎಂದಿಗೂ ನೋಡಿರಲೇ ಇಲ್ಲ. ಎದ್ದು ಅವನ ಬಳಿ ಹೋದೆ. ಮಂಜಣ್ಣ ನೀನು ಇಲ್ಲಿ ಎಂದೆ. ಏನು ಇಲ್ಲ ಮಹರಾಯ ಈ ನಟಿ ಬರುತ್ತಾಳೆ ಅಂತ ಪೇಪರ್ ನಲ್ಲಿ ಬಂದಿತ್ತು ಅದಕ್ಕೆ ಬಂದೆ ಅಂದ. ಕಾರ್ಯಕ್ರಮ ಮುಗಿದ ಮೇಲೆ ಗೊತ್ತಾಯಿತು ತುಂಬಾ ಜನ ಪರಿಚಯದವರು ಬಂದಿದ್ದಾರೆ ಎಂದು. ಮಂಜ ನಮ್ಮಿಬ್ಬರ ಹಳೆಯ ಗೆಳೆಯ ಶ್ರೀಕಾಂತ ಬಂದಿದ್ದನ್ನು ನೋಡಿ, ಅಲ್ಲಿ ನೋಡು ಗೋಪಿ.. ಡಾಕ್ಟರ ಶ್ರೀಕಾಂತ ಬಂದಿದ್ದಾನೆ ಎಂದ. ಹೋಗಿ ಮಾತನಾಡಿಸಿ ಬಂದೆವು. ಶ್ರೀಕಾಂತನ ಕಾರ್ ತುಂಬಾ ಚೆನ್ನಾಗಿತ್ತು. ಮನೆಗೆ ಬನ್ನಿ ಎಂದು ಕೈ ಮಾಡುತ್ತ ಹೋಗುತ್ತಿದ್ದಾಗ, ನಾನು ಮಂಜಣ್ಣ ಛೆ... ನೆನಪೇ ಹಾರಿ ಹೋಯಿತು ನೋಡು. ಅವನಿಗೆ ಸ್ವಲ್ಪ ಔಷಧಿ ಕೇಳಬೇಕು ಎಂದು ಹೊರಟೆ. ಮಂಜ ತಡೆದು, ಲೇ ಅವನು ಹೋಮಿಯೋಪತಿ ಅಂದ. ನನಗೆ ಹೋಮಿಯೋಪತಿ ಔಷಧಿ ನಡೆಯುತ್ತೆ ಎಂದು ಹೊರಟೆ. ತಡೆದು ನಗುತ್ತ ಲೇ ಹಂಗೆ ಅಂದರೆ "ಮನೆ ಅಳಿಯ" ಅಂತ ಅರ್ಥ ಎಂದ. ಅವನ ಮಾವ ಕೋಟ್ಯಾಧಿ ಪತಿ. ಇವನು ಅವನ ಮಗಳ ಕೋತಿಯಂತಹ ಹೋಮಿಯೋ ಪತಿ. ಕೆಲಸ ಏನು ಇಲ್ಲ ಎಂದ. ಸಕ್ಕತ್ ನಗು ಬ೦ತು. ಸಧ್ಯ ಅವನಿಗೆ ಔಷಧಿ ಕೇಳಿ ಸಮರಕ್ಕೆ ನಾಂದಿ ಹಾಡಲಿಲ್ಲ ಎಂಬುದೊಂದೇ ಖುಷಿ.&lt;br /&gt;&lt;br /&gt;ಮನೆಗೆ ಹೋದೊಡನೆ ತುಂಬಾ ಹಸಿವು ಆಗಿತ್ತು. ಮತ್ತೆ ಅವಳಿಗೆ ಏನಾದರು ಕೇಳಿ ಬೈಯಿಸಿ ಕೊಂಡು ಸಮರಕ್ಕೆ ನಾಂದಿ ಹಾಡುವುದಕ್ಕಿಂತ ನಿನ್ನೆಯ ಇಡ್ಲಿ ವಾಸಿ ಎಂದು ಹಸಿವನ್ನು ನೀಗಿಸಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-9111093077214144589?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/9111093077214144589/comments/default' title='Post Comments'/><link rel='replies' type='text/html' href='http://haalusakkare.blogspot.com/2011/05/blog-post.html#comment-form' title='6 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/9111093077214144589'/><link rel='self' type='application/atom+xml' href='http://www.blogger.com/feeds/3457141075796460701/posts/default/9111093077214144589'/><link rel='alternate' type='text/html' href='http://haalusakkare.blogspot.com/2011/05/blog-post.html' title='ಸಮರ ಆರ೦ಭ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-3457141075796460701.post-6410079880399346689</id><published>2011-04-30T00:04:00.000-07:00</published><updated>2011-05-06T22:29:12.489-07:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಹೆಸರಿನ ಹುಚ್ಚು ....</title><content type='html'>ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ. ಮತ್ತೆ ಕೆಲ ಸಮಯದ ನಂತರ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂಬ ಕೂಗು. ಆ ಹುಡುಗ ಬಂದು ಕ್ಲೀನ್ ಮಾಡಿ ಹೋದ. ಮಂಜ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದ. ಅದೇಕೋ ಗೊತ್ತಿಲ್ಲ ನನ್ನ ಹೆಸರಿನಲ್ಲಿರುವ ಜನರು ಬರೀ ಇಂತಹ ಕೆಲಸದಲ್ಲೇ ಇರುವುದೇಕೆ ಎಂದು ಯೋಚಿಸತೊಡಗಿದೆ. ಇನ್ನೂ ತುಂಬಾ ಸಿನೆಮಾಗಳಲ್ಲಿ ನನ್ನ ಹೆಸರಿನ ವಿಲನ್ ಇರುವುದನ್ನು. ಕಡೆಗೆ ನಾನೇ ತಪ್ಪಾಗಿ ಸಾಫ್ಟ್‌ವೇರ್ ಫೀಲ್ಡ್ ಗೆ ಬಂದೆನೇನೋ ಎಂದು ಕೂಡ ಅನ್ನಿಸಿದ್ದು ಉಂಟು. ಹೀಗೆ ಘಾಡವಾಗಿ ಯೋಚನೆಗೆ ಮುಣುಗಿದ ನನ್ನನ್ನು ಮಂಜ ಏನು ಯೋಚನೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದ. ಅವನಿಗೆ ನನ್ನ ಹೆಸರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಹೇಳಿದೆ.&lt;br /&gt;&lt;br /&gt;ಲೇ ಹೆಸರಿಗೆ ಅನ್ವರ್ಥಕವಾಗಿ ನಿನಗೆ ಕೆಲಸ ಅಂತ ಬೇಕಾಗಿದ್ದರೆ ನೀನು ದನ ಕಾಯಲು ಹೋಗಬೇಕಿತ್ತು ಅಥವಾ ದನದ ಡಾಕ್ಟರ್ ಆಗಬೇಕಿತ್ತು ಎಂದು ಗಹ ಗಹಿಸಿ ನಕ್ಕ. ನಿನಗೆ ಹೇಗಿದ್ದರು ಒಂದು ಕೊಂಬು(ಗೋಪಾ"ಲ್") ಬೇರೆ ಇದೆ ಎಂದ. ನಾನು ಒಮ್ಮೆ "ಓಂ" ಸಿನಿಮಾ ನೋಡಿ ಬಂದು ಸಕ್ಕತ್ತಾಗಿದೆ ಎಂದು ಹೇಳಿದೆ. ಅದನ್ನು ಕೇಳಿಸಿಕೊಂಡು ಪಾಪ ಪಕ್ಕದ ಮನೆ ಅಜ್ಜಿ ಒಬ್ಬರು ಅದನ್ನು ದೇವರ ಸಿನಿಮಾ ಎಂದುಕೊಂಡು ಹೋಗಿ ನೋಡಿ ಬಂದಿದ್ದರು. ಹೆಸರಿಗೆ ಅನ್ವರ್ಥಕವಾಗಿ ಎಲ್ಲರೂ ಇರುವುದಿಲ್ಲ ಎಂದ.&lt;br /&gt;&lt;br /&gt;ನಿನ್ನ ಹೆಸರು ಅಲ್ಲಿ ಬಳಕೆ ಆಗೋದಕ್ಕೆ ಕಾರಣ ಏನೆಂದರೆ, ಮೊದ ಮೊದಲು ಮಕ್ಕಳಿಗೆ ದೇವರ ಹೆಸರನ್ನು ಇಡುತ್ತಿದ್ದರು. ಹೀಗಾಗಿ ನನ್ನ ಹೆಸರು ಕೂಡ ತುಂಬಾ ಫೇಮಸ್. ನಿನ್ನ ಹೆಸರಿನ ಹಾಗೆ ನನ್ನ ಹೆಸರು ಕೂಡ ಬಳಕೆ ಆಗುತ್ತೆ ಎಂದ. ಗಲ್ಲಿ ಗಲ್ಲಿಗಳಲ್ಲಿ ಮಂಜುನಾಥ ಎಂಬ ಹೆಸರಿನ ಜನರಿದ್ದಾರೆ ಸುಮ್ಮನೇ ಯೋಚಿಸಬೇಡ ಎಂದ. ನಿನಗೆ ಗೊತ್ತಾ ಮಂಡ್ಯದಲ್ಲಿ ನನ್ನ ಗೆಳೆಯ ಮಾಧವನಿಗೆ ಮಹಾದೇವ ಎಂದು ಅನ್ನುತ್ತಿದ್ದರು ಎಂದ.&lt;br /&gt;&lt;br /&gt;ಆದರೆ ನನ್ನ ಹೆಸರಿನಿಂದ ತುಂಬಾ ಜನ ವ್ಯಂಗ್ಯ ಕೂಡ ಮಾಡುತ್ತಾರೆ ಎಂದೆ. ಏನು ಅಂತ ಅಂದ. ಕೆಲ ಗೆಳೆಯರು "ಗೋಪಿ ಆಯಿತ ಕಾಫೀ" ಎಂದು ಹೇಳುತ್ತಿದ್ದ. ಅದರಲ್ಲಿ ಒಬ್ಬ ತುಂಬಾ ಅತಿರೇಕವಾಗಿ "ಗೋಪಿ ಉದುತ್ತಾನೆ ಪೀಪೀ" ಎಂದು ಹೇಳುತ್ತಿದ್ದ ಎಂದು ಬೇಜಾರಿನಲ್ಲಿ ಹೇಳಿದೆ. ಕೆಲ ಬಾರಿ ಗೋಪಾಲ್ ಜರ್ದ್, ಗೋಪಾಲ್ ಟೂತ್ ಪೌಡರ್ ಎಂದೆ.&lt;br /&gt;&lt;br /&gt;ನೀನು ಸಿನಿಮಾ ಆಕ್ಟರ್ ಗಳು ಹೆಸರು ಬದಲಾಹಿಸಿದ ಹಾಗೆ ಬದಲಾಯಿಸಿಬಿಡು ಎಂದ. ನಾನು ಅದು ಹೇಗೆ ಸಾಧ್ಯ ಎಂದೆ. ಈಗ ಎಲ್ಲವೂ ಸಾಧ್ಯ ಒಂದು ಕೋರ್ಟ್ನಲ್ಲಿ ಅರ್ಜಿ ಗುಜರಾಯಿಸಿದರೆ ಸಾಕು. ಆಮೇಲೆ, ಒಂದು ಪೇಪರ್ ನಲ್ಲಿ ಜಾಹೀರಾತು ಕೊಟ್ಟರೆ ಸಾಕು ಎಂದ. ಮೊದಲನೆ ಬಾರಿ ನಿನ್ನ ಹೆಸರು ಕೂಡ ಲೈಮ್ ಲೈಟ್ ಗೆ ಬಂದ ಹಾಗಾಗುತ್ತೆ ಎಂದ.&lt;br /&gt;&lt;br /&gt;ನಿನಗೆ, ಹೆಸರಿಗೆ ಆಗುವ ಶೋಷಣೆಯ ಒಂದು ರಸವತ್ತಾದ ಕತೆ ಹೇಳುತ್ತೇನೆ ಕೇಳು. ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಸೋಮಶೇಖರ ಎಂಬ ಗೆಳೆಯ ಇದ್ದ. ಅವನಿಗೆ ನಾವೆಲ್ಲರೂ ಸೋಮ ಎಂದು ಅನ್ನುತ್ತಿದ್ದೆವು. ಅವನು ಅವಳ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಅವಳು ಕೂಡ ಅವನನ್ನು ಪ್ರೀತಿಸುತ್ತಿದ್ದಳು. ಅವಳು ಅವನನ್ನು ಸೋಮ ಎಂದೆ ಸಂಭೋದಿಸುತ್ತಿದ್ದಳು. ಅವರಿಬ್ಬರಿಗೆ ಮದುವೆ ಆಯಿತು. ಅವಳು ಮದುವೆ ಆದ ಮೇಲೂ ಹಾಗೆ ಅನ್ನುತ್ತಿದ್ದಾಗ ಒಬ್ಬ ಹಿರಿಯರು ಹಾಗೆಲ್ಲಾ ಅನ್ನಬಾರದು, ರೀ ಹಚ್ಚಿ ಮಾತನಾಡಬೇಕು ಎಂದು ಹೇಳಿದರು. ಆಗಿನಿಂದ ಅವಳು ರೀ ಎಂದು ಸೇರಿಸಿ ಸೋಮನನ್ನು "ಸೋಮಾರಿ" ಮಾಡಿಬಿಟ್ಟಿದ್ದಳು. ಅವನು ಹೇಳುತ್ತಿದ್ದಂತೆ ಬಾಯಲ್ಲಿರುವ ಕಾಫೀ ಅನಯಾಸವಾಗಿ ಹೊರಗಡೆ ಬಂತು.&lt;br /&gt;&lt;br /&gt;ಜನರಿಗೆ ವ್ಯಂಗ್ಯ ಮಾಡೋದಕ್ಕೆ ಒಂದು ವಿಷಯವಿದ್ದರೆ ಸಾಕು, ಅದಕ್ಕೆ ಹೆಸರು ತುಂಬಾ ಬಳಕೆ ಆಗುತ್ತೆ ಅಷ್ಟೇ ಎಂದು ಸಮಾಧಾನ ಹೇಳಿದ. ನನಗು ಅವನು ಹೇಳಿದ್ದು ಸರಿ ಅನ್ನಿಸಿತು. ಕಡೆಗೆ ಮಂಜ ಲೇ ಹಾಗೆ ಹೊರಟರೆ ಹೇಗೆ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂದು ವ್ಯಂಗ್ಯದ ಮಾತು ಆಡಿದ. ಕಾಫೀ ಮುಗಿಸಿ ಮನೆಗೆ ಬಂದೆವು.&lt;br /&gt;&lt;br /&gt;ಒಮ್ಮೆ ನಾನು ಮತ್ತು ನನ್ನ ಮಡದಿ ದಾವಣಗೆರೆಗೆ ನೆಂಟರ ಮನೆಗೆ ಹೋಗಿದ್ದೆವು. ಆಗ ಒಬ್ಬ ಅಜ್ಜಿ ಪುಟ್ಟಿ ಎತ್ತಿ ತಾ ಎಂದರು. ನಾನು ಗಾಬರಿ ನನ್ನ ಹೆಂಡತಿಯನ್ನು ಹೇಗೆ ಎತ್ತಲಿ ಎಂದು. ಮತ್ತೆ ಸೆಗಣಿ ಪುಟ್ಟಿ ತಾ ಎಂದರು. ನನ್ನ ಹೆಂಡತಿಗೆ ಹೇಳುತ್ತಿದ್ದಾರೆ ಎಂದು ಸುಮ್ಮನೇ ಇದ್ದೆ. ನನ್ನ ಹೆಂಡತಿಗೆ ಚಿಕ್ಕಂದಿನಿಂದ ಪುಟ್ಟಿ ಎಂದೆ ಎಲ್ಲರೂ ಅನ್ನುತ್ತಾರೆ. ಕಡೆಗೆ ರೀ ಅದನ್ನು ಎತ್ತಿ ಕೊಡಿ ಎಂದು ಒಂದು ಪುಟ್ಟಿ(ಬುಟ್ಟಿ) ತೋರಿಸಿದಳು ಮಡದಿ, ನಾನು ಎತ್ತಿ ಕೊಟ್ಟೆ. ಆಮೇಲೆ ತಿಳಿಯಿತು ಅವರು ಬುಟ್ಟಿಗೆ ಪುಟ್ಟಿ ಅನ್ನುತ್ತಾರೆ ಎಂದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-6410079880399346689?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/6410079880399346689/comments/default' title='Post Comments'/><link rel='replies' type='text/html' href='http://haalusakkare.blogspot.com/2011/04/blog-post_30.html#comment-form' title='6 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/6410079880399346689'/><link rel='self' type='application/atom+xml' href='http://www.blogger.com/feeds/3457141075796460701/posts/default/6410079880399346689'/><link rel='alternate' type='text/html' href='http://haalusakkare.blogspot.com/2011/04/blog-post_30.html' title='ಹೆಸರಿನ ಹುಚ್ಚು ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-3457141075796460701.post-7760536984565842380</id><published>2011-04-26T07:29:00.000-07:00</published><updated>2011-04-26T07:31:35.685-07:00</updated><category scheme='http://www.blogger.com/atom/ns#' term='ಅನುಭವ ಕಥನ'/><title type='text'>ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....</title><content type='html'>ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ. ಒಂದೇ ಚಪ್ಪಲಿ ಇತ್ತು. ಒಂದೇ ಚಪ್ಪಲಿ ಯಾರು ಕದ್ದರು ಎಂಬ ಯೋಚನೆಗೆ, ಯಾರಾದರೂ ಕು೦ಟ ಕಳ್ಳ ಇರಬಹುದು ಎಂದು, ಬರೀ ಕಾಲಲ್ಲಿ ಹೋಗಿ ನೋಡಿದೆ. ಒಂದು ಚಿಕ್ಕ ನಾಯಿ ಮರಿ ನನ್ನ ಚಪ್ಪಲಿ ತೆಗೆದುಕೊಂಡು ಆಟ ಆಡುತ್ತಾ ಇತ್ತು. ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾಯಿ... ನಾಯಿನೆ ಅಲ್ಲವೇ. ಮೊದಲಿನಿಂದಲೂ ನಾಯಿ ಎಂದರೆ ಹೆದರಿಕೆ. ಅದನ್ನು ಕಷ್ಟ ಪಟ್ಟು ಓಡಿಸಿ, ಒಂದೇ ಚಪ್ಪಲಿ ಹಾಕಿಕೊಂಡು ಬರುತ್ತಾ ಇದ್ದೆ. ಮಂಜ "ಒಂದೇ ಚಪ್ಪಲಿ ಕೊಂಡು ಕೊಂಡಿದ್ದೀಯಾ ಜುಗ್ಗ" ಎಂದು ಅಪಹಾಸ್ಯ ಮಾಡಿದ. ನಾಯಿ ಮಾಡಿದ ಅವಾಂತರ ಹೇಳಿ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಮನೆ ಒಳಗಡೆ ನಡೆದೆ.&lt;br /&gt;&lt;br /&gt;ಮಡದಿ ಎರಡು ದಿನಗಳಿಂದ ಕೋಪ ಮಾಡಿಕೊಂಡಿದ್ದಳು. ಮನೆ ಕಸ ಇನ್ನೂ ಗುಡಿಸಿರಲಿಲ್ಲ. ಒಳಗೆ ಬಂದು "ಹೊರಗಡೆ ನನ್ನ ಕಾಲು ತುಂಬಾ ಸ್ವಚ್ಛ ಇದ್ದವು, ಒಳಗಡೆ ಬಂದೊಡನೆ ನನ್ನ ಕಾಲು ಹೊಲಸು ಆಗಿದ್ದಾವೆ" ನೋಡು ಪುಟ್ಟ ಎಂದು ನಗುತ್ತಾ ಮಗನಿಗೆ ಹೇಳಿದೆ. ಅಷ್ಟರಲ್ಲಿ ಮಡದಿ ಕೋಪದಿಂದ, ಪೊರಕೆ ನನ್ನ ಬಳಿ ಇಟ್ಟು ಒಳಗಡೆ ಹೋದಳು. ನಾನೇ ಕಸ ಗುಡಿಸಬೇಕಾಯಿತು.&lt;br /&gt;&lt;br /&gt;ಈ ಸಿಟ್ಟು ಎನ್ನುವುದು ನನ್ನ ಮಡದಿಯೊಬ್ಬಳ ಕಾಯಿಲೆ ಅಥವಾ ಎಲ್ಲ ಹುಡುಗಿಯರ ಕಾಯಿಲೆನಾ ಎಂಬ ಯೋಚನೆ ಬಂತು. "ಹುಡುಗಿಯರು ಕೋಪ ಮಾಡಿಕೊಂಡಾಗ ತುಂಬಾ ಮುದ್ದಾಗಿ ಕಾಣುತ್ತಾರೆ" ಎಂದು ಅರ್ಥ ಮಾಡಿಕೊಂಡು ಕಾಯಿಲೆ ಅಲ್ಲದೇ ಖಯಾಲಿ ಕೂಡ ಆಗಿರಲೂಬಹುದು. ಆಗ ಎಲ್ಲ ಸಮಯದಲ್ಲೂ ಮುದ್ದಾಗಿ ಕಾಣಬಹುದು ಎಂದು ಕೂಡ ಹೀಗೆ ಮಾಡಿರಬಹುದು.&lt;br /&gt;&lt;br /&gt;ಕೋಪ ಹೋಗಿಸೋಕೆ ಏನೇನು ಯೋಜನೆಗಳು ಎಂದು ಆಲೋಚನೆಗೆ ಬಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಒಬ್ಬ ಆಪ್ತ ಗೆಳೆಯ ಹೇಳುತ್ತಿದ್ದ "ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು" ಎಂದು. ಆದರೆ ಯಾವ ಹಿಟ್ಟು ಎಂದು ಮಾತ್ರ ಹೇಳಿರಲಿಲ್ಲ ಮಹಾರಾಯ. ಯಾವುದಾದರೂ ಮುಕ್ಕಬಹುದು ಆದರೆ ಸಿಟ್ಟು ಜ್ಯಾಸ್ತಿ ಆಯಿತು ಎಂದರೆ ಕಷ್ಟ. ಅಥವಾ ಗಿರಣಿಯಲ್ಲಿರುವ ಹಿಟ್ಟಿನ ಮಿಶ್ರಣವ ಎಂದು ಕೂಡ ಯೋಚಿಸಿದೆ.&lt;br /&gt;&lt;br /&gt;ಮತ್ತೆ ಕೆಲವರು ಸಿಟ್ಟು ಬಂದಾಗ ನಮ್ಮ ಇಂಗ್ಲೀಶ್ ಮೇಷ್ಟ್ರು ಹೇಳುವ ಕೌಂಟ್ ವನ್ ಟು ಟೆನ್ ಕೂಡ ನೆನಪು ಆಯಿತು. ಆದರೆ ಕೋಪ ಬಂದರೆ ಇಂಗ್ಲೀಶ್ ಕಡ್ಡಾಯವಾಗಿ ಬರಲೇ ಬೇಕು. ಅಷ್ಟರಲ್ಲಿ ಲಗುಬಗೆಯಿಂದ ಏನೇ? ನಿನಗೆ ಇಂಗ್ಲೀಶ್ ಬರುತ್ತ ಎಂದೆ. ಇಲ್ಲ ಕಣ್ರೀ ನೀವೇ ಜಾಣರು ಎಂದು ಮತ್ತಷ್ಟು ಕೋಪ ಮಾಡಿಕೊಂಡಳು. ಮತ್ತೆ ಕನ್ನಡದಲ್ಲಿ ಒಂದರಿಂದ ಹತ್ತರವರಗೆ ಎಣಿಸು ಎಂದೆ. ಅದು ಬರಲ್ಲ ಕಣ್ರೀ ಏನ್ರೀ? ಈವಾಗ ಎಂದಳು.&lt;br /&gt;&lt;br /&gt;ಅವಳ ಕೋಪಕ್ಕೂ ಮತ್ತು ನಮ್ಮ ಜಗಳಕ್ಕು ಒಂದು ಕಾರಣವಿದೆ. ಅವಳು ಊರಿಗೆ ಹೋಗುತ್ತೇನೆ ಎಂದು ಕ್ಯಾತೆ ತೆಗೆದಿದ್ದು. ಹೀಗಾಗಿ ನಾನು ಹೋಗಿ ಟಿಕೆಟ್ ಮಾಡಿಸಿಕೊಂಡು ಬಂದು ಅವಳಿಗೆ ಕೊಟ್ಟೆ. ಅವಳು ಕೋಪಕ್ಕೆ ತಿಲಾಂಜಲಿ ಹಾಕಿದ್ದಳು.&lt;br /&gt;&lt;br /&gt;ಮರುದಿನ ಬೆಳಿಗ್ಗೆ ಅವರನ್ನು ಕಳುಹಿಸಲು ಆಟೋ ಹುಡುಕಿದೆ. ಬೆಳಿಗ್ಗೆ ಒಂದೂ ಆಟೋ ಸಿಗಲೇ ಇಲ್ಲ. ಕಡೆಗೆ ಒಂದು ಆಟೋ ಮಾಡಿ ಹೋಗುವಷ್ಟರಲ್ಲಿ ತುಂಬಾ ಲೇಟ್ ಆಗಿತ್ತು. ಮೂರು ಬ್ಯಾಗ್ ನಾನೇ ಹಿಡಿದುಕೊಂಡು ಹೋಗಿ ಲಗುಬಗೆಯಲ್ಲಿ ಬಿಟ್ಟು ಬಂದೆ. ಸ್ಟೇಶನ್ ಹೊರಗೆ ಬಂದೆ. ಅಷ್ಟರಲ್ಲಿ ಒಬ್ಬ ಕರೆದು "ಬರುತ್ತೀಯ..." ಎಂದ ಕೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ಎಲ್ಲಿ? ಎಂದೆ. ನೀವು ಕೂಲಿ ಅಲ್ಲವ ಎಂದ. ನಾನು ಇಲ್ಲ ಸರ್ ಎಂದು ನನ್ನ ಕೆಂಪು ಅಂಗಿ ನೋಡಿ ನಗುತ್ತಾ ಮನೆಗೆ ಬಂದೆ.&lt;br /&gt;&lt;br /&gt;ಅವಳಿಲ್ಲದೇ ತುಂಬಾ ಮಜವಾಗಿ ಇರಬಹುದು ಎಂದು ಯೋಚಿಸುತ್ತಾ ಬಂದ ನನಗೆ ಮನೆಯಲ್ಲಿ ಮಡದಿ, ಮಗ ಇಲ್ಲದೇ ನಿಶಬ್ದವಾಗಿತ್ತು. ಮನೆ, ಮನೆಸೆಲ್ಲ ಖಾಲಿ ಖಾಲಿ. ಯಾರು ಇಲ್ಲದಿದ್ದರೂ ಮನೆಯಲ್ಲಿ ನನ್ನೊಟ್ಟಿಗೆ ಇರುವರೇನೋ ಎಂಬ ಹುಸಿ ಭಾವನೆ. ಆಮೇಲೆ ನೋಡಿ ಯಾರು ಇಲ್ಲ ಎಂದು ಮನವರಿಕೆಯಾಗುತಿತ್ತು. "ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ" ಎಂಬ ಗೋಪಾಲ್ ಕೃಷ್ಣ ಅಡಿಗರ ಉಕ್ತಿಯಂತೆ, ಅಂತಹ ಖುಷಿಯೇನು ಅನ್ನಿಸಲಿಲ್ಲ.&lt;br /&gt;&lt;br /&gt;ಚಹಾ ಮಾಡೋಣ ಎಂದು ಅರ್ಧ ಹಾಲನ್ನು ಇನ್ನೊಂದು ಪಾತ್ರೆಗೆ ಸುರುವಿದೆ. ಮತ್ತು ಚಹಾ ಪುಡಿ ಹಾಕಿದೆ. ಅಷ್ಟರಲ್ಲಿ ದೇವರ ಕಟ್ಟೆ ಮೇಲೆ ಇಟ್ಟಿರುವ ಗುಲಾಬಿ ಹೂ ಕಾಣಿಸಿತು. ಅವಳು ಅದನ್ನು ಆತುರದಲ್ಲಿ ಅಲ್ಲಿಯೇ ಇಟ್ಟು ಹೋಗಿದ್ದಳು. ಅದನ್ನು ದೇವರಿಗೆ ಏರಿಸಿ, ಸಕ್ಕರೆ ಹಾಕಿದೆ. ಚಹಾ ಮಾಡಿ ಹೊರಗಡೆ ಬಂದು ಚಹಾ ಹೀರುತ್ತಾ ಕುಳಿತೆ. ಚಹಾ ಕಹಿಯಾಗಿತ್ತು, ಏಕೆಂದರೆ? ನಾನು ಚಹಾ ಪುಡಿ ಮತ್ತು ಸಕ್ಕರೆ ಹಾಕಿದ್ದು ಬೇರೆ ಬೇರೆ ಪಾತ್ರೆಗೆ. ಕಡೆಗೆ ಸಕ್ಕರೆ ಬೆರೆಸಿ ಚಹಾ ಹೀರುತ್ತಾ ಕುಳಿತಾಗ ನಾವಿಬ್ಬರೇ ನಾನು ಮತ್ತು ಒಂದು ಗುಯ್‌ಗೂಡುವ ನೊಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7760536984565842380?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7760536984565842380/comments/default' title='Post Comments'/><link rel='replies' type='text/html' href='http://haalusakkare.blogspot.com/2011/04/blog-post.html#comment-form' title='6 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7760536984565842380'/><link rel='self' type='application/atom+xml' href='http://www.blogger.com/feeds/3457141075796460701/posts/default/7760536984565842380'/><link rel='alternate' type='text/html' href='http://haalusakkare.blogspot.com/2011/04/blog-post.html' title='ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-3457141075796460701.post-8561756252411140723</id><published>2011-03-22T06:43:00.001-07:00</published><updated>2011-03-22T06:43:52.064-07:00</updated><category scheme='http://www.blogger.com/atom/ns#' term='ಅನುಭವ ಕಥನ'/><title type='text'>ಬಾಡಿಗೆ ಮನೆ ....</title><content type='html'>ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕಿ ಖುಷಿಪಡಬೇಡ ಎಂದು ನನಗೆ ತಿರುಗು ಬಾಣ ಬಿಟ್ಟ. ಆಗ ನಕ್ಕೂ, ಊಟಕ್ಕೆ ನಮ್ಮ ಮನೆಗೆ ಬಂದು ಬಿಡು ಎಂದೆ. ಹಾ... ಏನು? ಎಂದ. ಊಟಕ್ಕೆ ನಮ್ಮ ಮನೆಗೆ ಬಾ, ಇಲ್ಲ ನನ್ನ ಮನೆಯಲ್ಲಿರುವ ಸಿಲಿಂಡರ್ ತೆಗೆದುಕೊಂಡು ಹೋಗು ಎಂದೆ. ಲೇ ... ನಾನು ಅದನ್ನು ಹೇಳುತ್ತ ಇಲ್ಲ ಕಣೋ ಎಂದು ಗಹ.. ಗಹಿಸಿ.. ನಗುತ್ತಾ.... ಗ್ಯಾಸ್ ಆಗಿದ್ದು ಹೊಟ್ಟೆಯಲ್ಲಿ ಎಂದ. ನಾನು ತಮಾಷೆಗೆ ಇದನ್ನ ಭಾರತ್ ಅಥವಾ ಏಚ್ ಪೀ ಗ್ಯಾಸ್ ಏಜೆನ್ಸೀ ಅವರಿಗೆ ತಿಳಿದರೆ ಕಷ್ಟ ನಿನ್ನನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಎಂದೆ.&lt;br /&gt;&lt;br /&gt;ಮತ್ತೆ ಏನು? ರಾಯರು ತುಂಬಾ ದಿವಸದ ಮೇಲೆ ಇಲ್ಲಿಗೆ ಪ್ರಯಾಣ ಬೇಳಿಸಿದ್ದೀರಿ ಎಂದ. ಬಾಡಿಗೆ ಮನೆ ನೋಡಿ ಕೊಂಡು ಬರೋಣ ಬರುತ್ತೀಯಾ? ಎಂದು ಕೇಳಿದೆ. ನೀನು ಇದ್ದರೆ ಸ್ವಲ್ಪ ಧೈರ್ಯ ಇರುತ್ತೆ. ಮತ್ತು ಚೌಕಾಸಿ ಮಾಡಲು ನೀನೆ ಸರಿ ಎಂದೆ. ನಾನು ಬರಲ್ಲ, ನೀನು ಬೇಕಾದರೆ ಹೋಗು ಎಂದ. ಕಡೆಗೆ ಒಬ್ಬನೇ ಮನೆ ಹುಡುಕಲು ಹೊರಟೆ. ಗಾಡಿ ಮೇಲೆ ತಲೆ ಅತ್ತ.. ಇತ್ತ.. ಮಾಡುತ್ತಾ ಹೋಗುವ ನನ್ನನ್ನು ನೋಡಿ ತುಂಬಾ ಜನ ವಿಚಿತ್ರವಾಗಿ ನೋಡಿ ನಕ್ಕಿದ್ದು ಆಯಿತು. ಹಲ್ಲು ಇದ್ದಾಗ ಕಡ್ಲೆ ಇರಲ್ಲ , ಕಡ್ಲೆ ಇದ್ದಾಗ ಹಲ್ಲು ಇರಲ್ಲ ಎಂಬ ಗಾದೆ ಹಾಗೆ ನನ್ನ ಅವಸ್ಥೆ ಆಗಿತ್ತು. ಒಂದು ಮನೆ ಕೂಡ ಸಿಗಲೇ ಇಲ್ಲ. ಕಡೆಗೆ ನನಗೆ ನೋ ಪಾರ್ಕಿಂಗ್ ಎಂಬ ಬೋರ್ಡ್ ಕೂಡ ಮನೆ ಬಾಡಿಗೆ ಎಂಬ ಹಾಗೆ ಕಾಣಿಸುತಿತ್ತು.&lt;br /&gt;&lt;br /&gt;ಕಡೆಗೆ ಒಂದು ಮನೆ ಮುಂದೆ ಬಾಡಿಗೆಗೆ ಎಂಬ ಬೋರ್ಡ್ ನೇತು ಹಾಕಿದ್ದರು. ನಾನು ಒಳಗಡೆ ಹೋದೆ, ನನ್ನ ಮೇಲಿಂದ ಕೆಳಗಡೆವರೆಗೂ ಅನಾಮತ್ತಾಗಿ ನೋಡಿ ನಾವು ನಾನ್-ವೇಜ್ ನವರಿಗೆ ಕೊಡುವುದಿಲ್ಲ ಎಂದರು. ನಾನು ವೇಜ್ ಎಂದೆ. ನಾನು ಅದನ್ನೇ ಹೇಳಿದ್ದು ಕಣ್ರೀ ಎಂದರು. ಕಡೆಗೆ ಕಷ್ಟ ಪಟ್ಟು ತಿಳಿಸಿದ ಮೇಲೆ ಮನೆ ತೋರಿಸಿದರು. ಮನೆ ಅಷ್ಟು ಇಷ್ಟವಾಗಲಿಲ್ಲ. ಹೀಗಾಗಿ ಸುಮ್ಮನೇ ಮತ್ತೆ ಮುಂದೆ ಹೊರಟೆ.&lt;br /&gt;&lt;br /&gt;ಮತ್ತೊಂದು ಬಾಡಿಗೆ ಮನೆ ಕಾಣಿಸಿತು. ಬೆಲ್ ಮಾಡಿ, ನಾನು ಅವರು ಕೇಳುವ ಮೊದಲೇ ನಾನು ಸಸ್ಯಾಹಾರಿ ಎಂದೆ. ಅವರು ಅವಾಕ್ಕಾಗಿ ನೋಡಿದರು. ಕಡೆಗೆ ಸುಧಾರಿಸಿಕೊಂಡು ಮನೆ ಬಾಡಿಗೆ ಎಂದೆ. ಓsss ಅದಾ ಎಂದು ಮನೆ ತೋರಿಸಿದರು. ಮನೆಯಲ್ಲಿ ಇರುವ ವಸ್ತು ಎಲ್ಲೆಲ್ಲಿ ಇಡಬೇಕು ಎಂದು ನಾನು ಯೋಚಿಸುತ್ತಿದ್ದರೆ, ಅವರು ಮಾತ್ರ ವಾಸ್ತು ಬಗ್ಗೆ ಪುರಾಣ ಶುರು ಮಾಡಿದ್ದರು. ಇದು ವಾಯು ಮೂಲೆ , ಅಗ್ನಿ ಮೂಲೆ ಎಂದೆಲ್ಲ ಹೇಳಿ ತಲೆ ತಿಂದಿದ್ದರು. ಇಲ್ಲಿ ಮೊದಲು ಒಬ್ಬ ಹುಡುಗ ಇರುತ್ತಿದ್ದ. ಬಂದ ಎರಡೇ ತಿಂಗಳಲ್ಲಿ ಮದುವೆ ಆಯಿತು ಎಂದರು. ಮತ್ತೆ ಎರಡು ವರ್ಷ ಇಲ್ಲೇ ಇದ್ದರು ಮತ್ತು ಒಂದು ಮಗು ಕೂಡ ಆಯಿತು ಎಂದರು. ನನಗೆ ಮೊದಲೇ ಮದುವೆ,ಮಗು ಎರಡು ಆಗಿದೆ ಎಂದು ಹೇಳೋಣ ಎಂದುಕೊಂಡೆ. ಆದರೂ ಸುಮ್ಮನೇ ಮನೆ ನೋಡಿ ಮನೆಯವರನ್ನೂ ಕರೆದುಕೊಂಡು ಬಂದು ತೋರಿಸಿ, ಆಮೇಲೆ ಹೇಳುತ್ತೇನೆ ಎಂದು ಕಾಲುಕಿತ್ತೆ.&lt;br /&gt;&lt;br /&gt;ಮತ್ತೆ ಎಷ್ಟು ತಿರುಗಿದರು ಮನೆ ಸಿಕ್ಕಲಿಲ್ಲ. ಕಡೆಗೆ ಮನೆಗೆ ಬಂದೆ. ಅಷ್ಟರಲ್ಲಿ ಮಡದಿ ನಾನು ಒಂದು ಮನೆ ನೋಡಿದ್ದೇನೆ ಎಂದಳು. ಆಯಿತು ಅದನ್ನು ನೋಡಿಯೇ ಬಿಡೋಣ ಎಂದು ಹೋದೆವು. ಬಾಡಿಗೆ ಏನೋ ಕಡಿಮೆ ಇತ್ತು...ಆದರೆ ಮನೆ ಮಾತ್ರ ಉದ್ದವಾಗಿ ಪಟ್ಟಿಯ ಹಾಗೆ ಇತ್ತು. ಯಾವುದು ಬೆಡ್‌ರೂಮ್ ಯಾವುದು ಹಾಲ್ ಎಂದು ಪತ್ತೆ ಹಚ್ಚುವುದೇ ಒಂದು ಸಮಸ್ಯೆಯಾಗಿತ್ತು. ಅವರ ಎದುರಿಗೆ ಏನು ಹೇಳದೇ ಆಮೇಲೆ ಬರುತ್ತೇವೆ ಎಂದು ಹೇಳಿ ಹೊರಗಡೆ ಬಂದೆವು. ನನ್ನ ಮಡದಿಗೆ ಅದು ಇಷ್ಟವಾಗಿತ್ತು. ನಾನು ಮನೆ ಸರಿ ಇಲ್ಲ ಎಂದೆ. ನಿನ್ನ ಚಾಯ್ಸ್ ಸರಿ ಇಲ್ಲ ಕಣೇ ಎಂದೆ. ಅದು ನಿಜ ಕಣ್ರೀ ಈಗೀಗ ಅರ್ಥ ಆಗುತ್ತಾ ಇದೆ ಎಂದು ನನ್ನ ಮುಖ ನೋಡಿ ಅಂದಳು.&lt;br /&gt;&lt;br /&gt;ಸಂಜೆ ಅಂತರ್ಜಾಲದಲ್ಲಿ ಒಂದೆರಡು ಬಾಡಿಗೆ ಮನೆ ಹುಡುಕಿದೆ. ಒಬ್ಬರಿಗೆ ಫೋನ್ ಮಾಡಿ ನಿಮ್ಮ ಮನೆ ಟುಲೆಟ್ ಇದೆ ಅಲ್ಲ ಎಂದೆ. ಅಲ್ಲಿಂದ ಯೂ ಆರ್ ಟೂ ಲೇಟ್ ಎಂದು ಉತ್ತರ ಬಂತು. ಮತ್ತೆ ಒಂದೆರಡು ಜನರಿಗೆ ಕರೆ ಮಾಡಿ ಅವರ ವಿಳಾಸ ತಿಳಿದು ನಾಳೆಗೆ ಹೋಗೋಣ ಎಂದು ನಿರ್ಧರಿಸಿ ಆಗಿತ್ತು.&lt;br /&gt;&lt;br /&gt;ಮರುದಿನ ವಿಳಾಸ ಹಿಡಿದು ಹೊರಟೆ. ಒಂದು ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು. ನನ್ನನ್ನು ಹೊರಗಡೆ ಇಂದ ಮಾತ್ರ ಮಾತನಾಡಿಸಿ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಅವರಿಗೆ ಬಾಡಿಗೆ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದೆ. ಅದಕ್ಕೆ ನಮ್ಮ ಮೋಟರ್ ಕೆಟ್ಟರೆ ನೀವು ದುಡ್ಡು ಕೊಡಬೇಕು ಎಂಬ ಉದ್ದಟ್ ವಾಗಿ ಹೇಳಿದರು. ಇವರ ಸಹವಾಸ ಸಾಕು ಎಂದು ಮತ್ತೊಂದು ಮನೆಗೆ ಹೋದೆ. ಮನೆ ತುಂಬಾ ಚೆನ್ನಾಗಿ ಇತ್ತು. ಸಂಜೆಗೆ ಹೋಗಿ ಮನೆ ಮಡದಿಗೂ ತೋರಿಸಿದೆ. ಅವಳಿಗೂ ಸರಿ ಅನ್ನಿಸಿತು. ಕಡೆಗೆ ಅದನ್ನೇ ಒಪ್ಪಿಗೆ ಸೂಚಿಸಿದೆವು. ಅವರು ನನ್ನ ಮಗನ ಜೊತೆ ತಮಾಷೆ ಮಾಡುತ್ತಾ, ಅವನಿಗೆ ಎ ಬಿ ಸಿ ಡಿ ಎಲ್ಲ ಕೇಳಿದರು. ಕೂದಲಿನ ಬಣ್ಣ ಏನು? ಎಂದು ಇಂಗ್ಲೀಶ್ ನಲ್ಲಿ ಕೇಳಿದರು. ಆಗ ಮಗ ನನ್ನ ಕೂದಲಿನ ಬಣ್ಣ ಕರಿ, ನಿಮ್ಮದು ಬಿಳಿ ಎಂದು ಬಿಟ್ಟ. ಸಧ್ಯ ಅವರು ಬೇಜಾರ್ ಮಾಡಿಕೊಳ್ಳಲಿಲ್ಲ. ಮನೆ ಬಾಡಿಗೆ ಎಲ್ಲವನ್ನು ಮಾತನಾಡಿ ಮನೆಗೆ ಬಂದೆವು.&lt;br /&gt;&lt;br /&gt;ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಅನ್ನಿಸಿತು. ಮೊದಲನೆ ಮನೆ ಹುಡುಕಿ ಕೊಟ್ಟಿದ್ದು ನನ್ನ ಗೆಳೆಯ. ಮರುದಿನ ಬಾಡಿಗೆ ಮನೆ ಹುಡುಕಲು ಪಟ್ಟ ಕಷ್ಟದಿಂದ ಬಾಡಿ ಬೆಂಡಾಗಿ ಹೋಗಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-8561756252411140723?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/8561756252411140723/comments/default' title='Post Comments'/><link rel='replies' type='text/html' href='http://haalusakkare.blogspot.com/2011/03/blog-post_22.html#comment-form' title='6 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/8561756252411140723'/><link rel='self' type='application/atom+xml' href='http://www.blogger.com/feeds/3457141075796460701/posts/default/8561756252411140723'/><link rel='alternate' type='text/html' href='http://haalusakkare.blogspot.com/2011/03/blog-post_22.html' title='ಬಾಡಿಗೆ ಮನೆ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-3457141075796460701.post-7298886751838289913</id><published>2011-03-11T05:53:00.000-08:00</published><updated>2011-03-11T05:56:34.384-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಟ್ರೈನಿನ ಲೋಚಗುಡುವಿಕೆ ....</title><content type='html'>ಇವತ್ತು ಬೈಸಿಕೊಳ್ಳುವುದೂ ಗ್ಯಾರಂಟೀ ಎಂದು ಕೊಳ್ಳುತ್ತ, ಮನೆಯೊಳಗೆ ಕಾಲು ಇಟ್ಟೆ. ಹಲ್ಲಿ ಲೋಚಗುಡುತ್ತಾ ಇತ್ತು. ಹಲ್ಲಿ ನೋಡಿ ಹಲ್ಲು ಕಡಿದು ಒಳಗಡೆ ಹೋದೆ. ಅದನ್ನು ಓಡಿಸಲು ಹೋದೆ. ತುಂಬಾ ಜೋರಾಗಿ ಓಡಿ ದಣಿದವನಂತೆ ನಿಂತು ಮತ್ತೆ ಲೋಚಗುಟ್ಟಿತು. ಮತ್ತೊಮ್ಮೆ ಅದನ್ನು ಓಡಿಸಲು ಹೋದೆ. ಸ್ವಲ್ಪ ಕೂಡ ಅಲುಗಾಡದೆ ಹಾಗೆ ನಿಂತು ಬಿಟ್ಟಿತು. ಸಧ್ಯ ಅದಕ್ಕೂ ಗೊತ್ತಾಗಿ ಬಿಟ್ಟಿದೆ, ಇವನ ಪರಾಕ್ರಮ ಇಷ್ಟಕ್ಕೆ ಮಾತ್ರ ಸೀಮಿತ ಎಂದು. ಇನ್ನೇನು ಮಾಡದೆ ಸುಮ್ಮನೇ ಒಳಗಡೆ ನಡೆದೆ.&lt;br /&gt;&lt;br /&gt;ನಾನು ಒಳ್ಳೆಯ ವಿಚಾರ ಮಾಡುವಾಗ ಒಮ್ಮೆಯೂ ಲೋಚಗೂಡದ ಹಲ್ಲಿ, ನಾನು ಕೆಟ್ಟ ವಿಚಾರ ಮಾಡುವಾಗ ಮಾತ್ರ ಖಂಡಿತ ಲೋಚಗುಡುತ್ತದೆ. ಅದನ್ನು ನಾನು ತುಂಬಾ ಕೆಟ್ಟ ಕಣ್ಣಿನಿಂದ ನೋಡಿ, ಮತ್ತೆ ನಾನೇ ಲೋಚಗೂಡಲು ಶುರು ಮಾಡುತ್ತೇನೆ. ನನ್ನ ಲೋಚಗುಡುವಿಕೆಯಿಂದ ನನಗೆ ಯಾವುದೇ ಫಾಯಿದೆ ಆಗಿದೆಯೋ ಖಂಡಿತ ಗೊತ್ತಿಲ್ಲ. ಹೆಂಡತಿ ಮಾತ್ರ ಕೃಷ್ಣ ಕೃಷ್ಣ .. ಎಂದು ಎರಡು ಬಾರಿ ಶ್ರೀ ಕೃಷ್ಣ ಪರಮಾತ್ಮನನ್ನು ಎರಡು ಬಾರಿ ನೆನಸುತ್ತಾಳೆ. ಅಷ್ಟು ಚೆನ್ನಾಗಿ ಮಿಮಿಕ್ರಿ ಮಾಡುತ್ತೇನೆ. ಅದು ಹಲ್ಲಿಯದು ಮಾತ್ರ.&lt;br /&gt;&lt;br /&gt;ನಾನು ಲೇಟಾಗಿ ಆಫೀಸ್ ನಿಂದ ಬಂದಿದ್ದೆ. ಲೇಟ್ ಆಗುವುದಕ್ಕೂ ಒಂದು ಕಾರಣ ಇತ್ತು. ಆಫೀಸ್ ನಲ್ಲಿ ಟ್ರೇನಿಂಗ್ ಇತ್ತು. ಮಡದಿ ಕರೆ ಮಾಡಿ ಕೂಡ ಹೇಳಿರಲಿಲ್ಲ. ಹೀಗಾಗಿ ಮಡದಿ ಕೋಪ ಮಾಡಿಕೊಂಡಿರಬಹುದೆಂದು ಭಯದಿಂದ ಬಂದಿದ್ದೆ. ಟ್ರೈನಿಂಗ್ ತೆಗೆದುಕೊಳ್ಳುವರು ಒಬ್ಬ ಫ್ರೆಂಚ್ ಮನುಷ್ಯ ಇಂಗ್ಲೀಷ್ ಉಚ್ಚಾರಣೆ ಚೆನ್ನಾಗಿ ಬರುತ್ತಿರಲಿಲ್ಲ. ತುಂಬಾ ಕಷ್ಟ ಪಟ್ಟು ಪ್ರಯಾಸದಿಂದ ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಟು ಎಂದರೆ ಥೂ ಎಂದು ಉಗಿದ ಹಾಗೆ ಅನ್ನಿಸೋದು. ಇನ್ನೂ 11g Suite ಎಂದರೆ 11g ಸ್ವೀಟ್ ಎಂದ ಹಾಗೆ ಅನ್ನಿಸುತಿತ್ತು. Parallel- ಬ್ಯಾರಲ್ , ಕನ್ಫರ್ಮೇಶನ್ - ಕಾಫೀ ಮಶೀನ್, ಕಾಲಮ್ - ಕೂಲಮ್ ಮತ್ತು ಜೆ ವಿ ಎಂ - ಜಿ ವಿ ಎಂ. ತುಂಬಾ ಕಷ್ಟ ಪಟ್ಟು ಅರ್ಥ ಮಾಡಿಕೊಂಡಿದ್ದೆ.&lt;br /&gt;&lt;br /&gt;ಮನೆಯೊಳಗೆ ಹೋದೆ ತುಂಬಾ ಲೇಟ್ ಆಯಿತ ಎಂದು ಕೇಳಿದೆ. ಏನು ಇಲ್ಲವಲ್ಲ ಎಂದಳು. ನನಗೆ ಆಶ್ಚರ್ಯ. ನಾನು ಮತ್ತೆ ವಿಷಯ ಕೆಣಕಿದರೆ ನನಗೆ ಕಷ್ಟ ಎಂದು ಕೈ ಕಾಲು ತೊಳೆದುಕೊಂಡು ಬಂದು, ಊಟಕ್ಕೆ ಹಾಜರ್ ಆದೆ.ಊಟ ಮಾಡುತ್ತಾ ಕುಳಿತಾಗ, ಮಡದಿ ಏನ್ರೀ ಟ್ರೈನಿಂಗ್ ಹೇಗೆ ಆಯಿತು ಎಂದು ಕೇಳಿದಳು. ನನಗೆ ಆಶ್ಚರ್ಯ ಅವಳಿಗೆ ಹೇಗೆ ತಿಳಿಯಿತು ಎಂದು. ನಾನು ಚೆನ್ನಾಗೆ ಇತ್ತು. ಸ್ವಲ್ಪ ಇಂಗ್ಲೀಶ್ ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದರಲ್ಲಿ ಮಾತ್ರ ತೊಂದರೆ ಅನ್ನಿಸಿತು ಎಂದು ಹೇಳಿದೆ. ಮತ್ತೆ ನಾನು ಅರ್ಥ ಮಾಡಿಕೊಂಡ ಫ್ರೆಂಚ್ ಮತ್ತು ಇಂಗ್ಲೀಶ್ ಪದಗಳನ್ನು ಹೇಳಿದೆ. ಜೋರಾಗಿ ನಕ್ಕೂ ನಿಮಗೆ ತಿನ್ನುವುದು ಬಿಟ್ಟು ಬೇರೆ ಏನು ನೆನಪು ಆಗಲಿಲ್ಲವೇ ಎಂದು ಹೀಯಾಳಿಸಿದಳು. ಆದರೂ ಅನುಮಾನ ಹಾಗೆ ಇತ್ತು. ನಾನೇ ಯಾವಾಗಲಾದರೂ ಹೇಳಿದ್ದೇನಾ ಟ್ರೈನಿಂಗ್ ವಿಷಯ ಎಂದು ನೆನಪು ಮಾಡಿಕೊಂಡೆ. ಯೋಚಿಸಿದಷ್ಟು ತಲೆ ಬಿಸಿಯಾಗ ತೊಡಗಿತು. ಕಡೆಗೆ ತಾಳ್ಮೆ ಮೀರಿ ಕೇಳಿಯೇ ಬಿಟ್ಟೆ. ನಿನಗೆ ಹೇಗೆ ಗೊತ್ತು, ನನಗೆ ಟ್ರೈನಿಂಗ್ ಇದೆ ಎಂದು ಎಂದು ಕೇಳಿದೆ. ಅದು ಟಾಪ್ ಸೀಕ್ರೆಟ್ ಎಂದು ಅಡುಗೆ ಮನೆಗೆ ಮೊಸರು ತರಲು ಹೊರಟು ಹೋದಳು.&lt;br /&gt;&lt;br /&gt;ನಾನು ಮತ್ತೆ ಮತ್ತೆ ಕೇಳಿದ ಮೇಲೆ, ನಿನ್ನೆ ರಾತ್ರಿ ನಿದ್ದೆಯಲ್ಲಿ ಏನೇನೋ ಲೋಚಗುಡುತ್ತಾ ಇದ್ದೀರಿ ಎಂದಳು. ನಾನು ಏನು? ಎಂದು ಕೇಳಿದೆ. ನಾಳೆ ಟ್ರೈನಿಂಗ ಇದೆ ಎಂದು. ಮತ್ತೆ ಲೇಟ್ ಆಗಿ ಬರುತ್ತೇನೆ ಎಂದು ಬೇರೆ ಹೇಳುತ್ತಿದ್ದೀರಿ ಎಂದಳು. ಆಗ ಅರ್ಥ ಆಯಿತು ನನಗೆ ಇವತ್ತಿನ ಅಷ್ಟೋತ್ತರ ಹೇಗೆ ತಪ್ಪಿತು ಎಂದು. ಒಂದೊಂದು ಸಾರಿ ನೀವು ತುಂಬಾ ಲೋಚಗುಡುತ್ತೀರಿ ಅಥವಾ ನಿಮ್ಮ ಗೊರಕೆ ಟ್ರೈನಿನ ಶಬ್ದದ ಹಾಗೆ ಬರುತ್ತೆ ಎಂದಳು. ಇವತ್ತಿನಿಂದ ಹಾಲ್ ನಲ್ಲಿ ಮಲಗಿಕೊಳ್ಳಿ ನಮಗೆ ತುಂಬಾ ಡಿಸ್ಟರ್ಬ್ ಆಗುತ್ತೆ. ನಿನ್ನೆ ಹೀಗೆ ಲೋಚಗುಡುತ್ತಾ ಇದ್ದಾಗ ಮಗ ಬೇರೆ ಎದ್ಡಿದ್ದ ಎಂದು ಬೈದಳು.&lt;br /&gt;&lt;br /&gt;ಹೊರಗಡೆ ಹಾಲ್ ಗೆ ಬಂದೆ. ಅಷ್ಟರಲ್ಲಿ ಮಡದಿ ನಾಳೆ ಲೇಟ್ ಆಗುತ್ತಾ? ಎಂದು ಕೇಳಿದಳು. ಇಲ್ಲ ಎಂದೆ. ನಾಳೆ ಆಫೀಸ್ ನಿಂದ ಬರುತ್ತ ತರಕಾರಿ ತೆಗೆದುಕೊಂಡು ಬನ್ನಿ ಎಂದಳು. ನಾನು ಎಷ್ಟು ತಡಕಾಡಿದರು 300 ರೂಪಾಯಿ ಕೆಳಗೆ ಆಗುವುದೇ ಇಲ್ಲ ತರಕಾರಿಗೆ. ಅದಕ್ಕೆ ತರಕಾರಿ ತಂದ ಮೇಲೆ ತಕರಾರು ಇದ್ದೇ ಇರುತ್ತೆ. ಅಷ್ಟರಲ್ಲಿ ಮೊಬೈಲ್ ಜಾಹೀರಾತು ಕಾಣಿಸಿತು ಟಿ ವಿ ಯಲ್ಲಿ. ಈ ಚೈನೀಸ್ ಗಳು ಏನೆಲ್ಲಾ ಕಂಡುಹಿಡಿದಿದ್ದಾರೆ. ಮೊಬೈಲ್, ಟಿ ವಿ ಎಲ್ಲ ಎಲೆಕ್ಟ್ರಾನಿಕ್ ಐಟಮ್ ಗಳನ್ನು, ಹಾಗೆ ತರಕಾರಿ ಕಂಡು ಹಿಡಿದು ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಅನ್ನಿಸಿತು.ಚೈನೀಸ್ ತರಕಾರಿ ಬಜಾರ್ ಎಲ್ಲ ಕಡೆ. ಆಗ ಈರುಳ್ಳಿ, ಟೊಮ್ಯಾಟೋ , ಬೀನ್ಸ್ ಎಲ್ಲದಕ್ಕೂ ಒಂದೇ ರೇಟ್ 5 ರೂಪಾಯಿ ಕೆ ಜಿ ಎಂದು ಯೋಚನೆ ಬಂತು. ಆಗ ತರಕಾರಿ ಖರ್ಚು 100 ರೂಪಾಯಿ ದಾಟೊಲ್ಲ ಎಂದು ಯೋಚಿಸಿ ಹಾಗೆ ಒಂದು ಮಂದಹಾಸ ಬೀರಿದೆ.&lt;br /&gt;&lt;br /&gt;ಅಷ್ಟರಲ್ಲಿ ಮಡದಿ ಬಂದು ಏಕೆ? ರಾಯರು ಒಬ್ಬರೇ ನಗುತ್ತಾ ಇದ್ದೀರ. ಟ್ರೈನಿಂಗ್ ಕೊಟ್ಟವರು ಗಂಡಸ ಅಥವಾ ಹುಡುಗೀನಾ? ಎಂದು ಕೇಳಿದಳು. ಗಂಡಸೆ ಕಣೇ ಎಂದು ತಡಬಡಿಸಿ ಹೇಳಿದೆ. ಇನ್ನೂ ಸುಮ್ಮನೇ ನಿದ್ದೆ ಮಾಡಿ ಎಂದು ಲೈಟ್ ಆಫ್ ಮಾಡಿ ಹೋದಳು .ಗೋಡೆ ಮೇಲಿರುವ ಹಲ್ಲಿ ಲೋಚಗುಡಿತು. ನಾನು ಲೋಚಗುಡುತ್ತಾ ಕೃಷ್ಣ.. ಕೃಷ್ಣ.. ಎಂದು ಶ್ರೀ ಕೃಷ್ಣ ಪರಮಾತ್ಮನನ್ನು ನೆನೆದು ನಿದ್ದೆಗೆ ಜಾರಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7298886751838289913?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7298886751838289913/comments/default' title='Post Comments'/><link rel='replies' type='text/html' href='http://haalusakkare.blogspot.com/2011/03/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7298886751838289913'/><link rel='self' type='application/atom+xml' href='http://www.blogger.com/feeds/3457141075796460701/posts/default/7298886751838289913'/><link rel='alternate' type='text/html' href='http://haalusakkare.blogspot.com/2011/03/blog-post.html' title='ಟ್ರೈನಿನ ಲೋಚಗುಡುವಿಕೆ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-2756502413084903399</id><published>2011-02-24T06:54:00.000-08:00</published><updated>2011-02-24T06:59:16.699-08:00</updated><category scheme='http://www.blogger.com/atom/ns#' term='ಅನುಭವ ಕಥನ'/><title type='text'>ತರ್ಲೆ ಮಂಜನ ರಥಸಪ್ತಮಿ....</title><content type='html'>&lt;p&gt;ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ  ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ  ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ  ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ  ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್  ಹೋಗುವ  ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ  ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ  ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು. &lt;/p&gt; &lt;p&gt;ಮಂಜನ ಮನೆಗೆ ಹೋದೆ. ಮಂಜ ಪೇಪರ್ ಓದುತ್ತಾ ಕುಳಿತಿದ್ದ.  ಸಾವಿತ್ರಿ ಇಷ್ಟು  ಶಾಂತವಾಗಿದ್ದು ತುಂಬಾ ಖುಷಿ ತಂದಿತು. ಆದರೆ ಏನೋ ನಡೆದಿದೆ ಎನ್ನುವುದು ಮಾತ್ರ ಖಾತ್ರಿ  ಅನ್ನಿಸಿತು. ಏನು? ತಂಗ್ಯಮ್ಮಾ ಹೇಗಿದ್ದೀಯ ಎಂದು ಕೇಳಿದೆ. ಇವರನ್ನು ಕಟ್ಟಿಕೊಂಡ ಮೇಲೆ  ರಾಮ.... ರಾಮ.... ಎಂದು ಆರಾಮ್ ಆಗಿ ಇರಲಾರದೇ ಆಗುತ್ತೆ? ಎಂದು ಉತ್ತರ ಬಂದಿತು.   ಮಂಜನಿಗೆ ಕೇಳಿದೆ ಏನು? ಸಮಾಚಾರ ಎಂದು. ಏನೋ ಗೊತ್ತಿಲ್ಲಪ್ಪಾ? ಮುಂಜಾನೆಯಿಂದ ಏಳು ಬಾರಿ  ಇವತ್ತು ರಥಸಪ್ತಮಿ ಕಣ್ರೀ ಎಂದು ಹೇಳಿದ್ದಾಳೆ ಎಂದ. ಕೋಪ ಏತಕ್ಕೆ ಎಂದು ಗೊತ್ತಿಲ್ಲ  ಎಂದ. ಮತ್ತೆ ಸ್ವೀಟ್ ಏನು? ಮಾಡಬೇಕು ಎಂದು ಕೇಳಿದಳು. ನಾನು ಏನಾದ್ರೂ ಮಾಡು ಎಂದೆ.  ಅದಕ್ಕೆ ಕೋಪದಿಂದ ಏನು? ಬೇಕು  ಅದನ್ನು ಹೇಳಿ ಅಂದಳು. ಮತ್ತೆ ನಾನು ಏನಾದ್ರೂ ಮಾಡು,  ಹೇಗಿದ್ದರು ನೀನು ತಾನೇ ತಿನ್ನುವವಳು ಎಂದೆ. ಅದಕ್ಕೆ ಇರಬೇಕು ಇಷ್ಟು ಕೋಪ ಅಂದ.&lt;/p&gt; &lt;p&gt;ಸಾವಿತ್ರಿ ಕಾಫೀ ತೆಗೆದುಕೊಂಡು ಬಂದು ನನಗೆ ಮಾತ್ರ ಕೊಟ್ಟಳು. ಮಂಜ ಆಗ ಕಾಫೀ ನನಗೆ  ಎಂದ. ಅವಳು ನಿಮಗೆ ಇಲ್ಲ ತುಂಬಾ ಕೂಡಿಬೇಡಿ ಆರೋಗ್ಯ ಹಾಳಾಗುತ್ತೆ ಎಂದು ಕೋಪದಿಂದಲೇ  ನುಡಿದಳು. ಆಗ ಮಂಜ ಕಾಫೀಗೆ ಹಾರ್ಟ್ ಅಟ್ಯಾಕ್ ಆಗಲ್ಲ ಗೊತ್ತಾ ಎಂದ. ಕಾಫೀಗೆ ಜೀವ  ಇದ್ದರೆ ತಾನೇ ಹಾರ್ಟ್ ಅಟ್ಯಾಕ್ ಆಗೋದು ಎಂದಳು.  ನಾನು ನನ್ನ ಬಗ್ಗೆ ಹೇಳಿದ್ದು ಎಂದ  ಮಂಜ.  ಕಡೆಗೆ ಮಂಜನಿಗೂ ಒಂದು ಕಾಫೀ ಲಭಿಸಿತು. ಮಂಜ ಈ ಪೇಪರ್ ನವರು ದುಬಾರಿ ಎನ್ನುವ  ಒಂದು ಕಾಲಮ್ ಪರ್ಮನೆಂಟ ಮಾಡಿದ್ದಾರೆ ಅನ್ನಿಸುತ್ತೆ ಎಂದ. ಮೊನ್ನೆ ಈರುಳ್ಳಿ, ನಿನ್ನೆ  ಪೆಟ್ರೋಲ್ ಇವತ್ತು ಹಾಲು ನಾಳೆ ಹಾಳು ಮೂಳು ಹೀಗೆ.. ಎಂದ.  &lt;/p&gt; &lt;p&gt;ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು, ನಿಮ್ಮ ಗೆಳಯನಿಗೆ ಊರ ವಿಚಾರ  ಎಲ್ಲಾ ಗೊತ್ತಾಗುತ್ತೆ. ಆದರೆ ಮನೆಯವರು ಎಂದರೆ ಅಷ್ಟಕ್ಕೇ ಅಷ್ಟೇ ಎಂದಳು.  ಮೊನ್ನೆನೇ  ಹೇಳಿದ್ದೆ ರಥಸಪ್ತಮಿ ದಿವಸ ಒಂದು ಸೀರೆ ಕೊಡಿಸಿ ಎಂದು ತನ್ನ ಅಳಲನ್ನು ತೋಡಿಕೊಂಡಳು.  ನೋಡಿ ಇವತ್ತು ಹೊಸ ಸೀರೆ ಉಟ್ಟುಕೊಂಡರೆ ವರ್ಷದಲ್ಲಿ ಏಳು ಹೊಸ ಸೀರೆ ಬರುತ್ತವೆ ಎಂದಳು.  ನೀನು ಕೊಡಿಸಿದ್ದೀಯ ತಾನೇ, ನಿನ್ನ ಮಡದಿಗೆ ಎಂದು ನನಗೆ ಕೇಳಿದಳು. ನಂಗೆ ದಿಕ್ಕೇ  ತೋಚದಾಗಿತ್ತು. ಸಧ್ಯ ಪಕ್ಕದಲ್ಲಿ ಹೆಂಡತಿ ಇರಲಿಲ್ಲ. ಅದೇನೋ ಅಂತಾರಲ್ಲ ದಾರಿಯಲ್ಲಿ  ಹೋಗುವ ಮಾರಿ ತಂದು ಮನೆಯಲ್ಲಿ ಇಟ್ಟುಕೊಂಡರು ಅನ್ನುವ ಹಾಗೆ ಆಗಿತ್ತು. ಆಗ ಮಂಜ ಹಾಗಾದರೆ  ಇವತ್ತು ನಾನು ದುಡ್ಡು ಖರ್ಚು ಮಾಡಿದರೆ ನನ್ನ ಜೇಬು ವರ್ಷದಲ್ಲಿ ಏಳು ಬಾರಿ ಕತ್ತರಿ  ಎಂದ.  ನೀನು ಹೇಳುವ ಹಾಗೆ ಇದ್ದರೆ ಇವತ್ತು ಮದುವೆ ಅದವರು ಬೇಜಾನ್  ಜನ ಇದ್ದಾರೆ.  ಅವರಿಗೆ ವರ್ಷದಲ್ಲಿ ಏಳು ಬಾರಿ ಮತ್ತೆ ಮದುವೆ ಆಗುತ್ತಾ ಸುಮ್ಮನೇ ಏನೇನೋ ಹೇಳಬೇಡ ಎಂದು  ದಬಾಯಿಸಿದ. ಆಮೇಲೆ, ಗೊತ್ತಾ ನೀನು ಹೀಗೆ ಜಗಳಮಾಡಿಕೊಂಡು ಮುನಿಸಿಕೊಂಡು ಕುಳಿತಿದ್ದರೆ,  ವರ್ಷದಲ್ಲಿ ಇನ್ನೂ ಏಳು ಪಟ್ಟು ಜ್ಯಾಸ್ತಿ ಜಗಳ ಆಗುತ್ತೆ ಎಂದು ತನ್ನ ಅಪಾರ ಜ್ಞಾನ  ಪ್ರದರ್ಶಿಸಿದ. &lt;/p&gt; &lt;p&gt;ಅದು ಬೇರೆ ನಮ್ಮ ಎಂಗೇಜ್ಮೆಂಟ್ ಇವತ್ತೇ ಆಗಿತ್ತು ತಾನೇ...ಹಾಗೆ ನೋಡಿದರೆ ಅದೇ  ವರ್ಷದಲ್ಲಿ ನನಗೆ ಏಳು ಬಾರಿ ಆಗಬೇಕಿತ್ತು. ಇನ್ನುವರೆಗೆ ಮತ್ತೊಂದು ಕೂಡ ಆಗಿಲ್ಲ ಎಂದು  ನಗುತ್ತಾ ಹೇಳಿದ. ಅದಕ್ಕೆ ಸಪ್ತಪದಿ ತುಳಿದಿರಲ್ಲ ನನ್ನ ಜೊತೆ ಅಂದಳು ಸಾವಿತ್ರಿ.  ಅವರಿಬ್ಬರ ಜಗಳಕ್ಕೆ ಸಾಕ್ಷಿ ಎನ್ನುವಂತೆ ನಾನು ಕುಳಿತಿದ್ದೆ. ನಿನ್ನನ್ನು ಮದುವೆ  ಮಾಡಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಎಷ್ಟು ಗೊತ್ತಾ ಎಂದ. ನಾನು ನನ್ನ ಅಪ್ಪನಿಗೆ,  ನನ್ನ ಕೆಲಸ ಮಾಡುವ ಟೀಮ್ ನಲ್ಲಿ ಎಲ್ಲರ ಮದುವೆ ಆಗಿದೆ ಎಂದು ಹೇಳಿದೆ. ಹೌದಾ...  ಹಾಗಾದರೆ ನೀನು ನಿನ್ನ ಟೀಮ್ ಚೇಂಜ್ ಮಾಡಿ ಬಿಡು. ಅವರ ನಡುವೆ ಇದ್ದು ಕೆಟ್ಟು ಹೋಗಿ  ಬಿಡುತ್ತಿಯ, ನನ್ನ ನೋಡಿದ ಮೇಲೆ ನಿನಗೆ ಅರ್ಥ ಆಗಿರಬೇಕಲ್ಲ ಎಂದರು. ನಾನು ಬೆಪ್ಪನ ಹಾಗೆ  ಸುಮ್ಮನೇ ಇರದೆ, ನನ್ನ ಅಪ್ಪನ ಒಪ್ಪಿಸಿ, ನಿನ್ನ ಮದುವೆ ಆದೆ ಅಂದ. ಅಷ್ಟರಲ್ಲಿ  ನಗುತ್ತಾ, ತನ್ನ ಬ್ಯಾಗ್ ತೆಗೆದು  ಒಂದು ಹೊಸ ಸೀರೆ ಸಾವಿತ್ರಿಗೆ ಕೊಟ್ಟ. &lt;/p&gt; &lt;p&gt;ಅವರಿಬ್ಬರ ಮಾತುಗಳು ಜೋರು ಇದ್ದರೂ, ಮನಸು ಮಾತ್ರ ತಿಳಿ ನೀರು....&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-2756502413084903399?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/2756502413084903399/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post_24.html#comment-form' title='5 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/2756502413084903399'/><link rel='self' type='application/atom+xml' href='http://www.blogger.com/feeds/3457141075796460701/posts/default/2756502413084903399'/><link rel='alternate' type='text/html' href='http://haalusakkare.blogspot.com/2011/02/blog-post_24.html' title='ತರ್ಲೆ ಮಂಜನ ರಥಸಪ್ತಮಿ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-3457141075796460701.post-4214663842334049540</id><published>2011-02-10T22:04:00.000-08:00</published><updated>2011-02-10T22:37:42.427-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ತರಲೆ ಮಂಜನ ತತ್ವಜ್ಞಾನ ....</title><content type='html'>ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.&lt;br /&gt;&lt;br /&gt;ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.&lt;br /&gt;&lt;br /&gt;ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.&lt;br /&gt;&lt;br /&gt;ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.&lt;br /&gt;&lt;br /&gt;ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.&lt;br /&gt;&lt;br /&gt;ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.&lt;br /&gt;&lt;br /&gt;ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.&lt;br /&gt;&lt;br /&gt;-----------------&lt;br /&gt;ಮಂಜನ ಹನಿ&lt;br /&gt;&lt;br /&gt;ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.&lt;br /&gt;ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?&lt;br /&gt;ಮಂಜ - ಹೌದು ಸರ್...&lt;br /&gt;ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್‌ಟ್ರಾ ಕೊಡಿ.&lt;br /&gt;ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.&lt;br /&gt;ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.&lt;br /&gt;ಮಂಜ ಸುಸ್ತೋ ಸುಸ್ತು ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-4214663842334049540?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/4214663842334049540/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post_6855.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/4214663842334049540'/><link rel='self' type='application/atom+xml' href='http://www.blogger.com/feeds/3457141075796460701/posts/default/4214663842334049540'/><link rel='alternate' type='text/html' href='http://haalusakkare.blogspot.com/2011/02/blog-post_6855.html' title='ತರಲೆ ಮಂಜನ ತತ್ವಜ್ಞಾನ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-3199433904766654665</id><published>2011-02-10T21:46:00.000-08:00</published><updated>2011-02-10T22:00:30.865-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಗಂಡಾಂತರ....</title><content type='html'>&lt;p&gt;ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ ಎಂಬ ಮೂರ್ಖರ ಪೆಟ್ಟಿಗೆಯಲ್ಲಿ ಬರುವ ಧಾರಾವಾಹಿ ಎಂಬ ಗಂಡಾಂತರಗಳ ಬಗ್ಗೆ ಹೇಳಿದ್ದು. ಧಾರಾವಾಹಿ ಎನ್ನುವುದಕ್ಕೆ ಬಹುಶಃ ಕಣ್ಣೀರ 'ಧಾರಾ' ಆ'ವಾಹ'ಯಾಮಿ ಇರಬಹುದೇನೋ....ನೀವು ಕೇಳಬಹುದು ಇದು ಲಿಂಗ ಹೇಗೆ ಬದಲಿಸಿತು ಎಂದು, ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯ. ಸಾಕಷ್ಟು ನಿದರ್ಶನಗಳು ಕೂಡ ಇವೆ....ದಿನ ಪತ್ರಿಕೆ,ಟಿ ವಿ ಯಲ್ಲಿ ನೋಡಿರಲೂಬಹುದು....ಆದರೂ ಹೆಚ್ಚು ಹೆಣ್ಣು ಮಕ್ಕಳೇ ನೋಡುವುದರಿಂದ ಇದನ್ನು ಧಾರಾವಾಹಿ ಎಂದು, ಅವರ ಸಹಾನುಭೂತಿಗೆ ಹೆಸರು ಬಂದಿರಲಿಕ್ಕೆ ಕೂಡ ಸಾಧ್ಯ ಉಂಟು.&lt;/p&gt;&lt;p&gt;ಬಹುಶಃ ಗಂಡಸರನ್ನು ಕಣ್ಣೀರ ಧಾರೆ ಹರಿಸಲಿಕ್ಕೆ ಬರುವುದಿಲ್ಲ ಎಂದು ಕಾಣುತ್ತೆ ಈ ಧಾರಾವಾಹಿಗಳಿಗೆ, ಅದಕ್ಕೆ ಅದನ್ನು ಹೆಣ್ಣುಮಕ್ಕಳಿಗೆ ಬಿಟ್ಟಿದ್ದು ಇರಲೂಬಹುದು(ಗಂಡಸರ ಕಣ್ಣೀರ ಧಾರೆ ಹರಿಸಲಿಕ್ಕೆ). ಅಲ್ಲಿ ಬರುವ ಧಾರಾವಾಹಿಗಳಲ್ಲಿನ ಸೀರೆ , ಒಡವೆ ನೋಡಿ ಹೆಣ್ಣು ಮಕ್ಕಳು ತುಂಬಾ ಆಕರ್ಷಿತರಾಗಿರುತ್ತಾರೆ. ಆಮೇಲೆ ಅಂತರ ಪಿಶಾಚಿ ಆದ ಗಂಡ ಬಂದ ಮೇಲೆ ಶಿಫಾರಸ್ಸು ಹೋಗಿರುತ್ತೆ. ಸಿಗದೆ ಹೋದರೆ ಇದ್ದೇ ಇದೆ.. 'ಧಾರಾ'ಳವಾಗಿ ಕಣ್ಣೀರ 'ಧಾರಾ' ಹರಿಸಲು ಮತ್ತು ಹೇಗಾದರೂ ಮಾಡಿ ಅದನ್ನು ಪಡೆಯಲು. &lt;/p&gt;&lt;p&gt;ಒಂದು ದಿನ ಊಟಕ್ಕೆ ಕುಳಿತ ಸಮಯದಲ್ಲಿ ನನ್ನ ಮಡದಿ ಧಾರಾವಾಹಿ ನೋಡುತ್ತಾ, ರೀ ಸ್ವಲ್ಪ ಒಳಗಡೆ ಹೋಗಿ ಒಂದು ಸೌಟು ತೆಗೆದುಕೊಂಡು ಬನ್ನಿ ಎಂದಳು. ದಿನವೂ ಆಫೀಸ್ ಹೋಗುವ ಸಮಯದಲ್ಲಿ ನನ್ನ ಸೂಟ್ ನ್ನು ಇಡುವುದನ್ನು ಮರೆತರು ಪರ್ವಾಗಿಲ್ಲ ಕಣೇ, ಈ ಸೌಟು ಮಾತ್ರ ನನಗೆ ತರಲು ಹೇಳಬೇಡ ಅಂದೆ. ಅದಕ್ಕೆ ಒಂದು ಕಾರಣವೂ ಇದೆ. ಒಮ್ಮೆ ಸೌಟು ತರಲು ಹೇಳಿದ್ದಳು, ಅದು ಏತಕ್ಕೆ ಎಂದು ತಿಳಿಯದೇ ನಾನು ಜಾರಲಿ(ಝಾರಿ) ಸೌಟು ತಂದೆ. ಇದರಲ್ಲಿ ಸಾರು ಹೇಗೆ ಬಡಿಸಲಿ ಎಂದು ಉಗಿದಿದ್ದಳು. ಮತ್ತೊಮ್ಮೆ ಹೀಗೆ ಅನ್ನದ ಸೌಟು ಬದಲು ಸಾರಿನ ಸೌಟು ತಂದಾಗ ಕೂಡ. &lt;/p&gt;&lt;p&gt;ಹೀಗೆ ಒಮ್ಮೆ ಧಾರಾವಾಹಿ ನಡುವೆ ಮೊಬೈಲ್ ಜಾಹೀರಾತು ಬರುತಿತ್ತು. ಲೇ ನಾನು ಹೊಸ ವೈಫೈ ಇದ್ದ ಮೊಬೈಲ್ ತೆಗೆದುಕೊಳ್ಳಬೇಕು ಎಂದೆ. ಹಾ... ಏನಂದಿರಿ ಎಂದು ಗದರಿಸಿದಳು. ಏಕೆಂದರೆ ಸ್ವಲ್ಪ ಇಂಗ್ಲೀಶ್ ಅವಳಿಗೂ ಗೊತ್ತು. ಕೆಲವೊಂದು ಸಾರಿ ಸೇಡು ತೀರಿಸಿಕೊಳ್ಳಬೇಕಾದಾಗ ದೊಡ್ಡ ದೊಡ್ಡ ಇಂಗ್ಲೀಷ್ ಪದ ಉಪಯೋಗಿಸಿ ಬೈದಿರುತ್ತೇನೆ. ಆಗ ಅವಳಿಗೆ ಅರ್ಥ ಆಗಿರುವುದಿಲ್ಲ. ಆದರೆ ಈಗ ಸಿಕ್ಕಿ ಹಾಕಿಕೊಂಡಿದ್ದೆ. ನಾನು ವೈಫೈ ಬಗ್ಗೆ ಒಂದು ದೊಡ್ಡ ಪಾಠ ಮಾಡಬೇಕಾಗಿಬಂತು. ಅಷ್ಟರಲ್ಲಿ ಧಾರಾವಾಹಿ ಶುರು ಆಯಿತು, ಇಲ್ಲದೆ ಇದ್ದರೆ ಕಣ್ಣೀರ ಧಾರಾ ನನಗೆ ಬರುತಿತ್ತು.&lt;/p&gt;&lt;p&gt;ಅವಳ ಧಾರಾವಾಹಿ ಮುಗಿದ ಮೇಲೆ ನಾನು ಮ್ಯಾಚ್ ಸ್ಕೋರ್ ನೋಡಬೇಕು ಎಂದು ಕುಳಿತಿದ್ದೆ. ನೀವಿಬ್ಬರೂ ಹೋಗಿ ಮಲಗಿಕೊಳ್ಳಿ ಎಂದು ನನಗೆ ಮತ್ತು ಸುಪುತ್ರನಿಗೆ ಆಜ್ಞೆ ಮಾಡಿದಳು. ಸುಪುತ್ರ ಹೋಗಲು ಒಪ್ಪಲಿಲ್ಲ. ಶಾಲೆ ರಜೆ ಇದ್ದಾಗ ಬೇಗ ಏಳುತ್ತಿ. ಶಾಲೆ ಇದ್ದಾಗೆ ಲೇಟ್ ಆಗಿ ಏಳುತ್ತಿ. ನೀನು ನಿನ್ನ ಅಪ್ಪನ ಹಾಗೆ ಉಲ್ಟಾ. ನಾಳೆ ಶಾಲೆ ಇದೆ ಹೋಗು ಎಂದು ಬೈದಳು. ನಾವಿಬ್ಬರು ಬೆಡ್ ರೂಮಿಗೆ ಹೋಗುವಾಗ ಮಗ ಎಡವಿ ಬಿದ್ದ. ಬಿದ್ದು ಅಮ್ಮ ನೋಡು ಅಪ್ಪ ನನ್ನ ಕೈ ಹಿಡಿದುಕೊಂಡು ಹೋಗುವುದಿಲ್ಲ ಎಂದು ನನ್ನ ಮಡದಿಗೆ ಅರುಹಿದ. ನಿಮ್ಮ ಅಪ್ಪ ಇಷ್ಟು ವರ್ಷ ಆದರೂ ನಾಚಿಕೆ ಇಂದ ನನ್ನ ಕೈನೇ ಹಿಡಿಯಲ್ಲ ಇನ್ನೂ ನಿನ್ನ ಕೈ ಎಂದು ಕುಹಕವಾಡಿದಳು. ಮತ್ತೆ ಮಗನಿಗೆ ನಿನಗೆ ನೋಡಿಕೊಂಡು ಹೋಗಲು ಬರುವುದಿಲ್ಲ ಎಂದು ಮಗನಿಗೆ ಬೈದಳು. ಈಗ ಸುಪುತ್ರ ಅಪ್ಪ ನೋಡು ಅಮ್ಮ ಬೈಯುತ್ತಾಳೆ ಎಂದ. ನನಗೆ ಅಷ್ಟೇ ಸಾಕಾಗಿತ್ತು. ನನಗೆ ಬೈಯುತ್ತಾಳೆ, ಇನ್ನೂ ನೀನು ಎಲ್ಲಿಯ ಲೆಕ್ಕ ಎಂದು ಹೇಳಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡು ಮಂದಹಾಸ ಬೀರಿ ಹೋಗಿ ಮಲಗಿಕೊಂಡಿದ್ದೆ. &lt;/p&gt;&lt;p&gt;ಮತ್ತೆ ಒಂದು ದಿನ ಕ್ಯಾಬೇಜ ಹೆಚ್ಚುತ್ತಾ ಟಿ ವಿ ನೋಡುತ್ತಲಿದ್ದಳು. ಲೇ ನೋಡಿಕೊಂಡು ಹೆಚ್ಚು ಹುಳ ಇರುತ್ತವೆ ಎಂದೆ. ನನಗೇನೂ ಕಣ್ಣು ಕಾಣುವದಿಲ್ಲವಾ, ನಾನೇನು ಮುದುಕಿ ಎಂದು ಕೊಂಡಿರಾ, ತೆಗೆದುಕೊಳ್ಳಿ ನೀವೇ ಹೆಚ್ಚಿ ಕೊಡಿ ಎಂದು ನನಗೆ ಕೊಟ್ಟಳು.&lt;/p&gt;&lt;p&gt;ಮತ್ತೆ ಯಾವತ್ತಾದರೂ ಟಿ ವಿ ನೋಡಲು ಬಿಡದೆ ಇದ್ದರೆ ನನಗೆ ಗಂಡಾಂತರ ತಪ್ಪಿದ್ದಲ್ಲ. ಕಣ್ಣೀರ ಧಾರೆ ಶುರು....ಬೇಕಾದರೆ ಚುಮು ಚುಮು ಚಳಿಯಲ್ಲಿ ಕೂಡ ತಣ್ಣೀರ ಸ್ನಾನ ಮಾಡಬಹುದು. ಆದರೆ ಈ ಕಣ್ಣೀರ ಧಾರೆ ಸಹಿಸಲು ಅಸಾಧ್ಯ. ಮತ್ತೆ ಧಾರಾವಾಹಿ ನೋಡುವ ಸಮಯದಲ್ಲಿ ಕರೆಂಟ್ ಏನಾದರೂ ಹೋದರೆ ಕೆ ಪಿ ಟಿ ಸಿ ಎಲ್ (ಕೆ ಈ ಬಿ) ಅವರಿಗೆ ಗಂಡಾಂತರ ತಪ್ಪಿದ್ದಲ್ಲ. ಸಧ್ಯ ನಾನು ತಂದ ಟಿ ವಿ ಇನ್ನೂ ಸರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲದೇ ಹೋದರೆ ಎಂತಹ ಟಿ ವಿ ತಂದಿದ್ದೀರಾ ಎಂದು ತಿವಿದಾಳು ನನ್ನ ಬೀವಿ....&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3199433904766654665?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3199433904766654665/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post_10.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3199433904766654665'/><link rel='self' type='application/atom+xml' href='http://www.blogger.com/feeds/3457141075796460701/posts/default/3199433904766654665'/><link rel='alternate' type='text/html' href='http://haalusakkare.blogspot.com/2011/02/blog-post_10.html' title='ಗಂಡಾಂತರ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-2383994083995792668</id><published>2011-02-09T05:50:00.000-08:00</published><updated>2011-02-09T05:51:34.962-08:00</updated><category scheme='http://www.blogger.com/atom/ns#' term='ಅನುಭವ ಕಥನ'/><title type='text'>ಕನ್ನಡ ಸಾಹಿತ್ಯ ಸಮ್ಮೇಳನ ....</title><content type='html'>ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ ಬಿಸಿಲು. ಆದರೂ ಗಾಂಧಿಬಜಾರ್ ತಲುಪಿ ನನ್ನ ಗಾಡಿ ಒಂದು ಕಡೆ ನಿಲ್ಲಿಸಿ, ಒಳಗಡೆ ಹೋದೆ. ಹೋದೊಡನೆ ಪ್ರೊ ಕೃಷ್ಣೇಗೌಡರು ಹಾಸ್ಯದ ಹೊನಲನ್ನು ಹರಿಸುತ್ತಿದ್ದರು.&lt;p&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಕೆಲ ಹೊತ್ತು ಆದ ಮೇಲೆ ಪುಸ್ತಕ ಮಳಿಗೆಗೆ ಹೊರಟೆ, ತುಂಬಾ ಜನಜಂಗುಳಿ. ಜನರ ಪುಸ್ತಕ ಪ್ರೀತಿ ನೋಡಿ ತುಂಬಾ ಆನಂದವಾಯಿತು. ನನ್ನನ್ನು ಹಿಂದಿನವರೇ ದೂಡಿಕೊಂಡು ಹೋಗುತ್ತಿದ್ದರು, ಅಷ್ಟು ಜನ ಸೇರಿದ್ದರು. ಹಿಂದಿನಿಂದ ಒಬ್ಬ ಮನುಷ್ಯ ಹೊಟ್ಟೆ ಇಂದ ನನ್ನನ್ನು ನೂಕುತ್ತಾ ಹೊರಟಿದ್ದ. ಅವನು ನೂಕಿದ್ದು ನೋಡಿ ಕೋಪ ಬಂದರು, ಅವನ ಹೊಟ್ಟೆ ನೋಡಿ ನನಗೆ ಸಂತೋಷವಾಯಿತು, ಏಕೆಂದರೆ ನನ್ನ ಹೊಟ್ಟೆ, ಅವನ ಹೊಟ್ಟೆ ಮುಂದೆ ಏನು? ಅಲ್ಲ ಅಷ್ಟು ದೊಡ್ಡದಾಗಿತ್ತು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮೊದಲು ಸಪ್ನ ಬುಕ್ ಸ್ಟಾಲ್ ಹೊಕ್ಕು, ಅಲ್ಲಿ ಇರುವ ಶ್ರೀನಿವಾಸ ವೈಧ್ಯರ "ತಲೆಗೊಂದು ತರತರ" ಪುಸ್ತಕ ತೆಗೆದುಕೊಂಡೆ. ಅಲ್ಲಿರುವ ಸನ್ನಿವೇಶ ಕೂಡ ಹಾಗೆ ಇತ್ತು, ತಲೆಗೊಂದು ತರತರ ಮಾತನಾಡುತ್ತಾ ಇದ್ದರು. ಮತ್ತೆ ಇನ್ನೊಂದು ಶ್ರೀ ವೈಧ್ಯರ ಪುಸ್ತಕ ಕಾಣಿಸಿತು. "ರುಚಿಗೆ ಹುಳಿಯೊಗರು" ಅದನ್ನು ತೆಗೆದುಕೊಂಡೆ. ಆಮೇಲೆ ಮುಂದಿನ ಮಳಿಗೆಗೆ ಹೋದೆ, ಅಲ್ಲಿ ಕಾಣಿಸಿದ್ದು, "ಅಂಗಿ ಬರಹ" ಲೇಖಕರು ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಸ್ಯ ಧಾರಾವಾಹಿಗಳಾದ ಸಿಲ್ಲಿ-ಲಲ್ಲಿ ಮತ್ತು ಪಾ.ಪ. ಪಾಂಡು ಬರೆದಂತ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರದ್ದು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಲ್ಲಿಂದ ಮತ್ತೊಂದು ಮಳಿಗೆಯಲ್ಲಿ ಬೀChi ಅವರ ಒಂದು ಪುಸ್ತಕ ತೆಗೆದುಕೊಂಡೆ. ಅವರು ನನಗೆ ಮೂವತ್ತು ರೂಪಾಯಿ ಚಿಲ್ಲರೆ ಕೊಡಬೇಕಾಗಿತ್ತು. ಐದೈದು ರೂಪಾಯಿಗಳನ್ನು ಕೊಟ್ಟರು. ಕೈಯಲ್ಲಿ ಇದ್ದ ಬೀChi ಅವರ ಪುಸ್ತಕ ಪ್ರಭಾವವೋ ತಿಳಿಯದು , ಇಷ್ಟೊಂದು ದುಡ್ಡು ಕೊಟ್ಟರೆ, ನಾನು ಒಂದು ಬ್ಯಾಗ್ ತರುತ್ತಿದ್ದೆ ಎಂದೆ. ಪಕ್ಕದಲ್ಲಿದ್ದ ಹುಡುಗಿ ಕಿಸಕ್ಕನೆ (ಇಂಗ್ಲೀಶ್ ಅಲ್ಲ) ನಕ್ಕಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮತ್ತೆ ಮುಂದಿನ ಮಳಿಗೆಯಲ್ಲಿ ದೇವರ ಪುಸ್ತಕ ನೋಡಿ, ಭಕ್ತಿ ಪರವಶನಾಗಿ ಅಲ್ಲಿಗೆ ಕೈ ಮುಗಿಯುತ್ತಾ ಹೋದೆ. ನನ್ನ ಮುಂದೆ ಇರುವ ಮನುಷ್ಯ ಕೂಡ ನನಗೆ ಕೈ ಮುಗಿದ. ಆದರೆ ಅವನು ಯಾರೆಂದು? ನನಗೆ ತಿಳಿಯಲಿಲ್ಲ. ಏನೋ... ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಒಬ್ಬ ಮನುಷ್ಯ , ಮೈಯಲ್ಲಿ ದೇವರು ಬಂದವನ ಹಾಗೆ ಮಾಡುತ್ತಾ, ಬಂದು ನನ್ನ ನೂಕಿ ಒಂದು ಪುಸ್ತಕ ತೆಗೆದುಕೊಂಡ. ನಾನು ಮತ್ತೆ ಅವನಿಂದ ದೂರ ಸರಿದೆ. ಮತ್ತೆ ಒಬ್ಬ ಹೆಣ್ಣು ಮಗಳು ಕೂಡ ನನ್ನನ್ನು ಸರಿಸಿ, ಎಕ್ಸ್‌ಕ್ಯೂಸ್ ಮೀ ಎಂದು ಒಂದು ಪುಸ್ತಕ ಕೈಗೆತ್ತಿಕೊಂಡಳು. ನಾನು ದೂರದಿಂದ ದೇವರಿಗೆ ನಮಸ್ಕರಿಸಿ, ಮುಂದಿನ ಮಳಿಗೆಗೆ ಹೊರಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮುಂದಿನ ಮಳಿಗೆಯಲ್ಲಿ ಮತ್ತೊಂದು ವೈ ಎನ್ ಗುಂಡೂರಾವ್ ಅವರ ಪುಸ್ತಕ ತೆಗೆದುಕೊಂಡೆ. ಅವರಿಗೆ ಅದೇ ಮೂವತ್ತು ರೂಪಾಯಿಗಳನ್ನು ಕೊಟ್ಟಿದ್ದು ನೋಡಿ ಚಿಲ್ಲರೆ ಬಂದಿದ್ದು ನೋಡಿ ತುಂಬಾ ಖುಷಿಯಾಗಿ, ದೇವರು ಬಂದ ಹಾಗೆ ಬಂದಿರಿ ಎಂದರು. ದೇವರಿಗೆ ಮಹಾಪ್ರಸಾದವಾಗಿ ಏನಾದರೂ? ಹೆಚ್ಚು-ಕಡಿಮೆ ಮಾಡುವಿರೋ ಎಂದೆ. ಈಗಾಗಲೇ ಕಡಿಮೆ ಮಾಡಿ ಕೊಟ್ಟು ಆಗಿದೆ. ಬೇಕಾದರೆ ಹೆಚ್ಚು ಮಾಡುವೆ ಎಂದರು. ಸುಮ್ಮನೇ ಹೊರಟು ಬಂದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಒಬ್ಬ ನಿಮ್ಮ ಹೆಸರು ಹೇಳಿ, ಒಂದು ಉಂಗುರ ಕೊಡುತ್ತೇನೆ ಎಂದ. ನಿಮ್ಮ ಎಲ್ಲ ಕೆಲಸ ನೆರವೇರುತ್ತೆ ಎಂದ. ಕೆಲಸಗಳು ನೆರವೇರೋ ಸಮಯ ಮುಗಿದು ಹೋಗಿದೆ ಮಹಾರಾಯ ಎಂದು ಹೇಳಿದರು ಕೇಳಲಿಲ್ಲ. ಸರಿ, ನಿನ್ನ ಉಂಗುರ ಹಾಕಿಕೊಂಡರೆ ನನ್ನ ತಲೆಯಲ್ಲಿ ಕೂದಲು ಮತ್ತೆ ಹುಟ್ಟೂತ್ತೋ ಎಂದು ಕೇಳಿದೆ. ಪಾಪ ... ಜಾರುಬಂಡೆ ಹಾಗಿರುವ ತನ್ನ ತಲೆ ಕೆರೆದುಕೊಂಡ, ನನಗೆ ಅರ್ಥವಾಗಿ ಹೊರಗಡೆ ನಡೆದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಒಂದೇ ಬಿಲ್ಲನ್ನು ಇಟ್ಟುಕೊಂಡು ಉಳಿದ ಬಿಲ್ಲನ್ನು ಹೊರಗಡೆ ಹೋಗಿ ಚೆಲ್ಲಿಬಿಟ್ಟೆ. ಹೆಂಡತಿ ಕೇಳಿದರೆ ಎರಡು ಪುಸ್ತಕ ತೆಗೆದುಕೊಂಡರೆ ಉಳಿದ ನಾಲ್ಕು ಪುಸ್ತಕ ಉಚಿತ ಎಂದು ಹೇಳಲು. ಈ ಧೂಳಿನ ಮುಖದಲ್ಲಿ ಮನೆಗೆ ಹೋದರೆ, ಮಡದಿ ಕಂಡುಹಿಡಿಯುವುದು ಕಷ್ಟ ಎಂದು ಮುಖ ತೊಳೆದು,ಮುಂದಿನ ಬಾರಿ ಸಂಪದದ ಒಂದು ಮಳಿಗೆ ಕೂಡ ಇರಲೆಂದು ಆಶಿಸುತ್ತಾ ಮನೆ ದಾರಿ ಹಿಡಿದೆ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-2383994083995792668?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/2383994083995792668/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post_09.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/2383994083995792668'/><link rel='self' type='application/atom+xml' href='http://www.blogger.com/feeds/3457141075796460701/posts/default/2383994083995792668'/><link rel='alternate' type='text/html' href='http://haalusakkare.blogspot.com/2011/02/blog-post_09.html' title='ಕನ್ನಡ ಸಾಹಿತ್ಯ ಸಮ್ಮೇಳನ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-1019825191381757823</id><published>2011-02-05T22:53:00.000-08:00</published><updated>2011-02-05T22:54:30.769-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಹೆಚ್ಚು ಪೂರ್ವಕ್ಷರ....</title><content type='html'>ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಬಗ್ಗೆ ಒಮ್ಮೆ ಯೋಚಿಸುತ್ತಾ ಇದ್ದೆ. ಎಲ್ಲಾ ಪ್ರಸಿದ್ದ ವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಂಡು ಬಂತು. ಅದು ಏನೆಂದರೆ ಎಚ್ ಎಂಬ ಪೂರ್ವಕ್ಷರ {ಪೂರ್ವ(ಮೊದಲ) ಅಕ್ಷರ}. ಎಚ್ ಪೂರ್ವಕ್ಷರಗಳಲ್ಲಿ ನನ್ನ ಮೆಚ್ಚಿನ ಹಾಸ್ಯ ಲೇಖಕರಾದ ನಮ್ಮ ಶ್ರೀ ಎಚ್ ಡುಂಡಿರಾಜ್ ಕೂಡ. ಕೆಲವರು ಇದನ್ನು ಹೆಚ್ ಎಂದು ಕೂಡ ಬರೆಯುವುದುಂಟು. ಈ ಹೆಚ್(ಎಚ್) ಎನ್ನುವುದು ಕನ್ನಡೀಕರಿಸಿದರೆ ಹೆಚ್ಚು ಎಂದು ಆಗಬಹುದೇನೋ, ಅದಕ್ಕೆ ಅವರು ಅಷ್ಟು ಹೆಚ್ಚು ಹೆಚ್ಚು ನಮ್ಮನ್ನು ನಗಿಸುತ್ತಾ ಹಾಸ್ಯ ಲೇಖನಗಳನ್ನು ಬರೆದಿರೋದು. ಸಂಪದ ಸೃಷ್ಟಿಕರ್ತರಾದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ. ಮತ್ತೆ ನನ್ನ ಆಪ್ತರಾದ ದುಬೈ ಮಂಜಣ್ಣನ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ , ಹೊಳೆನರಸಿಪುರ ಮಂಜುನಾಥ ಎಂದು. ಮತ್ತೆ ನನ್ನ ಸಹೃದಯಿ ಮಿತ್ರ ಹರೀಶ್ ಅತ್ರೇಯ....ಹೀಗೆ ಹಲವಾರು...&lt;p&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಾನು ಏಕೆ? ಹೀಗೆ ಹೆಚ್ ಹಚ್ಚಿಕೊಳ್ಳಬಾರದು ಎಂಬ ಆಲೋಚನೆ ಮನದಲ್ಲಿ ಮೂಡಿತು. ಅದನ್ನು ಹಚ್ಚಿಕೊಳ್ಳೋಕೆ ಅದೇನು ಎಣ್ಣೆಯೆ?. ಅದನ್ನು ಹಚ್ಚಿಕೊಳ್ಳೋಕೆ ಪೂರ್ವಾಪರ ಬೇಕೇ ಬೇಕು. ಆದರೆ ಈ ಹೆಚ್ ಹಚ್ಚಿಕೊಂಡಲ್ಲಿ, ಮತ್ತೆ ಯಾರಾದರೂ ಕೇಳಿದರೆ ಹೆಚ್ ಏನು? ಎಂದು ಎಂಬ ವಿಷಯ ಕೂಡ ಮನದಲ್ಲಿ ತೇಲಾಡಿತು. ಹೆಚ್ ಎಂದರೆ ಹೆಸರು ಗೋಪಾಲ್ ಎಂದು ಹೇಳಿದರೆ ಹೇಗೆ ಎಂದು ಕೂಡ ಅನ್ನಿಸಿತು. ಇದನ್ನು ಕೇಳಿಯೇ ನನ್ನನ್ನು ಹುಚ್ಚನೆಂದು ಕೊಂಡುಬಿಟ್ಟಾರು ಎಂದು ಬಿಟ್ಟು ಬಿಟ್ಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮತ್ತೆ ಇದನ್ನು ನನ್ನ ಗೆಳೆಯ ಸುಬ್ಬನಿಗೆ ಕೇಳಿದೆ. ಸುಬ್ಬ ಸಿಕ್ಕಿದ್ದೇ ಚಾನ್ಸ್ ಎಂದು, ಹುಚ್ಚ ಎಂದು ಬಿಡಬೇಕೆ. ಸಧ್ಯ ಯಾರು ಕೇಳಿಸಿಕೊಳ್ಳಲಿಲ್ಲ. ಮತ್ತೆ ಯಾರಿಗೂ ಕೇಳಬಾರದು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ನಾನು ಹುಟ್ಟಿದ್ದು ಧಾರವಾಡ, ಅಲ್ಲಿ ಕೂಡ ಡಿ ಬರುತ್ತೆ, ಹರಿಹರ,ಹಾವೇರಿಯಲ್ಲಿ ಹುಟ್ಟಿದ್ದರೆ ಚೆನ್ನಾಗಿರುತಿತ್ತು ಎಂದು ಯೋಚಿಸಿದೆ. ಛೇ ಈಗ ಹುಟ್ಟಿ ಆಗಿದೆಯಲ್ಲಾ, ಎನ್ನೆನೂ ಮಾಡಲಾಗುವುದಿಲ್ಲ. ಮತ್ತೆ ಹುಟ್ಟಿದ್ದು ಹಾಸ್ಪಿಟಲ್ ನಲ್ಲಿ ಅಲ್ಲವಾ.. ಆದರೆ ಈ ಹೆಚ್ ಸೂಕ್ತವಲ್ಲ ಎಂದೆನಿಸಿ ಬಿಟ್ಟಿತು. ಮತ್ತೆ ಧಾರವಾಡದಲ್ಲಿ ಪ್ರಸಿದ್ದಿ ಇದ್ದಿದ್ದು ಎಂಬ ಯೋಚನೆಗೆ ನಗೆ ಬೀರಿ ಹುಚ್ಚರ ಆಸ್ಪತ್ರೆ ಎಂದು ಕೂಡ ಮನದಲ್ಲಿ ಬಂತು. ನನ್ನಷ್ಟಕ್ಕೆ ನಾನೇ ನಕ್ಕೂ ಮತ್ತೆ ಆಲೋಚನೆ ಶುರು ಮಾಡಿದೆ. ತಂದೆ ಹೆಸರು ಹಾಕಿಕೊಂಡರೆ ಎಂ ಮಾಧವ. ಹೆಚ್ಚು.. ಹೆಚ್ಚು.. ಯೋಚಿಸಿದಷ್ಟು ತಲೆ ಬಿಸಿಯಾಗತೊಡಗಿತು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಹೆಚ್ ಬಗ್ಗೆ ಯೋಚಿಸುತ್ತಾ "ಹಚ್ಚೇವು ಕನ್ನಡದ ದೀಪ" ಎಂಬ ಹಾಡು ಕೂಡ ನೆನಪು ಆಯಿತು. ಹೀಗೆ ಯೋಚಿಸುತ್ತಾ ಏನೇನೋ ಕೈ ಕಾಲು ಆಡಿಸುತ್ತಾ ಒಬ್ಬನೇ ಮಾತನಾಡುವುದು ಎಲ್ಲವನ್ನು ಮಾಡುತ್ತಾ ಇದ್ದೆ. ರಾತ್ರಿ ನಿದ್ದೆ ಕೂಡ ಬರಲಿಲ್ಲ. ಕಡೆಗೆ ನನ್ನ ವಿಚಿತ್ರ ವರ್ತನೆ ನೋಡಿ ಮಡದಿ ಕೇಳಿಯೇ ಬಿಟ್ಟಳು. ಏನು? ಯಾಕೆ ಹೀಗೆ ಆಗಿದ್ದೀರಿ ಎಂದು. ನಾನು ಪ್ರಸಿದ್ದ ವ್ಯಕ್ತಿ ಆಗಬೇಕೆಂದಿರುವೆ, ಏನಾದರೂ? ಮಾಡಿ ಎಂದು ಹೇಳಿದೆ. ಅದೆಲ್ಲ ದೇವರ ಇಚ್ಛೆ ನೀವೇಕೆ ಅಷ್ಟು ಯೋಚಿಸುತ್ತೀರಿ ಎಂದಳು. ಎಚ್ ಬಗ್ಗೆ ತುಂಬಾ ವಿವರವಾಗಿ ಹೇಳಿದೆ. ನನ್ನನ್ನು ಕುಹಕವಾಡಿ ನಗಲು ಆರಂಭಿಸಿದಳು. ಹೆಚ್ ಹಚ್ಚುವ ಕೆಲಸ ಆಮೇಲೆ ಮುಂದುವರಿಸಿ, ಮೊದಲು ಈ ತರಕಾರಿ ಹೆಚ್ಚಿ ಎಂದು ಹೇಳಿ ನಗುತ್ತಾ ಅಡುಗೆ ಮನೆಗೆ ಹೊರಟು ಹೋದಳು. ತರಕಾರಿ ಅಷ್ಟು ಹೆಚ್ಚಿ ಕೊಟ್ಟರು ಹೆಚ್ ಮಾತ್ರ ಹೊಳಿಲೆ ಇಲ್ಲ. ಮತ್ತೆ ಅಡುಗೆ ಮನೆಯಿಂದ ಬಂದು, ಬರಿ ಹೆಸರು ಬದಲು ಮಾಡಿದರೆ ಆಗುತ್ತಾ, ಮೊದಲು ನಿಮ್ಮನ್ನು ನೀವು ಬದಲಿಸಿ. ಒಳ್ಳೆಯ ಹವ್ಯಾಸ ಬೇಳಿಸಿಕೊಳ್ಳಿ. ದೇವರ ಮೇಲೆ ನಂಬಿಕೆ ಇರಲಿ, ತಾನಾಗಿಯೇ ಪ್ರಸಿದ್ಧಿಗೆ ಬರುತ್ತೀರಿ. ಅದು ಎಲ್ಲಾ ಬಿಟ್ಟು ಹೀಗೆ ಹೆಸರು ಬದಲಿಸುವ ವಿಚಾರಕ್ಕೆ ಏಕೆ? ಬರುತ್ತೀರಿ ಎಂದು ಹೇಳಿದಳು. ಅವಳು ಹೇಳಿದ ಮಾತಿಗೆ ನನ್ನ ಅಹಂ ಸ್ವೀಕರಿಸಲಿಲ್ಲ. ಕಡೆಗೆ ತಿಂಡಿ ತಿಂದು ಆಫೀಸ್ ಕಡೆಗೆ ಹೊರಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ದಾರಿಯುದ್ದಕ್ಕೂ ಹಳಿಯೇ ಇಲ್ಲದ ರೈಲಿನ ಹಾಗೆ ನನ್ನ ಮನಸ್ಸು ಎಲ್ಲೆಲೋ ಹೊರಳಾಡುತ್ತಾ ಹೊರಟಿತ್ತು. ಹರಿಯುವ ನೀರಿಗೆ ಕಡಿವಾಣ ಹಾಕಬಹುದು, ಆದರೆ ಈ ಮನಸ್ಸಿಗೆ ಮಾತ್ರ ಕಡಿವಾಣ ಹಾಕಲು ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಹರಿ-ಹರರನ್ನು ಕೂಡ ನೆನದಿದ್ದು ಆಯಿತು. ಮಗ ಹಾಡುತ್ತಿದ್ದ ಹಮ್ ಹೋಂಗೆ ಕಾಮಿಯಾಬ್ ಎಂಬ ತುಂಬಾ ಸುಂದರವಾದ ಹಾಡು ಕೂಡ ಮನದಲ್ಲಿ ಬಂತು. ಈ ಕಾಮಿಯಾಬಿ ಎಂಬುದು ಮಾತ್ರ ಹತ್ತಿರ ಸುಳಿಯಲಿಲ್ಲ. ಪೂರ್ವಾಪರ ಸಿಗದೆ ಒದ್ದಾಡಿ ಹಣಿ ಹಣಿ ಗಟ್ಟಿಸಿದೆ, ಒಂದು ಹನಿ ಕಣ್ಣೀರು ಕೂಡ, ನನ್ನ ಮಾತು ಕೇಳಲಿಲ್ಲ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆ ಮಾತ್ರ ನೆನಪಿಗೆ ಬಂತು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಇದನ್ನು ನನ್ನ ಆಪ್ತ ಗೆಳೆಯನಾದ ಮಂಜನಿಗೆ ಹೇಳಬೇಕು ಎಂದು ಅನ್ನಿಸಿತು. ಕೇಳಿಯೇ ಬಿಟ್ಟೆ. ಅವನು ಸಿಕ್ಕೆದ್ದೆ ಚಾನ್ಸ್ ಎಂದು ಹೆಚ್ಚು.. ಹೆಚ್ಚು.. ನನ್ನನ್ನು ಧಾರವಾಡದ ಭಾಷೆಯಿಂದ ಹೊಗಳಿ ಹಾಡಿದ. ಇನ್ನೂ ಎಲ್ಲರನ್ನೂ ಕೇಳಿ ಹುಚ್ಚನಾಗುವುದು ಸಾಕೆನಿಸಿತು. ನನ್ನ ಹೆಸರಿಗೆ ಏನು? ಆಗಿದೆ ಎಂದು ಯೋಚಿಸಿದೆ. ಸರಿಯಾಗಿಯೇ ಇದೆಯಲ್ಲ, ಇದೆಲ್ಲವನ್ನೂ ಬಿಟ್ಟು ನನ್ನ ಮಡದಿ ಹೇಳಿದ ಹಾಗೆ ನನ್ನ ಕೆಲಸ,ಕರ್ತವ್ಯಕ್ಕೆ ಮಹತ್ವ ಕೊಟ್ಟು, ಒಳ್ಳೆಯ ಹವ್ಯಾಸ ಬೆಳಿಸಿ ಕೊಳ್ಳಬೇಕು ಎಂದು. ಹಾಡು ಹಳೆಯದಾದರೇನು ಭಾವ ನವ ನವೀನಾ ಎನ್ನುವ ಹಾಗೆ, ನಾವು ಬದುಕಿದರೆ ಸಾಕಲ್ಲವೇ?....&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;(ಸ್ಪೂರ್ತಿ :-ಹಾಸ್ಯ ಲೇಖಕರಾದ ಶ್ರೀ ಡುಂಡಿರಾಜರ ಪೂರ್ವಕ್ಷರ ಪೂರ್ವಾಪರ ಎಂಬ ಲೇಖನ.)&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1019825191381757823?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1019825191381757823/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post_05.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1019825191381757823'/><link rel='self' type='application/atom+xml' href='http://www.blogger.com/feeds/3457141075796460701/posts/default/1019825191381757823'/><link rel='alternate' type='text/html' href='http://haalusakkare.blogspot.com/2011/02/blog-post_05.html' title='ಹೆಚ್ಚು ಪೂರ್ವಕ್ಷರ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-4695799215939609513</id><published>2011-02-03T05:53:00.000-08:00</published><updated>2011-02-03T05:54:41.660-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....</title><content type='html'>&lt;p&gt;ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳುವ ಗಂಡನ ಪ್ರತಾಪಗಳು ಮಡದಿಗೆ ಅರಿವಾಗಿರುತ್ತೆ. ಮಡದಿಗೆ ಮೊದಲು ಬಂದ ಮೇಲೆ ಗಂಡನನ್ನು ಅರಿಯುವ ಸಮಯದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಉತ್ತರಗಳನ್ನು ತಮ್ಮ, ತಮ್ಮ ಉತ್ತರ ಕುಮಾರರಿಂದ(ಗಂಡಂದಿರಿಂದ) ಪಡೆದಿರುತ್ತಾರೆ. ಹೀಗೆ ಮೆಚ್ಚಿಸುವ ಮತ್ತು ಹೋಗಳಿಕೆಯ ಕಾರ್ಯಕ್ರಮಕ್ಕೆ ನಾಂದಿ ಹಾಡಿ ಆಗಿರುತ್ತೆ. &lt;/p&gt; &lt;p&gt;ನಾನು ಮದುವೆ ಆದ ಹೊಸದರಲ್ಲಿ ಮಡದಿಯನ್ನು ಮೆಚ್ಚಿಸುವ ಸಂಪ್ರದಾಯಕ್ಕೆ ಬದ್ದನಾಗಿದ್ದೆ, ಅನ್ನುವುದಕ್ಕಿಂತ ಮೆಚ್ಚಿಸುವ ಭರದಲ್ಲಿ ಬುದ್ದನಾಗಿದ್ದೆ ಎಂದರೆ ಸೂಕ್ತ. ಮಡದಿ ಮೊದಮೊದಲು ಏನೇ ಕೆಲಸ ಹೇಳಿದರು ಪ್ರಾಮಾಣಿಕತೆ ಇಂದ ಮಾಡಿ ಮುಗಿಸುತ್ತಿದ್ದೆ. ಆದರೆ ಈಗ 'ಪ್ರಾಮಾಣಿಕ'ವಾಗಿ 'ಕತೆ' ಹೇಳಿ ಕೆಲಸದಿಂದ ಜಾರಿಕೊಳ್ಳುತ್ತೇನೆ. ಅದಕ್ಕೆ ಸಾಕ್ಷಿ ನಾನು ಬರೆದಿರುವ ಇಷ್ಟೊಂದು ಕತೆಗಳೇ...&lt;/p&gt; &lt;p&gt;ಒಮ್ಮೆ ಹೀಗೆ ಮದುವೆ ಆದ ಹೊಸದರಲ್ಲಿ ನಿನ್ನ ಕೈ ಉಪ್ಪಿಟ್ಟು ಸಕ್ಕತ್ ಆಗಿ ಇರುತ್ತೆ ಎಂದು ಹೇಳಿದ್ದೆ. ನಿಮಗೆ ಆಶ್ಚರ್ಯವಾಗಬಹುದು ಉಪ್ಪಿಟ್ಟು ಎಂದರೆ ಹರಿಹಾಯುವ ಸಕ್ಕತ್ ಜನರ ನಡುವೆ, ಇವನು ಯಾರಪ್ಪ? ಪರಲೋಕ ಪ್ರತಾಪಿ ಉಪಿಟ್ಟನ್ನು ಇಷ್ಟ ಪಡುವವನು ಎಂದು ಅಂದುಕೊಳ್ಳಬಹುದು. ಹೊಗಳಿಸಿಕೊಂಡ ಹೆಂಡತಿ ಏನೋ ಹಿರಿ ಹಿರಿ ಹಿಗ್ಗಿದಳು, ಆದರೆ ಅದರ ಫಲವನ್ನು ಈಗಲೂ ಅನುಭವಿಸುತ್ತಿದ್ದೇನೆ. ವಾರದಲ್ಲಿ ಮೂರು ದಿನ ಉಪ್ಪಿಟ್ಟು, ನನ್ನ ಉಪಸಂಹಾರಕ್ಕೆ.. ಕ್ಷಮಿಸಿ ಉಪಹಾರಕ್ಕೆ. ಮೊದಮೊದಲು ನನಗೆ ತಿಂಡಿ ಏನು? ಇವತ್ತು ಎಂದು ಕೇಳುತ್ತಿದ್ದ ನನ್ನ ಗೆಳೆಯರು ನನ್ನ ಕಪ್ಪಿಟ್ಟಿದ್ದ ಮುಖ ನೋಡಿಯೇ ತಿಳಿದುಕೊಂಡು ಬಿಡುತ್ತಾರೆ.&lt;/p&gt; &lt;p&gt;ಮತ್ತೊಮ್ಮೆ ಹೀಗೆ ನಾನು ಹೆಸರು ಹಿಟ್ಟಿನ ಉಂಡೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪುರಾಣ ಊದಿದೆ. ಮರುದಿನವೇ ನನ್ನನ್ನು ಮೆಚ್ಚಿಸಲು ಮಡದಿ ಮಾಡಿದಳು ಹೆಸರು ಹಿಟ್ಟಿನ ಉಂಡೆ, ಸಧ್ಯ ನಾನು ನನ್ನ ಹೆಸರು ಮರೆಯಲಿಲ್ಲ. ಏನೋ ಲೇಖನದಲ್ಲಿ ಬಂದಿದ್ದ ಒಂದೆರಡು ವಿಷಯ ಹೇಳಿ ನನ್ನ ಬುದ್ದಿವಂತಿಕೆ ಪ್ರದರ್ಶಿಸೋಣ ಎಂದು ಮಾಡಿಕೊಂಡಂತಹ ಅವಾಂತರ(ನನ್ನದೇ, ಕಾಶೀನಾಥನ ಸಿನಿಮಾ ಅಲ್ಲ). ಮುಂದೆ ಅಲ್ಲಿ.. ಇಲ್ಲಿ.. ಓದಿದ ವಿಷಯಗಳನ್ನ ನನ್ನ ಹೆಂಡತಿಯ ಮುಂದೆ ಊದಲಿಲ್ಲ. &lt;/p&gt; &lt;p&gt;ಒಮ್ಮೆ ಹೆಂಡತಿಯನ್ನು ಮೆಚ್ಚಿಸಲು ಎರಡು ಕೆ ಜಿ ಹಸಿ ಮೆಣಿಸಿನಕಾಯಿ ತಂದಿದ್ದೆ. ಏನು? ಹೆಂಡತಿಯನ್ನು ಮೆಚ್ಚಿಸಲು ಹಸಿಮೆಣಿಸಿನಕಾಯಿ ಎಂದು ಅನ್ನಬಹುದು. ಹಾ.. ಸ್ವಾಮಿ ... ಏಕೆಂದರೆ ನನಗೆ ಎರಡೆರಡು ದಿವಸಕ್ಕೆ, ನನ್ನ ಮಡಿದಿ ಒಂದು ರೂಪಾಯಿ ಹಸಿಮೆಣಿಸಿನಕಾಯಿ ತರಲು ಹೇಳುತ್ತಿದ್ದಳು. ಇದನ್ನು ನೋಡಿದ ನನ್ನ ಮಂಜ ಕೊಟ್ಟ ತರಲೆ ಐಡಿಯಾ. ಒಮ್ಮೆಲೇ ಎರಡು ಕೆ ಜಿ ತೆಗೆದುಕೊಡು ತುಂಬಾ ಖುಷಿಯಾಗುತ್ತಾಳೆ ಎಂದು ಹೇಳಿದ. ಹಾಗೆ ಮಾಡಿದೆ, ನಮ್ಮ ಮದುವೆಗೆ ಕೂಡ ಇಷ್ಟು ಮೆಣಸಿನಕಾಯಿ ತಂದಿರಲಿಲ್ಲ ಎಂದು ಹೇಳಿ ಉಗಿದಳು, ಇಷ್ಟು ತಂದರೆ ಒಣಗಿ ಹೋಗುತ್ತವೆ ಎಂದು, ಮರುದಿನ ಅವುಗಳನ್ನು ಉಪ್ಪು ಹಚ್ಚಿದ ಮೆಣಸಿನಕಾಯಿ ಮಾಡಲು ಮತ್ತಷ್ಟು ಸಾಮಾನು ತರಿಸಿ ನನಗೂ ಸಹಾಯ ಮಾಡಲು ಹೇಳಿದಳು .&lt;/p&gt; &lt;p&gt;ಒಮ್ಮೆ ಚಲನ ಚಿತ್ರದಲ್ಲಿ ಹೀರೊ ತನ್ನ ಮಡದಿಯನ್ನು ಮೆಚ್ಚಿಸುವ ಸಲುವಾಗಿ ಮೈಸೂರು ಪಾಕ ಮತ್ತು ಮಲ್ಲಿಗೆ ಹೂವು ತಂದು ಕೊಡುತ್ತಿದ್ದಿದ್ದನ್ನು ನೋಡಿ, ನಾನು ಹಾಗೆ "ನಾ ಮೆಚ್ಚಿದ ಹುಡುಗಿಗೆ ಕಾಣಿಕೆ ತಂದಿರುವೆ" ಎಂದು ಹಾಡುತ್ತಾ, ಮೈಸೂರು ರಾಕ್ ಕ್ಷಮಿಸಿ... ಪಾಕ ಮತ್ತು ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದೆ(ನನ್ನ ಮಡದಿಗೆ). ಅದಕ್ಕೆ ಧಾರವಾಡದಲ್ಲಿ ಇದ್ದು ಕೊಂಡು ಪೇಡಾ ಬಿಟ್ಟು ಈ ಕಲ್ಲಿನ ಹಾಗೆ ಇರುವ ಮೈಸೂರು ರಾಕ್ ತಂದಿದ್ದೀರ ಎಂದು ಉಗಿದಿದ್ದಳು. &lt;/p&gt; &lt;p&gt;ಹೊ'ಗಳಿಕೆ'ಯಲ್ಲಿ ಗಳಿಕೆ ಇದೆ ಎಂದು ಖ್ಯಾತ ಹಾಸ್ಯ ಬರಹಗಾರರಾದ ಶ್ರೀ ಡುಂಡಿರಾಜ ಹೇಳಿದ್ದಾರೆ. ಮತ್ತು ತೆ'ಗಳಿಕೆ'ಯಲ್ಲಿ ಕೂಡ ಎಂದು ಹೇಳಿದ್ದಾರೆ. ನನಗೆ ಮಾತ್ರ ಎರಡು ಸೇರಿ ಹೊತೆ ಗಳಿಕೆ ....&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-4695799215939609513?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/4695799215939609513/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post_03.html#comment-form' title='5 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/4695799215939609513'/><link rel='self' type='application/atom+xml' href='http://www.blogger.com/feeds/3457141075796460701/posts/default/4695799215939609513'/><link rel='alternate' type='text/html' href='http://haalusakkare.blogspot.com/2011/02/blog-post_03.html' title='ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-3457141075796460701.post-3344983523911670056</id><published>2011-02-01T06:43:00.000-08:00</published><updated>2011-02-02T06:01:22.788-08:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ಅವಸರವೇ ಅಪಘಾತ ....</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_sgKmwy5YbY0/TUlhNDvhjAI/AAAAAAAAAJk/oKTOPlmOPcM/s1600/IMG_1769.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_sgKmwy5YbY0/TUlhNDvhjAI/AAAAAAAAAJk/oKTOPlmOPcM/s320/IMG_1769.jpg" border="0" alt="" id="BLOGGER_PHOTO_ID_5569089291191159810" /&gt;&lt;/a&gt;                                             &lt;div&gt;                      &lt;span class="Apple-style-span" style="font-family: Tunga, sans-serif; font-size: 12px; line-height: 40px; word-spacing: 6px; "&gt;    ಗುರು ರಾಘವೆ೦ದ್ರ ವೈಭವದ ಬಾಲ ವೆ೦ಕಟನಾಥನೊ0ದಿಗೆ ನನ್ನ ಸುಪುತ್ರ&lt;/span&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_sgKmwy5YbY0/TUlfjuJdl3I/AAAAAAAAAJc/GVimUA5QDh4/s1600/IMG_1766.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/_sgKmwy5YbY0/TUlfjuJdl3I/AAAAAAAAAJc/GVimUA5QDh4/s320/IMG_1766.jpg" border="0" alt="" id="BLOGGER_PHOTO_ID_5569087481508108146" /&gt;&lt;/a&gt;&lt;/div&gt;&lt;div&gt;&lt;span class="Apple-style-span" style="font-family: Tunga, sans-serif; font-size: 12px; line-height: 33px; word-spacing: 5px; "&gt;             ಪ್ರಶಸ್ತಿ ಸ್ವೀಕರಿಸುತ್ತಿರುವ ನನ್ನ ಸುಪುತ್ರ ಮಡದಿಯೊ೦ದಿಗೆ&lt;/span&gt;&lt;br /&gt;----------------------------------------------------------------------------------&lt;/div&gt;&lt;div&gt;ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದ ಮನೆಯಲ್ಲಿ ಇರುತ್ತಾ ಇಲ್ಲೇ ಯಲ್ಲೋ ಬಿದ್ದಿರಬೇಕು ನೋಡಿ ಎಂದಳು. ರಾತ್ರಿ ಪೂರ್ತಿ ನಿಶಾಚರನ ಹಾಗೆ ಕುಳಿತು ಕಂಪ್ಯೂಟರ್ ಕುಟ್ಟೊದು, ಈಗ ನಮ್ಮನ್ನು ಬೈಯೋದು ಎಂದು. ಅದು ಏನೋ? ಬರೀತಾರೆ ಎಂದು ಕೊಂಡರೆ, ನನ್ನ ಬಗ್ಗೆ ಹೀಯಾಳಿಸೋದು, ಇಲ್ಲ ತಮ್ಮ ಹೊಟ್ಟೆ ಮತ್ತು ತಲೆ ವರ್ಣಿಸೋದು ಬಿಟ್ಟು ಬೇರೆ ಏನು ಬರೆದಿದ್ದೀರ ಎಂದು ಬೈದಳು. ಕಡೆಗೆ ನಾನೇ ಹುಡುಕಿ ಬನಿಯನ್ ಹಾಕಿಕೊಂಡೆ.&lt;p&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮಗನಿಗೆ ಬೈಯುತ್ತಾ, ಲೇ ಜೋರಾಗಿ ಹೇಳೋ ಸ್ತೋತ್ರಗಳನ್ನ, ನಾಳೆ ಸ್ಪರ್ಧೆ ಇದೆ ಎಂದು ಹೇಳುತ್ತ ಇದ್ದಳು. ನಾನು ಅವನಿಗೆ ಏನು? ಹೇಳಿಕೊಡುತ್ತಿದ್ದಾಳೆ ಬೈಯುವುದನ್ನೋ ಅಥವಾ ಸ್ತೋತ್ರಗಳನ್ನೋ ಎಂದು ಅಚ್ಚರಿ ಆದರೂ ಕೇಳಲಿಲ್ಲ. ಮತ್ತೆ ಮಗನ ಜೊತೆಯಲ್ಲಿ ಆಟವಾಡುತ್ತಾ ಇದ್ದೆ. ಅದಕ್ಕೆ ಇಷ್ಟು ವಯಸ್ಸಾದರೂ ಚಿಕ್ಕ ಮಕ್ಕಳ ಹಾಗೆ ಮಾಡುತ್ತೀರಿ ತಿಳಿಯೋದಿಲ್ಲವೇ ಎಂದಳು. ಲೇ ಮಕ್ಕಳ ಜೊತೆ ನಾವು ಮಕ್ಕಳ ಹಾಗೆ ಇರಬೇಕು ಗೊತ್ತಾ. ಇಲ್ಲ ಅಂದರೆ ಅವರು ನಾವು ಬೇರೆ ಮತ್ತು ತಾವು ಬೇರೆ ಎಂದು ಅಂದುಕೊಂಡುಬಿಡುತ್ತಾರೆ. ಮಕ್ಕಳ ಮನಸ್ಸು ಆಗ ಮಾತ್ರ ಅರ್ಥವಾಗುವದು, ದೊಡ್ಡತನ ದೇಹಕ್ಕೆ ಮಾತ್ರ ಬರಬೇಕೆ ಹೊರತು ಮನಸಿಗಲ್ಲ ಎಂದು ಹೇಳಿದೆ. ಆಯಿತು ಇಷ್ಟೊತ್ತು ಲೇಟ್ ಆಗಿದೆ ಎಂದು ನನ್ನ ಜೊತೆ ಜಗಳ ಮಾಡಿದಿರಿ ಸುಮ್ಮನೇ ಹೊರಡಿ ಇನ್ನು ಸಾಕು ಎಂದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಹೋಗುವ ಸಮಯದಲ್ಲಿ ಸಂಜೆ ಸ್ವಲ್ಪ ದುಡ್ಡು ತೆಗೆದುಕೊಂಡು ಬನ್ನಿ, ದಿನಸಿ ತರಬೇಕು ಎಂದು ಹೇಳಿದಳು. ನಾನು ಲಗುಬಗೆಯಿಂದ ನನ್ನ ಡೆಬಿಟ್ ಕಾರ್ಡ್ ಇಟ್ಟುಕೊಂಡು ಆಫೀಸ್ ಹೊರಟೆ. ಅಷ್ಟರಲ್ಲಿ ಎದುರಿಗೆ ನಮ್ಮ ಹಳೆಯ ಆಫೀಸ್ ನಲ್ಲಿ ಕೆಲಸ ಮಾಡುವ ಗೆಳೆಯ ಶ್ರೀನಿವಾಸ್ ಭೇಟಿ ಆದ. ನಾವಿಬ್ಬರು ಒಂದು ಡಿಪಾರ್ಟ್‌ಮೆಂಟ್ EDP ಎಂದರೆ Electronic Data Processing ಎಂದು ತಪ್ಪಾಗಿ ತಿಳಿಯಬೇಡಿ ಮತ್ತೆ Eat Drink Play , ನಾವು ಆ ಆಫೀಸ್ ನಲ್ಲಿ ಅದನ್ನೇ ಮಾಡುತ್ತಿದ್ದೆವು, ಏಕೆಂದರೆ ಎಲ್ಲಾ ಡಿಪಾರ್ಟ್‌ಮೆಂಟ್ ಗಳು ಕಂಪ್ಯೂಟರೈಸ್ ಆಗಿತ್ತು. ನಮಗೆ ತಿಂಗಳಲ್ಲಿ ಒಮ್ಮೆ ಅಥವಾ ಎರಡು ದಿನ ಮಾತ್ರ ಕೆಲಸ ಇರುತಿತ್ತು. ಹೀಗಾಗಿ ನಮ್ಮ ಡಿಪಾರ್ಟ್‌ಮೆಂಟನ್ನು ಭೋಜನಕ್ಕೆ ಕರೆಯದೇ ಮರು ನಾಮಕರಣ ಮಾಡಿದ್ದರು. ಎಲ್ಲಾ ಕ್ಷೇಮ ಸಮಾಚಾರ ಆದ ಮೇಲೆ ಕಾಫೀ ಕುಡಿದು, ಆಫೀಸ್ ಹೊದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಸಧ್ಯ ಹೋದ ಕೂಡಲೇ ನೆನಪಿಗೆ ಬಂತು ಬಾಸ್ ರಜೆ ಎಂದು. ಬೈಗಳು ತಪ್ಪಿದವು ಎಂದು ನಿಟ್ಟುಸಿರು ಬಿಟ್ಟೆ. ನಾನು ಸುಮ್ಮನೇ ಮುಂಜಾನೆ ಹಾರಡಿದೆ ಎಂದು ಅನ್ನಿಸಿತು. ಬುದ್ದಿ ಅವಸರದಲ್ಲಿ ಏನೆಲ್ಲಾ ಮರೆಯುತ್ತೆ. ಮತ್ತೆ ಮಡದಿಗೆ ಕರೆ ಮಾಡಿ ತಿಂಡಿ ಬಗ್ಗೆ ಎಲ್ಲಾ ವಿಚಾರಿಸಿ, ಕೆಲಸ ಶುರು ಮಾಡಬೇಕು ಅನ್ನುವ ಸಮಯಕ್ಕೆ ಗೆಳೆಯ ನರೇಂದ್ರ ತಿಂಡಿಗೆ ಕರೆದ. ಮತ್ತೆ ತಿಂಡಿ ತಿಂದು ಬಂದು ಕೆಲಸ ಶುರು ಮಾಡಿದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅವಸರದಲ್ಲಿ ಸಂಜೆ ಬರುತ್ತ ದುಡ್ಡು ತೆಗೆಯೋಕೆ ಮರೆತುಬಿಟ್ಟೆ, ಮನೆ ಸಮೀಪ ಬಂದವನು ಮತ್ತೆ ಗಾಡಿ ವಾಪಸ್ ಎ ಟಿ ಎಂ ಕಡೆಗೆ ತಿರುಗಿಸಿಕೊಂಡು ಹೋದೆ. ಹೋದವನೆ ಅವಸರದಲ್ಲಿ ಕಾರ್ಡ್ ಹಾಕಿದೆ. ಕಾರ್ಡ್ ಒಳಗಡೆ ಹೋಯಿತು. ಆದರೆ ಇನ್ವಾಲಿಡ್ ಕಾರ್ಡ್ ಎಂದು ತೋರಿಸುತಿತ್ತು. ಮತ್ತೊಮ್ಮೆ ಹಾಕಿ ಪ್ರಯತ್ನಿಸಿದೆ. ಮತ್ತೆ ಅದೇ ಸಂದೇಶ. ಈಗ ಹಾಗೆ ದುಡ್ಡು ತೆಗೆದುಕೊಳ್ಳದೇ ಹೋದರೆ, ಮಡದಿ ನನ್ನ ಕಥೆನೇ ಮುಗಿಸುತ್ತಾಳೆ ಎಂದು. ಹೊರಗಡೆ ಬಂದು ಅವಳಿಗೆ ಕರೆ ಮಾಡಿ ಎಷ್ಟು ಬೇಕು ದುಡ್ಡು ಎಂದು ಫೋನ್ ಮಾಡಿದೆ. ಅವಳು 1000 ಎಂದು ಹೇಳಿದಳು. ನಾನು ಕೆಲ ನಿಮಿಷದ ನಂತರ ಮತ್ತೆ ಕರೆ ಮಾಡಿ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ. ಆಯಿತು, ಸುಮ್ಮನೇ ಬನ್ನಿ ಎಂದಳು. ಕಡೆಗೆ ಹಾಗೆ ಮನೆಗೆ ಹೋದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮನೆಗೆ ಹೋದೊಡನೆ ನನ್ನ ಕಾರ್ಡ್ ತೆಗೆದುಕೊಂಡು ಹೋಗಿ ದುಡ್ಡು ತೆಗೆಸಿಕೊಂಡು ಬನ್ನಿ ಎಂದಳು. ಕಾರ್ಡ್ ತೆಗೆದುಕೊಳ್ಳಲು ಹೋದೆ. ನನಗೆ ಆಶ್ಚರ್ಯ ನನ್ನ ಕಾರ್ಡ್ ಅಲ್ಲೇ ಇತ್ತು. ಮತ್ತೆ ನಾನು ಯಾವ ಕಾರ್ಡ್ ತೆಗೆದುಕೊಂಡು ಹೋದೆ ಎಂದು ಪರ್ಸ್ ತೆಗೆದು ನೋಡುತ್ತೇನೆ. ಪರ್ಸ್ ನಲ್ಲಿ ಇದ್ದಿದ್ದು ಪಾನ್ ಕಾರ್ಡ್, ಅದನ್ನೇ ಹಾಕಿ ಎರಡು ಬಾರಿ ನೋಡಿದ್ದೆ. ಜೋರಾಗಿ ನಗು ಬಂತು ನಕ್ಕರೆ ನನ್ನದೇ ಮರ್ಯಾದೆ ಹೋಗುತ್ತೆ ಎಂದು ಸುಮ್ಮನಾದೆ. ಕಡೆಗೆ ಅವಳ ಕಾರ್ಡ್ ಜೊತೆ ನನ್ನ ಕಾರ್ಡ್ ತೆಗೆದುಕೊಂಡು ಹೋದೆ. ದುಡ್ಡು ತೆಗೆಸಿಕೊಂಡು ಬಂದು, ಆ ಎ ಟಿ ಎಂ ಸರಿ ಇಲ್ಲ ಕಣೇ ಎಂದು ನಗುತ್ತಾ ಹೇಳಿ, ನನ್ನ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ಹೇಳಿ ದುಡ್ಡು ಕೊಟ್ಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮರುದಿನ ನನ್ನ ಮಗನಿಗೆ ಸ್ತೋತ್ರ ಪಠಣ ಮತ್ತು ಸ್ವತಂತ್ರ ಹೋರಾಟಗಾರರ ವೇಷ ಭೂಷಣ ಸ್ಫರ್ಧೆಯಲ್ಲಿ ಬಹುಮಾನ ದೊರೆತಿತ್ತು. ನನ್ನ ಮಡದಿಗೆ ಭೇಷ್ ಹೇಳಿದೆ. ನೀವು ಸ್ವಲ್ಪ ಸುಧಾರಿಸಿ ನಿಮ್ಮ ಮಗನ ಹಾಗೆ ಬೇಗನೆ ಏಳುವುದು, ಸ್ತೋತ್ರ, ಮಂತ್ರ ಪಠಣ ಮಾಡಿ, ನಿಮ್ಮ ಅವಸರ ನನಗೆ ತಡೆಯೋಕೆ ಆಗಲ್ಲ, ನಮಗೂ ಹಿಂಸೆ ಕೊಡುತ್ತೀರಿ ಎಂದಳು. ನನಗು ಹಾಗೆ ಅನ್ನಿಸಿತು ಅವಸರವೇ ಅಪಘಾತ ಎಂದು.&lt;/p&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3344983523911670056?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3344983523911670056/comments/default' title='Post Comments'/><link rel='replies' type='text/html' href='http://haalusakkare.blogspot.com/2011/02/blog-post.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3344983523911670056'/><link rel='self' type='application/atom+xml' href='http://www.blogger.com/feeds/3457141075796460701/posts/default/3344983523911670056'/><link rel='alternate' type='text/html' href='http://haalusakkare.blogspot.com/2011/02/blog-post.html' title='ಅವಸರವೇ ಅಪಘಾತ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_sgKmwy5YbY0/TUlhNDvhjAI/AAAAAAAAAJk/oKTOPlmOPcM/s72-c/IMG_1769.jpg' height='72' width='72'/><thr:total>4</thr:total></entry><entry><id>tag:blogger.com,1999:blog-3457141075796460701.post-3966893233947203153</id><published>2011-01-27T05:24:00.000-08:00</published><updated>2011-01-27T05:25:49.719-08:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ಒಲವೆ ಜೀವನ ಸಾಕ್ಷಾತ್ ಖಾರ ....</title><content type='html'>ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ ದಾಡಿ ಮಾಡಿಕೊಳ್ಳುವುದಕ್ಕೆ. ರಕ್ತವಿಲ್ಲದೇ ನನ್ನ ಮುಖ ಕೂದಲುಗಳನ್ನು ಬಲಿ ಕೊಡುವುದು ನನಗೆ ಅಸಾಧ್ಯದ ಸಂಗತಿ. ಒಂದು ಸಲ ಹೀಗೆ ರಕ್ತ ನೋಡಿ ನನ್ನ ಮಡದಿ, ಇಷ್ಟು ರಕ್ತದಿಂದ ನಾಲ್ಕು ಜನ ರಕ್ತದ ಅವಶ್ಯಕತೆ ಇರುವವರನ್ನು ಬದುಕಿಸಬಹುದಿತ್ತು ಎಂದಿದ್ದಳು. ಸಕಾಲದಲ್ಲಿ ಮಳೆ ಬರದೇ ಎಷ್ಟೋ ಸಸ್ಯ, ಜೀವ ಜಂತುಗಳು ಬಳಲಿ ಬಲಿಯಾಗುತ್ತವೆ, ಆದರೆ ಈ ದಾಡಿ, ಮೀಸೆಗಳಿಗೆ ಅದರ ಪರಿವೆ ಇಲ್ಲದೇ ಸೊಂಪಾಗಿ ಬೆಳೆಯುತ್ತವೆ. ಒಣಗಿರುವ ಪೈರು ಸಹಿತ ಮತ್ತೆ ಚಿಗುರೊಡೆಯುವದು ನಮ್ಮ ಮುಖದಲ್ಲಿ ಮಾತ್ರ. ಅದರಲ್ಲೂ ಅರ್ಧ ಒಣಗಿರುವ(ಬಿಳಿ) ಮತ್ತು ಅರ್ಧ ಕರಿ ಇದ್ದರೆ ಅದರ ಕಷ್ಟ ಹೇಳಲು ಅಸಾಧ್ಯ. ನನ್ನ ಮುಖದಲ್ಲಿ ಕೂಡ ಇದೆ ತೆರನಾದ ಸಮಸ್ಯೆ ಮೀಸೆಗಳನ್ನು ಕತ್ತರಿಸಿ ಕೊಳ್ಳುವುದು. ಏಕೆಂದರೆ ಅರ್ಧ ಬಿಳಿ ಮತ್ತು ಅರ್ಧ ಕರಿ. ಬಿಳಿ ಮೀಸಿಗಳನ್ನು ತೆಗೆಯುವ ಸಮಯದಲ್ಲಿ ಕರಿ ಮೀಸೆಗಳನ್ನು ಅನ್ಯಾಯವಾಗಿ ಬಲಿ ತೆಗೆದುಕೊಂಡಿರುತ್ತೇನೆ. ಬಿಳಿ ಮೀಸೆ ಹುಡುಕಿ ತೆಗೆಯುವುದೇ ಒಂದು ದೊಡ್ಡ ಸಾಹಸ, ಅದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತೆ.&lt;p&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಜಿರಳೆಗಳಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಅದು ತನ್ನ ಹೆಣ್ಣು ಜಿರಳೆಗಳನ್ನು ಆಕರ್ಷಿಸಲು ತನ್ನ ಮೀಸೆಯನ್ನು ಬಳಸುತ್ತೆ. ಮತ್ತು ಆಹಾರ ಹುಡುಕಲು ಕೂಡ ಅದು ನೇರವಾಗುತ್ತೆ. ನಾನು ಕೂಡ ಅದರ ಹಾಗೆನೆ, ಎರಡನೆ ಸಂಗತಿ ಬಿಟ್ಟು, ನನ್ನ ಮಡದಿಯನ್ನು ಆಕರ್ಷಿಸಲು ಉಪಯೋಗಿಸುತ್ತೇನೆ, ಅನ್ನುವದಕ್ಕಿಂತ ನಾನು ನಿನಗಿಂತ ಸ್ವಲ್ಪನಾದರೂ ಮೇಲೂ ಎಂದು ತೋರಿಸುವುದಕ್ಕೆ ಎಂದು ಹೇಳಬಹುದು. ಅದು ಬರಿ ತೋರಿಕೆಗೆ ಮಾತ್ರ ....&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅವಳ ಸಮರಕ್ಕೂ ಕಾರಣವಿದೆ. ಮೊನ್ನೆ ಇವತ್ತಿನಿಂದ ಒಂದು ತಿಂಗಳಿಗೆ ಏನು? ವಿಶೇಷ ಇದೆ ಹೇಳಿ ಎಂದಳು. ನನಗೆ ಏನೆಂದು ಹೊಳಿಲೆ ಇಲ್ಲ. ಹೀಗೆ, ಅನಿರೀಕ್ಷಿತವಾಗಿ ಪರೀಕ್ಷೆಗೆ ಒಡ್ಡುವ ನನ್ನ ಮಡದಿ ನನ್ನನ್ನು ಪೇಚಿಗೆ ಸಿಕ್ಕಿಸಿರುತ್ತಾಳೆ. ಆಮೇಲೆ ಹೇಳದೇ ಇದ್ದರೆ ಮುನಿಸಿಕೊಂಡು ಬಿಡುತ್ತಾಳೆ. ಕಡೆಗೆ ಟಿ ವಿ ಯಲ್ಲಿ ಬರುವ ಜಾಹೀರಾತು ನೋಡಿ, ಒಂದು ತಿಂಗಳಿಗೆ ಕ್ರಿಕೆಟ್ ವರ್ಲ್ಡ್ ಕಪ್ ಇದೆ ಎಂದೆ. ಇದೊಂದು ಗೊತ್ತು ನಿಮಗೆ ಎಂದು ಕೋಪ ಮಾಡಿಕೊಂಡು ಹೋದಳು. ತುಂಬಾ ಪ್ರಯತ್ನ ಪಟ್ಟರು ಕೋಪ ಇಳಿಯಲೇ ಇಲ್ಲ. ಮತ್ತೆ ಊಟಕ್ಕೆ ಕುಳಿತ ಸಮಯದಲ್ಲಿ ಸಿಕ್ಕಾಪಟ್ಟೆ ತಿಂದು, ಅವಳನ್ನು ನಗಿಸಲು, ಈಗ ಹಸಿವೆ ಆಯಿತು ನೋಡು ಎಂದೆ. ದೇವರ ಗುಡಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಅವಳ ಬಾಯಲ್ಲಿ ಇರುವ ನೀರೆಲ್ಲಾ ಎದುರಿಗೆ ಕುಳಿತ ನನ್ನ ಮೇಲೆ. ಆದರೆ ಕೋಪ ಮಾತ್ರ ಇಳೀಲೆ ಇಲ್ಲ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಒಮ್ಮೆ ಅಮ್ಮ ಕರೆಯುತ್ತಾ ಇದ್ದಾಳೆ ಎಂದು ಮಗ ಹೇಳಿದ. ನಾನು ಒಳಗೆ ಹೋಗಿ ಕೇಳಿದೆ. ಅವಳು ಪೂರಿ ಹಾಗೆ ಮುಖ ಉಬ್ಬಿಸಿ, ಪೂರೀನೆ ಕರೆಯುತ್ತಾ ಇದ್ದಳು. ಉತ್ತರ ಮಾತ್ರ ಬರಲಿಲ್ಲ. ಮತ್ತೆ ಕೆಲ ಸಮಯದ ನಂತರ ಮಗ ಬಂದು ನಾನು, ನೀನು 'ಬು' ಹೋಗೋಣ. ಅಮ್ಮ ಬೇಡ ಅಂದ. ಅದಕ್ಕೆ ನಾನು ಪಾಪ ಅಮ್ಮನು ಬರಲಿ ಬಿಡು ಎಂದೆ. ನಿಮ್ಮ ಪಾಪ ಮತ್ತು ಸೀಮೆಎಣ್ಣೆ ಮಾಪ ಎರಡು ನಿಮ್ಮ ಬಳೀನೆ ಇಟ್ಟುಕೊಳ್ಳಿ ಎಂದು ಹೇಳಿದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಸಂಜೆ ಟಿ ವಿ ಯಲ್ಲಿ ಬರುವ ಲಗೇ ರಹೊ ಮುನ್ನ ಭಾಯಿ ಚಲನ ಚಿತ್ರ ನೋಡುತ್ತಾ ಇದ್ದೇ. ಪ್ರತಿ ಬಾರಿ ಇದೆ ಸಿನೆಮಾ ನೋಡುತ್ತೀರಿ ಬೇರೆ ಹಚ್ಚಿ ಎಂದಳು. ಲೇ ಇದು ತುಂಬಾ ಸೈಂಟಿಫಿಕ್ ಮೂವೀ ಕಣೆ ಅದರಲ್ಲಿರುವ ನೀತಿ ಪಾಠ ನೋಡಿ ಕಾಲಿಬೇಕು ಎಂದೆ. ಅದೆಲ್ಲ ಗೊತ್ತಿಲ್ಲ ಅದು ಸಿನಿಮಾ ಅಷ್ಟೇ. ನೀವು ಹೇಳೋ ಹಾಗೆ ಆಗಿದ್ದರೆ ಅಡ್ವರ್ಟೈಸ್ಮೆಂಟ್ ನಲ್ಲಿ ಕ್ರೀಮ್ ,ಪೌಡರ್ ಹಚ್ಛ್ಕೊಂಡರೆ ನೌಕರಿ ಸಿಗುವುದು ಎಲ್ಲಾ ಆಗುತ್ತೆ ಅದೆಲ್ಲ ಖರೆ ಆಗುತ್ತಾ, ಸುಮ್ಮನೇ ಚೇಂಜ್ ಮಾಡಿ ಎಂದು ರಿಮೋಟ್ ಕಸಿದುಕೊಂಡು ಚೇಂಜ್ ಮಾಡಿದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮಗನಿಗೆ ಅಭ್ಯಾಸ ಮಾಡಿಸುವಾಗ ಪೆನ್ಸಿಲ್ ನೋಡಿ ಇದು ನಿಮ್ಮ ಅಪ್ಪನ ಹಾಗೆ ಮಂಡ ಇದೆ ನೋಡು ಎಂದು ಹೇಳಿ ನಗುತ್ತಲಿದ್ದಳು. ಮತ್ತೆ ತರಕಾರಿ ಹೆಚ್ಚುವಾಗ ಕೂಡ... ಇಳಿಗೆಗೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ರಾತ್ರಿ ಊಟವಾದ ಮಲಗುವ ಸಮಯದಲ್ಲಿ ನಾನು ರೇಡಿಯೋ ಕೇಳುತ್ತಾ ನಿದ್ದೆ ಮಾಡುತ್ತಾ ಇದ್ದೇ. ಅದನ್ನು ನೋಡಿ ರೀ ಆ ರೇಡಿಯೋ ಆಫ್ ಮಾಡಿ ಎಂದಳು. ನೋಡು ರಿದಂ ಇದ್ದರೆ ಬೇಗನೆ ನಿದ್ದೆ ಬರುತ್ತೆ ಎಂದೆ.ಮಕ್ಕಳಿಗೆ ಮಲಗಿಸುವಾಗ ಕೂಡ ಒಂದೇ ರಿದಂನಲ್ಲಿ ಬಡಿದರೆ ಹೇಗೆ ನಿದ್ದೆ ಬರುತ್ತೆ ಹಾಗೆ ಎಂದೆ. ಬೇಕಾದರೆ ನೀನು ಟ್ರೈ ಮಾಡು ಎಂದೆ. ಅದೆಲ್ಲ ಬೇಡ ನಿಮ್ಮ ಗೊಡ್ಡು ಫೀಲಾಸಫೀ. ನೀವೇನೂ ಸ್ವಾಮಿಗಳಲ್ಲ. ನನಗೆ ಮಾತ್ರ ನಿದ್ದೆ ಬರಲ್ಲ ಆಫ್ ಮಾಡಿ ಅದನ್ನು ಎಂದು ಉಗಿದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಷ್ಟರಲ್ಲಿ ಮಂಜನ ಫೋನ್ ಬಂತು, ಲೇ ಹ್ಯಾಪೀ ಅನಿವರ್ಸರಿ ಎಂದ. ನಾನು ಇವತ್ತ? ಎಂದು ಯೋಚಿಸಿದೆ. ಅದು ಮುಂದಿನ ತಿಂಗಳು ಎಂದು ನೆನಪು ಆಯಿತು. ಕ್ಯಾಲಂಡರ್ ನೋಡಿದೆ. ಮತ್ತೆ ಬೆಳಿಗ್ಗೆ ಮಡದಿ ಕೇಳಿದ್ದು ಅದೇ ಇರಬೇಕು ಎಂದು ಹೊಳಿತು. ತುಂಬಾ ಖುಶಿಯಿಂದ "ಒಲವೆ ಜೀವನ ಸಾಕ್ಷಾತ್ ಖಾರ" ಎಂದು ತಮಾಷೆಯಾಗಿ ಹಾಡುತ್ತಾ ಬಂದು. ಲೇ ಇವತ್ತಿನಿಂದ ಮುಂದಿನ ತಿಂಗಳು , ನಮ್ಮ ೬ ನೇ ವರ್ಷದ ವಿವಾಹ ವಾರ್ಷಿಕೋತ್ಸವ ಎಂದು ಹೇಳೋಕೆ ಹೋದೆ,ಆದರೆ ಆಗಲೇ ನಿದ್ದೆಗೆ ಜಾರಿದ್ದಳು....&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3966893233947203153?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3966893233947203153/comments/default' title='Post Comments'/><link rel='replies' type='text/html' href='http://haalusakkare.blogspot.com/2011/01/blog-post_27.html#comment-form' title='5 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3966893233947203153'/><link rel='self' type='application/atom+xml' href='http://www.blogger.com/feeds/3457141075796460701/posts/default/3966893233947203153'/><link rel='alternate' type='text/html' href='http://haalusakkare.blogspot.com/2011/01/blog-post_27.html' title='ಒಲವೆ ಜೀವನ ಸಾಕ್ಷಾತ್ ಖಾರ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-3457141075796460701.post-1204696234597585922</id><published>2011-01-18T21:11:00.000-08:00</published><updated>2011-01-18T21:16:13.681-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ವಿಲಾಸ್'/><category scheme='http://www.blogger.com/atom/ns#' term='ನಗು'/><title type='text'>ವೇದಾಂತಿ ದಂತಕತೆ....</title><content type='html'>ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎಂದು ಹೇಳಿದೆ. ಆಯಿತು ಎಂದ. ಮಡದಿ ತಿಂಡಿ ತಂದು ಕೊಟ್ಟಳು. ತಿಂಡಿ ತಿನ್ನುವ ಸಮಯದಲ್ಲಿ ಒಂದು ಹರಳು ನನ್ನ ಬಾಯಿಗೆ ಬಂತು. ನಾನು ಪಕ್ಕಕ್ಕೆ ಇಟ್ಟು, ತಿಂಡಿ ತಿಂದು ಮುಗಿಸಿದೆ. ಆಮೇಲೆ ಕಾಫೀ ಕುಡಿಯುತ್ತಾ ಇರುವಾಗ, ಮತ್ತೆ ಮಾತನಾಡುತ್ತಾ ನಿನಗೆ ಯಾರಾದರೂ ದಂತ ವೈಧ್ಯರು ಗೊತ್ತಾ ಎಂದು ಕೇಳಿದ. ನನಗೆ ಘಾಬರಿ, ನನಗೆ ಹರಳು ಬಂದರು, ನಾನೇ ಸುಮ್ಮನಿರುವಾಗ ಇವನದು ಜಾಸ್ತಿ ಆಯಿತು ಅನ್ನಿಸಿತು. ನಾನು ಸುಮ್ಮನೇ ನಕ್ಕು ಸುಮ್ಮನಾದೆ. ಮತ್ತೊಮ್ಮೆ ಕೇಳಿದ ಆಸಾಮಿ... ಆದರೂ ಸುಧಾರಿಸಿಕೊಂಡು, ಹಾ... ಗೊತ್ತು ನನ್ನ ಒಬ್ಬ ಹಳೆಯ ಗೆಳೆಯ ರಾಜೀವ ಇದ್ದಾನೆ ಎಂದೆ. ಅವನಿಗೆ ಹೇಳು ನಾನು ಬರುತ್ತಿದ್ದೇನೆ ಅಂತ ಎಂದ. ಏಕೆ? ಹಲ್ಲಿಗೆ ಏನು ಆಯಿತು ಎಂದೆ. ಅದು ಮದುವೆ ಮುಂಚೆ ಹಲ್ಲು ಚೆನ್ನಾಗಿ ತೋರಿಸಿಕೊಂಡು ಬರಬೇಕು ಎಂದಿದ್ದೇನೆ ಎಂದಾಗ ನನ್ನ ಮನಸ್ಸು ನಿರಾಳವಾಯಿತು.&lt;br /&gt;&lt;br /&gt;ಮದುವೆ ಫಿಕ್ಸ್ ಆಯಿತು, ಅಂದರೆ ಸಾಕು ಅನೇಕ ಜನರು ದಂತ ವೈದ್ಯರ ಬಳಿ ಹೋಗಿ, ತಮ್ಮ ದಂತಕತೆಗಳನ್ನು ಹೇಳಿ, ದಂತ ಚಿಕಿತ್ಸೆ ಮಾಡಿಸಿಕೊಂಡು ಬರುತ್ತಾರೆ. "ಪ್ರಥಮ್ ಚುಂಬನಮ್ ದಂತ ಭಗ್ನಮ್" ಆಗಬಾರದು ನೋಡಿ ಅದಕ್ಕೆ..ಆಮೇಲೆ ಬೇಕಾದರೆ ಭಗ್ನಗೊಳಿಸುವುದು ಅವರವರ ಇಚ್ಛೆ. ಗಂಡ ಹೆಂಡತಿಯದೋ ಅಥವಾ ಹೆಂಡತಿ ಗಂಡನದೋ.... ಚಿಕ್ಕವನಿದ್ದಾಗ ಅಪ್ಪ ನಾನು ಕೀಟಲೆ ಮಾಡಿದಾಗ "ಲೇ ನಿನ್ನ ಹಲ್ಲು ಉದುರಿಸುತ್ತೇನೆ ಎಂದಿದ್ದು" ನೆನಪು ಆಯಿತು.&lt;br /&gt;&lt;br /&gt;ಅವನಿಗೆ ರಾಜೀವನ ವಿಸಿಟಿಂಗ್ ಕಾರ್ಡ್ ಕೊಟ್ಟೆ. ಕಾರ್ಡ್ ನೋಡಿ,ಮುಖ ಹರಳೆಣ್ಣೆ ಕುಡಿದವನ ಹಾಗೆ ಮಾಡಿದ. ಏಕೆ? ಏನು ಆಯಿತು ಎಂದೆ. ಅದು... ಅದು... ಕ್ಲಿನಿಕ್ ಹೆಸರು ಅಂದ. ಅದಾ.. ಅವನು ಗಣೇಶನ ಭಕ್ತ, ಅದಕ್ಕೆ ಏಕದಂತ ಕ್ಲಿನಿಕ್ ಎಂದು ಇಟ್ಟಿದ್ದಾನೆ ಅಷ್ಟೇ ಎಂದಾಗ, ನಿರಾತಂಕವಾಗಿ ನಿಟ್ಟುಸಿರು ಬಿಟ್ಟ. ಅವನ ಸಿಲ್ವರ್ ತಲೆ ನೋಡಿ, ಇದನ್ನು ಸರಿ ಮಾಡಿಸಿಕೊ ಎಂದು ತಮಾಷೆ ಮಾಡಿದೆ. ನಾನು ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ ಎಂದ. ಅದಕ್ಕೆ ನನ್ನ ಮಡದಿ ನಿಮ್ಮ&lt;a href="http://haalusakkare.blogspot.com/2010/07/blog-post_23.html" jquery1295413994496="144"&gt;ನಾಟಿ ವೈಧ್ಯರ ಅಡ್ರೆಸ್&lt;/a&gt; ಕೊಡಿ ಪಾಪ... ಎಂದು ನಗಹತ್ತಿದಳು. ಅವನಿಗೆ ಅರ್ಥವಾಗಲಿಲ್ಲ, ಯಾರದೂ ನಾಟಿ ವೈಧ್ಯರು ಎಂದ. ನನ್ನ ಕಥೆಯನ್ನು ತುಂಬಾ ರಸವತ್ತಾಗಿ ಹೇಳಿದಳು. ಸಕ್ಕತ್ ನಗುತ್ತಾ, ಬೇಡ.. ಬೇಡ... ನನಗೆ ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ, ನನ್ನ ನೋಡಿ, ಆಮೇಲೆ 10 ವರ್ಷ ಚಿಕ್ಕವನ ಹಾಗೆ ಮಾಡಿ ಕಳಿಸುತ್ತಾರೆ ಎಂದ. ಅದಕ್ಕೆ ನಾನು ಕೋಪದಿಂದ ನಿನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಬಿಡುತ್ತೇನೆ, ಬಾಲ್ಯ ವಿವಾಹ ಮಾಡಿಕೊಳ್ಳುತ್ತಿದ್ದಾನೆ ಎಂದು ಎಂದೆ.&lt;br /&gt;&lt;br /&gt;ನಾವಿಬ್ಬರು ಮದುವೆ ಸಿದ್ಧತೆ ಬಗ್ಗೆ ಮಾತನಾಡುತ್ತಾ ಇದ್ದಾಗ, ನನ್ನ ಸುಪುತ್ರ ಬಂದು, ಅಪ್ಪ ನೋಡಿ.. ಅಮ್ಮ ನನ್ನ ಮಾತು ಕೇಳುತ್ತಾ ಇಲ್ಲ ಎಂದ. ಅದಕ್ಕೆ ನಾನು, ಮದುವೆ ಆಗಿ ಆರು ವರ್ಷ ಆಗೋಕೆ ಬಂತು ನನ್ನ ಮಾತೆ ಕೇಳಲ್ಲ, ಇನ್ನೂ ನಿನ್ನ ಮಾತು ಅವಳಿಗೆ ಎಲ್ಲಿಯ ಲೆಕ್ಕ ಎಂದು ನಗುತ್ತಾ ಅಂದೆ. ಅದಕ್ಕೆ... ಅವನು ನಕ್ಕು ಅಪ್ಪನಿಗೆ ಹೇಳಿದ್ದೇನೆ ಎಂದು ಹೇಳುತ್ತ ಅಡುಗೆ ಮನೆಗೆ ಹೋದ. ಹೇಳು ಏನು? ಮಾಡುತ್ತಾರೆ ನೋಡುತ್ತೇನೆ ಎಂದಳು ಮಡದಿ.&lt;br /&gt;&lt;br /&gt;ಕೆಲ ಸಮಯದ ನಂತರ ಪಕ್ಕದ ಮನೆ ಪೂಜ ಬಂದು "ಆಂಟೀ ಸ್ವಲ್ಪ ಮೊಸರು ಇದ್ದರೆ ಕೊಡಿ" ಎಂದಳು. ಮೊಸರು ಕೊಟ್ಟು ಕಳುಹಿಸಿದಳು. ನನ್ನ ಮಗ ಅವರ ಅಮ್ಮನಿಗೆ ಆಂಟೀ ... ಆಂಟೀ ಎಂದು ಸಂಭೋದಿಸುತ್ತಾ ಮೋಜು ಮಾಡುತ್ತಾ ಆಡುತ್ತಿದ್ದ. ಮದುವೆ ಆದ ಮೇಲೆ ಸಿಗುವಂತ ಮೊದಲನೆ ಪ್ರಮೋಶನ್ ಏನು ಗೊತ್ತಾ? ಎಂದು ವಿಲಾಸ್ ನಿಗೆ ಕೇಳಿದೆ. ಏನು? ಎಂದ. ನೀನು ಪಕ್ಕದ ಮನೆ ಜನರಿಗೆ ಅಂಕಲ್ ಆಗುತ್ತಿ ಮತ್ತೆ ನಿನ್ನ ಮಡದಿ ಆಂಟೀ...ವಯಸ್ಸು ಎಷ್ಟೇ ಇದ್ದರು. ಮದುವೆ ಮೊದಲು ನೀನು ಹೀರೊ ಇರುತ್ತಿ... ಎಂಗೇಜ್ಮೆಂಟ್ ಆದ ಮೇಲೆ ಸೂಪರ್ ಹೀರೊ ತರಹ ಆಡುತ್ತೀ.. ಆಮೇಲೆ ಗೊತ್ತಾಗೋದು ನೀನು ಆಂಟೀ ಅಥವಾ (Anti) ಹೀರೊ ಎಂದು. ಅದಕ್ಕೆ ಒಟ್ಟಿನಲ್ಲಿ ಹೀರೊ ಇರುತ್ತೇನೆ ತಾನೇ? ಅಂದ. ಲೇ.... ನಿನಗೆ ಹೀರೊದ ನಿಜವಾದ ಅರ್ಥ ಗೊತ್ತಾ? ಎಂದೆ. ಇಲ್ಲ ಅಂದ. ಹೀ(ಅವನು) ಇಂಗ್ಲೀಶ್ ಶಬ್ದ. ರೊ(ಅಳು) ಹಿಂದಿ ಶಬ್ದ ಎಂದೆ. ಜೋರಾಗಿ ನಗಹತ್ತಿದ. ಅಷ್ಟರಲ್ಲಿ ನನ್ನ ಮಡದಿ ನೀವು ಇವರ ಮಾತು ಕೇಳುತ್ತಾ ಇದ್ದರೆ ಮುಗೀತು ಕತೆ. ಗಿಡದಲ್ಲಿ ಇರುವ ಮಂಗ ಕೂಡ ಕೈ ಬಿಡುತ್ತೆ ಎಂದಳು. ವೇದಾಂತಿಗಳೇ ನಿಮ್ಮ ದಂತಕತೆಗಳು ಸಾಕು, ಅವರಿಗೂ ಇನ್ನೂ ತುಂಬಾ ಮದುವೆ ಕಾರ್ಡ್ ಕೊಡಬೇಕು ಎಂದು ಕಾಣುತ್ತೆ ಬಿಡಿ ಅವರನ್ನ ಎಂದಳು.&lt;br /&gt;&lt;br /&gt;ಮತ್ತೆ ನಕ್ಕು, ಎಲ್ಲರಿಗೂ ಬೈ ಹೇಳಿ ಮದುವೆಗೆ ಬರಲೇಬೇಕು ಎಂದು ಹೇಳಿ ಹೊರಟು ಹೋದ.&lt;br /&gt;&lt;br /&gt;ಆಮೇಲೆ ಮಡದಿ ರೀ... ಸ್ವಲ್ಪ ಟೊಮ್ಯಾಟೋ ಫ್ರಿಡ್ಜ್ ನಲ್ಲಿ ಇದೆ ಕೊಡಿ ಎಂದಳು. ನಾನು ಫ್ರಿಡ್ಜ್ ತೆಗೆದೆ ಅಲ್ಲಿ ತುಂಬಾ ಸಾಮಾನುಗಳನ್ನು ಇಟ್ಟಿದ್ದಳು. ಅದನ್ನು ನೋಡಿ ಏನೇ ಇದು ಇಷ್ಟೊಂದು ಸಾಮಾನು ಇಟ್ಟೀದ್ದೀಯ....?. ನನ್ನನ್ನು ಇದರಲ್ಲಿ ತುರುಕಲಿಲ್ಲವಲ್ಲ ಎಂದು ತಮಾಷೆ ಮಾಡಿದೆ. ರೀ, ನಾನು ಕೆಟ್ಟಿರೊ ಸಾಮಾನು ಇಡುವದಿಲ್ಲ ಎಂದು ನಗುತ್ತಾ ನುಡಿದಳು....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1204696234597585922?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1204696234597585922/comments/default' title='Post Comments'/><link rel='replies' type='text/html' href='http://haalusakkare.blogspot.com/2011/01/blog-post_18.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1204696234597585922'/><link rel='self' type='application/atom+xml' href='http://www.blogger.com/feeds/3457141075796460701/posts/default/1204696234597585922'/><link rel='alternate' type='text/html' href='http://haalusakkare.blogspot.com/2011/01/blog-post_18.html' title='ವೇದಾಂತಿ ದಂತಕತೆ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-18383979769939415</id><published>2011-01-12T04:40:00.000-08:00</published><updated>2011-01-14T22:35:40.272-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಸ್ವಚ್ಛತಾ ಕಾರ್ಯಕ್ರಮ ....</title><content type='html'>&lt;span style="font-weight:bold;"&gt;*****************************************************&lt;br /&gt;ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...&lt;br /&gt;*****************************************************&lt;/span&gt;&lt;br /&gt;&lt;a href="http://4.bp.blogspot.com/_sgKmwy5YbY0/TS_zP7YbxmI/AAAAAAAAAJE/tFaEdWxD8Ic/s1600/missile.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 106px;" src="http://4.bp.blogspot.com/_sgKmwy5YbY0/TS_zP7YbxmI/AAAAAAAAAJE/tFaEdWxD8Ic/s320/missile.JPG" border="0" alt=""id="BLOGGER_PHOTO_ID_5561931519789614690" /&gt;&lt;/a&gt;&lt;br /&gt;&lt;p&gt;ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ ಕೆಲಸಗಳಿರುತ್ತವೆ. ಬ್ಲಾಗ್ ನೋಡಬೇಕು, ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು, ಮತ್ತೆ ಓದಬೇಕು ಎಂದು ಹೇಳಿದೆ. ಓದುವ ಸಮಯದಲ್ಲಿ... ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ, ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು. ಏನೋ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ, ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ. ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು. ಏನು? ನನಗೆ ಕೊಂಬು ಇಲ್ಲವೇ?, ನನ್ನ ಹೆಸರು ಏನು? ಎಂದೆ. ಮತ್ತೇನು ದನ ಕಾಯುವವನು ಎಂದಳು. ಲೇ ಅವು ಆಕಳುಗಳು ಎಂದೆ. ಅವುಗಳಿಗೆ ಕೊಂಬು ಇದೆ. ನನಗೆ ಇಲ್ಲವೇ ಬೇಕಾದರೆ "ಗೋಪಾಲ್" ಎಂಬ ಹೆಸರಿನಲ್ಲಿ "ಲ್" ಕ್ಕೆ ಕೊಂಬು ಇದೆ ಅಲ್ಲ, ಒಂದೇ ಇರಬಹುದು, ಆದರೂ ಇದೆ ತಾನೇ ಎಂದೆ. ಆಯಿತು, ಮಹಾರಾಯರೆ ನೀವು ಮಹಾನ್ ಕೊಂಬು ಪಂಡಿತರು ...ಕ್ಷಮಿಸಿ ಕೊಬ್ಬು ಪಂಡಿತರು. ನಿಮಗೆ ಸರಿಸಾಟಿ ಯಾರು ಇಲ್ಲ ಆಯಿತಾ ಎಂದಳು. ಸಧ್ಯ, ನಿಮ್ಮ ಕಂಪ್ಯೂಟರ್ ನಾದರೂ ಒರೆಸುವ ಕೆಲಸ ಮಾಡುವುದಿಲ್ಲ ಎಂದಳು. ಬರಿ ಅದನ್ನು ಕುಟ್ಟುವುದು ಮಾತ್ರ ಬಿಡುವುದಿಲ್ಲ. ಸ್ವಲ್ಪ ಮೆಣಸಿನಕಾಯಿ ಕುಟ್ಟಿದ್ದರೆ, ಇಷ್ಟೊತ್ತಿಗೆ ಖಾರದ ಪುಡಿನಾದರೂ ಆಗುತಿತ್ತು ಎಂದು ಉಗಿದಳು. ಆಯಿತು... ಮಹಾರಾಯತಿ ಈ ಶನಿವಾರ ಮಾಡುತ್ತೇನೆ ಎಂದು ಅಭಯವನ್ನಿತ್ತೆ. ಅಷ್ಟಕ್ಕೇ ಬಿಡಬೇಕಲ್ಲ ಆಗತಾನೆ ಹೊಸದಾಗಿ ತಂದ ಕ್ಯಾಲಂಡರ್ ಮೇಲೆ ಒಂದು ವೃತ್ತ ಬಿಡಿಸಿ, ಈ ವಾರ ಸ್ವಚ್ಛತಾ ಕಾರ್ಯಕ್ರಮ ಎಂದು ಗುರುತು ಮಾಡಿ ಬಿಟ್ಟಳು. ಇನ್ನೂ ತಪ್ಪಿಸಿಕೊಳ್ಳುವುದು ಅಸಾಧ್ಯದ ಸಂಗತಿ ಆಗಿತ್ತು. &lt;/p&gt;&lt;br /&gt;&lt;p&gt;ಹಳೆಯ ಕಂಪನಿಯಲ್ಲಿ ಬರೀ ರವಿವಾರ ಮಾತ್ರ ರಜೆ ಇರುತಿತ್ತು. ಹೀಗಾಗಿ ನನಗೆ ಸ್ವಲ್ಪ ರಿಯಾಯಿತಿ ದೊರೆಯುತ್ತಿತ್ತು. ಆದರೆ ಈಗ ಯಾವುದೇ "ರಿಯಾಯಿತಿ" ಇಲ್ಲ, "ರೀ ಆಯಿತ" ಎಂಬ ಶಬ್ದ ಮಾತ್ರ ಕೇಳಿಸುತ್ತೆ. ಒಂದೇ ದಿನದಲ್ಲಿ ಎಲ್ಲ ಸ್ವಚ್ಛತಾ ಮುಗಿಯುತ್ತಾ, ನನ್ನ ಕೈಯಲ್ಲಿ ಎಂದು ಯೋಚನೆ ಬೇರೆ ಇತ್ತು. &lt;/p&gt;&lt;br /&gt;&lt;p&gt;ಕಡೆಗೆ ಶನಿವಾರ ಬಂದೆ ಬಿಟ್ಟಿತ್ತು. ಆರು ಘಂಟೆಗೆ ಎದ್ದೊಡನೆ ಸ್ವಚ್ಚತಾ ಕಾರ್ಯಕ್ರಮ ಶುರು ಮಾಡಿಕೊಂಡಿದ್ದೆ. ರೀ ಮೊದಲು ಕಾಫೀ ಕುಡಿ ಬನ್ನಿ, ಆಮೇಲೆ ಮಾಡುವಿರಂತೆ ಎಂದಳು. ಕಾಫೀ ಕುಡಿದು ಮತ್ತೆ ಕೆಲಸ ಶುರು ಮಾಡಿದೆ.ಪೊರಕೆ ತೆಗೆದುಕೊಂಡು ಕಾಟ್ ಕೆಳಗೆ ಗುಡಿಸಿದೆ. ಒಂದು ಹಲ್ಲಿ ನನ್ನ ಮೇಲೆ ಬಂದ ಹಾಗೆ ಆಗಿತ್ತು. ನೋಡುತ್ತೇನೆ ಅದು ನನ್ನ ಮಗನ ರಬ್ಬರ್ ಹಲ್ಲಿ. ಮಡದಿ, ಮಗ ಇಬ್ಬರು ಜೋರಾಗಿ ನಗ ಹತ್ತಿದರು. ಕಡೆಗೆ ನಾನು ನಕ್ಕು, ಕಾಟ್ ಎತ್ತಿ ಆಮೇಲೆ ಸ್ವಚ್ಛ ಮಾಡಿದರೆ ಆಗುತ್ತೆ ಎಂದು ಎತ್ತಲು ಅನುವಾದೆ. ಸ್ವಲ್ಪ ಕೂಡ ಮಿಸುಗಾಡಲಿಲ್ಲ , ನನ್ನ ಮೀಸೆ ಮಾತ್ರ ಎರಡು ಬಾರಿ ಅಲುಗಾಡಿತು. ಇನ್ನೊಮ್ಮೆ "ಐಸಾ" ಎಂದು ಎತ್ತಲು ಅನುವಾದೆ. ದಪ್ ಎಂದು ಈ ದಪ್ಪದಾದ ದೇಹ ಕೆಳಗಡೆ ಬಿದ್ದಿತ್ತು. ಕಡೆಗೆ ನನ್ನನ್ನು ಎಬ್ಬಿಸಿ, ನಿಮ್ಮ ಅಪ್ಪನ ಕೈಯಲ್ಲಿ ಏನು? ಆಗುವುದಿಲ್ಲ ಎಂದು ಅಣಕಿಸಿದಳು. ಬರೀ ದೊಡ್ಡ ದೇಹ, ಒಳಗಡೆ ಏನು? ಇಲ್ಲ ಎಂದಳು. ಅವನಿಗೆ ಅರ್ಥವಾಗದಿದ್ದರೂ, ಅವಳು ನಕ್ಕೊಡನೆ ಅವನು ನಗುತ್ತಿದ್ದ. ಏನು? ಏನೆಂದು ತಿಳಿದಿದ್ದೀಯ ನನ್ನ. ನನ್ನ ಕಂಡರೆ ತುಂಬಾ ಜನರು ಹೆದುರುತ್ತಾರೆ ಗೊತ್ತಾ ಎಂದೆ. ಹೌದಾ?, ಜನರು ಜಿರಳೆ ನೋಡಿ ಕೂಡ ಹೆದರುತ್ತಾರೆ ಗೊತ್ತಾ ಎಂದಳು. &lt;/p&gt;&lt;br /&gt;&lt;p&gt;ಕಡೆಗೆ ನೀನು ಬಾ ಹೆಲ್ಪ್ ಮಾಡು ಎಂದೆ. ಅವಳು ಬಂದಳು. ಇಬ್ಬರು ಸೇರಿ ಎತ್ತಿದರು ಕಾಟ್ ಮೇಲೆ ಏಳಲೇ ಇಲ್ಲ. ಈಗ ನಾನು ನಗುತ್ತಾ ಈಗ ಏನು ಹೇಳುತ್ತಿ ಎಂದೆ. ಅಡುಗೆ ಮನೆಯಲ್ಲಿನ ಹಾಲು ಉಕ್ಕುವ ಶಬ್ದ ಕೇಳಿ ಒಳಗಡೆ ಹೋಗಿ ಬಂದಳು. ನಾನು ಇನ್ನೂ ಎತ್ತಲು ಪ್ರಯತ್ನ ಮಾಡುತ್ತಲೇ ಇದ್ದೆ. ಬಂದವಳೇ ರೀ ಎಂದು ನಗುತ್ತಾ ಅಲ್ಲಿ ನೋಡಿ ಗೋಡೆಗೆ ಅದು ಸಿಕ್ಕಿ ಹಾಕಿ ಕೊಂಡಿದೆ ಎಂದು ನಗಲು ಶುರು ಮಾಡಿದಳು. ನಾನು ಆಮೇಲೆ ಸ್ವಲ್ಪ ಸರಿಸಿ ತುಂಬಾ ಆರಾಮವಾಗಿ ಎತ್ತಿ ಇಟ್ಟೆ. ಮನೆಯ ಎಲ್ಲ ಸ್ವಚ್ಚತಾ ಕಾರ್ಯಕ್ರಮ ಮುಗಿಸಿ, ಮಡದಿ ಮಾಡಿದ ಬಿಸಿ ಬೇಳೆ ಬಾತ್ ತಿಂದು ಸಂಜೆವರೆಗೆ ನಿದ್ದೆ ಮುಗಿಸಿ ಎದ್ದೆ. &lt;/p&gt;&lt;br /&gt;&lt;p&gt;ಎದ್ದೊಡನೆ ಕೈ ಕಾಲು ಮಾತನಾಡುತ್ತಾ ಇದ್ದವು. ಹೀಗಾಗಿ ಸ್ವಲ್ಪ ಒದರುತ್ತ ಇದ್ದೆ. ಅದನ್ನು ನೋಡಿ ವರ..ವರ.. ಎಂದು ಒದರಬೇಡಿ ಎಂದಳು. ಅದಕ್ಕೆ ವರ ವರ ಎಂದು ನಾನೇಕೆ ಒದರಲಿ ಬೇಕಾದರೆ ಕನ್ಯಾ.. ಕನ್ಯಾ ಎಂದು ಕಿರುಚುತ್ತೇನೆ ಎಂದು ಹೇಳಿ ಮತ್ತೊಮ್ಮೆ ಮಂಗಳಾರತಿ ಮಾಡಿಸಿಕೊಂಡಿದ್ದೆ. ಕಾಫೀ ಕೊಡುತ್ತಾ ರೀ.. ಮುಂದಿನ ವಾರ ಅಡುಗೆ ಮನೆ ಸ್ವಚ್ಛ್ ಮಾಡೋಣ ಎಂದಳು. ನಾನು ನನ್ನ ಮಗನ ಚಿಣ್ಣರ ಹಾಡು "ವಾರಕೆ ಏಳೆ ಏಳು ದಿನ, ಆಟಕೆ ಸಾಲದು ರಜದ ದಿನ" ವನ್ನು ಬದಲಿಸಿ "ವಾರಕೆ ಶನಿವಾರ ಒಂದು ದಿನ , ಸ್ವಚ್ಛತೆಗೆ ಸಾಲದು ಈ ಒಂದು ದಿನ" ಎಂದು ಹಾಡುತ್ತಾ ಕಾಫೀ ಹಿರಿ ಮುಗಿಸಿದ್ದೆ. &lt;/p&gt;&lt;br /&gt;&lt;p&gt;ಮತ್ತೆ ಲೇಖನದ ವಿಷಯ ನೆನೆಪು ಆಗಿ ಬರೆಯುತ್ತಾ ಕುಳಿತೆ. ನಾನು ಲೇಖನವನ್ನು ಒಂದು ಪೇಜ್ ನಾದರೂ ಬರೆಯುತ್ತೇನೆ. ಇವತ್ತು ಎಷ್ಟು ಬರೆದರು ಒಂದು ಪೇಜ್ ಆದ ಹಾಗೆ ಅನ್ನಿಸಲೇ ಇಲ್ಲ. ಏಕೋ ಅನುಮಾನವಾಗಿ ಹಳೆಯ ಲೇಖನ ತೆಗೆದೆ, ಅದು ಕೂಡ ಚಿಕ್ಕದಾಗಿ ಇತ್ತು. ಒಂದೆರಡು ಲೇಖನ ಓದಿದೆ ಪೂರ್ತಿ ವಿಷ್ಯ ಇತ್ತು. ಅಷ್ಟರಲ್ಲಿ ಮಡದಿ ನಿನ್ನೆ ಇಂದ ಸ್ವಲ್ಪ ಚಿಕ್ಕದಾಗಿ ಬರುತ್ತಿದೆ ನೋಡಿ ಏನಾಗಿದೆ? ಮಾನಿಟರ್ ಎಂದಳು. ಆಮೇಲೆ ತಿಳಿಯಿತು ಅವಳು ಅದರ ಸೆಟ್ಟಿಂಗ್ ಚೇಂಜ್ ಮಾಡಿದ್ದಾಳೆ ಎಂದು. ಅದನ್ನು ಸರಿ ಮಾಡಿದ ಮೇಲೆ, ದೊಡ್ಡದಾಗಿ ಕಂಡ, ನನ್ನ ಲೇಖನದ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂತು.&lt;/p&gt;&lt;br /&gt;&lt;p&gt;ಸಂಜೆ ಮಗನಿಗೆ ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೀರಿ, ಮತ್ತೆ ಕುಟ್ಟಲು ಶುರು ಮಾಡಿದ್ದೀರ ಎಂದಳು. ಪಾರ್ಕಿಗೆ ಹೊರಟೆವು. ಕೆಳಗಡೆ ಓನರ್ "ಏನ್ರೀ ಗೋಪಾಲ್ ಚೆನ್ನಾಗಿದ್ದೀರಾ, ಬೆಳಿಗ್ಗೆ ಬೂಕಂಪ ಆಗಿತ್ತು, ಆದರೆ ಯಾವ ಚ್ಯಾನೆಲ್ ನಲ್ಲಿ ತೋರಿಸಲೇ ಇಲ್ಲ ನೋಡಿ ಎಂದು ಮುಖ ಕಿವುಚಿದರು". ನನ್ನ ಮಡದಿ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದಳು. ಅವಳನ್ನು ನೋಡಿ ನನ್ನ ಮಗ ಕೂಡ. ಪಾರ್ಕಿಗೆ ಹೋಗಿ ಸಂಜೆ ಬರುವ ವೇಳೆಯಲ್ಲಿ ಎಸ್.ಎಲ್.ವಿ ಗೆ ತೆರಳಿ ಒಂದಿಷ್ಟು ಬಿಳಿ ಗುಳಿಗೆ (ಇಡ್ಲಿ) ನುಂಗಿ ಮನೆಗೆ ಬಂದು ಕ೦ಟ ಪೂರ್ತಿ ಊಟ ಮುಗಿಸಿ, ಈ ಶನಿವಾರಗಳು ವಾರಕೆ ಎರಡು ಬಂದರೆ ಹೇಗೆ ಎಂದು ಯೋಚಿಸುತ್ತಾ, ನಿದ್ದೆಗೆ ಜಾರಿದೆ. &lt;/p&gt;&lt;br /&gt;&lt;p&gt;ಮುಂದಿನ ಶನಿವಾರ ಏನೇನು ಕಾದಿದೆಯೋ ಗೊತ್ತಿಲ್ಲ... ಮತ್ತೆ ಬರುತ್ತೇನೆ ಆ(ಈ) ಶನಿವಾರದ ಪೂರ್ತಿ ವಿವರದೊಂದಿಗೆ....ಆ(ಈ) ಎಂದು ಬರೆದಿದ್ದೇನೆ, ಎಂದು ನನ್ನ ಮಡದಿಗೆ ಮಾತ್ರ ಹೇಳಬೇಡಿ... ಅವಳು, ಇವನಿಗೆ ಆ..ಆ..ಇ ...ಈ ಕೂಡ ಬರುವುದಿಲ್ಲ ಎಂದು ತಿಳಿದುಕೊಂಡಾಳು...:-)).&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-18383979769939415?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/18383979769939415/comments/default' title='Post Comments'/><link rel='replies' type='text/html' href='http://haalusakkare.blogspot.com/2011/01/blog-post_12.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/18383979769939415'/><link rel='self' type='application/atom+xml' href='http://www.blogger.com/feeds/3457141075796460701/posts/default/18383979769939415'/><link rel='alternate' type='text/html' href='http://haalusakkare.blogspot.com/2011/01/blog-post_12.html' title='ಸ್ವಚ್ಛತಾ ಕಾರ್ಯಕ್ರಮ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_sgKmwy5YbY0/TS_zP7YbxmI/AAAAAAAAAJE/tFaEdWxD8Ic/s72-c/missile.JPG' height='72' width='72'/><thr:total>4</thr:total></entry><entry><id>tag:blogger.com,1999:blog-3457141075796460701.post-6494415182944189870</id><published>2011-01-11T06:00:00.001-08:00</published><updated>2011-01-13T21:33:00.535-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಬುರುಡೆ ಪುರಾಣ ....</title><content type='html'>&lt;a href="http://2.bp.blogspot.com/_sgKmwy5YbY0/TS_fkkBqB4I/AAAAAAAAAI0/C9wGYaoM0g0/s1600/missile.JPG"&gt;&lt;img id="BLOGGER_PHOTO_ID_5561909884064761730" style="FLOAT: left; MARGIN: 0px 10px 10px 0px; WIDTH: 81px; CURSOR: hand; HEIGHT: 75px" alt="" src="http://2.bp.blogspot.com/_sgKmwy5YbY0/TS_fkkBqB4I/AAAAAAAAAI0/C9wGYaoM0g0/s320/missile.JPG" border="0" /&gt;&lt;/a&gt;&lt;br /&gt;ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು. ಜೋರಾಗಿ ಕಿರುಚೋಣ ಎಂದುಕೊಂಡರೂ, ಭಯದಿಂದ ಮತ್ತೆಲ್ಲಿ ಚಾಕುವಿನಿಂದ ಚುಚ್ಚಿ ಬಿಟ್ಟರೆ ಕಷ್ಟ ಎಂದು, ತೆರೆದ ಬಾಯಿಯನ್ನು ಹಾಗೆ ಬಿಟ್ಟು ಹೌಹಾರಿ ಸುಮ್ಮನಾದೆ. ಮತ್ತೆ ಅವರಿಗೆ ಏನು ಬೇಕು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಲೈಟ್ ಹತ್ತಿತ್ತು. ನೋಡುತ್ತೇನೆ.. ನನ್ನ ಮಡದಿ ಚಾಕುವಿನೊಂದಿಗೆ. ಹೆದರಿ, ಲೇ.. ಏನೋ ಸ್ವಲ್ಪ ಕೆಲಸ ಇತ್ತು ಎಂದು ತಡವಾಗಿ ಬಂದೆ ಅಷ್ಟೇ ಎಂದೆ. ರೀ... ಅದು ಅಲ್ಲ ಎಂದಳು. ಮತ್ತಿನ್ನೇನು?. ತರಕಾರಿ ಹೆಚ್ಚಬೇಕು ತಾನೇ ನಾಳೆ ಬೆಳಿಗ್ಗೆ ಹೆಚ್ಚುತ್ತೇನೆ, ಈಗ ಮಲಗಿಕೊಳ್ಳಲು ಬಿಡು ಎಂದೆ. ರೀ ಸುಮ್ಮನೇ ಈ ಚಾಕು ತೆಗೆದು ಕೊಳ್ಳಿ ಎಂದು ಚಾಕು ಕೈಯಲ್ಲಿ ಇಟ್ಟಳು.&lt;br /&gt;&lt;p&gt;&lt;/p&gt;&lt;br /&gt;&lt;p style="MARGIN: 0px 0px 10px"&gt;ಆಗ ಹಳೆಯ ಕಾಲದ ವಸ್ತುಗಳೆ ಚೆನ್ನ ಎಂದನಿಸಿತು. ಮೊದಲು ತರಕಾರಿ ಹೆಚ್ಚಲು ಇಳಿಗೆ ಉಪಯೋಗಿಸುತ್ತಿದ್ದರು. ಏನೋ? ಹೆಚ್ಚಲು ಕಷ್ಟ ಆಗಬಹುದು ಎಂದು ಹೆಣ್ಣು ಮಕ್ಕಳು ತಾವೇ ಹೆಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಚಾಕು, ಹೆಚ್ಚಲು ನಾವೇ ಬೇಕು. ಮತ್ತೆ ಮೊದಲು ರುಬ್ಬು ಗುಂಡಿನಿಂದ ಹಿಟ್ಟು ರುಬ್ಬ ಬೇಕಿತ್ತು. ಆದರೆ ಈಗ ಗಂಡನಿಂದ ಹಿಟ್ಟು ಗ್ರೈಂಡರ್ ನಲ್ಲಿ ಹಾಕಿಸಿ ರುಬ್ಬಿಸುತ್ತಾರೆ. ರುಬ್ಬದಿದ್ದರೆ ಅವರೇ ರುಬ್ಬುತ್ತಾರೆ ನಮ್ಮನ್ನು. ಬರಿ ಸ್ವಲ್ಪ ಮಾತ್ರ ವ್ಯತ್ಯಾಸ ರುಬ್ಬು ಗುಂಡು, ರುಬ್ಬು ಗಂಡ ಅರ್ಥವಾಯಿತು ತಾನೇ?....:-))).&lt;/p&gt;&lt;br /&gt;&lt;p style="MARGIN: 0px 0px 10px"&gt;ಚಾಕು ಹಿಡಿದು ಅಡುಗೆ ಮನೆಗೆ ಹೊರಟೆ. ರೀ... ಅಲ್ಲಿ ಅಲ್ಲ ಬನ್ನಿ ಇಲ್ಲಿ ಎಂದು ಬೆಡ್ ರೂಮಿಗೆ ಕರೆದುಕೊಂಡು ಹೋದಳು. ನೋಡುತ್ತೇನೆ ಬೆಡ್ ರೂಮಿನಲ್ಲಿ ತುಂಬಾ ಅಲಂಕರಿಸಿದ್ದಳು. ಮತ್ತೆ "ಹ್ಯಾಪೀ ಬರ್ತ್ ಡೇ ಟು ಯೂ" ಎಂದು ಮಗ, ಮಡದಿ ಇಬ್ಬರು ಚಪ್ಪಾಳೆ ತಟ್ಟಿದರು. ಮತ್ತೆ ಎದುರಿಗೆ ದೊಡ್ಡದಾದ ಕೇಕ್ ಬೇರೆ ಇತ್ತು. ಕ್ಯಾಂಡಲ್ ಆರಿಸಿ, ಕೇಕ್ ಕಟ್ ಮಾಡಿ ಆಯಿತು. ತುಂಬಾ ಖುಷಿ ಆಯಿತು.&lt;/p&gt;&lt;br /&gt;&lt;p style="MARGIN: 0px 0px 10px"&gt;ತುಂಬಾ ಖುಶಿಯಿಂದ, ಮರುದಿನ ಮಂಜನಿಗೆ ನಿನ್ನೆ ರಾತ್ರಿ ನಡೆದ ನನ್ನ ಬರ್ತ್‌ಡೇ ಪುರಾಣನ್ನೇಲ್ಲಾ ಕಕ್ಕಿಬಿಟ್ಟೆ. ನೀನು ಎಷ್ಟು ಘಂಟೆಗೆ ಹುಟ್ಟಿದ್ದು ಎಂದು ಕೇಳಿದ. ನಾನು ಆರು ಎಂದೆ. ಮಂಜ ಅದಕ್ಕೆ ಇದೇನು ಸಂಸ್ಕೃತಿನೋ ರಾತ್ರಿ ದೆವ್ವ ಏಳುವ ಸಮಯದಲ್ಲಿ ಬರ್ತ್‌ಡೇ ಮಾಡಿಕೊಂಡನಂತೆ ಎಂದು ಕಿಚಾಯಿಸಿದ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗಿ ಆಚರಿಸಿದರೆ, ನೀನು ನೋಡಿದರೆ ದೀಪ ಆರಿಸಿ ಆಚರಿಸಿಕೊಂಡೆ ಎಂದ. ಹುಟ್ಟಿದ ದಿವಸ ಚಾಕು ಕೊಡೋ ನಾವು ಎಂತಹ ಭೂಪರು ಇರಬೇಕು ಎಂದ. ನಮ್ಮ ಸಂಸ್ಕೃತಿ ನಾವೇ ಕಾಪಾಡದಿದ್ದರೆ ಇನ್ನೂ ಯಾರು ಕಾಪಡಬೇಕು ಎಂದ. ಕೆಟ್ಟಿದ್ದು ಸುಧಾರಿಸಬಹುದು, ಆದರೆ ಒಳ್ಳೆಯದೇ ಕೆಟ್ಟರೆ ಏನು? ಮಾಡಬೇಕು ಎಂದ. ಅವನು ಹೇಳುತ್ತಿದ್ದರೆ ನಾನು ಏನು? ಹೇಳಬೇಕು ಎಂದು ಯೋಚಿಸದೇ ಅವನನ್ನು ನೋಡುತ್ತಾ ಕುಳಿತಿದ್ದೆ. ಪಶ್ಚ್ಯಾತ್ಯರು ನಮ್ಮ ಯೋಗ, ಆಯುರ್ವೇದ ಎಲ್ಲವನ್ನು ಅನುಸರಿಸುತ್ತಿದ್ದಾರೆ. ಆದರೆ ನಾವು ಅವರ ಸಂಸ್ಕೃತಿ ಅನುಸರಿಸಿ ಕೆಡುತ್ತಿದ್ದೇವೆ ಎಂದ. ಆಧುನಿಕತೆ ಎಂದು ನಮ್ಮ ಹಳೆಯ ಆಚರಣೆಗಳಿಗೆ ಮಣ್ಣೆರಚುತ್ತಿದ್ದೇವೆ ಎಂದ. ಈಗಿನದು ಆಧುನಿಕತೆ, ಆದರೆ ಆಗಿನದು "ಅದು+ನೀತಿ+ಕಥೆ" ಎಂದ.&lt;/p&gt;&lt;br /&gt;&lt;p style="MARGIN: 0px 0px 10px"&gt;ಮತ್ತೆ ನಿನಗೆ ಗೊತ್ತಾ, ಕೆಲ ಹಳೆಯ ಕಾಲದ ಜನಗಳಿಗೆ ತಮ್ಮ ಹುಟ್ಟು ಹಬ್ಬ ಎಂದು ಸಹಿತ ಗೊತ್ತಿಲ್ಲ. ಏಕೆ? ನಮ್ಮಷ್ಟಕ್ಕೆ ನಾವೇ ಇಷ್ಟು ಮುದುಕ ಅದೇವು ಎಂದು ಆಚರಣೆ ಮಾಡಿಕೊಳ್ಳಬೇಕು ನನಗೆ ಅರ್ಥ ಆಗುತ್ತಿಲ್ಲ. ಮತ್ತೆ ತಲೆಯಲ್ಲಿ ಇನ್ನಷ್ಟು ವಿಚಾರಗಳು. 34 ಆಯಿತು ಇನ್ನೂ ಮನೆ ತೆಗೆದುಕೊಂಡಿಲ್ಲ, ಕಾರು ಹೀಗೆಲ್ಲ ಎಂದ. ಹಳೆಯ ಕಾಲದ ಜನ ಪ್ರತಿ ವಾರ 'ಗೋ ಮೂತ್ರ' ತೆಗೆದು ಕೊಳ್ಳೂತ್ತಿದ್ದರು, ಆದರೆ ಈಗಿನ ಜನ 'ಗೋ' ಅಂಡ್ ಗೇಟ್ ಸಮ್ 'ಮಾತ್ರೆ' ಎಂದು ಹೇಳುತ್ತಾರೆ ಎಂದ. ಮೊದಲಿನ ಕಾಲದಲ್ಲಿ ಹೆಣ್ಣು ಮಕ್ಕಳು ವಾಂತಿ ಮಾಡಿಕೊಂಡರೆ ಖುಷಿಯಾಗಿ ಊರಿಗೆ ಸಿಹಿ ಹಂಚುತ್ತಿದ್ದರು. ಆದರೆ, ಈಗ ರಾತ್ರಿ ಪಾರ್ಟೀ ಮಾಡಿ ಬಂದಿರಬೇಕು ಎಂದು ಅರ್ಥೈಸಿಕೊಳ್ಳುತ್ತಾರೆ ಎಂದ. ಮನೆಯಲ್ಲಿ ಮಾಡಿದ ಶೆವಿಗೆ ಬಾತ್ ತಿನ್ನುವುದಿಲ್ಲ ಹೊರಗೆ ಹೋಗಿ ಚೈನೀಸ್ ನೂಡಲ್ಸ್ ತಿನ್ನುತ್ತಾರೆ. ಮನೆಯಲ್ಲಿ ಹೊಳಿಗೆಗೆ ಹಾಲು ಹಾಕುವಾಗ ಸ್ವಲ್ಪ ಕೆನೆ ಜ್ಯಾಸ್ತಿ ಬಿದ್ದರೆ, ಆಕಾಶವೇ ಕಳಚಿ ಬಿದ್ದ ಹಾಗೆ ಆಡುವ ಜನ, ಪೀಜಾ, ಬರ್ಗರ್ ನಲ್ಲಿ ಇರುವ ಕ್ರೀಮ್ ತಿಂದು ತುಂಬಾ ಚೆನ್ನಾಗಿದೆ ಎಂದು ಹೋಗಳುತ್ತಾರೆ. ಮತ್ತೆ ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಇನ್ನೂ ತಲೆ ತಿನ್ನುತ್ತಾನೆ ಎಂದು ಬೇಗನೆ ಜಾಗ ಖಾಲಿ ಮಾಡಿದೆ.ಆಮೇಲೆ ತಿಳಿಯಿತು ಮಂಜ ತನ್ನ ಮಡದಿಯೊಂದಿಗೆ ಜಗಳ ಮಾಡಿಕೊಂಡು ಬಂದು ನನ್ನ ತಲೆ ತಿಂದಿದ್ದ ಎಂದು.&lt;/p&gt;&lt;br /&gt;&lt;p style="MARGIN: 0px 0px 10px"&gt;ಅವನಿಗೆ ನನ್ನ ಬರ್ತ್‌ಡೇ ಪುರಾಣ ಹೇಳೋಕೆ ಹೋಗಿ, ನನ್ನ ಬುರುಡೆಯಲ್ಲಿ ಹುಳ ಬಿಟ್ಟುಕೊಂಡು ಬಂದಿದ್ದೆ. ಅದಕ್ಕೆ ಇದನ್ನು ಬುರುಡೆ ಪುರಾಣ ಎಂದು ಅಂದಿದ್ದು....&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-6494415182944189870?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/6494415182944189870/comments/default' title='Post Comments'/><link rel='replies' type='text/html' href='http://haalusakkare.blogspot.com/2011/01/blog-post_11.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/6494415182944189870'/><link rel='self' type='application/atom+xml' href='http://www.blogger.com/feeds/3457141075796460701/posts/default/6494415182944189870'/><link rel='alternate' type='text/html' href='http://haalusakkare.blogspot.com/2011/01/blog-post_11.html' title='ಬುರುಡೆ ಪುರಾಣ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_sgKmwy5YbY0/TS_fkkBqB4I/AAAAAAAAAI0/C9wGYaoM0g0/s72-c/missile.JPG' height='72' width='72'/><thr:total>4</thr:total></entry><entry><id>tag:blogger.com,1999:blog-3457141075796460701.post-80237701814280263</id><published>2011-01-05T06:52:00.000-08:00</published><updated>2011-01-05T06:53:22.112-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಹೊಟ್ಟೆ ಕೆರೆಯ ಮೇಲಿನ ಕಟ್ಟೆ....</title><content type='html'>&lt;div&gt;ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರು. ಈಗ ನಾನು ಅವ್ರಿಗೆ ನಮಸ್ಕಾರ ಮಾಡಬೇಕೋ ಅಥವಾ ಅವರು ನನಗೆ ನಮಸ್ಕಾರ ಮಾಡಬೇಕೋ ಎಂಬುದು ಸೋಜಿಗದ ಸಂಗತಿ. ಕಡೆಗೆ ಅವರೇ ನನಗೆ ನಮಸ್ಕಾರ ಮಾಡಲು ಬಂದರು. ಅದಕ್ಕೆ ನನ್ನ ಅಮ್ಮ ಲೇ ಅವನು ದೊಡ್ಡವನು ಕಣೋ ನೀನೆ ನಮಸ್ಕಾರ ಮಾಡು ಎಂದು ಫರ್ಮಾನು ಹೊರಡಿಸಿದರು. ನಾನು ಮನಸಿನಲ್ಲಿ ಇದೊಳ್ಳೇ ಸಂಪ್ರದಾಯ ಎಂದು ಬಗ್ಗಿ ನಮಸ್ಕರಿಸಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಆಮೇಲೆ ನಾನು ಅಮ್ಮನಿಗೆ, ನಾನು ಯಾರಿಗೂ ನಮಸ್ಕಾರ ಮಾಡುವುದಿಲ್ಲ... ನನಗೆ ಯಾರು ಮಾಡುವುದು ಬೇಡ ಎಂದು ಹೇಳಿದೆ. ಅದು ಹೇಗೆ? ಆಗುತ್ತೆ ನೀನು ನಮಸ್ಕಾರ ಮಾಡಲೇ ಬೇಕು ಎಂದರು. ನಮಸ್ಕಾರ ಮಾಡಿ ಮಾಡಿ ಸಾಕಾಗಿತ್ತು. ಹೊಟ್ಟೆ ತಾಳ ಅನ್ನುವುದಕ್ಕಿಂತ ತಮಟೆ ಬಾರಿಸುತಿತ್ತು. ಕೆಲವೊಮ್ಮೆ ಹಸಿವು ಆದಾಗ ನಾದಮಯವಾಗಿ ಹಾಡುವುದು ಕೂಡ, ಸಧ್ಯ ಆಕಾಶವಾಣಿಯವರಿಗೆ ಗೊತ್ತಿಲ್ಲ. ಚಿಕ್ಕವನಿಗಿದ್ದಾಗ ಲೌಡ್ ಸ್ಪೀಕರ್ ಏನಾದರೂ ನುಂಗಿದ್ದೆ ಅಂತ ಕಾಣುತ್ತೆ. ಅಕ್ಕ ಪಕ್ಕದವರಿಗೂ ನನ್ನ ಹೊಟ್ಟೆ ಹಾಡಿದ್ದು ತಿಳಿಯುತ್ತೆ. ಎಲ್ಲರಿಗಿಂತ ಬೇಗನೆ ತಿಂಡಿಗೆ ಹೋಗಿ ನಿಂತೆ. 20 ಬಿಳಿ ಗುಳಿಗೆ (ಇಡ್ಲಿ) , ಎರಡು ಕೇಸರಿ ಬಾತ ತಿಂದೆ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲೇ ಇಲ್ಲ. ಹೊಟ್ಟೆ ತುಂಬಾ ಜಾಗ ಇರುವದರಿಂದ ಇಡ್ಲಿ, ಕೇಸರಿ ಬಾತ್ ಅಲ್ಲಿ.. ಇಲ್ಲಿ.. ಜೋಗಿಂಗ್ ಮಾಡುತ್ತಿರಬಹುದೋ ಏನೋ. ಮತ್ತೆ ಹೋಗಿ ಇಡ್ಲಿ ಎಂದೆ. ಅಲ್ಲಿ ಇಡ್ಲಿ ಹಾಕುವ ಮನುಷ್ಯ ಖಾಲಿ ಪಾತ್ರೆ ನೋಡಿ, ಎಲ್ಲ ಇಡ್ಲಿ ನಾನೇ ಖಾಲಿ ಮಾಡಿದ್ದೇನೋ ಎಂಬ ರೀತಿಯಲ್ಲಿ, ನನ್ನನ್ನು ದುರುಗುಟ್ಟಿ ನೋಡಿದ. ಮತ್ತೆ ಹತ್ತು ಇಡ್ಲಿ ತಂದು ಹಾಕಿದ. ಅದರಲ್ಲಿ ಒಂದು ಇಡ್ಲಿ ಮುರಿದಿತ್ತು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದು. ಇದೇನು ಸರ್ ಇಡ್ಲಿ ಯಾರೋ ತಿಂದಿರೋ ಹಾಗಿದೆ ಎಂದು ತಮಾಷೆ ಮಾಡಿದೆ. ಓ... ಅದಾ ತೆಗೆಯುವ ಸಮಯದಲ್ಲಿ ಮುರಿದಿದೆ ಎಂದು ನಗುತ್ತಾ ನಿಂತ. ನಾನು ಮತ್ತೊಂದು ಇಡ್ಲಿ ಹಾಕುತ್ತಾನೆ ಎಂದು ಎಣಿಸಿದರೆ ಹಾಕಲೆ ಇಲ್ಲ. ಮತ್ತೆ ಎರಡು ಲೋಟ ಕಾಫೀ ಕುಡಿದು ಜಾಗ ಖಾಲಿ ಮಾಡಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೇಗನೆ ಆರಕ್ಷತೆ, ಊಟ ಮುಗಿಸಿ ಟ್ರೈನ್ ಹತ್ತಿದೆ. ಟ್ರೈನ್ ಹೆಸರು ಜನಶತಾಬ್ದಿ ಅನ್ನುವುದಕ್ಕಿಂತಲೂ ಜನಾಹಿತಾಬ್ದಿ.. ಟ್ರೈನ್ ನಲ್ಲಿ ಐದೈದು ನಿಮಿಷಕ್ಕೆ ತಿಂಡಿ ಕಾಫೀ ಬರೋದು. ಆದರೂ ಈ ಬಾರಿ ಏನೂ? ತಿನ್ನಬಾರದು ಎಂದು ತೀರ್ಮಾನಿಸಿ ಬಂದಿದ್ದೆ. ಆದರೂ ಎಲ್ಲಾ ಸಪ್ಲೈಯರ್ ನನ್ನ ಹೊಟ್ಟೆ ನೋಡಿ, ಸರ್.. ಇಡ್ಲಿ ಬೇಕಾ?, ದೋಸೆ ಬೇಕಾ? ಎಂದು ಕೇಳುತ್ತಾ ಹೋಗುತ್ತಿದ್ದರು. ಬೇಡ.. ಬೇಡ.. ಎಂದು ಹೇಳಿ ಸಾಕಾಗಿ ಮತ್ತೆ ಹೊಟ್ಟೆ ತಾಳಮಯವಾಗಿ ನಾದ ಲಹರಿ ಶುರು ಮಾಡಿತ್ತು. ಪಕ್ಕದ ಸೀಟ್ ನಲ್ಲಿ ಇರುವ ಮನುಷ್ಯ ಎದ್ದು ಪಿಳಿ.. ಪಿಳಿ.. ಎಂದು ಅತ್ತ.. ಇತ್ತ.. ನೋಡಿ, ಮತ್ತೆ ಸುಮ್ಮನೇ ನಿದ್ದೆಗೆ ಜಾರಿದ. ಹೀಗೆ ಒಮ್ಮೆ ಪಕ್ಕದ ಮನೆಯ ಆಂಟಿ, ನನ್ನ ಹೊಟ್ಟೆ ಸಂಗೀತ ಕೇಳಿ, ನಲ್ಲಿಯಲ್ಲಿ ನೀರು ಬಂದಿದೆ ಎಂದು, ಕೊಡ ತೆಗೆದುಕೊಂಡು ಹೋಗಿ ನಿರಾಸೆಯಲ್ಲಿ ತೇಲುತ್ತ ಬಂದಿದ್ದರು ಪಾಪ...&lt;/div&gt;&lt;div&gt;&lt;br /&gt;&lt;/div&gt;&lt;div&gt;ಅಷ್ಟರಲ್ಲಿ ಹರಿಹರ ಸ್ಟೇಶನ್ ಬಂತು ನನ್ನ ಪಕ್ಕದ ಸೀಟ್ ಗೆ ಒಂದು ಸುಂದರ ಹುಡುಗಿ ಬಂದು ಕುಳಿತಳು. ನಾನು ಸುಮ್ಮನೇ ನಿದ್ದೆ ಮಾಡಿದರೆ ಆಗುತ್ತೆ ಎಂದು ನಿದ್ದೆ ಮಾಡಹತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಭುಜ, ಹೊಟ್ಟೆ ಸ್ಪರ್ಶಿಸಿದ ಹಾಗೆ ಅನ್ನಿಸಿತು. ಆಹಾ.. ಹುಡುಗಿ ಎಂದು ಸುಮ್ಮನೇ ಕಣ್ಣು ಮುಚ್ಚಿ ಮಲಗಿಕೊಂಡಿದ್ದೆ. ಮತ್ತೆ ಅದೇ ಮಿಸುಗಾಟ... ಕಡೆಗೆ ಕಣ್ಣು ತೆಗೆದೆ. ನನ್ನದೇ ತದ್ರೂಪ ಎಂದನಿಸಿ ಬಿಟ್ಟಿತು. ಆಮೇಲೆ ತಿಳಿಯಿತು ಅವರು ಆ ಹುಡುಗಿಯ ಅಪ್ಪ. ಅವರಿಬ್ಬರೂ ಸೀಟ್ ಚೇಂಜ್ ಮಾಡಿದ್ದಾರೆ ಎಂದು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಡೆಗೆ ಇನ್ನೂ ಈ ಸಂಗೀತ ಕೇಳಲು ಆಗುವುದಿಲ್ಲ ಎಂದು ಯೋಚಿಸಿ, ದೋಸೆ ತೆಗೆದುಕೊಂಡೆ. ಸಪ್ಲೈಯರ್ ದೋಸೆನಾ ಸ್ನ್ಯಾಕ್ ಟ್ರೇ ಬದಲು ಹೊಟ್ಟೆ ಮೇಲೆ ಇಟ್ಟು ದುಡ್ಡು ತೆಗೆದುಕೊಂಡು ಹೋದ. ಮತ್ತೆ ಇಡ್ಲಿ, ವೆಜಿಟೆಬಲ್ ಪಲಾವ್, ವೇಜ್ ಕಟ್ಲೇಟ್ ...ಕಾಫೀ,ಟೀ,ಟೊಮ್ಯಾಟೋ ಸೂಪ್ ಎಲ್ಲವೂ ಸ್ವಾಹ ಮಾಡಿದ್ದೆ. ಕಡೆಗೆ ಸಪ್ಲೈಯರ್ ನನ್ನನ್ನು ಕೇಳದೇ ಒಂದು ಪ್ಲೇಟ್ ಇಟ್ಟು ಹೋಗಿಬಿಡುತ್ತಿದ್ದ. ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಬಾಯಲ್ಲಿ ತುರುಕಿ, ಕಿಸಿಯಿಂದ ದುಡ್ಡು ತೆಗೆದುಕೊಂಡು ಹೋಗುವ ಆಸಾಮಿ...&lt;/div&gt;&lt;div&gt;&lt;br /&gt;&lt;/div&gt;&lt;div&gt;ಮತ್ತೆ ಹಲವು ಬಾರಿ ನನ್ನ ಮಡದಿಗೆ ಊಟದ ಸಮಯದಲ್ಲಿ, ನಾನು ಸಂಜೆಗೆ ತಿಂಡಿ ಏನೇ? ಎಂದು ಕೇಳಿದ್ದು ಇದೆ. ಅದಕ್ಕೆ ನನ್ನ ಮಡದಿ ಮುಸುರಿ ಕೈ ಎಂದು ಯೋಚಿಸದೇ ಹಣಿ.. ಹಣಿ.. ಗಟ್ಟಿಸಿ ಕೊಳ್ಳುತ್ತಾಳೆ. ಇದಕ್ಕೆ ಇರಬೇಕು ನನ್ನ ಮಡದಿ ನಿಮ್ಮ "ಹೊಟ್ಟೆ ಕೆರೆಯ ಮೇಲಿನ ಕಟ್ಟೆ" ಎಂದು ಅನ್ನುತ್ತಿದಿದ್ದು. ಮತ್ತೆ ಅಮ್ಮ ನೀನು "ಕಸಾ ತಿನ್ನುವವನು, ನಿನಗೆ ತುಸಾ ಏನು ಈಡು" ಎಂದು ಹೇಳುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮತ್ತೆ ಬೆಂಗಳೂರು ಸ್ಟೇಶನ್ ಬಂತು. ಮನೆಗೆ ಹೋದವನೆ ಬಹಿರ್ದೇಸೆಗೆ ಹೋಗಬೇಕು ಎಂದು ಅಂದುಕೊಂಡಾಗ, ಮಗ ಟು.. ಟು.. ಎಂದ, ನಾನು ಆಯಿತು ಎಂದು, ಅವನ ಚಡ್ಡಿ ಕಳೆಯುತ್ತಿದ್ದೆ. ಅಷ್ಟರಲ್ಲಿ ನನ್ನ ಮಡದಿ ರೀ ಅವನು ನಿಮ್ಮ ಜೊತೆ ಚಾಳಿ ಬಿಟ್ಟಿದ್ದಾನೆ ಎಂದು ಹೇಳುತ್ತಿದ್ದಾನೆ ಎಂದಳು. ಕಡೆಗೆ ಸರಾಗವಾಗಿ ನನ್ನ ಕೆಲಸ ಮಾಡಿ ಬಂದು ಮತ್ತೆ ಊಟಕ್ಕೆ ಹಾಜಾರ್ ಆದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅದೇನೋ ಗೊತ್ತಿಲ್ಲ, ದೇವರು ನನಗೆ ಸಾಕಷ್ಟು ತಿನ್ನ'ಲಿ' ಎಂಬ 'ವರ' ಕೊಟ್ಟು ಈ "ಲಿವರ್" ಕರುಣಿಸಿದ್ದಾನೋ ಗೊತ್ತಿಲ್ಲ... ಇನ್ನೂ ಡೌಟ್ ಪಡುವ ಅವಶ್ಯಕತೆ ಇಲ್ಲ. ಇಷ್ಟೊತ್ತು ನಿಮ್ಮ ತಲೆ ತಿಂದಿದ್ದೇನೆ...ಆದರೂ ಹೊಟ್ಟೆಯಲ್ಲಿ ಸ್ವಲ್ಪ ತಾಳ ಹಾಕುತ್ತಿದ್ದೆ, ಮತ್ತೇನಾದರೂ ಸಿಗುತ್ತಾ ಎಂದು ಫ್ರಿಡ್ಜ್ ತೆಗೆದೆ....&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-80237701814280263?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/80237701814280263/comments/default' title='Post Comments'/><link rel='replies' type='text/html' href='http://haalusakkare.blogspot.com/2011/01/blog-post_05.html#comment-form' title='5 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/80237701814280263'/><link rel='self' type='application/atom+xml' href='http://www.blogger.com/feeds/3457141075796460701/posts/default/80237701814280263'/><link rel='alternate' type='text/html' href='http://haalusakkare.blogspot.com/2011/01/blog-post_05.html' title='ಹೊಟ್ಟೆ ಕೆರೆಯ ಮೇಲಿನ ಕಟ್ಟೆ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-3457141075796460701.post-1026533567234577488</id><published>2010-12-29T06:42:00.000-08:00</published><updated>2010-12-29T06:44:29.551-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಸೀರೀಯಸ್‌ನೆಸ್ ....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು. ಇದನ್ನು ಮೊದಲನೆ ಬಾರಿ ಹೇಳಿದ್ದರೆ ಸ್ವಲ್ಪ ಸೀರೀಯಸ್ ಆಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇದು ಎಷ್ಟನೆ ಬಾರಿ ಎಂಬುದು ನನಗೆ ತಿಳಿದಿಲ್ಲ...ಅದಕ್ಕೆ ಅಂತ ಒಂದು ಕಂಪ್ಯೂಟರ್ ನೇಮಿಸಿದರು ಲೆಕ್ಕ ಸಿಗುವುದಿಲ್ಲ. ಮೊದ ಮೊದಲು ಅಪ್ಪ ಕೂಡ ಇದನ್ನೇ ಹೇಳುತ್ತಿದ್ದರು. "ಲೇ ಕತ್ತೆ ಅಷ್ಟು ವಯಸ್ಸು ಆಯಿತು, ಯಾವಾಗೆ ಬರುತ್ತೋ ಸೀರೀಯಸ್‌ನೆಸ್" ಅಂತ. ಅದೇನೋ ಗೊತ್ತಿಲ್ಲ ಇಂತಹ ಅಪವಾದಕ್ಕೆ ನಾನು ಗುರಿಯಾಗುತ್ತೇನೋ ಅಥವಾ ಅಪವಾದ ನನ್ನನ್ನು ಗುರಿ ಮಾಡಿ ಕೆಲಸ ಮಾಡುತ್ತೋ ಇದುವರೆಗೂ ಅರಿಯದ ಸಂಗತಿಯಾಗಿದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಆದರೂ ಹೆಂಡತಿ ಹೇಳಿದ್ದು ನನಗೆ ಸರಿ ಬರಲಿಲ್ಲ. ಏಕೆ? ಎಂದರೆ ಸೀರೆ + ಎಸ್(Yes) + ನೆಕ್ಸ್ಟ್(Next ಏನು? ಬೇಕು ಹೇಳು) {ಸೀರೀಯಸ್‌ನೆಸ್} ಎಷ್ಟು ಬಾರಿ ತೋರಿಸಿಲ್ಲ. ಇದು ಅನ್ಯಾಯ ಅಲ್ಲವೇ...?. .ಈ ಸೀರೀಯಸ್‌ನೆಸ್ ಎಲ್ಲಿಯಾದರೂ ಕೆ.ಜಿ ಅಥವಾ ಲೀಟರ್ ಲೆಕ್ಕದಲ್ಲಿ ಕೊಳ್ಳಲು ಸಿಗುತ್ತಾ ಎಂದು ಅಂತರ್ಜಾಲ ಪೂರ್ತಿ ತಡಕಾಡಿದೆ. ಅದನ್ನು ಮಾರುವವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಬೇಡವೇ, ಅದರ ಜಾಹೀರಾತು ಹಾಕಬೇಕು ಎಂದು. ಕಡೆಗೆ ಸಿಗಲೇ ಇಲ್ಲ...:-(.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಾನು ಅರಿತ ಪ್ರಕಾರ ಸೀರೀಯಸ್‌ನೆಸ್ ಕಂಡಿದ್ದು ಬರಿ ಪೇಶೆಂಟ್ ಗಳಲ್ಲಿ ಮಾತ್ರ, ಅದು ಡಾಕ್ಟರ್ ಗೆ ಕೂಡ ಇರುತ್ತೆ, ಏಕೆಂದರೆ? ಅಂತವರನ್ನು ಅವರು ಗುಣ ಪಡಿಸುತ್ತಾರಲ್ಲ ಅದಕ್ಕೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನನಗೆ ಚಿಕ್ಕಂದಿನಿಂದಲೂ ಎಲ್ಲ ವಿಷಯಗಳನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುವ ಸ್ವಭಾವ. ಅದೇ "ಹುಟ್ಟಿದ ಗುಣ, ಸುಟ್ಟರೂ ಹೋಗುವುದಿಲ್ಲ" ಅನ್ನುತ್ತಾರೆ ಹಾಗೆ. ಅದು ಇನ್ನೂ ಹಾಗೆ ಇದೆ. ನನ್ನ ಸದಾ ನಗು ಮುಖ ಇರುವದರಿಂದ, ನನ್ನ ಒಬ್ಬ ಗೆಳೆಯ ಅದಕ್ಕೆ ನನ್ನನ್ನು ಹಸ್ಮುಖ ಎಂದು ಹೇಳುತ್ತಿದ್ದ ( ಗೋಪಾಲ್ ನಾಮಧೇಯಕ್ಕೆ ಅನುಗುಣವಾಗಿ ಹಸುವಿನ ಹಾಗೆ ಇರುವ ಮುಖ ಎಂದು ಭಾವಿಸಿರಲಿಲ್ಲ ಎಂದು ಅಂದುಕೊಂಡಿದ್ದೇನೆ). ನನ್ನ ಮದುವೆ ಸಮಯದಲ್ಲಿ, ಅದೇ ಗೆಳೆಯ ಈಗಾದರೂ ಸಲ್ಪ ಗಂಭೀರವಾಗಿ ಇರುವದನ್ನು ಕಲಿ ಎಂದು ತಿಳುವಳಿಕೆ ಅನುಗ್ರಹಿಸಿದ. ಅದು ಹೇಗೆಂದು ನನಗೆ ಅರ್ಥ ಆಗಲಿಲ್ಲ. ಮುಖ ಗಂಟಿಕ್ಕಿ ಮದುವೆ ಮಾಡಿಕೊಳ್ಳುವುದೇ ಎಂದು ಯೋಚಿಸಿದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;"ಅಳುವ ಗಂಡನ್ನು ನಂಬಬಾರದು ಮತ್ತೆ ನಗುವ ಹೆಣ್ಣನ್ನು " ಎಂಬ ಗಾದೆ ಇದೆ. ನನ್ನ ನಗುವಿಗೆ ಒಬ್ಬ ಹುಡುಗಿ ಸಾತ್ ನೀಡಿದ್ದಳು. ಇವನಿಗೆ ಯಾವ ಸುಂದರಿ ಸಾತ್ ನೀಡಿದಳು,ಎಲ್ಲೋ ಪ್ರಾಣಿಸಂಗ್ರಹಾಲಯದಲ್ಲಿ ಇರಬಹುದು ಎಂದು ಅಂದುಕೊಂಡಿರ...ಸತ್ಯವಾಗಿ ಒಳ್ಳೇ ಸರಳ ಸಹಜ ಸುಂದರಿ.. ನಮ್ಮ ಮಂದಹಾಸ ಮಧುರವಾಗಿ ಬಹಳ ದಿನ ನಡೆದಿತ್ತು. ಅದೇನೋ ದೊಡ್ಡವರು ಅನ್ವೇಷಿಸಿದ ಗಾದೆಗೆ ವಿರುದ್ಧವಾಗಿ ನಡೆದರೆ ದೊಡ್ಡವರು ಬಿಡುತ್ತಾರೆಯೇ...ತಮ್ಮ ಗಾದೆ ಸತ್ಯವಾಗಿರಿಸಿ, ನನ್ನನ್ನು ಆ ಹುಡುಗಿಯ ತ'ಗಾದೆ'ಗೆ ಬರದಂತೆ ನೋಡಿಕೊಂಡರು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನನ್ನ ಒಬ್ಬ ಗೆಳೆಯನಿಗೆ ಎಲ್ಲರಿಗಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿದ್ದರು. ಮದುವೆ ಸಮಯದಲ್ಲಿ, ಅವರ ಅಪ್ಪ ನನಗೆ, ನೋಡು ಈಗ ನನ್ನ ಮಗ ದಾರಿಗೆ ಬರುತ್ತಾನೆ. ಮೊದಲೇ ಉಡಾಳ್.. ಈಗ ಸ್ವಲ್ಪ ಸೀರೀಯಸ್‌ನೆಸ್ ಬರುತ್ತೆ ಎಂದರು. ಮದುವೆ ಆದ ಮೇಲೆ ಸೀರೀಯಸ್‌ನೆಸ್ ಬಂತೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದೇ ವರ್ಷದಲ್ಲಿ ಅವನಿಗೆ ಅವಳಿ-ಜವಳಿ ಎರಡು ಮಕ್ಕಳು ಮಾತ್ರ ಬಂದವು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಒಮ್ಮೆ ಮೈಸೂರಿನಲ್ಲಿ ಇರುವಾಗ, ಅಲ್ಲಿ ಕೆಲಸ ಮಾಡುವ ಒಬ್ಬ ಅಕೌಂಟೆಂಟ್ ಬಂದು ಏನ್ರೀ? ಮಿಲ್ಕ್ ಬಿಲ್ಲು ತಪ್ಪಾಗಿ ಬಂದಿದೆ ಎಂದರು. ನಾನು ನಗುತ್ತಾ ಅಷ್ಟೇನಾ? ಎಂದೆ. ಅಷ್ಟಕ್ಕೇ ಅಪಾರ್ಥ ಮಾಡಿಕೊಂಡು ಹೋಗಿ ಮ್ಯಾನೇಜರ್ ಗೆ ಗೋಪಾಲ್ ಅವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಇಲ್ಲ ಎಂದು ಕಂಪ್ಲೇಂಟ್ ಮಾಡಿದ್ದರು. ಆಮೇಲೆ ಮ್ಯಾನೇಜರ್ ನನ್ನ ಮೇಲೆ ತಮ್ಮ ಅಧರದಿಂದ ಮಳೆ ಸುರಿಸಿ ಕಳುಹಿಸಿದ್ದರು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಅಲ್ಲಿಯ ಮ್ಯಾನೇಜರ್ ನನಗೆ ಒಂದು ಕೆಲಸ ಮಾಡಲು ಹೇಳಿದರು ಮತ್ತು ಅದಕ್ಕೆ ಎಷ್ಟು ದಿವಸ ಬೇಕು ಎಂದು ಕೇಳಿದರು. ನಾನು ನಗುತ್ತಾ ಎರಡು ದಿವಸ ಎಂದೆ. ಅದಕ್ಕೆ ಆ ಮನುಷ್ಯ ಅದು ಕಡಿಮೆ ಆಯಿತು ಎಂದು ತಿಳಿದನೋ ಅಥವಾ ಜ್ಯಾಸ್ತಿಯೋ ತಿಳಿಯಲಿಲ್ಲ. ಮತ್ತೆ ಎರಡು ದಿವಸ ಎಂದು ಕೇಳಿದರು. ಅದಕ್ಕೆ ನಾನು ಒಂದು ಎಂದೆ. ಮತ್ತೆ ಅವರು ಒಂದು ದಿವಸ ಎಂದು ಕೇಳಿದರು. ನಾನು ಅರ್ಧ ದಿವಸ ಎಂದೆ. ಏಕೆಂದರೆ ನಾನು ನನ್ನ ಮೇಲಿನ ನಂಬಿಕೆಗಿಂತ ನನ್ನ ಪ್ರೀತಿಯ ಶ್ರೀ ರಾಮನ ಮೇಲೆ ಇರುವ ಅಪಾರ ನಂಬಿಕೆಯಿಂದ(ನೆಡೆಸುವವನು ಅವನು ತಾನೇ).... ಮತ್ತೆ ಅರ್ಧ ದಿವಸ ಎಂದರು. ಈಗಲೇ ಮಾಡಿ ಕೊಡುತ್ತೇನೆ ಎಂದೆ. ಅದೇನೋ ಗೊತ್ತಿಲ್ಲ ನನ್ನ ಜೊತೆ ಜಗಳವಾಡಿ ಹೊರಟು ಹೋದರು. ಮತ್ತೆ ಅದನ್ನು ಎರಡು ದಿನಗಳಲ್ಲಿ ಪೂರ್ತಿ ಗೊಳಿಸಿ ಅವರಿಗೆ ಹೇಳಿದ್ದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಹಾಗೆಂದು ನನಗೆ ಸೀರೀಯಸ್‌ನೆಸ್ ಇಲ್ಲವೇ ಇಲ್ಲ ಎಂದು ಅಲ್ಲ...ನನಗೆ ತಿಂದಿದ್ದು ಅಜೀರ್ಣ ಆಗಿ ದಾರಿತಪ್ಪಿದಾಗ ಮಾತ್ರ ಸ್ವಲ್ಪ ಸೀರೀಯಸ್‌ನೆಸ್ ತಾನಾಗೇ ಬರುತ್ತೆ.&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1026533567234577488?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1026533567234577488/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_29.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1026533567234577488'/><link rel='self' type='application/atom+xml' href='http://www.blogger.com/feeds/3457141075796460701/posts/default/1026533567234577488'/><link rel='alternate' type='text/html' href='http://haalusakkare.blogspot.com/2010/12/blog-post_29.html' title='ಸೀರೀಯಸ್‌ನೆಸ್ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-1943772517105974633</id><published>2010-12-28T06:51:00.000-08:00</published><updated>2010-12-28T06:53:02.857-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ. ಬರುತ್ತಾ ಸ್ವಲ್ಪ ಸೀಬೆ ಹಣ್ಣು, ಕಾಯಿ ಪಲ್ಯ, ಟೊಮೇಟೊ, ಈರುಳ್ಳಿ ಇದ್ದರೆ ತೆಗೆದುಕೊಂಡು ಬನ್ನಿ ಎಂದಳು. ದುಡ್ಡು ಏನು? ಮೇಲಿಂದ ಉದುರುತ್ತಾ ಎಂದು ಕೇಳಿದೆ. ಕಾಡಿನಲ್ಲಿ ಹಾಗೆ ಬೆಳೆದಿರುತ್ತೆ ಕಿತ್ತು ಕೊಂಡು ಬನ್ನಿ ಎಂದಳು. ಲೇ.. ನಾನು ಮೊಬೈಲ್ ಬಿಲ್ಲು ಕಟ್ಟೋಕೆ ಕೇಳಿದ್ದು ದುಡ್ಡು ಎಂದೆ. ಕಾಡಿನಲ್ಲಿ ನೆಟ್‌ವರ್ಕ್ ಇರೋದು, ಅಷ್ಟಕ್ಕೇ.. ಅಷ್ಟೇ...ಮತ್ತೆ ಏಕೆ? ಬೇಕು ನಿಮಗೆ ಮೊಬೈಲ್ ಎಂದು ಹೇಳಿದಳು. ಅಷ್ಟರಲ್ಲಿ ಹಾಲು ಉಕ್ಕುತ್ತಾ ಇದೆ ಎಂದು ಹೇಳಿ, ಗಡಬಡಿಸಿ ಅಡುಗೆ ಮನೆಗೆ ಹೊರಟು ಹೋದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮತ್ತೆ ಕೆಲ ಸಮಯದ ನಂತರ ಕಾಫೀ ಕಪ್ ಜೊತೆ ಹಾಜರ ಆಗಿ, ನೋಡಿ ನಿಮ್ಮಿಂದ ಎಷ್ಟೊಂದು ಹಾಲು ಉಕ್ಕೀತು ಎಂದು ಬೈದಳು. ಹಾಲು ಉಕ್ಕಿದರೆ ಯಾರಾದರೂ ಸಂಭಂಧಿಗಳು ಮನೆಗೆ ಬರುತ್ತಾರೆ ರೀ.. ಎಂದಳು. ನಿನ್ನ ಕಡೆ ದುಡ್ಡು ಇದ್ದರೆ ಕೊಡು, ನನಗೆ ಮೊಬೈಲ್ ಬಿಲ್ಲು ಕಟ್ಟಬೇಕು ಎಂದೆ. ನನ್ನ ಹತ್ತಿರ ದುಡ್ಡು ಇಲ್ಲ, ನೀವೇ ಏನಾದರೂ ಮಾಡಿ ಎಂದಳು. ಮತ್ತೆ ಇನ್ನೊಮ್ಮೆ ನನ್ನ ಕೇಳದೇ, ನನ್ನ ಮೊಬೈಲ್ ಮುಟ್ಟಬೇಡ ಎಂದೆ. ನೀವು ವರ್ಷಕ್ಕೆ ಒಂದೇ ಸಾರಿ ತವರುಮನೆಗೆ ಕಳುಹಿಸಿದರೆ ನಾನೇನು ಮಾಡಬೇಕು. ಅದಕ್ಕೆ ದಿವಸ ಫೋನ್ ಮಾಡಿ ಮಾತಾಡುತ್ತೇನೆ ಎಂದಳು.ಮತ್ತಿನ್ನೇನು ತಿಂಗಳಿಗೆ ಒಂದು ಬಾರಿ ಹೋಗಬೇಕೆಂದಿರುವೆ ಏನು? ಎಂದೆ. ಈ ಬಿಲ್ ದುಡ್ಡಿನಲ್ಲಿ ನಾವು ಮೂರು ಬಾರಿ ನಿಮ್ಮ ಊರಿಗೆ ಹೋಗಿ ಬರಬಹುದಿತ್ತು ಎಂದೆ. ಈ ಬಾರಿ ಹೋಗಬೇಕಾದರೆ ನೀವು ಬನ್ನಿ ಎಂದಳು. ಲೇ..ss ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಎಂದೆ. ನೀವು ಏಕೆ ಬರಲ್ಲ, ಅದು ಹೇಳಿ ಎಂದಳು. ನಿನ್ನನ್ನ ಎಲ್ಲರೂ ಪುಟ್ಟಿ... ಪುಟ್ಟಿ.. ಎಂದು ಕರೆದರೆ ನನಗೆ ಕೆಟ್ಟ ಕೋಪ ಬರುತ್ತೆ ಎಂದೆ. ಅದಕ್ಕೇನೀಗ, ನನಗೆ ಪ್ರೀತಿಯಿಂದ ಹಾಗೆ ಕರೆಯುತ್ತಾರೆ ಅಷ್ಟೇ ಎಂದಳು. ಲೇ.. ಅದು ಅಲ್ಲ ನಿಮ್ಮ ಕಾಕ ನನಗೆ "ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ" ಎಂದು, ನನ್ನ ಹೊಟ್ಟೆ ನೋಡಿ ನಗುತ್ತಾ ನಿಂತರೆ ನನಗೆ ಕೋಪ ಬರುವದಿಲ್ಲವೇ ಎಂದೆ. ಓss.. ಅವರಾ.. ಅವರು ತುಂಬಾ ತಮಾಷೆಯ ಮನುಷ್ಯ, ವಾಮನ ಕಾಕ ದೂರದ ಸಂಭಂಧಿ. ಮತ್ತೆ ತಲೆ ನೋಡಿ ಮಕ್ಕಳಿಗೆ, ಇಲ್ಲೊಂದು ಜಾರು ಬಂಡೆ ಇದೆ ನೋಡಿ ಎಂದು ಹೇಳಿದರೆ ಎಂದು ಕೇಳಿದೆ. ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ತಮಾಷೆ ಮಾಡೋಕೆ ಒಂದು ಮಿತಿ ಬೇಡ ಏನೇ? ಮತ್ತೆ ನನ್ನ ಲ್ಯಾಪ್‌ಟಾಪ್ ನೋಡಿ, ಎಲ್ಲರ ಮುಂದೆ ಅಳಿಯಂದಿರು ಯಾವತ್ತೂ ಚಿಕ್ಕ ಟಿ ವಿ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಾರೆ ಎಂದು ಎಲ್ಲರಿಗೂ ಹೇಳಿದರೆ. ಮತ್ತೆ ನಾನು ಅಷ್ಟೇ ಮೊದಲು ರೇಡಿಯೋ ತೆಗೆದುಕೊಂಡು ಹೋಗುತ್ತಿದ್ದೆ ಎಂದೆಲ್ಲ ಹೇಳುವರು. ನಾನು ಪಾಪ ಅವರಿಗೆ ಏನೋ ಗೊತ್ತಿಲ್ಲ ಎಂದು ತಿಳಿಸಲು ಹೋದರೆ, ಎಲ್ಲರ ಎದಿರೂ ಇವೆಲ್ಲವೂ ಅಳಿಯಂದಿರ ಪೈಲ್ಸ್ (piles) ಎಂದು ತೋರಿಸಿ ನಕ್ಕರೆ ಕೋಪ ಬರುವದಿಲ್ಲವೇ ಎಂದೆ. ಮತ್ತೆ ನಿಮ್ಮ ಇಯರ್ ಫೋನ್ ಕೊಡಿ ಸ್ವಲ್ಪ ಮಾತಡಬೇಕು ಎಂದರೆ ಏನು ಹೇಳುವುದು ಎಂದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಗುಡುಗು ಮಿಂಚಿನ ಮಳೆ ಶುರು ಆಯಿತು. ನನಗೆ ಯಾರಾದರೂ ಚಿರಾಪುಂಜಿ ಎಲ್ಲಿ? ಇದೆ ಎಂದು ಕೇಳಿದರೆ. ನಾನು ಹೇಳುವದು ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎಂದು. ಒಂದು ಮಳೆ ಇರುತ್ತೆ ಇಲ್ಲ ಚಿರಾಪುಂಜಿ ...ಚೀರಾಟದ ಪುಂಜಿ ಆಗಿರುತ್ತೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ ಬಂತು. ಬಾಗಿಲು ತೆಗೆದೆ ಎದುರಿಗೆ ವಾಮನ ಮೂರ್ತಿ ನನ್ನ ಮಡದಿಯ ಕಾಕ ಎದುರಿಗೆ ಉದ್ಭವವಾಗಿದ್ದರು. ನಾನು ಏನು ಹೇಳಬೇಕೋ ತಿಳಿಯದಾಗಿತ್ತು. ಇಲ್ಲಿ ಬಾರೆ ಯಾರೋ.. ಅನ್ನುವ ಬದಲು ಯಾರು ಬಂದಿದ್ದಾರೆ ಎಂದು ಸುಧಾರಿಸಿ ಹೆಂಡತಿಗೆ ಉಲಿದೆ. ಅಳುವುದನ್ನು ನಿಲ್ಲಿಸಿ, ಓ... ಕಾಕ ಎಂದು ಬಂದು ನಮಸ್ಕರಿಸಿದಳು. ನೀವು ನಮಸ್ಕಾರ ಮಾಡಿ ಎಂದು ನನಗೆ ಹೇಳಿದಳು. ಅಷ್ಟರಲ್ಲಿ ಅವಳ ಕಾಕ ತನ್ನ ಕಾಗೆ ಬಾಯಿಂದ ಹೋಗಲಿ ಬಿಡು ಪುಟ್ಟಿ ಪಾಪ ಅಳಿಯಂದಿರ ಹೊಟ್ಟೆ ಅವರನ್ನು ಬಗ್ಗೋಕೆ ಬಿಡಲ್ಲ ಎಂದರು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಇನ್ನೂ ಏನೇನು ಕಾದಿದೆಯೋ ಆ ಭಗವಂತನೇ ಬಲ್ಲ....&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;***************************************************************************************************************&lt;br /&gt;ಎಲ್ಲರಿಗೂ ಹೊಸ ವರ್ಷದ ಪ್ರತಿ ಕ್ಷಣ ಸುಖ... ಶಾಂತಿ(ಹುಡುಗಿಯ ಹೆಸರು ಅಲ್ಲ...).... ನೆಮ್ಮದಿ ತರಲಿ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಆಶಿಸುತ್ತಾ..&lt;br /&gt;ನಿಮ್ಮೆಲ್ಲರ ಪ್ರೀತಿಯ ಗೋಪಾಲ್ . ಮಾ. ಕುಲಕರ್ಣಿ.... ನನ್ನ ಹೆಂಡತಿ (ಹೆಂಡ ಶಬ್ದ ಕೇಳಿದರೆ ಉರಿದು ಬೀಳುತ್ತಾಳೆ) ಕ್ಷಮಿಸಿ ... ಮಡದಿ ತಪ್ಪಾಗಿ ತಿಳಿಯಬಾರದು ಎಂದು,&lt;br /&gt;ಮತ್ತೊಮ್ಮೆ ಪ್ರೀತಿಯ(ಹುಡುಗಿಯ ಹೆಸರು ಅಲ್ಲ...) ಗೋಪಾಲ್ . ಮಾ. ಕುಲಕರ್ಣಿ :-):-)...&lt;br /&gt;****************************************************************************************************************&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1943772517105974633?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1943772517105974633/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_28.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1943772517105974633'/><link rel='self' type='application/atom+xml' href='http://www.blogger.com/feeds/3457141075796460701/posts/default/1943772517105974633'/><link rel='alternate' type='text/html' href='http://haalusakkare.blogspot.com/2010/12/blog-post_28.html' title='ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-2985322466367178361</id><published>2010-12-25T07:02:00.000-08:00</published><updated>2010-12-25T07:04:22.807-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ನೋಡಿ ಕಲಿತಿರುವ ನೀತಿ ಪಾಠ....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮಡದಿಗೆ ಕಾಫೀ ಕೊಡು ಎಂದು ಹೇಳಿದೆ. ಪೇಪರ್ ಓದುತ್ತಾ ಕುಳಿತಿದ್ದ ನಾನು ಏನೇ? ಈರುಳ್ಳಿ ಬೆಲೆ ಗಗನಕ್ಕೆ ಏರಿದೆ ಅಲ್ಲೇ... ಎಂದೆ. ಭೂಮಿ ಕೆಳಗಡೆ ಬೆಳೆಯುವ ವಸ್ತುವಿಗೆ ಇಷ್ಟು ದುಬಾರಿ ಆದರೆ... ಇನ್ನೂ ಭೂಮಿ ಮೇಲೆ ಬೆಳೆಯುವ ಪದಾರ್ಥಗಳ ಗತಿ ಏನು ಎಂದೆ. ಖರ್ಚು ನೀಗಿಸುವ ಮೊದಲೇ ನಾನು ಭೂಮಿಯ ಒಳಗಡೆ ಹೋಗಿ ಕುಳಿತುಕೊಳ್ಳಬೇಕಾಗುತ್ತೆ ಎಂದೆ. ಯಾವುದೋ ವಿಷಯಕ್ಕೆ ಕೋಪ ಮಾಡಿಕೊಂಡಿದ್ದ ನನ್ನ ಮಡದಿ. ಹಾಗೆ ಆಗಬೇಕು ನಿಮಗೆ, ಇಷ್ಟು ದಿವಸ ನಮ್ಮನ್ನು ಅಳಿಸುತ್ತಿದ್ದಿರಿ, ಈಗ ನಿಮ್ಮ ಬಾರಿ ಎಂದಳು. ಈ ತಿಂಗಳಿಂದ ನಿನಗೆ ಐದು ನೂರು ಎಕ್ಸ್‌ಟ್ರಾ ಪಾಕೆಟ್ ಮನಿ ಕೊಡಬೇಕು ಎಂದು ಕೊಂಡಿದ್ದೆ. ಆದರೆ ಈಗ ನನ್ನ ಪರ್ಸ್ ಮಾರಿ ಈರುಳ್ಳಿ ತೆಗೆದುಕೊಳ್ಳುವ ಪರಿಸ್ತಿತಿ ಎಂದು ಹೇಳಿದೆ. ಹಾ... ಏನು?.. ಏನಂದ್ರಿ?.. ಎಂದು ಬಾಯಿ ತೆಗೆದು ಹೊರಗಡೆ ಬಂದು, ಹೌದು ನೋಡಿ ತುಂಬಾ ಕಷ್ಟ... ಕಷ್ಟ.. ಎಂದು ನನ್ನ ಕಷ್ಟಕ್ಕೆ ಸಾತ್ ನೀಡಿಡಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅದಕ್ಕೆ ಇದನ್ನು ಸ್ವರ್ಣ ಗಡ್ಡೆ ಅನ್ನುವದು ಎಂದು ಹೇಳಿದಳು. ಸ್ವರ್ಣದ ಸ್ಪರ್ಧೆಗೆ ನಿಂತಿದೆ ಎಂದು ಕಾಣುತ್ತೆ ಎಂದಳು. ಇದು ಒಳ್ಳೇ ಕತೆ ಆಯಿತು, ಹುಲಿಗೂ ಬೆಕ್ಕಿಗೂ ಸ್ಪರ್ಧೆ ಹಾಗೆ ಎಂದು ಹಣಿ ... ಹಣಿ.. ಗಟ್ಟಿಸಿದೆ. ಮತ್ತೆ ಇದರ ಹೆಸರೇ ಸೂಚಿಸುವ ಹಾಗೆ ಇದನ್ನು ಕೇವಲ ಉಳ್ಳವರು ಮಾತ್ರ ಕೊಳ್ಳಬಹುದು. ಅದಕ್ಕೆ ಇದನ್ನು ಉತ್ತರ ಕರ್ನಾಟಕದ ಜನ ಉಳ್ಳಗಡ್ಡೆ ಎಂದು ಹೇಳುತ್ತಾರೆ ಎಂಬ ತನ್ನ ಅಪಾರ ಬುದ್ಧಿ ಮತ್ತೆ ಪ್ರದರ್ಶಿಸಿದಳು. ಮತ್ತೆ ಗೊತ್ತಾ? ಇದನ್ನು ಕೆಲ ಜನ ಕೃಷ್ಣ ಗಡ್ಡೆ ಎಂದು ಕೂಡ ಕರೆಯುತ್ತಾರೆ. ನಾನು ಕೃಷ್ಣ ಗಡ್ದೆ ಎಂದೆ. ಹಾ... ಹೌದು.. ರೀ... ಇದರ ಒಳಗಡೆ ಇರುವ ಚಕ್ರ ನೋಡಿದರೆ ಥೇಠ್ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇದೆ ಇಲ್ಲವ ಅದಕ್ಕೆ. ಚಕ್ರವ್ಯೂಹ ಭೇಧಿಸುವ ವಿದ್ಯೆ ಶ್ರೀ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು ಅದಕ್ಕೆ. ನಾನು ಹಾಗದೆರೆ ನಾವು ಈಗ ಒಳಗೆ ಸಿಕ್ಕಿ ಕೊಂಡು ಒದ್ದಾಡುವ ಸ್ತಿತಿ ಎಂದೆ. ಮತ್ತೆ ಅದನ್ನು ಹೆಚ್ಚಿದ ಮೇಲೆ ನಿಮಗೆ ಅದು ಚಕ್ರ.. ಚಕ್ರ.. ಆಗಿರುವದರಿಂದ ಸುದರ್ಶನ ಚಕ್ರಕ್ಕೆ ಹೋಲಿಸಿ ಕೃಷ್ಣ ಗಡ್ಡೆ ಅನ್ನುವರು ಎಂದು ತನ್ನ ಬುದ್ಧಿ ಮತ್ತೆಗೆ ಸ್ವಲ್ಪ ಒಗರಣೆ ಹಾಕಿದಳು. ಇಷ್ಟೆಲ್ಲಾ ಕತೆ ಹೇಳಿ ಮುಗಿದ ಮೇಲೆ ಮಡದಿ ಅಡುಗೆ ಮನೆಗೆ ಹೊರಟು ಹೋದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಆಗ ಸುರೇಶನಿಗೆ ನೋಡಪ್ಪ ಮದುವೆ ಆದರೆ ಇಷ್ಟೆಲ್ಲಾ ಕೇಳಬೇಕುಗುತ್ತೆ. ಇದಕ್ಕೆ ನೀನು ರೆಡೀ ಇದ್ದರೆ ಅದು ನಿನ್ನ ಕರ್ಮ ಎಂದೆ. ಮತ್ತೆ ಕೌನ್ ಬನೇಗ ಕರೋಡ್ ಪತಿಯಲ್ಲಿ ಕೂಡ ನಾಲ್ಕು ಲೈಫ್ ಲೈನ್ ಇರುತ್ತೆ ಆದರೆ ಇಲ್ಲಿ ಇರುವದು ಒಂದೇ ಲೈಫ್... ಅದುವೇ ನಿನ್ನ ವೈಫ್... , ಆಮೇಲೆ ನಿನ್ನ ಲೈನ್ ಚೇಂಜ್ ಆಗಿ ಹೋಗಿರುತ್ತೆ ಎಂದು ಹೇಳಿದೆ. ಮತ್ತೆ ಅವನಿಗೆ ನಾನು ನನ್ನ ಗೆಳೆಯನ ಬಗ್ಗೆ ಬರೆದಿರುವ &lt;a href="http://haalusakkare.blogspot.com/2010/11/blog-post_19.html"&gt;&lt;u&gt;ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು...&lt;/u&gt; &lt;/a&gt;ಓದು ಎಂದು ಕೊಟ್ಟೆ. ನೋಡಿ ನೀನು ಕಲಿತಿರುವ ನೀತಿ ಪಾಠ ಏನು? ಎಂದು ಕೇಳಿದೆ. ಹುಡುಗ ಅಷ್ಟೇ ತಾನೇ ಅಂಕಲ್, ಚಿಂತೆ ಮಾಡಬೇಡಿ, ನನಗೂ ಅಡುಗೆ ಮಾಡಲು ಬರುತ್ತೆ ಮತ್ತು ಏನೋ ಹುಡುಗಿಯರು ಹೇಳುವ ಪುರಾಣವನ್ನು ಒಂದು ಕೀವಿಲಿ ಕೇಳಿ ಎನ್ನೊಂದರಲ್ಲಿ ಬಿಟ್ಟಾರಾಯಿತು ಎಂದ. .&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಷ್ಟರಲ್ಲಿ ಮಡದಿ ಕಾಫೀ ತೆಗೆದುಕೊಂಡು ಬಂದಳು. ಇಬ್ಬರು ಕಾಫೀ ಹಿರಿ ಮುಗಿಸುವಷ್ಟರಲ್ಲೇ, ನನ್ನ ಮಡದಿ ಗೋಪಾಲ್ ರಾಯರೆ ಸ್ವಲ್ಪ ಕೃಷ್ಣ ಗಡ್ಡೆ ಹೆಚ್ಚಿ ಕೊಡಿ ಎಂದು ಹೇಳಿದಳು. ಪಾಪ ಸುರೇಶ ನನ್ನ ಪಿಕಿ ಪಿಕಿ ಕಣ್ಣು ಬಿಟ್ಟು ನೋಡುತ್ತಿದ್ದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಂಕಲ್ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆ ಕೂಡ ಆಗಿದ್ದೇನೆ. ಆದರೆ ಜಾತಿ ಮಾತ್ರ ಬೇರೆ..ಬೇರೆ... ಇದನ್ನು ಅಪ್ಪನಿಗೆ ಹೇಳಿದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಾರೆ. ನೀವೇ ಏನಾದರೂ ಮಾಡಿ ಅಪ್ಪನಿಗೆ ಹೇಳಿ ಒಪ್ಪಿಸಬೇಕು ಎಂದು ಹೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ನಮ್ಮ ಮನೆಗೆ ಇರಲು ಎಂದು ಬಂದು, ಮದುವೆ ಕೂಡ ಆಗಿದ್ದಾನೆ. ಕಡೆಗೆ ಇವನ ಅಪ್ಪ ಒಪ್ಪದಿದ್ದರೆ ಇಲ್ಲೇ ಠಿಕಾಣಿ ಎಂದು ಯೋಚಿಸಿದೆ. ಕಡೆಗೆ ಅವರ ಅಪ್ಪನಿಗೆ ಕರೆ ಮಾಡಿ ತಿಳಿಸಿದೆ, ಒಪ್ಪಿದ ಆಸಾಮಿ, ಸಧ್ಯ ನಾನು ಬಚಾವ್....&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-2985322466367178361?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/2985322466367178361/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_25.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/2985322466367178361'/><link rel='self' type='application/atom+xml' href='http://www.blogger.com/feeds/3457141075796460701/posts/default/2985322466367178361'/><link rel='alternate' type='text/html' href='http://haalusakkare.blogspot.com/2010/12/blog-post_25.html' title='ನೋಡಿ ಕಲಿತಿರುವ ನೀತಿ ಪಾಠ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-3599662549066011391</id><published>2010-12-23T05:48:00.000-08:00</published><updated>2010-12-23T05:50:46.444-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಸಮ್ಮಿಶ್ರ ಸಂಸಾರ ....</title><content type='html'>ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.&lt;br /&gt;&lt;br /&gt;ನಮ್ಮ ಸಮ್ಮಿಶ್ರ ಸರಕಾರಕ್ಕೆ ನಾಂದಿ ಹಾಡಿದ ಆ ಜೋತಿಷ್ಯ ಪಂಡಿತ ಯಾವ ಕವಡೆ ಕಾಸಿಗೋಸ್ಕರ ಕವಡೆ ಉರಿಳಿಸಿ ನಮ್ಮ ಜನ್ಮ ಕುಂಡಲಿಗಳನ್ನು ಸೇರಿಸಿದನೋ ನಾನು ಕಾಣೆ. ಪ್ರತಿ ವಿಷಯದಲ್ಲೂ ನಮ್ಮಿಬ್ಬರಲ್ಲಿ ಬಿನ್ನ ಅಭಿಪ್ರಾಯ ಖಂಡಿತ ಇರುತ್ತೆ. ಮತ್ತೆ ಇಷ್ಟೆಕ್ಕೆಲ್ಲಾ ಆಗ ತಾನೇ ಜೋತಿಷ್ಯ ಕಲೆಯುತ್ತಿದ್ದ ಮನೋಜ, ಮೂವತ್ತನೆ ವಯಸ್ಸಿನ ಒಳಗೆ ನಿನ್ನ ಮದುವೆ ಆಗದಿದ್ದರೆ, ಈ ಜನ್ಮದಲ್ಲಿ ಮದುವೆ ಆಗಲ್ಲ ಕಣೋ ಎಂದು ತನ್ನ ಕಲಿತ ವಿದ್ಯೆಯ ಪ್ರಯೋಗ ನನ್ನ ಮೇಲೆ ಮಾಡಿದ್ದು ಕೂಡ ಪರಿಣಾಮವಾಗಿ ಈ ಸರಕಾರ ಅಸ್ತಿತ್ವಕ್ಕೆ ಬಂತು.&lt;br /&gt;&lt;br /&gt;ಒಂದು ದಿನ ಸೀರೆ ಅಂಗಡಿಗೆ ಹೋಗಿದ್ದೆವು. ರಾತ್ರಿ ಒಂಬತ್ತು ಆದರೂ ನಮ್ಮ ಸೀರೆ ಸೆಲೆಕ್ಶನ್ ಮುಗಿದಿರಲಿಲ್ಲ.ಅವಳಿಗೆ ನೀಲಿ ಬಣ್ಣ ಇಷ್ಟವಾದರೆ ನನಗೆ ಕೆಂಪು... ಕಡೆಗೆ ಸರ್ ಈಗ ಅಂಗಡಿ ಬಂದ್ ಮಾಡುವ ಸಮಯ ನಾಳೆ ಬನ್ನಿ ಎಂದ ಅಂಗಡಿಯವ. ನಾನು ನಾಳೆ ಬಂದರೆ ಆಗುತ್ತೆ ಎಂದು ಹೇಳಿದೆ. ಅದಕ್ಕೆ ಅವಳು ನೀವೇ ಒಂದು ಸೀರೆ ಸೆಲೆಕ್ಟ್ ಮಾಡಿ ಎಂದಳು. ಕಡೆಗೆ ನಾನು ಕೆಂಪು ಬಣ್ಣದ ಸೀರೆ ಸೆಲೆಕ್ಟ್ ಮಾಡಿದೆ. ಅವಳು ಬೇಡ ಅನ್ನುವ ಮೊದಲೇ ಅಂಗಡಿಯವ ಅದನ್ನು ತೆಗೆದು ಕೊಂಡು ಬಿಲ್ ಮಾಡಿಬಿಟ್ಟ. ಹೆಂಡತಿಯ ಮುಖಕ್ಕೂ ಆ ಸೀರೆಯ ಬಣ್ಣಕ್ಕೂ ಏನು ವ್ಯತ್ಯಾಸವೇ ಇರಲಿಲ್ಲ, ಅಷ್ಟು ಕೋಪ ಮಾಡಿಕೊಂಡು ಬಿಟ್ಟಿದ್ದಳು.&lt;br /&gt;&lt;br /&gt;ಮನೆ ಬರುವವರೆಗೂ ಮೌನ ಗೌರಿಯ ಹಾಗೆ ಸುಮ್ಮನೇ ಕುಳಿತಿದ್ದು ನೋಡಿ ನನಗೆ ಆಶ್ಚರ್ಯ ಆಗಿತ್ತು. ಮನೆಗೆ ಬಂದವಳೇ ಅಡುಗೆ ಮನೆಗೆ ಹೊರಟು ಹೋದಳು. ಊಟಕ್ಕೆ ಕುಳಿತಾಗ ತಿಳಿಯಿತು ಅವಳು ತನ್ನ ಎಲ್ಲ ಬಿ ಪಿ ಸಾರಿನ ಮೇಲೆ ಪ್ರದರ್ಶನ ಮಾಡಿದ್ದಾಳೆ ಎಂದು. ಸಕ್ಕತ್ ಉಪ್ಪು ಸಾರು. ನಾನು ಲೇ.. ನೀನು ಇಷ್ಟು ಉಪ್ಪು ಹಾಕಿದರೆ ನನಗೆ ಬಿ ಪಿ ಬಂದರೆ ನಿನಗೆ ಕಷ್ಟ ಎಂದು ಹೇಳಿದೆ. ನಾನು ಬಿ ಪಿ ಹೆಚ್ಚಾಗಿ ಮತ್ತೆ ಗಂಡ ಹೊಡೆದರೆ ಪ್ರಸಾದ ಎಂದು ಸುಮ್ಮನೇ ಒಂದು ರೈಲು ಬಿಟ್ಟೆ. ಆದರೂ ಮೌನ ವ್ರತ ಮುರಿಯಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಎಂದು ಒಂದು ಹಾಗೆ ಸಣ್ಣದಾಗಿ ಹೊಡೆದೆ. ಆದರೂ ಏನು ಪ್ರಯೋಜನ ಆಗಲಿಲ್ಲ. ಮೊನ್ನೆ ಸ್ವೀಟ್ ತಂದಿದ್ದೆಯಲ್ಲ ಅದು ಚೆನ್ನಾಗಿತ್ತು ಕಣೇ ಎಂದೆ. ಆ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಕೇಳಿದೆ. ಏನು ಉತ್ತರ ಬರಲಿಲ್ಲ.&lt;br /&gt;&lt;br /&gt;ಮೂರು ದಿನ ಮೌನ ವ್ರತ. ನನ್ನ ಹತ್ತಿರ ದುಡ್ಡು ಇರಲಿಲ್ಲ ಹೀಗಾಗಿ ಕಡೆಗೆ ಸೀರೆ ಕೊಡಿಸಬೇಕು ಎಂದು ಯಾರಿಗಾದರೂ ಸಾಲ ಕೇಳಬೇಕು ಎಂದು ಸುಬ್ಬನ ಮನೆಗೆ ಹೋದೆ. ಸುಬ್ಬನಿಗೆ ಐದು ಸಾವಿರ ಸಾಲ ಕೊಡು ಎಂದು ಕೇಳಿದೆ. ಕೇಳಿದ ಕೂಡಲೇ ಪೆನ್ನು ತೆಗೆದುಕೊಂಡ. ನಾನು ಖುಶಿಯಿಂದ ಚೆಕ್ ಕೊಡಬಹುದು ಎಂದು ಅಂದುಕೊಂಡರೆ, ಒಂದು ಪೇಪರ್ ತೆಗೆದುಕೊಂಡು ಅದರಲ್ಲಿ ತನ್ನ ತಿಂಗಳ ಖರ್ಚಿನ ಬಗ್ಗೆ ವಿವರಣೆ ಕೊಟ್ಟು, ಅರ್ಧ್ ಘಂಟೆ ತಲೆ ತಿಂದು, ಕಾಫೀ ಕೂಡಿಸಿ ಕಳುಹಿಸಿದ. ನನಗೆ ಈಗ ೨೦ ಸಾವಿರ ಬೇಕು. ನೀನು ೩೦ ಸಾವಿರ ಕೊಡು ನಾನು ನಿನಗೆ 5 ಸಾವಿರ ಕೊಡುತ್ತೇನೆ ಅಂದ. ನಾನು "ಉದುವದನ್ನು ಕೊಟ್ಟು ಬಾರಿಸುವದು ತೆಗೆದುಕೊಂಡ ಹಾಗಾಯಿತು" ಎಂದು ಏನು ಹಾನಿಯಾಗದ ಹಾಗೆ ಹಣಿ ಹಣಿ ಗಟ್ಟಿಸಿದೆ. ಮಂಜನ ಹತ್ತಿರ ಕೇಳಿದರೆ ಎಂದು ಯೋಚಿಸಿ ಅವನ ಮನೆಗೆ ಹೊರಟೆ. ನನ್ನ ಬೆನ್ನಿಗೆ ಬೇತಾಳದ ಹಾಗೆ ನನ್ನ ಹಿಂದೆ ಬಂದ. ನಾನು ಕೇಳುವ ಮೊದಲೇ ನನಗೆ 20 ಸಾವಿರ ಬೇಕು ಅಂದ. ಸಾರಿ... ಸಾರಿ ....30 ಸಾವಿರ ಎಂದು ನನ್ನ ಮುಖ ನೋಡಿ ನಗುತ್ತಾ ಹೇಳಿದ. ಮಂಜ ನನ್ನ ಹತ್ತಿರ ಇರುವದು ಬರೀ 8 ಸಾವಿರ ಅದರಲ್ಲಿ ಬೇಕಾದರೆ 6 ಸಾವಿರ ಕೊಡಬಲ್ಲೆ ಎಂದ. ಅದಕ್ಕೆ ತಕ್ಷಣ ನಾನು ನನಗೆ ಅವಶ್ಯಕತೆ ಇದೆ ಕೊಡು ಎಂದು ಕೇಳಿದೆ. ಇಲ್ಲದೇ ಹೋಗಿದ್ದರೆ ಅದನ್ನು ಸುಬ್ಬ ಇಸಿದುಕೊಂಡು ಬಿಡುತ್ತಿದ್ದ. ಕಡೆಗೆ ಮಂಜನ ಕಡೆ ಸಾಲ ಇಸಿದುಕೊಂಡು ಬಂದೆ. ಅವಳು ಮಾತು ಕೇಳದೇ 3 ದಿವಸ ಆಗಿದ್ದರಿಂದ, ಪಕ್ಕದ ಮನೆಯವರು ರೇಡಿಯೋ/ ಟಿ ವಿ ಹಚ್ಚಿದರು ಕೂಡ ಹೆಂಡತಿ ಕೂಗಿದ ಹಾಗೆ ಅನ್ನಿಸೋದು. ಕೆಲ ಬಾರಿ ಏನು? ಎಂದು ಕೇಳಿ ಬೆಪ್ಪನ ಹಾಗೆ ನಿರುತ್ತರನಾಗಿ ಕುಳಿತುಬಿಟ್ಟಿದ್ದೆ.&lt;br /&gt;&lt;br /&gt;ಮರುದಿನ ನಾನು ಅದೇ ಸೀರೆ ಅಂಗಡಿಗೆ ಹೋಗಿ ಅವಳು ಮೆಚ್ಚಿದ ನೀಲಿ ಬಣ್ಣದ ಸೀರೆ ತೆಗೆದುಕೊಂಡು ಬಂದೆ. ಮತ್ತು ಬರುವ ದಾರಿಯಲ್ಲಿ ನನ್ನ ಮಡದಿಗೆ ಕೇಳಿದ ಸ್ವೀಟ್ ಅಂಗಡಿಯ ಬಾಕ್ಸ್ ಹಿಡಿದು ಕೊಂಡು, ಒಂದು ಹುಡುಗಿ ಹೊರಟಿತ್ತು. ನಾನು ಅವಳನ್ನು ನೋಡಿ ಅವಳ ಹಿಂದೆ ಹೋದೆ. ಅವಳು ಮತ್ತೆ ಇನ್ನಷ್ಟು ಜೋರಾಗಿ ಹೊರಟಳು. ನನಗೆ ಘಾಬರಿ. ಆದರೂ ಸ್ವೀಟ್ ಚೆನ್ನಾಗಿ ಇತ್ತು ಎಂದು ಅವಳ ಮುಂದೆ ಹೋಗಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವಳ ಅಪ್ಪ ಬಂದು ಬಿಟ್ಟ. ನನಗೆ ಇನ್ನೂ ಘಾಬರಿ ಇವಳನ್ನು ಬೆನ್ನು ಹತ್ತಿದ್ದಕ್ಕೆ, ಎಲ್ಲಿ ಎರಡು ಕೊಡುತ್ತಾನೆ ಎಂದು. ರೀ...ನಾವೊಬ್ಬರೇ ಅಷ್ಟೇ ಅಲ್ಲಾರಿ ಅಲ್ಲಿ ಕಸ ಹಾಕೋದು. ಎಲ್ಲರೂ ಹಾಕುತ್ತಾರೆ. ದುಡ್ಡು ನಮ್ಮ ಕಡೆ ಮಾತ್ರ ವಸೂಲಿ ಮಾಡಿದರೆ ಹೇಗೆ ಎಂದರು. ನಾನು ಪೆಕರನ ಹಾಗೆ ತಲೆ ಕೆರೆದು ಕೊಳ್ಳುತ್ತಿದೆ. ಮತ್ತೆ ನನ್ನಷ್ಟಕ್ಕೆ ನಾನೇ ನೋಡಿಕೊಂಡೆ. ಆಗ ಅರ್ಥ ಆಯಿತು. ನಾನು ಚ್ಯಾಕಲೇಟ್ ಕಲರ್ ಜ್ಯಾಕೆಟ್ ಹಾಕಿದ್ದು ನೋಡಿ ಬಿ ಬಿ ಎಂ ಪಿ ನೌಕರ ಎಂದು ಕೊಂಡಿದ್ದರು ಎಂದು. ಆಮೇಲೆ ಸರ್ ಬಿ ಬಿ ಎಂ ಪಿ ನೌಕರ ಅಲ್ಲ. ನೀವು ತೆಗೆದು ಕೊಂಡಿರುವ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಆ ಪ್ಯಾಕೆಟ್ ತೋರಿಸಿ ಕೇಳಿದೆ. ಆಗ ಅವರು ಅಂಗಡಿ ತೋರಿಸಿದರು. ಆಮೇಲೆ ಅವರು ಆ ಸ್ವೀಟ್ ಬಾಕ್ಸ್ ಕಸ ಚೆಲ್ಲಿ ಹೊರಟು ಹೋದರು.&lt;br /&gt;&lt;br /&gt;ಮನೆಗೆ ಬಂದು ನೀಲಿ ಸೀರೆ ಮತ್ತು ಸ್ವೀಟ್ ಬಾಕ್ಸ್ ಕೈಗೆ ಇಟ್ಟಾಗ ಮೌನ ವೃತ ಮುರಿದಿದ್ದಳು. ನಡೆದ ಸ್ವೀಟ್ ಅಂಗಡಿ ವಿಳಾಸದ ವಿಷಯ ಕೇಳಿ ಸಕ್ಕತ್ ನಕ್ಕೂ ಇವತ್ತು ಉಪ್ಪೆ ಇಲ್ಲದ ಸಾರು ಮಾಡಿ... ಸಾರಿ.. ಎಂದು ಉಲಿದಳು. ಹಾಗೆಂದು ನಮ್ಮಿಬ್ಬರಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂದು ತಿಳಿಯಬೇಡಿ, ಇಬ್ಬರಿಗೂ ಮಿಸ್ಸಳ್, ಮಿಸ್ಸಳ್ ಭಾಜಿ ಇಷ್ಟ. ಮತ್ತು ಮಿಶ್ರ ಮಾಧುರ್ಯ ರೇಡಿಯೋ ಕಾರ್ಯಕ್ರಮ ಕೂಡ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3599662549066011391?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3599662549066011391/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_23.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3599662549066011391'/><link rel='self' type='application/atom+xml' href='http://www.blogger.com/feeds/3457141075796460701/posts/default/3599662549066011391'/><link rel='alternate' type='text/html' href='http://haalusakkare.blogspot.com/2010/12/blog-post_23.html' title='ಸಮ್ಮಿಶ್ರ ಸಂಸಾರ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3457141075796460701.post-7667813184819470916</id><published>2010-12-17T06:31:00.000-08:00</published><updated>2010-12-17T06:32:27.963-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಕಾಯುವಿಕೆ ಅಂತ್ಯ ....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ ಬೇರೆ ಆಗಿ ಒಂದು ವಾರ ರಜೆ ತೆಗೆದುಕೊಂಡಿದ್ದಕ್ಕೆ, ನನ್ನ ಬಾಸ್ ಬೇರೆ ಕೋಪ ಮಾಡಿಕೊಂಡಿದ್ದರು. ಹೀಗಾಗಿ ನನ್ನ ಭವಿಷ್ಯ ಭಯದ ವಿಷಯವಾಗಿ ಪರಣಮಿಸಬಹುದು ಎಂದು ನಾನು ಎಣಿಸಿದ್ದೆ. ಹೇಗಿದ್ದರು ಭವಿಷ್ಯ ನಮ್ಮ ಮನೋಜನೆ ಬರೆಯೋದು ಚೆನ್ನಾಗೆ ಬರೆದಿರುತ್ತಾನೆ ಎಂದು ತೆಗೆದು ನೋಡಿದೆ. ನನ್ನ ರಾಶಿ ಮೀನಕ್ಕೆ ಕಣ್ಣು ಆಡಿಸಿದೆ. ಚೆನ್ನಾಗಿ ಬರೆದಿದ್ದ. ಖುಷಿಯಾಗಿ ನೋಡಿ ಪೇಪರ್ ಬಂದು ಮಾಡ ಇಡ ಹತ್ತಿದಾಗ, ಮಡದಿ ಏನ್ರೀ?. ನಿಮ್ಮ ಭವಿಷ್ಯ ಅಷ್ಟು ನೋಡಿದರೆ ಆಯಿತ?, ಥೂss.. ನಿಮ್ಮ ಎಂದು ಉಗಿದಳು. ಅವಳು ಉಗಿದ ಥೂ ಅನ್ನು ಸ್ವಲ್ಪೇ ಕ್ಯಾಚ್ ಮಾಡಿ, ಚಿಕ್ಕದಾದ ಥು ನನ್ನ ರಾಶಿಯ ಮಧ್ಯ ತೂರಿಸಿ, ಅವಳ ಭವಿಷ್ಯ ಓದಿದೆ(ಮಿಥುನ). ಅಷ್ಟಕ್ಕೇ ಬಿಡದೆ ಮಗನ ಭವಿಷ್ಯ ಕೂಡ ಓದಿಸಿದಳು. ಮಗನ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಎಂದು ಬರೆದಿತ್ತು. ಮನೋಜ ನಿಜವಾಗಿಯೂ ತ್ರಿಕಾಲ ಜ್ಞಾನಿ ಎಂದು ಅನಿಸಿತು. ಏಕೆಂದರೆ ಮಗನಿಗೆ ಬೇರೆ ಸ್ಚೂಲ್‌ನಲ್ಲಿ ಎಲ್ ಕೇ ಜಿ ಸೇರಿಸಬೇಕಿತ್ತು. ಅವಳು ಅಡಿಗೆ ಮನೆಗೆ ಕಾಫೀ ತರಲು ಹೋದಳು. ನಾನು ಪೇಪರ್ ಎತ್ತಿ ಇಟ್ಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಕಾಫೀ ಕಪ್ ತೆಗೆದುಕೊಂಡು ಬಂದು, ರೀ ಅಂದ ಹಾಗೆ ನಿಮ್ಮ ಭವಿಷ್ಯ ಓದಲೇ ಇಲ್ಲ ಎಂದಳು. ನನಗೆ ಕಾಫೀ ಕೊಟ್ಟು ತಾನೇ ಓದಲು ಶುರು ಮಾಡಿದಳು. ಮದುವೆ ಪ್ರಸ್ತಾಪ ಮತ್ತು ಕಾಯುವಿಕೆ ಅಂತ್ಯ ಎಂದು ಬರೆದಿತ್ತು. ರೀ ಇಲ್ಲಿ ಒಂದು ತಪ್ಪು ಆಗಿದೆ. ಮರು ಮದುವೆ ಎಂದು ಬರಬೇಕಿತ್ತು ಅಲ್ಲವೇ ಎಂದು ಅಪಹಾಸ್ಯ ಮಾಡಿದಳು. ಹೇಗಿದ್ದರು ಕಾಯುವಿಕೆ ಅಂತ್ಯ ಎಂದು ಇನ್ನೊಂದು ಭವಿಷ್ಯ ಸಾಕಾರ ಆಗಬಹುದು ಎಂದು ಎಣಿಸಿ, ನಾನು ಸ್ನಾನ ತಿಂಡಿ ಮುಗಿಸಿ ಆಫೀಸ್ ಹೊರಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಆಫೀಸ್ ತಲುಪಿದ ತಕ್ಷಣ ಬಾಸ್ ಫೋನ್ ಬಂತು. ಇವತ್ತು ನಾನು ಸ್ವಲ್ಪ ಬೇಗನೆ ಹೋಗಿದ್ದರಿಂದ ಬೈಸಿಕೊಳ್ಳುವುದಕ್ಕೆ ಅಲ್ಲ ಎಂದು ಫೋನ್ ಎತ್ತಿದೆ. ರೀ.. ಗೋಪಾಲ್ ಕ್ಯಾಬಿನ್ ಗೆ ಬನ್ನಿ ನಿಮ್ಮ ಜೊತೆ ಮಾತನಾಡುವುದಿದೆ ಎಂದರು. ನಾನು ಸಕ್ಕತ್ ಖುಷಿ. ಅಪ್ರೈಸಲ್ ಎಂದು ಒಳಗಡೆ ಹೆಜ್ಜೆ ಇಟ್ಟೆ. ಒಳಗಡೆ ಬಾಸ್ ಮತ್ತು ಆಡ್‌ಮಿನ್ ಇಬ್ಬರು ಕುಳಿತಿದ್ದರು. ಇಬ್ಬರ ಕೈಯಲ್ಲಿ ಪೇಪರ್ ಬೇರೆ ಇತ್ತು. ನನಗೆ ಸ್ವರ್ಗಕ್ಕೆ ಮೂರೇ ಗೇಣು. ಒಳಗೆ ಹೋದ ಕೂಡಲೇ ಬನ್ನಿ ಕುಳಿತುಕೊಳ್ಳಿ ಎಂದರು. ಕಾಫೀ ಬೇರೆ ತರಿಸಿದರು. ಕಾಫೀ ಕುಡಿದೆ. ಸಾವಕಾಶವಾಗಿ ಪೇಪರ್ ತೆಗೆದು ನೋಡಿ, ಗೋಪಾಲ್... ಈಗ ನಾಲ್ಕನೇ ಫ್ಲೋರ್ ಬೇರೆ ಶುರು ಆಗಿದೆ ಎಂದರು. ನಾನು ಹೌದು ಸರ್ ಎಂದೆ. ಸಧ್ಯ ನನ್ನ ಅಪ್ರೈಸಲ್ ಮಾಡಿ ನಾಲ್ಕನೇ ಫ್ಲೂರ್ಗೆ ಕಳುಹಿಸುತ್ತಾರೆ ಎಂದು ಇನ್ನೂ ಖುಷಿಯಾಗಿದ್ದೆ. ಪೇಪರ್ ನನ್ನ ಮುಂದೆ ಹಿಡಿದು ನಿಮ್ಮ ಕ್ಯೂಬಿಕಲ್ ಶಿಫ್ಟ್ ಮಾಡುತ್ತಾ ಇದ್ದೇವೆ, ನಿಮ್ಮ ಆಸನ ನೀವೇ ಆರಿಸಿಕೊಳ್ಳಿ ಎಂದರು. ನಾನು ದಿಕ್ಕುಗಳನ್ನು ಪರಿಶಿಸಿಲಿಸಿ, ಸರ್.. ನನಗೆ ಇದು ಬೇಕು ಎಂದು ಆರಿಸಿದೆ. ಮತ್ತೆ ಹಾಗೆ ಕುಳಿತಿದ್ದೆ. ಆಯಿತು ಗೋಪಾಲ್ ಎಂದು ಹೇಳಿ ಕೈ ಕುಲುಕಿದರು. ನನಗೆ ದಿಕ್ಕೇ ತೋಚಾದಾಗಿತ್ತು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮತ್ತೆ ಎದ್ದು ಸಾವಕಾಶವಾಗಿ ಎದ್ದು ನನ್ನ ಆಸಾನಕ್ಕೆ ಬಂದು ಒರಗಿದೆ. ಸಂಜೆವರೆಗೂ ಕಾಯುತ್ತಾನೆ ಇದ್ದೆ. ಬಾಸ್ ಎರಡು ಬಾರಿ ಕರೆದು ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ವಿವರಣೆ ನೀಡಿದರು ಮಾತ್ರ. ಸಂಜೆ ಮತ್ತೆ ಕರೆದು ಸ್ಟೇಟಸ್ ಬೇರೆ ಕೇಳಿ ಮನೆಗೆ ಕಳುಹಿಸಿದರು. ಎಷ್ಟೇ ಆದರೂ ನಾನು ಬಸವಣ್ಣನವರ "ಕಾಯಕವೇ ಕೈಲಾಸ" ಎಂಬ ಆಜ್ಞೆ ಪಾಲಕನಿಗೆ ಇವತ್ತು ಬರೀ ಕಾಯುವಿಕೆಯ ಕೆಲಸ ಹತ್ತಿತ್ತು. ನಿರಾಸೆಯ ಅಲೆಯಲ್ಲಿ ತೇಲುತ್ತ ಮನೆಗೆ ಬಂದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಕಾಫೀ ಕೊಡುತ್ತಾ ನನ್ನ ಕಳೆ ಗುಂದಿದ ಮುಖ ನೋಡಿ ಮಡದಿ ಏಕೆ? ಏನು? ಏನಾಯಿತು... ಎಂದು ಪ್ರಶ್ನಿಸಿದಳು. ನಾನು ನಡೆದ ವಿಚಾರ ಅವಳಿಗೆ ಹೇಳಿದೆ. ಸರಿ ಮತ್ತೆ ನಿಮ್ಮ ಕಾಯುವಿಕೆ ಅಂತ್ಯ ಆಯಿತು ಅಲ್ಲ ಎಂದಳು. ನೀವೇ ಹೇಳಿದ್ದು ತಾನೇ, ನಿಮ್ಮ ಕ್ಯೂಬಿಕಲ್ ಬಾಗಿಲ ಹತ್ತಿರ ಇದೆ, ಯಾರಾದರೂ ಒಳಗೆ ಬಂದರು, ನಿಮಗೆ ಕಾರ್ಡ್ ಸ್ವಾಪ್ ಮಾಡಿದ ಸೌಂಡ್ ಬರುತ್ತೆ ಅಂತ. ಮತ್ತೆ ನಿಮ್ಮನ್ನು ನೀವೇ ಕೆಲ ದಿನ ಸೆಕ್ಯೂರಿಟೀ ಗಾರ್ಡ್ ಎಂದು ಹೋಲಿಸಿಕೊಂಡಿದ್ದೀರಿ ನಿಜ ತಾನೇ? ಎಂದು ಗಹ ಗಹಿಸಿ ನಗುತ್ತಾ ಅಂದಳು. ಹಾ ...ಹೌದಲ್ಲ ಎಂದು ನನ್ನ ತಲೆಗೆ ನಾನೇ ಮೊಟಕಿದೆ. ನಿಜವಾಗಿಯೂ ನನ್ನ ಕಾಯುವಿಕೆ ಅಂತ್ಯವಾಗಿತ್ತು. ಸ್ವಲ್ಪ ನಗು ನನ್ನ ಮುಖದಲ್ಲಿ ಮೂಡಿತ್ತು. ಮನೋಜನ ಭವಿಷ್ಯ ಕೂಡ...&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಅಷ್ಟರಲ್ಲಿ ಮಗ ಏಕೆ? ಇಷ್ಟು ಮಳೆ ಬರುತ್ತಾ ಇದೆ ಅಪ್ಪ ಎಂದು ಕೇಳಿದ. ಅದು ಸೈಕ್ಲೋನ್ ಎಂದು ಹೇಳಿದೆ. ಮಗ ಅದನ್ನು ಸೈಕಲ್ ಎಂದು ಕೊಂಡು, ಅದನ್ನು ಹೇಗೆ ಹೊಡೆಯುವದು ಅಪ್ಪ ಎಂದು ಕೇಳಿದ. ನನಗೆ ನಗು ತಡೆಯಲು ಅಗಲೆ ಇಲ್ಲ... ಜೋರಾಗಿ ನಗಹತ್ತಿದೆ. ಮಗನಿಗೆ ಅಪಮಾನ ಆದ ಹಾಗೆ ಆಗಿತ್ತು. ಅವನು ಜೋರಾಗಿ ಅಳಹತ್ತಿದ. ಮತ್ತೆ ಅವನನ್ನು ಸಮಾಧಾನ ಮಾಡಿ, ಊಟ ಮುಗಿಸಿ, ಎಲ್ಲ ಕಹಿ ಮರೆತು ಸಿಹಿ ನಿದ್ದೆಗೆ ಜಾರಿದೆವು.&lt;br /&gt;&lt;/p&gt;&lt;form action="http://sampada.net/blog/gopaljsr/14/12/2010/29485" charset="UTF-8" method="post" id="fivestar-form-node-29485" class="fivestar-widget" style="margin-top: 0px; margin-right: 0px; margin-bottom: 0px; margin-left: 0px; padding-top: 0px; padding-right: 0px; padding-bottom: 0px; padding-left: 0px; clear: both; display: block; "&gt;&lt;div&gt;&lt;div class="fivestar-form-vote-29485 clear-block" style="display: block; "&gt;&lt;div class="fivestar-form-item  fivestar-combo-text fivestar-average-stars fivestar-labels-hover fivestar-processed"&gt;&lt;div class="form-item" id="edit-vote-wrapper" style="margin-top: 0px; margin-bottom: 0px; margin-right: 0px; margin-left: 0px; "&gt;&lt;/div&gt;&lt;/div&gt;&lt;/div&gt;&lt;/div&gt;&lt;/form&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7667813184819470916?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7667813184819470916/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_3478.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7667813184819470916'/><link rel='self' type='application/atom+xml' href='http://www.blogger.com/feeds/3457141075796460701/posts/default/7667813184819470916'/><link rel='alternate' type='text/html' href='http://haalusakkare.blogspot.com/2010/12/blog-post_3478.html' title='ಕಾಯುವಿಕೆ ಅಂತ್ಯ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-1755833636294386384</id><published>2010-12-17T06:29:00.000-08:00</published><updated>2010-12-17T06:31:01.857-08:00</updated><category scheme='http://www.blogger.com/atom/ns#' term='ಅನುಭವ ಕಥನ'/><title type='text'>ಮರೆತೇನೆಂದರೆ ಮರೆಯಲಿ ಹ್ಯಾಂಗ!? ....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು ನಮ್ಮನ್ನು ಸದಾ ಕಾಡುವ ಭೂತ ಕಾಲದ ಬಗ್ಗೆ. ನನ್ನ ಕಳೆದ ಮಾಸಿದ ಮಧುರ ಅನುಭವಗಳನ್ನು ಮೆಲಕು ಹಾಕಿದ್ದೇನೆ. ನನಗೆ ತುಂಬಾ ಇಷ್ಟವಾಗುವ ಧಾರಾವಾಹಿ ಎಂದರೆ ವಿಕ್ರಮ್ ಬೆತಾಳ್. ಏಕೆಂದರೆ ಪ್ರತಿ ಬಾರಿ ನಾನು ಕಳೆದ ಮಧುರ ಕ್ಷಣಗಳ ಭೂತವನ್ನು ಹೊತ್ತು ತರುತ್ತೇನೆ. ಮತ್ತೆ ಅದರ ಜೊತೆ ಒಂದು ನೀತಿ ಪಾಠವನ್ನು ಕೂಡ ಕಲೆತಿರುತ್ತೇನೆ. ನಾನು ಅದನ್ನು ಬಿಟ್ಟು ಬಿಡುತ್ತೇನೆ. ಮತ್ತೆ ಅದರ ಹಿಂದೆ ಹೋಗಿ ಮತ್ತೊಂದು ಹೊಸ.. ಹೊಸ.. ಕಥೆಗಳನ್ನು ಹೊತ್ತ ಭೂತವನ್ನು ಹೆಗಲ ಮೇಲೆ ಕುಳ್ಳಿರಿಸಿ ಮುಂದೆ ನಡೆಯುತ್ತೇನೆ. ಇದು ನಿರಂತರವಾಗಿ ನಡೆಯುವ ಕ್ರಿಯೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಹೀಗೆ ಎರಡು ದಿನದಿಂದ ಏನಾದರೂ ಹಳೆಯ ನೆನಪುಗಳನ್ನು ಬರೀಬೇಕು ಎಂದು ಯೋಚಿಸುತ್ತಾ ತಲೆಕೆಡಿಸಿಕೊಂಡಿದ್ದೆ. ನಿನ್ನೆ ರಾತ್ರಿ ಬೇರೆ ಮಡದಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಎಲ್ಲ ಕೆಲಸ ನನ್ನ ಹೆಗಲ ಮೇಲೆ ಬಿದ್ದಿತ್ತು. ಮೊದಮೊದಲು ಯಾವುದೆ ಸ್ತ್ರೀ... ಕ್ಷಮಿಸಿ... ಇಸ್ತ್ರಿ ಮುಟ್ಟಲು ಹೆದರುತ್ತಿದ್ದೆ. ಮದುವೆ ಆದ ಮೇಲೆ ಈಗ ಸ್ವಲ್ಪ ಧೈರ್ಯ ಬಂದಿದೆ. ಅದಕ್ಕೆ ಅಪ್ಪ ಚಿಕ್ಕವಾನಿದ್ದಾಗ ಲೇ ನೀನು "ಅರಳಿ ಅಂಡಿಗೇ ಮೇಲೆ ಲಗಾಟಿ ಹೊಡೆಯುವ ನೀನು" ಅನ್ನುತ್ತಿದ್ದರು. ರಾತ್ರಿನೆ ಇಸ್ತ್ರಿ ಮಾಡಿ ಬಟ್ಟೆ ಎತ್ತಿ ಇಟ್ಟಿದ್ದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮುಂಜಾನೆ ಬೇಗ ಐದು ಘಂಟೆಗೆ ಎದ್ದು ಕಸ ಗುಡಿಸಿ, ಪಾತ್ರೆ ತೊಳೆದು ಹಾಗೆ ಲೇಖನದ ಯೋಚನೆಯಲ್ಲಿ ಟೀ ಮಾಡಿಕೊಂಡು ಬಂದು ಕುಳಿತೆ. ಲೇಖನದ ಗುಂಗಿನಲ್ಲಿ ಟೀ ಪಾತ್ರೆ ತೊಳೆಯೋಕೆ ಎಂದು ಲೈಟ್ ಆಫ್ ಮಾಡಿ, ಮುಂದಿನ ಬಾಗಿಲ ಮುಚ್ಚಿ ಹೋದೆ. ಟೀ ಪಾತ್ರೆ ತೊಳೆದ, ಕೆಲ ಸಮಯದ ನಂತರ "ಕಟ್.. ಕಟ್.." ಬಾಗಿಲ ಶಬ್ದ. ಇಷ್ಟು ಘಂಟೆಗೆ ಯಾರು? ಬಂದಿರಬಹುದು ಎಂದು ಯೋಚಿಸಿದೆ. ನಿನ್ನೆ ಮನೆ ಓನರ್ ಗೆ ಬಾಡಿಗೆಗೆ ಎರಡು ನೂರು ಚಿಲ್ಲರೆ ಇರದ ಕಾರಣ ನಾಳೆ ಕೊಡುತ್ತೇನೆ ಎಂದು ಹೇಳಿದ್ದೆ. ಪಾಪ ಒಳ್ಳೇ ಮನುಷ್ಯ, ಹಾಗೆಲ್ಲಾ ಬೆಳಿಗ್ಗೇನೇ ತೊಂದ್ರೆ ಕೊಡೋ ಆಸಾಮಿ ಅಲ್ಲ. ಬಹುಶಃ ಹಾಲಿನವನು ಬೇಗ ಬಂದನೆ ಎಂದು ಪಾತ್ರೆ ತೆಗೆದುಕೊಂಡೆ. ಹಾಗೆ ಬೈದುಕೊಳ್ಳುತ್ತ ಬಾಗಿಲು ತೆಗೆದು, ಪಾತ್ರೆ ಮುಂದೆ ಹಿಡಿದೆ. ಪಾತ್ರೆ ಕಸಿದು, ಬಾಗಿಲು ನುಕಿ, ಒಬ್ಬ ಸೀರೆ ಉಟ್ಟ ಮಹಿಳೆ ಒಳಗಡೆ ಬಂದಳು. ರೀss.. ಯಾರು? ಬೇಕು ನಿಮಗೆ ಎಂದು ದಬಾಯಿಸಿದೆ. ಲೈಟ್ ಆನ್ ಮಾಡಿದಳು ನನ್ನ ಮಡದಿ. ಏನೇ? ನೀನು ಇಷ್ಟು ಬೇಗ ಎದ್ದು ವಾಕಿಂಗ್ ಹೋಗಿದ್ಯಾ ಎಂದು ಆಶ್ಚರ್ಯವಾಗಿ ಕೇಳಿದೆ. ಮಾತು.. ಕಥೆ.. ಇಲ್ಲದೇ ಸಕ್ಕತ್ ಕೋಪ ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು. ತವರು ಮನೆ ಎಂದರೆ ನಾನು ಹೇಳಿದ್ದು ಅಡುಗೆ ಮನೆ... ಏಕೆಂದರೆ ಹೆಣ್ಣು ಮಕ್ಕಳ ಇಷ್ಟವಾದ ಜಾಗ ಅದೇ ಅಲ್ಲವೇ. ಟೀ ತೆಗೆದು ಕೊಂಡು ಬಂದು ಕೋಪದಿಂದ ಹೊರಗಡೆ ಬಂದು ಕುಳಿತಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಏಕೆ? ಏನು? ಆಯಿತು ನಿನ್ನೆ ತಾನೇ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದೆ ಎಂದು ಕೇಳಿದೆ. ಸಕ್ಕತ್ ಕೋಪದಿಂದ, ನಿಮ್ಮ ಮುಂದೆನೇ ಎದ್ದು ಥಳಿ.. ರಂಗೋಲಿ ಹಾಕೋಕೆ ಹೋದೆ. ಬೇಕು ಅಂತಾನೆ ಹೊರಗೆ ಹಾಕಿದ್ದು ಎಂದಳು. ನಾನು ಲೇಖನದ ಯೋಚನೆಯಲ್ಲಿ ಅವಳು ಎದ್ಡಿದ್ದು ಗಮನಿಸಿರಲಿಲ್ಲ. ಏನೇ?.. ಬೇಕು ಅಂತ ನಿನ್ನ ಹೊರಗೆ ಹಾಕೋಕೆ ಆಗುತ್ತಾ ಎಂದು ಡಬಲ್ ಮೀನಿಂಗ್ ಡೈಲಾಗ್ ಬಿಟ್ಟೆ. ಅರ್ಥ ಆಗಲಿಲ್ಲ, ಮತ್ತೆ ಬಚಾವ್. ನಾನು ಗಮನಿಸಿರಲಿಲ್ಲ ಕಣೇ? ಸಾರೀ ಎಂದು ಹೇಳಿದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಿಮ್ಮ ಲಕ್ಷ್ಯ ಎಲ್ಲಿ ಇತ್ತು ಎಂದು ಕೇಳಿದಳು. ಲೇ ಅದು ಒಂದು ಲೇಖನದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಾ ಇದ್ದೆ ಎಂದೆ. ಅಂತಹ ಗಾಡವಾದ ವಿಷಯ ಏನು? ಇತ್ತು ರಾಯರದು ಎಂದಳು. ಅದು ನನ್ನ ಹಳೆಯ ನೆನಪುಗಳ ಬಗ್ಗೆ ಒಂದು ಲೇಖನ ಬರಿಬೇಕು ಎಂದು ಕೊಂಡಿದ್ದೇನೆ ಎಂದೆ. ನಿಮಗೆ ನನ್ನ ಇರುವಿಕೆಯ ಅರಿವಿಲ್ಲ, ಇನ್ನೂ ನೀವು ಅಷ್ಟು ದೂರ ಹೋಗಿ ಬಿಟ್ಟರೆ ಅಷ್ಟೇ ಕಥೆ ಎಂದು ಹೀಯಾಳಿಸಿದಳು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಿಮ್ಮ ಹಳೆಯ ಕಥೆಗಳು ಎಂದರೆ ಅದೇ ತಾನೇ ನೀವು ಹೇಳುತ್ತಿರುತ್ತೀರಲ್ಲ ಚಿಕ್ಕವರಿದ್ದಾಗ 10 ರೂಪಾಯಿಗೆ 1 ಕೆ ಜಿ ಅಕ್ಕಿ ಎಂದೆಲ್ಲ.... ನಿಮ್ಮ ತಂದೆಯ ಪಗಾರ ಆ ಸಮಯದಲ್ಲಿ 2000 ಇತ್ತು. ಅದು ಆ ಕಾಲಕ್ಕೆ ಹೊಂದಾಣಿಕೆ ಆಗುತಿತ್ತು. ಈಗ ನಿಮ್ಮ ಪಾಗಾರ ನೋಡಿ ಎಂದಳು. ಹಾ... ಅವಳು ಹೇಳಿದ್ದು ಸರಿ ಅನ್ನಿಸಿತು. ಮತ್ತೆ ನೀವು ಗೋಲ್ ಗುಂಬಜ್ ನೋಡಿದ್ದೀರಾ? ಎಂದು ಕೇಳಿದಳು. ಹಾ... ನೋಡಿದ್ದೇನೆ ಒಂದು ಸಾರಿ ಒದರಿದರೆ 7 ಸಾರಿ ಕೇಳಿಸುತ್ತೆ ಎಂದೆ. ಅಂತಹ ಒಂದು ಮಶೀನ್ ನಿಮಗೆ ಬೇಕು ಎಂದು ಹೀಯಾಳಿಸಿದಳು . ಮತ್ತೆ ಏನು? ನೋಡಿದಿರಿ ಅಲ್ಲಿ ಎಂದಳು. ನಾನು ಕೆಳಗಡೆ ಇರುವ ಜನ ಚಿಕ್ಕ ಚಿಕ್ಕದಾಗಿ ಸೇವಂತಿ ಹೂವಿನ ಪಕಳೆ ಹಾಗೆ ಕಾಣಿಸುತ್ತಿದ್ದರು ಎಂದೆ. ನೀವು ಕೆಳಗಡೆ ಹೋದರೆ ಅವಿರಿಗಿಂತ ಚಿಕ್ಕದಾಗಿ ಇದ್ದೀರಾ? ಗೊತ್ತಾ... ಕುಳ್ಳ ಮಹಾಶಯರೇ ಎನ್ನಬೇಕೆ. ಅವಳು ಅದೇ ನೀವು ಮಾಡೋ ತಪ್ಪು, ಮೇಲೆ ನೋಡಲಿಲ್ಲವೇ ನಮ್ಮ ಹತ್ತಿರಾನೇ ಬಂದು ಹೋಗೋ ವಿಮಾನ, ಹಕ್ಕಿ ಮತ್ತೆ ಆಕಾಶ ಎಂದೆಲ್ಲ ಕೇಳಿದಳು. ನಿಜ ಅನ್ನಿಸಿತು ನಾವು ಎಲ್ಲರೂ ಮಾಡುವದನ್ನು ಮಾತ್ರ ಗಮನಿಸುತ್ತೇವೆ ಮತ್ತೆ ಹೊಸತಾಗಿ ಯೋಚಿಸುವುದೆ ಇಲ್ಲ ಎಂದು. ಮತ್ತೆ ಗೋಪಿಕಾ ಸ್ತ್ರೀಯರು (ಹಳೆ ಗರ್ಲ್ ಫ್ರೆಂಡ್) ಏನಾದರೂ ನೆನಪಿಗೆ ಬಂದರಾ ಎಂದು ಹೇಳಿ, ಮನಸಿಗೆ ಕಚಗುಳಿ ಇಟ್ಟು, ನೋಡಿ ನೀವು ವರ್ತಮಾನದ ಬಗ್ಗೆ ಮಾತ್ರ ಯೋಚಿಸಿ ಬರೆಯಿರಿ. ನೀವು ಭೂತಕಾಲದ ಬಗ್ಗೆ ಯೋಚನೆ ಮಾಡುತ್ತಾ ಇದ್ದರೆ ಅಷ್ಟೇ ಕತೆ ಎಂದು ಒಂದು ಬಾಂಬ್ ಹಾರಿಸಿ, ಟೀ ಕುಡಿದು ಸ್ನಾನಕ್ಕೆ ಹೊರಟು ಹೋದಳು.&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1755833636294386384?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1755833636294386384/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_17.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1755833636294386384'/><link rel='self' type='application/atom+xml' href='http://www.blogger.com/feeds/3457141075796460701/posts/default/1755833636294386384'/><link rel='alternate' type='text/html' href='http://haalusakkare.blogspot.com/2010/12/blog-post_17.html' title='ಮರೆತೇನೆಂದರೆ ಮರೆಯಲಿ ಹ್ಯಾಂಗ!? ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-3197334845078652794</id><published>2010-12-14T05:41:00.000-08:00</published><updated>2011-02-03T05:52:28.004-08:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಒಂದು ಮಧ್ಯಂತರ ಕಥೆ ....</title><content type='html'>ಮಧ್ಯ ನನ್ನ ಜೊತೆ ಜೊತೆಗೆ ಇರುವ ವಸ್ತು. ಘಾಬರಿ ಆಯಿತಾ?. ಕೇಳಿ ನನ್ನ ಜೊತೆ ಇರುವ ಮಧ್ಯ ಮತ್ತು ಅಂತರದ ಕಥೆ (ವ್ಯಥೆ).&lt;br /&gt;&lt;span class=""&gt;&lt;/span&gt;&lt;br /&gt;ನನ್ನ ಅಕ್ಕ ಮತ್ತು ತಂಗಿಯ ಮಧ್ಯ ನಾನು ಜನಸಿದ್ದು. ಮಧ್ಯ ಹುಟ್ಟಿದ ಮಾತ್ರಕ್ಕೆ ಆ ನಾಮಧೇಯಕ್ಕೆ(ಮಧ್ಯ - ಹೆಂಡಕ್ಕೆ ಅಲ್ಲ ಸ್ವಾಮಿ...ನಡುವೆ) ನೈವೇದ್ಯ ಆಗಿದ್ದು ಮಾತ್ರ ಹಲವು ಬಾರಿ. ಶಾಲೆಗೆ ಸೇರಿದೆ ಅಲ್ಲಿ ಕೂಡ ಈ ಮಧ್ಯ ನನ್ನ ಬಿಡಲಿಲ್ಲ. ನಾನು ಇಬ್ಬರು ಹುಡುಗರ ಮಧ್ಯ ನನ್ನ ಆಸನ. ಅಡ್ಡ ಕತ್ತರಿಯಲ್ಲಿ ಅಡಿಕೆ ಆದ ಹಾಗೆ, ಹಾಗೂ.. ಹೀಗೂ... ಮಿಸುಗುವ ಹಾಗಿಲ್ಲ ಕೂಡ. ಮತ್ತೆ ಪರೀಕ್ಷೆಯಲ್ಲಿ ಕೂಡ ಇದೆ ಕಥೆ... ಯಾವತ್ತೂ ಎರಡನೆ ಶ್ರೇಯಾಂಕದಲ್ಲಿ ಉತ್ತೀರ್ಣ ಆಗುತ್ತಿದ್ದೆ. ಮೊದಲನೇಯವನಾಗುವದು ಕನಸಿನ ಮಾತಾಗಿತ್ತು. ಹೇಗಾದರೂ ಮಾಡಿ ಈ ಬಾರಿ ಕೆಟ್ಟದಾಗಿ ಬರೆದು, ಮೂರನೇ ಶ್ರೇಯಂಕಕ್ಕೆ ಹೋಗಬೇಕು ಎಂದು ಯೋಚಿಸಿ ಪರೀಕ್ಷೆ ಬರೆದೆ. ನನ್ನ ಗೆಳೆಯ ಶ್ರವಣ ತನ್ನ ಮೂರನೇ ಶ್ರೇಯಾಂಕದ ಆಸನ ಭದ್ರವಾಗಿ ಹಿಡಿದು ಕುಳಿತು ಬಿಟ್ಟಿದ್ದ. ಆಗ ಅನ್ನಿಸಿತು ಇವನು ಯಾರೋ ರಾಜಕಾರಣಿ ಮಗನೆ ಇರಬೇಕು ಎಂದು.. ಕಡೆಗೆ ಮತ್ತೆ ಎರಡನೆ ಶ್ರೇಯಾಂಕ ಲಭಿಸಿತು. ಆಗ ಅನ್ನಿಸಿತು ಈ ಮಧ್ಯ ತುರುವ ಕೆಲಸಕ್ಕಿಂತ ಅಂತರದಲ್ಲಿ ಇರುವುದು ಉತ್ತಮ ಎಂದು.&lt;br /&gt;&lt;br /&gt;ಒಂದು ದಿನ ನಾನು ಒಬ್ಬರ ಮನೆಗೆ ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದೆ. ಅಲ್ಲಿ ಕೂಡ ನನಗೆ ಮಧ್ಯದ ಆಸನ ದೊರೆಯಿತು. ಮತ್ತೆ ಊಟ ಹಾಕಿದರು. ನನಗೆ ನನ್ನ ದೇಹದ ಮಧ್ಯ ಭಾಗ(ಹೊಟ್ಟೆ) ಕೆಟ್ಟಿದ್ದರಿಂದ, ನಾನು ಮೊಸರನ್ನ ತಿಂದರೆ ಆಗುತ್ತೆ ಎಂದು, ಸಲ್ಪ ಸಾರು ಅನ್ನ ಊಟ ಮಾಡಿದೆ. ಚಪಾತಿ ಎಲ್ಲ ಆದ ಮೇಲೆ ಮತ್ತೆ ಸಾರು ಅನ್ನ ಬಂತು ನಾನು ಹಾಕಿಸಿ ಕೊಳ್ಳಲಿಲ್ಲ. ನಾನು ಮೊಸರನ್ನಕ್ಕೆ ಕಾಯುತ್ತಿದ್ದೆ. ಕಡೆಗೆ ಮೊಸರನ್ನ ಬರಲೇ ಇಲ್ಲ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲಿಲ್ಲ ಮತ್ತು ಹೊಟ್ಟೆ ಹಸಿದ ಹಾಗೆ ಕೂಡ ಅನ್ನಿಸಲಿಲ್ಲ. ಹಾಗೆ ಅರ್ಧ ಹೊಟ್ಟೆಯಲ್ಲಿ ಊಟ ಮುಗಿಸಿ ಬಂದು ಬಿಟ್ಟೆ.&lt;br /&gt;&lt;br /&gt;ಇನ್ನೂ ಬಸ್ಸಿನಲ್ಲಿ ಪ್ರಯಾಣಿಸುವಾಗ ಕೂಡ ಪ್ರತಿ ಬಾರಿ ಸಿಗುವದು ನಡುವಿನ ಆಸನನೆ. ನಡುವೆ ಮಧ್ಯಂತರ ಕೂಡ ಕಡಿಮೆನೆ ಸಿಗುತಿತ್ತು. ಮೊದಲು ನಾನು ತುಂಬಾ ತೆಳ್ಳಗೆ ಇದ್ದೇ. ಹೀಗಾಗಿ ನಾನು ಎಷ್ಟೇ ತಿಣುಕಿದರು ಅಕ್ಕ ಪಕ್ಕ ಕುಳಿತ ಜನ ಮೀಸುಗುತ್ತಿದ್ದಿಲ್ಲ. ಈಗ ಸ್ವಲ್ಪ.... ಕ್ಷಮಿಸಿ ತುಂಬಾ ಸುಧಾರಿಸಿದ್ದೇನೆ.&lt;br /&gt;&lt;br /&gt;ಇದೇಕೋ ತ್ರಿಶಂಕು ಸ್ವರ್ಗ ಸ್ತಿತಿ ನನಗೆ ಹಲವು ಬಾರಿ ಅನುಭವಿಸಿದ್ದೇನೆ. ಇದುವರೆಗೆ ಯಾವುದೆ ನೌಕರಿ ಸೇರಿದರು, ನನ್ನ ಹಿಂದೆ-ಮುಂದೆ ಒಬ್ಬರು ಸೇರುತ್ತಾರೆ. ಮತ್ತೆ ಅದು ನನ್ನ ಮೇಲಿನ ವರ್ಗಕ್ಕೆ ಮತ್ತು ಕೆಳಗಿನ ವರ್ಗಕ್ಕೆ. ಅದು ನನ್ನ ಸಂಬಳಕ್ಕೂ ಅನ್ವಯ ಕೂಡ ಆಗಿರುತ್ತೆ. ಮೊದಲ ಬಾರಿ ನಾನು ಒಂದು ನೌಕರಿ ಸೇರಿದೆ ಅಲ್ಲಿ ಕೂಡ ಎಲ್ಲರೂ ಒಂದೇ ಸಂಸಾರದ ಜನ ಕೆಲಸ ಮಾಡುತ್ತಿದ್ದರು. ಅವರ ನಡುವೆ ನಾನು ಅಂತರ ಪಿಶಾಚಿ. ಅವರು ಎಲ್ಲರೂ ಒಂದೇ ಬಾಷೆ ಮಾತನಾಡುತ್ತಿದ್ದರೆ, ನಾನು ಮಾತ್ರ ತಲೆ ಕೆರೆದುಕೊಳ್ಳುತ್ತ ಕೂಡುತ್ತಿದ್ದೆ. ಕಡೆಗೆ ಅದು ಬೇಡ ಎಂದು ಬಿಟ್ಟು ಬಿಟ್ಟೆ.&lt;br /&gt;&lt;br /&gt;ಮುಂದೆ ಬ್ಯಾಂಕ್ ಪರೀಕ್ಷೆಗೆ ಅರ್ಜಿ ಹಾಕಿದೆ. ಅಲ್ಲಿ ನಾನು ತುಂಬಾ ಚೆನ್ನಾಗಿ ಮಾಡುತ್ತಿದ್ದ ಒಂದು ಭಾಗ ಎಂದರೆ "ODD MAN OUT". ಕಡೆಗೆ ಪರೀಕ್ಷೆ ಫಲಿತಾಂಶ ಬಂದಾಗ ಅವರು ನನ್ನನ್ನು "ODD MAN OUT" ಮಾಡಿದ್ದರು.&lt;br /&gt;&lt;br /&gt;ಮುಂದೆ ಮತ್ತೊಂದು ನೌಕರಿಗೆ ಸೇರಿದೆ. ಅಲ್ಲಿ ಕೂಡ ಎಲ್ಲಾ ಜನರು ಒಂದೇ ಜಾತಿಯ ಜನ. ನಾನು ಜಾತಿ ಭೇಧದ ಮಧ್ಯ ಬೆಂದು ಬಳಲಿ ಬೆಂಡಾಗಿ ಹೋಗಿದ್ದೆ. ಹಾಗೂ ಹೀಗೂ ಹೆಣಗಿ ಮತ್ತೊಂದು ನೌಕರಿ ಸೇರಿದ್ದೇನೆ. ಇಲ್ಲಿ ಕೂಡ ದಿನವೂ ಸ್ಯಾಂಡ್‌ವಿಚ್ ಆಗಿದ್ದು ಮಾತ್ರ ಸತ್ಯ. ಬಾಸ್ ತಮಿಳಿಗ ಮತ್ತೆ ನನ್ನ ಕೆಳಗೆ ಕೆಲಸ ಮಾಡುವ ಇಬ್ಬರು ತಮಿಳಿಗರು.&lt;br /&gt;&lt;br /&gt;ಇನ್ನೂ ಮನೇಲಿ ಹೆಂಡತಿ,ಮಗನ ನಡುವೆ ದಿನವೂ ಸಾಂಡ್‌ವಿಚ್ ಆಗುತ್ತಾ ಇದ್ದೇನೆ. ಇನ್ನೂ ಬೈಕ್ ನಲ್ಲಿ ಹೋಗುವಾಗ ಸಹಿತ ನನ್ನ ಅಕ್ಕ ಮತ್ತು ಪಕ್ಕ ಜನ ಎಲ್ಲಿಂದಲೋ ಬಂದೆ ಬಿಟ್ಟಿರುತ್ತಾರೆ. ಮತ್ತೆ ಕೆಲವೇ ಕ್ಷಣಗಳಲ್ಲಿ ನನಗೆ ಟಾಟಾ ಹೇಳಿ ಅಂತರ ಪಿಶಾಚಿ ಹಾಗೆ ಬಿಟ್ಟು ಹೋಗಿರುತ್ತಾರೆ. ನಡುವೆ ಅಂತರವಿರಲಿ ಎಂದು ಎಲ್ಲಾ ಬಿ ಎಂ ಟಿ ಸಿ ಬಸ್ಸುಗಳ ಮೇಲೆ ಬರೆದಿರುತ್ತಾರೆ. ಹಾಗೆಯೇ ನನ್ನ ಬೈಕ್ ಮೇಲೆ ನಡುವೆ(ಮಧ್ಯ) ಅಂತರವಿದೆ ಎಂದು ಲಗತ್ತಿಸಲೇ ಎಂದು ಯೋಚನೆ ಕೂಡ ಮಾಡುತ್ತೇನೆ.&lt;br /&gt;&lt;br /&gt;ಇದು ನನ್ನ ಜನ್ಮದಿಂದ ಆಂಟಿ ... ಕ್ಷಮಿಸಿ ಅಂಟಿಕೊಂಡು ಬಂದದ್ದು. ಅದು ಹೇಗೆ? ಎಂದರೆ ತುಂಬಾ ಅಂತರದಲ್ಲಿ ಇರುವ ನನ್ನ ರಾಶಿ ಮೀನಾ(ಮೀನ)... ಕಡೆಯ ರಾಶಿ...ಮತ್ತೆ ನಕ್ಷತ್ರ ಪೂರ್ವಾ ಬಾ ಹತ್ತಿರ (ಪೂರ್ವಾಭಾದ್ರ) ಮತ್ತು ರೇವತಿ ಮಧ್ಯ ತುರುವ ಉತ್ತರಾ ಬಾ ಹತ್ತಿರ(ಉತ್ತರಾಭಾದ್ರ)... :-):-)&lt;br /&gt;&lt;br /&gt;ನನ್ನ ಜೀವನದ ಪ್ರತಿ ಧೈಯದ(ಗೋಲ್) ನಡುವೆ ಕೂಡ ಏನಾದರೂ ಸೇರಿ ಇರುತ್ತದೆ. ಉಧಾಹರಣೆಗೆ ನನ್ನ ಹೆಸರು ಗೋಪಾಲ್(GOPAL) ತಾನೇ, ಅದರಲ್ಲಿನ 'ಪಾ'(P) ತೆಗೆಯದ ಹೊರತು ಗೋಲ್(GOAL) ಆಗೋಲ್ಲ...&lt;br /&gt;&lt;br /&gt;ಮತ್ತೆ ಒಂದು ಪ್ರಬಂದ ಸ್ಪರ್ದೆಗೆ ನನ್ನ ಲೇಖನ ಕಳುಹಿಸಿದ್ದೇನೆ. ನಾನು ಎರಡನೆ ಶ್ರಯಾಂಕ (ಮಧ್ಯ) ಅಥವಾ "ODD MAN OUT"(ಅಂತರ) ಮಾತ್ರ ಬರಬಾರದು ಎಂದು ದಿನವೂ ಶ್ರೀ ರಾಮನನ್ನು ಸ್ಮರಿಸುತ್ತಿದ್ದೇನೆ. ಈ ಮಧ್ಯ ಮತ್ತು ಅಂತರದ ಸಜೇ ಇನ್ನೂ ಎಷ್ಟು ದಿವಸ ನಡೆಯುವುದೋ ಆ ಭಗವಂತನೇ ಬಲ್ಲ ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3197334845078652794?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3197334845078652794/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/%E0%B2%92%E0%B2%A6-%E0%B2%AE%E0%B2%A7%E0%B2%AF%E0%B2%A4%E0%B2%B0-%E0%B2%95%E0%B2%A5.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3197334845078652794'/><link rel='self' type='application/atom+xml' href='http://www.blogger.com/feeds/3457141075796460701/posts/default/3197334845078652794'/><link rel='alternate' type='text/html' href='http://haalusakkare.blogspot.com/2010/12/%E0%B2%92%E0%B2%A6-%E0%B2%AE%E0%B2%A7%E0%B2%AF%E0%B2%A4%E0%B2%B0-%E0%B2%95%E0%B2%A5.html' title='ಒಂದು ಮಧ್ಯಂತರ ಕಥೆ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-7184445677029793003</id><published>2010-12-10T06:39:00.000-08:00</published><updated>2010-12-10T06:42:10.519-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><title type='text'>ಚಪ್ಪಲ್ ಚನ್ನಿಗರಾಯ ....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; color: rgb(61, 61, 61); line-height: 18px; "&gt;&lt;span class="Apple-style-span"&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ. ಆಗ ಮಂಜ ಮುಂದೆ ಮದುವೆ ಆದರೆ, ಲೇ ಇಬ್ಬರ ಹೆಸರು ಒಂದೇ ತರಹ ಇದ್ದರೆ ಮನೆಯಲ್ಲಿ ಕರೆಯುವದು ಕಷ್ಟ ಕಣೋ, ಅದಕ್ಕೆ ಅವಳ ಹೆಸರು ಅಮೃತಾ ಎಂದು ಮದುವೆ ಆದ ಮೇಲೆ ಬದಲಿಸು ಎಂದು ಹೇಳಿದ. ಅವಳು ಅವನಿಗೆ ತುಂಬಾ ಇಷ್ಟ ಪಡುತ್ತಿದ್ದಳು. ನಾವು ಒಳಗೊಳಗೆ ಅಮೃತಾ + ಅಂಜನ್ = ಅಮೃತಾಂಜನ್ ಎಂದು ಅವನನ್ನು ಆಡಿಕೊಂಡು ಅವನ ಹಿಂದೆ ನಗುತ್ತಿದ್ದೆವು.&lt;/span&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ಕಡೆಗೆ ಒಂದು ದಿನ ಮಂಜ, ಲೇ ... ಅವಳನ್ನು ಮದುವೆ ಆದರೆ ನಿನಗೆ ಕಷ್ಟ ಕಣೋ ಏಕೆಂದರೆ? ಅವಳು ತುಂಬಾ ದುಡ್ಡು ಖರ್ಚು ಮಾಡುತ್ತಾಳೆ. ಈಗಿನ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆದರೆ ಕಷ್ಟ, ಅದು ಬೇರೆ ನೀನು ಲವ್ ಮ್ಯಾರೇಜ್ ಆಗುತ್ತಾ ಇದ್ದೀಯಾ ಮುಂದೆ ತುಂಬಾ ಕಷ್ಟ ಆಗುತ್ತೆ ಎಂದು ಹೇಳಿದಾಗ, ಅವಳು ಮಾತನಾಡಿಸಿದರು ಅವಳಿಗೆ ಯಾವದೆ ಸೊಪ್ಪು ಹಾಕಲಿಲ್ಲ. ಕಡೆಗೆ ಅವಳನ್ನು ಬಿಟ್ಟು ಬಿಟ್ಟ.&lt;/span&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ನಾನು,ಮಂಜ ಮತ್ತು ಸುಬ್ಬ ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದ್ದೆವು. ಆಗ ಒಂದು ದಿವಸ ನನಗೆ ಫೋನ್ ಮಾಡಿದ್ದ. ಏನಪ್ಪಾ? ಏನು ಮಾಡುತ್ತಾ ಇದ್ದೀರ ತ್ರಿಮೂರ್ತಿಗಳು ಎಂದು ಕೇಳಿದ. ನಾನು ಬೆಂಗಳೂರಿಗೆ ಬರುತ್ತಾ ಇದ್ದೇನೆ. ನಿಮ್ಮ ರೂಮಿನಲ್ಲಿ ಇರುವುದಕ್ಕೆ ಅವಕಾಶ ಕೊಡು ಎಂದು ಕೇಳಿದ.ಲೇ.. ನಾನೇ ಮಂಜನ ರೂಮಿಗೆ ಬಂದಿದ್ದೇನೆ. ನೀನು ಮಂಜನಿಗೆ ಕೇಳು ಎಂದು ಹೇಳಿದೆ. ಕಡೆಗೆ ಅವರಿಬ್ಬರ ನಡುವೆ ಏನೋ ಒಪ್ಪಂದ ಆಯಿತು ಎಂದು ಅನಿಸುತ್ತದೆ. ಮರುದಿನ ಅಂಜನ್ ನಮ್ಮ ರೂಮಿನಲ್ಲಿ ಠಿಕಾಣಿ ಹೂಡಿದ್ದ.&lt;/span&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ಏನೋ ಸುಧಾರಿಸಿರಬಹುದು ಎಂದು ನಾವೆಲ್ಲರೂ ಎಣಿಸಿದ್ದೆವು. ಆದರೆ ತಿಂಡಿ, ಊಟ ಆದಮೇಲೆ ದುಡ್ಡು ಕೊಡದೇ ಫೋನ್ ಬಂದಿದೆ ಅಥವಾ ಫೋನ್ ಮಾಡುವುದಿದೆ ಎಂದೆಲ್ಲ ನೆಪ ಹೇಳಿ, ನಮ್ಮದೇ ದುಡ್ಡಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ತ್ರಿಮೂರ್ತಿಗಳಾದ ನಮಗೆ ಮೂರು ನಾಮ ಇಟ್ಟಿದ್ದ. ಮಂಜ ಮತ್ತು ನಾವೆಲ್ಲರೂ ಎಷ್ಟು ಯೋಚನೆ ಮಾಡಿ, ರೂಮಿನಿಂದ ಹೊರ ಹಾಕ ಬೇಕೆಂದರು ಆಗಲಿಲ್ಲ. ಬಸ್ಸಿನಲ್ಲೂ ಸಹ ಅವನ ಚಪಲತೆ ಪ್ರದರ್ಶಿಸುತ್ತಿದ್ದ. ಅವನು ತುಂಬಿದ ಬಸ್ಸಿಗೆ ಮಾತ್ರ ಹತ್ತುತಿದ್ದ. ಒಂದು ದಿನ ಖಾಲಿ ಬಸ್ ಹತ್ತಿದ್ದ. ಮುಂದೆ ನಿಂತ ಹುಡುಗಿ ಅವನಿಗೆ ತನ್ನ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಅದನ್ನು ನೋಡಿದ ಮಂಜ, ಅವನಿಗೆ ಹೀಗೆಲ್ಲ ಮಾಡುವ ಹಾಗಿದ್ದರೆ ನೀನು ಬೇರೆ ಕಡೆಗೆ ಹೋಗು ಎಂದು ತಾಕೀತ್ ಮಾಡಿದ್ದ. ತಪ್ಪು ಆಯಿತು.. ಕ್ಷಮಿಸು.. ಎಂದು ಹೇಳಿ ಮುಂದಿನ ಬಾರಿ ಹಾಗೆ ಮಾಡುವುದಿಲ್ಲ ಎಂದು ಹೇಳಿದ. ಕಡೆಗೆ ಒಪ್ಪಿ ಇಟ್ಟು ಕೊಂಡೆವು. ಕೆಲ ದಿನ ಸುಧಾರಿಸಿದ ಹಾಗೆ ನಟಿಸಿ ಮತ್ತೆ ನಾಯಿ ಬಾಲ ಡೊಂಕು ಅನ್ನುವ ಹಾಗೆ ಮತ್ತೆ ತನ್ನ ವರಸೆ ಶುರು ಹಚ್ಚಿಕೊಂಡ.&lt;/span&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ಮನೆಯವರಿಗೂ ಇವನ ಬಗ್ಗೆ ಅಸಡ್ಡೆ ಇತ್ತು. ಅವರ ಅಪ್ಪ ಅವನಿಗೆ ಮದುವೆ ಆದರೆ ಸುಧಾರಿಸುತ್ತಾನೆ ಎಂದು. ಹೆಣ್ಣು ನೋಡಲು ಶುರು ಮಾಡಿದರು. ಪ್ರತಿ ವಾರ ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದು ಕೊಂಡು ಹೋಗುತ್ತಿದ್ದ. ಅದು ಬರಿ 200 ಗ್ರ್ಯಾಮ್ಸ್ ಮಾತ್ರ. ಪ್ರತಿ ಬಾರಿ ಸಂಬಂದ ರಿಜೆಕ್ಟ್ ಆಗುತ್ತಿತ್ತು. ಅವನಿಗೂ ತಲೆ ಕೆಟ್ಟು ಹೋಗಿತ್ತು. ಒಂದು ದಿನ ಬೆಂಗಳೂರಿನಲ್ಲೇ, ಒಂದು ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದುಕೊಂಡು ಶಾಸ್ತ್ರಕ್ಕೆ ಹೋಗಿದ್ದ. ಆಗ ಹೆಣ್ಣು ನೋಡಿ ಚೆನ್ನಾಗಿಲ್ಲ ಎಂದು ಸ್ವೀಟ್ ಬಾಕ್ಸ್ ಕೊಡದೇ ವಾಪಸ ತಂದಿದ್ದ. ಅದನ್ನು ರೂಮಿಗೆ ತಂದು ನಮಗೆ ಕೊಡಲು ಓಪನ್ ಮಾಡಿದ. ನೋಡಿದರೆ ಅದರಲ್ಲಿ ಸ್ವೀಟ್ ಇರದೆ ಕೆಟ್ಟ ವಾಸನೆಯ ಹಳಸಿದ ಮ್ಯಾಗಿ ಇತ್ತು. ಅವನಿಗೆ ಸ್ವೀಟ್ ಅಂಗಡಿಯವನ ಮೇಲೆ ತುಂಬಾ ಕೋಪ ಬಂತು. ಲೇsss.. ಅದಕ್ಕೆ ಕಣೋ ಹೆಣ್ಣು ಮೊದಲು ಒಪ್ಪಿಗೆ ಸೂಚಿಸಿ, ಆಮೇಲೆ ರಿಜೆಕ್ಟ್ ಮಾಡುತ್ತಾ ಇರುವದು ಎಂದು ಹೇಳಿ, ಅದನ್ನು ತೆಗೆದು ಕೊಂಡು ಸ್ವೀಟ್ ಅಂಗಡಿಗೆ ಜಗಳಕ್ಕೆ ಹೋದ. ಮಂಜ ಮುಸಿ.. ಮುಸಿ.. ನಗುತ್ತಿದ್ದ. ಅವನೆ ಸ್ವೀಟ್ ತಿಂದು, ಹೀಗೆ ಮಾಡಿದ್ದಾನೆ ಎಂದು ನಮಗೆ ಖಾತ್ರಿ ಆಯಿತು. ಸ್ವೀಟ್ ಅಂಗಡಿ ಹೋಗಿ ಬಾಕ್ಸ್ ತೆಗೆದೊಡನೆ ಕೆಟ್ಟ ವಾಸನೆ ಬರುತಿತ್ತು. ಅದನ್ನು ನೋಡಿ ಕೆಲ ಗಿರಾಕಿಗಳು ಸಹಿತ ಏನು ತೆಗೆದು ಕೊಳ್ಳದೇ ಹೋಗಿ ಬಿಟ್ಟರು. ನೀವು ನನಗೆ ಮೋಸ ಮಾಡಿದ್ದೀರ ಎಂದು ಹೇಳಿ, ಸ್ವೀಟ್ ತರುತ್ತಾನೆ ಎಂದು ನಾವು ಎಣಿಸಿದರೆ, ಅವರ ಕಡೆ 500 ರೂಪಾಯಿಗಳನ್ನು ಕಿತ್ತುಕೊಂಡು ಬಂದಿದ್ದ.&lt;/span&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ಮುಂದೆ ಮತ್ತೊಂದು ಹೆಣ್ಣು ನೋಡುವದಕ್ಕೆ ಹೋಗುವುದಿತ್ತು. ಈ ಹುಡುಗಿ ಕೂಡ ಬೆಂಗಳೂರಿನಲ್ಲೇ ಇದ್ದಳು. ಅವಳನ್ನು ನೋಡಲು ನನ್ನನ್ನು ಕರೆದು ಕೊಂಡು ಹೋದ. ನಾನು ಯಾವುದಾದರೂ ಹೋಟೆಲ್ ಹೋಗಿ ಮಾತನಾಡೋಣ ಎಂದು ಹೇಳಿದೆ. ಅಲ್ಲಿ ಯಾವುದೆ ಚಿಕ್ಕ ಹೋಟೆಲ್ ಕಾಣಲಿಲ್ಲ, ಕಡೆಗೆ ದೊಡ್ಡ ಮನಸು ಮಾಡಿ ಬರಿಸ್ಟಾಗೆ ಕರೆದು ಕೊಂಡು ಹೋದ. ನಾನು,ಅವನು ಮತ್ತೆ ಹುಡುಗಿ, ಹುಡುಗಿಯ ಗೆಳತಿ ಎಲ್ಲರೂ ಹೋದೆವು. ಅಲ್ಲಿ ಬರಿ ಕಾಫೀ ಆರ್ಡರ್ ಮಾಡುತ್ತಲಿದ್ದ. ನಾನು ಏನಾದರೂ ತಿನ್ನಲು ಎಂದು ನಾನೇ ಹುಡುಗಿಯರಿಗೆ ಕೇಳಿದೆ. ಅವರು ಏನು ತಿಂದು ಬಂದಿರಲಿಲ್ಲ ಎಂದು ಕಾಣುತ್ತೆ, ಅವರು ತಿಂಡಿ ಆರ್ಡರ್ ಮಾಡಿದರು. ಅವರ ಜೊತೆ ನನಗು ತಿಂಡಿ ಲಭಿಸಿತ್ತು. ಅಷ್ಟರಲ್ಲೇ ನಮ್ಮ ಮಂಜ ಸುಬ್ಬನನ್ನು ಕರೆದುಕೊಂಡು ಬಂದು ಬಿಟ್ಟ. ಬಂದವನೇ ತಾನೇ ಅವರ ಪರಿಚಯ ಮಾಡಿಕೊಂಡು. ಅಂಜನ್ ನಮ್ಮ ತುಂಬಾ ಆಪ್ತ ಗೆಳೆಯ ಎಂದೆಲ್ಲ ಹೇಳಿ ಸಿಕ್ಕಾಪಟ್ಟೆ ತಿಂದು ಎದ್ದು ಹೋಗಿ ಬಿಟ್ಟ. ಅಂಜನ್ ಏನು ಮಾಡಲಾರದೇ 2300 ಬಿಲ್ಲು ಕೊಟ್ಟು ಬಂದಿದ್ದ. ಅವನ ಮುಖ ಇಂಗು ತಿಂದ ಮಂಗನ ಹಾಗೆ ಆಗಿತ್ತು. ಆ ಹುಡುಗಿಯೂ ಅವನಿಗೆ ರಿಜೆಕ್ಟ್ ಮಾಡಿದ್ದಳು. ಕೆಲ ದಿನಗಳ ಬಳಿಕ ಮಂಜನ ತರಲೆಗಳು ಅರ್ಥ ಆಗಿ ತಾನೇ ಜಾಗ ಖಾಲಿ ಮಾಡಿದ.&lt;/span&gt;&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;&lt;span class="Apple-style-span" &gt;ಅವನಿಗೆ ನಾವೆಲ್ಲರೂ ಚಪ್ಪಲ್ ಚೆನ್ನಿಗರಾಯ ಎಂದೆ ಸಂಭೋಧಿಸುತ್ತಿದ್ದೆವು. ಈಗ ಅವನಿಗೆ ಚಪ್ಪರ ಹಾಕುವ ಸಂದರ್ಭ ಒದಗಿ ಬಂದಿದೆ. ಏನು? ಮಾಡುತ್ತಾನೋ ನೋಡಬೇಕು.&lt;/span&gt;&lt;/p&gt;&lt;p&gt;&lt;/p&gt;&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7184445677029793003?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7184445677029793003/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_10.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7184445677029793003'/><link rel='self' type='application/atom+xml' href='http://www.blogger.com/feeds/3457141075796460701/posts/default/7184445677029793003'/><link rel='alternate' type='text/html' href='http://haalusakkare.blogspot.com/2010/12/blog-post_10.html' title='ಚಪ್ಪಲ್ ಚನ್ನಿಗರಾಯ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-4532962925008078980</id><published>2010-12-03T06:37:00.000-08:00</published><updated>2010-12-03T06:38:12.523-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ನೀನು ಸಾಯಿತಿ ಅಂತೆ .........?</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮರು ದಿನ ಏಕೋ ಬಲ ಕೈ ಸ್ವಲ್ಪ ಕೆರೆತ ಶುರು ಆಯಿತು. ನಾನು ಕೈ ಕೆರೆಯುತ್ತಾ ಇದ್ದಾಗ, ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜ ಏನೋ ಕೈ ಕೆರೆತ ಚಾನ್ಸ್ ಅಂದ. ತುಂಬಾ ಕೆರೆತ ಆಗಿ ನಾನು ಒದ್ದಾಡುತ್ತಾ ಇದ್ದರೆ, ನೀನು ಚಾನ್ಸ್ ಅನ್ನುತ್ತೀಯ ಎಂದೆ. ಲೇ.. ಬಲ ಕೈ ಕೆರೆತ ಆದ್ರೆ ದುಡ್ಡು ಬರುತ್ತೆ ಕಣೋ ಅಂದ. ಒಳಗೊಳಗೆ ಸಂತೋಷದಿಂದ ಕುಣಿದಾಡಿದೆ. ಅವನ ಮುಂದೆ, ಹಾಗೆ ರೈಲು ಬಿಡುತ್ತೀಯಾ ಎಂದು ದಬಾಯಿಸಿದೆ. ಏ ನಿನಗೇನೂ ಗೊತ್ತು ಬಲ ಕೈ ಕೆರೆತ ಆದರೆ ದುಡ್ಡು ಖಂಡಿತ ಬರುತ್ತೆ ಅಂದ. ಮತ್ತೆ ಎಡ ಕೈ ಕೆರೆತ ಆದರೆ ದುಡ್ಡು ಖರ್ಚಾಗುತ್ತೆ ಅಂದ. ಎಡ ಕಣ್ಣು ಅದುರಿದರೆ ಅಶುಭ, ಬಲ ಕಣ್ಣು ಅದುರಿದರೆ ಶುಭ ಎಂದು ಹೇಳಿದ. ಲೇ... ಸುಮ್ಮನೇ ಹೇಳ ಬೇಡ ನಾನು ಕಾಲೇಜ್ ನಲ್ಲಿ ಇದ್ದಾಗ, ಒಂದು ಹುಡುಗಿ ನೋಡಿ ಬಲ ಕಣ್ಣು ಅದುರಿಸಿದ್ದೆ. ಆದರೆ ಅವಳು ನನ್ನ ಹಲ್ಲು ಉದಿರುಸುತ್ತೇನೆ ಎಂದು ಬೆದರಿಕೆ ಹಾಕಿದಳು . ಆಮೇಲಿಂದ ಯಾವತ್ತೂ ಕಣ್ಣು ಅದುರಲೆ ಇಲ್ಲ, ಎರಡು ಹಲ್ಲುಗಳು ತಾನಾಗಿಯೇ ಉದುರಿದವು ಎಂದು ಹೇಳಿದೆ. ಮನೋಜ ತುಂಬಾ ಜೋರಾಗಿ ನಕ್ಕೂ... ಅದು ತಾನಾಗಿಯೇ ಅದುರ ಬೇಕು ಕಣೋ ಎಂದು ಅಪಹಾಸ್ಯ ಮಾಡಿದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಕಡೆಗೆ ನಾನು ಆಫೀಸ್ ಹೋದೆ. ಆದರೂ ಇನ್ನೂ ಕೈ ಕೆರೆತ ಇದ್ದೇ ಇತ್ತು. ಆಫೀಸ್ ಹೋದೊಡನೆ, ಬಾಸ್ ಕರೆದು ರೀ... ನಿಮ್ಮ ಅಪ್ರೇಸಲ್ ಈ ತಿಂಗಳು ಇದೆ ಅಲ್ವೇ ಎಂದರು. ಹೌದು.. ಹೌದು.. ಎಂದು ಖುಶಿಯಿಂದ ಕೈ ಕೆರೆಯುತ್ತಾ ಹೇಳಿದೆ. ಆಯಿತು ಹೋಗಿ ಎಂದು ಹೇಳಿ ಕಳುಹಿಸಿದರು. ನನಗೆ ಸಕತ್ ಖುಷಿ, ಲೇ ಹೊಡೆದೆ ಕಣೋ ಚಾನ್ಸ್ ಎಂದು ಅಂದು ಕೊಂಡು, ಮನೋಜಗೆ ಫೋನ್ ಮಾಡಿ ಹೇಳಿದೆ. ನಾನು ಹೇಳಿರಲಿಲ್ಲವಾ? ಎಂದ. ಆದರೆ ಕೈ ಕೆರೆತ ನಿಲ್ಲಲೇ ಇಲ್ಲ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮರು ದಿನ ಕೈ ತುಂಬಾ ಬಾತು ಕೆಂಪಗೆ ಆಗಿತ್ತು. ಲೇ.. ಏನೋ ಇದು ಇಷ್ಟೊಂದು ಕೆರೆತ ಎಂದು ಮನೋಜಗೆ ಕೇಳಿದೆ. ಇದೇನೋ ಪ್ರಾಬ್ಲಮ್ ಕಣೋ, ಕೂಡಲೇ ಡಾಕ್ಟರ್ ಕಾಣು ಎಂದು ಹೇಳಿದ. ಡಾಕ್ಟರ್ ಬಳಿ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ. ಏನ್ರೀ ಇದು ಇಷ್ಟೊಂದು ಆಗೋವರೆಗೂ ಸುಮ್ಮನೇ ಕತ್ತೆ ಕಾಯುತ್ತಾ ಇದ್ದೀರಾ? ಎಂದು ಬೈದರು. ಸರ್ ಅದು .. ಅದು ... ಎಂದು ತಡವರಿಸಿದೆ. ಅವರು ನನಗೆ ಒಂದು ಆಯಂಟ್‌ಮೆಂಟ್ ಹಚ್ಚಿ, ಕೆಲ ಮಾತ್ರೆ ಬರೆದು ಕೊಟ್ಟರು. ಅಷ್ಟರಲ್ಲಿ ನನ್ನ ಮೊಬೈಲ್ ಗೆ ಒಂದು ಕರೆ ಬಂತು. ನಾನು ರಾಜೇಶ್ ಕಣೋ... ಎಂದು ಆ ಕಡೆಯಿಂದ ಧ್ವನಿ ಬಂತು. ನಾನು ಯಾರು? .... ರಾಜೇಶ್. ಓಕೆ ಹೇಳಿ ಏನು ಆಗಬೇಕು ಎಂದೆ. ನಾನು ಕಣೋ ನಿನ್ನ ಕ್ಲಾಸ್ ಮೇಟ್ ಅಂದ. ಇನ್ನೂ ಅವನ ಮುಖ ಚಹರೆ ಸ್ಮೃತಿಗೆ ಬರದಿದ್ದರೂ... ಓss.. ರಾಜೇಶ್ ಹೇಳು ಚೆನ್ನಾಗಿದ್ದೀಯ? ಎಂದು ಕೇಳಿದೆ. ಓss.. ನಾನು ಚೆನ್ನಾಗಿ ಇದ್ದೇನೆ ಎಂದ. ನೀನು ಸಾಯಿತಿ ಅಂತೆ ಎಂದು ಕೇಳಿದ. ನನಗೆ ತಡೆಯಲಾರದಷ್ಟು ಕೋಪ ಬಂದಿತು. ನಿನಗೆ ಯಾರು? ಹೇಳಿದರು ಎಂದು ಕೇಳಿದೆ. ನನಗೆ ಗೊತ್ತು, ನೀನು ಪಾರ್ಟೀ ಯಾವಾಗ ಕೊಡಿಸುತ್ತೀಯ ಎಂದು ಕೇಳಿದ. ನನಗೆ ಎಣ್ಣೆ ಪಾರ್ಟೀನೇ ಬೇಕು ಎಂದ. ಏನು ಸಾಯಿತಿ ಎಂದರೆ ಸುಮ್ಮನೇನಾ? ಎಂದ. ನನಗೆ ಸಕ್ಕತ್ ಕೋಪ ಬಂದಿತ್ತು. ಆದರೂ ತಡೆದುಕೊಂಡು ಮನಸಿನಲ್ಲೇ ಸಾಯುವ ಮೊದಲೇ ತಿಥಿ ಊಟ ಕೇಳೋ, ನಿನಗೆ ಹತ್ತಿಗೆ ಹೊಡೆಯುವ ಎಣ್ಣೇನೇ ಕೂಡಿಸುತ್ತೇನೆ ಮಗನೆ ಬಾ ಎಂದು ಬೈದುಕೊಂಡೆ. ನಿಮಗೆ ಯಾರು ಬೇಕಿತ್ತು ಎಂದು ಅನುಮಾನದಿಂದ ಕೇಳಿದೆ. ಲೇ ಗೋಪಾಲ್ ...ನೀನೆ ಕಣೋ ಕತ್ತೆ ಕಾಯುವನೆ ಎಂದ. ಕೋಪ ಇನ್ನಷ್ಟು ಉಕ್ಕಿ ಬಂತು ದನ ಕಾಯುವವನಿಗೆ ಕತ್ತೆ ಕಾಯುವವ ಎಂದರೆ ಬರದೇ ಇರುತ್ತೆ. ಇದೇನಾದರೂ ಮಂಜನ ಕಿತಾಪತಿ ಇರಲು ಬಹುದು ಎಂದು ಅನ್ನಿಸಿದ್ದು ನಿಜ. ಯಾರಾದರೂ ನಾನು ಆಸ್ಪತ್ರೆಗೆ ಬಂದಿದ್ದು ನೋಡಿದರಾ?. ಮಂಜ ಹೊರಗಡೆ ಇರಬಹುದಾ?. ನೋರೆಂಟು ಯೋಚನೆ ತಲೆಯೊಳಗೆ...ಅದು ನಾನು ಸಾಯುವ ವಿಷಯ ಗೊತ್ತಾಗಿದೆ ಎಂದರೆ ಇವನು ಯಮಧರ್ಮರಾಯನೆ? .... ಮತ್ತೆ ರಾಜೇಶ್ ಎಂದ. ಎಲ್ಲರಿಗೂ ಹೇಳಲು ಸುಲಭವಾಗಲಿ ಎಂದು ಹೆಸರು ಬದಲಿಸಿದನೆ? ತಿಳಿಯಲಿಲ್ಲ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಕೂಡಲೇ, ಹೊರಗಡೆ ಓಡಿದೆ. ಡಾಕ್ಟರ್ ಓಡುತ್ತಿರುವ ನನ್ನ ನೋಡಿ.. ಏsss.. ಕಲ್ಲಪ್ಪ, ಹಿಡಿ ಅವನನ್ನ ಎಂದು ತಮ್ಮ ಕಾಂಪೌಂಡರ್ ಗೆ ಕೂಗಿದರು. ಆದರೂ ತಪ್ಪಿಸಿಕೊಂಡು ಹೊರಗಡೆ ಹೋಗಿ, ಎಲ್ಲ ಕಡೆ ಕಣ್ಣು ಆಡಿಸಿದೆ. ಯಾರು ಪರಿಚಯದವರು ಕಾಣಲಿಲ್ಲ. ಮತ್ತೆ ಕಾಂಪೌಂಡರ್ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಕೊಂಡು ಡಾಕ್ಟರ್ ಬಳಿ ಬಂದು ನಿಲ್ಲಿಸಿದ. ನಾನು ಮೊಬೈಲ್ ನಲ್ಲಿ ಇದ್ದ ಮನುಷ್ಯನಿಗೆ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿದೆ. ನನಗೆ ಫೋನ್ ಮಾಡಿದ ವ್ಯಕ್ತಿ ಡಾಕ್ಟರ್ ಪರಿಚಯದವನೆ ಎಂದು ಯೋಚನೆ ಕೂಡ ಬಂತು. ಸರ್, ನಿಮಗೆ ರಾಜೇಶ್ ಗೊತ್ತಾ ಎಂದು ಕೇಳಿದೆ. ರೀ ಯಾರಿದ್ದರೆ ನನಗೆ ಏನ್ರೀ... ಅವನೇನು ನನಗೆ, ಮೊದಲು ಫೀಸ್ ಕೊಟ್ಟು ಮಾತಾಡಿ ಎಂದು ದಬಾಯಿಸಿದರು. ನನಗೆ ಆ ಕರೆಯ ಗದ್ದಲದಲ್ಲಿ ಮರೆತೇ ಹೋಗಿತ್ತು. ಸಾರಿ... ಸರ್ ಎಂದು ಹೇಳಿ ಫೀಸ್ ಕೊಟ್ಟು ಹೊರಗಡೆ ಬಂದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಹೊರಗಡೆ ಬಂದೊಡನೆ ಮತ್ತೆ ಅದೇ ಮೊಬೈಲ್ ಗೆ ಫೋನ್ ಮಾಡಿದೆ. ಯಾರು? ನೀವು ಎಂದು ಕೇಳಿದೆ. ನಾನು ರಾಜೇಶ ಎಂದ. ಯಾವ ರಾಜೇಶ್ ಎಂದು ದಬಾಯಿಸಿದೆ. ಲೇss.. ನಾನು ಡಬ್ಬಾ-ಡುಬ್ಬೀ ಆಡುವಾಗ ನಿನಗೆ ಚೆಂಡಿನಿಂದ ಕೆನ್ನೆಗೆ ಬಾರಿಸಿದ್ದೆನಲ್ಲಾ ಎಂದ. ಕಡೆಗೆ ನೆನಪಿಗೆ ಬಂತು. ಅಗಲೆ ಏನೋ ಹೇಳುತ್ತಿದ್ದೆ ಅಲ್ಲ ಎಂದೆ. ಅದೇ ಕಣೋ, ನೀನು ದೊಡ್ಡ ಸಾಯಿತಿ ಅಂತೆ. ಕಥೆ, ಕವನ ಮತ್ತೆ ಆಸ್ಯ ಲೇಖನ ಬರೆಯುತ್ತೀಯಾ ಎಂದು ಕೇಳಿದ. ಆಗ ಅರ್ಥ ಆಗಿತ್ತು ಅವನು ಹೇಳಿದ್ದು ಸಾಹಿತಿ ಎಂದು. ನಾನೇನು ದೊಡ್ಡ ಸಾಹಿತಿ ಅಲ್ಲ ಮಹಾರಾಯ... ಬ್ಲಾಗ್ ಬರಹಗಳನ್ನು ಮಾತ್ರ ಬರೆಯುತ್ತೇನೆ ಎಂದು ಹೇಳಿದೆ. ಪೂರ್ತಿ ನೆನಪಿಗೆ ಬಂತು ಪಾಪ, ಅವನಿಗೆ ಹ ಕಾರ ಮಾತನಾಡಲು ಬರುವದಿಲ್ಲ. ಹ ಅಂದರೆ ಅ ಅನ್ನುತ್ತಾನೆ, ಹಾ ಎಂದರೆ ಆ .... ಹೀಗೆ. ಚಿಕ್ಕ ವಯಸಿನ್ನಲ್ಲಿ ನೋಡಿದ್ದು, ನಾವು ಅವನಿಗೆ ಹಂದಿ ಎಂದು ಕಾಡುತ್ತಿದ್ದೆವು. ಅವನು ಅದಕ್ಕೆ ನೀನೆ ಅಂದಿ ಅನ್ನುತ್ತಿದ್ದ ಪಾಪ. ಹೌದು ನಾನೇ ಅಂದಿದ್ದು, ನೀನೆ ಹಂದಿ ಎಂದೆಲ್ಲ ಕಾಡುತ್ತಿದ್ದೆವು. ಮತ್ತೆ ಎಲ್ಲಾ ಕ್ಷೇಮ ಸಮಾಚಾರ ವಿಚಾರಿಸಿ ಮನೆಗೆ ಬರುವಂತೆ ಹೇಳಿ ಫೋನ್ ಇಟ್ಟೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮರುದಿನ ಮುಂಜಾನೆ ಬಾಸ್ ಮತ್ತೆ ಕರೆದು, ರೀ ನಿಮ್ಮದು ಮುಂದಿನ ತಿಂಗಳು ಅಪ್ರೇಸಲ್ ಅಲ್ಲವಾ, ಮತ್ತೆ ನನಗೆ ಹೇಳಿದ್ದು ಇದೆ ತಿಂಗಳು ಎಂದು ಕೇಳಿದರು. ನಾನು ನಿರಾಸೆಯ ಅಲೆಯಲ್ಲಿ ತೇಲುತ್ತ ಬಂದು ಕುಳಿತು, ಮಡದಿ ಫೋನ್ ಮಾಡಿ, ಆದ ವಿಚಾರನೆಲ್ಲ ಹೇಳಿದಾಗ ಅವಳಿಗೂ ಕೂಡ ನಗು ತಡೆಯಲು ಆಗಲಿಲ್ಲ.&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-4532962925008078980?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/4532962925008078980/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post_03.html#comment-form' title='5 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/4532962925008078980'/><link rel='self' type='application/atom+xml' href='http://www.blogger.com/feeds/3457141075796460701/posts/default/4532962925008078980'/><link rel='alternate' type='text/html' href='http://haalusakkare.blogspot.com/2010/12/blog-post_03.html' title='ನೀನು ಸಾಯಿತಿ ಅಂತೆ .........?'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-3457141075796460701.post-3951243076225631241</id><published>2010-12-01T03:36:00.000-08:00</published><updated>2010-12-10T06:38:53.677-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಇಡ್ಲಿ'/><category scheme='http://www.blogger.com/atom/ns#' term='ನಗು'/><title type='text'>ಹೋಟೆಲ್ ಊಟ... ಹೊಟ್ಟೆಯಲ್ಲಿ ಆಟ...</title><content type='html'>ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು ಅಷ್ಟೇ. ನಿಮಗೆ ಬಿಳಿ ಗುಳಿಗೆ ಎಂದರೆ ಅರ್ಥ ಆಯಿತು ತಾನೇ?. ಇಡ್ಲಿ.. ಸಾರ್ ಇಡ್ಲಿ... ಯಾವುದೆ ಸಮಯದಲ್ಲಿ ಹೋದರು ಸಿಗುವದು ಇದೊಂದು ಮಾತ್ರೆ ಮಾತ್ರ. ಇಷ್ಟಕ್ಕೂ ಅದು ಇದು ಹಾಳು ಮೂಳೆ... ಕ್ಷಮಿಸಿ ಮುಳ್ಳು... ಆಯಾಯ್ಯೋ ಮತ್ತೊಮ್ಮೆ ಕ್ಷಮಿಸಿ... ಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಇಡ್ಲೀನೇ ತಿನ್ನು ಎಂದು ನನ್ನ ಮಡದಿ ತಾಕೀತ್ ಮಾಡಿ ಊರಿಗೆ ಹೋಗಿದ್ದಾಳೆ. ಇದಕ್ಕೆ ಜೊತೆಯಾಗಿ ಇನ್ನೊಂದು ಮಾತ್ರೆ ಬೇರೆ ಚಾಕ್ಲೇಟ್ ಕಲರ್ ಗುಳಿಗೆ ... ವಡೆ.&lt;br /&gt;&lt;br /&gt;&lt;span class="Apple-style-span" style="font-family: tunga, kedage, 'Lohit Kannada', serif, verdana; line-height: 18px; "&gt;&lt;span class="Apple-style-span" &gt;ಹೆಂಡತಿ ಮನೆಯಲ್ಲಿ ಇಲ್ಲ ಎಂದರೆ ಆಗುವ ಕಷ್ಟಗಳನ್ನು ಹೇಳುವುದು ನಿಮಗೆ ಬೇಕಿಲ್ಲ ಎಂದುಕೊಂಡಿದ್ದೇನೆ. ಈ ಇಡ್ಲಿ , ವಡೆ ಸಾಂಬಾರ ಮತ್ತು ಚಟ್ನಿ ಒಳಗೆ ಹೋದಂತೆ ತಮಷ್ಟಕ್ಕೆ ತಾವೇ ನಾದಮಯವಾಗಿ ಸಂಗೀತ ಕಛೇರಿ ಶುರು ಮಾಡಿದ್ದವು ಅಥವಾ ಜಗಳ ಮಾಡಲು ಶುರು ಮಾಡಿದ್ದವು ಎಂದೆನಿಸುತ್ತೆ. ಒಟ್ಟಿನಲ್ಲಿ ನನ್ನ ಹೊಟ್ಟೆಯಲ್ಲಿ ಗುದ್ದಾಟ ನಡೆಸಿದ್ದವು. ಏನಾದರೂ? ಮಾಡಲಿ ಆದರೆ ಅವಗಳನ್ನು ವಾಯು ವಿಹಾರಕ್ಕೆ ಮಾತ್ರ ಬಿಡಬಾರದು ಎಂದು ಯೋಚಿಸಿ, ಅರ್ಧ ಬಾಟಲ್ ನೀರು ಕುಡಿದು ಬಹಿರ್ದೆಶೆಗೆ ಹೋಗಿ ಬಂದು ನಿರಾತಂಕವಾಗಿ ಆಫೀಸ್ ಹೊರಡಲು ಅನುವಾದೆ. ಮತ್ತೆ ಗುದ್ದಾಟ ಶುರು ಆಯಿತು. ಮತ್ತೆ ಇನ್ನೊಂದು ಬಾರಿ ಬಹಿರ್ದೆಶೆಗೆ ಹೋಗಿ ಬಂದಾಗ, ಅವುಗಳನ್ನು ತಿಂದು ತೆಗಿದ ಪಾಪಕ್ಕೆ, ಏನೋ ಒಂದು ಆತಂಕ ನೀಗಿದ ಹಾಗೆ ಆಗಿತ್ತು.&lt;/span&gt;&lt;/span&gt;&lt;br /&gt;&lt;br /&gt;ಮತ್ತೆ ಲೇಟ್ ಆಗಿ ಆಫೀಸ್ ಹೋದೆ. ಬಾಸಿನಿಂದ ಹೊಟ್ಟೆ ತುಂಬಿದ ಹಾಗೆ ಆಗಿದ್ದರು, ಬಿಸಿ.. ಬಿಸಿ... ಬೈಗುಳಗಳನ್ನು ತಿಂದು ತೇಗಿ ಸೀಟ್ ಮೇಲೆ ಒರಗಿದೆ.ಅಷ್ಟರಲ್ಲಿ ನನ್ನ ಗೆಳೆಯ ಮಾಧವ ಅಮೇರಿಕಾಕ್ಕೆ ಹೋಗಿದ್ದ ಅವತ್ತೇ ಬಂದ. ಬಂದೊಡನೆ ನನ್ನ ಬಡ ಹೊಟ್ಟೆ ವಿಚಾರಿಸದೇ, ಬಂದವನೇ ಏನೋ? ನಿನ್ನ ಗುರುತೇ ಸಿಗಲಿಲ್ಲ. ಮುಂದೆ ಬಂದ ಕೂಡಲೇ ಅನ್ನಿಸಿದ್ದು, ನೀನೆ... ಅಂತ.  ಆದ್ರೆ ಶಿರಸ್ತ್ರಾಣ ಧರಿಸಿ ಏಕೆ? ಕುಳಿತಿದ್ದಾನೆ ಎಂದು ಅನ್ನಿಸಿತು. ನೀನು ನೋಡಿದರೆ ಆರೇ ತಿಂಗಳಲ್ಲಿ ಬೋಡ ಆಗಿದಿಯಲ್ಲೋ ಎಂದ.  ಮತ್ತೊಂದು ಮದುವೆ, ಗಿದುವೆ ಆಗಿದ್ದೀಯೇನೋ?.. ಎಂದು ಹೀಯಾಳಿಸಿದ. ಪಕ್ಕದಲ್ಲಿ ಕುಳಿತಿದ್ದ ಪಂಕಜಾ ನನ್ನ ಕತೆ(ವ್ಯಥೆ) ಯನ್ನು ಅನುಭವಿಸಿದ ನನಗಿಂತಲೂ ರಸವತ್ತಾಗಿ ವಿವರಿಸಿದಳು. ಜೋರಾಗಿ ಗಹ ಗಹಿಸಿ ನಗುತ್ತಾ.... ನನಗೆ ಹೇಳಿದ್ದರೆ ಒಂದು ಒಳ್ಳೆಯ ವಿಗ್  ತರುತ್ತಿದ್ದೆ ಅಮೇರಿಕಾದಿಂದ ಎಂದ.  ಮಗನೆ ನೀನೆ ಒಪ್ಪತ್ತು ತಿಂದು ದುಡ್ಡು ಉಳಿಸೋ ಮಗ, ಅದರಲ್ಲಿ ನನಗೆ ವಿಗ್ ತರುತ್ತೀಯಾ ಎಂದು ಮನಸಿನಲ್ಲೇ ಬೈದೆ. ನಡಿ ಹೋಗೋಣ ತಿಂಡಿಗೆ ಎಂದ, ಬೇಡ ನನ್ನದು ಆಗಿದೆ ಎಂದು ಹೇಳಿದೆ. ಆಯಿತು ಕಾಫೀ ಆದರೂ ತೆಗೆದು ಕೊಳ್ಳು ಬಾ ಮಹಾರಾಯ ಎಂದು ಕರೆದುಕೊಂಡು ಹೋದ. ನಾನು ಕಾಫೀ ಕುಡಿದೆ, ಅವನು ಅದೇ ಎರಡು ಬಿಳಿ ಗುಳಿಗೆ ತಿಂದ. ಓ  ಸಾರೀ... ನಾನು ಪರ್ಸ್ ನೆನಪು ಹಾರಿ ಬಂದಿದ್ದೇನೆ. ಬಿಲ್ ನೀನೆ ಕೊಡು ಎಂದ. ಕಡೆಗೆ ನಾನೇ  ಬಿಲ್  ಕೊಟ್ಟು ಬಂದೆ.  ಬಿಲ್-ಕೂಲ್ ಮನಸ್ಸಿಲ್ಲದೇ ನಾನು ಬಿಲ್ ಕೊಟ್ಟ ಕೋಪದಲ್ಲಿ ಮದುವೆ ಯಾವಾಗ ಕಣೋ, ಮೂರು ಕತ್ತೆ ವಯಸ್ಸು ಆಯಿತು ಎಂದು ಅಚ್ಚ ಕನ್ನಡದಲ್ಲಿ ಕೇಳೋಣ ಎಂದುಕೊಂಡರೂ, ಏನು ಮೂರನೇ ಇನ್ನಿಂಗ್ಸ್ ಟೆಸ್ಟ್ ಆಡಬೇಕು  ಎಂದು ಮಾಡಿದ್ದೀಯಾ ಎಂದು ಕೇಳಿದೆ. ಮಾಡಿಕೊಳ್ಳಬೇಕು ಮಹಾರಾಯ ಒಂದು ಒಳ್ಳೆಯ ಹುಡುಗಿ ಇದ್ದರೆ ನೋಡು ಎಂದು, ನನಗೆ ಫಾರ್ಮಾನು ಹೊರಡಿಸಿದ. ಕೇಳಿದ್ದೆ ತಪ್ಪು ಆಯಿತು ಎಂದು ನಾನು ಮನಸಿನಲ್ಲೇ ಅಂದು ಕೊಂಡೆ. &lt;br /&gt;&lt;br /&gt;ಸಂಜೆ ಆರು ಘಂಟೆಗೆ ಬಾಸ್ ಬಂದು, ಇವತ್ತು ಏನು? ಕೆಲಸ ಇಲ್ಲ ಮನೆಗೆ ಹೋಗೋಣ ಎಂದ. ನಾನು ಹಾಗೂ.. ಹೀಗೂ.. ಹೆಂಡತಿ ಬರುವವರೆಗೆ ಒಂದು ವಾರ ಇಲ್ಲೇ ಊಟ ಮಾಡಿದರೆ ಆಯಿತು ಎಂದು ಪ್ಲಾನ್ ಮಾಡಿದ್ದೆ. ಎಲ್ಲವೂ ಹಾಳು ಆಯಿತು ಮನೆಗೆ ಹೋಗುವ ಸಮಯದಲ್ಲಿ, ಊಟದ ಬಗ್ಗೆ ಯೋಚಿಸುತ್ತಾ,  ಒಂದು ಲಾರಿಯಿಂದ ಕೂದಲೇಳೆಯಲ್ಲಿ ... ಕ್ಷಮಿಸಿ ಕೂದಲೇ ಇಲ್ಲ ಅಲ್ಲವಾ?, ಸ್ವಲ್ಪದರಲ್ಲೇ ಬಚಾವ್ ಆದೆ. ಹೇಗಿದ್ದರು ಹೊಟೆಲ್ ಅನುಭವ ಆಗಿದ್ದರಿಂದ, ಮನೆ ಮುಟ್ಟಿದ ಮೇಲೆ ಏನು? ಅಡುಗಿ ಮಾಡಬೇಕು ಎಂದು ಯೋಚಿಸುತ್ತಿದ್ದೆ, ಆಗ ಕಾಣಿಸಿದ್ದು ಮ್ಯಾಗಿ ಪ್ಯಾಕೆಟ್ ಇದು ತುಂಬಾ ಸುಲಭ ಎಂದು ಯೋಚಿಸಿ ಅದನ್ನೇ ಮಾಡಿಕೊಂಡು ತಿಂದೆ.&lt;br /&gt;&lt;br /&gt;ಮನೆಯಲ್ಲಿ ಅಡುಗಿ ಮಾಡಿದ ಸಂತೋಷಕ್ಕೆ ಮಡದಿಗೆ ಫೋನ್ ಮಾಡಿ, ನಾನೇ ಅಡುಗೆ ಮಾಡಿ ಊಟ ಮಾಡಿದೆ ಎಂದು ಹೇಳಿದೆ. ಹೆಂಡತಿ ಹಿರಿ ಹಿರಿ ಹಿಗ್ಗಿ ಏನು? ಮಾಡಿದಿರಿ ಎಂದು ಕೇಳಿದಳು. ನಾನು ಮ್ಯಾಗಿ ಎಂದಾಗ, ಅಷ್ಟೇನಾ.... ಎಂದು ರಾಗ ಎಳೆದಳು. ಮತ್ತೆ ನಾನು ಮ್ಯಾಗಿ ಪ್ಯಾಕೆಟ್ ಅಷ್ಟು ಖಾಲಿ ಮಾಡಿದ್ದಕ್ಕೆ ಬೈದು ಒಂದಿಷ್ಟು ಮ್ಯಾಗಿ ಪ್ಯಾಕೆಟ್ ತಂದು ಇಡಿ. ನಿಮ್ಮ ಮಗನಿಗೆ ಬೇಕಾಗುತ್ತೆ ಎಂದು ತಾಕೀತ ಮಾಡಿದಳು.&lt;br /&gt;&lt;br /&gt;ಅನಂತರ ಪಾತ್ರೆ ತೊಳೆದು ಮುಗಿಸುವಷ್ಟರಲ್ಲೇ ಬೆನ್ನು ಬಿದ್ದು ಹೋಗಿತ್ತು. ಮತ್ತೆ ಅಡುಗಿ ಸಹವಾಸ ಸಾಕು ಎನ್ನುವಷ್ಟು. ಮತ್ತೆ ನಾಳೆಯಿಂದ ಮತ್ತೊಂದು ಹೋಟೆಲ್ ಹುಡುಕಿದರೆ ಆಯಿತು ಎಂದು ಯೋಚಿಸಿ ನಿದ್ದೆಗೆ ಜಾರಿದೆ. ಮತ್ತೆ ನಾಳೆಯಿಂದ ಹೊಟೆಲ್ ಊಟನೆ ಗತಿ.. ಆದರೆ ಹೊಟ್ಟೆಯಲ್ಲಿ ಆಟ ಆಗದಿದ್ದರೆ ಸರಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3951243076225631241?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3951243076225631241/comments/default' title='Post Comments'/><link rel='replies' type='text/html' href='http://haalusakkare.blogspot.com/2010/12/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3951243076225631241'/><link rel='self' type='application/atom+xml' href='http://www.blogger.com/feeds/3457141075796460701/posts/default/3951243076225631241'/><link rel='alternate' type='text/html' href='http://haalusakkare.blogspot.com/2010/12/blog-post.html' title='ಹೋಟೆಲ್ ಊಟ... ಹೊಟ್ಟೆಯಲ್ಲಿ ಆಟ...'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-5037689510011964095</id><published>2010-11-23T04:30:00.000-08:00</published><updated>2010-11-23T04:33:23.918-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಡಾಕು ಮಂಗಲ್ ಸಿಂಗ್....</title><content type='html'>ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು ಬಿಟ್ಟಳು. ಎಲ್ಲಿದೆ ಜಿರಳೆ? ಎಂದಳು. ಅವಳಿಗಿಂತ ಜ್ಯಾಸ್ತಿ ಘಾಬರಿ ಆಗಿದ್ದು ನಾನು. ನಾನು ಕುರ್ಚಿಯಿಂದ ಟ್ಯಾಂಗ್ ಎಂದು ಜಿಗಿದೆ. ಕುರ್ಚಿ ಲಡಕ್ಕ್ ಎಂದು ಮುರಿದು, ಅದರ ಜೊತೆ ನಾನು ಬಿದ್ದೆ. ನಾನು ಅವಳಿಗೆ ಕೇಳಿದೆ ಎಲ್ಲಿದೆ ಜಿರಳೆ ಎಂದು. ನೀವು ತಾನೇ ಹಿಟ್ ಹುಡುಕುತ್ತಾ ಇರೋದು ಎಂದಳು. ನಾನು ತಲೆ ಜಜ್ಜಿಕೊಂಡು, ನಾನು ನೋಡುತ್ತಾ ಇರೋದು ನನ್ನ ಲೇಖನದ ಹಿಟ್ಸ್ ಗಳನ್ನ ಎಂದಾಗ, ಓ ಕರ್ಮ ನಿಮಗೆ ಒಂದು ಕೆಲಸ ಇಲ್ಲ ಎಂದರೆ, ಎಲ್ಲರೂ ಹಾಗೇನಾ? ಎಂದು ಬೈದು, ಮುಖ ತೊಳೆದುಕೊಂಡು ಬಂದು ಟೀ ಮಾಡಲು ಅನುವಾದಳು.&lt;br /&gt;&lt;br /&gt;ನನಗು ಟೀ ಕೊಟ್ಟು, ತಾನು ಟೀ ತೆಗೆದುಕೊಂಡು ಹೊರಗೆ ಬಂದು ಪೇಪರ್ ಓದುತ್ತಾ ಕುಳಿತಳು. ನಾನು ಮತ್ತೆ ಕಂಪ್ಯೂಟರ್ ಪರದೆ ಮುಂದೆ ಟೀ ಹೀರುತ್ತ ಕುಳಿತೆ. ರೀ, ನೀವು ವಕ್ರತು೦ಡೋಕ್ತಿ ಓದಿದಿರಾ? ಎಂದು ಕೇಳಿದಳು. ನಾನು ದಿನಾಲೂ ಓದುತ್ತೇನೆ, ವಕ್ರತುಂಡ ಮತ್ತು ಶುಕ್ಲಾಂಬರ ಎರಡು ಓದುತ್ತೇನೆ. ಗಣೇಶನ ದಯೆ ಇಲ್ಲದೇ ಏನು ಸಾಧ್ಯ ಇಲ್ಲ ಎಂದು ಹೇಳಿದೆ. ರೀ, ನಾನು ಹೇಳಿದ್ದು ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದ ವಕ್ರತು೦ಡೋಕ್ತಿ. ಹಾ... ಹೇಳು ಏನು ಬರೆದಿದ್ದಾರೆ ಎಂದು ಕೇಳಿದೆ. "ಮನೆ ಕೆಲಸ ಮಾಡುವ ಗಂಡ ಎಂದಿಗೂ ಹೆಂಡತಿಯ ಅವಕೃಪೆಗೆ ಗುರಿಯಾಗಲಾರ" ನೀವು ನೋಡಿ ಬರೀ ಆ ಕಂಪ್ಯೂಟರ್ ಮುಂದೆ ಕುಳಿತು ಹಿಟ್ಸ್ ನೋಡುತ್ತಾ ಇದ್ದೀರಾ. ಮನೆಯಲ್ಲಿ ಗೋಧಿ ಹಿಟ್ಟು ಖಾಲಿಯಾಗಿ ಎರಡು ದಿನ ಆಯಿತು. ಒಮ್ಮೆಯಾದರು ಕೇಳಿದ್ದೀರಾ? ಎಂದು ಕೇಳಿದಳು. ಮತ್ತೆ ಇನ್ನೂ ಇದರ ಮುಂದೆ ಕುಳಿತರೆ ನನಗೆ ಹಿಟ್ಸ್ ಗ್ಯಾರಂಟೀ ಎಂದು ಯೋಚಿಸಿ ಆಫ್ ಮಾಡಿ ಹೊರಗೆ ಹೋಗಿ ಎರಡು ಕೆ ಜಿ ಗೋಧಿ ಹಿಟ್ಟು ತಂದು ಕೊಟ್ಟೆ.&lt;br /&gt;&lt;br /&gt;ಮತ್ತೆ ಸುಮ್ಮನೇ ಇರಲಾರದೇ, ಟಿ ವಿ ಹಚ್ಚಿದೆ. ಟಿ ವಿ ಯಲ್ಲಿ ಬರುವ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಇದ್ದೆ. ನಾಚಿಕೆ ಆಗುವದಿಲ್ಲವಾ? ಪಕ್ಕದ ಮನೆ ಅಜ್ಜಿ ವಾಕಿಂಗ್ ಮಾಡುತ್ತಾ ಇದ್ದಾರೆ ಕಿಟಕಿ ಇಂದ ಕಾಣುತ್ತೆ ಎಂದಳು. ಅವರಿಗೆ ನಾನೆಲ್ಲಿ ಕರೆದೆ ನನ್ನ ಜೊತೆ ಡ್ಯಾನ್ಸ್ ಮಾಡೋಕೆ ಎಂದು ತಮಾಷೆ ಮಾಡಿದೆ.ತಲೆ ಜಜ್ಜಿಕೊಂಡು ಇದು ಒಂದು ಬಾಕಿ ಇತ್ತು ಎಂದು ಹೇಳಿ ಹೊರಟು ಹೋದಳು.&lt;br /&gt;&lt;br /&gt;ನನಗೆ ಮತ್ತೆ ಟೀ ಕುಡಿಯಬೇಕು ಎಂದು ಅನ್ನಿಸಿದಾಗ, ಲೇ ಸ್ವಲ್ಪ ಟೀ ಇದ್ದರೆ ಕೊಡೆ ಅಡಿಗೆ ಮನೆಗೆ ಹೋಗಿ ಕೇಳಿದೆ. ಬರಿ ಕೆಟ್ಟ.. ಕೆಟ್ಟ.. ಚಟಗಳು ನಿಮಗೆ ಎಂದು ಬೈದಳು. ಮನುಷ್ಯನಿಗೆ ಚಟ ಇರಬೇಕು, ಇಲ್ಲ ಹಟ ಇರಬೇಕು. ಏನು ಇಲ್ಲಾ ಅಂದರೆ ಮುಂದೆ ಬರುವದಿಲ್ಲ. ನನ್ನ ಗೆಳೆಯ ಮಾಧವ ಏನು? ಹೇಳುತ್ತಾನೆ ಗೊತ್ತಾ, "ಚಟವೇ ಚಟುವಟಿಕೆಗಳ ಮೂಲ, ಚಟ ಇಲ್ಲದವನು ಚಟ್ಟಕ್ಕೆ ಸಮಾನ" ಎಂದು ಹೇಳಿದೆ. ನಿಮ್ಮ ಚಟ ಗೊತ್ತಿಲ್ಲವಾ?. ಒಂದು ಟೀ, ಮತ್ತೊಂದು ಆ ಕಂಪ್ಯೂಟರ್ ಎಂದಳು. ಆಡಿಕೊ... ಆಡಿಕೊ... ನಾನು ಮಾಡುತ್ತಾ ಇರೋದು ಪುಣ್ಯದ ಕೆಲಸ. ಒಬ್ಬರನ್ನು ಅಳಿಸೋದು ಸುಲಭ, ನಗಿಸುವದು ತುಂಬಾ ಕಷ್ಟ. ಬೇಕಾದರೆ ನಿನ್ನ ಈಗಲೇ ಅಳಿಸುತ್ತೇನೆ ಎಂದು ಒಂದು ತಲೆಗೆ ಹೊಡೆದೆ. ಕಿಟಾರನೇ ಚೀರಿ ... ಎಷ್ಟೇ ಆದರೂ ಡಾಕು, ಕಲ್ಲೂರ ಕಾಳ ಕ್ಷಮಿಸಿ ... ಕಲ್ಲೂರ ಕುಲ್ಕರ್ಣಿ ತಾನೇ? ಎಂದಳು. ಲೇ ನಮ್ಮ ಊರು ದ್ಯಾವನೂರು ಕಣೆ ಎಂದೆ.ತಡಿರಿ ಅತ್ತೆಗೆ ಕೇಳುತ್ತೇನೆ ಎಂದು ಫೋನ್ ಮಾಡಿದಳು. ಫೋನ್ ಇಟ್ಟು ಜೋರಾಗಿ ನಗ ಹತ್ತಿದಳು. ನಿಮ್ಮದು ದೇವನೂರು, ಸಧ್ಯ ದೆವ್ವನೂರು ಮಾಡಲಿಲ್ಲ ಎಂದು ಈ ದೇವನೂರು ಕುಲಕರ್ಣಿನ ಹೀಯಾಳಿಸಿದಳು.&lt;br /&gt;&lt;br /&gt;ಕಡೆಗೆ ಟೀ ಕೊಟ್ಟು ಬೇಗ ಸ್ನಾನ ಮಾಡಿ ಆಫೀಸ್ ಲೇಟ್ ಆಗುತ್ತೆ ಎಂದಾಗ, ನಿನ್ನೆ ತಾನೇ ಬಾಸ್ ಹತ್ತಿರ ಸಹಸ್ರ ನಾಮಾವಳಿಗಳ ಸರಣಿ ನೆನಪು ಆಯಿತು. ಬೇಗನೆ ಟೀ ಕುಡಿದು ಸ್ನಾನಕ್ಕೆ ಹೋದೆ. ದಾಡಿ ಮಾಡಿ ಕೊಳ್ಳದಿದ್ದರೆ, ಬಾಸ್ ಬೇರೆ ಮಾಡಿಕೊಳ್ಳಲು ನಿನಗೇನೂ ಧಾಡಿ ಎಂದು ಬೈಯುತ್ತಾನೆ. ಟೈಮ್ ಬೇರೆ ತುಂಬಾ ಆಗಿತ್ತು. ಕಡೆಗೆ ನಿನ್ನೆ ನೋಡಿದ, ರಜನೀಕಾಂತ್ ಶಿವಾಜಿ ಸಿನೆಮಾ ನೆನಪು ಆಗಿ, ಇದ್ದ ಎರಡು ಸಲಿಕೆ ತೆಗೆದುಕೊಂಡು ಬೇಗ.. ಬೇಗ.. ಕೆರೆದು ಕೊಳ್ಳಲು ಅನುವಾದೆ. ಅಷ್ಟರಲ್ಲೇ ಎಡಗಡೆ ಚರ್ಮ ಕಿತ್ತು ರಕ್ತ ಬರಲು ಶುರು ಆಗಿತ್ತು. ಮುಂದೆ ಸಾವಕಾಶವಾಗಿ ಮಾಡುತ್ತಾ ಇದ್ದಾಗ, ಮತ್ತೊಂದು ಅನಾಹುತ ಆಯಿತು. ಮೀಸೆ ಕಟ್ ಆಗಿತ್ತು. ಮೀಸೆ ಪೂರ್ತಿ ತೆಗೆದು ಬಿಟ್ಟೆ. ಮೀಸೆ ಇದ್ದ ಮತ್ತು ಕೆತ್ತಿದ ಜಾಗ ಮುಚ್ಚಿ ಕೊಂಡು ಬಂದೆ. ಏನು? ಆಯಿತು ಕೈ ತೆಗೆಯಿರಿ ಎಂದಳು. ಕೈ ತೆಗೆದ ಮೇಲೆ ಜೋರಾಗಿ ನಗಹತ್ತಿದಳು. ಕಡೆಗೆ ಪೂಜೆ ಮಾಡಿ ಆಫೀಸ್ ಹೋಗಲು ಅನುವಾದಾಗ, ನನ್ನ ಮಡದಿ ನನ್ನ ಮುಖ ನೋಡಿ "ಡಾಕು ಮಂಗಲ್ ಸಿಂಗ್" ಹಾಗೆ ಕಾಣಿಸುತ್ತಾ ಇದ್ದೀರ ಎಂದು ಕುಹಕವಾಡಿದಳು. ಆದರೆ ಮೀಸೆ ಇರಬೇಕಿತ್ತು. ನಾನು ಕನ್ನಡಿ ಮುಂದೆ ಹೋಗಿ ನಿಂತೆ. ಈಗಲೇ ಚೆನ್ನಾಗಿ ಕಾಣಿಸುತ್ತಾ ಇದ್ದೇನೆ. ಸ್ವಲ್ಪ ಯಂಗ್ ಅನ್ನಿಸುತ್ತೇನೆ ಅಲ್ಲವಾ? ಎಂದೆ. ನಾನು ಅದಕ್ಕೆ ಮೀಸೆ ಇರಬೇಕಿತ್ತು ಎಂದಿದ್ದು ಎಂದಳು. ಮಡದಿ ಡಾಕು ಎಂದಿದ್ದು ಪರ್ವಾಗಿಲ್ಲ, ಎಷ್ಟೇ ಆದರೂ ನಾನು ಗೋಪಾಲ್ ಅಲ್ಲವೇ, ಪರಮಾತ್ಮ ಗೋಪಾಲ ಕೃಷ್ಣ ಜೈಲಿನಲ್ಲೇ ಜನ್ಮವೆತ್ತಿರಬಹುದು. ನಾನು ಜೈಲಿಗೆ ಹೋಗಿ ಬಂದಿರುವೆ ಎಂದು ಬಾಸ್ ಗೆ ಹೆದರಿಸಬಹುದು ಎಂದು ಯೋಚಿಸಿ, ಇನ್ನೂ ಸ್ವಲ್ಪ ಲೇಟ್ ಆಗಿ ಆಫೀಸ್ ಹೊರಟು ನಿಂತೆ.&lt;br /&gt;&lt;br /&gt;ಆಫೀಸ್ ಹೋಗುತ್ತಾ ಬೈಕ್ ನಲ್ಲಿ ಏನಾದರೂ ಬರಿ ಬೇಕು ಎಂದು ಯೋಚಿಸುತ್ತಾ ಇದ್ದಾಗ, ನಿನ್ನೆ ಮಡದಿ ಹೇಳಿದ ಕಿಕ್ಕಿಂಗ್ ಕಾಲಂ ಎಂದು ಬರೆಯಿರಿ, ಎಂದು ಹೇಳಿದ್ದು ನೆನಪಾಯಿತು. ಸರಿ ಅನ್ನಿಸಿತು ಕಿಕ್ಕಿಂಗ್ ಕಾಲಂ ಎಂದರೆ ಕಿಕ್ಕಿಂಗ್ + ಕಾಲು + ಅಮ್ಮsss...... ಅಲ್ಲವೇ?.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-5037689510011964095?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/5037689510011964095/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/blog-post_23.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/5037689510011964095'/><link rel='self' type='application/atom+xml' href='http://www.blogger.com/feeds/3457141075796460701/posts/default/5037689510011964095'/><link rel='alternate' type='text/html' href='http://haalusakkare.blogspot.com/2010/11/blog-post_23.html' title='ಡಾಕು ಮಂಗಲ್ ಸಿಂಗ್....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-4091365820742503894</id><published>2010-11-19T21:40:00.000-08:00</published><updated>2010-11-19T21:44:32.480-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....</title><content type='html'>&lt;span class="Apple-style-span" style="font-family: tunga, kedage, 'Lohit Kannada', serif, verdana; font-size: 15px; color: rgb(61, 61, 61); line-height: 18px; "&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನನ್ನ ಒಬ್ಬ ಗೆಳೆಯ ನರೇಂದ್ರ ಶಯನಾವಸ್ಥೆಯಲ್ಲಿ ಇದ್ದ. ಹೋಗಿ ಎಬ್ಬಿಸಿದೆ. ಆಸಾಮಿ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ. ಶಯನಾವಸ್ಥೆಯಿಂದ ಸೀದಾ ಶ್ವಾನಾವಸ್ಥೆಗೆ ತಿರುಗಿದ್ದ. ಸಧ್ಯ ಬೊಗಳಿದ, ಎಬ್ಬಿಸಿದ್ದಕ್ಕೆ ಕಚ್ಚಲಿಲ್ಲ. ಅವನ ಬಾಯಲ್ಲಿ ಬಂದ ಧಾರವಾಡ ಭಾಷೆ ನುಡಿ ಮುತ್ತುಗಳು, ನನ್ನ ಕರ್ಣಕ್ಕೆ ಕುಂಡಲಗಳ ಹಾಗೆ ಅಲಂಕರಿಸಿದ್ದವು. ನಾನು ಅವನನ್ನು ಇದು ಕಂಪ್ಯೂಟರ್ ಪರದೆ, ಸೊಳ್ಳೆ ಪರದೆ ಎಂದು ಕೊಂಡಿರುವೆ ಏನು? ಎಂದು ತಮಾಷೆ ಮಾಡಿದೆ. ವಯಸ್ಸು ಮೀರಿದ ಮೇಲೆ ನಿದ್ದೆ ಕಡಿಮೆ ಆಗುತ್ತೆ ಅಂತ ಹೇಳುತ್ತಾರೆ. ನೀನು ನೋಡಿದರೆ ವಯಸ್ಸು ಮೀರಿದ ಮೇಲೆ ಕೂಡ ಸಕತ್ ನಿದ್ದೆ ಹೊಡಿತ ಇದ್ದೀಯಾ? ಎಂದೆ. ಯಾರು ಹೇಳಿದ್ದು ವಯಸ್ಸು ಮೀರಿದೆ ಎಂದು. ನನ್ನದು ಇನ್ನೂ ಕನಸು ಕಾಣೋ ವಯಸ್ಸು ಕಣೋ ಅಂದ. ಇಷ್ಟೆಲ್ಲಾ ಆಗಿದ್ದು ಸರಕಾರದ ನೀತಿ ನಿಯಮದಿಂದನೆ ಎಂದ. ಏನಪ್ಪಾ ಅದು ಸರಕಾರದ ನೀತಿ ನಿಯಮ ಎಂದೆ. ಗಂಡಿಗೆ 21 ವರ್ಷ , ಹೆಣ್ಣಿಗೆ 18 ವರ್ಷ ಮದುವೆಗೆ ಎಂದು ಫಿಕ್ಸ್ ಮಾಡಿದ್ದು. ನಾವು 21 ವರ್ಷ ಆಗುವವರೆಗೆ ಮದುವೆಗೆ ಕಾಯಬೇಕು, ಆಮೇಲೆ 18 ವರ್ಷ ಆದ ಹುಡುಗೀನೆ ಹುಡುಕಬೇಕು ಮತ್ತು ಮದುವೆ ಆಗಬೇಕು. ಇದು ತಪ್ಪು ಅಲ್ಲವಾ? ಎಂದ. ಮನಸಿನಲ್ಲೇ... ಬಾಲ್ಯವಿವಾಹ ಬೇಕಾ? ಮಗನೆ ಎಂದು ಬೈದು, ನಾನು ಹೌದು.. ಹೌದು.. ಎಂದು ತಲೆ ಆಡಿಸಿದೆ. ಅದು ಬೇರೆ ಅಪ್ಪ, ಅಮ್ಮ ಕುಂಡಲಿ, ಜಾತಿ, ಒಳಜಾತಿ ಮತ್ತು ಮನೆತನ ಎಂದೆಲ್ಲಾ ನೋಡಿ, ಆಮೇಲೆ ಅವರು ಹಸಿರು ನಿಶಾನೆ ತೋರಿಸಿದ ಮೇಲೆ ನಾನು ನೋಡಿ ಒಪ್ಪಿಗೆ ಸೂಚಿಸಬೇಕು ಇದೆಲ್ಲಾ ಆಗುವದರೊಳಗೆ ನನ್ನ ತಲೆ ಕೂದಲು ಬೆಳ್ಳಗೆ ಆಗಿರುತ್ತವೆ. ಸಮ್ಮಿಶ್ರ ಸರಕಾರಕ್ಕೆ ಅವಕಾಶವೇ ಇಲ್ಲ ಎಂದ. ಅದು ಬೇರೆ ಈಗೀಗ ಹುಡುಗಿಯರ ಡಿಮ್ಯಾಂಡ್ ತುಂಬಾ ಜ್ಯಾಸ್ತಿ, ಸಂಬಳ, ಮನೆ, ಹೊಲ, ಮನೆತನ ಎಂದು ತುಂಬಾ ಕೇಳುತ್ತಾರೆ ಗೋಪಿ ಎಂದು ರಾಗವೇಳೆದ. ಈ ತುಳಸಿ ಲಗ್ನಕ್ಕೆ ನನಗೆ 34 ಸಂವತ್ಸರಗಳು ತುಂಬುತ್ತವೆ, ಅದರಲ್ಲಿ ನೀನೆ ಅದೃಷ್ಟವಂತ ಕಣೋ ಎಂದು ಹೇಳಿದ. ಈಗೀಗ ಹುಡುಗಿಯರ ಜನ ಸಂಖ್ಯೆ ಬೇರೆ ಕಡಿಮೆ ಎಂದು ಹೇಳುತ್ತಾರೆ. ಇನ್ನೂ ಸ್ವಲ್ಪ ದಿವಸ ತಡೆದರೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ತಿತಿ ಬರುತ್ತೆ ಎಂದು ಗೋಳಾಡಿದ. ಅದಕ್ಕೆ ಇನ್ನೂ ಮದುವೆ ಆಗಿಲ್ಲ. ಮದುವೆ ಮುಂಚೆ ಕಾಣೋ ಕನಸನ್ನೆ ಕಾಣುತ್ತಾ ಇದ್ದೇನೆ ಎಂದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಾನು ಸ್ವಲ್ಪ ಯೋಚನೆ ಮಾಡುತ್ತಾ ನಿಂತೆ. ನಿಜ ಅನ್ನಿಸಿತು ಮದುವೆ ಎಂದರೆ ಎಷ್ಟು ಕಷ್ಟ ಎಂದು. ಇದೆಲ್ಲಾ ಯೊಚಿಸಿರಲೇ ಇಲ್ಲ. ನೋಡಿದ ಮೊದಲನೆ ಹುಡುಗೀನೆ ಪಾಸ್ ಮಾಡಿದ್ದೆ. ಸಧ್ಯ ಪುಣ್ಯಕ್ಕೆ ಅವಳ ಕುಂಡಲಿ,ನನ್ನ ಕುಂಡಲಿ ಹೊಂದಿತ್ತು. ಇಲ್ಲದೇ ಹೋಗಿದ್ದರೆ?. ಇವನು ಹೇಳಿದ ರಾಮಾಯಣ, ನಾನು ಮಹಾಭಾರತ ಸ್ಟೈಲ್ ನಲ್ಲಿ ಹೇಳಬೇಕಿತ್ತು ಏಕೆಂದ್ರೆ, ನಾನು ಮಂಗ್ಯಾನ ಲಿಂಕ್ ಕ್ಷಮಿಸಿ.... ಅದೇನೋ ಮಂಗಲಿಕ, ಮಂಗಳ ದೋಸೆ... ಅಲ್ಲಲ್ಲ....ಮಂಗಳ ದೋಷದವನು ಎಂದು, ಮನೋಜ ನನ್ನ ಕುಂಡಲಿ ಪರೀಕ್ಷಿಸಿ ಮೊನ್ನೆ ಹೇಳಿದ್ದ. ಹಾಗೆ ಮಂಗಳ ದೋಷ ಇರುವ ಹುಡುಗರು ಮಂಗಳ ದೋಷ ಇರುವ ಹುಡುಗಿಯರನ್ನೇ ಮದುವೆ ಆಗಬೇಕು ಎಂಬ ನಿಯಮ ಇದೆ ಅಂತೆ. ಅವಳಿಗೂ ಮಂಗಳ ದೋಷ ಇತ್ತು. ಹೀಗಾಗಿ ಮದುವೆ ನೆರವೇರಿತು. ಅವಳನ್ನು ಧಿಕ್ಕರಿಸಿದ್ದರೆ, ನನಗೆ ಕೂಡ ಈ ನರೇಂದ್ರನ ಗತಿನೇ ಬರುತಿತ್ತು... ರಾಮ... ರಾಮ.... ಶ್ರೀ ರಾಮನನ್ನು ನೆನಸಿದ್ದು ಏಕೆ? ಎಂದು ತಿಳಿಯಿತು ತಾನೇ... (ನಾನು ಏನಿದ್ದರೂ ನನ್ನ ದೋಷದ ಮೊದಲೆರಡು ಅಕ್ಷರದ ರೂಪ ತಾನೇ?). ಇಷ್ಟೆಲ್ಲಾ ಯೋಚಿಸಿ ಮಡದಿಯ ಕಾಲ್ ನೆನಪು ಆಗಿ ಕ್ಷಮಿಸಿ.... ಮಿಸ್ ಕಾಲ್ ನೆನಪು ಆಗಿ ಹೋಗಿ ಅವಳಿಗೆ ಕರೆ ಮಾಡಿದೆ. ಏನ್ರೀ ಇಷ್ಟೊತ್ತು ಎಂದು ಗದರಿಸಿದಳು. ಏನಿಲ್ಲಾ ಕಣೇ, ನಿನ್ನ ಬಗ್ಗೆನೇ ಡೀಪ್ ಆಗಿ ಯೋಚನೆ ಮಾಡುತ್ತಾ ಇದ್ದೆ ಎಂದು ಹೇಳಿದೆ. ಓ .. ನಿಮ್ಮದು ಗೊತ್ತಿಲ್ಲವಾ?...ಎಂಬ ವ್ಯಂಗ್ಯ ಮಾತಿನೊಂದಿಗೆ, ಸಂಜೆ ಬರುತ್ತಾ ಸೇಬು ಹಣ್ಣು ತೆಗೆದುಕೊಂಡು ಬನ್ನಿ ಇವತ್ತು ಏಕಾದಶಿ ಎಂದು ಹೇಳಿದಳು. ಆಯಿತು ಕಣೇ ಎಂದು ಹೇಳಿ ಫೋನ್ ಕಟ್ ಮಾಡಿ ಮತ್ತೆ ನರೇಂದ್ರನ ಕಡೆಗೆ ಬಂದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಮತ್ತು ಬಿಡದೆ ತನ್ನ ವರಸೆ ಶುರು ಹಚ್ಚಿಕೊಂಡ. ಮೊನ್ನೆ ಒಂದು ಹುಡುಗಿ ನೋಡುವುದಕ್ಕೆ ಹೋಗಿದ್ದೆ. ಆ ಹುಡುಗಿ ಕೆಲಸದಲ್ಲಿ ಇತ್ತು. ಮತ್ತೆ ತುಂಬಾ ಚೆನ್ನಾಗಿ ಇದ್ದಳು. ಆದರೆ ನನ್ನ ಕರ್ಮಕ್ಕೆ ಅವಳ ಸಂಬಳ ನನ್ನ ಸಂಬಳಕ್ಕಿಂತ ಸ್ವಲ್ಪ ಜ್ಯಾಸ್ತಿ ಇತ್ತು ಎಂದ. ಅದ್ದಕ್ಕೆ ಏನು? ಈಗ ಸುಮ್ಮನೇ ಒಪ್ಪಿಕೊಳ್ಳಬಾರದ? ಎಂದೆ. ಅವಳು ನನಗಿಂತ ಜ್ಯಾಸ್ತಿ ಬೇರೆ ಕಲೇತಿದ್ದಾಳೆ ಎಂದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಇನ್ನೂ ಕೆಲ ಹುಡುಗಿಯರದು ಮಹಿಳಾ ಮೀಸಲಾತಿ ಎಂದ. ಹಾಗೆಂದರೆ ಎಂದು ಬಾಯೀ ತೆಗೆದೆ. ಲೇ ಅಷ್ಟು ಗೊತ್ತಿಲ್ಲವಾ ಲವ್ ಮ್ಯಾರೇಜ್ ಕಣೋ ಎಂದ. ನೀನು ಲವ್ ಮಾಡೋಕೆ ಪ್ರಯತ್ನ ಪಡಬೇಕಾಗಿತ್ತು ಎಂದೆ. ಅದನ್ನೇನೂ ಕೇಳುತ್ತಿ ಲವ್.. ಲವ್... ಅಂತ ಹೇಳಿ ಪೂರ್ತಿ ಕಾಲೇಜ್ ತುಂಬಾ ಲಬೊ...ಲಬೊ... ಎಂದು ಬಾಯೀ ಬಡಿದುಕೊಂಡಿದ್ದೆ, ನನ್ನ ಕರ್ಮಕ್ಕೆ ಒಂದು ಹುಡುಗೀನು ಮುಸುನೋಡಲಿಲ್ಲ ಎಂದು ಬೇಜಾರಿನಲ್ಲಿ ಹೇಳಿದ. ಗೋಪಿ ಬಾಯೀ ಮುಚ್ಚಿಕೊ ಸೊಳ್ಳೆ ಬಾಯಲ್ಲಿ ಹೋದರೆ ಕಷ್ಟ ಎಂದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ನಿನ್ನ ಕತೆ ಕೇಳಿ, ನಮ್ಮ ಫೇಮಸ್ ಡೈರೆಕ್ಟರ್ ಶ್ರೀ ಕಾಶೀನಾಥ ಅವರ ಹಾಡು ನೆನಪಿಗೆ ಬರುತ್ತೆ. ಆದರೆ ಕವಿತೆ ಸಾಲು ಉಲ್ಟಾ ಅಷ್ಟೇ ಎಂದೆ. ಅದು "ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಮತ್ತು ಮೀಸೆ ಹೊತ್ತ ಗಂಡಸಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು" ಎಂದೆ. ಹೌದು, ಅನ್ನು.. ಕಣೋ ಅನ್ನು... ಎಲ್ಲರೂ ಆಡಿಕೊಳ್ಳುವವರೇ ನನಗೆ ಎಂದು ಗೋಳಾಡಿದ. ಮತ್ತೆ ಯಾರು? ಆಡಿಕೊಳ್ಳುತ್ತಾರೆ ಎಂದು ಕೇಳಿದೆ. ಮತ್ತೆ ಆ &lt;a href="http://haalusakkare.blogspot.com/2009/08/blog-post_1857.html"&gt;ಪಂಚಾಮೃತ ಮನ್ಯಾ&lt;/a&gt; ನರೇಂದ್ರ ಎಂದು ಹೆಸರು ಇಟ್ಟುಕೊಂಡ ಕರ್ಮಕ್ಕೆ.. ನನಗೆ ಶ್ರೀ ವಿವೇಕಾನಂದ ಸ್ವಾಮಿಗಳಿಗೆ ಹೋಲಿಸುತ್ತಾನೆ, ಮಗ ದೇವೇಂದ್ರನಿಗೆ ಹೋಲಿಸೋಕೆ ಏನು? ಕಷ್ಟ ಎಂದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಇಷ್ಟೆಲ್ಲಾ ಕೊರೆದ ಮೇಲೆಯೂ ಕೂಡ ಏನೋ? ಕನಸಿನ ಬಗ್ಗೆ ಹೇಳುತ್ತಾ ಇದ್ದೆ ಎಂದು ಕೇಳಿದೆ. ಕತ್ರಿನ ಕೈಫ್ ಮದುವೆ ಆಗುವ ತರಹ ಕನಸು ಕಾಣುತ್ತಿದ್ದೆ ಎಂದ. ಅವಳ ಮದುವೆಯಲ್ಲಿ ನೀನೇನೋ ಮಾಡುತ್ತಾ ಇದ್ದೆ ಎಂದು ಕೀಟಲೇ ಮಾತು ಆಡಿದೆ. ಊಟ ಬಡಿಸುತ್ತಾ ಇದ್ದೆ ಎಂದು ಕೋಪದಿಂದ ಉಲಿದ. ಕನಸಿನಲ್ಲೇ ನಾನು ಕೂಡ ಇದ್ದೇನಾ ಎಂದು ಕೇಳಿದೆ. ಹಾ ಇದ್ದೆ.... ನೀನೇ ಅಡಿಗೆ ಭಟ್ಟ, ಮತ್ತೆ ....ನನ್ನ ಮಗನೆ ಎಂದು ಉಸುರಿದ. ಆಯಿತು ಹೇಳಪ್ಪ ಎಂದೆ. ಕತ್ರಿನ ಕೈಫ್ ಜೊತೆ ನನ್ನ ಮದುವೆ ಆಗುವ ಹಾಗೇ ಕನಸು ಬಿತ್ತು ಕಣೋ, ಎಂದು ಮುಖ,ಕಣ್ಣು ಎರಡು ಅರಳಿಸಿ ಹೇಳಿದ. ಅದು ಹೇಗೆ? ಆಗುತ್ತೆ ಎಂದು ನಾನು ಕೇಳಿದೆ. ಯಾಕಪ್ಪಾ ಆಗೋಲ್ಲ ಅವಳೇನೂ ನಿನ್ನ ವೈಫಾ? ಎಂದು ದಬಾಯಿಸಿದ. ಹೆಂಡತಿ ಪಕ್ಕದಲ್ಲಿ ಇಲ್ಲದಿದ್ದರೂ.... ಸವಕಾಶ ಕಣೋ ಎಂದು ಹೇಳಿದೆ. ಅಷ್ಟರಲ್ಲೇ ಹೆಂಡತಿಯ ಮಿಸ್ ಕಾಲ್ ಮಿಂಚಿ ಮಾಯೆ ಆಯಿತು. ಈ ಹೆಂಡತಿಯರು ಮಿಸ್ಸಸ್ ಆದರೂ, ಮಿಸ್ ಕಾಲ್ ಕೊಡುವುದನ್ನು ಬಿಡುವುದಿಲ್ಲ ನೋಡು ಎಂದು ಹೇಳಿದೆ. ನಿನಗೂ ಇದೆ ಗತಿ ಕಣೋ, ಕಾಲು ಗ್ಯಾರಂಟೀ ಎಂದೆ. ಲೇ... ಸುಮ್ಮನಿರು ಇದು ಮಧ್ಯಾಹ್ನ ಬಿದ್ದ ಕನಸು ನನಸು ಆಗಬಹುದು ಎಂದ. ಸಧ್ಯ ಇದನ್ನು ಬೇರೆ ಯಾರಿಗೂ ಹೇಳಬೇಡ ಇಲ್ಲಿ ತುಂಬಾ ಜನ ಬ್ರಹ್ಮಚಾರಿಗಳು ಇದ್ದಾರೆ, ಮತ್ತೆ ಸಲ್ಲು ಮಿಯಾಗೆ ಏನಾದರೂ ತಿಳಿದರೆ ಖಲಾಸ್.... ಕತ್ರಿನ ಕೈಫ್ ಬದಲಿ, ಅವನ ಕೈಯಲ್ಲಿ ಕತ್ತರಿ ಮತ್ತು ನೈಫ್ ಇರುತ್ತೆ ಎಂದೆ. ಏ ಸುಮ್ಮನೇ ಇರಪ್ಪ ನಿನ್ನದೊಂದು ಎಂದು ಮುಖ ತಿರುಚಿದ. ಮತ್ತೆ ಐಶ್ವರ್ಯ, ಗಿಶ್ವರ್ಯ ಕನಸಿನಲ್ಲಿ ಬರುವುದಿಲ್ಲವಾ? ಎಂದು ಕೇಳಿದೆ. ಮದುವೆಗೆ ಮುಂಚೆ ಬರುತ್ತಿದ್ದಳು. ನಾನು ಮದುವೆ ಆದವರ ಸುದ್ದಿಗೆ ಹೋಗಲ್ಲ ಎಂದು ಹೇಳಿದ. ಲೇ ಕೆಲಸದ ಸಮಯದಲ್ಲಿ ಕೆಲಸ ಮಾಡುವದು ಬಿಟ್ಟು ಕನಸು ಕಾಣುತ್ತಾ ಇದ್ದೀಯಲ್ಲಲೇ ಎಂದು ದಬಾಯಿಸಿದೆ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಲೇ ನಾನು ಮಲಗಿಕೊಳ್ಳಬೇಕು, ಸುಮ್ಮನೇ ಹೋಗು ಎಂದು ಬೈದ. ಬಾಸ್ ಬಂದರೆ ಏನು? ಮಾಡುತ್ತೀ ಎಂದು ಕೇಳಿದೆ. ಎದುರಿಗೆ ಇರುವ ಕೆಲಸದ ಪಪೇರ್ ತೋರಿಸಿ, ಕೆಲಸದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಿದ್ದೆ ಎಂದು ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ.&lt;/p&gt;&lt;p style="margin-top: 0px; margin-right: 0px; margin-bottom: 10px; margin-left: 0px; "&gt;ಇಷ್ಟೆಲ್ಲಾ ಆದರೂ ನನಗೆ ಒಂದು ಹನಿ ಕಣ್ಣೀರು ಕೂಡ ಬರಲಿಲ್ಲ, ಏಕೆಂದರೆ ಅನಾಮತ್ತಾಗಿ 3 ಘಂಟೆ ನೀರು ಕುಡಿಯಲು ಬಿಡದೆ ನೀರಿಳಿಸಿದ್ದ. ಅವನೇನೋ ನಿದ್ದೆಗೆ ಹೋದ, ಇವತ್ತು ರಾತ್ರಿ ನನಗೆ ನಿದ್ದೆ ಬರೋದು ಡೌಟ್. ನನಗು ಒಬ್ಬ ಗಂಡು ಮಗ ಇದ್ದಾನೆ ಸ್ವಾಮಿ...... ಮನೆಗೆ ಹೋಗುತ್ತಾ ಸೇಬು ಹಣ್ಣು ತೆಗೆದುಕೊಂಡು ಮನೆಗೆ ಹೋದೆ. ಹೆಂಡತಿ ಅಂದರೆ ಸಾಮಾನ್ಯನಾ... ಭಯ, ಭಕ್ತಿ ಇರಬೇಕು ತಾನೇ?.&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-4091365820742503894?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/4091365820742503894/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/blog-post_19.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/4091365820742503894'/><link rel='self' type='application/atom+xml' href='http://www.blogger.com/feeds/3457141075796460701/posts/default/4091365820742503894'/><link rel='alternate' type='text/html' href='http://haalusakkare.blogspot.com/2010/11/blog-post_19.html' title='ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-7384511302893526537</id><published>2010-11-19T06:19:00.000-08:00</published><updated>2010-11-19T06:20:26.232-08:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><title type='text'>ನನ್ನ ರುಕ್ಮಿಣಿ( ರೊಕ್ಕಾ + Money) ಮತ್ತು ಸತ್ಯ ಭಾಮೆ ....</title><content type='html'>&lt;p&gt;ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್  ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ  ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ ಮೇಲೆನೇ ತಿಂಡಿ , ಊಟ  ಎಲ್ಲಾ ಎಂದಳು. ಐದು ವರ್ಷದಲ್ಲಿ ಇರಲಾರದ ನೀತಿ ನಿಯಮ ಏನೇ ಇದು ಕರ್ಮ ಎಂದೆ. ನೀವು ಈ ನೀತಿ ನಿಯಮ  ಮಾಡಲಾರದಕ್ಕೆ ನಿಮಗೆ ಹೀಗೆ ಆರೋಗ್ಯ ಸರಿ ಇರುವದಿಲ್ಲ ಎಂದಳು. ನಾನು ಏನು ತಿನ್ನದೇ ಇದ್ದರೆ  ಆರೋಗ್ಯದ ಗತಿ ಏನು ಎಂದೆ. ಎಲ್ಲಾ ನಿಮ್ಮ ಆರೋಗ್ಯದ ದೃಷ್ಟಿಯಿಂದನೆ ಮಾಡುತ್ತಾ ಇರುವದು ಎಂದು  ದಬಾಯಿಸಿದಳು. ಇವತ್ತು ಬೇರೆ ಶನಿವಾರ ಹೇಗಾದರೂ ಮಾಡಿ ಆಫೀಸ್ ಗೆ ಹೋಗಿಬಿಟ್ಟರೆ ಸಾಕು ತಾನೇ ಎಲ್ಲ  ಸಿಗುತ್ತೆ ಎಂದು ಯೋಚಿಸಿ, ಇವತ್ತು ಸ್ವಲ್ಪ ಕೆಲಸ ಇದೆ ಆಫೀಸ್ ಹೋಗಬೇಕು ಎಂದೆ. ಸುಮ್ಮನೇ ರೈಲು  ಬಿಡಬೇಡಿ ಎಂದಳು. ಹಳೆಯ ಒಂದು ಮಿಂಚಂಚೆ ತಾರೀಖು ಬದಲಿಸಿ ಅವಳಿಗೆ ತೋರಿಸಿದೆ. ಆಯಿತು ಹೋಗಿ  ಬನ್ನಿ, ಆದರೆ ಆಫೀಸ್ ನಲ್ಲಿ ಏನು ತಿನ್ನ ಬೇಡಿ ಎಂದಳು. ಆಯಿತು ಎಂದು ಖುಶಿಯಿಂದ ನನ್ನ ಗಾಡಿ  ಸ್ಟಾರ್ಟ್ ಮಾಡಿ ಆಫೀಸ್ ಹೋದೆ.&lt;/p&gt; &lt;p&gt;ಆಫೀಸ್ ತಲುಪಿ ನೋಡುತ್ತೇನೆ. ತುಂಬಾ ಜನ ಬಂದಿದ್ದರು. ನಾನು ಮೊದಲ ಬಾರಿ ಶನಿವಾರ ಆಫೀಸ್  ಬಂದಿದ್ದು ನೋಡಿ, ನಟರಾಜ್ ನನ್ನ ಬಳಿ ಬಂದು ಏನ ಸರ್ ಇವತ್ತು ಎಂದ. ಅಜಿತ್ ನಗುತ್ತಾ ಎಲ್ಲಾ  ಸಂಸಾರಿಗಳ ಹಣೆ ಬರಹ ಇಷ್ಟೇ ಎಂದ. ಹಾಗೇನೂ ಇಲ್ಲ ಎಂದೆ. ಎಲ್ಲರೂ ತಿಂಡಿಗೆ ಹೊರಟರು. ನಾನು  ಹೋಗಬೇಕು ಅನ್ನಿಸಿದರೂ, ಪಾಪ ನನ್ನ ಮಡದಿ, ನನ್ನ ಸಲುವಾಗಿ ಇಷ್ಟು ಕಷ್ಟ ಪಡುತ್ತಿದ್ದಾಳೆ ಎಂದು  ಅನ್ನಿಸಿ ನಾನು ಹೋಗಲಿಲ್ಲ. ಎಲ್ಲರೂ ತಿಂಡಿ ಮುಗಿಸಿ ಬಂದರು. ಅಷ್ಟರಲ್ಲಿ ನನ್ನ ಕರ್ಮಕ್ಕೆ ಒಂದು  ತುಂಬಾ ಅರ್ಜೆಂಟ್ ಕೆಲಸ ನನ್ನ ಮಿಂಚಂಚೆ ಯಲ್ಲಿ ಬಂದಿತ್ತು. &lt;/p&gt; &lt;p&gt;ಅದನ್ನೇ ಯೋಚನೆ ಮಾಡುತ್ತಾ ಕುಳಿತಿದ್ದೆ. ನಟರಾಜ ಬಂದು ತನ್ನ ಮೊಬೈಲ್ ಚಾರ್ಜರ್ ಮರೆತು  ಬಂದಿದ್ದೇನೆ, ನಿಮ್ಮ ಚಾರ್ಜರ್ ಉಪಯೋಗಿಸುತ್ತೇನೆ ಎಂದು ಅವಸರದಲ್ಲಿ ಬಂದು ಅದರಲ್ಲಿ ಸಿಕ್ಕಿಸಿದ.  ಅದು ಅದರಲ್ಲಿ ಹೋಗಲಿಲ್ಲ ಎಂದು ಅದನ್ನು ಉಲ್ಟಾ ಮಾಡಿ ಹಾಕಿದ. ಅವನ ಮೊಬೈಲ್ ಚಾರ್ಜ್ ಮಾಡುವ  ಸಲುವಾಗಿ ಗುದ್ದಾಡಿದ, ಏನು ಪ್ರಯೋಜನ ಆಗಲಿಲ್ಲ. ನಾನು ಸ್ವಲ್ಪ ಕೆಲಸದ ಒತ್ತಡದಲ್ಲಿ  ಇದ್ದಿದ್ದರಿಂದ ಅವನನ್ನು ಗಮನಿಸಲಿಲ್ಲ. ಅಷ್ಟರಲ್ಲಿ ಅಜಿತ ಬಂದು ಏನಪ್ಪಾ? ನಟರಾಜ ನಿಮ್ಮ ಹುಡುಗಿ  ಕರೆ ಬರಲಿಲ್ಲವಾ ಎಂದ. ನಟರಾಜ ಗುದ್ದಾಡಿ ಇದು ನನ್ನ ಮೊಬೈಲ್ ಗೆ ಬರಲ್ಲಾ ಎಂದು ನನ್ನ ಚಾರ್ಜ್ ಗೆ  ಮೊಬೈಲ್ ಸಿಕ್ಕಿಸಿದ. ಅಜಿತ್ ಹಾಗಲಕಾಯಿ ಚಿಪ್ಸ್ ತೆಗೆದು ಕೊಂಡು ಬಂದಿದ್ದ. ನಮಗೂ ಸ್ವಲ್ಪ ಕೊಟ್ಟ.  ಅದು ತುಂಬಾ ಚೆನ್ನಾಗಿ ಇತ್ತು, ಸ್ವಲ್ಪ ಕೂಡ ಕಹಿ ಇರಲಿಲ್ಲ. ಅದನ್ನು ತಿನ್ನುತ್ತಾ ಕೆಲಸ ಮುಗಿದ  ಮೇಲೆ ಅಜಿತನಿಗೆ ಅದನ್ನು ಮಾಡುವ ವಿಧಾನ ಕಳುಹಿಸು ಎಂದು ಹೇಳಿದೆ. ಅಷ್ಟರಲ್ಲಿ ನನಗೆ ಆಫೀಸ್ ಫೋನ್  ಗೆ ಒಂದು ಕರೆ ಬಂದಿತ್ತು. "ಎಲ್ರಿ ಹಾಳಾಗಿ ಹೋಗಿದ್ರೀ" ಎಂದು ನನ್ನ ಮಡದಿ ಕಿರುಚಿತ್ತ ಇದ್ದಳು.  ಮೊಬೈಲ್ ಯಾಕೆ? ಸ್ವಿಚ್ ಆಫ್ ಮಾಡಿದ್ದೀರ ಎಂದು ಆಫ್ ಮೂಡಿನಲ್ಲಿ ಬೈದಳು. ನಾನು ಇಲ್ವಲ್ಲಾ ಎಂದು  ನನ್ನ ಮೊಬೈಲ್ ನೋಡಿದೆ ನಿಜವಾಗಿಯೂ ಆಫ್ ಆಗಿತ್ತು. ಓ ಹೌದು ಕಣೇ ಆಫ್ ಆಗಿದೆ ಸಾರೀ ಎಂದೆ. ಮತ್ತೆ  ಯಾರದು ಫೋನ್ ಎತ್ತಿದ ಹುಡುಗಿ ಎಂದು ದಬಾಯಿಸಿದಳು. ಕಡೆಗೆ ಅವಳು ನಮ್ಮ ಆಫೀಸ್ ರಿಸೆಪ್ಶನಿಸ್ಟ್  ಎಂದು ತಿಳಿಹೇಳಿದೆ.ಆದರೂ, ನನಗೇನೋ ಡೌಟು ಎಂದು ಕೋಪಿಸಿಕೊಂಡು ಫೋನ್ ಕಟ್ ಮಾಡಿದಳು. &lt;/p&gt; &lt;p&gt;ಅಷ್ಟರಲ್ಲಿ ಓಡಿ ಬಂದ ನಟರಾಜ, ಏನ್ರೀ ಸರ್ ನನ್ನ ಮೊಬೈಲ್ ಹಾಳು ಮಾಡಿಬಿಟ್ಟಿರಲ್ಲಾ ಸರ್ ಎಂದ.  ಎಂತಹ ಚಲೋ ನನ್ನ ಹುಡುಗಿ ಕರೆ ಮಾಡುತ್ತಾ ಇತ್ತು. ಅದು ಐದು ವರ್ಷದ ಫೋನ್ ಎಂದ. ನನಗೆ ಆಶ್ಚರ್ಯ  ನಾನೇನು ಮಾಡಿದೆ ಎಂದೆ. ನಿಮ್ಮ ಚಾರ್ಜರ ದೆಸೆಯಿಂದ ಅಂದ. ನಾನು ನನ್ನ ಮೊಬೈಲ್ ಆನ್ ಮಾಡಿದೆ, ಆದರೆ  ಚಾರ್ಜಾರ್ ಕೆಟ್ಟು ಹೋಗಿತ್ತು. ಮತ್ತೆ ಅರ್ಧ ಘಂಟೆಯಲ್ಲಿ ಹೋಗಿ ಹೊಸ ಮೊಬೈಲ್ ಕೊಂಡು ಬಂದಿದ್ದ.  ನನ್ನ ಮೊಬೈಲ್ ಚಾರ್ಜ್ ಇಟ್ಟರೆ ಸಾಕು ಮೊಬೈಲ್ ಆಫ್ ಆಗುತಿತ್ತು.&lt;/p&gt; &lt;p&gt;ಕಡೆಗೆ ಎಲ್ಲ ಕೆಲಸ ಮುಗಿಸಿ, ಮನೆ ದಾರಿ ಹಿಡಿದೆ. ಬರುವ ದಾರಿಯಲ್ಲಿ ಹಾಗಲಕಾಯಿ ತೆಗೆದು ಕೊಂಡು  ಹೋದೆ. ನನ್ನ ಮಡದಿ ತುಂಬಾ ಕೋಪ ಮಾಡಿ ಕೊಂಡಿದ್ದಳು. ನಾನು ಹೋಗುತ್ತಲೇ "ಸತ್ಯ ಭಾಮೆ... ಸತ್ಯ  ಭಾಮೆ... ಕೋಪವೆನೇ ನನ್ನಲಿ" ಎಂದು ಹಾಡುತ್ತಾ ಮನೆ ಒಳಗಡೆ ಕಾಲು ಇಟ್ಟೆ. ತುಂಬಾ ಕೋಪಗೊಂಡಿದ್ದಳು.  ತುಂಬಾ ಹಸಿವೆ ಕಣೇ ಏನು ತಿಂದಿಲ್ಲಾ ಎಂದು ಹೇಳಿದಾಗ, ಇದ್ದ ಕೋಪವೇಲ್ಲಾ ಮರೆತು ಮತ್ತೆ ಶಾಂತ  ರೀತಿಯಲ್ಲಿ ಊಟಕ್ಕೆ ಹಾಕಿದಳು. ಊಟ ಆದ ಮೇಲೆ ಸಾವಕಾಶವಾಗಿ, ನನ್ನ ಹತ್ತಿರ ಬಂದು ನಿಜ ಹೇಳಿ  ಮೊಬೈಲ್ ಯಾಕೆ ಆಫ್ ಮಾಡಿದ್ದು. ನಿಜವಾಗಿಯೂ ಆಫೀಸ್ ನಲ್ಲಿ ಕೆಲಸ ಇತ್ತಾ ಅಥವಾ...? ಎಂದಳು. ನಾನು  ನಡೆದ ವಿಚಾರನೆಲ್ಲಾ ಹೇಳಿ, ನಾನು ನಾಮ ಮಾತ್ರಕ್ಕೆ ಗೋಪಾಲ ಕಣೇ, ಏನೋ ಬೇಕಾದರೆ ಸ್ವಲ್ಪ ದನ  ಕಾಯಬಹುದು ಎಂದೆ. ಅವಳು ಜೋರಾಗಿ ನಕ್ಕೂ ಸುಮ್ಮನಾದಳು.&lt;/p&gt; &lt;p&gt;ಸಂಜೆ, ಲೇ.. ಹಾಗಲಕಾಯಿ ಚಿಪ್ಸ್ ಮಾಡೇ ಎಂದು ಅದರ ಮಾಡುವ ವಿಧಾನದ ಪ್ರಿಂಟ್ ಅವಳಿಗೆ ಕೊಟ್ಟೆ.  ಇದನ್ನು ಏಕೆ ತಂದಿರಿ ನಾನು ತಿನ್ನುವದಿಲ್ಲ ಎಂದಳು. ಏಕೆ? ಎಂದು ಕೇಳಿದಾಗ, ಚೊಚ್ಚಲ ಗಂಡು ಮಗ  ಇದ್ದರೆ ತಿನ್ನ ಬಾರದು ಎಂದು ಹೇಳಿದಳು. ಆಯಿತು ನಮ್ಮಿಬ್ಬರಿಗೆ ಮಾಡು ಎಂದೆ. ಅದೆಲ್ಲ ಆಗೋಲ್ಲ  ನೀವೇ ಮಾಡಿಕೊಳ್ಳಿ. ಅದನ್ನು ಚೊಚ್ಚಲ ಗಂಡು ಮಗನ ತಾಯಿ ಕತ್ತರಿಸಬಾರದು ಕೂಡ ಎಂದಳು. ಕಡೆಗೆ ನಾನೇ  ಮಾಡಿದೆ. ಆಗ ಕರೆಂಟ್ ಹೋಯಿತು, ನಾನು ಅವಳ ಹಿಂದೆ ಬಂದು ನಿಂತೆ. ಅವಳು ಹೆದರಿ ಬಿಟ್ಟಳು. ಏನೇ  ಏನು? ಆಯಿತು ಎಂದೆ. ನೀವೇ ಹೇಳಿದ್ದೀರಲ್ಲ ಪತಿಯೇ ಪರರ ದೈವ ಎಂದು. ನನಗೆ ದೆವ್ವ ತಾನೇ ಎಂದು  ಹಿಯಾಳಿಸಿದಳು. &lt;/p&gt; &lt;p&gt;ಅಷ್ಟರಲ್ಲಿ ಪಕ್ಕದ ಮನೆ ಪ್ರಿಯ ಬಂದ ಸದ್ದು ಕೇಳಿಸಿತು. ನಾನು  ಬೇಕು ಅಂತಲೇ " ಸತ್ಯಭಾಮ ಬಾರಮ್ಮ ನೀಡು ಒಂದು ಉಮ್ಮಾ .." ಎಂದು ಹಾಡುತ್ತಾ ಇದ್ದೆ. ಯಾಕೆ ರಾಯರು  ಮಧ್ಯಾಹ್ನ ಏನೇನೋ ಹೇಳಿ ಮತ್ತೆ ನಿಮ್ಮ ವರಸೆ ಶುರು ಹಚ್ಚಿಕೊಂಡಿದ್ದೀರಾ ಎಂದಳು. ನಿನಗೆ ಹಾಡಿದ್ದು  ಕಣೇ, ನೀನೆ ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ಎಂದು ಪುಸಲಾಯಿಸಿದೆ. ಮಗನ  ಹೋಮ್ ವರ್ಕ್ ಮಾಡಿಸಿ ಎಂದು ಹೇಳಿದಳು. ಗುಡ್ ಮ್ಯಾನರ್ಸ್ ಚಾರ್ಟ್ ಅಂಟಿಸುವದು ಇತ್ತು. ಅದನ್ನು  ನೋಡಿ, ನಿಮ್ಮ ಅಪ್ಪನಿಗೆ ಯಾವಾಗ? ಗುಡ್ ಮ್ಯಾನರ್ಸ್ ಬರುತ್ತೋ ನಾಕಾಣೆ ಎಂದು ಹೇಳಿ ಅಡಿಗೆ ಮನೆಗೆ  ಹೊರಟು ಹೋದಳು.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7384511302893526537?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7384511302893526537/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/money.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7384511302893526537'/><link rel='self' type='application/atom+xml' href='http://www.blogger.com/feeds/3457141075796460701/posts/default/7384511302893526537'/><link rel='alternate' type='text/html' href='http://haalusakkare.blogspot.com/2010/11/money.html' title='ನನ್ನ ರುಕ್ಮಿಣಿ( ರೊಕ್ಕಾ + Money) ಮತ್ತು ಸತ್ಯ ಭಾಮೆ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-3755745783476960413</id><published>2010-11-17T04:36:00.000-08:00</published><updated>2010-11-17T04:37:33.972-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ತರ್ಲೆ ಮಂ(ಗ)ಜನ ತಮಾಷೆಗಳು ...</title><content type='html'>&lt;p&gt;ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು   ಸಂಕೇತ ಮತ್ತು ಶರತ ಜೊತೆ ಬಂದಿದ್ದಳು. &lt;/p&gt; &lt;p&gt;ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.&lt;br /&gt;ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.&lt;br /&gt;ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.&lt;br /&gt;ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.&lt;br /&gt;ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.&lt;br /&gt;ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.&lt;br /&gt;ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.&lt;br /&gt;ಈಗ ಮಂಜನ ತಂಗಿ ಶಾಂತಲಾ ಕೋಪ ತಾರಕಕ್ಕೆ ಏರಿತ್ತು. ಸುಮ್ಮನೇ ಯಾಕೆ ಕಾಡುತ್ತೀ ಮಗೂನಾ ಎಂದಳು. ಸಂಕೇತನ ಅಜ್ಜಿ, ಮಂಜನ ಹೆಂಡತಿ ಸೇರಿ ಮಂಗಳಾರತಿ ಮಾಡಿದರು. ಅಮ್ಮ, ನೀನು ಕೋಪ ಮಾಡಿಕೊಳ್ಳ ಬೇಡ ನಿನಗೆ ಮೊದಲೇ ಬ್ರೆಡ್ ಸ್ಪೆಶಲ್ ಎಂದ. ಹಾಗಂದರೆ ಎಂದು ನಾನು ಕೇಳಿದೆ, ಅದಕ್ಕೆ ಮಂಜ ಅಮ್ಮ ಬ್ಲಡ್ ಪ್ರೆಶರ್ ಗೆ ಬ್ರೆಡ್ ಪ್ರೆಶರ್ ಅನ್ನುತ್ತಾರೆ ಎಂದ. ನಾನು ಅದನ್ನು ಬ್ರೆಡ್ ಸ್ಪೆಶಲ್ ಮಾಡಿರುವೆ ಎಂದ. ಆಯಿತು ಬಿಡಪ್ಪ ನೀನು ಜಾಣ ಎಂದು ಮಂಜನ ಅಮ್ಮ ಕೋಪ ಮಾಡಿಕೊಂಡರು. ಅಷ್ಟರಲ್ಲಿ ಮಂಜನ ಮಡದಿ ಕೆಂಗಣ್ಣಿನಿಂದ ಮಂಜನನ್ನು ನೋಡಿದಳು. ಹೆಂಡತಿಗೆ ಹೆದರಿದರು ಕಾಡುವುದನ್ನು ಮಾತ್ರ ಬಿಡಲಿಲ್ಲ. ನಾವು ಹೋಗಲಿ ಬಿಡಪ್ಪ ಸುಮ್ಮನೇ ಎಂದರು ಕೇಳಬೇಕಲ್ಲ ಆಸಾಮಿ.&lt;br /&gt;ಏ  ಸುಮ್ಮನಿರು ನೀನು, ನಾನು ಕೇಳುತ್ತಾ ಇರೋದು ನನ್ನ ಅಳಿಯನಿಗೆ ಎಂದ. ಪುಟ್ಟ ನಿನಗೆ ಚ್ಯಾಕ್ಲೇಟ್ ಕೊಡಸುತ್ತೇನೆ ಎಂದ.&lt;br /&gt;ಮತ್ತೆ ಶುರು ಹಚ್ಚಿಕೊಂಡ ಮತ್ತೆ ಏನೇನು ಹೇಳಿದ್ದಾರೆ  ಎಂದ.&lt;br /&gt;ಜೋನಿ ಜೋನಿ ಎಸ್ ಪಾಪ.. ಈಟಿಂಗ್ ಶುಗರ್ ನೋ ಪಾಪ.. ಟೆಲ್ಲಿಂಗ್ ಲೈ ನೋ ಪಾಪ.. ಓಪನ್ ಯುವರ್ ಮೌತ್ ಹಾ ಹಾ ಹಾ ಎಂದ.&lt;br /&gt;ಸುಳ್ಳು ಹೇಳುವ ಕಲೆ ಎಷ್ಟು ಚಂದ ಹೇಳಿಕೊಟ್ಟಿದ್ದಾರೆ ಕಣೋ ಎಂದು ತಲೆ ಚಚ್ಚಿಕೊಂಡ.&lt;br /&gt;ಮತ್ತೆ ಸಂಕೇತ ರೇನ್ ರೇನ್ ಗೋ ಅವೇ ಲಿಟ್ಲ್ ಜಾನೀ ವಾಂಟ್ಸ್ ಟು ಪ್ಲೇ ಎಂದು ಹೇಳಿದ.&lt;br /&gt;ಲೇ ಇದನ್ನು ಯಾರಾದರೂ ಬರಗಾಲ ಪ್ರದೇಶದ ರೈತರು ಕೇಳಿದರೆ ನಿನಗೆ ನಿಮ್ಮ ಮಿಸ್ಗೆ ಸೇರಿ ಒದಿತಾರೆ. &lt;/p&gt; &lt;p&gt;ಮತ್ತೆ ಮಂಜ ಒಂದಿಷ್ಟು ಕನ್ನಡದ ರೈಮ್ಸ್ ಆನೆ ಬಂತೊಂದಾನೆ, ನಾಯಿಮರಿ ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇರುವೆ-ಇರುವೆ ಎಲ್ಲಿರುವೆಗಳಾದ ಎಲ್ಲವುಗಳನ್ನೂ ಸಂಕೇತಗೆ ಹೇಳಿದ. ಅದೆಲ್ಲವೂ ಕೇಳಿದ ಮೇಲೆ ಸಂಕೇತ ಮಂಜನಿಗೆ, ಮಾಮಾ ನಿನಗೆ ಯಾರು ಹೇಳಿದರು ಇವನೆಲ್ಲಾ ಎಂದು ಕೇಳಿದ. ಅದಕ್ಕೆ ಮಂಜ ನನ್ನ ಮಿಸ್ ಎಂದು ತನ್ನ ಮಡದಿಯನ್ನು ತೋರಿಸಿದ. ಅವಳು ಎಮ್ಮೆ(M.A) ಗೊತ್ತಾ ಎಂದ. ಯಾರಿಗೂ ತಿಳಿಯಲಿಲ್ಲ ಸಧ್ಯ. &lt;/p&gt; &lt;p&gt;ಮತ್ತೆ ಅವನಿಗೆ ತಪ್ಪು ತಪ್ಪಾಗಿ ಏ ಫಾರ್ ಅವರೆಕಾಯಿ , ಬೀ ಫಾರ್ ಬದಾನೆ ಕಾಯಿ, ಸೀ ಫಾರ್ ಚವಳಿಕಾಯಿ ಎಂದೆಲ್ಲ ಹೇಳುತ್ತಿದ್ದರೆ, ಎಲ್ಲರೂ ನಗುತ್ತಿದ್ದರು. ಅವನ ತಂಗಿ ತುಂಬಾ ಕೋಪ ಮಾಡಿಕೊಂಡಿದ್ದಳು. ನಾಳೆ ಪರೀಕ್ಷೆಯಲ್ಲಿ ಇದನ್ನೇ ಹೇಳುತ್ತಾನೆ ಎಂದು.ಎಲ್ಲರೂ ಊಟ ಮುಗಿಸಿದೆವು. ಊಟ ಮುಗಿದ ಮೇಲೆ ಸೀರಿಯಲ್ ಗಳ ಬಗ್ಗೆ ಚರ್ಚೆ ಶುರು ಆಯಿತು. ನಾನು ಕೌನ್ ಬನೇಗಾ ಕರೋಡ ಪತಿಯಲ್ಲಿ ಕೋಟಿ ಸೋತ ಮನುಷ್ಯನ ಬಗ್ಗೆ ಅನುಕಂಪದ ಮಾತು ಆಡಿದೆ. ಅದಕ್ಕೆ ನಮ್ಮ ಮಂಜ ಸರಿಯಾಗಿ ಮಾಡಿದ್ದಾನೆ ಗಣಪತಿ ಅವನಿಗೆ ಎಂದ. ಪಾಪ ಪ್ರತಿ ವರ್ಷ ಗಣಪತಿ ಇಟ್ಟು, ಕಡೆ ದಿನ ಅವನ ಮುಂದೆ ಡ್ಯಾನ್ಸ್ ಮಾಡುತ್ತಾ ಹೋಗಿ ನೀರಿನಲ್ಲಿ ಮುಳುಗಿಸುತ್ತಾನೆ, ಈಗ ಡ್ಯಾನ್ಸ್ ಮಾಡಿ ಮುಳುಗಿಸುವುದು ಗಣಪತಿಯ ಸರದಿ ಎಂದ. ಎಲ್ಲರೂ ಜೋರಾಗಿ ನಕ್ಕೆವು. &lt;/p&gt; &lt;p&gt;ಮಂಜನ ಹೆಂಡತಿ ನೋಡಿ ನಿಮ್ಮ ಗೆಳೆಯ ಗೋಪಾಲ್ ತಮ್ಮ ಹೆಂಡತಿಯ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಪ್ರೀತಿಯಿಂದ ಬರೀತಾ ಇರುತ್ತಾರೆ ಎಂದಳು. ನೀವು ಇದ್ದೀರಾ? ಯಾವುದಕ್ಕೂ ಉಪಯೋಗ ಇಲ್ಲ ಎಂದಳು. ಲೇ ನಾನು ಏನು? ಎಂದು ತಿಳಿದಿದ್ದೀಯಾ ನಾನು ಒಂದು ಸೀರಿಯಲ್ ತೇಗೆಯಬೇಕು ಎಂದು ಇದ್ದೇನೆ. ಸೀರಿಯಲ್ ಪೂರ್ತಿ ನಮ್ಮಿಬ್ಬರ ಬಗ್ಗೆ ಇರುತ್ತೆ ಗೊತ್ತಾ ಎಂದ. ಅದರ ಹೆಸರು ಏನು? ಗೊತ್ತಾ "ಸಂಸಾರಿ ಕ್ರೈಮ್ ಸ್ಟೋರಿ" ಎಂದ. ಅದಕ್ಕೆ ನಾವೆಲ್ಲರೂ ನಕ್ಕೆವು. ಥೇಟ ವಿಲನ್ ತರಹ ನಗುತ್ತೀರಿ ಎಂದಳು ಮಂಜನ ಮಡದಿ ಸಾವಿತ್ರಿ. ಅದಕ್ಕೆ ಮಂಜ ಕೋಪದ ಮುಖದಿಂದ ಇದ್ದ ಅವಳಿಗೆ "ಹಂಗ್ಯಾಕೆ ಮಾಡಿ ಮಾರಿ, ಕಾಮನಕಟ್ಟಿ ದಾರಿ" ಎಂದ. ಮಂಜನ ಮಡದಿ ತುಂಬಾ ಕೋಪ ಮಾಡಿಕೊಂಡು, ನೀವು ಇನ್ನೂ ಸ್ವಲ್ಪ ದಿವಸ ಹೀಗೆ ಆಡುತ್ತಿದ್ದರೆ, ನಾನು ನಿಜವಾಗಿಯೂ ಮನೆ ದಾರಿ ಹಿಡಿಯುತ್ತೇನೆ ಎಂದಾಗ ಮಂಜ ಸುಮ್ಮನಾಗಿದ್ದ. ಸಂಜೆಯವರೆಗೆ ಮಂಜನ ಮನೆಯಲ್ಲಿ ಇದ್ದು ಕಾಫೀ ಮುಗಿಸಿ ಮನೆಗೆ ಬಂದೆವು.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-3755745783476960413?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/3755745783476960413/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/blog-post_6283.html#comment-form' title='2 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/3755745783476960413'/><link rel='self' type='application/atom+xml' href='http://www.blogger.com/feeds/3457141075796460701/posts/default/3755745783476960413'/><link rel='alternate' type='text/html' href='http://haalusakkare.blogspot.com/2010/11/blog-post_6283.html' title='ತರ್ಲೆ ಮಂ(ಗ)ಜನ ತಮಾಷೆಗಳು ...'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3457141075796460701.post-806384604950439190</id><published>2010-11-17T04:35:00.000-08:00</published><updated>2010-11-17T04:36:41.731-08:00</updated><category scheme='http://www.blogger.com/atom/ns#' term='ಸಣ್ಣ ಕತೆ'/><title type='text'>ಕಲ್ಲಪ್ಪನ ಮಗ ಡಾಕುಟರ್ ....</title><content type='html'>&lt;p&gt;ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ ತಮ್ಮ ಕಷ್ಟಗಳಿಗೆ ಮಗ ನೆರವಿಗೆ ಬರುತ್ತಾನೆ ಎಂದು. ಅವನಿಗೆ ಡಾಕ್ಟರ್ ಎಂದು ಅನ್ನಲು ಬರದಿದ್ದರೂ ಊರ ತುಂಬಾ ನನ್ನ ಮಗ ಡಾಕುಟರ್ ಎಂದು ಹೇಳೋಕೆ ಎಮ್ಮೆ ಅನ್ನಿಸುತ್ತದೆ ಎಂದು ಎಲ್ಲರಲ್ಲಿಯೂ ಕೊಚ್ಚಿಕೊಳ್ಳುತ್ತಿದ್ದ. ಮೊದಮೊದಲು ಸ್ವಲ್ಪು ದುಡ್ಡು ಕಳುಹಿಸುತ್ತಿದ್ದ ಮಗ, ಅನಂತರ ಕಡಿಮೆ ಮಾಡುತ್ತಾ ಬಂದ. ಮತ್ತೆ ಕೆಲವೊಂದು ತಿಂಗಳು ಕಳಿಸುತ್ತಲೇ ಇರಲಿಲ್ಲ. ಫೋನ್ ಮಾಡಿದರೆ ನಾನು ಆಮೇಲೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಕಲ್ಲಪ್ಪ ಇನ್ನೂ ಕಲ್ಲಿನ ಹಾಗೆ ಕುಳಿತರೆ ಏನು ನಡೆಯುವದಿಲ್ಲ ಎಂದು ಮಗನನ್ನು ನೋಡಲು ತಾನೇ ಬೆಂಗಳೂರಿಗೆ ಹೊರಟು ನಿಂತ. ಅವನಿಗೆ ಇಷ್ಟ ಎಂದು ಒಂದು ನಾಟಿ ಕೋಳಿ ತೆಗೆದುಕೊಂಡು ಹೊರಟ. ಬಸ್ ನಲ್ಲಿ ಎಲ್ಲರೂ ಅವನಿಗೆ ಛೀಮಾರಿ ಹಾಕಿದರು, ಕೋಳಿ ತೆಗೆದುಕೊಂಡು ಬಂದಿದ್ದಕ್ಕೆ. ಆದರೂ ಅದರ ಬಾಯಿಗೆ ಒಂದು ಅರಿವೆ ಕಟ್ಟಿ ಅದನ್ನು ಇಟ್ಟ. &lt;/p&gt; &lt;p&gt;ಮರುದಿನ ಬೆಂಗಳೂರು ಬಂದು ತಲುಪಿದ್ದ. ಮಗನಿಗೆ ಹೇಳದೇ ಬಂದಿದ್ದ. ಇಳಿದೊಡನೆ ಮಗನಿಗೆ ಫೋನ್ ಮಾಡಿದ, "ನೀವು ಕರೆ ಮಾಡುತ್ತಿದ್ದ ಚಂದಾದರರು ಸ್ವಿಚ್ ಆಫ್ ಮಾಡಿದ್ದಾರೆ" ಎಂಬ ಸಂದೇಶ ಹೊರ ಬರುತಿತ್ತು. ಏ ನನ್ನ ಮಗನಿಗೆ ಫೋನ್ ಕೊಡಮ್ಮಿ ಎಂದು ಕಿರುಚುತ್ತಿದ್ದ ಕಲ್ಲಪ್ಪ. ನೆರೆದವರೆಲ್ಲರೂ ಇವನನ್ನೇ ನೋಡುತ್ತಿದ್ದರು ಅದರ ಅರಿವು ಅವನಿಗೆ ಇರಲಿಲ್ಲ. ಕೊನೆಗೆ ಒಬ್ಬ ಹುಡುಗನಿಗೆ ಅವನ ವಿಳಾಸ ತೋರಿಸಿದ, ಆ ಹುಡುಗನ ಸಹಾಯದಿಂದ ಬಸ್ ಹತ್ತಿ ಹೊರಟ. ಅವನು ಕುಳಿತಿದ್ದು ಮುಂದಿನ ಸೀಟ್ ನಲ್ಲಿ, ಪ್ರತಿ ಸ್ಟಾಪ್ ಗೆ ಬಸ್ ಚಾಲಕನಿಗೆ ಕೇಳುತ್ತಾ ಇದ್ದ. ಅಷ್ಟರಲ್ಲಿ ಒಬ್ಬ ಹುಡುಗಿ ಬಂದು ಏಳಿ... ಎದ್ದೇಳಿ.. .ಎಂದಳು. ಏಕಮ್ಮ ಇದು ನನ್ನ ಸೀಟ್ ಎಂದ. ಏ .. ಏಳಿ ಲೇಡಿಸ್ ಸೀಟ್ ಎಂದಳು. ಏನೂ ಅರಿಯದ ಅವ ಹಾಗೆ ಎಂದರೆ ಅಂದ. ಹೆಂಗಸರ ಸೀಟ್ ಎಂದಳು. ಅವನ ಊರಿನಲ್ಲಿ ಈ ರೀತಿ ಎಂದು ಆಗಿರಲಿಲ್ಲ. ವಯೋ ವೃದ್ಧರ ಸೀಟ್ ಇದ್ದರು, ಅದರ ಬಗ್ಗೆ ಅವನಿಗೆ ಅರಿವು ಇರಲಿಲ್ಲ ಮತ್ತು ಓದಲು ಬರುತ್ತಿರಲಿಲ್ಲ. ಅದರಲ್ಲಿ ಕೆಲ ಹುಡುಗರು ಕುಳಿತಿದ್ದರು. ಕಡೆಗೆ ಬಸ್ ಸ್ಟಾಪ್ ಬಂತು. ಇಳಿದುಕೊಂಡು ಮಗನ ಪತ್ತೆ ಬಗ್ಗೆ ಎಲ್ಲರಲ್ಲಿಯೂ ಕೇಳುತ್ತಾ ಹೊರಟ. ಕೈಯಲ್ಲಿ ಚಿಕ್ಕ ಚೀಲ ಮತ್ತು ಕೋಳಿ ಇವನನ್ನು ನೋಡಿ ಕೆಲವರು ಅವನನ್ನು ಬಿಕ್ಷುಕ ಎಂದು ತಿಳಿದಿದ್ದು ಇದೆ. &lt;/p&gt; &lt;p&gt;ಕಡೆಗೂ ಮನೆ ಸಿಕ್ಕಿ ಬಿಟ್ಟಿತು. ಮನೆ ಒಳಗೆ ಹೆಜ್ಜೆ ಇಟ್ಟ ಕಲ್ಲಪ್ಪ , ಕೂಡಲೇ ಒಂದು ಹುಡುಗಿ ಹೂ ಆರ್ ಯೂ ಎಂದಳು. ಹೌಹಾರಿ ಬಿಟ್ಟ ಕಲ್ಲಪ್ಪ. ಪಿಕಿ ಪಿಕಿ ಎಂದು ಅವಳನ್ನೇ ನೋಡುತ್ತಾ ನಿಂತು ಬಿಟ್ಟ. ಮತ್ತೆ ಕೇಳಿದಳು ಹೂ ಆರ್ ಯೂ ಎಂದು. ನನ್ನ ಮಗ .... ಎಂದ. ವಾಟ್ ಎಂದಳು. ಸುರೇಶ ಎಂದು ಕೇಳಿದ, ಅದನ್ನು ಕೇಳಿದ ಆ ಹುಡುಗಿ ಒಳಗೆ ಹೋಗಿ ಮಲಗಿದ್ದ ಸುರೇಶ್ ನನ್ನು ಕರೆ ತಂದಳು. ಐ ಟೋಲ್ಡ್ ಯೂ ನಾಟ್ ಟೂ ವೇಕ್ ಮಿ ಎನ್ನುತ್ತಾ ಬರ್ಮುಡಾ ಏರಿಸುತ್ತಾ ಹೊರಗಡೆ ಬಂದ. ಅಪ್ಪ ನೀನು ಯಾವಾಗ ಬಂದೆ ಅಂದ. ಆ ಹುಡುಗಿಗೆ ಹಿ ಈಸ್ ಮೈ ಫಾದರ್ ಕಲಪ್ಪ ಎಂದ. ಓ ಯುವರ್ ಫಾದರ್ ಓಕೇ... ಓಕೇ...ಐ ಥಾಟ್ ಸಮ್ ಪೇಶೆಂಟ್ ಎಂದಳು. ಕಳ್ಳ ಅಪ್ಪ ವೇರಿ ಗುಡ್ ನೇಮ್ ಎಂದಳು. ಅವರಿಬ್ಬರು ಹಿಂದಿ, ಇಂಗ್ಲೀಶ್ ನಲ್ಲಿ ಏನೇನೋ ಮಾತನಾಡುತ್ತಾ ಇದ್ದರು. ಕಲ್ಲಪ್ಪನಿಗೆ ಏನು ಅರ್ಥವಾಗದೆ ಸುಮ್ಮನೇ ನಿಂತು ಬಿಟ್ಟ. ಅವನಿಗೆ ಇವನ ಮೇಲೆ ಅನುಮಾನ ಮದುವೆ ಮಾಡಿಕೊಂಡಿದ್ದಾನೆ ಎಂದು. ಮಗಾ.. ಮದುವೆ ಮಾಡಿಕೊಂಡಿದ್ದೀಯಾ? ಎಂದು ಕೇಳಿದ. ಹಾಗೇನೂ ಇಲ್ಲ ಎಂದ. ಮತ್ತೆ ಇವಳು?.... ಅದು... ಅದು.. ಎಂದು ತಡವರಿಸಿದ. ಏಕೆಂದರೆ ಅಪ್ಪನಿಗೆ ಹೇಗೆ ತಿಳಿಯಬೇಕು ಲಿವಿಂಗ್ ಟುಗೆದರ್ ಎಂದರೆ. ಸುಮ್ಮನೇ ಜೊತೆಗೆ ಇದ್ದೇವೆ ಎಂದ. ಅಪ್ಪನಿಗೆ ಕೋಪ ನೆತ್ತಿಗೆ ಏರಿತು, ಮಗ ತಪ್ಪು ದಾರಿ ಹಿಡಿದಿದ್ದಾನೆ ಎಂದು. ನಾಚಿಕೆ ಆಗೋಲ್ಲ ಎಂದೆಲ್ಲ ಬೈಯಲು ಶುರು ಮಾಡಿದ. ನಾಚಿಕೆ ಯಾಕೆ? ಇದೆಲ್ಲ ಕಾಮನ್ ಅಂದ. ಅವನಿಗೆ ತಿಳಿಯಲಿಲ್ಲ. ಅಂದರೆ ಏನೋ ಕಾಮಣ್ಣ ಎಂದು ಬೈದ. ಅಷ್ಟರಲ್ಲಿ ಒಳಗಡೆ ಇಂದ ಬಂದ ಆ ಹುಡುಗಿ ವಾಟ್ ಈಸ್ ದಿಸ್ ಸ್ಮೆಲ್ ಎಂದಳು. ಕಲ್ಲಪ್ಪ ತಂದ ನಾಟಿ ಕೋಳಿ ಅವನು ಕಟ್ಟಿದ್ದ ಬಿಗಿ ಅರಿವೇಗೆ ಸತ್ತು ಹೋಗಿ ನಾರುತಿತ್ತು. ಕಡೆಗೆ ಅದನ್ನು ಎಸೆದು ಸ್ನಾನ ಮಾಡಿ ಬಾ, ಎಲ್ಲ ಹೇಳುತ್ತೇನೆ ಎಂದ.&lt;/p&gt; &lt;p&gt;ಸ್ನಾನ ಮಾಡಿದ ಮೇಲೆ ಕೂಡ ಅದೇ ಪ್ರಶ್ನೆ ಯಾರು ಅವಳು ಎಂದು. ಮದುವೆ ಮಾಡಿಕೊ ಮಗ ಎಂದ. ಸುಮ್ಮನೇ ಜೊತೆಗೆ ಇದ್ದರೆ ಬೇರೆಯರು ತಪ್ಪು ತಿಳಿಯುತ್ತಾರೆ ಮಗ ಎಂದ. ಅದೆಲ್ಲ ಏನು ಇಲ್ಲ ನಮ್ಮಲ್ಲಿ ಹೊಂದಾಣಿಕೆ ಆದರೆ ಮಾತ್ರ ಮದುವೆ ಆಗುತ್ತೇವೆ ಎಂದ. ಇನ್ನೂ ಒಂದು ವರ್ಷ ಕಾಯಿರಿ ಎಂದ. ಆಮೇಲೆ ಬೇಡ ಎಂದರೆ ಅವಳು ಅವಳ ಪಾಡಿಗೆ , ನಾನು ನನ್ನ ಪಾಡಿಗೆ ಎಂದ. ಹಾಗೆಲ್ಲಾ ಮಾಡಬೇಡ ಮಗ ಅದು ಒಂದು ಹೆಣ್ಣು ಮಗಳ ಭವಿಷ್ಯದ ಪ್ರಶ್ನೆ . ಮುಂದೆ ಅವಳನ್ನ ಯಾರು ತಾನೇ ಮದುವೆ ಆಗುತ್ತಾರೆ ಎಂದ. ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ, ಆದರೆ ಮೂಗಿನ ನತ್ತು (ಮೂಗನತ್ತು) ಮಾತ್ರ ಬಾಯಿಗೆ ಹಾಕಿಕೊಂಡಿದ್ದಾಳೆ. ಟ್ಯಾಟ್ಯೂ ನೋಡಿ ಕರಿ ಗೊರಂಟೆ ಚೆನ್ನಾಗಿ ಕಾಣಲ್ಲ ಅವಳಿಗೆ ಎಂದು ಹೇಳು ಮದುವೆ ಮಾಡಿಕೊ ಎಂದು ಹೇಳಿದ. ಅವಳಿಗೆ ಸೀರೆನೇ ಉಟ್ಟು ಕೊಳ್ಳೋಕೆ ಹೇಳು. ಚಡ್ಡಿ ಹಾಕಿಕೊಂಡು ಮನೇಲಿ ಇದ್ರೆ ಏನು ಚೆನ್ನ ನೀನೆ ಹೇಳು ಎಂದ. ಕಲ್ಲಪ್ಪನ ಮಾತಿಗೆ ಸುಮ್ಮನೇ ತಲೆ ಅಲ್ಲಾಡಿಸಿ ಊಟಕ್ಕೆ ಹೊರಗಡೆ ಹೋದರು. ಹೊಟೆಲ್ ಊಟದಿಂದ ಕಲ್ಲಪ್ಪನ ಹೊಟ್ಟೆ ಕೆಟ್ಟು ಹೋಗಿತ್ತು. ಮನೆಗೆ ಬಂದು ಹುಡುಗಿ ಸಿಗರೇಟ್ ಸೇದುತ್ತಾ ಇತ್ತು. ಹನೀ... ವೆನ್ ದಿಸ್ ಫೆಲೊ ಈಸ್ ಗೋಯೀಂಗ್ ಎಂದು ಕೇಳಿತು. ಸುರೇಶ್ ಟೂಮಾರೊ ಎಂದು ಹೇಳಿದ.&lt;/p&gt; &lt;p&gt;ಮರುದಿನ ಬೆಳಿಗ್ಗೆ ಅಪ್ಪನಿಗೆ ಸ್ವಲ್ಪ ದುಡ್ಡು ಕೊಟ್ಟು, ಇನ್ನೂ ಮುಂದೆ ಪ್ರತಿ ತಿಂಗಳು ಸ್ವಲ್ಪ ದುಡ್ಡು ಕಳುಹಿಸುತ್ತೇನೆ ಯೋಚನೆ ಮಾಡಬೇಡ ಎಂದು ಹೇಳಿ ಟ್ರೈನ್ ಹತ್ತಿಸಿದ. ಕಲ್ಲಪ್ಪ ಮಾತ್ರ ಮಗನೆ ಯೋಚನೆಯಲ್ಲೇ ಮುಳುಗಿ ಹೋಗಿದ್ದ. ಅಷ್ಟರಲ್ಲಿ ರಾಮಸಂದ್ರ ಬಂದಿತ್ತು. ನಿಜವಾಗಿಯೂ ಕಲ್ಲಪ್ಪನಿಗೆ ಮಗ ಡಾಕು ತರಹ ಎಂದು ಅನ್ನಿಸಿದ್ದ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-806384604950439190?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/806384604950439190/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/blog-post_17.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/806384604950439190'/><link rel='self' type='application/atom+xml' href='http://www.blogger.com/feeds/3457141075796460701/posts/default/806384604950439190'/><link rel='alternate' type='text/html' href='http://haalusakkare.blogspot.com/2010/11/blog-post_17.html' title='ಕಲ್ಲಪ್ಪನ ಮಗ ಡಾಕುಟರ್ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-6927786350086647944</id><published>2010-11-10T07:10:00.000-08:00</published><updated>2010-11-10T07:13:43.349-08:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಹೆಂಡತಿ ಹೆಸರು ಬಸವ್ವ ....</title><content type='html'>ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್ನ ಮಡದಿ ರೀ ಅದರಲ್ಲಿ ಇರುವೆ ಇತ್ತು ಹಾಗೆ ಹಾಕಿದಿರಾ? ಎಂದಳು. ಇರಲಿ ಬಿಡೆ ಕಣ್ಣು ಸ್ವಚ್ಛ ಆಗುತ್ತೆ ಎಂದೆ. ಓss.. ಹಾಗಾ, ಟೀ ಕುಡಿದ ಮೇಲೆ, ಇರುವೆ ಕಣ್ಣು ಸ್ವಚ್ಛ ಆಗುತ್ತಾ?. ಅದಕ್ಕೆ ಇರಬೇಕು ನಾನು ಅದನ್ನು ಓಡಿಸಿದರು, ಅಲ್ಲೇ ಸಕ್ಕರೆ ಸವಿಯುತ್ತಾ ಇತ್ತು. ಲೇ ನಾನು ಹೇಳಿದ್ದು ನಮ್ಮ ಕಣ್ಣು ಸ್ವಚ್ಛ ಆಗುತ್ತೆ ಅಂತ ಎಂದೆ. ಅದು ಸರಿ ಅನ್ನಿ, ನಿಮ್ಮ ಕಣ್ಣು ಸ್ವಚ್ಛ ಆಗಬೇಕು. ನೀವು ಇರುವೆ ಹಾಕಿಕೊಂಡು ಟೀ ಮಾಡಿಕೊಳ್ಳಿ. ನಾನು ಬೇರೆ ಟೀ ಮಾಡಿಕೊಳ್ಳುತ್ತೇನೆ ಎಂದಳು. ಲೇ ನಾನು ಕೂಡ ಪ್ಯೂರ್ ವೆಜ್ ಎಂದೆ. ಪ್ಯೂರ್ ಮತ್ತು ಇಮ್‌ಪ್ಯೂರ್ ವೆಜ್ ಕೂಡ ಇರುತ್ತಾ? ಎಂದು ಕಿಚಾಯಿಸಿದಳು. ಕ್ರೀಮಿ ಕಿಟ ತಿನ್ನೋ ಕೋಳಿ ಮತ್ತು ಬರಿ ಸಸ್ಯ ತಿಂದು ಇರುವ ಕೋಳಿ ವ್ಯತ್ಯಾಸ ಇಲ್ಲವಾ? ಎಂದೆ. ರೀ ಏನು? ಇದು ಹಬ್ಬದ ದಿವಸ ಎಂದು ಕೋಪಮಾಡಿಕೊಂಡಳು. ಮತ್ತೆ ಇರುವೆ ಚೆಲ್ಲಿ ಬೇರೆ ಟೀ ಮಾಡಿದೆ.&lt;br /&gt;&lt;br /&gt;ಟೀ ಕುಡಿಯುತ್ತಾ ಇದೇನು? ಸಕ್ಕರೆ ಪಾಕದ ಹಾಗೆ ಇದೆ, ಹಬ್ಬದ ಉಂಡೆಗೆ ಬೇಕಾಗುತ್ತೆ ಹಾಗೆ ಇಡಿ ಎಂದು ಕಿಚಾಯಿಸಿದಳು. ಲೇ ಎಷ್ಟು ಚೆನ್ನಾಗಿದೆ ಸುಮ್ಮನೇ ಏನೇನೋ ಹೇಳಬೇಡ, ನನಗೆ ಇನ್ನೂ ಸಕ್ಕರೆ ಕಾಯಿಲೆ ಬಂದಿಲ್ಲ ಎಂದೆ. ಸಮಾಧಾನಿಸಿ, ಇನ್ನೂ ಸ್ವಲ್ಪ ದಿವಸ ಮಾತ್ರ ಎಂಬ ಉತ್ತರ ಬಂತು. ಹಾಗಾದರೆ ಇನ್ನೂ ಮುಂದೆ ನೀವೇ ಟೀ ಮಾಡಿ, ಆದರೆ ಸ್ವಲ್ಪ ಕಡಿಮೆ ಸಕ್ಕರೆ ಹಾಕಿ ಎಂದಳು. ಹಬ್ಬಕ್ಕೆ ಏನು? ಅಡಿಗೆ ಮಾಡಲಿ ಎಂಬ ಅರ್ಜಿ ಗುಜರಾಯಿಸಿದಳು. ಏನಾದರೂ ಮಾಡು ಎಂದೆ. ಅವಳು ಪ್ರತಿ ಬಾರಿ ಕೇಳಿದಾಗಲು ನನ್ನ ಉತ್ತರ ಇದೆ ಇರುತ್ತೆ ಎಂದು ಗೊತ್ತಿದ್ದರು, ಅವಳು ಕೇಳುವುದನ್ನು ಬಿಟ್ಟಿಲ್ಲ. ನಿಮ್ಮದು ಬರೀ ಇದೆ ಆಯಿತು ಎಂದು ಗೋಧಿ ಕುಟ್ಟಿದ ಪಾಯಸ ಮಾಡುತ್ತೇನೆ ಎಂದು ಹೇಳಿ ಅಡಿಗಿಮನೆಗೆ ಹೊರಟು ಹೋದಳು. ಅವಳನ್ನು ಹಿಂಬಾಲಿಸಿ, ಲೇ ಪಾಯಸ ಬೇಡ ಕಣೆ ಎಂದೆ. ಅದು ನಿಮಗೆ ಅಲ್ಲ ಅದು, ದೇವರಿಗೆ ಸುಮ್ಮನಿರಿ ಎಂದಾಗ ಸಮಾಧಾನವಾಯಿತು. ಮತ್ತೆ ವಡೆ ಎಂದೆ. ಒದೆ ಮತ್ತು ಕಡಬು ಎರಡು ಇದೆ.ನಗುತ್ತಾ ಈಗಲೇ ಬೇಕಾ? ಎಂದಳು. ನಿರಾಸೆಯ ಅಲೆಯಲ್ಲಿ ತೇಲುತ್ತ ಹೊರಗಡೆ ಬಂದು ಕುಳಿತೆ.&lt;br /&gt;&lt;br /&gt;ಮುಂಜಾನೆಯ ಆರತಿ, ಸ್ನಾನ , ಪೂಜೆ ಮತ್ತು ಮಂಗಳಾರತಿ ಆದ ಮೇಲೆ ಊಟಕ್ಕೆ ಕುಳಿತಾಗಲೇ ನನಗೆ ಗೊತ್ತಾಗಿದ್ದು, ಆ ಪಾಯಸ ನನಗೆ ಮಾಡಿದ್ದಾಳೆ ಎಂದು. ಮತ್ತೆ ಮುಂಜಾನೆ ದೇವರಿಗೆ ಎಂದೆ. ನೀವು ನನಗೆ ಪತಿ ದೇವರು ತಾನೇ ಎಂದು ಗಹ ಗಹಸಿ ನಗಹತ್ತಿದಳು. ನಾನು ರಾತ್ರಿ ಹೊಟೆಲ್ ಗೆ ಊಟಕ್ಕೆ ಹೋಗುವುದಾದರೆ ಮಾತ್ರ ತಿನ್ನುತ್ತೇನೆ ಎಂದೆ. ಆಯಿತು ಎಂದು ಹೇಳಿದ ಮೇಲೆ ಊಟ ಮಾಡಿದೆ.&lt;br /&gt;&lt;br /&gt;ರಾತ್ರಿ ಊಟಕ್ಕೆ ಹೊರಗಡೆ ಹೋಗಿದ್ದೆವು. ಆ ಹೊಟೇಲಿನಲ್ಲಿ ಸರ್ವ್ ಮಾಡಲು ಸಹ ಹುಡುಗಿಯರು ಇದ್ದರು ಅದನ್ನು ನೋಡಿ ನನ್ನ ಮಡದಿ ಇದಕ್ಕೆ ನೀವು ಹೊರಗಡೆ ಊಟಕ್ಕೆ ಹೋಗೋಣ ಎಂದಿದ್ದಾ ಎಂದಳು. ನಾನು ಒಂದು ಸರ್ವ್ ಮಾಡುವ ಹುಡುಗಿಯ ಕಡೆ ಹೋಗಿ ವಾಶ್ ರೂಮ್ ಎಲ್ಲಿದೆ ಎಂದು ಕೇಳಲು ಹೋದೆ. ಅಷ್ಟರಲ್ಲಿ ಅವಳು ಒಬ್ಬ ಆಸಾಮಿಗೆ ಕಪಾಳಕ್ಕೆ ಬಿಟ್ಟು, ತಾನೇ ಅಳುತ್ತಾ ನಿಂತಿದ್ದಳು. ಇದೆಲ್ಲವೂ ಅರೆ ಕ್ಷಣದಲ್ಲಿ ನಡೆದು ಹೋಗಿತ್ತು. ನನಗೆ ಏನು ತೋಚದಾಗಿತ್ತು. ನಾನೇ ಅಲ್ಲೇ ಇದ್ದಿದ್ದರಿಂದ ನನ್ನ ಹೆಂಡತಿಗೆ ನನ್ನ ಮೇಲೇನೆ ಅನುಮಾನ. ಎಲ್ಲರೂ ನಮ್ಮ ಮುಂದೆ ಜಮಾಯಿಸಿದ್ದರು. ಆದರೆ ಯಾರು,ಯಾರಿಗೆ ಹೊಡೆದರೂ ಎಂದು ಸಹ ತಿಳಿದಿರಲಿಲ್ಲ. ಕೆಲ ಜನ ನಾನೇ ಹೊಡಿಸಿ ಕೊಂಡವನು ಎಂದು ತಿಳಿದಿದ್ದರು. ಕಡೆಗೆ ನಾನೇ ಆ ಹುಡುಗಿಗೆ ಏನು ಆಯಿತಮ್ಮಾ? ಎಂದು ಕೇಳಿದೆ. ನಾನು ಅವನಿಗೆ ಏನು? ಮಾಡಿದೆ ಎಂದು ಕೇಳಿದೆ. ನಾನು... ನಾನು.... ಏನು?. ಎಂದ. ಕನ್ನಡ ಬರುವುದಿಲ್ಲ ಎಂದು ಸನ್ನೆ ಮಾಡಿ ಹೇಳಿದ. ಆಗ ಆ ಹುಡುಗಿ ಅಳುತ್ತಾ ಇದ್ದವಳು ಜೋರಾಗಿ ನಗುತ್ತಾ ಹೊರಟು ಹೋದಳು. ಆಗ ನಾನು ಅವನಿಗೆ ಹಿಂದಿಯಲ್ಲಿ ಏನು? ಕೇಳಿದೆ ಎಂದು. ಅವನು ಮೈ ಮೈ "ನಮಕ್ ಪೂಚಾ" ಎಂದ. ಕನ್ನಡದಲ್ಲಿ ಹೇಳು ಎಂದಾಗ "ಉಪ್ಪಾ ಬೇಕು" ಎಂದ ನೆರೆದವರೆಲ್ಲ ಜೋರಾಗಿ ನಗಹತ್ತಿದರು.&lt;br /&gt;&lt;br /&gt;ನನಗೆ ಅವನ ಮುಖ ಎಲ್ಲಿಯೋ ನೋಡಿದ ಹಾಗೆ ಅನ್ನಿಸಿತು. ಹೀಗಾಗಿ ಅವನ ಹಿಂದೆ ಹೋದೆ. ನಿಮ್ಮನ್ನ ಎಲ್ಲಿಯೋ ನೋಡಿದ್ದೇನೆ ಎಂದು ಇಂಗ್ಲೀಶ್ ನಲ್ಲಿ ಕೇಳಿದೆ. ಮತ್ತೆ ಕೆಲ ಸಮಯ ಯೋಚಿಸಿದ ಮೇಲೆ ತಿಳಿಯಿತು ಅವನು ವಿಲಾಸ್ ಎಂದು. &lt;a href="http://haalusakkare.blogspot.com/2009/12/blog-post.html"&gt;ವಿಲಾಸನಿಗೆ ವಿಳಾಸ ತಿಳಿಸಿದ &lt;/a&gt; ಮೇಲೆ ಅವನು ಬೇರೆ ಊರಿಗೆ ಹೊರಟು ಹೋಗಿದ್ದ. ಯಾಕೋ? ಮಗನೆ ನಿನಗೆ ಕನ್ನಡ ಬರಲ್ಲವಾ? ಎಂದೆ. ಬರುತ್ತೆ, ಕಣೋ ಆದರೆ ನಮ್ಮ ಕಡೆ ಉಪ್ಪಿಗೆ ಉಪ್ಪಾ ಎಂದೆ ಹೇಳುತ್ತಾರೆ ಅದಕ್ಕೆ ಎಂದೆ ಅಂದ. ಬೇರೆ ಯಾರು ಅದಕ್ಕೆ ಕ್ಯಾತೆ ತೆಗೆದಿರಲಿಲ್ಲ ಎಂದ. ಈ ಹುಡುಗಿ ಬಹುಶಃ ಧಾರವಾಡದವಳು ಇರಬೇಕು ಎಂದೆ. ಮತ್ತೆ ಅವನನ್ನು ಮನೆಗೆ ಆಹ್ವಾನಿಸಿದೆವು. ಚಿಕ್ಕವಾನಿದ್ದಾಗ ವಿಲಾಸ್ ನಮಗೆ ಹೊಡೆದು ಓಡಿ ಹೋಗಿ ಮಾಳಿಗೆ ಮೇಲೆ ನಿಂತು, "ಎಷ್ಟು ಹೊಡೀತಿ ಹೊಡಿ, ಹೊಲಕ್ಕ ಹೋಗೋಣ ನಡಿ, ಬೆಕ್ಕು ಬಂತು ಉಶ್ಶಾ, ನಿನ್ನ ಹೆಂಡತಿ ಹೆಸರ ಬಸವ್ವ" ಎಂದು ಅಣಕಿಸುತ್ತಿದ್ದ. ನಾವೆಲ್ಲರೂ ಊಟ ಆದ ಮೇಲೆ ಕ್ಷೇಮ ಸಮಾಚಾರ ವಿಚಾರಿಸಿದೆವು. ಮತ್ತೆ ಅವನು ಮದುವೆ ಇನ್ನೂ ಆಗಿಲ್ಲ ಎಂದಾಗ, ನಾನು ಆ ಹೋಟೆಲ್ ಹುಡುಗಿ ಹೆಸರು ಬಸವ್ವ ನಾನು ಮಾತನಾಡಾಲೆ ಎಂದೆ. ಎಲ್ಲರೂ ನಕ್ಕೆವು ಮತ್ತೆ ವಿಲಾಸ್ ತನ್ನ ಮನೆ ವಿಳಾಸ ತಿಳಿಸಿ ಮನೆ ಹಾದಿ ಹಿಡಿದ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-6927786350086647944?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/6927786350086647944/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/blog-post_10.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/6927786350086647944'/><link rel='self' type='application/atom+xml' href='http://www.blogger.com/feeds/3457141075796460701/posts/default/6927786350086647944'/><link rel='alternate' type='text/html' href='http://haalusakkare.blogspot.com/2010/11/blog-post_10.html' title='ಹೆಂಡತಿ ಹೆಸರು ಬಸವ್ವ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-4229751567953174172</id><published>2010-11-03T06:40:00.000-07:00</published><updated>2010-11-04T08:07:58.088-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ</title><content type='html'>&lt;span class="Apple-style-span"&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;ನನ್ನ ಹೆಂಡತಿಗೆ ಹೇಳಿದೆ, ನಾಳೆ ಸಂಡೆ. ನಾನು ವಾಕಿಂಗ್ ಹೋಗಬೇಕು ಬೇಗ ಎಬ್ಬಿಸು ಎಂದು. ಮನೆಯಲ್ಲಿ ಇರುವ ಎಲ್ಲಾ ಘಡಿಯಾರಗಳಿಗೂ ಅಲಾರಾಂ ಇಡಲು ಅನುವಾದೆ. ಮಡದಿ ನನಗೆ ಬೈದು ನಾನು ಎಬ್ಬಿಸುತ್ತೇನೆ, ಆದರೆ ಅಲಾರಾಂ ಇಡಬೇಡಿ ನನಗು ಒಂದು ದಿವಸ ರೆಸ್ಟ್ ಬೇಡವೇ ಎಂದಳು. ತುಂಬಾ ಪ್ರಯತ್ನ ಪಟ್ಟು ಬೇಗ 6.50 ಕ್ಕೆ ಎದ್ದೆ. ಎದ್ದು ವಾಕಿಂಗ್ ಹೊರಡುವಾಗ, ಒಂದು ಕಪ್ಪು ಬೆಕ್ಕು ಅಡ್ಡ ವಾಕಿಂಗ್ ಮಾಡಿ ಹೋಯಿತು. ಬೆಕ್ಕು ಅಡ್ಡ ಬಂದರೆ ಕೆಲಸ ಕೆಡುತ್ತೆ ಎಂದು ಮತ್ತೆ ಹತ್ತು ನಿಮಿಷ ಬಿಟ್ಟು ಹೋದೆ. ಎದುರಿಗೆ ಟೀ ಅಂಗಡಿ ಕಾಣಿಸಿತು. ಟೀ ಕುಡಿದು ಮತ್ತೆ ಒಂದು ಘಂಟೆ ವಾಕಿಂಗ್ ಮಾಡಿದೆ. ನನ್ನಷ್ಟಕ್ಕೆ ನಾನೇ ವಾಹ್ "ಕಿಂಗ್" ಅಂದುಕೊಂಡು ಹೊಟ್ಟೆ ಕಡಿಮೆ ಆಗಿದೆಯಾ ಎಂದು ಹೊಟ್ಟೆ ನೋಡುತ್ತಾ ಬರುವ ಸಮಯದಲ್ಲಿ, ಎದುರಿಗೆ ಒಂದು ಆಕಳು ಕರುಗೆ ಡಿಕ್ಕಿ ಹೊಡೆದಿದ್ದೆ. ಸರ್ ಸಾವಕಾಶ ಎಂಬ ಶಬ್ದ ಕೇಳಿಸಿತು. ಅದೇ ಎದಿರು ಮನೆ ಪ್ರಸನ್ನ. ಕ್ಷೇಮ ಸಮಾಚಾರ ಆದ ಮೇಲೆ ತಾವು ಪ್ರತಿ ಸಂಡೆ ಕ್ರಿಕೆಟ್ ಆಡಲು ಹೋಗುತ್ತೇವೆ ಎಂದು ಹೇಳಿದರು. ಸರ್ ನಾನು ಬರುತ್ತೇನೆ ಎಂದು ಹೇಳಿದೆ. ಅವಶ್ಯವಾಗಿ ಬನ್ನಿ ಎಂಬ ಅಭಯವನ್ನಿತ್ತರು. ನಾನು ತುಂಬಾ ಖುಷಿಯಾದೆ.&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;ಮುಂದಿನ ಸಂಡೆ ನನ್ನ ಬೆಳಗಿನ ಜಾವದ ಕನಸು ಭಗ್ನ ಆದರೂ ಪರವಾಗಿಲ್ಲ ಎಂದು ಬೇಗನೆ ೬ ಘಂಟೆಗೆ ಎದ್ದೆ. ಬೇಗನೆ ಎದ್ದು ನಾನೇ ಟೀ ಮಾಡಿ ಕುಡಿದು ಎಲ್ಲರಿಗಿಂತ ಬೇಗನೆ ಮೈದಾನದಲ್ಲಿ ಇದ್ದೆ. ತುಂಬಾ ಜನ ಕ್ರಿಕೆಟ್ ಆಡುತ್ತಾ ಇದ್ದರು. ಆದರೆ ಪ್ರಸನ್ನ ಇನ್ನೂ ಪ್ರತ್ಯಕ್ಷವಾಗಿರಲಿಲ್ಲ. ಕೆಲ ಸಮಯ ಕಾದರೆ ಆಗುತ್ತೆ ಎಂದು ಕೆಲ ಸಮಯ ಅಲ್ಲೇ ತಿರುಗಾಡುತ್ತಾ ಇದ್ದೆ. ಒಂದು ಚೆಂಡು ನನ್ನ ಹತ್ತಿರ ಬರುತಿತ್ತು. ಅದನ್ನು ನಾನು ಹಿಡಿದು ಎತ್ತಿ ಕೊಡಬೇಕು ಎನ್ನುವ ಅಷ್ಟರಲ್ಲೇ ಫೀಲ್ಡಿಂಗ್ ನಿಂತ ಒಬ್ಬ ಹುಡುಗ ಅದನ್ನು ಎತ್ತಿ ಎಸೆದ. ಅದು ಬೇರೆಯವರು ಆಡುವ ಮ್ಯಾಚ್ ಚೆಂಡು ಆಗಿತ್ತು. ನನಗೆ ತುಂಬಾ ಕೋಪ ಬಂದಿತ್ತು. ಕೆಲ ಸಮಯದ ನಂತರ ಆ ಹುಡುಗ ತಾನು ಆಡುವ ಮ್ಯಾಚ್ ಚೆಂಡು ಫೀಲ್ಡಿಂಗ್ನಲ್ಲಿ ಬಿಟ್ಟಾಗ ಖುಷಿಯಾಗಿತ್ತು.&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;7 ಘಂಟೆ ಆದರೂ ಪ್ರಸನ್ನ ಬರಲೇ ಇಲ್ಲ. ನಾನು ಮತ್ತೆ ವಿವೇಕಾನಂದ ಗಾರ್ಡನ್ ಗೆ ವಾಕಿಂಗ್ ಮಾಡಲು ಹೋದೆ.ಎಲ್ಲರೂ ಓಡುತ್ತಾ ಇರುವದನ್ನು ನೋಡಿ ನಾನು ತುಂಬಾ ಜೋಷ್ ನಿಂದ ಓಡಿದೆ. ಎಲ್ಲರನ್ನೂ ಹಿಂದೆ ಹಾಕಿದೆ ಆದರೆ ಇನ್ನೂ ಅರ್ಧ ರೌಂಡ್ ಸುತ್ತಿರಲಿಲ್ಲ, ದಣಿವು ಶುರು ಆಯಿತು. ಎಲ್ಲರೂ ನನ್ನ ಹಿಂದಿಕ್ಕಿ ಹೊರಟು ಹೋಗಿದ್ದರು. ಓಡುತ್ತಿರುವಾಗ ನನ್ನ ಹೊಟ್ಟೆ ತಕ.. ತಕ.. ಎಂದು ಕುಣಿಯುತ್ತಾ ಇತ್ತು. ಮತ್ತೆ ಕೆಲ ಜನರು ವ್ಯಾಯಾಮ ಮಾಡುತ್ತಾ ಇದ್ದರು. ಅದನ್ನು ನೋಡಿ ನಾನು ಒಂದು ಮರದ ಕೆಳಗೆ ನಿಂತು ವ್ಯಾಯಾಮ ಮಾಡಲು ಅನುವಾದೆ. ಅಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದೆ ನಾಯಿ ಎದ್ದು, ನನ್ನ ನೋಡುತ್ತಾ ನಿಂತು ಬಿಟ್ಟಿತು. ನಾನು ಬಹುಶಃ ವಿಚಿತ್ರವಾಗಿ ವ್ಯಾಯಾಮ ಮಾಡುತ್ತಾ ಇದ್ದೇನೆ ಎಂದು ತಿಳಿಯಿತೋ ಹೇಗೆ ಎಂದು, ಬೇರೆ ವ್ಯಾಯಾಮ ಮಾಡಲು ಅನುವಾದೆ.ಅಷ್ಟರಲ್ಲಿ ನಾಯಿ ಜೋರಾಗಿ ನನ್ನ ನೋಡಿ ಬೊಗಳಲು ಶುರು ಮಾಡಿತು. ಏಕೆಂದರೆ ನಾನು ಕಾಲಿನಿಂದ ಒದ್ದ ಕಲ್ಲು ಅದಕ್ಕೆ ನಾಟಿತ್ತು. ಕಡೆಗೆ ಈ ಸಹವಾಸ ಸಾಕು ಎಂದು ಕೆಲ ಸಮಯ ವಾಕಿಂಗ್ ಮಾಡಿದೆ. ವಾಕಿಂಗ್ ಮಾಡಿ ಕೆಲ ಸಮಯ ಒಂದು ಬೆಂಚ್ ಮೇಲೆ ಕುಳಿತೆ. ಅಲ್ಲಿ ನಡೆಯುವ ಸಂಭಾಷಣೆ ಕೇಳಿ ಮನೆಗೆ ಬಂದೆ.&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;ಮನೆಗೆ ಬಂದು ಕೂಡಲೇ ಮಡದಿ ನೀವು ಹೋದ ಮೇಲೆ ಪ್ರಸನ್ನ ಫೋನ್ ಮಾಡಿದ್ದರು ಎಂದಳು. ಅವರು ಇವತ್ತು ಕ್ರಿಕೆಟ್ ಆಡಲು ಬರುವದಿಲ್ಲ ಎಂದು ಹೇಳಿದರು ಎಂದಳು. ಇವತ್ತು ಮನೆ ಸಾಮಾನು ತರಬೇಕು ಎಂದಳು ಮಡದಿ. ನಾನು ಆಯಿತು ಎಂದು ಸ್ನಾನಕ್ಕೆ ಹೋದೆ. ವಾಕಿಂಗ್ ಮಾಡಿ ಕೈ ಕಾಲು ಎಲ್ಲವೂ ಸಡಿಲವಾಗಿದ್ದವು. ಬಚ್ಚಲು ಮನೆಯಿಂದ ದಾಡಿ ಮಾಡಿಕೊಳ್ಳಲೋ ಬೇಡವೋ ಎಂದು ಕೇಳಿದೆ. ಏಕೆಂದರೆ? ನಾನು ಪ್ರತಿ ಹಬ್ಬ ಹರಿದಿನ ದಾಡಿ ಮಾಡಿಕೊಳ್ಳಬೇಡಿ ಎಂಬ ಆಜ್ಞೆ ಹೊರಡಿಸಿದ್ದಾಳೆ ನನ್ನ ಮಡದಿ. ಗಾಡಿ ಮೇಲೆ ಹೋಗೋಣ ಎಂದಳು. ನಾನು ನಕ್ಕೂ ... ಲೇ ದಾಡಿ ಎಂದೆ.ನಾನು ಬೇಡ ಅನ್ನಬಹುದು ಎಂದುಕೊಂಡರೆ, ಮಾಡಿಕೊಳ್ಳಿ ಎಂದಳು. ನಾನು ನಾಳೆ ಮಾಡಿಕೊಳ್ಳುತ್ತೇನೆ ಬಿಡೆ ಎಂದೆ. ನೋಡ್ರೀ ನನ್ನ ಜೊತೆ ಬರಬೇಕಾದರೆ, ಹೀಗೆ ಜೋಕುಮಾರ ತರಹ ಬರಬೇಡಿ ಎಂದಳು. ಕಡೆಗೆ ದಾಡಿ ಮಾಡಿಕೊಂಡು ಸ್ನಾನ ಮಾಡಿ ಬಂದೆ. ಮನೆ ಸಾಮಾನು ತೆಗೆದುಕೊಂಡು ಬರುವಾಗೇ ನೋಡಿ ಈಗ ಚೆನ್ನಾಗಿ ರಾಜ್‍ಕುಮಾರ್ ತರಹ ಕಾಣಿಸುತ್ತೀರಿ ಎಂದಳು.&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;ಮರುದಿನ ಕೈ,ಕಾಲು ಎಲ್ಲವೂ ಮಾತನಾಡುತ್ತಾ ಇದ್ದವು. ಆಗ ಅನ್ನಿಸಿತು ಆರೋಗ್ಯ ಎಂದರೆ ಆ + ರೋಗ(ನಿದ್ರೆ) + ಯೋಗ್ಯ ಎಂದು. "ಎಲ್ಲರೂ ಮಾಡುವದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ" ನಿಜ. ನಾನು ಮಾಡುತ್ತಾ ಇರುವದು ಹೊಟ್ಟೆಗಾಗಿಯೇ, ಆದರೆ ಗೇಣು ಬಟ್ಟೆ ನನ್ನ ಹಿಮಾಲಯ ಪರ್ವತ (ಹೊಟ್ಟೆ) ಮುಚ್ಛೊಕ್ಕೆ ಸಾಲಲ್ಲ &lt;span class="Apple-style-span" style="font-family:arial;"&gt;:)&lt;/span&gt;.&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;*****************************************************************&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; font-family: tunga, kedage, 'Lohit Kannada'; line-height: 18px; "&gt;&lt;span class="Apple-style-span" style="font-family: Georgia, serif; "&gt;&lt;b&gt;&lt;span class="Apple-style-span" style="font-weight: normal; "&gt;&lt;span class="Apple-style-span"&gt;&lt;span class="Apple-style-span"&gt;&lt;b&gt;&lt;span class="Apple-style-span"&gt;&lt;span&gt;&lt;span class="Apple-style-span"&gt;&lt;span class="Apple-style-span" style="font-size: medium; "&gt;&lt;span class="Apple-style-span"&gt;ಎಲ್ಲರಿಗೂ&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt; &lt;span&gt;&lt;/span&gt;&lt;/span&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;b&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt;ದೀ&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;b&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt;ಪಾ&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;b&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt;ವ&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;b&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt;ಳಿ&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;b&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt; &lt;/span&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;&lt;span class="Apple-style-span"&gt;ಹಬ್ಬದ&lt;/span&gt;&lt;/span&gt;&lt;/span&gt;&lt;/span&gt;&lt;span class="Apple-style-span"&gt;&lt;span class="Apple-style-span" style="font-size: medium; "&gt;&lt;span class="Apple-style-span"&gt; &lt;span class="Apple-style-span"&gt;ಶುಭಾಶಯಗಳು&lt;/span&gt;.&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;&lt;span class="Apple-style-span" style="color: rgb(0, 0, 0); font-family: Georgia, serif; "&gt;&lt;b&gt;&lt;span class="Apple-style-span" style="font-weight: normal; font-size: 16px; "&gt;&lt;span class="Apple-style-span" style="font-size: 15px; "&gt;&lt;span class="Apple-style-span"&gt;&lt;b&gt;&lt;span class="Apple-style-span"&gt;********************************************************&lt;/span&gt;&lt;/b&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/p&gt;&lt;p style="margin-top: 1em; margin-right: 0px; margin-bottom: 1em; margin-left: 0px; color: rgb(61, 61, 61); font-family: tunga, kedage, 'Lohit Kannada'; font-size: 15px; line-height: 18px; "&gt;&lt;br /&gt;&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-4229751567953174172?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/4229751567953174172/comments/default' title='Post Comments'/><link rel='replies' type='text/html' href='http://haalusakkare.blogspot.com/2010/11/blog-post.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/4229751567953174172'/><link rel='self' type='application/atom+xml' href='http://www.blogger.com/feeds/3457141075796460701/posts/default/4229751567953174172'/><link rel='alternate' type='text/html' href='http://haalusakkare.blogspot.com/2010/11/blog-post.html' title='ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-1407100241288602858</id><published>2010-10-30T06:29:00.000-07:00</published><updated>2010-10-30T06:34:18.449-07:00</updated><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><category scheme='http://www.blogger.com/atom/ns#' term='ನಗು'/><title type='text'>ಗುಣವಂತನ ಗರುಡ ರೇಖೆ....</title><content type='html'>ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.&lt;br /&gt;&lt;br /&gt;ಮನೆ ಬಂದರು ಕವಿತೆಯ ಬಗ್ಗೆ ಯೋಚನೆ ಇನ್ನೂ ಮುಗಿದಿರಲಿಲ್ಲ. ರೀ ನಿಮ್ಮ ಗೆಳೆಯ ಮಾರುತಿ ಯಾವಾಗ ಧಾರವಾಡಕ್ಕೆ ಹೋಗುತ್ತಾನೆ ಎಂದು ಕೇಳಿದಳು. ನಾನು ವಿಜಯನಗರ ಇಲ್ಲ ರಾಗಿ ಗುಡ್ಡಕ್ಕೆ ಹೋಗೋಣ ಎಂದೆ. ಅವಳು ಕೇಳಿದ ಪ್ರಶ್ನೆಗೆ ನಾನು ಹೇಳುತ್ತಿರುವುದಕ್ಕೆ ಒಂದು ಸಂಭಂಧವೇ ಇರಲಿಲ್ಲ. ನನ್ನ ಹೆಂಡತಿಗೆ ರೇಗಿ ಹೋಗಿತ್ತು. ನಾನು ಕವಿತಾ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂದೆ. ಯಾರು ಆ ಕವಿತಾ ಎಂದು ಮತ್ತಷ್ಟು ರೇಗಿದಳು. ಕವನ ಎಂದರೆ ಮತ್ತೆ ತಪ್ಪು ಆದೀತು ಎಂದು ಕವಿತೆ ಎಂದು ಹೇಳಿದೆ. ನಿಮ್ಮ ಲಕ್ಷ್ಯ ಎಲ್ಲಿ? ಇರಬೇಕು. ರಾಣಿ ಹಾಗೆಲ್ಲಾ ಏನು ಇಲ್ಲ. ನೀನು ಯೋಚನೆ ಮಾಡುತ್ತಿರುವದು ಲಕ್ಷದ ಬಗ್ಗೆ ಆದರೆ, ನೀನು ನನಗೆ ಕೋಟಿಗೆ ಸಮ. ಅದಕ್ಕೆಂದೆ ನಿನ್ನೆ &lt;span class=""&gt;&lt;a href="http://haalusakkare.blogspot.com/2010/10/blog-post_28.html"&gt;ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!!&lt;/a&gt; &lt;/span&gt; ಎಂಬ ಲೇಖನ ಬರೆದಿದ್ದೇನೆ ಎಂದು ಪುಸಲಾಯಿಸಿದೆ. ಆದರೂ ನಿಮ್ಮದು ಬರೀ ಕವಿತೆ-ಲೇಖನ ಅತಿ ಆಯಿತು ಎಂದು ಹೀಯಾಳಿಸಿದಳು. ಅದು ಬೇರೆ ನಿಮಗೆ ನನ್ನ ಹೀಯಾಳಿಸಿ ಬರೆಯದೇ ಇದ್ದರೆ ತಿಂದ ಅನ್ನ ಹೇಗೆ ಅರಗಬೇಕು (ಕರಗಬೇಕು) ಎಂದಳು.&lt;br /&gt;&lt;br /&gt;ಕೆಲ ಸಮಯದ ನಂತರ ಪುಸಲಾಯಿಸಿದ್ದರಿಂದ ಹೇಳಿ ಮತ್ತೆ ಏನೇನು? ಬರೆದಿದ್ದೀರ ಎಂದಳು. &lt;span class=""&gt;&lt;a href="http://haalusakkare.blogspot.com/2010/09/blog-post_29.html"&gt;ನಳ ಪಾಕ್ ....&lt;/a&gt; &lt;/span&gt; ಮತ್ತು &lt;span class=""&gt;&lt;a href="http://haalusakkare.blogspot.com/2010/09/blog-post_21.html"&gt;ಸ್ಪೆಶಲ್ ತಿಂಡಿ....&lt;/a&gt; &lt;/span&gt;ಎಂಬ ಲೇಖನ ಕೂಡ ಬರೆದಿದ್ದೇನೆ ಎಂದೆ. ಮತ್ತೇನು? ಬಕಾಸುರನಿಗೆ ಅದೇ ಧ್ಯಾನ ಎಂದು ಮತ್ತೆ ಹೀಯಾಳಿಸಿದಳು. ನಾನು ನನ್ನ ಬಗ್ಗೆ ತುಂಬಾ ಕೊಚ್ಚಿಕೊಂಡು ತುಂಬಾ ಮಾತನಾಡಿಕೊಂಡೆ. ನನ್ನ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪಬ್ಲಿಶ್ ಆಗಿದೆ ಎಂದು. "ಓ ಗುಣವಂತ ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ಎಂದು ಹಾಡುತ್ತಾ ಅಡುಗೆ ಮನೆಗೆ ಹೋದಳು. ನಾನು ಹಾಡುತ್ತೇನೆ, ಆದರೆ ನನ್ನದು ಕಾಕ ಕಂಠ. ಆದರೆ ನನ್ನ ಮಡದಿಯದು ಕೋಗಿಲೆ ಕಂಠ. ನಾನು ಅವಳನ್ನು ಹಿಂಬಾಲಿಸಿ ಪದಗಳನ್ನು ಬೇಕಾದರೆ ನಾನು ಹೇಳುತ್ತೇನೆ. ನೀನು ಹೋಗಳುವುದನ್ನು ಮಾಡು ಎಂದೆ. ಮೊದಲು ಹೋಗಿ ಕೈ ಕಾಲು ತೊಳೆದು ಆಮೇಲೆ ಒಳಗಡೆ ಬನ್ನಿ ಎಂದು ಹೋಗಳಿ ಕಳುಹಿಸಿದಳು. ಅದೇಕೋ ಗೊತ್ತಿಲ್ಲ ಅರಳಿದ ಹೂವು ಮತ್ತು ಕೆರಳಿದ ಹೆಣ್ಣು ನೋಡೇಕೆ ತುಂಬಾ ಚೆನ್ನ.&lt;br /&gt;&lt;br /&gt;ಕೈ ಕಾಲು ತೊಳೆದು ಬಂದು ಟೀ ಶರ್ಟ್ ಹಾಕಿಕೊಳ್ಳುತಿದ್ದೆ. ಕಾಫೀ ತೆಗೆದುಕೊಂಡು ಬಂದ ನನ್ನ ಮಡದಿ ಜೋರಾಗಿ ನಗುತ್ತಾ ಟೀ ಶರ್ಟ್ ಉಲ್ಟಾ ಹಾಕಿ ಕೊಳ್ಲುತ್ತ ಇದ್ದೀರ ಎಂದು ಅಂದಳು. ಕಾಫೀ ಕಪ್ ಕೊಟ್ಟು ಮತ್ತೆ ಏನು ಬರೆದಿದ್ದೀರಾ ರಾಯರು ಎಂದು ಕೇಳಿದಳು. ಸಿಹಿಮೊಗ್ಗೆ ಬಗ್ಗೆ ಬರೆದಿದ್ದೇನೆ ಎಂದೆ. ಹಾಗೆ ಅಂದರೆ ಎಂದು ನನ್ನ ಮುಖ ನೋಡಿದಳು. ಅದು ಸಿಹಿ ಮೊಗದ ಹುಡುಗಿಯ ಬಗ್ಗೆ ಎಂದು ಸುಮ್ಮನೇ ರೀಲು ಬಿಟ್ಟೆ. ಮತ್ತೆ ಕೋಪಿಸಿಕೊಂಡಳು. ಅದು ಶಿವಮೊಗ್ಗ ಬಗ್ಗೆ ಬರೆದ ಅನುಭವ ಕಥನ ಎಂದು ಹೇಳಿದೆ.&lt;br /&gt;&lt;br /&gt;ಅಷ್ಟರಲ್ಲಿ ಪಕ್ಕದ ಮನೆ ಶಾಂತಮ್ಮ ಬಂದು ನಿಮ್ಮ ಯಜಮಾನರು ಇದ್ದಾರಾ ಎಂದು ಕೇಳಿಕೊಂಡು ಬಂದರು. ನಾನು ಇವರು ಏಕೆ ನನ್ನ ಕೇಳಿಕೊಂಡು ಬಂದಿದ್ದಾರೆ ಎಂದು ಆಶ್ಚರ್ಯ. ನಮ್ಮ ಮನೆಗೆ ಹಾವು ಬಂದಿದೆ ಪ್ಲೀಸ್ ಹಿಡಿ ಬನ್ನಿ ಎಂದರು. ಕೈ ನಡುಗಿ ಅರ್ಧ ಕಾಫೀ ಕೆಳಕ್ಕೆ ಉರಳಿತ್ತು. ನಿಮಗೆ ಯಾರು ಹೇಳಿದರು ನಾನು ಹಾವು ಹಿಡಿಯುತ್ತೇನೆ ಎಂದು ಕೇಳಿದೆ. ನಾನೇನು ಹಾವಡಿಗನ ಎಂದು ಕೇಳಿದೆ. ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ನಿಮ್ಮ ಮಡದಿ ಹೇಳಿದ್ದಾರೆ ಪ್ಲೀಸ್ ಬನ್ನಿ ನಮ್ಮನ್ನು ಕಾಪಾಡಿ ಎಂದರು.ನನಗೆ ತುಂಬಾ ಕೋಪ ಬಂದಿತ್ತು. ನಾನು ನನ್ನ ಮಡದಿಯ ಮುಖ ನೋಡಿದೆ. ನಡೀರಿ ಹೋಗೋಣ ಪಾಪ ಎಂದಳು. ಏನೇ ಇದು ನೀನು ಎಂದೆ. ಅವಳನ್ನು ಒಳಗಡೆ ಕರೆದು ನಾನು ಯಾವತ್ತಾದರೂ ನಿನಗೆ ನನ್ನ ಕೈ ಮೇಲೆ ಗರುಡ ರೇಖೆ ಇದೆ ಎಂದು ಹೇಳಿದ್ದೇನಾ? ಎಂದು ಕೇಳಿದೆ.ಇಲ್ಲ ಎಂದಳು. ಮತ್ತೆ ಏಕೆ? ಹೇಳಿದೆ ಎಂದೆ. ಮಂಜಣ್ಣ ಮದುವೆಗೆ ಮುಂಚೆ ನನಗೆ ಹೇಳಿದ್ದರು ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ಅಂದಳು. ಮಂಜ ನಿನಗೆ ಸುಳ್ಳು ಹೇಳಿದ್ದಾನೆ. ಹಿರಿಯರೇ ಹೇಳಿಲ್ಲವೇ, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎಂದು ಅಂದೆ. ಹಾಗಾದರೆ ಮತ್ತೆ ಇನ್ನೂ ಏನು ಸುಳ್ಳು ಹೇಳಿದ್ದೀರಾ? ಎಂದಳು. ಹೊರಗಡೆ ಶಾಂತಮ್ಮ ಒದರುತ್ತ ಇದ್ದರು. ನೋಡಿ ನೀವು ಒಂದು ಕೋಲು ತೆಗೆದುಕೊಂಡು ಹೋಗಿ ಓಡಿಸಲು ಪ್ರಯತ್ನಿಸಿ ಎಂದಳು. ಈಗ ಇಲ್ಲ ಎಂದರೆ ನಮ್ಮ ಮರ್ಯಾದೆನೇ ಹೋಗೋದು ಎಂದಳು. ಹೆಚ್ಚು ಕಡಿಮೆ ಆದರೆ ಜೀವಾ ಹೋಗುತ್ತೆ, ಆಮೇಲೆ ಮರ್ಯಾದೆ ಇಟ್ಟು ಕೊಂಡು ಒಗ್ಗರಣೆ ಹಾಕುತ್ತೀಯಾ? ಎಂದೆ. ನಾನು ನಿಮ್ಮ ಜೊತೆ ಇರುತ್ತೇನೆ ಬನ್ನಿ ಎಂದಳು. ನಡಿ ನೋಡೋಣ ಎಂದು "ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಎಂದು ಹರಳೆಣ್ಣೆ ಕುಡಿದ ಹಾಗೆ ಮುಖ ಮಾಡಿ ಹೊರಟು ನಿಂತೆ.&lt;br /&gt;&lt;br /&gt;ಶಾಂತಮ್ಮ ಮನೆ ಕಡೆಗೆ ಹೊರಟು ನಿಂತೆವು. ನಾನು ಚಿಕ್ಕದು ಇದೇನಾ ದೊಡ್ಡದು ಇದೇನಾ ಎಂದು ಕೇಳಿದೆ. ದೊಡ್ಡದು ಎಂದರು. ಯಾವ ಕಲರ್ ಇದೆ ಎಂದು ಕೇಳಿದೆ. ಅದು ನಾಗರ ಹಾವು ಎಂದು ಕಾಣುತ್ತೆ ಕಂದು ಎಂದರು. ಈಗ ಮತ್ತಷ್ಟು ನಡುಕ ಶುರು ಆಯಿತು. ಯಾವಾಗ ಬಂತು ಎಂದು ಕೇಳಿದೆ. ಬಂದು ಅರ್ಧ ಘಂಟೆ ಆಗಿದೆ ಎಂದರು. ನೀವು ಓಡಿಸಲು ಪ್ರಯತ್ನಿಸಲಿಲ್ಲವೇ ಎಂದು ಕೇಳಿದೆ. ನಾನು ಪ್ರಯತ್ನ ಪಟ್ಟೇ ಆದರೆ ಏನು ಪ್ರಯೋಜನ ಆಗಲಿಲ್ಲ ಎಂದರು.&lt;br /&gt;&lt;br /&gt;ಶಾಂತಮ್ಮನ ಮನೆ ಪ್ರವೇಶಿಸಿ ಆಗಿತ್ತು. ಮನೆಯಲ್ಲಿ ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಕಪಾಟಿನಲ್ಲಿ ಇದೆ ಎಂದು ಹೇಳಿದರು. ಕೈಯಲ್ಲಿ ಕೋಲು ಹಿಡಿದು ನಡುಗುತ್ತಾ ಹೊರಟೆ. ತಟ್ ಎಂದು ಹಿಂದಿನಿಂದ ಬೆಕ್ಕು ಮೇಲಿಂದ ಜಿಗಿದು ಕಾಲಿನ ಒಳಗಿಂದ ನುಸುಳಿ ಹೋಯಿತು. ಒಂದು ಕ್ಷಣ ಎದೆ ಬಡಿತ ನಿಂತು ಹೋಗಿತ್ತು. ಮತ್ತೆ ಮುಂದೆ ಹೋದೆ. ಕೋಲಿನಿಂದ ಕಟ್ ಕಟ್ ಶಬ್ದ ಮಾಡಿದೆ. ಹಾವು ಅಲುಗಾಡಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋಗಿ ಎಂದರು ಶಾಂತಮ್ಮ. ನನ್ನ ಕೊಲೆ ಮಾಡೋಕೆ ನೋಡುತ್ತಿದ್ದೀರ ಎಂದು ಮನಸಿನಲ್ಲೇ ಅಂದುಕೊಂಡೆ. ಏನೇ ಮಾಡಿದರು ಮುಂದೆ ಹೋಗಲು ಆಗಲಿಲ್ಲ.&lt;br /&gt;&lt;br /&gt;ಅಷ್ಟರಲ್ಲಿ ಶಂತಮ್ಮ ಅವರ ಮೊಮ್ಮಗ ಕ್ರಿಕೆಟ್ ಆಡಿ ಮನೆಗೆ ಬಂದ. ಅಜ್ಜಿ ತಡೆದು ನಿಲ್ಲಿಸಿದರು. ಮನೇಲಿ ಹಾವು ಕಣೋ ನಿಲ್ಲು ಎಂದರು. ನಾನು ಕೋಲು ಹಿಡಿದು ಸಾವಕಾಶವಾಗಿ ಅದರ ಹತ್ತಿರ ಹೋಗಿದ್ದೆ. ಅದನ್ನು ನೋಡಿದ ಆ ಹುಡುಗ ಓಡಿ ಬಂದವನೇ ಆ ಹಾವನ್ನು ತೆಗೆದುಕೊಂಡು ಓಡಿ ಹೋಗಿ ಬಿಟ್ಟ. ನನಗಂತು ಎದೆ ಝಲ್ ಎಂದಿತ್ತು. ಅಜ್ಜಿ ಚಿರುತ್ತ ಇತ್ತು. ಪ್ಲೀಸ್ ನೋಡಿ ನನ್ನ ಮೊಮ್ಮಗನನ್ನು ಕಾಪಾಡಿ ಎಂದು ಗೋಗರೆದರು. ನಾನು ಬಚಾವಾದೆ ಎಂದು ಖುಷಿಪಟ್ಟರು. ಆ ಅಜ್ಜಿಯ ಅಳು ನೋಡಲು ಆಗಲಿಲ್ಲ.&lt;br /&gt;&lt;br /&gt;ಕಡೆಗೆ ಆ ಹುಡುಗನನ್ನು ಬೆನ್ನು ಅಟ್ಟಿ ಕೊಂಡು ಹೋದೆ. ತುಂಬಾ ಚೂಟಿ ಹುಡುಗ ನಾನು ಬೆನ್ನು ಹತ್ತಿದಷ್ಟು ಜೋರಾಗಿ ಓಡ ಹತ್ತಿದ. ಕಡೆಗೂ ಸಿಕ್ಕಿ ಬಿಟ್ಟ. ಎಸೆ ಅದನ್ನು ಎಂದು ಹೇಳಿದೆ. ಇಲ್ಲ ನನಗೆ ಬೇಕು ಅಂದ. ಎಸೆ ಇಲ್ಲ ಎಂದರೆ ಹೊಡೆಯುತ್ತೇನೆ ಎಂದೆ. ನಾನು ದುಡ್ಡು ಕೊಟ್ಟು ತಂದಿದ್ದು ನಾನು ಎಸೆಯೋಲ್ಲ ಎಂದ. ನಾನು ಏನು ಮಾಡಬೇಕು ಎಂದು ತೋಚದಾಗದೆ ಜೋರಾಗಿ ನಗಹತ್ತಿದೆ. ಕಡೆಗೆ ಆ ಹುಡುಗನನ್ನು ಕೇಳಿದಾಗ ಅದು ರಬ್ಬರ್ ಹಾವು ಜಾತ್ರೆ ಇಂದ ತಂದಿದ್ದು ಎಂದು ಹೇಳಿದ.&lt;br /&gt;&lt;br /&gt;ನಾನು ಮತ್ತು ನನ್ನ ಮಡದಿ ಜೋರಾಗಿ ನಗುತ್ತಾ ಇದ್ದೆವು. ಅಜ್ಜಿ ಮೊಮ್ಮಗನಿಗೆ ಬೈಯುತ್ತಾ ಇದ್ದಳು. ಹೇಳಬಾರದ ಮೊದಲೇ ಇದನ್ನು ಎಂದು. ನಾನು ನನ್ನ ಮಡದಿಗೆ ಇನ್ನೊಮ್ಮೆ ಹೀಗೆಲ್ಲ ನನ್ನ ಬಗ್ಗೆ ಜಂಭ ಕೊಚ್ಚಿ ಯಾರ ಮುಂದೆಯೂ ಹೇಳಬೇಡ ಎಂದು ತಾಕೀತ ಮಾಡಿ ಮನೆಗೆ ಬಂದೆವು. ನನ್ನ ಮಡದಿ ಮಾತ್ರ ನಗುವುದನ್ನು ನಿಲ್ಲಿಸಿರಲೇ ಇಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-1407100241288602858?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/1407100241288602858/comments/default' title='Post Comments'/><link rel='replies' type='text/html' href='http://haalusakkare.blogspot.com/2010/10/blog-post_30.html#comment-form' title='6 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/1407100241288602858'/><link rel='self' type='application/atom+xml' href='http://www.blogger.com/feeds/3457141075796460701/posts/default/1407100241288602858'/><link rel='alternate' type='text/html' href='http://haalusakkare.blogspot.com/2010/10/blog-post_30.html' title='ಗುಣವಂತನ ಗರುಡ ರೇಖೆ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-3457141075796460701.post-8164354309915175511</id><published>2010-10-28T09:04:00.000-07:00</published><updated>2010-10-28T09:07:18.241-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!!</title><content type='html'>ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ್ನಿ ಹಾಕಿಸಿಕೊಂಡು ಇಡ್ಲಿ ತಿಂದು ಹೋದ. ನನಗೆ ಆಶ್ಚರ್ಯ ಚಟ್ನಿ ತಿಂದರೆ ಬಾಯಾರಿಕೆ ಹೋಗುತ್ತಾ? ಎಂದು. ಕಡೆಗೆ ಅಲ್ಲೇ ಇದ್ದ ನೀರನ್ನು ಕುಡಿದ. ಮತ್ತೆ ಅವನ ಫೋನ್ ರಿಂಗ್ ಆದ ಹಾಗೆ ಆಯಿತು. "ಹಲ್ಲು" ಎಂದು ಮಾತನಾಡಿದ. ಅಲ್ಲಿಂದ ಉತ್ತರ ಬರಲಿಲ್ಲ. ಅದು ಕರೆ ಆಗಿರದೇ, ಅಲಾರಂ ಆಗಿತ್ತು. ತನ್ನ ಬಳಿ ವಾಚ್ ಇದ್ದರು ನನಗೆ ಟೈಮ್ ಎಷ್ಟು ಎಂದು ಕೇಳಿದ. ಮತ್ತೆ ಅವನಿಗೆ ಒಂದು ಫೋನ್ ಬಂದಿತು. ಅದರಲ್ಲಿ ಯಾವಾಗ ನಾಳೆ ಬರುತ್ತಿಯಾ? ಎಂದು ಕೇಳಿದ. ಬಹುಶಃ ಅವನ ಹೆಂಡತಿಯದು ಎಂದು ಕಾಣುತ್ತೆ. ತಡಬಡಿಸಿ ಹೊರಟು ಹೋದ. ಹೆಂಡತಿ ಅಂದರೆ ಭಯ-ಭಕ್ತಿ ಎಂದು ಕಾಣುತ್ತೆ. ನಾನು ತಿಂಡಿ ತಿಂದು ನನ್ನ ಸ್ಕೂಟರ್ ಏರಿದೆ.&lt;br /&gt;&lt;br /&gt;"ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ... ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ " ಕ್ಷಮಿಸಿ ಹಾಳಾದಂತೆ ಎಂದು ಹಾಡುತ್ತಾ ಮನೆ ಕಡೆಗೆ ಹೊರಟೆ. ನನ್ನ ಮಡದಿ ನಗುತ್ತ ಕರೆದರೆ ಏನೋ ಒಂದು ದೊಡ್ಡ ಬಜೆಟ್ ಮಂಡನೆ ಇರುತ್ತೆ ನಮ್ಮ ಮನೇಲಿ ಎಂದು ಅರ್ಥ. ಮನೆ ತಲುಪಿದ್ದೆ. ಮನೆಗೆ ನಮ್ಮ ಎದಿರು ಮನೆ ಶ್ಯಾಮ್ ರಾಯರ ಅಳಿಯನ ಹೆಂಡತಿ ಬಂದಿದ್ದಳು. ತುಂಬಾ ಒಡವೆಗಳನ್ನು ತಂದು ತೋರಿಸುತ್ತಾ ಇದ್ದಳು. ಇದರ ಗೊಡವೆ ಬೇಡ ಎಂದು ನಾನು ಬೇರೆ ರೂಂಗೆ ಹೋದೆ. ರೀsss ಎಂದು ಕರೆದು. ಈ ನೆಕ್ಕ್ಲೆಸ್ ಎಷ್ಟು ಚೆನ್ನಾಗಿ ಇದೆ ಅಲ್ರೀ ಎಂದಳು ನನ್ನ ಮಡದಿ. ತುಂಬಾ ಚೆನ್ನಾಗಿದೆ ಎಂದೆ. ನನಗು ಒಂದು ಇದೆ ತರಹ ಇರುವ ನೆಕ್ಕ್ಲಸ್ ಕೊಡಿಸಿ ಎಂದು ಅರ್ಜಿ ಗುಜರಾಯಿಸಿದಳು. ನಾನು ನೋಡೋಣ ಎಂದು ಹೇಳಿದೆ. ಚಿನ್ನದ ಬೆಲೆ ಗಗನಕ್ಕೆ ಏರಿದೆ ಎಂದು ಗೊತ್ತಿದ್ದರು, ಈ ಹೆಣ್ಣು ಮಕ್ಕಳು ಆಕಾಶಕ್ಕೆ ಏಣಿ ಹಾಕುವುದನ್ನು ಬಿಡುವುದಿಲ್ಲ ಎಂದು ಮನಸಿನಲ್ಲೇ ಅಂದುಕೊಂಡೆ. ನಮ್ಮ ಯಜಮಾನರು ಒಂದು ಕಾಸಿನ ಸರ ಮಾಡಿಸಿದ್ದರು ೬ ವರ್ಷದ ಹಿಂದೆ, ಅದನ್ನು ಪಾಲಿಷ್ ಮಾಡಲು ಕೊಟ್ಟಿದ್ದೇನೆ ಎಂದಳು ನನ್ನ ಮಡದಿ. ಮದುವೆ ಆಗಿ ಇನ್ನೂ ಐದು ವರ್ಷ ಆಗಿಲ್ಲ ಆರು ವರ್ಷದ ಹಿಂದೆ ನಾನು ಏನು? ಕೊಟ್ಟಿದ್ದೆ ಎಂದು ಪೇಚಿಗೆ ಬಿದ್ದೆ. ಏನ್ರೀ ಎರಡು ತಿಂಗಳು ಆಯಿತು ಅದನ್ನು ಕ್ಲೀನ್ ಮಾಡಲು ಕೊಟ್ಟು ತೆಗೆದುಕೊಂಡು ಬನ್ನಿ ಎಂದಳು ನನ್ನ ಮಡದಿ. ಆಯಿತು ಎಂದು ಮತ್ತೆ ಒಳಗಡೆ ಹೋದೆ.&lt;br /&gt;&lt;br /&gt;ಮೊಬೈಲ್ ನಲ್ಲಿ ಹಾಡು ಹಚ್ಚಿದೆ. ಈಗ ಟಿ ವಿ ನನಗೆ ಸಿಗುವದು ಕಷ್ಟ ಏಕೆಂದರೆ ತನ್ನ ಗಂಡನ ಎಲ್ಲಾ ಧಾರಾವಾಹಿಗಳನ್ನು ನನ್ನ ಮಡದಿಗೆ ಶ್ಯಾಮ್ ರಾಯರ ಅಳಿಯನ ಹೆಂಡತಿ ತೋರಿಸುತ್ತಾಳೆ. ಅದೇ ನನಗೆ ತುಂಬಾ ಇಷ್ಟವಾದ ಹಾಡು. ಅದ್ಯಾಕೋ ಗೊತ್ತಿಲ್ಲ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಹಾಡು ಎಂದರೆ ನನಗೆ ತುಂಬಾ ಇಷ್ಟ. ಅದನ್ನು ನಾನು ಅರ್ಥ ಮಾಡಿಕೊಳ್ಳುವ ರೀತಿ ಮಾತ್ರ ಬೇರೆ.. ಬೇರೆ ..&lt;br /&gt;&lt;br /&gt;ಹೆಂಡತಿ ಯಾವತ್ತೂ ಒಬ್ಬಳೇ ಮನೆಯಲ್ಲಿ ಇರಬೇಕು ಇಲ್ಲ ಎಂದರೆ ಅಧೋಗತಿ. ತಪ್ಪು ತಿಳೀಬೇಡಿ ಅಕ್ಕ ಪಕ್ಕದವರ ಜೊತೆ ಇದ್ದರೆ ಎಂಬ ಅರ್ಥದಲ್ಲಿ ಹೇಳಿದ್ದು. ನೀವೇನೂ ಎರಡು ಮೂರು ಎಂಬ ಅರ್ಥದಲ್ಲಿ ಎಂದು ತಿಳೀದಿರೋ... ಅಲ್ಲಿ ನಡೆಯುವ ಚರ್ಚೆ ಸೀರೆ ಮತ್ತು ಒಡವೆಗಳ ಬಗ್ಗೆ ಇರುತ್ತೆ. ಇಲ್ಲದ ಒಡವೆಗಳನ್ನು ಇದೆ ಎಂದು ಸಾಧಿಸುವ ಮತ್ತು ಒಂದಕ್ಕೆ ಎರಡು ಪಟ್ಟು ರೇಟ್ ಏರಿಸುತ್ತಿರುತ್ತಾರೆ. ಅಕ್ಕ ಪಕ್ಕದವರ ಜೊತೆ ಇದ್ದರೆ ಗಂಡನ ಬಗ್ಗೆ ಇಲ್ಲದ ಗೌರವ ಕೂಡ ಸಿಕ್ಕಿರುತ್ತೆ.&lt;br /&gt;&lt;br /&gt;ಹೆಂಡತಿಯೊಬ್ಬಳು ಮನೆಯೊಳಗೆ ಇದ್ದರೆ ಸಾಕು ಇಲ್ಲ ಎಂದರೆ, ಹೆಂಡತಿಯೊಬ್ಬಳು ಮನೆ ಹೊರಗೆ ಇದ್ದರೆ ನನಗದೆ ಕೋಟಿ ರುಪಾಯಿ ಖರ್ಚು. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲಾ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ.&lt;br /&gt;&lt;br /&gt;ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನ್ನ ಗೆಳಯರು ಕೂಡ ಮನೆಗೆ ಬರಲು ಹೆದರುತ್ತಾರೆ. ಬಂದರು ಎಣ್ಣೆ ಪಾರ್ಟೀಗೆ ಮಾತ್ರ ಕರಿಯೋದಿಲ್ಲ. ಮತ್ತು ಸಾಲ ಏನಾದರೂ ಕೊಟ್ಟಿದ್ದರು ಕೇಳುವದಿಲ್ಲ. ಮತ್ತು ನಮ್ಮ ಹತ್ತಿರ ಸಾಲ ಕೇಳುವದಿಲ್ಲ.&lt;br /&gt;&lt;br /&gt;ಹಾಡು ಮುಗಿಯುತ್ತಿದ್ದಂತೆ ನನ್ನ ಮೂರು ವರ್ಷದ ಸುಪುತ್ರ ಅಮ್ಮ ಒಂದು ಕ್ಯಾಲ್ಶಿಯಮ್ ಗುಳಿಗೆ ಕೊಡು ಎಂದು ಕೇಳಿದ. ಅಪ್ಪ ರೂಮಿನಲ್ಲಿ ಇದ್ದಾರೆ ಅವರ ಹತ್ತಿರ ಕೇಳು ಎಂದು ಹೇಳಿದಳು. ನನ್ನ ಹತ್ತಿರ ಬಂದು ಕೇಳಿದ ನಾನು ಒಂದು ಗುಳಿಗೆ ಕೊಟ್ಟೆ. ಅಪ್ಪ ಉಲ್ಟಾ ಕೊಡುತ್ತಿದ್ದೀಯಲ್ಲ ಎಂದ. ನಾನು ಇದರಲ್ಲಿ ಉಲ್ಟಾ-ಸೀದಾ ಏನು ಇರುತ್ತೆ ಎಂದು ಕೇಳಿದೆ. ಗುಳಿಗೆಯ ಹೆಸರು ಇದ್ದ ಕಡೆ ಮೇಲೆ ಮಾಡಿ ಕೊಡಬೇಕು ಎಂದು ತಾಕಿತ ಮಾಡಿದ, ಆಯಿತು ಮುಂದಿನ ಬಾರಿ ಸರಿಯಾಗಿ ಕೊಡುತ್ತೇನೆ ಎಂದು ಹೇಳಿದೆ. ಅವನ ತಿಳುವಳಿಕೆಗೆ ನಾನು ಪೇಚು ಬಿದ್ದೆ. ಅಷ್ಟರಲ್ಲಿ ಶ್ಯಾಮ್ ರಾಯರ ಅಳಿಯನ ಹೆಂಡತಿ ಮನೆಗೆ ಹೊರಟು ಹೋದಳು. ರೀss ಎಂದು ನನ್ನ ಹೆಂಡತಿ ಉಲಿದಳು. ನಾನು ನನ್ನ ಜೇಬನ್ನು ಒಮ್ಮೆ ಮುಟ್ಟಿಕೊಂಡೆ. ಅಷ್ಟರಲ್ಲಿ ನನ್ನ &lt;A href = "http://haalusakkare.blogspot.com/2009/08/credit.html"&gt; ಖಾರದ ಕಾರ್ಡ್ &lt;/A&gt; ನನ್ನ ನೋಡಿ ನಗುವ ಹಾಗೆ ಅನ್ನಿಸಿತು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-8164354309915175511?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/8164354309915175511/comments/default' title='Post Comments'/><link rel='replies' type='text/html' href='http://haalusakkare.blogspot.com/2010/10/blog-post_28.html#comment-form' title='4 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/8164354309915175511'/><link rel='self' type='application/atom+xml' href='http://www.blogger.com/feeds/3457141075796460701/posts/default/8164354309915175511'/><link rel='alternate' type='text/html' href='http://haalusakkare.blogspot.com/2010/10/blog-post_28.html' title='ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!!'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3457141075796460701.post-7823026518857789605</id><published>2010-10-27T07:47:00.000-07:00</published><updated>2010-10-27T07:53:06.234-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ಹಳೆಯ ನೆನಪು.'/><title type='text'>ಸಿಹಿ ಮೊಗ್ಗೆ ಅರಳಿದಾಗ ....</title><content type='html'>ಬಳ್ಳಾರಿ ಸುಮಧುರ ನೆನಪಿನೊಂದಿಗೆ(&lt;A href="http://haalusakkare.blogspot.com/2009/08/blog-post_9663.html"&gt;ಬಳುಕುವ ಬಿಂಕದ ಬಳ್ಳಾರಿ ....&lt;/A&gt;) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತುಂಬಾ ದಿನಗಳು ಆಗಿತ್ತು. ಅದನ್ನು ತೆಗೆದು ಕೊಂಡು ಬಂದಿದ್ದರು ಎನೂ ಪ್ರಯೋಜನ ಆಗುತ್ತಿರಲಿಲ್ಲ. ಏಕೆಂದರೆ ಅಷ್ಟು ಸುಮಧುರ ಪರಿಮಳ ಸೂಸುತಿತ್ತು. ಆಗ ತಾನೇ ಬೀಳುತ್ತಿದ್ದ ಮಂಜಿನ ಹನಿಗಳು ಮತ್ತು ಚಿಲಿಪಿಲಿ ಕಲರವ ನನಗೆ ಎಬ್ಬಿಸಿತ್ತು. ಎಚ್ಚರವಾದಾಗ ಶಿವಮೊಗ್ಗ ತಲುಪ್ಪಿದ್ದೆ. ಆ ಮಾಗಿಯ ಚಳಿಗೆ ನಾನು ನಡುಗುತ್ತಾ ಒಂದು ಕಪ್ ಕಾಫಿ ಹಿರಿ ಡೈರಿ ಬಸ್ ಹತ್ತಿದೆ.&lt;br /&gt;&lt;br /&gt;ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.&lt;br /&gt;&lt;br /&gt;ಸುತ್ತಲೂ ತುಂಬಾ ಗಿಡ,ಮರಗಳು ಇದ್ದವು. ಸುಂದರ ಪ್ರಕೃತಿ, ಆದರೆ ಮನೆಯಲ್ಲಿ ಯಾಕೋ ಸ್ವಲ್ಪ ಕೆಟ್ಟ ವಾಸನೆ ಬರುತಿತ್ತು. ಹರ್ಷ ಕ್ಲೀನ್ ಮಾಡಿ ಎಂದು ಹೇಳಿದೆ. ಹರ್ಷ ಎಲ್ಲಿ? ಇದೆ ಸರ್ ವಾಸನೆ ಎಂದರು. ನನಗೆ ಒಬ್ಬನಿಗೆ ವಾಸನೆ ಬರುತಿತ್ತಾ ಅಥವಾ ಅವರು ಆ ವಾಸನೆಗೆ ಹೊಂದಿಕೊಂಡು ಬಿಟ್ಟಿದ್ದರಾ ತಿಳಿಯಲಿಲ್ಲ. ಕೆಲ ಸಮಯದ ನಂತರ ನಾನು ಕೂಡ ಆ ವಾಸನೆ ಹೊಂದಿಕೊಂಡುಬಿಟ್ಟೆ ಎಂದು ಅನ್ನಿಸುತ್ತದೆ.&lt;br /&gt;&lt;br /&gt;ಮರುದಿನ ನಮ್ಮ ಡೈರೆಕ್ಟರ್ ಬರುವವರು ಇದ್ದರು. ನಾವು ಅವರು ಬರುವ ಮುಂಚೆ ಎಲ್ಲಾ ಕೆಲಸ ಮುಗಿಸಬೇಕಿತ್ತು. ನಾವು ಮೊದಲು ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡುವುದಿತ್ತು, ನಿನ್ನೆ ಅದನ್ನು ಮಾಡಿ ಆಗಿತ್ತು. ಆದರೆ ಸೇಲ್ಸ್ ಸ್ಟೇಟ್ಮೆಂಟ್ ಕರೆಕ್ಟ್ ಇಲ್ಲ ಎಂದು ಮಂಜುನಾಥನಿಗೆ ಬೈಯುತ್ತಾ ಇದ್ದರು. ಅದನ್ನು ನಿಮ್ಮ ಕಂಪನೀಯವರೇ ಕೊಡಬೇಕು ಎಂದು ಹೆದರಿಸುತ್ತಾ ಇದ್ದರು. ನಾನು ಹೋಗಿ ಅದನ್ನು ಸರಿಪಡಿಸಿದೆ. ಮಂಜುನಾಥ ತುಂಬಾ ಹೆದರಿದ್ದರು. ಡೇಲೀ ಅಕೌಂಟ್ ಸರಿಪಡಿಸಿದ ಮೇಲೆ ಅಕೌಂಟ್ ಸ್ಟೇಟ್ಮೆಂಟ್ ನಲ್ಲಿ ದುಡ್ಡು ಹೆಚ್ಚಿಗೆ ಬಂದಿತ್ತು. ಅದನ್ನು ನೀವು ನಮಗೆ ಕೊಡಬೇಕು ಎಂದು ನಾನು ದಬಾಯಿಸಿದಾಗ ಸುಮ್ಮನೇ ದಾರಿಗೆ ಬಂದಿದ್ದರು. ಮಂಜುನಾಥ್ ನೌಕರಿ ಬಿಡುವೆ ನನಗೆ ಈ ಜಂಜಾಟ ಸಾಕು ಎಂದು ಮನೆಗೆ ಹೊರಟು ನಿಂತಿದ್ದ. ನಾನು ಅವನಿಗೆ ಇದು ಎಲ್ಲಾ ಸರ್ವೇ ಸಾಮಾನ್ಯ ಎಂದು ಅವನಿಗೆ ತಿಳಿಹೇಳಿದೆ. ಕಡೆಗೆ ಮಂಜುನಾಥ್ ಒಪ್ಪಿಕೊಂಡರು.&lt;br /&gt;&lt;br /&gt;ನಾವೆಲ್ಲರೂ ಸೇರಿ ಸಂಜೆಗೆ ಭದ್ರಾವತಿಯಲ್ಲಿ ಇರುವ ಶ್ರೀ ಲಕ್ಷೀ ನರಸಿಂಹ ದೇವಸ್ಥಾನಕ್ಕೆ ಹೋದೆವು. ಬರುವಾಗ ನೀರದೋಸೆ ತಿಂದು ಬಂದೆವು.&lt;br /&gt;&lt;br /&gt;ಮರುದಿನ ಬೆಳಿಗ್ಗೆ ನಮ್ಮ ಡೈರೆಕ್ಟರ್ ಬಂದಿದ್ದರು. ಅವರು ನಮಗೆ ಎಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿದೆ ಎಂದು ಕೇಳಿದರು. ನಾವು ಬರಿ ಮಾರ್ಕೆಟಿಂಗ್ ಎಂದಾಗ, ಏನು? ಬರೀ ಮಾರ್ಕೆಟಿಂಗ್ ಮತ್ತೆ ಉಳಿದ ಡಿಪಾರ್ಟ್‌ಮೆಂಟ್ ಎಂದಾಗ. ನಾನು ಅವರು ತಮ್ಮ ಹಳೆಯ ಸಿಸ್ಟಮ್ ಬಿಟ್ಟು ನಮ್ಮ ಸಾಫ್ಟ್‌ವೇರ್ಗೆ ಹೊಂದಿಕೊಳ್ಳುತ್ತಿಲ್ಲ ಎಂದಾಗ. ನೀವು ಅವರಿಗೆ ನಮ್ಮ ಸಾಫ್ಟ್‌ವೇರ್ ರುಚಿ ಹಚ್ಚಿಸಬೇಕು(If you want to eat frog, first put it in water and let it swim, afterwards put fire in the down.) ಎಂದು ಹೇಳಿದರು. ನೀವು ಹೀಗೆ ಆದರೆ ಸಂಡೆ ಕೂಡ ಕೆಲಸ ಮಾಡಬೇಕು ಎಂದರು. ಅದಕ್ಕೆ ಹರ್ಷ ಸಂಡೆ ಸರ್ ಎಂದ. ಅದಕ್ಕೆ ನಮ್ಮ ಕಂಪನೀ ಪಾಲಿಸೀ ಏನು ಗೊತ್ತಾ ನಿಮಗೆ Every day is sunday, But sunday is working day ಎಂದು ಹೇಳಿದರು. ನಾವು ತಿಂಡಿಗೆ ಹೊರಡುತ್ತಲಿದ್ದೆವು, ಆಗ ಡೇರೀ ಮ್ಯಾನೇಜರ್ ಭೇಟಿ ಆಯಿತು. ಅವರ ಕ್ಷೇಮ ಸಮಾಚಾರ ಆದ ಮೇಲೆ ಅವರನ್ನು ತಿಂಡಿಗೆ ಆಹ್ವಾನಿಸಿದೇವು. ಅವರು "ನಾನು ರಾಗಾಡ ಅನ್ನ" ತಿಂದು ಬಂದಿದ್ದೇನೆ ಎಂದು ರಾಗದಲ್ಲಿ ಹೇಳಿದರು. ನನಗೆ ಮತ್ತು ನಮ್ಮ ಡೈರೆಕ್ಟರ್ ಗೆ ಅರ್ಥ ಆಗಲಿಲ್ಲ. ಒಬ್ಬರನ್ನೊಬ್ಬರು ಮುಖ ಮುಖ ನೊಡಿಕೊಂಡೆವು. ಅವರು ಹೋದ ನಂತರ ಹರ್ಷನಿಗೆ ಕೇಳಿದಾಗ ನಮಗೆ ತಿಳಿದಿತ್ತು ಅದು ರಾಗಾಡ ಅಲ್ಲ ರಗಡ(ಬೇಜಾನ) ಎಂದು. ಎಲ್ಲರೂಅದು ಕೇಳಿದ ನಂತರ ನಗೆಯಲ್ಲಿ ತೇಲಿದ್ದೆವು.&lt;br /&gt;&lt;br /&gt;ಮೀಟಿಂಗ್ ನಲ್ಲಿ ಒಂದು ತಿಂಗಳಲ್ಲಿ ಎರಡು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಬೇಕು ಎಂದು ಹೇಳಿದರು. ನನ್ನ ಠಿಕಾಣಿ ಇನ್ನೂ ಒಂದು ವಾರ ಹೆಚ್ಚು ಆಯಿತು. ನಮ್ಮ ಡೈರೆಕ್ಟರ್ ಊರಿಗೆ ಹೊರಟು ಹೋದರು. ನಾನು ಹರ್ಷ ಮತ್ತು ಮಂಜನಾಥ ಮಲಗಿ ಕೊಂಡಿದ್ದೆವು. ಏನೋ ಕಟ್ ಕಟ್ ಶಬ್ದ ನಾನು ಸುಮ್ಮನೇ ಹಾಗೆ ಹೆದರಿ ಚಾದರ್ ಹೊದ್ದಿಕೊಂಡು ಮಲಗಿ ಬಿಟ್ಟೆ. ಮುಂಜಾನೆ ಎದ್ದು ಏನು? ಆ ಶಬ್ದ ಎಂದು ಹರ್ಷನಿಗೆ ಕೇಳಿದೆ. ಅದು ಹುಳಗಳು ಸರ್ ಎಂದ.ಮಂಜುನಾಥ ಅಗಲೆ ಎದ್ದು ಆಫೀಸ್ ಹೊರಟು ನಿಂತಿದ್ದರು. ನಾನು ಮತ್ತೆ ಹರ್ಷ ರೆಡೀ ಆಗಿ ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಗೆ ಹೋದೆವು. ಮಂಜುನಾಥ ಅಲ್ಲೇ ಒಂದು ರಿಪೋರ್ಟ್ ಮಾಡುತ್ತಲಿದ್ದರು. ಇವರು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ನಲ್ಲಿ ಕೊಡುವ ಮಜ್ಜಿಗೆ, ಪೇಡ ಅಥವಾ ಮೈಸೂರು ಪಾಕ ಸಲುವಾಗಿ ಎಂದು ತಿಳಿದಿದ್ದೆವು. ಆದರೆ ಅವರು ಅಲ್ಲಿ ಹೋಗುತ್ತಾ ಇದ್ದಿದ್ದು ಒಂದು ಸಿಹಿ ಮೊಗವನ್ನು ಸವಿಯಲು ಎಂದು ಆಮೇಲೆ ತಿಳಿಯಿತು. ಎಲ್ಲಕಿಂತ ಮೊದಲು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿತ್ತು. ಸಿಹಿ ಮೊಗದ ಹಿಂದಿನ ಪವಾಡ ಕೆಲಸ ಮಾಡಿತ್ತು.&lt;br /&gt;&lt;br /&gt;ಟೀಮ್ ಲೀಡರ್ ಆದ ನನಗೆ ಇದರಿಂದ ಶಹಭಾಷ್ ಗಿರಿ ಸಿಕ್ಕಿತ್ತು. ಮತ್ತೆ ಪ್ರೊಕ್ಯೂರ್ಮೆಂಟ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿದೆವು. ನಮ್ಮ ಕೆಲಸ ನೋಡಿ ಖುಷಿಯಾದ ಡೇರೀ ಯಲ್ಲಿರುವ ಅಷ್ಟು ಡಿಪಾರ್ಟ್‌ಮೆಂಟ್ ನವರು ನಮ್ಮದು ಮುಂದೆ ತಮ್ಮದು ಮುಂದೆ ಎಂದು ನಮ್ಮ ಮುಂದೆ ಕ್ಯೂ ನಿಂತಿದ್ದರು.ಎರಡೇ ತಿಂಗಳಲ್ಲಿ ಅಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿ ಆಗಿತ್ತು. ಅಷ್ಟರಲ್ಲಿ ಮಂಜುನಾಥ ಬೆಂಗಳೂರು ಬಂದು ಸೇರಿದ. ಕೆಲ ದಿನಗಳು ಆದ ಮೇಲೆ ಸಿಹಿ ಮೊಗದ ಚೆಲುವೆಯನ್ನು ಸೆಕ್ಯೂರಿಟೀ ಆಫೀಸರ್ ಮದುವೆ ಕೊಂಡಿದ್ದ. ಮಂಜುನಾಥನಿಗೆ ಇದನ್ನು ಹೇಳಿದಾಗ ತುಂಬಾ ನೊಂದುಕೊಂಡಿದ್ದ. ಏಕೆಂದರೆ ಅವಳಿಗೆ ಮೊದಲೇ ಮದುವೆ ಫಿಕ್ಸ್ ಆಗಿದೆ ಎಂದು ಅಲ್ಲಿಯೇ ಕೆಲಸ ಮಾಡುವ ಶ್ರೀನಿವಾಸ್ ಹೇಳಿದ್ದ. ಶ್ರೀನಿವಾಸ್ ಮದುವೆ ಫಿಕ್ಸ್ ಆಗಿದೆ ಎಂದು ಎಲ್ಲರಲ್ಲಿಯೂ ಹೇಳಿದ್ದ. ಏಕೆಂದರೆ ಅವನಿಗೆ ಅವಳ ಮೇಲೆ ಮನಸ್ಸಿತ್ತು. ಇದು ಶ್ರೀನಿವಾಸ್ ಮಾಡಿದ ಪ್ಲಾನ್.&lt;br /&gt;&lt;br /&gt;ಕೆಲಸ ಮುಗಿದ ಮೇಲೆ ನಾನು ಧಾರವಾಡಕ್ಕೆ ಹೊರಟಿದ್ದೆ. ಆಗ ನನಗೆ ಬಸ್ ಸ್ಟ್ಯಾಂಡ್ ವರೆಗೂ ಕಳುಹಿಸಲು ಹರ್ಷ ಬಂದಿದ್ದರು. ಹರ್ಷಗೇ ನಾನು ಬಸ್ ಹತ್ತಿದ ಮೇಲೆ ಬೈ.. ಬೈ.. ಎಂದೆ. ನನ್ನ ಪಕ್ಕದಲ್ಲಿ ಇದ್ದ ಮನುಷ್ಯ ಕುಡಿದು ಬಂದಿದ್ದ. ರೀ ಕನ್ನಡದಲ್ಲಿ ಮಾತನಾಡಿ ಎಂದು ಅಂದ. ನಾನು ಬಾಯೀ ತಪ್ಪಿ ಸಾರೀ ಎಂದೆ. ಮತ್ತೆ ಸುಧಾರಿಸಿ ಕ್ಷಮಿಸಿ ಎಂದು ಹೇಳುವಷ್ಟರಲ್ಲೇ, ಆಯಿತು ಬಿಡಿ ಸಾರೀ ಹೇಳಿದಿರಲ್ಲ ಎಂದ.&lt;br /&gt;&lt;br /&gt;ಕಡೆಗೆ ಇದಾದ ಮೂರೇ ತಿಂಗಳಲ್ಲಿ ನಾನು ಕೂಡ ಬೆಂಗಳೂರು ಸೇರಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು, ತಮಾಷೆಗಳು ಎಲ್ಲವೂ ಮನಸಿಗೆ ಮುದನೀಡುತ್ತವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3457141075796460701-7823026518857789605?l=haalusakkare.blogspot.com' alt='' /&gt;&lt;/div&gt;</content><link rel='replies' type='application/atom+xml' href='http://haalusakkare.blogspot.com/feeds/7823026518857789605/comments/default' title='Post Comments'/><link rel='replies' type='text/html' href='http://haalusakkare.blogspot.com/2010/10/blog-post_27.html#comment-form' title='5 Comments'/><link rel='edit' type='application/atom+xml' href='http://www.blogger.com/feeds/3457141075796460701/posts/default/7823026518857789605'/><link rel='self' type='application/atom+xml' href='http://www.blogger.com/feeds/3457141075796460701/posts/default/7823026518857789605'/><link rel='alternate' type='text/html' href='http://haalusakkare.blogspot.com/2010/10/blog-post_27.html' title='ಸಿಹಿ ಮೊಗ್ಗೆ ಅರಳಿದಾಗ ....'/><author><name>ಗೋಪಾಲ್ ಮಾ ಕುಲಕರ್ಣಿ - 9035209088</name><uri>http://www.blogger.com/profile/07826189628150221417</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-3457141075796460701.post-7780703741448143436</id><published>2010-10-11T00:51:00.000-07:00</published><updated>2010-10-12T00:33:47.983-07:00</updated><category scheme='http://www.blogger.com/atom/ns#' term='ಅನುಭವ ಕಥನ'/><category scheme='http://www.blogger.com/atom/ns#' term='ತಿಳಿ ಹಾಸ್ಯ'/><category scheme='http://www.blogger.com/atom/ns#' term='ತರ್ಲೆ ಮಂಜ'/><category scheme='http://www.blogger.com/atom/ns#' term='ಹಾಸ್ಯ'/><category scheme='http://www.blogger.com/atom/ns#' term='ನಗು'/><title type='text'>ಸೀರೆಯಲ್ಲಿರುವ ನೀರೆ ....</title><content type='html'>ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು.  ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ)  ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ. &lt;br /&gt; &lt;br /&gt;ನಾನು ರಾಜ್ಯದ ರಾಜಕೀಯ ವರ್ತಮಾನ ನೋಡುತ್ತಿರಬಹುದು ಎಂದು ಸುಮ್ಮನಿದ್ದೆ. ರೀsss ಬನ್ನಿ ಇಲ್ಲಿ ಎಂದು ಉಲಿದಳು. ನೋಡಿ ಇದು ಏನು ಸಕ್ಕತ್ತಾಗಿದೆ, ಎಂದು ಸೀರೆ ಜಾಹೀರಾತು ತೋರಿಸಿದಳು. ಆಹಾss ಎಂದು ಬಾಯಿ ತೆಗೆದು, ತುಂಬಾ ಸಕ್ಕತ ಆಗಿದ್ದಾಳೆ ಕಣೆ ಎಂದೆ.ರೀ ನಾನು ಹೇಳಿದ್ದು ಸೀರೆ ಬಗ್ಗೆ ಎಂದಳು. ಓsss ನಾನೆಲ್ಲೋ ಸೀರೆಯಲ್ಲಿರುವ ನೀರೆ ಬಗ್ಗೆ ಎಂದುಕೊಂಡೆ ಎಂದೆ. ಸದಾಶಿವನಿಗೆ ಅದೇ ಧ್ಯಾನ ಎಂದು ಅಂದಳು. ನೀವು ನೋಡಿ ತಂದಿದ್ದೀರ ಸೀರೆ, ಈ ತರಹ ಸೀರೆ ಕೊಡಿಸಬೇಕು ಎಂದಳು. ನಾನೇನೋ ತೆಗೆದುಕೊಂಡು ಬರುತ್ತೇನೆ ಕೊಡಲು ಅವಳು ತಯ್ಯಾರ ಇರಬೇಕಲ್ಲ ಎಂದೆ. ಇದೊಂದು ಕಮ್ಮಿ ಆಗಿತ್ತು ನಿಮಗೆ ಎಂದಳು. ರೀ ನಾನೊಂದು ಬ್ಲೌಸ್ ಹೊಲಸಿದ್ದೇನೆ. ಅದಕ್ಕೆ ಮ್ಯಾಚಿಂಗ್ ಒಂದು ಸೀರೆ ಕೊಡಿಸಿ ಎಂದಳು. ಲೇss ನಮ್ಮ ಕಂಪನೀ ಸಂಬಳ ಜೊತೆ ಬೋನಸ್ ಪ್ರತಿ ತಿಂಗಳು ಕೊಟ್ಟರೆ ಗ್ಯಾರಂಟೀ ಕೊಡಿಸುತ್ತೇನೆ ಎಂದೆ. ತುಂಬಾ ಕೋಪ ಮಾಡಿಕೊಂಡು ಬಿಟ್ಟಳು.&lt;br /&gt; &lt;br /&gt;ಅದೇನೋ ಗೊತ್ತಿಲ್ಲ, ನನ್ನ ಹೆಂಡತಿ ಮಾತ್ರ ಪ್ರತಿಬಾರಿ ಗಾಂಧಿ ಬಜಾರ್ ಹೋದಾಗ ಸೀರೆ ಅಂಗಡಿಗಳಿಗೆ ಲಗ್ಗೆ ಇಡುತ್ತಾಳೆ. ಆ ಸೀರೆ ಅಂಗಡಿ ಮಾಲೀಕ ಎಷ್ಟು ಪರಿಚಯ ಆಗಿಬಿಟ್ಟಿದ್ದಾನೆ ಎಂದರೆ ದುಡ್ಡು ಇಲ್ಲ ಎಂದರು "ಸರ್ ನಿಮ್ಮ ಉದ್ರೀ ಕಾರ್ಡ್(Credit Card) ಇದೆ ಅಲ್ಲ ಸಾರ್" ಎಂದು ಬಾಯಿತೆಗೆದು  ಜೋರಾಗಿ ನಕ್ಕೂ ಸೀರೆ ಕೊಡುತ್ತಾನೆ. &lt;br /&gt; &lt;br /&gt;ಮಗ ಟಿವಿ ನೋಡುತ್ತಾ ಕುಳಿತಿದ್ದ. ನನ್ನ ಮಡದಿ ಊರಗೆ ಹೋಗವ ಸಲುವಾಗಿ ಪ್ಯಾಕಿಂಗ್ ನಡೆಸಿದ್ದಳು. ನಾನು ಏನೇ ಇದು ಹೋಗುವದು ನಾಲ್ಕು ದಿವಸಕ್ಕೆ, ಇಷ್ಟೊಂದು ಸೀರೆ ತೆಗೆದುಕೊಂಡು ಹೊರಟಿದ್ದೀಯ? ಎಂದೆ, ರೀ, ಇವು ನಮ್ಮ ಮನೇಲಿ ತೋರಿಸೋಕೆ ಎಂದು ತೆಗೆದುಕೊಂಡು ಹೊರಟಿದ್ದೇನೆ ಎಂದಳು. ನಾನೆಲ್ಲೋ ಒಂದು ಘಂಟೆಗೆ ಒಂದು ಎಂಬ ಲೆಕ್ಕದಲ್ಲಿ ತೆಗೆದುಕೊಂಡು ಹೊರಟಿರುವೆ ಎಂದು ತಿಳಿದುಕೊಂಡಿದ್ದೆ ಎಂದೆ. &lt;br /&gt; &lt;br /&gt;ಅಷ್ಟರಲ್ಲಿ ನಮ್ಮ ಮೂರು ವರ್ಷದ ಸುಪುತ್ರ ಎದ್
